ಶರಣೆ ಶಿರೋಮಣಿ ಅಕ್ಕ ನಾಗಮ್ಮನವರು | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಮನದೊಡೆಯ ಮಹಾದೇವ ಮನವ ನೋಡಿಹೆನೆಂದುಮನುಜರ ಕೈಯಿಂದ ಒಂದೊಂದ ನುಡಿಸುವನು.ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ,ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನುಒಂದು ಬೊಟ್ಟಿನಲ್ಲಿ ತೊಡೆವನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-311/ವಚನ ಸಂಖ್ಯೆ-798) ಮನಸಿದ್ದರೆ ಮಾರ್ಗ ಎಂಬ ಗಾದೆ ಮಾತಿದೆ, ಮನಸ್ಸಿಗೆ ಮಹಾದೇವನೇ ಒಡೆಯ ಅಂತ ಅಕ್ಕನಾಗಮನವರು ಮನಸ್ಸಿನ ಆಗಾಧ ಶಕ್ತಿಯ ಬಗ್ಗೆ ಈ ವಚನದಲ್ಲಿ ಹೇಳಿದ್ದಾರೆ. ಈ ವಚನ ಅವರ ಘನ ವ್ಯಕ್ತಿತ್ವವನ್ನ ಮತ್ತು ಉಚ್ಛ ವಿಚಾರವನ್ನು ತೋರಿಸುವ ಕನ್ನಡಿಯಂತೆ ಇದೆ. ಅಕ್ಕ ನಾಗಮ್ಮನವರದು 12 ನೇ ಶತಮಾನದಲ್ಲಿನ ಶಿವಶರಣೆಯರಲ್ಲಿ ಅಗ್ರಗಣ್ಯ ಹೆಸರು. ಬಸವಾದಿ ಶರಣರ…

0 Comments

ಬಸವಾದಿ ಶಿವ-ಶರಣರ ದೃಷ್ಟಿಯಲ್ಲಿ ಆಚಾರ-ವಿಚಾರ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕಲ್ಯಾಣವೆಂಬ ಪ್ರಣತೆಯಲ್ಲಿಭಕ್ತಿರಸವೆಂಬ ತೈಲವನೆರೆದು,ಆಚಾರವೆಂಬ ಬತ್ತಿಗೆಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲುತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾಅಸಂಖ್ಯಾತ ಭಕ್ತಗಣಂಗಳು.ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯಸಂಗನಬಸವಣ್ಣನ ಮಹಿಮೆಯ ನೋಡಾಸಿದ್ಧರಾಮಯ್ಯಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-396/ವಚನ ಸಂಖ್ಯೆ-1059) ಜಗತ್ತಿನ ಶ್ರೇಷ್ಠ ಅನುಭಾವಿಗಳಲ್ಲಿ ಜ್ಞಾನ ವೈರಾಗ್ಯ ಮೂರ್ತಿಗಳಾದ ಅಲ್ಲಮ ಪ್ರಭುದೇವರು ಒಬ್ಬರು. ಪ್ರಭುಗಳ ಶ್ರೇಷ್ಠ ವಚನಗಳಲ್ಲಿ ಒಂದಾದ ಮೇಲಿನ ವಚನ ಆಚಾರ-ವಿಚಾರಗಳಿಗೆ ಕನ್ನಡಿ ಹಿಡಿದಂತಿದೆ. ಮಾನವರ ದೇಹವೆಂಬುದು ಪ್ರಣತೆ ಇದ್ದಂತೆ. ಪ್ರಣತೆ ಒಂದು ಜಡ ವಸ್ತು. ಹಾಗೆಯೇ ಮಾನವ ದೇಹ ಜಡವಾದುದು. ಹಾಗಾದರೆ ಜಡ ದೇಹಕ್ಕೆ ಚೈತನ್ಯ ಬೇಕು.…

0 Comments

ಅಷ್ಟಾವರಣದಲ್ಲಿ ಗುರು-ಲಿಂಗ-ಜಂಗಮ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಲಿಂಗಾಯತರು ಅಂದರೆ ಯಾರು? ಅಷ್ಟಾವರಣಗಳಾದ ಗುರು, ಲಿಂಗ ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪ್ರಸಾದ ಪಾದೋದಕಗಳನ್ನ ಅಳವಡಿಸಿಕೊಂಡು, ಪಂಚಾಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರಗಳನ್ನ ಆಚರಿಸುತ್ತ, ಷಟ್ಸ್ಥಲಗಳ ಭಕ್ತ, ಮಹೇಶ, ಪ್ರಾಣಲಿಂಗಿ, ಪ್ರಸಾದಿ, ಶರಣ ಮತ್ತು ಐಕ್ಯ ಮೂಲಕ ಸಾಧನೆಗೈದು ಬಯಲಾಗುವವರೇ ಲಿಂಗಾಯತರು. ಅಷ್ಟಾವರಣಗಳು ಅಂಗವಾದರೆ, ಪಂಚಾಚಾರಗಳು ಪ್ರಾಣ ಮತ್ತು ಷಟ್ಸ್ಥಲಗಳು ನಮ್ಮ ಆತ್ಮ ಅನಿಸಿಕೊಳ್ಳುತ್ತವೆ. ಈ ಅಷ್ಟಾವರಣಗಳು ನಮ್ಮನ್ನು, ನಮ್ಮ ಮನಸ್ಸನ್ನು ಕೆಟ್ಟ ವಾತಾವರಣಗಳಿಂದ, ಮಾನಸಿಕ ಕ್ಲೇಷಗಳಿಂದ ರಕ್ಷಿಸೊ ರಕ್ಷಾ ಕವಚ ಇದ್ದ ಹಾಗೆ. ಈ ಅಷ್ಟಾವರಣಗಳು ಮಾನವನ ಲೌಕಿಕ ಮತ್ತು ಆಧ್ಯಾತ್ಮಿಕ…

0 Comments

ನಿಜ ಶರಣ ಹಡಪದ ಅಪ್ಪಣ್ಣನವರು / ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಇಂತಹ ಮಹಾನ ಶರಣ “ನಿಜಸುಖಿ ಅಪ್ಪಣ್ಣನವರ ಜಯಂತಿ” ನಿಮಿತ್ಯ ಲೇಖನ. 12 ನೆಯ ಶತಮಾನ ಮೌಢ್ಯತೆಯನ್ನು ಬದಿಗೆ ಸರಿಸಿದಂತಹ ವೈಚಾರಿಕತೆಯ ಯುಗ. ಸಮಾನತೆ ಮತ್ತು ಸೌಹಾರ್ದತೆಯನ್ನು ಕಂಡಂತಹ ಯುಗ, ಬಸವ ಯುಗ. ಈ ಬಸವಯುಗದ ಪ್ರಮುಖ ಶರಣರ ಹಡಪದ ಅಪ್ಪಣ್ಣನವರು. ಹಡಪದ ಅಪ್ಪಣ್ಣನವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿಹಾಳ ಗ್ರಾಮ. ಇದು ಬಸವಣ್ಣವರ ಜನ್ಮ ಸ್ಥಳ ಇಂಗಳೇಶ್ವರದಿಂದ ಕೇವಲ 6 ಕಿ.ಮೀ ದೂರದವಿದೆ. ಬಸವಣ್ಣನವರ ಬಗ್ಗೆ ತಿಳಿದ ಅಪ್ಪಣ್ಣನವರು ಪತ್ನಿ ಸಮೇತ ಸಂಗಮಕ್ಕೆ ಬಂದು ನೆಲೆಸುತ್ತಾರೆ. ನಂತರ ಅವರ ಸಂಗಡ ಕಲ್ಯಾಣಕ್ಕೂ…

0 Comments

ಗುರು ಪೂರ್ಣಿಮೆಗೊಂದು ಗುರು ಕರುಣೆಯ ಪ್ರಸಾದ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಜಗತ್ತಿನಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವಪೂರ್ಣವಾದದ್ದು. ಅಂಧಕಾರವನ್ನು ಕಳೆದು ಜ್ಞಾನದ ಬೆಳಕನ್ನು ನೀಡಿ ಪೊರೆಯುವ ಸದ್ಗುರುವಿನ ಮಹಿಮೆ ಅಪಾರವಾದದ್ದು. ಗುರು ಎಂಬ ಶಬ್ದವೇ ಈ ಮಾತನ್ನು ಪುಷ್ಟೀಕರಿಸುತ್ತದೆ. “ಗು” ಎಂದರೆ ಕತ್ತಲು, “ರು” ಎಂದರೆ ಹೋಗಲಾಡಿಸು ಎಂಬುದಾಗಿದ್ದು “ಗುರು ಎಂದರೆ ಅಜ್ಞಾನದ ಕತ್ತಲನ್ನು ಕಳೆದು ಸುಜ್ಞಾನವೆಂಬ ಬೆಳಕನ್ನು” ನೀಡುವವನು. ಮಾನವ ಸಮುದಾಯದ ಅಭಿವೃದ್ಧಿಗೆ ಧರ್ಮ ಮತ್ತು ಧರ್ಮಾಚರಣೆಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. “ಅರಿವು” ಮತ್ತು “ಆಚಾರ” ಯಾವುದೇ ಧರ್ಮದ ಎರಡು ಕಣ್ಣುಗಳು. ಮಾನವರಲ್ಲಿ “ಮರಹು” ಎಂಬುದು ಹೆಚ್ಚು. ಇದನ್ನೇ ನಮ್ಮ ಶರಣರು “ಮಾಯೆ” ಎಂದು ಕರೆದಿದ್ದಾರೆ.…

1 Comment

ಅರಿವಿನ ಪೂಜಾವಿಧಾನ | ಡಾ. ಬಸವರಾಜ ಸಾದರ, ಬೆಂಗಳೂರು.

ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಅಯ್ಯಾ,ಆಗುವುದೆ ಆಗುವುದೆ ಲಿಂಗಾರ್ಚನೆ?ನೀರೆರೆಯಲಿಕ್ಕಾತನೇನು ಬಿಸಿಲಿನಿಂದ ಬಳಲಿದನೆ?ಪುಷ್ಪದಿಂದ ಧರಿಸಲಿಕ್ಕಾತನೇನು ವಿಟರಾಜನೆ?ನಿನ್ನ ಮನವೆಂಬ ನೀರಿಂದ,ಜ್ಞಾನವೆಂಬ ಪುಷ್ಪದಿಂದ ಪೂಜಿಸಬಲ್ಲಡೆಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ,ಕಪಿಲಸಿದ್ಧಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-439/ವಚನ ಸಂಖ್ಯೆ-1401) ನಮ್ಮ ಪರಂಪರಾಗತ ಪೂಜಾ ವಿಧಾನಗಳು ಬಹುತೇಕ ಬಾಹ್ಯಾಡಂಬರದ ಆಚರಣೆಗಳಾಗಿವೆ. ಇಂಥ ಪೂಜೆಗಳು ಪೂಜಿಸುವವರ ಒಳಗನ್ನು ಬೆಳಗಿಸುವುದಕ್ಕಿಂತ ಹೆಚ್ಚಾಗಿ, ನೋಡುವವರ ಕಣ್ಣುಗಳಿಗೆ ಆಕರ್ಷಕ ಮತ್ತು ವರ್ಣರಂಜಿತವಾಗಿ ಕಾಣಬೇಕೇಂಬ ಬಯಕೆಯಿಂದಲೇ ನಡೆಯುವಂಥವು. ನಮ್ಮ ಕೋಟಿ ಕೋಟಿ ದೇವಾಲಯಗಳಲ್ಲಿರುವ ಮೂರ್ತಿಗಳಿಗೆ ನಿತ್ಯವೂ ನಡೆಸಲಾಗುವ ವಿವಿಧ ಪೂಜೆ, ಅಭಿಷೇಕ ಮತ್ತು ಮಾಡುವ ಹೂವಿನ ಅಲಂಕಾರಗಳು ಇದನ್ನೇ ಸಾಕ್ಷೀಕರಿಸುತ್ತವೆ. ಇದು ಎಲ್ಲ…

1 Comment

ಬಸವಾದಿ ಶಿವಶರಣ-ಶರಣೆಯರ ವಚನಗಳಲ್ಲಿ ಸಖ್ಯಭಾವ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಹಲವಾರು ಚಿಂತನೆಗಳಿಗೆ ತೆರೆದುಕೊಳ್ಳುವ ವಚನ ಸಾಹಿತ್ಯ ಬಹು ಮೌಲ್ವಿಕವಾದ ವಿಷಯಗಳನ್ನು ತನ್ನೊಳಗೆ ಬಚ್ಚಿಟುಕೊಂಡಿದೆ. ಇಂತಹ ಅಮೂಲ್ಯವಾದ ವಚನ ಸಾಹಿತ್ಯದ ಗಂಟನ್ನು ಬಿಚ್ಚುತ್ತಾ ಹೋದಂತೆ ಒಂದೊಂದು ವಚನವೂ ಕೂಡಾ ಚಿಂತಕರ, ವಿಮರ್ಶಕರ, ಓದುಗರ ಬುದ್ಧಿಗೆ ಸವಾಲಾಗಿ ನಿಲ್ಲುತ್ತದೆ. “ವಚನ ಸಾಹಿತ್ಯದಲ್ಲಿ ಏನಿದೆ?” ಎಂಬ ಬಾಲಿಷ ಪ್ರಶ್ನೆಗಳಿಗೆ “ವಚನ ಸಾಹಿತ್ಯದಲ್ಲಿ ಏನಿಲ್ಲ?” ಎಂಬ ಪ್ರಶ್ನೆಯೇ ಉತ್ತರವಾಗಿದೆ. ಇಂತಹ ತಾರ್ಕಿಕವಾದ ಪ್ರಶ್ನೋತ್ತರಗಳ ಹಿನ್ನಲೆಯಲ್ಲಿ ಮತ್ತೊಮ್ಮೆ ಪ್ರಶ್ನಾತೀತವಾಗಿ ಕಾಡುವ ವಿಷಯ “ವಚನ ಸಾಹಿತ್ಯದಲ್ಲಿ ಸಖ್ಯಭಾವ” ಎಂಬುದು ಕೂಡ ಒಂದಾಗಿದೆ. ಭೂಮಿಯ ಮೇಲೆ ನಾವು ಮನುಷ್ಯರಾಗಿ ಹುಟ್ಟಿದ್ದೇವೆ ಎಂದ ಮೇಲೆ ಈ ಬದುಕನ್ನು ಸಮರ್ಥವಾಗಿ…

0 Comments

ಮಣ್ಣೆತ್ತಿನ ಅಮವಾಸ್ಯೆಯ ಹಿನ್ನಲೆ | ಡಾ.ಶರಣು ಪಾಟೀಲ,ವಿಜಯಪುರ.

ನನಗೆ ಎಲ್ಲ ಹಬ್ಬ ಹರಿದಿನಗಳ ಮಾಹಿತಿಯನ್ನು ನೀಡುತ್ತಿದ್ದ ಹಿರಿಯ ಗೆಳೆಯ ನನ್ನ ಹೆಣ್ಣಜ್ಜ. ಅಪ್ಪನ ತಂದೆಗೆ ಗಂಡಜ್ಜ ಅಂತಾ ಮತ್ತು ತಾಯಿಯ ತಂದೆಗೆ ಹೆಣ್ಣಜ್ಜ ಅಂತಾ ಉತ್ತರ ಕರ್ನಾಟಕದಲ್ಲಿ ಕರೆಯುವ ಪದ್ಧತಿ ಇದೆ. ಗಂಡಜ್ಜ ತುಂಬಾ ಸೌಮ್ಯ ಸ್ವಭಾವದ ಕಾಯಕ ಜೀವಿ. ಆದರೆ ಹೆಣ್ಣಜ್ಜ ಮಾತ್ರ ತುಂಬಾ ಸ್ನೇಹಜೀವಿ. ಹೀಗಾಗಿ ಚಿಕ್ಕವರಿದ್ದಾಗ ಶಾಲೆಗೆ ಸೂಟಿ ಕೊಟ್ಟ ತಕ್ಷಣ ತಾಯಿಯ ತವರು ಮನೆಗೆ ಓಡಿ ಹೋಗುತ್ತಿದ್ದೆ. ಅಜ್ಜನ ಮಡಿಲಲ್ಲಿ ಮಲಗುವುದು. ಅವನ ಜೊತೆ ತೋಟ ಸುತ್ತಾಡೋದು. ಅದೇ ತೋಟದಲ್ಲಿ ಮೂರು ಕಲ್ಲು ಹಾಕಿ ಅಲ್ಲಿಯೇ ಬಿದ್ದಿರುವ ಕಟ್ಟಿಗೆಯ ಚೂರಿನಿಂದ…

0 Comments

ಜನಪದ ಸಾಹಿತ್ಯದಲ್ಲಿ ಕುಂಬಾರ ಗುಂಡಯ್ಯ / ಡಾ. ನೀಲಾಂಬಿಕಾ ಪೊಲೀಸಪಾಟೀಲ

ಕುಂಬಾರ ಗುಂಡಯ್ಯ ತುಂಬಿ ತಿಗರಿಗ ಕೆಸರಶಂಭು ಹರನೆಂದು ತಿರುಗಿಸಲು | ಶಿವಕುಣಿದಹಂಬಲಿಸಿ ಜಂಗ ಕಟಗೊಂಡು 12 ನೇಯ ಶತಮಾನದ ವಚನ ಚಳುವಳಿಯ ಸಂದರ್ಭದಲ್ಲಿ ಬಸವಾದಿ ಶಿವಶರಣರು ತೋರಿದ ಸಮಾನತೆ ತತ್ವ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಒಕ್ಕಟ್ಟಿನಲ್ಲಿ ಬಲವಿದೆಯೆಂಬುದನ್ನು ತೋರಿಸಿಕೊಟ್ಟವರು ಬಸವಾದಿ ಪ್ರಮಥರು. ಮೇಲು-ಕೀಳು, ಹೆಣ್ಣು-ಗಂಡು, ಸ್ತ್ರೀ-ಪುರುಷ, ಬಡವ-ಬಲ್ಲಿದವೆಂಬ ಭೇದಗಳನ್ನೆಲ್ಲ ತೊಲಗಿಸಿ ಸಮಾನತೆ ತತ್ವದ ಅನುಭವ ಮಂಟಪದಲ್ಲಿ ಒಂದಾಗಿ ಕುಳಿತು ಎಲ್ಲರೂ ಅನುಭಾವಿಗಳಾಗಿ ಶರಣರೆನಿಸಿಕೊಂಡರು. ಅಂತಹ ಶರಣರತ್ನಗಳಲ್ಲಿ ಕುಂಬಾರ ಗುಂಡಯ್ಯ ಶರಣರು ಒಬ್ಬರು. ಕುಂಬಾರ ಗುಂಡಯ್ಯ ಮುಗ್ಧ ಶರಣರು, ಕಾಯಕ ಜೀವಿಗಳು, ದಾಸೋಹ ನಿಷ್ಠರಾಗಿದ್ದ ಈ ಶರಣರ ಶಿವಭಕ್ತಿ…

0 Comments

ಶಿವಶರಣ ಕಾಯಕಯೋಗಿ ಕುಂಬಾರ ಗುಂಡಯ್ಯ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಬೇಡೆನೆಗೆ ಕೈಲಾಸ, ಬಾಡುವುದು ಕಾಯಕವುನೀಡೆನಗೆ ಕಾಯಕವ – ಕುಣಿದಾಡಿನಾಡಿ ಹಂದರಕೆ ಹಬ್ಬಿಸುವೆ!… … … ಜನಪದ ಕವಿ ಸಾವಳಿಗೇಶ ಇಡೀ ಶರಣ ಪರಂಪರೆಯಲ್ಲಿ ಬಹುಮುಖ್ಯವಾಗಿ ಕಾಯಕಕ್ಕೆ ಪ್ರಾಮುಖ್ಯತೆ ಇದೆ. ಶಿವಶರಣರ ವೈಶಿಷ್ಟ್ಯವೆಂದರೆ ಕಾಯಕವನ್ನು ವೃತದಂತೆ ಕಟ್ಟುನಿಟ್ಟಾಗಿ ಪರಿಪಾಲಿಸುವುದು. ಶ್ರಮದ ಬೆವರಹನಿಯಲ್ಲಿ ಅವರು ಲಿಂಗದ ಮೈ ತೊಳೆದವರು. ಆ ಲಿಂಗಪ್ಪನಿಗೂ ಅಷ್ಟೇ ಈ ಶ್ರಮಜೀವಿ ಶರಣರ ಮೈಬೆವರಿನ ಮಜ್ಜನವು ಗಂಗಾಜಲದ ಮಜ್ಜನಕ್ಕಿಂತ ಶ್ರೇಷ್ಠ ಎಂಬುದು. ನುಲಿಯ ಚಂದಯ್ಯ, ಮಾದಾರ ಚನ್ನಯ್ಯ, ಮೋಳಿಗೆಯ ಮಾರಯ್ಯ, ಸತ್ಯಣ್ಣ, ಮುಂತಾದ ಶಿವಶರಣ ಪುಣ್ಯಕಥೆಗಳನ್ನಾಲಿಸಿದಾಗ ಅವರು ಕಾಯಕಕ್ಕೆ ಕೊಟ್ಟ ಮಹತ್ವ ಅದರಲ್ಲಿ ಅವರು ತೋರುವ…

1 Comment