ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನ ವಿಶ್ಲೇಷಣೆ / ಅರಸಿ ತೊಳಲಿದಡಿಲ್ಲ ಹರಸಿ ಬಳಲಿದಡಿಲ್ಲ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ,ಬಯಸಿ ಹೊಕ್ಕಡಿಲ್ಲ, ತಪಸ್ಸು ಮಾಡಿದಡಿಲ್ಲ.ಅದು ತಾನಹ ಕಾಲಕ್ಕಲ್ಲದೆ ಸಾದ್ಯವಾಗದುಶಿವನೊಲಿದಲ್ಲದೆ ಕೈಗೂಡದುಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕುದೆನು.(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-19 / ವಚನ ಸಂಖ್ಯೆ-40) ವಚನ ಸಾಹಿತ್ಯದಲ್ಲಿ ಮಹಿಳೆ ಎಂದರೆ ಪ್ರಪ್ರಥಮವಾಗಿ ಅಕ್ಕಮಹಾದೇವಿ ನೆನಪಾಗುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಪ್ರಥಮ ಕ್ರಾಂತಿಯ ರೂವಾರಿ. ಶರಣೆಯರ ಅಭಿವ್ಯಕ್ತತೆ. ಅಕ್ಷರ ಸಂಸ್ಕೃತಿಯ ಮೇರುತನವನ್ನು ಬಿಂಬಿಸುವಲ್ಲಿ ಅಕ್ಕನ ಪಾತ್ರ ಹಿರಿದಾಗಿದೆ. ಈ ವಚನದಲ್ಲಿ ಅರಸಿ ಮುಖ್ಯವಾದರೂ ಶರಣರ ಕಾಲದ ನಿಷ್ಠುರತೆಯನ್ನು ವಿಶಿಷ್ಟ ವೈಚಾರಿಕತೆಯ ಅನಿವಾರ್ಯತೆಯನ್ನು ಬಿಂಬಿಸುತ್ತದೆ. ಅರಸಿಯಾದವಳು ತನ್ನ ಪ್ರಜೆಗಳ ಒಡನಾಟದಲ್ಲಿ…

0 Comments

ಮರಳುಸಿದ್ದೇಶ್ವರ ಮತ್ತು ಅಕ್ಕಮಹಾದೇವಿ / ಡಾ. ಸುಜಾತಾ ಅಕ್ಕಿ, ಮೈಸೂರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನಯುಗ ವಿಶ್ವಕ್ಕೆ ಮಾದರಿ. ಕನ್ನಡದ ಸಾಂಸ್ಕೃತಿಕ ಚರಿತ್ರೆಯು ಎಷ್ಟೋ ಲಿಪಿ ಮತ್ತು ಲಿಪಿರಹಿತ ಭಾಷೆಗಳ ಪ್ರಭಾವವನ್ನು ಮೀರಿದುದಾಗಿದೆ. ಶೈವ ಮತ್ತು ವೈಷ್ಣವ ಪರಂಪರೆಗಳು ಬೆಳೆಯುತ್ತ ಬಂದಂತೆಲ್ಲಾ ಸ್ಥಾವರವನ್ನು ಪಡೆದು ಶಿಲ್ಪ ಕಲೆ ಸಂಗೀತ ಸಾಹಿತ್ಯದಂತಹ ಏಳು ಲಲಿತ ಕಲೆ ಮತ್ತು ನವರಸಗಳನ್ನು ಮೇಳೈಸಿಕೊಂಡು ಪರಂಪರೆಯಲ್ಲಿ ಸಾಕಾರಗೊಂಡವು. ಬೀದಿಯ ಕೂಸಾಗಿ ಬೆಳೆದ ಕನ್ನಡ ಇಂದು ವಿಶ್ವ ಸಾಹಿತ್ಯದಲ್ಲಿ ಗುರುತಿಸಲ್ಪಟ್ಟು ಇಂಗ್ಲೆಂಡ್ ನಲ್ಲಿ ನಗರದ ಲ್ಯಾಂಬೆತ್ ನದಿಯ ದಂಡೆಯಲ್ಲಿ ವಿಶ್ವ ಪ್ರಥಮ ಸಂಸತ್ತಿನ ರೂವಾರಿಯಾಗಿ ಮೂರ್ತ ಸ್ವರೂಪದಲ್ಲಿ ವಿರಾಜಿಸುತ್ತಿದ್ದಾನೆ. ಕನ್ನಡದ ಹೆಮ್ಮೆಯ ಕನ್ನಡಿಗ. ಇಂದು ವಿಜಯಪುರದ…

0 Comments

LALLESHWARI – The light of wisdom in Kashmir Valleyand AKKAMAHADEVI – Treasure of Asceticism. A Comparative Analysis.

Jammu Kashmir is the land of many thinkers, rulers, ascetics, poets, philosophers, spiritualists, and saints. It has also been a center of various social and religious think tanks. We can get the information in the book “Rajatarangini” written by Kalhana, about the most admirable personalities of Kashmir. There is also a long list of women personalities and saints from Jammu Kashmir, who…

0 Comments

ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನಗಳಲ್ಲಿ “ಮಾಯೆ” / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಹೆಣ್ಣು ಸಂಸಾರದ ಕಣ್ಣು ಎನ್ನುವಂತೆ, ಆಕೆ ತಾಳ್ಮೆಯ ಪ್ರತಿರೂಪ. ಹಾಗೆಯೇ ಶಕ್ತಿಯ ಸಂಕೇತದ ಉಗ್ರರೂಪಕ್ಕೂ ಸಾಕ್ಷಿಯಾಗಿದ್ದಾಳೆ. ಕ್ಷಮಯಾ ಧರಿತ್ರಿಯಾದರೂ ಚಂಚಲತೆಯ ಸ್ವಭಾವವುಳ್ಳವಳೂ ಸಹ. 12 ನೇ ಶತಮಾನದ ಸಮಾಜದಲ್ಲಿ ಬಸವಣ್ಣನವರಿಂದ ಶ್ರೇಣೀಕೃತ ಸಮಾಜದಲ್ಲಿನ ದೀನ ದಲಿತರನ್ನು ಮೇಲೆತ್ತುವುದರ ಜೊತೆ ಜೊತೆಗೆ ಕಡೆಗಣಿಸಲ್ಪಟ್ಟ ಮಹಿಳೆಯರನ್ನು ಬೆಳಕಿಗೆ ತರುವಂಥಾ ಕೆಲಸ ಆಯಿತು. ಬಸವಣ್ಣನವರ ಈ ಕ್ರಾಂತಿಯಲ್ಲಿ ಕರ್ನಾಟಕವು ಅಭೂತಪೂರ್ವ ಅನುಪಮ ಮಹಿಳಾ ವಚನಕಾರ್ತಿಯರನ್ನು ಕಂಡಿತು. ಪುರುಷರಿಗೆ ಸರಿ ಸಮಾನರಾಗಿ ಸಾಮಜೋ-ಧಾರ್ಮಿಕ ಮತ್ತು ಸಾಹಿತ್ಯ ಕೇತ್ರಗಳಲ್ಲಿ ಪಾಲ್ಗೊಂಡರು. ಆಧ್ಯಾತ್ಮಿಕ ಅನುಭಾವದ ಅಭಿವ್ಯಕ್ತಿಯಲ್ಲಿ ಶರಣೆಯರು ಯಾರಿಗೂ ಕಡಿಮೆಯಿಲ್ಲದಂತೆ ಕೆಲಸ ಮಾಡಿದರು. ಮಹಿಳೆಯರಿಗೆ ಗೌರವ…

0 Comments

ಅಗ್ಗವಣಿ ಹಂಪಯ್ಯ ಮತ್ತು ಅವನ ವಚನಗಳು/ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ.

ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಇನ್ನೂ ಚರ್ಚಿಸಲಾರದ, ಅಧ್ಯಯನಕ್ಕೆ ಒಳಪಡಿಸಲಾರದ ವಚನಕಾರರ ಸಂಖ್ಯೆ ಅಪಾರವಾಗಿದೆ. ನಮ್ಮ ಓದು ಕೆಲವೇ ಕೆಲವು ಪರಿಚಿತ ಪ್ರಸಿದ್ಧ ವಚನಕಾರರ ಓದಿನ ಮಟ್ಟಿಗೆ ಸೀಮಿತಗೊಂಡಿರುವದು ವಚನ ಸಾಹಿತ್ಯ ಅಧ್ಯಯನಿಗಳಾದ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ವಿದ್ವಾಂಸರು ಬಹಳಷ್ಟು ಚರ್ಚಿಸಿರಲಾರದ ವಚನಕಾರರಲ್ಲಿ ಅಗ್ಘವಣಿ ಹಂಪಯ್ಯನೂ ಒಬ್ಬನಾಗಿದ್ದಾನೆ. ವಚನಕಾರರಲ್ಲಿ ಹಂಪ ಎನ್ನುವ ಹೆಸರು ಇಬ್ಬರು ಮೂವರಿಗೆ ಇರುವದು ಕಂಡು ಬರುತ್ತದೆ. ತಕ್ಷಣಕ್ಕೆ ನೆನಪಾಗುವ ಇನ್ನೊಂದು ಹೆಸರು ಹೇಮಗಲ್ಲ ಹಂಪನದು. ಹಾಗೆಯೆ ಅಗ್ಘವಣಿ ಹಂಪಯ್ಯ ಎಂಬ ಹೆಸರು ಈ ವಚನಕಾರನದು. ಈತನ ನಾಲ್ಕು ವಚನಗಳನ್ನು ವಚನ ಸಂಪುಟಗಳಲ್ಲಿ ಸಂಪಾದಿಸಿ ಕೊಟ್ಟ…

0 Comments

ಭಾಗ-03: ಸಂಪಾದಕೀಯ – ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಅರ್ಥ ಸನ್ಯಾಸಿಯಾದಡೇನಯ್ಯಾ,ಆವಂಗದಿಂದ ಬಂದಡೂ ಕೊಳದಿರಬೇಕು.ರುಚಿ ಸನ್ಯಾಸಿಯಾದಡೇನಯ್ಯಾ,ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.ಸ್ತ್ರೀ ಸನ್ಯಾಸಿಯಾದಡೇನಯ್ಯಾ,ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.ದಿಗಂಬರಿಯಾದಡೇನಯ್ಯಾ,ಮನ ಬತ್ತಲೆಯಾಗಿರಬೇಕು.ಇಂತೀ ಚತುರ್ವಿಧದ ಹೊಲಬನರಿಯದೆ ವೃಥಾ ಕೆಟ್ಟರುಕಾಣಾ ಚನ್ನಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-791 / ವಚನ ಸಂಖ್ಯೆ-45) ಈ ಒಂದೇ ಒಂದು ವಚನವನ್ನು ಅರ್ಥ ಮಾಡಿಕೊಂಡಿದ್ದರೆ “ವಚನ ದರ್ಶನ” ಎನ್ನುವ ಪುಸ್ತಕದ ಪ್ರಧಾನ ಸಂಪಾದಕ ಸದಾಶಿವಾನಂದ ಮತ್ತು ಸಂಪಾದಕರಾದ ಜನಮೇಜಯ ಉಮರ್ಜಿ, ನಿರಂಜನ ಪೂಜಾರ, ಚಂದ್ರಪ್ಪ ಬಾರಂಗಿ ಹಾಗೂ ಸಂತೋಷಕುಮಾರ ಅವರುಗಳು ಬೌದ್ಧಿಕ ದಿವಾಳಿಯಿಂದ ವಚನ ಸಾಹಿತ್ಯವನ್ನು ಹೀಯಾಳಿಸುವ ಮತ್ತು ವೈಷ್ಣವೀಕರಣದತ್ತ ತಿರುಚುವ ಪ್ರಯತ್ನವನ್ನು ಮಾಡುತ್ತಿರಲಿಲ್ಲ ಎನ್ನುವುದು ಸಾರಸ್ವತ…

0 Comments

ಶ್ರಾವಣ ವಚನ ಚಿಂತನ-13: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಹಳ್ಳದೊಳಗೆ ಹುಳ್ಳಿ ಬರುತ್ತಿರಲು,ನೊರೆ ತೆರೆಗಳು ತಾಗಿದುವಲ್ಲಾ!ಸಂಸಾರ ಸಾಗರದೊಳಗೆ ಸುಖದುಃಖಗಳು ತಾಗಿದುವಲ್ಲಾ!ಇದಕ್ಕಿದು ಮೂರ್ತಯಾದ ಕಾರಣಪ್ರಳಯವಾಗಿತ್ತು ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-142 / ವಚನ ಸಂಖ್ಯೆ-47) ಮಾನವ ಜನ್ಮವನ್ನು‌ ಹೊಂದಿ ಬಂದ ಮೇಲೆ ಅದಕ್ಕೆ ಸುಖ ದುಃಖಗಳು ತಾಕುತ್ತವೆ. ಎಲ್ಲ ಸುಖ-ದುಃಖಗಳಿಗೆ ಕಾರಣ ನಮ್ಮೊಳಗಿರುವ ಅಜ್ಞಾನ. ತನ್ನ ಇರವನ್ನು ಮರೆತ‌ ಮಾನವ ಅಜ್ಞಾನ‌ದ ಕಾರಣ ಇರುವ ಮಾಯೆಯನ್ನು ಸತ್ಯವೆಂದು ತಿಳಿದು ಅದರಲ್ಲಿಯೆ ಮುಳುಗಿ ಹೊರಳಾಡುತ್ತಾನೆ. ಇದೇ ಮಾಯೆಗೆ ಕಾರಣ ಅಥವಾ ದೇಹದ ನೋವಿಗೆ ಕಾರಣ. ಈ ಮಾಯೆ ಪಲ್ಲಟಿಸಿ ನಿಜ ಜ್ಞಾನ‌ ಪ್ರಾಪ್ತವಾಗುವವರೆಗೆ ಎಂಥವನಿಗೂ ನೋವು…

0 Comments

ಭಾಗ-02: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಸ್ಕೃತೀಕರಣದ ಮುನ್ನುಡಿ.

ಸತ್ತವರ ಕಥೆಯಲ್ಲ ಜನನದ |ಕುತ್ತದಲಿ ಕುದಿಕುದಿದು ಕರ್ಮದ |ಕತ್ತಲೆಗೆ ಸಿಲುಕುವರ ಸೀಮೆಯ ಹೊಲಬು ತಾನಲ್ಲ ||ಹೊತ್ತು ಹೋಗದ ಪುಂಡರಾಲಿಪ |ಮತ್ತಮತಿಗಳ ಗೋಷ್ಠಿಯಲ್ಲಿದು |ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು || 13 ||(ಪ್ರಭುಲಿಂಗಲೀಲೆ-ಡಾ. ಬಿ. ವ್ಹಿ. ಮಲ್ಲಾಪೂರ / 2011 / ಕನ್ನಡ ಮತ್ತು ಸಂಸ್ಕೃತಿ ಇಲಾಖೆ / ಪುಟ ಸಂಖ್ಯೆ-5 / ವಚನ ಸಂಖ್ಯೆ-13) https://youtu.be/Jrfi820ao1A ಬಸವಣ್ಣ ಹೇಳಿದ್ದು ವೇದಗಳ ಸಾರವನ್ನೇ ಎನ್ನುವಂಥ ಎಡಬಿಡಂಗಿ ಹೇಳಿಕೆಯ youtube link ನಿಮಗಾಗಿ. ಕುಂಕುಮಧಾರಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮಹಾನ್ ವಿದ್ವಾಂಸರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ-ಬೆಂಗಳೂರು…

3 Comments

ಶ್ರಾವಣ ವಚನ ಚಿಂತನ-12: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಶಿಲೆಯೊಳಗಣ ಪಾವಕನಂತೆ,ಉದಕದೊಳಗಣ ಪ್ರತಿಬಿಂಬದಂತೆ,ಬೀಜದೊಳಗಣ ವೃಕ್ಷದಂತೆ,ಶಬ್ದದೊಳಗಣ ನಿಶ್ಶಬ್ದದಂತೆ,ಗುಹೇಶ್ವರಾ ನಿಮ್ಮ ಶರಣ-ಸಂಬಂಧ.(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-7 / ವಚನ ಸಂಖ್ಯೆ-1) ಶರಣರ ಪ್ರಕಾರ ಅಂಗವೇ ಲಿಂಗದ ಆಶ್ರಯ ತಾಣ. ಅದು ಲಿಂಗಕ್ಕೆ ಆಧಾರವಾದುದು. ಅಂಗ ಲಿಂಗವನ್ನು ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಅಂಗವಿರದಿದ್ದರೆ ಲಿಂಗಕ್ಕೆ ಆಸರೆ ಇಲ್ಲ. ಅಂಗ‌ ಮತ್ತು‌ ಲಿಂಗದ ಸಂಬಂಧವನ್ನು‌ ಕುರಿತಂತೆ ಹಿರಿಯ ವಿದ್ವಾಂಸರಾದ ಶ್ರೀಮತಿ ಜಯಾ ರಾಜಶೇಖರ್ ಅವರು: "ಶಿವತತ್ವವನ್ನು ಗುಪ್ತವಾಗಿರಿಸಿಕೊಂಡ ನೆಲೆ ಅಂಗ. ಅಂಗವನ್ನು ಆಶ್ರಯಿಸಿ ಆತ್ಮವು ಸಾಧನ ಮಾರ್ಗದಲ್ಲಿ ಸಾಗಬೇಕು. ಅಂಗವೇ ಲಿಂಗವನ್ನು ಗರ್ಭದಲ್ಲಿ ಅಡಗಿಸಿಕೊಂಡಿರುವ ತಾಯಿ. ಅಂಗದ ಆಧಾರದಿಂದಲೇ ಶಿವತತ್ವದ…

0 Comments

ಭಾಗ-01: ಮುಖಪುಟ – ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ

ಆಸನ ಬಂಧನರು ಸುಮ್ಮನಿರರು.ಭಸ್ಮವ ಹೂಸಿ ಸ್ವರವ ಹಿಡಿದವರು ಸಾಯದಿಪ್ಪರೆ?ಸತ್ಯವನೆ ಮರೆದು, ಅಸತ್ಯವನೆ ಹಿಡಿದು,ಸತ್ತುಹೋದರು ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-156 / ವಚನ ಸಂಖ್ಯೆ-224) ಸಂಘ ಪರಿವಾರ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಹಣೆಯಲ್ಲಿ ವಿಭೂತಿ ಬಿಟ್ಟು ಕುಂಕುಮ ಶೋಭಿತರು So Called ಲಿಂಗಾಯತ ಸ್ವಾಮಿಗಳು ಲಿಂಗಾಯತ ಧರ್ಮದ ವಿರುದ್ಧವಾಗಿ ಬಸವ ದ್ರೋಹಿ ಕೆಲಸ ಮಾಡುತ್ತಿರುವುದು ಜನ ಜನಿತವಾದ ವಿಷಯ. ಈ ವಿಷಯ ಯಾಕೆ ಬಂತು ಅಂದರೆ ಕಳೆದೆರಡು ತಿಂಗಳಿಂದ “ವಚನ ದರ್ಶನ” ಎನ್ನುವ ಪುಸ್ತಕವನ್ನು ನೂರಾರು ಕಡೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿಡುಗಡೆ…

1 Comment