ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನ ವಿಶ್ಲೇಷಣೆ / ಅರಸಿ ತೊಳಲಿದಡಿಲ್ಲ ಹರಸಿ ಬಳಲಿದಡಿಲ್ಲ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ,ಬಯಸಿ ಹೊಕ್ಕಡಿಲ್ಲ, ತಪಸ್ಸು ಮಾಡಿದಡಿಲ್ಲ.ಅದು ತಾನಹ ಕಾಲಕ್ಕಲ್ಲದೆ ಸಾದ್ಯವಾಗದುಶಿವನೊಲಿದಲ್ಲದೆ ಕೈಗೂಡದುಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕುದೆನು.(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-19 / ವಚನ ಸಂಖ್ಯೆ-40) ವಚನ ಸಾಹಿತ್ಯದಲ್ಲಿ ಮಹಿಳೆ ಎಂದರೆ ಪ್ರಪ್ರಥಮವಾಗಿ ಅಕ್ಕಮಹಾದೇವಿ ನೆನಪಾಗುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಪ್ರಥಮ ಕ್ರಾಂತಿಯ ರೂವಾರಿ. ಶರಣೆಯರ ಅಭಿವ್ಯಕ್ತತೆ. ಅಕ್ಷರ ಸಂಸ್ಕೃತಿಯ ಮೇರುತನವನ್ನು ಬಿಂಬಿಸುವಲ್ಲಿ ಅಕ್ಕನ ಪಾತ್ರ ಹಿರಿದಾಗಿದೆ. ಈ ವಚನದಲ್ಲಿ ಅರಸಿ ಮುಖ್ಯವಾದರೂ ಶರಣರ ಕಾಲದ ನಿಷ್ಠುರತೆಯನ್ನು ವಿಶಿಷ್ಟ ವೈಚಾರಿಕತೆಯ ಅನಿವಾರ್ಯತೆಯನ್ನು ಬಿಂಬಿಸುತ್ತದೆ. ಅರಸಿಯಾದವಳು ತನ್ನ ಪ್ರಜೆಗಳ ಒಡನಾಟದಲ್ಲಿ…