ಅವಗುಣಗಳು ಬಿಟ್ಟು ಬಿಡುವುದೇ ಜೀವನ ದರುಶನ / ಡಾ. ಸಿದ್ದು ಯಾಪಲಪರವಿ, ಗದಗ.
ಮನುಷ್ಯ ದುಃಖಿತನಾಗುವುದು ಸಹಜ, ಅದರ ಹಿನ್ನೆಲೆ ಅರಿತು ಪರಿಹಾರ ಕಂಡುಕೊಳ್ಳದಿದ್ದರೆ ಶೋಷಣೆ ಬೆಂಬಿಡದೆ ಕಾಡುತ್ತದೆ. ಧರ್ಮ ಎಂದೂ ಶೋಷಣೆ ಅಸ್ತ್ರವಾಗಬಾರದು, ಜ್ಞಾನಿಗಳು, ಅನುಭಾವಿಗಳು, ಶರಣರು ಇದರ ಪೂರ್ವಾಪರ ಚಿಂತನೆ ಮಾಡಿ ಪರಿಹಾರ ಹುಡುಕುವ ಮನೋಭೂಮಿಕೆ ಬಸವಾದಿ ಶರಣರು ನಮಗೆ ಧಾರೆ ಎರೆದಿದ್ದಾರೆ. ಬದುಕು ಸುಧಾರಿಸಲು ಪಾಠ ಕಲಿಸಿದವರು ಮಹಾವೀರ, ಬುದ್ಧ, ಬಸವ. ಆದರೆ ಇನ್ನೂತನಕ ನಾವಾದರು ನಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳದೆ ಅಜ್ಞಾನವೆಂಬ ಕೂಪದಲ್ಲಿ ಬಿದ್ದು ಅಹಂಕಾರವೆಂಬ ಮಿತಿಗೆ ಒಳಪಟ್ಟು ಇಡೀ ಜೀವನ ಜರ್ಝರಿತ ಮಾಡಿಕೊಳ್ಳುತಿರುವುದು ಸರ್ವೆ ಸಾಮಾನ್ಯವಾಗಿದೆ. ನಮ್ಮ ಶಕ್ತಿ ಸಾಮರ್ಥ್ಯ ನಮಗೆ ಅರಿವಾಗಬೇಕಾದರೆ ಕೆಲವೊಂದು ಮೂಲಭೂತ…