ನಾಗರಹಳ್ಳಿಯ ನಾನಾಗೌಡ ಪಾಟೀಲ/ವಿಶ್ವಾರಾಧ್ಯ ಸತ್ಯಂಪೇಟೆ
ಸಿಂದಗಿ ತಾಲೂಕಿನ ನಾಗರಹಳ್ಳಿ ಗ್ರಾಮದ ಶ್ರೀ ನಾನಾಗೌಡ ಪಾಟೀಲರು ಕೃಷಿಕರು. ಕೃಷಿಯನ್ನು ಮಾಡುತ್ತಲೆ ಬದುಕಿನ ಕೃಷಿಯಲ್ಲಿ ಬಸವ ತತ್ವದ ಬೀಜ ಉತ್ತಿ ಫಲವ ಬಯಸುವವರು. ವಾರ ದಿನ ತಿಥಿ ಮಿತಿ ನೋಡದೆ ಪಂಚಕದ ದಿನವೆ ತಮ್ಮ ತೋಟದಲ್ಲಿ ಬಾವಿ ತೆಗೆಸಿ, ಅಪಾರ ಜಲರಾಶಿ ಹೊರ ಬಂದಾಗ ಇಡೀ ನಾಡವರೆ ಬೆಕ್ಕಸ ಬೆರಗಾದರು. ತಮ್ಮ ಹೊಲದಲ್ಲಿ ದ್ರಾಕ್ಷಿ ಕೃಷಿಯನ್ನು ಮಾಡಿ ನಾಡಿಗೆ ಸಿಹಿ ಉಣಿಸಿದವರು. ಇದೆ ರೀತಿಯಲ್ಲಿಯೆ ತಾವು ಅರಿತುಕೊಂಡ ಸತ್ಯ ಫಲವಾದ ಶರಣರ ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಉತ್ಸಹ ಹೊಂದಿದ್ದಾರೆ. ನಾಡಿನ ಯಾವ ಭಾಗದಲ್ಲಿಯೆ…