ಹಾದಾಡುವ ಹೊಸ್ತಲಲ್ಲಿ ಹೊಯ್ದಾಡದ ದೀಪ “ಶರಣೆ ನೀಲಾಂಬಿಕೆ” / ಡಾ. ಪುಷ್ಪಾವತಿ ಶಲವಡಿಮಠ.
ನೀಲಾಂಬರದಲ್ಲಿ ನೀಲಾಂಜನದಂತೆ ತೊಳಗಿ ಬೆಳಗಿದವಳು ನೀಲಾಂಬಿಕೆ. ತನ್ನ ಘನ ವ್ಯಕ್ತಿತ್ವದಿಂದ ಅರಿವಿನ ದೀಪವಾಗಿ ಬೆಳಗಿದವಳು ನೀಲಾಂಬಿಕೆ. ಸದುವಿನಯದಲಿ ಸಮತೆಯ_ಮಮತೆಯ ತೋರುದೀಪದಂತೆ ಬಾಳಿ ಬೆಳಗಿದವಳಿವಳು. ಪೃಥ್ವಿಗೆ ಅಗ್ಗಳದ ಚಲುವೆಯಾಗಿ, ವೈಚಾರಿಕ ನಿಲುವಿನ ಜಗಜ್ಯೋತಿ ವಿಶ್ವಗುರು ಬಸವಣ್ಣನವರ ಅಂತರಂಗದ ಪ್ರೇಮದ ಸತಿಯಾದವಳು ಇವಳು. ಬಸವಣ್ಣನವರ ವಿಚಾರಪತ್ನಿ ಎಂದು ಕರೆಯಿಸಿಕೊಂಡಾಕೆ ನೀಲಾಂಬಿಕೆ. ಕರ್ನಾಟಕದಲ್ಲಿ 12 ನೇ ಶತಮಾನ ಒಂದು ತೇಜೋಮಯವಾದ ಕಾಲಘಟ್ಟ. ಮಹಾ ಮಾನವತಾವಾದಿ ಬಸವಣ್ಣನವರು ಉದಯಿಸಿದ ಕಾಲವದು. ಅವರ ಪ್ರಖರ ವಿಚಾರಗಳು ಅನುಷ್ಠಾನಕ್ಕೆ ಬಂದ ಕಾಲವದು. ಸಮಸಮಾಜ ಕಟ್ಟಲು ಬಯಸಿದ ಬಸವಣ್ಣನವರು ಜನರ ಮನದಲ್ಲಿ ವಿಶಾಲವಾದ ಭಾವನೆಗಳನ್ನು ಬಿತ್ತಬೇಕಿತ್ತು. ಅದಕ್ಕಿಂತ…