ಶ್ರಾವಣ ವಚನ ಚಿಂತನ-13: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಹಳ್ಳದೊಳಗೆ ಹುಳ್ಳಿ ಬರುತ್ತಿರಲು,ನೊರೆ ತೆರೆಗಳು ತಾಗಿದುವಲ್ಲಾ!ಸಂಸಾರ ಸಾಗರದೊಳಗೆ ಸುಖದುಃಖಗಳು ತಾಗಿದುವಲ್ಲಾ!ಇದಕ್ಕಿದು ಮೂರ್ತಯಾದ ಕಾರಣಪ್ರಳಯವಾಗಿತ್ತು ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-142 / ವಚನ ಸಂಖ್ಯೆ-47) ಮಾನವ ಜನ್ಮವನ್ನು ಹೊಂದಿ ಬಂದ ಮೇಲೆ ಅದಕ್ಕೆ ಸುಖ ದುಃಖಗಳು ತಾಕುತ್ತವೆ. ಎಲ್ಲ ಸುಖ-ದುಃಖಗಳಿಗೆ ಕಾರಣ ನಮ್ಮೊಳಗಿರುವ ಅಜ್ಞಾನ. ತನ್ನ ಇರವನ್ನು ಮರೆತ ಮಾನವ ಅಜ್ಞಾನದ ಕಾರಣ ಇರುವ ಮಾಯೆಯನ್ನು ಸತ್ಯವೆಂದು ತಿಳಿದು ಅದರಲ್ಲಿಯೆ ಮುಳುಗಿ ಹೊರಳಾಡುತ್ತಾನೆ. ಇದೇ ಮಾಯೆಗೆ ಕಾರಣ ಅಥವಾ ದೇಹದ ನೋವಿಗೆ ಕಾರಣ. ಈ ಮಾಯೆ ಪಲ್ಲಟಿಸಿ ನಿಜ ಜ್ಞಾನ ಪ್ರಾಪ್ತವಾಗುವವರೆಗೆ ಎಂಥವನಿಗೂ ನೋವು…





Total views : 56008