ಹಾದಾಡುವ ಹೊಸ್ತಲಲ್ಲಿ ಹೊಯ್ದಾಡದ ದೀಪ “ಶರಣೆ ನೀಲಾಂಬಿಕೆ” / ಡಾ. ಪುಷ್ಪಾವತಿ ಶಲವಡಿಮಠ.

ನೀಲಾಂಬರದಲ್ಲಿ ನೀಲಾಂಜನದಂತೆ ತೊಳಗಿ ಬೆಳಗಿದವಳು ನೀಲಾಂಬಿಕೆ. ತನ್ನ ಘನ ವ್ಯಕ್ತಿತ್ವದಿಂದ ಅರಿವಿನ ದೀಪವಾಗಿ ಬೆಳಗಿದವಳು ನೀಲಾಂಬಿಕೆ. ಸದುವಿನಯದಲಿ ಸಮತೆಯ_ಮಮತೆಯ ತೋರುದೀಪದಂತೆ ಬಾಳಿ ಬೆಳಗಿದವಳಿವಳು. ಪೃಥ್ವಿಗೆ ಅಗ್ಗಳದ ಚಲುವೆಯಾಗಿ, ವೈಚಾರಿಕ ನಿಲುವಿನ ಜಗಜ್ಯೋತಿ ವಿಶ್ವಗುರು ಬಸವಣ್ಣನವರ ಅಂತರಂಗದ ಪ್ರೇಮದ ಸತಿಯಾದವಳು ಇವಳು. ಬಸವಣ್ಣನವರ ವಿಚಾರಪತ್ನಿ ಎಂದು ಕರೆಯಿಸಿಕೊಂಡಾಕೆ ನೀಲಾಂಬಿಕೆ. ಕರ್ನಾಟಕದಲ್ಲಿ 12 ನೇ ಶತಮಾನ ಒಂದು ತೇಜೋಮಯವಾದ ಕಾಲಘಟ್ಟ. ಮಹಾ ಮಾನವತಾವಾದಿ ಬಸವಣ್ಣನವರು ಉದಯಿಸಿದ ಕಾಲವದು. ಅವರ ಪ್ರಖರ ವಿಚಾರಗಳು ಅನುಷ್ಠಾನಕ್ಕೆ ಬಂದ ಕಾಲವದು. ಸಮಸಮಾಜ ಕಟ್ಟಲು ಬಯಸಿದ ಬಸವಣ್ಣನವರು ಜನರ ಮನದಲ್ಲಿ ವಿಶಾಲವಾದ ಭಾವನೆಗಳನ್ನು ಬಿತ್ತಬೇಕಿತ್ತು. ಅದಕ್ಕಿಂತ…

0 Comments

ವಚನಗಳಲ್ಲಿ ಯೋಗ – ಶಿವಯೋಗ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ವಚನಗಳು ಕನ್ನಡ ಸಾಹಿತ್ಯಕ್ಕೆ ಒಲಿದು ಬಂದ ವರ. 12 ನೇ ಶತಮಾನದ ವರ್ತಮಾನದ ತಲ್ಲಣಗಳಿಗೆ ನಾಂದಿಯಾದ ವಚನಗಳು ನಡೆ-ನುಡಿ ಸಾಮರಸ್ಯದಿಂದಾಗಿ ೨೧ನೇ ಶತಮಾನದಲ್ಲೂ ಪ್ರಸ್ತುತವಾಗುತ್ತವೆ, ಮೊಗೆ ಮೊಗೆದಷ್ಟು ನವ ನವೀನ ವಿಚಾರಗಳಿಗೆ ಅವಾಸ್ಥಾನವಾದ ವಚನಗಳು ತಮ್ಮ ಒಡಲಲ್ಲಿ ಹೊಸ ಅಚ್ಚರಿಗಳನ್ನು ಮುಚ್ಚಿಟ್ಟುಕೊಂಡಿವೆ. ಈ ಕಾರಣದಿಂದ ವಚನಗಳನ್ನು ಓದಿದಷ್ಟು ಹೊಸ ಹೊಳಹುಗಳು ವಚನ ಅಭ್ಯಾಸಗಳಿಗೆ, ಸಂಶೋಧಕರಿಗೆ ಒದಗುತ್ತಲೇ ಇವೆ. ಕಾಲ ದೂರ ಸರಿದಂತೆ ಜೀವನ ಶೈಲಿಯಲ್ಲಿ, ಮನುಷ್ಯರ, ಆಲೋಚನೆಗಳಲ್ಲಿ, ಅನುಸರಿಸುವ ಮೌಲ್ಯಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ಬದಲಾದ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಚನಗಳು ನೀಡುವ ಬೆಳಕು ಮಾತ್ರ ಕ್ಷೀಣವಾಗಿಲ್ಲ. ಸಾರ್ವಕಾಲಿಕ…

0 Comments

ಬಸವಣ್ಣನವರ ವಚನ “ಶರಣ ನಿದ್ರೆಗೈದೊಡೆ ಜಪ ಕಾಣಿರೋ”ವಚನ ವಿಶ್ಲೇಷಣೆ

ಶರಣ ನಿದ್ರೆಗೈದಡೆ ಜಪ ಕಾಣಿರೊ,ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,ಶರಣ ನಡೆದುದೆ ಪಾವನ ಕಾಣಿರೊ,ಶರಣ ನುಡಿದುದೆ ಶಿವತತ್ವ ಕಾಣಿರೊ,ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ!(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-78 / ವಚನ ಸಂಖ್ಯೆ-873) ಶರಣನ ಶರಣಸ್ಥಲದ ವಿವರಣೆ ಇರುವ ಈ ವಚನ ಬಸವಣ್ಣನವರ ಬೆಡಗಿನ ಹಾಗೂ ಟೀಕಿನ ವಚನಗಳಲ್ಲೊಂದು. ಈ ವಚನದಲ್ಲಿ ಶರಣ, ನಿದ್ರೆ, ಜಪ, ತಪ, ಶಿವರಾತ್ರಿ, ನಡೆದುದು, ನುಡಿದುದು ಮತ್ತು ಕಾಯ ಕೈಲಾಸ ಎನ್ನುವ ಶಬ್ದಗಳನ್ನು ಬಳಸಿದ್ದಾರೆ. ಮಾನವನಾಗಿ ಮರ್ತ್ಯಕ್ಕೆ ಆಗಮಿಸಿ‌ ಶಿವಜ್ಞಾನ ಸಂಪನ್ನನಾಗಿ ಮಹದೇವನಾಗಿ ಮಹದಲ್ಲಿ ನಿಂದವನೇ ಶರಣ. ಅರಿವನ್ನೆ…

0 Comments

ಷಣ್ಮುಖಸ್ವಾಮಿಗಳ ವಚನ “ಎನ್ನ ಸ್ಥೂಲತನುವೆಂಬ ಮನೆಯಲ್ಲಿ”ವಚನ ವಿಶ್ಲೇಷಣೆ

ಎನ್ನ ಸ್ಥೂಲತನುವೆಂಬ ಮನೆಯಲ್ಲಿಲಿಂಗವೆಂಬ ಜ್ಯೋತಿಯ ತುಂಬಿದೆನಯ್ಯ.ಎನ್ನ ಸೂಕ್ಷ್ಮತನುವೆಂಬ ಮನೆಯಲ್ಲಿಮಂತ್ರವೆಂಬ ಜ್ಯೋತಿಯ ತುಂಬಿದೆನಯ್ಯ.ಎನ್ನ ಕಾರಣ ತನುವೆಂಬ ಮನೆಯಲ್ಲಿಜ್ಞಾನವೆಂಬ ಜ್ಯೋತಿಯ ತುಂಬಿದೆನಯ್ಯ.ಎನ್ನ ಒಳಹೊರಗೆ ತುಂಬಿ ಬೆಳಗುವಜ್ಯೋತಿಯ ಬೆಳಗಿನೊಳಗೆ ಸುಳಿಯುತಿರ್ದೆನಯ್ಯ.ಅಖಂಡೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-1035 / ವಚನ ಸಂಖ್ಯೆ-237) ಬಸವೋತ್ತರ ಯುಗದ ಪ್ರಮುಖ ವಚನಕಾರರು ಶ್ರೀ ಷಣ್ಮುಖಸ್ವಾಮಿಗಳು. 17 ನೇ ಶತಮಾನದ ಅಂತ್ಯಭಾಗದಲ್ಲಿದ್ದ ಇವರ ಜೀವಿತದ ಕಾಲಘಟ್ಟ ಸುಮಾರು ಕ್ರಿ. ಶ. 1639 ರಿಂದ ಕ್ರಿ. ಶ. 1711 ಎಂದು ತಿಳಿದು ಬರುತ್ತದೆ. ಇವರು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನವರಾದ ಇವರ ತಂದೆ ಶರಣ ಮಲ್ಲಪ್ಪ ಶೆಟ್ಟಿ…

0 Comments

ಬಸವಾದಿ ಶರಣರ ಆಧ್ಯಾತ್ಮ ಸಾಧನೆ ಮತ್ತು ಸಿದ್ಧಿ / ಡಾ. ಪಂಚಾಕ್ಷರಿ ಹಳೆಬೀಡು, ಬೆಂಗಳೂರು.

ಜಗತ್ತಿನಲ್ಲಿ ಹಲವಾರು ಧರ್ಮಗಳು ಅಸ್ತಿತ್ವದಲ್ಲಿವೆ. ಪ್ರತಿಯೊಂದು ಧರ್ಮದ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಭಿನ್ನವಾಗಿವೆ. ನಮ್ಮ ಸುತ್ತಲಿನ ಎಲ್ಲಾ ಧರ್ಮಗಳೂ ಕೂಡ ದೇವರು ಮತ್ತು ಜೀವಾತ್ಮನ ಕುರಿತಾಗಿ ಭಿನ್ನ ನಿಲುವುಗಳನ್ನು ಹೊಂದಿರುವುದನ್ನು ನಾವು ಕಾಣುತ್ತೇವೆ. ಕೆಲವು ಧರ್ಮಗಳು ದೇವರ ಅಸ್ತಿತ್ವವನ್ನು ಸ್ಥಿರೀಕರಿಸಿದರೆ ಮತ್ತೆ ಕೆಲವು ಧರ್ಮಗಳು ದೇವರ ಅಸ್ಥಿತ್ವವನ್ನು ನಿರಾಕರಿಸುತ್ತವೆ.ಅವುಗಳಿಗೆ ಕ್ರಮವಾಗಿ ಸೇಶ್ವರವಾದಿ ಮತ್ತು ನಿರೀಶ್ವರವಾದಿ ಧರ್ಮಗಳೆಂದು ಹೇಳುವರು. ಕೆಲವು ಧರ್ಮಗಳು ಪುನರ್ಜನ್ಮ ಸಿದ್ಧಾಂತವನ್ನು ಒಪ್ಪಿದರೆ ಮತ್ತೆ ಕೆಲವು ಧರ್ಮಗಳು ಅದನ್ನು ನಿರಾಕರಿಸುತ್ತವೆ, ಕೆಲವು ಧರ್ಮಗಳು ಸ್ವರ್ಗ-ನರಕಗಳನ್ನು ಅಲ್ಲಗಳೆದರೆ ಮತ್ತೆ ಕೆಲವು ಅದನ್ನು ಒಪ್ಪುತ್ತವೆ. ಈ ಹಿನ್ನೆಲೆಯಲ್ಲಿ…

0 Comments

ಡಾ. ಕಲ್ಯಾಣಮ್ಮ ಲಂಗೋಟಿ ಮತ್ತು ಪ್ರೋ. ಸಿದ್ಣಣ್ಣ ಲಂಗೋಟಿ ಶರಣ ದಂಪತಿಗಳು – “ಸಿದ್ಧ ಕಲ್ಯಾಣ ಪರಿಶುದ್ಧ ಕಲ್ಯಾಣ”.

ತುಂಬಿದ ಸಭೆಯಲ್ಲಿ ರಾಜ ತನ್ನ ಎಲ್ಲ ಮಂತ್ರಿಗಳನ್ನುದ್ದೇಶಿಸಿ, ನಮ್ಮ ರಾಜ್ಯದ ಸರ್ವಾಂಗೀಣ ಏಳಿಗೆಗೆ ಕಾರಣರಾದವನ್ನು ಗುರುತಿಸಿರಿ. ಅವರನ್ನು ನಾನು ಸನ್ಮಾನಿಸಬೇಕು ಎಂದು ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಒಬ್ಬ ಮಂತ್ರಿ ನಮ್ಮ ರಾಜ್ಯದಲ್ಲಿರುವ ಇಂಜನೀಯರುಗಳಿಗೆ ಇದರ ಶ್ರೇಯಸ್ಸು ತಲುಪಬೇಕು. ಏಕೆಂದರೆ ಈ ಕೋಟೆ, ಅರಮನೆ, ರಸ್ತೆಗಳು, ಆಣೆಕಟ್ಟುಗಳು ಮತ್ತು ನೀರಾವರಿ ಯೋಜನೆಗಳನ್ನು ಮಾಡಿ ರಾಜ್ಯವನ್ನು ಸಮೃದ್ಧಗೊಳಿಸಿದ್ದಾರೆ. ಅಂಥ ಇಂಜನೀಯರುಗಳಲ್ಲಿ ಶ್ರೇಷ್ಠರಾದವರನ್ನು ಈಗಲೇ ಗುರುತಿಸಿ ಕರೆತನ್ನಿ ಎಂದು ರಾಜ ಆಜ್ಞೆ ಮಾಡುತ್ತಾನೆ. ಆದರೆ ಇನ್ನೊಬ್ಬ ಮಂತ್ರಿ ವೈದ್ಯರು ಈ ರಾಜ್ಯವನ್ನು ಸ್ವಸ್ಥವಾಗಿಡುವಲ್ಲಿ ಶ್ರಮ ವಹಿಸಿದ್ದಾರೆ ಎಂದಾಗ ಒಬ್ಬ ಶ್ರೇಷ್ಠ…

0 Comments

ವಚನ ಸಾಹಿತ್ಯದಲ್ಲಿ ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು / ಡಾ. ಶೀಲಾದೇವಿ ಮಳಿಮಠ.

Research Article Main Topic: ವಚನ ಸಾಹಿತ್ಯದಲ್ಲಿ ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು Specialization Topic: ವಿಶೇಷ ವಿಷಯ: “ಕಾಳವ್ವೆ ವಚನಗಳು – ಸಾಹಿತ್ಯ ಸಂವೇದನೆ ಮತ್ತು ಸಾಮಾಜಿಕ ವೇದನೆ – ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು. ಅರ್ಥಪ್ರಾಣಭಿಮಾನದ ಮೇಲೆ ಬಂದಡೂ ಬರಲಿ,ವೃತಹೀನನ ನೆರೆಯಲಾಗದು.ನೋಡಲು ನುಡಿಸಲು ಎಂತೂ ಆಗದು.ಹರಹರಾ, ಪಾಪವಶದಿಂದ ನೋಡಿದಡೆ,ರುದ್ರಜಪ ಮಾಹೇಶ್ವರಾರಾಧನೆಯ ಮಾಳ್ಪುದು.ಇಂತಲ್ಲದವರ ಉರಿಲಿಂಗಪೆದ್ದಿಗಳರಸ‌ ನಕ್ಕು ಕಳೆವನವ್ವಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-868 / ವಚನ ಸಂಖ್ಯೆ-729) ವೃತ ಹೋದಾಗಳೆ ಇಷ್ಟಲಿಂಗದ ಕಳೆ ನಷ್ಟವವ್ವಾ,ಅವರು ಲಿಂಗವಿದ್ದೂ ಭವಿಗಳು.ಅದು ಹೇಗೆಂದಡೆ ಪ್ರಾಣವಿಲ್ಲದ ದೇಹದಂತೆ.ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ.(ಸಮಗ್ರ ವಚನ ಸಂಪುಟ:…

0 Comments

ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲಾ / ಡಾ. ಎಮ್.‌ ಎ. ಜ್ಯೋತಿ ಶಂಕರ, ಮೈಸೂರು.

ಕನ್ನಡ ಸಾಹಿತ್ಯ ಲೋಕದಲ್ಲಿ 12 ನೇಯ ಶತಮಾನ, ಆ ಸಂದರ್ಭದಲ್ಲಿ ಬಂದಂತಹ ವಚನ ಸಾಹಿತ್ಯ, ಇತಿಹಾಸದಲ್ಲಿ ಒಂದು ಅಪೂರ್ವವಾದ ದಾಖಲೆಯನ್ನು ನಿರ್ಮಿಸಿತು. ಅದು ಸಾಹಿತ್ಯದ ರೀತಿಯನ್ನು, ಭಾಷೆಯನ್ನು, ಛಂದಸ್ಸನ್ನು ಮಾತ್ರ ಗಮನಿಸಲಿಲ್ಲ, ಬದಲಿಗೆ ಸಮಾಜವನ್ನೇ ಹೊಸ ದಿಕ್ಕಿನೆಡೆಗೆ ನೋಡುವಂತೆ ಮಾಡಿತು. ಆ ಹೊಸ ದಿಕ್ಕು ತನ್ನ ದಿಕ್ಸೂಚಿಯನ್ನು ರಚಿಸಿದ್ದು, ಸತ್ಯದ ಶುದ್ಧ ಬದುಕಿಗಾಗಿ ಎನ್ನುವಂತಹದು ಅಚ್ಚರಿಯನ್ನು ಮೂಡಿಸಿದರೂ, ಅದು ಇಂದಿನ ಜೀವನಕ್ಕೂ ಸರಿ ಹೊಂದಬಲ್ಲ ತಾತ್ವಿಕ ಮಾತೃಕೆಯನ್ನು ರಚಿಸಿದೆ ಎನ್ನುವುದು ಸದಾ ಸಂಸ್ಮರಣೀಯವಾದ ಸಂಗತಿಯಾಗಿದೆ. ಅನೇಕ ಶರಣರು ಬಸವಣ್ಣನವರ ನೇತೃತ್ವದಲ್ಲಿ, ನವ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಿದರು.…

0 Comments

ಬಸವಣ್ಣನವರ ವಚನಗಳಲ್ಲಿ ಸಾಂಸ್ಕೃತಿಕ ನೆಲೆಗಳು /   ಡಾ. ಲಕ್ಷ್ಮೀಕಾಂತ ಪಂಚಾಳ

ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆ ವಚನ ಸಾಹಿತ್ಯ. ಅಟ್ಟದೆತ್ತರದಂತಿದ್ದ ಸಾಹಿತ್ಯವನ್ನು ಜನಸಾಮಾನ್ಯರ ಮಟ್ಟಕ್ಕಿಳಿಸಿದ ಕೀರ್ತಿ ವಚನಕಾರರದ್ದಾಗಿದೆ. ಜಾತ್ಯತೀತ, ವರ್ಗಾತೀತ, ಲಿಂಗಾತೀತ, ರೂಪಾತೀತ, ಛಂದೋತೀತವಾಗಿ ವಚನಕಾರರು ತಾವು ಕಂಡುಂಡ ಅನುಭವವನ್ನು ಗದ್ಯವು ಅಲ್ಲದ, ಪದ್ಯವು ಅಲ್ಲದ, ಆದರೆ ಹೃದ್ಯವೇದ್ಯವಾಗುವ ವಿಶಿಷ್ಟ ರೀತಿಯ ವಚನದ ರಚನೆ ಮಾಡಿದರು. ಸಾರ್ವಕಾಲಿಕ ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ದಯೆ, ಕರುಣೆ, ಅನುಕಂಪ, ಸಮಾನತೆ, ಸಹಕಾರ, ಜಾತ್ಯತೀತ, ಕಾಯಕ, ದಾಸೋಹ ಮೊದಲಾದವು ಹನ್ನೆರಡನೆ ಶತಮಾನದಿಂದ ಇಂದಿನವರೆಗೂ ನವನೀತದಂತೆ ಹೊಳಪು ಪಡೆದು ಸಮಕಾಲೀನತೆ ಪಡೆದುಕೊಂಡಿವೆ. ಇಂತಹ ವಚನ ಸಾಹಿತ್ಯದ ಮೇರು ಪ್ರಮಥ…

0 Comments

ಡಾ. ಶೀಲಾದೇವಿ ಮಳಿಮಠ-ಜ್ಞಾನದಿಂದ ಅನುಪಮ ಸುಜ್ಞಾನದೆಡೆಗೆ ಕೊಂಡೊಯ್ಯುವ ಚಿಂತಾಮಣಿ

ಅಖಂಡ ಮಂಡಲಾಕಾರಂ | ವ್ಯಾಪ್ತಂ ಯೇನ ಚರಾಚರಂ ||ತತ್ಪದಂ ದರ್ಶಿತಂ ಯೇನ | ತಸ್ಮೈ ಶ್ರೀ ಗುರವೇ ನಮಃ ‖ ಅಜ್ಞಾನ ತಿಮಿರಾಂಧಸ್ಯ | ಜ್ಞಾನಾಂಜನ ಶಲಾಕಯಾ ||ಚಕ್ಷುಃ ಉನ್ಮೀಲಿತಂ ಯೇನ | ತಸ್ಮೈ ಶ್ರೀಗುರವೇ ನಮಃ ‖ ಗುರು ಬ್ರಹ್ಮಾ ಗುರುರ್ವಿಷ್ಣುಃ | ಗುರು ದೇವೋ ಮಹೇಶ್ವರಃ ||ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈ ಶ್ರೀಗುರವೇ ನಮಃ ‖ Primary objective of education is to make children fearless  - Swami Vivekananda “ಶಿಕ್ಷಣದ ಮೂಲಭೂತ ಉದ್ದೇಶ ಅಂದರೆ ವಿದ್ಯಾರ್ಥಿಗಳನ್ನು ಧೈರ್ಯವಂತರನ್ನಾಗಿ ಮಾಡುವುದು”.…

0 Comments