ವಚನ ಸಾಹಿತ್ಯದಲ್ಲಿ ದಯಾಪರತೆ ಚಿಂತನೆಗಳು / ಡಾ. ಪೂರ್ಣಿಮಾ ಎಸ್, ಬೆಂಗಳೂರು.

ಸಮಾಜದ ಏಳಿಗೆಗಾಗಿ ಪ್ರತಿಯೊಂದು ಜೀವ-ಜೀವಿಯ ಕಲ್ಯಾಣಕ್ಕಾಗಿ ಕಾಲಾನುಕ್ರಮದಲ್ಲಿ ಹಲವಾರು ಧರ್ಮಗಳು ಉದಯವಾದವು. ಹಾಗೆ ಉದಯವಾದ ಜಗತ್ತಿನ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಬಸವಾದಿ ಶರಣ ಧರ್ಮವೂ ಒಂದು. ದಯವಿಲ್ಲದ ಧರ್ಮವದೇವುದಯ್ಯಾ?ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ,ದಯವೇ ಧರ್ಮದ ಮೂಲವಯ್ಯ,ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-67 / ವಚನ ಸಂಖ್ಯೆ-247) ಎಂಬ ಬಸವಣನವರ ದಿವ್ಯ ಸಂದೇಶವನ್ನು ಹಾಗೂ ಜಗತ್ತಿನಲ್ಲಿರುವ ಯಾವುದೇ ಸೂಕ್ಷ್ಮಾತಿ ಸೂಕ್ಷ್ಮ ಜೀವಕ್ಕೂ ಕೂಡ ಹಿಂಸೆಯಾಗಬಾರದೆಂಬ ಉದ್ದೇಶದಿಂದ ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಬಸವಣ್ಣನವರ ಧ್ಯೇಯೋದ್ದೇಶದ ಹಾದಿಯಲ್ಲಿ ಎಲ್ಲ ಶಿವಶರಣರು ಸಹ ದಯೆ ಕರುಣೆ ವಾತ್ಯಲ್ಯಗಳನ್ನು ಅಳವಡಿಸಿಕೊಂಡು ಅನುಸರಿಸಿರುವುದನ್ನು…

0 Comments

🌷ಅಕ್ಕಮಹಾದೇವಿ ಜಯಂತಿ🌷/ಪ್ರೊ. ಜಿ ಎ. ತಿಗಡಿ.,ಧಾರವಾಡ

ಇಂದು ವೈರಾಗನಿಧಿ, ವೀರ ವಿರಾಗಿನಿ, ಶರಣ ಸಂಕುಲದ ಧ್ರುವತಾರೆ, ಮಹಾನ್ ಶರಣೆ ಅಕ್ಕಮಹಾದೇವಿಯ ಜಯಂತಿ. ಆ ಮಹಾತಾಯಿಯ ಜೀವನ ಗಾಥೆಯನ್ನು ಒತ್ತಟ್ಟಿಗೆ ಇರಿಸಿ, ತನ್ನ ಜೀವನಾನುಭವದಿಂದ ಪಡೆದ ಉನ್ನತ ಮೌಲ್ಯಗಳನ್ನು ವಚನಗಳ ಮೂಲಕ ಹಾಡಿಕೊಂಡಿದ್ದಾರೆ. ಅವುಗಳಲ್ಲಿ ಒಂದೆರಡನ್ನಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡುಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ. ಒಂದೆರಡು ಅಕ್ಕನ ವಚನಗಳನ್ನು ನೋಡೋಣ. ಅರ್ಥಸನ್ಯಾಸಿಯಾದಡೇನಯ್ಯಾ,ಆವಂಗದಿಂದ ಬಂದಡೂ ಕೊಳದಿರಬೇಕು.ರುಚಿಸನ್ಯಾಸಿಯಾದಡೇನಯ್ಯಾ,ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.ಸ್ತ್ರೀ ಸನ್ಯಾಸಿಯಾದಡೇನಯ್ಯಾ,ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.ದಿಗಂಬರಿಯಾದಡೇನಯ್ಯಾ,ಮನ ಬತ್ತಲೆ ಇರಬೇಕು.ಇಂತೀ ಚತುರ್ವಿಧದಹೊಲಬರಿಯದೆ ವೃಥಾ ಕೆಟ್ಟರುಕಾಣಾ ಚೆನ್ನಮಲ್ಲಿಕಾರ್ಜನ.ಸಂಪತ್ತನ್ನು ನಿರಾಕರಿಸಿ ಧನ ಕನಕಗಳ ವಿಷಯದಲ್ಲಿ ಸನ್ಯಾಸಿಯಾದರೆ ಸಾಲದು. ತನಗೆ ಯಾವುದೇ ರೂಪದಿಂದ ಬಂದರೂ ಧನವನ್ನು…

2 Comments

ನಾಗರಹಳ್ಳಿಯ ನಾನಾಗೌಡ ಪಾಟೀಲ/ವಿಶ್ವಾರಾಧ್ಯ ಸತ್ಯಂಪೇಟೆ

ಸಿಂದಗಿ ತಾಲೂಕಿನ ನಾಗರಹಳ್ಳಿ ಗ್ರಾಮದ ಶ್ರೀ ನಾನಾಗೌಡ ಪಾಟೀಲರು ಕೃಷಿಕರು. ಕೃಷಿಯನ್ನು ಮಾಡುತ್ತಲೆ ಬದುಕಿನ ಕೃಷಿಯಲ್ಲಿ ಬಸವ ತತ್ವದ ಬೀಜ ಉತ್ತಿ ಫಲವ ಬಯಸುವವರು. ವಾರ ದಿನ ತಿಥಿ ಮಿತಿ ನೋಡದೆ ಪಂಚಕದ ದಿನವೆ ತಮ್ಮ ತೋಟದಲ್ಲಿ ಬಾವಿ ತೆಗೆಸಿ, ಅಪಾರ ಜಲರಾಶಿ ಹೊರ ಬಂದಾಗ ಇಡೀ ನಾಡವರೆ ಬೆಕ್ಕಸ ಬೆರಗಾದರು. ತಮ್ಮ ಹೊಲದಲ್ಲಿ ದ್ರಾಕ್ಷಿ ಕೃಷಿಯನ್ನು ಮಾಡಿ ನಾಡಿಗೆ ಸಿಹಿ ಉಣಿಸಿದವರು. ಇದೆ ರೀತಿಯಲ್ಲಿಯೆ ತಾವು ಅರಿತುಕೊಂಡ ಸತ್ಯ ಫಲವಾದ ಶರಣರ ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಉತ್ಸಹ ಹೊಂದಿದ್ದಾರೆ. ನಾಡಿನ ಯಾವ ಭಾಗದಲ್ಲಿಯೆ…

0 Comments

ವಚನ ಸಾಹಿತ್ಯದಲ್ಲಿ ಗುರು/ಡಾ. ಸರ್ವಮಂಗಳ ಸಕ್ರಿ,ರಾಯಚೂರು.

ವಚನ ಸಾಹಿತ್ಯ ಶರಣರ ಬದುಕಿನ ಮೌಲಿಕತೆಯನ್ನು ಬಿಂಬಿಸುವ ಆಂತರಿಕ ಅರಿವಿನ ಧರ್ಮವಾಗಿದೆ. ಪ್ರಗತಿಪರ ಚಿಂತನೆಯ ತತ್ವ ಸಿದ್ಧಾಂತಗಳನ್ನು ವೈಚಾರಿಕ ನೆಲೆಗಟ್ಟಿನ ಮೇಲೆ ಪರಿಶುದ್ಧಗೊಳಿಸುವ ಪರಿಯದು. ಯಾವುದೇ ಧರ್ಮವಾದರೂ ನೀತಿ ಸತ್ಯದ ನಿಷ್ಠೆಯಾಗಿರಬೇಕು. ಪ್ರಕೃತಿಯ ಶಕ್ತಿಯಲ್ಲಿ ಲೀನವಾಗಬೇಕು. ಇದು ಮಾನವ ಧರ್ಮ. ಇದಕ್ಕಿಂತ ದೊಡ್ಡ ಧರ್ಮ ಬೇರೆ ಯಾವುದು ಇಲ್ಲ. ಇದನ್ನು ಹಿಂದುಗಳು ಮುಕ್ತಿ ಎಂದರು. ಜೈನರು ನಿರ್ವಾಣವೆಂದರು. ಬೌದ್ಧರರು ವಿಮಕ್ತಿಗಾಗಿ ಅನ್ವೇಷಣೆ ಎಂದರು. ಸಿಖರು ಧ್ಯಾನದ ಮೂಲಕ ದೇವರಲ್ಲಿ ಒಂದಾಗುವುದೆಂದರು. ಎಲ್ಲಾ ಧರ್ಮದಲ್ಲಿ ಧರ್ಮದ ಮಹತ್ವವನ್ನು ಸಾರಿದ ಮಹಾನ್ ಗುರುಗಳಿದ್ದಾರೆ. ಎಲ್ಲಾ ಧರ್ಮಕ್ಕೂ ಅದರದ್ದೇ ಆದ ತಾತ್ವಿಕ…

0 Comments

ಅನುಪಮ ಅಹಿಂಸಾವಾದಿ ಶರಣ ಬಳ್ಳೇಶ ಮಲ್ಲಯ್ಯನವರು

ಆವ ಪ್ರಾಣಿಗೆಯೂ ನೋವ ಮಾಡಬೇಡ.ಪರನಾರಿಯರ ಸಂಗ ಬೇಡ.ಪರಧನಕ್ಕಳುಪಬೇಡ, ಪರದೈವಕ್ಕೆರಗಬೇಡ.ಈ ಚತುರ್ವಿಧ ತವಕವ ಮಾಡುವಾಗಪರರು ಕಂಡಾರು, ಕಾಣರು ಎಂದೆನಬೇಡ.ಬಳ್ಳೇಶ್ವರಲಿಂಗಕ್ಕಾರು ಮರೆಮಾಡಬಾರದಾಗಿಅಘೋರನರಕದಲ್ಲಿಕ್ಕುವ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1376 / ವಚನ ಸಂಖ್ಯೆ-193) ವಚನ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು ಅಥವಾ ಗೀಳನ್ನು ಹಚ್ಚಿದ್ದು ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರು. ಇವತ್ತು ಅವರ ಪಾದ ಕಮಲಗಳನ್ನು…

0 Comments

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಪೋಸ್ಟರ್ ಬಿಡುಗಡೆ

ಮೈಸೂರು : ಬಸವಣ್ಣನವರು ಜನಸಾಮಾನ್ಯರ ಧ್ವನಿಯಾದುದರಿಂದ ವಿಶ್ವಗುರುವಾದರು ಎಂದು ನಿವೃತ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶಿವಮಾದಪ್ಪ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರಿನ ಬೋಗಾದಿಯ ಶಾರದಾನಗರ ರೈಲ್ವೆ ಬಡಾವಣೆಯ ಶರಣು ಕುಟೀರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಬಸವಣ್ಣನವರ ತತ್ವವನ್ನು ಪಾಲನೆ ಮಾಡಿದ ಸಿದ್ಧಗಂಗೆಯ ಶ್ರೀ ಶಿವಕುಮಾರಸ್ವಾಮಿಗಳು ,ಬಸವಣ್ಣನವರ ನಾಟಕವನ್ನು ಒಂದು ಸಾವಿರಕ್ಕೂ ಹೆಚ್ಚು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರದರ್ಶನ ಮಾಡಿಸಿ ಜೊತೆಗೆ ಮಠದಲ್ಲಿ ಜಾತ್ಯಾತೀತವಾಗಿ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ೧೧೧ ವರ್ಷಗಳ ಸಾರ್ಥಕ…

1 Comment

ವಿಶ್ವದ ಬೆರಗು ಅಲ್ಲಮ/ಸುನಿತಾ ಮೂರಶಿಳ್ಳಿ

ಹನ್ನೆರಡನೇ ಶತಮಾನದ ಶರಣ ಕ್ರಾಂತಿಗೆ ಅಧಿಕೃತ ಸ್ವರೂಪದ ಮುದ್ರೆಯನೊತ್ತಿದವರು ಅಲ್ಲಮರು. ಆ ಕ್ರಾಂತಿಯ ರೂವಾರಿ ಬಸವಣ್ಣನವರಾದರೆ ಅದರ ಜೀವಾಳ ಅಲ್ಲಮರು. ವಿಶ್ವದ ಬೆಳಕು ಬಸವಣ್ಣನವರಾದರೆ ವಿಶ್ವದ ಬೆರಗು ಅಲ್ಲಮ. ಜ್ಞಾನದ ಮೇರು ಶಿಖರ ವ್ಯೋಮಕಾಯ ಅಲ್ಲಮರ ಮಹತಿ ನಿಸ್ಸೀಮವಾದರೂ ಅರಿಕೆಗೆ ಸಿಕ್ಕಿದ್ದು ತೃಣಮಾತ್ರ. ಇವರ ವ್ಯಕ್ತಿಗತ ಬದುಕು ಕಾವ್ಯ ಪುರಾಣಗಳಲ್ಲಿ ಒಂದೊಂದು ರೀತಿಯಾಗಿ ಚಿತ್ರಿತವಾಗಿದೆ. ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಚಿಕ್ಕ ಹಳ್ಳಿ ಬಳ್ಳಿಗಾವಿ. ಅವರು ಬಾಲ್ಯದಿಂದಲೇ ಮದ್ದಳೆ ಪ್ರವೀಣರಾಗಿದ್ದರು ಎಂಬುದು ವಿದಿತ ಆದರೆ ಅವರು ಕಾಮಲತೆಯೆಂಬ ರಾಜಕುವರಿಯನ್ನು ಪ್ರೀತಿಸಿ ಮದುವೆ ಆಗಿದ್ದರು .…

0 Comments

ವಚನಗಳು ಮತ್ತು ಭಜನೆ/ಡಾ. ಸರ್ವಮಂಗಳ ಸಕ್ರಿ

ಭಕ್ತಿ ಸಾಹಿತ್ಯದಲ್ಲಿ ಭಜನೆಗೆ ತನ್ನದೇ ಆದ ಆಧ್ಯಾತ್ಮಿಕ ಸಂಸ್ಕೃತಿಯ ವರ್ತುಲ ವಿದೆ.ಭಜನೆ ಜನಪದರ ಒಡಲಿನಿಂದ ಹುಟ್ಟಿ ಭಕ್ತಿಯ ಮೂಲಕ ಗುರುತಿಸಿ ಕೊಳ್ಲುವ ಕ್ರಿಯೆಯಾಗಿದೆ.ದಣಿದ ಮನಗಳಿಗೆ ಶಾಂತತೆಯನ್ನು ಏಕಾಗ್ರತೆ ಯನ್ನು ಕೊಡುವುದೆ ಭಜನೆಯಾಗಿದೆ.ಜನಪದರಲ್ಲಿ ಭಜನೆಯಾದರೆ ಶಿಷ್ಟರಲ್ಲಿ ಆತ್ಮ ನಿವೇದನೆ ಎಂಬ ಅರ್ಥ ಬರುತ್ತದೆ. ಭಜ್ ಎಂದರೆ ಸೇವೆ.ನಿ ಎಂದರೆ ಹೊಂದು ಸೇವಿಸು ಭಗವಂತನನ್ನು ಹೊಂದುವ ಭಕ್ತಿಯಾಗುತ್ತದೆ.ಭಜನೆ(ಕನ್ನಡ) ಭಜನ್(ಮರಾಠಿ) ಭಜನ್(ಹಿಂದಿ) ಈ ಪದದ ಅರ್ಥ ದೇವರ ನಾಮವನ್ನು ಸ್ತುತಿಸುವುದು .ಪೂಜಿಸು.ಆರಾಧಿಸು ಪ್ರಾರ್ಥನೆ ಎಂಬುದಾಗಿದೆ.ನಾದದ ಮೂಲಕ ದೇವರನ್ನು ಸಂತೃಪ್ತಿ ಗೊಳಿಸಿ ಬರುವ ಸಂಕಷ್ಟ ಗಳನ್ನು ಬಯಲು ಮಾಡಿಕೊಡುವುದಾಗಿದೆ. ನಮ್ಮ ಮೌಖಿಕ ಪರಂಪರೆಯಲ್ಲಿ…

0 Comments

“ಶರಣ ಸಂಸ್ಕೃತಿಯ ಆರ್ಥಿಕ ಮೌಲ್ಯಗಳು”

ಆನೆ ಕುದುರೆ ಭಂಡಾರವಿರ್ದಡೇನೊ?ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1523 / ವಚನ ಸಂಖ್ಯೆ-1504) ವಚನ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು…

0 Comments

ಸಿದ್ಧಗಂಗಾ ಎಂಬ ಹೆಸರೇ ಮಂತ್ರಪೂರ್ಣ, ಜ್ಞಾನಪ್ರಸಾರದ ಮಹಾವಿದ್ಯಾಲಯ / ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ

ಸಿದ್ಧಗಂಗೆ :ಸಿದ್ಧಗಂಗಾ ಎಂಬ ಹೆಸರೇ ಮಂತ್ರಪೂರ್ಣ. ಪರಿಶುದ್ಧಾತ್ಮರ ದಿವ್ಯ ತಪಸ್ಸು, ಶ್ರದ್ಧೆ ಮತ್ತು ನಿಷ್ಠೆಗಳ ಭದ್ರ ಬುನಾದಿಯ ಮೇಲೆ ನೆಲೆಗೊಂಡಿರುವಂತಹ ಒಂದು ಪವಿತ್ರ ಕ್ಷೇತ್ರ ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಹೇಳಿದರು. ಶ್ರೀ ಸಿದ್ಧಗಂಗಾ ಮಠದಲ್ಲಿ ಶ್ರೀ ಶಿವಕುಮಾರಮಹಾಶಿವಯೋಗಿಗಳವರ ೧೧೭ನೇ ಜಯಂತಿ ನಿಮಿತ್ತ ಮಂಡ್ಯದ ಕಾಯಕಯೋಗಿ ಫೌಂಡೇಷನ್ ಮತ್ತು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಹಯೋಗದೊಂದಿಗೆ ಶ್ರೀ ಶಿವಕುಮಾರಮಹಾಶಿವಯೋಗಿಗಳವರ ಬಗ್ಗೆ ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿ ಮಾತನಾಡಿ "ಸಿದ್ಧಗಂಗಾ ಎನ್ನುವ ಶಬ್ದವೇ ಪವಿತ್ರವಾದುದು ಈ ಪದವನ್ನು ಕೇಳಿದ ಕೂಡಲೇ…

0 Comments