ಶ್ರಾವಣ ವಚನ ಚಿಂತನ-03: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ.ಗುರು ಹಿರಿಯರು ತೋರಿದ ಉಪದೇಶದಿಂದ;ವಾಗದ್ವೈತವನೆ ಕಲಿತು ವಾದಿಪರಲ್ಲದೆ, ಆಗು-ಹೋಗೆಂಬುದನರಿಯರು.ಭಕ್ತಿಯನರಿಯರು ಮುಕ್ತಿಯನರಿಯರು,ಮತ್ತೂ ವಾದಕೆಳಸುವರು,ಹೋದರು, ಗುಹೇಶ್ವರಾ ಸಲೆ ಕೊಂಡಮಾರಿಗೆ.(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-69) ಅಕ್ಷರ ಕಲಿಕೆಯ ಮಿತಿಯನ್ನು ಅಲ್ಲಮಪ್ರಭುಗಳು ಹೇಳುವ ರೀತಿ ಅರ್ಥಪೂರ್ಣವಾಗಿದೆ. ವಿದ್ಯೆ ವಿನಯವನ್ನು ಕೊಡಬೇಕು. ನಮ್ಮ ಹಿರಿಯರೇನೋ "ವಿದ್ಯಾ ದದಾತಿ ವಿನಯಂ" ಎಂದಿದ್ದರು. ಆದರೆ ವಿದ್ಯೆ ಪಡೆದ ಕೆಲವರು ವಿದ್ಯೆಗೆ ವಿನಯ ವೇಭೂಷಣ ಎಂಬುದನ್ನರಿಯದೆ ತಾವು ಕಲಿತವರೆಂಬ ಅಹಮ್ಮಿನಲ್ಲಿ ತಿರುಗುತ್ತಿರುವ ಸಂಗತಿಗಳು ಆಗಲೂ ಇದ್ದುವೆಂದು ಕಾಣಿಸುತ್ತದೆ. ಆದ್ದರಿಂದಲೇ ಚಿಂತಕರಾದ ಅಲ್ಲಮಪ್ರಭುಗಳು ವಿದ್ಯೆಯ ಮಿತಿಗಳನ್ನು ಒಂದು…

0 Comments

ಶ್ರಾವಣ ವಚನ ಚಿಂತನ-02: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆಆ ಬೆವಸಾಯದ ಘೋರವೇತಕ್ಕಯ್ಯಾ?ಕ್ರಯವಿಕ್ರಯವ ಮಾಡಿ ಮನೆಯಸಂಚ ನಡೆಯದನ್ನಕ್ಕಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ?ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆಆ ಓಲಗದ ಘೋರವೇತಕ್ಕಯ್ಯಾ?ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆಆ ಉಪದೇಶವ ಕೊಟ್ಟ ಗುರು ಕೊಂಡ ಶಿಷ್ಯಇವರಿಬ್ಬರ ಮನೆಯಲಿ ಮಾರಿ ಹೊಗಲಿಗುಹೇಶ್ವರನೆಂಬವನತ್ತಲೆ ಹೋಗಲಿ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65) ಶರಣರು ಈ ಬದುಕನ್ನು ಕುರಿತು ಮಾಡಿದ ಚಿಂತನೆ ಸದಾ ಧನಾತ್ಮಕವಾಗಿ ಇರುತ್ತಿತ್ತು. ಇಲ್ಲಿರುವ ಬದುಕನ್ನು ಸುಂದರ ವಾಗಿಸದೆ. ಅಲ್ಲಿನ ಬದುಕನ್ನು ಸುಂದರಗೊಳಿಸುವತ್ತಲೇ ಚಿಂತಿಸುವ ವಿಧಾನವನ್ನು ಅವರು ಒಪ್ಪಲಿಲ್ಲ. ಮೊದಲು ಇಹದ ಬದುಕು ಸುಂದರವಾಗಬೇಕು ಎಂಬುದು…

0 Comments

ಶ್ರಾವಣ ವಚನ ಚಿಂತನ-01: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ,ಆ ಮೇರುವಿಂದತ್ತಣ ಹುಲು ಮೊರಡಿಯೆ ಸಾಲದೆ?ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ,ಆ ಧಾವತಿಯಿಂದ ಮುನ್ನಿನ ವಿಧಿ [ಯೆ] ಸಾಲದೇ?ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ,ನಿಮ್ಮಿಂದ ಹೊರಗಣ ಜವನೆ ಸಾಲದೇ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-66) ಇದು ಶ್ರಾವಣ ಮಾಸದ ಕಾಲ. ಪ್ರತಿ ದಿನ ಒಂದು ಪವಿತ್ರವಾದ ಚಿಂತನೆಯನ್ನು ಮಾಡುವದು ಈ ಮಾಸದ ವೈಶಿಷ್ಟ್ಯ. ಪವಿತ್ರವಾದ ಚಿಂತನೆಯನ್ನು ಮಾಡಲು ಯಾವುದೇ ಮಾಸದ ಅಗತ್ಯವಿಲ್ಲ, ಆದರೂ ಇದೊಂದು ಕಾರಣವಷ್ಟೇ. ಹೀಗೆ ಅಲೋಚಿಸಲು ನಾವು ಹೊರಟಾಗ ನಮಗೆ ಅತ್ಯಂತ ಮಾರ್ಗದರ್ಶಕವಾಗಿ ಸಿಗುವ ಸಾಹಿತ್ಯ…

0 Comments

ಅಷ್ಟಾವರಣಗಳಲ್ಲಿ ರುದ್ರಾಕ್ಷಿ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ನಮ್ಮ ಶರಣ ಸಂಸ್ಕೃತಿಯ ಇತಿಹಾಸದಲ್ಲಿ ಪರಸ್ಪರ ಪೂರಕವಾದ ಎರಡು ಅಂಶಗಳಿಗೆ ಒತ್ತುಕೊಡುತ್ತೇವೆ. ಒಂದು ಭೌತಿಕ ಇನ್ನೊಂದು ಆಧ್ಯಾತ್ಮಿಕ. ಭಕ್ತಿಯ ಮೇರುತನವನ್ನು ಬಿಂಬಿಸುವ ಶರಣ ಧರ್ಮದ ಅಷ್ಟಾವರಣ ಆಧ್ಯಾತ್ಮಿಕ ಬೆಳವಣಿಗೆಯ ಪವಿತ್ರತೆಯನ್ನು ಬಿಂಬಿಸುವ ಸಾಧನವದು. ಅರಿವಿನ ಚಿಂತನೆಯನ್ನು ಅಧ್ಯಾತ್ಮದಲ್ಲಿ ಅನುಷ್ಠಾನಗೊಳಿಸುವ ಶಕ್ತಿಯದು. ಸುಪ್ತ ಶಕ್ತಿಯ ಆರಾಧನೆ ಅದುವೇ ರುದ್ರಾಕ್ಷಿಯಾಗಿದೆ. ರುದ್ರಾಕ್ಷಿಯನ್ನು ಧರಿಸುವ ಆರಾಧನೆ ವೈಯಕ್ತಿಕ ಪ್ರಾರ್ಥನೆಯಲ್ಲ. ಶರಣ ಧರ್ಮದ ಶ್ರೇಷ್ಠತೆಯನ್ನು ಬಿಂಬಿಸುವ ಕ್ರಮ ರುದ್ರಾಕ್ಷಿಯಾಗಿದೆ. ವಿಭೂತಿಯಂತೆ ರುದ್ರಾಕ್ಷಿಯು ಭಕ್ತಿಯ ಸಾಧನೆಯನ್ನು ಬಿಂಬಿಸುವಬಹಿರ್ಮುಖದ ಆವರಣವಾಗಿದೆ. ಅಕ್ಷಿ ಎಂದರೆ ಕಣ್ಣು. ರುದ್ರಾಕ್ಷಿ ಎಂದರೆ ಶಿವನ ಕಣ್ಣು. ತ್ರಿಪುರ ಸಂಹಾರದ ಸಂದರ್ಭದಲ್ಲಿ ಶಿವನ…

0 Comments

ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ / ಶ್ರೀಮತಿ. ಅನುಪಮಾ ಪಾಟೀಲ.

ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ,ಎನ್ನ ಬಿಡು, ತನ್ನ ಬಿಡು ಎಂಬುದು ಕಾಯವಿಕಾರ.ಎನ್ನ ಬಿಡು, ತನ್ನ ಬಿಡು ಎಂಬುದು ಮನೊವಿಕಾರ.ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನಮನ ನಿಮ್ಮನೈದುಗೆ, ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-14 / ವಚನ ಸಂಖ್ಯೆ-36) ಮಾನವನು ತನ್ನ ಜೀವನದಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವದು ಮುಖ್ಯವಾಗಿದೆ. ಆಧ್ಯಾತ್ಮವು ಅಂತರಂಗವನ್ನು ಶುದ್ಧಗೊಳಿಸುವದರೊಂದಿಗೆ ಬಹಿರಂಗದ ದುಃಖವನ್ನು ದೂರ ಮಾಡುತ್ತದೆ, ಅಂತರಂಗ ಶುದ್ಧವಾಗಿರಬೇಕೆಂದರೆ ಮನಸ್ಸು ಒಳ್ಳೆಯದನ್ನು ಆಲೋಚಸುತ್ತಿರಬೇಕು. ದೇಹ ಮತ್ತು ಮನಸ್ಸು ಎರಡು ಅತಿ ಮುಖ್ಯ ಅಂಗಗಳು. ದೇಹ ಸ್ಥೂಲ ಶರೀರವಾದರೆ ಮನಸ್ಸು ಸೂಕ್ಷ್ಮ ಶರೀರ ಅಂತ ಗುರುತಿಸಲಾಗಿದೆ. ಎರಡನ್ನೂ…

0 Comments

“ಬೆಳಗಿನೊಳಗಣ ಬೆಳಗು” / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಶಬ್ದವೆಂಬೆನೆ? ಶ್ರೋತ್ರದೆಂಜಲು. ಸ್ಪರ್ಶವೆಂಬೆನೆ? ತ್ವಕ್ಕಿನೆಂಜಲು.ರೂಪೆಂಬೆನೆ? ನೇತ್ರದೆಂಜಲು. ರುಚಿಯೆಂಬೆನೆ? ಘ್ರಾಣದೆಂಜಲು.ಪರಿಮಳವೆಂಬೆನೆ? ಘ್ರಾಣದೆಂಜಲು. ನಾನೆಂಬೆನೆ? ಅರಿವಿನೆಂಜಲು.ಎಂಜಲೆಂಬೆ ಭಿನ್ನವಳಿದ, ಬೆಳಗಿನೊಳಗಣ ಬೆಳಗುಗುಹೇಶ್ವರನೆಂಬ ಲಿಂಗವು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-182 / ವಚನ ಸಂಖ್ಯೆ-564) ವಚನ ಸಾಹಿತ್ಯದ ಬೆಡಗಿನ ಭಾಷೆಯ ಹರಿಕಾರ ಅಲ್ಲಮಪ್ರಭುಗಳು. ಅಲ್ಲಮ ಪ್ರಭುಗಳ ವಚನಗಳು ಪಾರಮಾರ್ಥಿಕ, ಸೃಜನಶೀಲತೆಗೆ ಮತ್ತು ವೈಚಾರಿಕ ಬದ್ಧತೆಗೆ ಒಳಗಾಗುತ್ತವೆ. ವಚನ ಸಾಹಿತ್ಯ ಸಂಸ್ಕೃತಿಗೆ ಅಲ್ಲಮ ಪ್ರಭುಗಳಿಗೆ ವಿಶಿಷ್ಟ ಮತ್ತು ಗಂಭೀರ ಸ್ಥಾನವಿದೆ. ಅಲ್ಲಮ ಪ್ರಭುಗಳ ತತ್ವ ಮತ್ತು ಸಿದ್ಧಾಂತವನ್ನು ಪ್ರತಿಕ್ರಿಯಿಸುವಾಗ 12 ನೇ ಶತಮಾನದ ಸಾಮಾನ್ಯ ಭಾಷೆ ಪರಿವರ್ತನಾಶೀಲತೆಯನ್ನು ಪಡೆದುಕೊಳ್ಳುತ್ತದೆ. ವಚನ ಭಾಷೆಯ…

0 Comments

ಪರಮ ಪೂಜ್ಯ ಶ್ರೀ ಮ. ನಿ. ಪ್ರ. ಡಾ. ಮಹಾಂತ ಶಿವಯೋಗಿಗಳವರ ಜನ್ಮದಿನದ ಭಕ್ತಿಯ ನಮನಗಳು / ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.

ಮಾಡುವಂತಿರಬೇಕು, ಮಾಡದಂತಿರಬೇಕು.ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.ಕೂಡಲಸಂಗಮದೇವರನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು.(ಸಮಗ್ರ ವಚನ ಸಂಪುಟ: ಒಂದು-2016 ಪುಟ ಸಂಖ್ಯೆ-120/ವಚನ ಸಂಖ್ಯೆ-1310) ಸಕಲ ಜೀವಾತ್ಮರ ಲೇಸಿಗಾಗಿ, ಮಾನವ ಕುಲದ ಕಲ್ಯಾಣಕ್ಕಾಗಿ ದೀನ ದಲಿತರ ಶೂದ್ರ ಅಸ್ಪೃಶ್ಯರ ಉದ್ಧಾರಕ್ಕಾಗಿ ಕಲ್ಯಾಣ ಕ್ರಾಂತಿಗೈದ ವಿಶ್ವಗುರು ಬಸವಣ್ಣನವರ ಜನ್ಮಭೂಮಿಯಾದ ಅಂದಿನ ವಿಜಾಪುರ ಜಿಲ್ಲೆಯ ಹಿಪ್ಪರಿಗಿ ಪಾಲ್ ಬಾವಿ ಹಿರಿಯಮಠದ ಶರಣ ದಂಪತಿಗಳಾದ ಶ್ರೀ ವಿರೂಪಾಕ್ಷಯ್ಯ ಹಾಗೂ ನೀಲಮ್ಮನವರ ಉದರದಲ್ಲಿ 1930 ಆಗಸ್ಟ್ 1 ರಂದು ಜನಿಸಿದರು. ಸೌದಿಯ ವಿರಕ್ತ ಮಠದ ಪೂಜ್ಯ ಶ್ರೀ ಸಂಗನ ಬಸವ ಶಿವಯೋಗಿಗಳ ಕೃಪೆಗೆ ಪಾತ್ರರಾಗಿ “ಮಹಾಂತ” ರೆಂದು ನಾಮಕರಣಗೊಂಡು ಆ ಮಠದ…

0 Comments

ಅಕ್ಕನಾಗಮ್ಮ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ

ತಮ್ಮ ಬಸವನ ದಾಸೋಹ ಮನಿಯಾಗಒಮ್ಮನದಿ ಹುಟ್ಟು ಹಿಡದಾಳ ನಾಗಮ್ಮಓಂಯೆಂದು ತಾನು ನೀಡುತ್ತಾ 12 ನೇಯ ಶತಮಾನದ ಕಲ್ಯಾಣದ ಪವಿತ್ರಭೂಮಿಯಲ್ಲಿ ಎಲ್ಲ ಶರಣರಿಗೂ ಹಿರಿಯರೆನಿಸಿ ಅನುಭವಮಂಟಪದ ಅನುಭಾವಿಯಾಗಿ ದಾಸೋಹ ಮನೆಯ ಪರಂದಾಸೋಹಿಯಾಗಿ ಬಾಳಿಬದುಕಿದ ಶರಣೆ ಕ್ರಾಂತಿಯೋಗಿ ಅಕ್ಕನಾಗಮ್ಮ. ನಾಗಲಾಂಬಿಕೆ, ಅಕ್ಕನಾಗಮ್ಮ ಮುಂತಾದ ನಾಮಗಳಿಂದ ಪ್ರಸಿದ್ಧಿಗೊಂಡಿರುವ ಈ ತಾಯಿಗೆ ಜನಪದರು ಮನತುಂಬಿ ಹಾಡುತ್ತಾರೆ. ಶಿವಯೋಗದ ಭೂಮಿಯದು ಕಲ್ಯಾಣ ಊರದುಶಿವಯೋಗದ ದಂಡು ಹಿಡದಾಳ ನಾಗಮ್ಮಶಿವಯೋಗಿ ಆಗಿ ಕುಂತಾಳ. ಕಲ್ಯಾಣ ನಾಡು ಶಿವಯೋಗಿಗಳ ನಾಡು. ಶಿವಪಾರಮ್ಯ ಸಾಧಿಸಿದವರ ಬೀಡು ಮಾಡಿದರು ಶಿವನಿಗಾಗಿ, ನೀಡಿದರು ಶಿವನಿಗಾಗಿ. ‘ಶಿವ’ ಎಂಬುದು ಅವರಿಗೆ ಸಮಾಜವೆನ್ನುವ ಜಂಗಮ. ಆ…

0 Comments

ಅಕ್ಕಮಹಾದೇವಿ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ.

ಬಸವಾದಿ ಶರಣರು ಮಾಡಿದ ಅತ್ಯಂತ ಮಹತ್ವಪೂರ್ಣ ಕಾರ್ಯವೆಂದರೆ ಸಮಾನತೆ ತತ್ವ ಪಾಲಿಸಿದ್ದು. ದೂರದೃಷ್ಟಿಯುಳ್ಳ ಶರಣರ ಅಂದಿನ ಆ ತತ್ವವೇ ದೇಶ-ದೇಶಗಳ ಇಂದಿನ ಸಂವಿಧಾನಗಳಲ್ಲಿ, ವಿದ್ವಾಂಸರಲ್ಲಿ, ವೈಚಾರಿಕ, ಪ್ರಜ್ಞೆಯುಳ್ಳವರಲ್ಲಿ, ಕಟ್ಟಿಕೊಂಡಿದೆ. ಜಾತಿ, ಮತ, ಪಂಥ, ಲಿಂಗಗಳ ಮಧ್ಯೆ ಆಳವಾಗಿ ಬಿರುಕು ಬಿಟ್ಟ ಅಸಮಾನತೆಯನ್ನು ಶರಣರು ಕಾಂಕ್ರೇಟ್ ಹಾಕಿ ಆ ಬಿರುಕನ್ನು ಮುಚ್ಚಿಬಿಟ್ಟರು. ಅವರ ಆ ಸಮಾನತೆ ಮನುಕುಲದ ಇತಿಹಾಸವನ್ನು ಬದಲಾಯಿಸಿತು. ಅದರಲ್ಲಿ ಲಿಂಗ ಸಮಾನತೆ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಜಗತ್ತಿನಲ್ಲಿಯೇ ಅತೀ ಶೋಷಣೆಗೆ ಒಳಪಟ್ಟವಳು ಹೆಣ್ಣು. ಮೇಲ್ವರ್ಗದಿಂದ ಹಿಡಿದು ಕೆಳ ಜಾತಿಯ ಜನರಲ್ಲಿ ಸ್ತ್ರೀ ಶೋಷಣೆಗೆ ಒಳಗಾಗಿದ್ದಾಳೆ. ಅಜ್ಞಾನಿ…

0 Comments

ಹರಳಯ್ಯ ಶರಣರು / ಡಾ. ನೀಲಾಂಬಿಕಾ ಪೊಲೀಸ ಪಾಟೀಲ, ಕಲಬುರಗಿ.

ಹರರೂಪಿ ಹರಳಯ್ಯ ಮತ್ತು ಅವರ ಮಡದಿ ಕಲ್ಯಾಣಮ್ಮನವರ ಬಲ ಮತು ಎಡತೊಡೆಯ ಚರ್ಮವು ತೆಗೆದು ಮಾಡಿದ್ದ ಚರ್ಮಾವುಗಳಿಗೆ ಪೃಥ್ವಿಯು ಸಮಬಾರದು ಎಂಬ ಬಸವಣ್ಣನವರ ವಚನದ ನುಡಿಗೆ ಸಾಕ್ಷಿಯಾಗಿದೆ. ಬಸವಣ್ಣ ಮತ್ತು ಶರಣರ ನಡುವೆ ಎಂತಹ ಸಂಬಂಧವಿತ್ತು ಎನ್ನುವುದಕ್ಕೆ ಈ ಚಮ್ಮಾವುಗೆಗಳು ಸಾಕ್ಷಿಯಾಗಿವೆ. ಸಮಾನತೆ ಕೇವಲ ಆಡುವ ನುಡಿಯಲ್ಲ ಅದಕ್ಕೆ ಶರಣರು ಬದ್ಧರಾಗಿದ್ದರು ಎನ್ನುವುದಕ್ಕೆ ಈ ಚಮ್ಮಾವುಗೆಗಳು ನಿದರ್ಶನವಾಗಿವೆ. ಅನುಭವ ಮಂಟಪದ ಮಹಾನುಭವಿಗಳು ಹರಳಯ್ಯ ಕಲ್ಯಾಣಮ್ಮ ಶರಣರು. ಕಲ್ಯಾಣ ಊರಾಗ ಅರ‍್ಹೆಂತ ಸತಿಪತಿನಿಲ್ಲದೆ ಚಪ್ಪಲಿ ತಾ ಹೊಲಿದು | ಮಾಡ್ಯಾರಮನಮುಟ್ಟಿ ಅವರು ದಾಸೋಹ ಅವರ ಕಾಯಕ ಚಪ್ಪಲಿ ಹೊಲಿಯುವದು…

2 Comments