ವಚನ ಸಾಹಿತ್ಯದಲ್ಲಿ ಕಾಯಕ ತತ್ವ / ಡಾ. ಮಲ್ಲಿಕಾರ್ಜುನ ಕೆ.

ವಚನ ಸಾಹಿತ್ಯದ ಕಾಲವು ಕನ್ನಡ ಸಾಹಿತ್ಯದ ಪರ್ವಕಾಲ, ಸುವರ್ಣಯುಗ ಕಾಲವೆಂದು ಕರೆಯಬಹುದು. ಹಾಗಾಗಿ ೧೨ನೇ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ. ವೇದಗಳ ಕಾಲದಿಂದಲೂ ಸಾಹಿತ್ಯ ಪಂಡಿತರ, ವಿದ್ವಾಂಸರ ಸ್ವತ್ತಾಗಿ, ಸಂಸ್ಕೃತ ಭೂಯಿಷ್ಠವಾಗಿದ್ದು, ಶ್ರೀಸಾಮಾನ್ಯರಿಗೆ ಇವರ ರಚನೆಗಳು ಅರ್ಥವಾಗುತ್ತಿರಲಿಲ್ಲ. ಶತ ಶತಮಾನಗಳಿಂದಲೂ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾಗ್ರಹವನ್ನು ಸರಿಪಡಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಯುಗದ ಶರಣೆಯರ ಅಮೋಘ ಕೊಡುಗೆಯನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲ ಘಟ್ಟದಲ್ಲಿ ಜಾತಿ-ಮತ, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ‘ಅನುಭವ ಮಂಟಪ'ದಲ್ಲಿ ಸೇರಿ ವಾದ-ಸಂವಾದ, ಚರ್ಚೆಗಳಲ್ಲಿ ಪಾಲ್ಗೊಂಡಿರುವುದನ್ನು ಕಾಣುತ್ತೇವೆ. ವಚನಕಾರ್ತಿಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕರಂತೆ…

1 Comment

ವಚನ ಸಾಹಿತ್ಯ ಹಾಗೂ ಪರಿಸರ ಪ್ರಜ್ಞೆ ಮತ್ತು UN’s Sustainable Goals of Environment

ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ.ನಾ ನೋಡುತಿಹ ಆಕಾಶದ ಚಂದ್ರ ಸೂರ್ಯರಭಕ್ತನ ಮಾಡಿದಲ್ಲದೆ ನಾ ನೋಡೆನಯ್ಯಾ.[ನಾನು ಬಳಸುವ] ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ.ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆಕೊಳ್ಳೆನು ಕೂಡಲಚನ್ನಸಂಗಾ ನಿಮ್ಮಾಣೆ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-305 / ವಚನ ಸಂಖ್ಯೆ-89) ಈ ಭೂಮಿ ರಚನೆಯಾಗಿದ್ದು “Big Bang Theory” ಯಿಂದ ಅಂತ ಭೌಗೋಳಿಕ ಮತ್ತು ಖಗೋಳ ಭೌತಶಾಸ್ತ್ರಜ್ಞದ ಎಲ್ಲ ವಿಜ್ಞಾನಿಗಳೂ ಖಚಿತವಾಗಿ ನಿರ್ಧಾರ ಮಾಡಿದ್ದಾರೆ. ಹಲವಾರು ವಿಜ್ಞಾನಿಗಳು ತಮ್ಮ ಪುಸ್ತಕಗಳಲ್ಲಿ ಈ ವಿಷಯವನ್ನು ಮಂಡಿಸಿದ್ದಾರೆ.  Stephen Hawking…

1 Comment

ಜನಪದ ಮತ್ತು ಲಿಂಗಾಯತ ಧರ್ಮ / ಡಾ. ನೀಲಾಂಬಿಕಾ ಪೊಲೀಸಪಾಟೀಲ

ಜನಪದ ಬೇರು ಉಳಿದಿದ್ದೆಲ್ಲ ನಾರು”‘ಧರ್ಮನೀತಿ ವಿಶ್ವಕೋಶ’ ದ (Encyclopedia of Religion & Ethics) ಸಂಪಾದಕರಾದ ಜೇಮ್ಸ್ ಹೆಸ್ಟಿಂಗ್‌ರ “ಇತಿಹಾಸವು ಒಂದು ರಾಜ್ಯದ ಅಥವಾ ರಾಷ್ಟ್ರೀಯ ಜೀವನದಲ್ಲಿ ದಾಖಲಾದರೆ, ಜನಪದ ಸಾಹಿತ್ಯವು ಪ್ರಾಗೈತಿಹಾಸಿಕ ಜೀವನದ ಪರಂಪರಾಗತ ಸಂಗತಿಯಾಗಿದೆ ಎನ್ನುತ್ತಾರೆ. ಮುಂದುವರಿದು ‘ಅವು ಕೇವಲ ಕಲ್ಪನಾತೀತವಲ್ಲ, ಜಾನಪದ ಕತೆಗಳು ಜನಾಂಗದ ಪುರಾಣಗಳು, ವಿಜ್ಞಾನ ಯುಗಕ್ಕೂ ಹಿಂದಿನ ವಿಜ್ಷಾನವು ಅದ್ಭುತಗಳ ಬಗ್ಗೆ ನೀಡಿದ ವಿವರಣೆಗಳೆ ಪುರಾಣಗಳು” ಎಂದು ಜನಪದ ಸಾಹಿತ್ಯದ ಮಹತ್ವ ತಿಳಿಸುತ್ತಾರೆ. ಒಂದು ಕಾಲದ ಘಟನೆಯನ್ನು ನಡೆದು ಹೋದ ಸಂಗತಿಯನ್ನು ತಿಳಿದುಕೊಳ್ಳಲು ಹೊರಟಾಗ ಇತಿಹಾಸ ಅನೇಕ ವಿಷಯಗಳು ಆಧಾರವಾಗುತ್ತವೆ.…

1 Comment

ಇತಿಹಾಸದ ಮಹಿಳೆ ಪುರಾಣವಾದ ಶಿವಶರಣೆ “ದಾನಮ್ಮನವರು”/ಡಾ. ಪುಷ್ಪಾ ಶಲವಡಿಮಠ.

ಭಾರತೀಯ ಮೂಲ ಸಂಸ್ಕೃತಿ ಮಾತೃ ಪ್ರಧಾನವಾದದ್ದು. ಕೃಷಿ ಪ್ರಾಧಾನ್ಯತೆಯನ್ನು ಕಾಯ್ದುಕೊಂಡು ಬಂದ ಮಹಿಳೆ ಪ್ರಕೃತಿಯ ಸಹಜತೆಗೆ ಪರ್ಯಾವಾಗಿದ್ದಳು. ಕಾಲದ ಗರ್ಭದಲ್ಲಿ ಮಾತೃ ಪ್ರಾಧಾನ್ಯತೆ ದೂರ ಸರಿದು, ಪುರಾಣದ ಪಳೆಯುಳಿಕೆಯಾಗಿ ಉಳಿದುಕೊಂಡಿದೆ. ಪುರಾಣ ವ್ಯಕ್ತಿಗಳಾಗಿ ಪ್ರಸಿದ್ಧಿ ಪಡೆದಿರುವ ರಾಮಾಯಣದ ಸೀತೆ ಮಣ್ಣನಿಂದ ಜನಿಸಿ ಮಣ್ಣಾದವಳು. ಎಂಥವರನ್ನೂ ಬೆತ್ತಲಗೊಳಿಸಿದ ರೇಣುಕ ಗುಡ್ಡದ ಎಲ್ಲಮ್ಮಳಾಗಿ ಎಲ್ಲೆ ಮೀರಿ ಅಮ್ಮನಾದಳು. ಇದೇ ರೀತಿ ಕರ್ನಾಟಕದಲ್ಲಿ ಮತ್ತು ಕರ್ನಾಟಕದ ಹೊರಗಡೆ ಶಕ್ತಿ ದೇವತೆ ಎಂದು ಪ್ರಸಿದ್ಧಳಾದ ಗುಡ್ಡಾಪುರದ ದಾನಮ್ಮದೇವಿ ಅಸಂಖ್ಯಾತ ಭಕ್ತ ಸಮೂಹದಿಂದ ಪೂಜೆಗೊಂಡು ಪುರಾಣದ ಕಥೆಯಾಗಿ ಉಳಿದುಕೊಂಡಿದ್ದಾಳೆ, ಆದರೆ, ದಾನಮ್ಮ ಒಬ್ಬ ಐತಿಹಾಸಿಕ…

2 Comments

“ಪರಮ ಪೂಜ್ಯ ಶ್ರೀತಿಂತಿಣಿ ಮೌನೇಶ್ವರರ ವಚನಗಳಲ್ಲಿ ಶರಣ ತತ್ವ”

ಪರಮ ಕಲ್ಯಾಣಿ ನಿನ್ನ ಅರುವಿನ ಒಡಲೊಳಗೆಪರಬ್ರಹ್ಮಮೂರ್ತಿ ಜನಿಸಿದ, ಅವರಿಬ್ಬರಶರೀರ ಬೇರೆ ಸವಿಯೊಂದೆ, ಬಸವಣ್ಣ.(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 161/ವ.ಸಂ. 374) ನನಗೆ ಬಸವ ತತ್ವ ಮತ್ತು ವಚನ ಸಾಹಿತ್ಯದ ಶಿವನ ಪ್ರಕಾಶವನ್ನು ತೋರಿಸಿದ್ದ ಶ್ರೀ ಗದಗ ತೋಂಟದಾರ್ಯ ಮಠದ ಲಿಂ. ಡಾ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ನನ್ನ ಎಲ್ಲ ವಿದೇಶ ಪ್ರವಾಸಗಳಿಗೂ ಬೆನ್ನು ತಟ್ಟಿ ಆಶೀರ್ವದಿಸಿದ್ದ ಸಿದ್ಧಗಂಗೆಯ ಸಿದ್ಧಪುರುಷ ಲಿಂ. ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪಾದಕಮಲಗಳನ್ನು ಮನ ಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ … … ವಚನ ಸಾಹಿತ್ಯ, ಸೃಜನಶೀಲ ಸಾಹಿತ್ಯ, ದಾಸ…

0 Comments

“ಅರಿವೇ ಗುರು – ಮನೋವೈಜ್ಞಾನಿಕ ಚಿಂತನೆ”

ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ,ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಾ,ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ,ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹುಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-29 / ವಚನ ಸಂಖ್ಯೆ-251) ನನಗೆ ಬಸವ ತತ್ವ ಮತ್ತು ವಚನ ಸಾಹಿತ್ಯದ ಶಿವನ ಪ್ರಕಾಶವನ್ನು ತೋರಿಸಿದ್ದ ಶ್ರೀ ಗದಗ ತೋಂಟದಾರ್ಯ ಮಠದ ಲಿಂ. ಡಾ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ನನ್ನ ಎಲ್ಲ ವಿದೇಶ ಪ್ರವಾಸಗಳಿಗೂ ಬೆನ್ನು ತಟ್ಟಿ ಆಶೀರ್ವದಿಸಿದ್ದ ಸಿದ್ಧಗಂಗೆಯ ಸಿದ್ಧಪುರುಷ ಲಿಂ. ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ…

0 Comments

“ಗಂಗೆಗೆ ಕಟ್ಟಿಲ್ಲ ಲಿಂಗಕ್ಕೆ ಮುಟ್ಟಿಲ್ಲ” / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೇ ಶತಮಾನ ಒಂದು ಪರ್ವ ಕಾಲ. ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಧಾರ್ಮಿಕ ಪ್ರವೃತ್ತಿಗಳ ಕಾಲಘಟ್ಟ. ಧಾರ್ಮಿಕ ಇತಿಹಾಸದಲ್ಲಿ ಬಸವಣ್ಣನವರ ಸ್ಥಾನ ವಿಶಿಷ್ಟವಾದದ್ದು. ಜಾತಿ ಸೂತಕಗಳ ಶಾಪಕ್ಕೆ ನರಳುತ್ತಿರುವ ದೇಶದಲ್ಲಿ 900 ವರ್ಷಗಳ ಹಿಂದೆಯೇ ಜಾತಿ ಸೂತಕಗಳ ನಿರ್ಮೂಲನೆ ಮಾಡಿದ ಮಹಾ ಮಾನವತಾವಾದಿ. ಅಂದು ವರ್ಗ ತಾರತಮ್ಯ, ಅಸಮಾನತೆ, ಲಿಂಗ, ಜಾತಿ ಭೇದ ಪಿಡುಗುಗಳ ವಿರುದ್ಧ ಹೋರಾಡಿದ ಶರಣರು, ವೈದಿಕ ಮತ್ತು ಜೈನ ಧರ್ಮಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಶರಣರು ಮಾತನಾಡುತ್ತಿರಲಿಲ್ಲ ಅವರ ನಡೆಯೇ ಮಾತಾಗಿತ್ತು. ಕೇವಲ ತತ್ವ ಸಿದ್ಧಾಂತಗಳಿಂದ ಬದಲಾವಣೆ ಅಸಾಧ್ಯವೆಂದು…

0 Comments

“ಸಮಷ್ಠೀ ಮಾನವ ಕುಲತಿಲಕ ಬಸವಣ್ಣ” / ಡಾ. ಕಮಲಾಬಾಯಿ ಎಸ್‌ ಕೆ, ಬೆಳಗಾವಿ.

ದೇವಲೋಕದವರಿಗೂ ಬಸವಣ್ಣನೆ ದೇವರುಮರ್ತ್ಯಲೋಕದವರಿಗೂ ಬಸವಣ್ಣನೆ ದೇವರುನಾಗಲೋಕದವರಿಗೂ ಬಸವಣ್ನನೆ ದೇವರು,ಮೇರುಗಿರಿ ಮಂದರಗಿರಿಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು,ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂನಿಮ್ಮ ಶರಣರಿಗೂ ಬಸವಣ್ಣನೆ ದೇವರು. ಎಂಬ ಅಕ್ಕನ ವಚನವು ಬಸವಣ್ಣನವರ ಘನ ಮಹಿಮೆಯನ್ನು ಸಾರುತ್ತದೆ. ʼವಚನಗಳುʼ ಶಿವಶರಣರು ಪ್ರಯೋಗಿಸಿದ ಆತ್ಮಸಾಕ್ಷಿಯ ನುಡಿಗಡಣಗಳು. ೧೨ನೇ ಶತಮಾನದ ಶರಣರು ನಡಿದಂತೆ ನುಡಿದರು; ನುಡಿದಂತೆ ನಡೆದ ಇವರ ಬದುಕಿನ ರೀತಿ ಅನನ್ಯ. ಅಂತೆಯೇ ೯೦೦ ವರ್ಷಗಳಾದರೂ ಅವರ ಪ್ರತಿಜ್ಞೆ- ಆತ್ಮ ಸಾಕ್ಷಿಯ ನುಡಿಗಡಣಗಳು ನಮ್ಮ ನಾಡಿನ ಕೀರ್ತಿ ಕಲಶಗಳಾಗಿ ಲೋಕಮಾನ್ಯಗೊಂಡಿವೆ. ಇದೆಲ್ಲದಕ್ಕೂ ಮುಖ್ಯ ರೂವಾರಿ ನಮ್ಮ ಸಾಂಸ್ಕೃತಿಕ ನಾಯಕ, ಮಹಾನ್‌ ಮಾನವತಾವಾದಿ, ವಿಶ್ವಗುರು, ಜಗಜ್ಯೋತಿ, ಅಣ್ಣ…

0 Comments

“ಬಸವಣ್ಣನವರ ವಚನಗಳಲ್ಲಿ ವ್ಯಕ್ತಿತ್ವ ವಿಕಾಸ”/ಡಾ. ಅಶೋಕ ನರೋಡೆ

ವಚನ ಸಾಹಿತ್ಯವು ಕನ್ನಡ ನಾಡಿನ ಪ್ರಪ್ರಥಮ ಪ್ರಜಾಸಾಹಿತ್ಯ. 12 ನೇ ಶತಮಾನದಲ್ಲಿ ಜರುಗಿದ ಸಮಾಜೋ-ಧಾರ್ಮಿಕ ಆಂದೋಲನವು ಯುಗದ ಧ್ವನಿ ಆಯಿತು. ಸಮಾಜದ ಸರ್ವಸ್ಥರಗಳಲ್ಲಿ ಬದಲಾವಣೆಗೆ ಕಾರಣವಾಯಿತು. ಹೊಸ ಸಮಾಜವನ್ನು ಕಟ್ಟಬಯಸಿದ ಶಿವಶರಣರು, ತಮ್ಮ ಸಾದನೆಗಾಗಿ ವಚನಗಳನ್ನು ಮಾಧ್ಯಮವಾಗಿ ಬಳಸಿಕೊಂಡರು. ವಚನ ರಚನೆ ಅವರ ಪ್ರಾಥಮಿಕ ಉದ್ದೇಶವಾಗಿರದೆ ಸಮಾಜ ಸುಧಾರಣೆ ಅವರ ಪ್ರಾಶಸ್ತ್ಯವಾಗಿತ್ತು. ವಚನವೆಂಬುದು ಚಳುವಳಿ ಸಾಹಿತ್ಯ ಪ್ರಕಾರವಾಗಿದೆ. ಆತ್ಮ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನು ಕಾರ್ಯಗೊಳಿಸಲು ಹೋರಾಡಿದ ಹುತಾತ್ಮರ ಸಾಹಸಗಾಥೆಯಾಗಿದೆ. ರಾಜಶಾಹಿ, ಪರೋಹಿತಶಾಹಿ, ಪುರುಷಶಾಹಿಗಳ ವಿರುದ್ಧ ಹೋರಾಡಿ ಸರ್ವ ಸಮಾನತೆ ಪ್ರತಿಪಾದಿಸುವ ಸಾಹಿತ್ಯ. ಸಮಾಜದ ಎಲ್ಲ ಸ್ಥರದ ಚಳುವಳಿಯಲ್ಲಿ…

0 Comments

“ಅಕ್ಷಯದ ಅಮರಜೀವಿ ಅನುಭಾವಿ ಬಸವಣ್ಣನವರು”/     ಡಾ.ದಾಕ್ಷಾಯಣಿ ಅಶೋಕ ಮಂಡಿ, ಮಹಾಲಿಂಗಪುರ.

ಸುಮಾರು 900 ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಶಿವಶರಣರ ಆಂದೋಲನವು ಕೇವಲ ಧಾರ್ಮಿಕ ಆಯಾಮಕಷ್ಟೇ ಸೀಮಿತವಾಗದೇ ಅಂದಿನ ಅನೇಕ ಪ್ರಚಲಿತ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿತು ಎನ್ನುವುದು ಗಮನಾರ್ಹ ಸಂಗತಿ. ಅಂದು ವಚನಕಾರರು ವರ್ಣ-ವರ್ಗ-ಲಿಂಗ ಬೇಧಗಳನ್ನು ಹೋಗಲಾಡಿಸಿ ದೀನ ದಲಿತರ ಬದುಕಿಗೆ ಆಶಾಕಿರಣವಾದರು. ನವ ಸಮಾಜವೊಂದನ್ನು ನಿರ್ಮಿಸಿದರು. ಆತ್ಮವಿಶ್ವಾಸ ಮೂಡಿಸುವ ದಿಸೆಯಲ್ಲಿ ಜನಮಾನಸದ ಸಂಗಾತಿಗಳಾಗಿ ಮಾರ್ಗದರ್ಶಕರಾದರು. ಅವರು ರಚಿಸಿದ ವಚನವಾಙ್ಮಯ ಕನ್ನಡ ಪರಂಪರೆಯ ಅಪೂರ್ವ ಸಾಹಿತಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಸಂಪತ್ತು.12 ನೇ ಶತಮಾನದ ಸಾಹಿತ್ಯದಲ್ಲಿ ಒಂದು ಸುವರ್ಣ ಅಧ್ಯಾಯ. ಸಾಮಾಜಿಕ ಬದಲಾವಣೆಗೆ ಕಾರಣರಾದ ಮಹಾಚೇತನನ ನಮ್ಮಕ್ರಾಂತಿ ಪುರುಷ…

0 Comments