ಅಲ್ಲಮರ ವಚನಗಳಲ್ಲಿ “ಲಿಂಗಾಚಾರ” / ಸುನಿತಾ ಮೂರಶಿಳ್ಳಿ, ಧಾರವಾಡ.

ಅನಾದಿ ಕಾಲದಿಂದಲೂ ಲಿಂಗವೆಂಬುದು ಮೂರ್ತರೂಪದಲ್ಲಿ ಸ್ಥಾವರಲಿಂಗವಾಗಿ ಚರಲಿಂಗವಾಗಿ ಪೂಜಿಸುತ್ತಾ ಬಂದಿದೆ. ಆದರೆ ಲಿಂಗವೆಂಬುದನ್ನು ಚೈತನ್ಯದ ಕುರುಹಾಗಿ ಸಮಷ್ಟಿಯ ಕುರುಹಾಗಿ ಇಷ್ಟಲಿಂಗವೆಂದು ಕರಸ್ಥಲಕ್ಕೆ ತಂದುಕೊಟ್ಟವರು ಬಸವಣ್ಣನವರು.  ಲಿಂಗವೇ ಬಸವ ಧರ್ಮದ ಬುನಾದಿ. ಸರ್ವಸಮಾನತೆಯ ಪಾತಳಿಯ ಮೇಲೆ ನಿಂತು ಎಲ್ಲ ಅಸಮಾನತೆಗಳನ್ನು ತೊಡೆದು ಹಾಕಿದ ಈ ಲಿಂಗದ ಪರಿಕಲ್ಪನೆ ವ್ಯಷ್ಟಿ ಹಾಗೂ ಸಮಷ್ಟಿಗಳ ವಿಕಾಸದ ಮಧ್ಯದ ಸೇತುವೆ ಆಗಿದೆ. ಅಂಗದಿಂದ ಲಿಂಗವಾಗುವ ಪಯಣವೇ ಬಯಲ ಪಯಣ, ಲಿಂಗ ಪಯಣ, ಸತ್ಯದ ಗಂತವ್ಯ. ವ್ಯಕ್ತಿಯ ಆತ್ಮೋನ್ನತಿಗಾಗಿ ತನ್ಮೂಲಕ ಜಗದ ಒಳಿತಿಗೆ ಹಾಕಿದ ನೈತಿಕ ಚೌಕಟ್ಟುಗಳೇ ಪಂಚಾಚಾರಗಳು. ಅದರಲ್ಲಿ ಲಿಂಗಾಚಾರವು ಸರ್ವಾಂಗೀಣ ಅಭಿವೃದ್ಧಿಯ…

0 Comments

ಶ್ರೀಮತಿ ರಾಜಶ್ರೀ ಥಳಂಗೆ, ಸೊಲ್ಲಾಪುರ.

 ಹನ್ನೆರಡನೇ ಶತಮಾನದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಕರ್ಮಭೂಮಿ ಸೊನ್ನಲಿಗೆ. ಬಹಳ ಪ್ರಾಚೀನ ಇತಿಹಾಸವಿರುವ ಈ ನಗರ ಯಾದವರ ಆಳ್ವಿಕೆಯವರೆಗೂ ಸೊನ್ನಲಿಗೆ, ಸೊನ್ನಲಾಪುರ, ಸಂದಲಾಪುರ ಎಂಬ ಹೆಸರಿನಿಂದ ಗುರುತಿಸಲಾಗುತ್ತಿತ್ತು. ಹದಿಮೂರನೇ ಶತಮಾನದ ಅಂತ್ಯಭಾಗದಲ್ಲಿ ಸೊಲ್ಲಾಪುರ ಹೆಸರನ್ನು ಪಡೆಯಿತು ಎಂದು ಶಿಲಾ ಶಾಸನಗಳಿಂದ ತಿಳಿದು ಬರುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತಲೂ ಮುಂಚೆ, ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸೊಲ್ಲಾಪುರದಲ್ಲಿ 06.04.1930 ರಲ್ಲಿ ನಗರಸಭೆಯ ಮೇಲೆ ಪ್ರಪ್ರಥಮ ಬಾರಿ ತ್ರಿವರ್ಣ ಧ್ವಜವನ್ನು ಹಾರಿಸಿದ ಕೀರ್ತಿ ಸೊಲ್ಲಾಪುರಕ್ಕೆ ಸಲ್ಲಬೇಕು. ತದನಂತರ ಧ್ವಜ ಹಾರಿಸಿದ ನಾಲ್ಕೂ ಜನರನ್ನು ನೇಣಿಗೇರಿದ್ದು ಇತಿಹಾಸ. ಅದಕ್ಕೆಂದೆ ಸೊಲ್ಲಾಪುರಕ್ಕೆ ಹುತಾತ್ಮ ನಗರವೆಂದೂ ಕರೆಯಲಾಗುತ್ತದೆ.…

2 Comments

ಡಾ. ವಿಲಾಸವತಿ ಖೂಬಾ,ಕಲಬುರ್ಗಿ.

ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಶ್ರೀ ಬಸಪ್ಪ ದಾನಪ್ಪ ಜತ್ತಿಯವರ ಹೆಸರು ಅಜರಾಮರ. ಬ್ರಿಟೀಷ್‌ ಕಾಲದ ಜಮಖಂಡಿ ರಾಜ್ಯದ ಮತ್ತು ಈಗಿನ ಬಾಗಲಕೋಟೆ ಜಿಲ್ಲೆಯ ಸಾವಳಗಿಯವರು ಶ್ರೀ ಬಸಪ್ಪ ದಾನಪ್ಪ ಜತ್ತಿಯವರು. ಭಾರತದ ೫ನೇ ಉಪರಾಷ್ಟ್ರಪತಿಯಾಗಿ, ಪ್ರಭಾರಿ ರಾಷ್ಟ್ರಪತಿಯಾಗಿ ಬೆಳೆದು ನಿಂತದ್ದು ಅಭೂತಪೂರ್ವ ಸಾಧನೆ. ಸರಳಾತಿ ಸರಳ ಮತ್ತು ಶಿಸ್ತಿನ ಸಾರ್ವಜನಿಕ ಜೀವನ ನಡೆಸಿದ ಶ್ರೀ ಜತ್ತಿಯವರು ಸಾಮಾಜಿಕ ಸಮಾನತೆ, ಮಹಿಳೆಯರ ಸಬಲೀಕರಣಕ್ಕೆ ಶ್ರಮವಹಿಸಿದ ಪ್ರಭುದ್ದ ಮತ್ತು ಮುತ್ಸದ್ದಿ ರಾಜಕಾರಣಿಗಳು. 12 ನೇ ಶತಮಾನದ ಬಸವಾದಿ ಶರಣರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿದ್ದ ಶ್ರೀ ಜತ್ತಿಯವರು ಶರಣರ ಉನ್ನತ…

0 Comments

“ವಚನಗಳು ವಿಜ್ಞಾನಿಗಳ ತತ್ವ ಪ್ರತಿಪಾದನೆಗಳ ಭವಿಷ್ಯವಾಣಿ”/ಗುರುಲಿಂಗಪ್ಪ ಸಜ್ಜನ,ಬೆಂಗಳೂರು

ಶರಣರ ವಚನಗಳು ವಿಜ್ಞಾನಿಗಳ ದ್ವಂದಗಳನ್ನು ನಿವಾರಿಸಬಹುದಾದ ಮಾರ್ಗದರ್ಶಕ ಸೂತ್ರಗಳು-6 ಅನಾದಿ ಮತ್ತು ಆದಿ - ಶಕ್ತಿಕ್ಷೇತ್ರಗಳು (Fields)  ಅಲ್ಲಮಪ್ರಭುದೇವರ ವಚನ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. `ಇಲ್ಲ' `ಇಲ್ಲ' ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು! ಕಡಕೋಳ ಮಡಿವಾಳಪ್ಪನವರ ವಚನಭಾಗ ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ,ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ,ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು,-------ಆ ಬಯಲಿಗೆ ಸಾವು ಇಲ್ಲವು.ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು.ಎಷ್ಟು ನಿಜ ತಿಳಿದರೇನೋ…

0 Comments

ಕರಗಿ ಮಾಡಲಿಬಲ್ಲ ಒರೆದು ನೋಡಲಿಬಲ್ಲ / ಮೌನೇಶ್ವರರ ವಚನ / ಡಾ. ವೀರೇಶ ಬಡಿಗೇರ, ಹಂಪಿ.

ಕರಗಿ ಮಾಡಲಿಬಲ್ಲ ಒರೆದು ನೋಡಲಿಬಲ್ಲಪರಿಪರಿಯ ವಸ್ತು ಒಡವೆ ದೇವರಾಭರಣಜಡಿದು ಮಾಡುವ ಗುಣಮಣಿ ಚಿಂತಾಮಣಿಧರೆಗಿಳಿದ ಚೆನ್ನಬಸವಣ್ಣ, ಬಸವಣ್ಣ.(ತಿಂತಿಣಿ ಮೌನೇಶ್ವರರ ವಚನಗಳು-2016 / ಡಾ. ವೀರೇಶ ಬಡಿಗೇರ / ಪುಟ ಸಂ. 7 / ವ. ಸಂ. 14) ಕಾಸಿ ನೋಡಲಿ ಬಲ್ಲ ಕೀಸಿ ನೋಡಲಿಬಲ್ಲ. ವಿಶ್ವಕರ್ಮರ ಕುಲಕಸುಬುಗಳು ಜ್ಞಾನ ಮತ್ತು ಕೌಶಲ್ಯದ ರೂಪಗಳು. ಲೋಹವನ್ನು ಕರಗಿಸುವ, ಅರಗಿಸುವ, ಒರೆದು ನೋಡುವ, ಬಡಿದು ಬಗ್ಗಿಸುವ ಮೂಲಕ ಹಲವು ಬಗೆಯ ವಸ್ತು ಒಡವೆ, ದೇವರ ಆಭರಣಗಳನ್ನು ಸೃಜಿಸುವ, ಆಕೃತಿಗೊಳಿಸುವ ಗುಣಮಣಿಗಳು. ಬೇಡಿದ್ದನ್ನು ಕೌಶಲ್ಯಯುತವಾಗಿ ಮಾಡಿ ಕೊಡುವ ಚಿಂತಾಮಣಿಗಳು. ಅಕ್ಕಸಾಲಿಯರ ಪ್ರತಿನಿಧಿಯಾದ ಮೌನಯ್ಯನವರು…

1 Comment

ಕಾಯಕಯೋಗಿ ನುಲಿಯ ಚಂದಯ್ಯ ಶರಣರು / ಶ್ರೀಮತಿ. ಸವಿತಾ ಮಾಟೂರ, ಇಳಕಲ್.

ಬಸವಾದಿ ಶರಣರು ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಸಮಾನತೆಯ, ಸ್ವಾಭಿಮಾನದ ಸಮಾಜವನ್ನು ಕಟ್ಟಬಯಸಿದರು. ಸಂಸ್ಕೃತಿ ಎಂದರೆ, “ಒಂದು ಜನ ಸಮುದಾಯದ ಜೀವನ ವಿಧಾನ”. ಆ ಸಂಸ್ಕೃತಿಗೆ  ವೈಚಾರಿಕತೆಯ ಸ್ಪರ್ಷಮಾಡಿ ವೈಜ್ಞಾನಿಕವಾಗಿ ಚಿಂತಿಸುವ, ಮೌಢ್ಯತೆ ಕಳೆದು, ಅರಿವನ್ನು ಮೂಡಿಸುವ, ಸದಾ ಹೊಸದನ್ನು ಅರಸುವ ಕ್ರಿಯಾಶೀಲ ಸಮಾಜದತ್ತ ಹೆಜ್ಜೆಹಾಕಿದರು. ಅನುಭಾವದ ಅರಿವನ್ನು ಮೈಗೂಡಿಸಿಕೊಳ್ಳುತ್ತ, ಮೌಢ್ಯದ ಮಾಯೆಯನ್ನು ಮರೆಮಾಡಿ, ಅಹಂಭಾವದ ಆತ್ಮಾವಲೋಕನ ಮಾಡಿಕೊಂಡರು. ಕಾಯಕಕ್ಕೆ ದೈವತ್ವವನ್ನು ತಂದು ಸ್ವಾಭಿಮಾನದ ಸಂಸ್ಕೃತಿಯನ್ನು ಬೆಳೆಸಿದರು. ಮಾನವೀಯ ಮೌಲ್ಯಗಳನ್ನು ಮೆರೆದು, ಸೋಹಂ ಅಳಿದು ದಾಸೋಹಕ್ಕೆ ಅಡಿ ಇಟ್ಟವರು ನಮ್ಮ ಶರಣರು. ಅಂತಹ ಶೇಷ್ಠ ಶಿವಶರಣರಲ್ಲಿ ನುಲಿಯ ಚಂದಯ್ಯ…

0 Comments

ಆ ಮಾತು ಈ ಮಾತು ಹೋ ಮಾತು / ಪ್ರೊ. ಜಿ ಎ. ತಿಗಡಿ, ಧಾರವಾಡ.

ಆ ಮಾತು, ಈ ಮಾತು, ಹೋ ಮಾತು- ಎಲ್ಲವೂ ನೆರೆದು ಹೋಯಿತ್ತಲ್ಲಾ.ಭಕ್ತಿ ನೀರಲ್ಲಿ ನೆರೆದು ಜಲವ ಕೂಡಿ ಹೋಯಿತ್ತಲ್ಲಾ.ಸಾವನ್ನಕ್ಕ [ಸರಸ] ಉಂಟೇ ಗುಹೇಶ್ವರಾ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-149 / ವಚನ ಸಂಖ್ಯೆ-133) ಲೌಕಿಕ ಜನರ ನಾಲಿಗೆಯ ಚಪಲದ ಮಾತುಗಳನ್ನು ಕುರಿತು ಅಲ್ಲಮರು ಈ ವಚನದಲ್ಲಿ ತುಂಬಾ ಮಾರ್ಮಿಕವಾಗಿ ವಿವರಿಸಿದ್ದಾರೆ. ಸಾಂಸಾರಿಕ ಜೀವನದಲ್ಲಾಗಲಿ ಪಾರಮಾರ್ಥಿಕ ಕ್ಷೇತ್ರದಲ್ಲಾಗಲಿ ಅನೇಕ ಜನ ಪುಂಖಾನು ಪುಂಖವಾಗಿ ಮಾತನಾಡುವುದನ್ನು ನೋಡುತ್ತೇವೆ. ನಿತ್ಯ ಜೀವನದಲ್ಲಿ ಆಡುವ ಕೆಲ ಮಾತುಗಳಿಂದ ಆಗುವ ಅನಾಹುತಗಳನ್ನೂ ಕಂಡಿದ್ದೇವೆ, ಕಾಣುತ್ತಲೇ ಇದ್ದೇವೆ. ಕಾರ್ಯಸಾಧನೆ, ಮುಖಸ್ತುತಿ, ನಿಂದನೆ, ಹೊಟ್ಟೆಕಿಚ್ಚು,…

1 Comment

ಉಭಯ ಭ್ರಷ್ಟ ಲಜ್ಜೆಗೇಡಿಗಳಿಗೊಂದು ಹೆಸರು ಕೊಡಿ./ಡಾ. ಬಸವರಾಜ ಸಾದರ, ಬೆಂಗಳೂರು.

     ಕಣ್ಣು ನೋಡಲು, ಕಿವಿ ಕೇಳಲು, ಮೂಗು ವಾಸಿಸಲು, ಬಾಯಿ ರುಚಿ ನೋಡಲು ಮತ್ತು ಚರ್ಮ ಸ್ಪರ್ಶಿಸಲು-ಹೀಗೆ ಮನುಷ್ಯನ ಪಂಚೇಂದ್ರಿಯಗಳು, ತಮಗೆ ಅವಕಾಶವಿರುವ ಮಾರ್ಗಗಳ ಮೂಲಕ ತಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸದಾ ಪಹಪಿಸುತ್ತಿರುತ್ತವೆ ಮತ್ತು ಹವಣಿಸುತ್ತಿರುತ್ತವೆ. ಮನಸ್ಸೆಂಬ ಮಹಾನಿಯಂತ್ರಕಶಕ್ತಿಯು ಪಂಚೇಂದ್ರಿಯಗಳ ಮೂಲಕವೇ ತನ್ನ ಸಕಾರಾತ್ಮಕ ಮತ್ತು ನಕಾರಾತ್ಮಕ, ಎರಡೂ ಬಗೆಯ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳುತ್ತದೆ. ಮನುಷ್ಯನ ಭಾವಕೋಶದೊಂದಿಗೆ ಬಿಡಿಸಿಕೊಳ್ಳಲಾರದಂತೆ ಬೆಸೆದುಕೊಂಡಿರುವ ಈ ಮನಸ್ಸು ಮತ್ತು ಪಂಚೇಂದ್ರಿಯಗಳ ಬೇಡಿಕೆಗಳನ್ನು ನಿರಾಕರಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಈ ಕಾರಣಕ್ಕಾಗಿಯೇ ಮನುಷ್ಯ ಅವುಗಳ ಬೇಡಿಕೆಗಳನ್ನು ಈಡೇರಿಸಲು ಒಳ್ಳೆಯ ಕೆಲಸಗಳಂತೆಯೇ ಕೆಟ್ಟ ಕೆಲಸಗಳನ್ನೂ ಮಾಡುತ್ತಾನೆ.…

1 Comment

ಅಕ್ಕನ ವಚನಗಳಲ್ಲಿ ಗುರು/ ಶ್ರೀಮತಿ.ಸುಧಾ ಗಂಜಿ,ಹುಬ್ಬಳ್ಳಿ

'ಅಕ್ಕ' ಕನ್ನಡ ನಾಡಿನ ಮೊದಲ ಕವಿಯತ್ರಿ. ವಿಶ್ವದ ಶ್ರೇಷ್ಠ ದಾರ್ಶನಿಕಳು. 'ಅಕ್ಕ' ಎನ್ನುವ ಪದವೆ ಗೌರವ ಸೂಚಕ. ಅಕ್ಕನ ಅನುಭಾವದೆತ್ತರದ ಆಳವನ್ನು ಅರಿಯಲು, ಬಸವಣ್ಣನವರು, ಅಲ್ಲಮ ಪ್ರಭುಗಳು, ಚೆನ್ನಬಸವಣ್ಣನಂತವರಿಗೆ ಮಾತ್ರ ‌ಸಾಧ್ಯ. ಹುಟ್ಟಿದೆನು ಶ್ರೀ ಗುರುವಿನ ಹಸ್ತದಲ್ಲಿ ಎಂದು ಆರಂಭಿಸುವ ಅಕ್ಕ, ಸಂಸಾರ ನಿಸ್ಸಾರವೆಂದು ತೋರಿದನೆನಗೆ ಗುರು. ಅಂಗ ವಿಕಾರದ ಸಂಗವನಿಲಿಸಿ, ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು. ಹಿಂದಣ ಜನ್ಮವ ತೊಡೆದು ಮುಂದಣ ಪಥವನ್ನು ತೋರಿದನೆನ್ನ ತಂದೆ! ಚೆನ್ನ ಮಲ್ಲಿಕಾರ್ಜುನ ನಿಜವನರುಹಿದನೆನ್ನ ಗುರು ಎಂದು ನೆನೆದಿದ್ದಾಳೆ. ನಿತ್ಯವೆನ್ನ ಮನೆಗೆ ನಡೆದು ಬಂದಿತ್ತು, ಮುಕ್ತಿ ಎನ್ನ ಮನೆಗೆ…

0 Comments

ತೆಲುಗು ಸಾಹಿತ್ಯದಲ್ಲಿ ಬಸವಣ್ಣ / ಡಾ. ಜಾಜಿ ದೇವೇಂದ್ರಪ್ಪ, ಗಂಗಾವತಿ.

ಭಾರತದಲ್ಲಿ ಶೈವಧರ್ಮ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವ್ಯಾಪಿಸಿದೆ. ದಕ್ಷಿಣ ಭಾರತದಲ್ಲಿ ಶೈವದ ಪ್ರಸಾರ ಹಲವು ಕಾರಣಗಳಿಂದ ವೈಶಿಷ್ಠ್ಯತೆಯತೆಯನ್ನು ಪಡೆದುಕೊಂಡಿದೆ. ಅದರಲ್ಲಿಯೂ ಆಂಧ್ರಪ್ರದೇಶ ಬಹು ಮುಖ್ಯವಾದುದು. ಆಂಧ್ರವನ್ನು ಶೈವಧರ್ಮದ ನೆಲೆವೀಡು, ತ್ರಿಲಿಂಗದೇಶ ಎನ್ನುತ್ತಾರೆ. ದ್ರಾಕ್ಷಾರಾಮ, ಶ್ರೀಶೈಲ ಮತ್ತು ಶ್ರೀ ಕಾಳಾಹಸ್ತಿಗಳಲ್ಲಿರುವ ಮೂರು ಲಿಂಗಗಳ ಕಾರಣವಾಗಿ ತ್ರಿಲಿಂಗ ದೇಶವಾಗಿದೆ. ‘ತೆಲುಗು’ ಎಂಬ ಪರಿಭಾಷೆಯೂ ತ್ರಿಲಿಂಗದಿಂದಲೇ ಬಂದಿದೆ. ತ್ರಿಲಿಂಗವೇ ತೆಲುಂಗು, ತೆಲುಗು ಆಗಿದೆ. ಆಂಧ್ರಪ್ರದೇಶವನ್ನಾಳಿದ ರಾಜರು ಹೆಚ್ಚು ಶೈವರೇ ಆಗಿದ್ದಾರೆ. ಕ್ರಿ.ಶ. ಎರಡನೇ ಶತಮಾನದಿಂದ ೭ನೇ ಶತಮಾನದವರೆಗೆ ಇಕ್ಷ್ವಾಕಃ ಸಾಲಂಕಾಯನ, ವಿಷ್ಣುಕುಂಡಿನ; ಪಲ್ಲವರು ಆಳಿದ್ದಾರೆ. ಇವರ ವಂಶಸ್ಥರಿಗೆ ‘ಪರಮ ಮಹೇಶ್ವರ’ ಎಂಬ ಬಿರುದುಗಳಿವೆ.…

0 Comments