ವಚನ ಸಾಹಿತ್ಯದಲ್ಲಿ ಆರೋಗ್ಯ / ಡಾ ಸುರೇಶ ಸಗರದ, ರಾಯಚೂರು.

ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅನಾರೋಗ್ಯದ ಸಮಯದಲ್ಲಿ ಮಾತ್ರ ನಾವು ಆರೋಗ್ಯದ ಕುರಿತು ಚಿಂತಿಸುತ್ತೇವೆ. ಅನಾರೋಗ್ಯದಿಂದ ಗುಣಮುಖರಾಗುತ್ತಿದ್ದಂತೆ ಮತ್ತೇ ಆ ಕುರಿತು ಚಿಂತಿಸುವುದಿಲ್ಲ. ಇತ್ತೀಚಿನ ಜೀವನಶೈಲಿ, ಅನೇಕ ಅಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಕ್ಯಾನ್ಸರ್ ನಿಂದ ಬಳಲುವವರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗುತ್ತಿದೆ. ಇದು ಮಧ್ಯ ವಯಸ್ಸಿನವರಲ್ಲಿ ಮತ್ತು ಯುವಕರಲ್ಲಿಯೂ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯ. ಈ ಆತಂಕಕಾರಿ ಬೆಳವಣಿಗೆಯನ್ನು ತಡೆಗಟ್ಟಲು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಜೊತೆ ಜಾಗೃತಿ ಮೂಡಿಸಲು,…

0 Comments

ಬಸವಣ್ಣನವರ ವಚನ “ಆಯುಷ್ಯವುಂಟು, ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ” / ಪ್ರೊ. ಜಿ. ಎ. ತಿಗಡಿ.

ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ;ಆಯುಷ್ಯ ತೀರಿ ಪ್ರಳಯವು ಬಂದಡೆ ಆ ಅರ್ಥವನುಂಬುವರಿಲ್ಲಾ.ನೆಲನನಗೆದು ಮಡುಗದಿರಾ, ನೆಲ ನುಂಗಿದೊಡುಗುಳುವುದೆ?ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ!ನಿನ್ನ ಮಡದಿಗಿರಲೆಂದಡೆ, ಮಡದಿಯ ಕೃತಕ ಬೇರೆ;ನಿನ್ನ ಒಡಲು ಕೆಡೆಯಲು ಮತ್ತೊಬ್ಬನಲ್ಲಿಗೆ ಅಡಕೆದೆ ಮಾಣ್ಬಳೆ?ಹೆರರಿಗಿಕ್ಕಿ ಹೆಗ್ಗುರಿಯಾಗಬೇಡಾ,ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-26 / ವಚನ ಸಂಖ್ಯೆ-201) ನನಗೆ ಸಾಕಷ್ಟು ಆಯುಷ್ಯವಿದೆ, ಜಗತ್ತಿನ ಪ್ರಳಯವೆಂಬುದು ಸುಳ್ಳು ಎಂದು ಭಾವಿಸಿ, ಸಂಪತ್ತನ್ನು ಬಚ್ಚಿಡುವಿರಿ. ಆದರೆ ನಿಮ್ಮ ಆಯುಷ್ಯ ಮುಗಿದು ತೀರಿದ ಮೇಲೆ ಪ್ರಳಯವಾದರೆ ನೀವು ಮುಚ್ಚಿಟ್ಟ ಆ ಸಂಪತ್ತನ್ನು ಅನುಭೋಗಿಸುವವರೇ ಇಲ್ಲವಾಗುತ್ತದೆ.…

3 Comments

ವಿಚಾರಪತ್ನಿಯರಾದ ಶಿವಶರಣೆಯರು / ಡಾ. ರಾಜೇಶ್ವರಿ ಶೀಲವಂತ, ಬೀಳಗಿ.

ಪಾರಂಪರಿಕ ಸಮಾಜ ವ್ಯವಸ್ಥೆಯು ಆಚರಣೆ, ಸಂಪ್ರದಾಯ, ಪದ್ಧತಿಗಳ ಹೆಸರಿನಲ್ಲಿ ಶತ ಶತಮಾನಗಳಿಂದ ಪುರುಷ ಪ್ರಧಾನ ಸಮಾಜದಿಂದ ಮಹಿಳೆ ಶೋಷಣೆಗೆ ಒಳಗಾಗುತ್ತಲೆ ಬಂದಿದ್ದಳು. ಮಹಿಳೆಯರನ್ನು ಆ ಶೋಷಣೆಗಳಿಂದ ಮುಕ್ತಗೊಳಿಸಿ, ಅವರನ್ನು ಗೌರವಿಸಿ, ಅವಳಿಗೆ ಸಮಾಜದಲ್ಲಿ ಪುರುಷರಿಗೆ ಸಮಾನವಾದ ಸ್ಥಾನಮಾನ ಕಲ್ಪಿಸಿ, ಅವರ ವಿಚಾರಗಳಿಗೆ ಮನ್ನಣೆಯನ್ನಿತ್ತು, ಅವರನ್ನು ಮನುಷ್ಯರಂತೆ ಕಂಡದ್ದು ಶರಣ ಪರಂಪರೆ. ಶರಣರು ಮಹಿಳೆಯರಿಗೆ ಸಮಾಜದ ಹಲವಾರು ಕ್ಷೇತ್ರಗಳಲ್ಲಿ ದುಡಿಯುವ ಅವಕಾಶವನ್ನು ನೀಡಿ ಅವರು ಸ್ವಾವಲಂಬಿ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟರು. ಜಗತ್ತಿನಲ್ಲಿ ಪ್ರಪ್ರಥಮವಾಗಿ ಮಹಿಳೆಯರಿಗೆ ಆಯ್ಕೆ ಸ್ವಾತಂತ್ರ್ಯ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಿದರು. ಶರಣರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ…

0 Comments

ಪ್ರಾಣಲಿಂಗ ಸ್ಥಲ – ಪ್ರಾಣಲಿಂಗಕ್ಕೆ ಕಾಯವೆ ಸಜ್ಜೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಷಟ್ ಸ್ಥಲಗಳಲ್ಲಿ ನಾಲ್ಕನೆಯ ಸ್ಥಲವಾದ ಪ್ರಾಣಲಿಂಗಸ್ಥಲ ಶರಣ ಧರ್ಮವನ್ನು ಬಿಂಬಿಸುವ ವಿಶಿಷ್ಟ ಸ್ಥಲವಾಗಿದೆ. ಪ್ರಾಚೀನ ಅದ್ವೈತ ಧರ್ಮದಲ್ಲಿ ಶಂಕರಾಚಾರ್ಯರು ಹೇಳುವ “ಅಹಂ ಬ್ರಹ್ಮಾಸ್ಮಿ” ತತ್ವಕ್ಕೆ ಈ ಸ್ಥಲವನ್ನು ಹೋಲಿಸಬಹುದು. ಶರಣರು ಹೇಳುವ ಪ್ರಾಣಲಿಂಗಿ ಸ್ಥಲವು ಪ್ರಾಣವನ್ನು ಲಿಂಗವನ್ನಾಗಿಸಿ ಕೊಳ್ಳುವ ಪ್ರಕ್ರಿಯೆ ಎಂಬುದು ಗಮನಾರ್ಹ. ಅಲ್ಲಮಪ್ರಭು ಹೇಳುವಂತೆ ಲಿಂಗ ಸಾಧಕರೆಲ್ಲಾ ಭೂ ಬಾಧಕರಾದರು. ಅಂದರೆ ಅಂಗವು ಲಿಂಗವಾಗಿ ದೂರವುಳಿದರೆ ಸಮಾಜಕ್ಕೆ ಪ್ರಯೋಜನವೇನು? ಅದು ಮುಂದುವರಿದು ಸಮಾಜದ ಜಂಗಮದಲ್ಲಿ ಒಂದಾಗಬೇಕು ಏಕವಾಗಬೇಕು. ಅರವಿಂದ ಘೋಷರು ಅಂಗವನ್ನು ಲಿಂಗವಾಗಿಸಿ ಕೊಂಡಿದ್ದರು. ಗಾಂಧೀಜಿಯವರು ಮುಂದುವರಿದು ಸಮಾಜಮುಖಿಯಾಗಿ ವಿಶಾಲವಾಗಿಸಿದರು. ಬಸವಣ್ಣನವರು ಹೇಳಿದಂತೆ ಅರವಿಂದ ಘೋಷರಾಗುವುದಲ್ಲ.…

0 Comments

ಚುಟುಕು ಸಾಹಿತ್ಯ, ಲ್ಯಾಕೋನಿಕ್‌ ಮಾಧ್ಯಮ ಮತ್ತು ವಚನಗಳು

ಪ್ರಥಮ ಶೂನ್ಯ ಸಿಂಹಾಸನ ಪೀಠಾಧಿಪತಿ ಅಲ್ಲಮ ಪ್ರಭುದೇವರು ಕನ್ನಡ ಸಾಹಿತ್ಯಕ್ಕೆ ಸುಮಾರು 2000 ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಹಾಗಾಗಿ ಇದು ಅತ್ಯಂತ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಸಂಸ್ಕೃತಿ ಇರುವ ಸಾಹಿತ್ಯ. ಕನ್ನಡ ಸಾಹಿತ್ಯ ಎನ್ನುವ ನದಿಯು ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡದ ಜೊತೆಗೆ ನವೋದಯ ಕನ್ನಡ ಎನ್ನುವ ವಿವಿಧ ಉಪನದಿಗಳನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳುತ್ತಾ ಹರಿಯುತ್ತಾ ವಿಶಾಲವಾಗಿ ಸಾಗುತ್ತಾ ಸಮುದ್ರವನ್ನು ಸೇರುತ್ತದೆ. ಇತ್ತೀಚಿನ ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಹನಿಗವನಗಳು, ಹಾಯ್ಕುಗಳು, ರುಬಾಯಿ, ಮುಕ್ತಕಗಳು, ಇನಿಗವನಗಳು, ಶಾಯರಿಗಳು, ಟಂಕಾಗಳು ಮತ್ತಿತರೇ ಸಾಹಿತ್ಯ ಪ್ರಾಕಾರಗಳ ಜೊತೆಗೆ ಚುಟುಕು…

0 Comments

ಅಂತರಗದ ಆತ್ಮಗುಣಕ್ಕುಂಟೆ ಅಂಗವೈಕಲ್ಯ? / ಡಾ. ಬಸವರಾಜ ಸಾದರ, ಬೆಂಗಳೂರು.

ನಾಡಿನ ಶ್ರೇಷ್ಠ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿ ಅವರು ಒಂದು ವಿಚಾರ ಸಂಕಿರಣದಲ್ಲಿ, “ವಚನಕಾರರ ಚಿಂತನೆಗಳ ಸಾರ್ವಕಾಲಿಕ ಪ್ರಸ್ತುತತೆ” ಎಂಬ ವಿಷಯ ಕುರಿತು ಮಾತನಾಡಿ, ತಮ್ಮ ಮಾತುಗಳ ಕೊನೆಯಲ್ಲಿ ‘ವರ್ತಮಾನದ ಜಗತ್ತಿನ ನಮ್ಮ ಎಲ್ಲ ಸಮಸ್ಯೆಗಳಿಗೂ ವಚನ ಸಾಹಿತ್ಯದಲ್ಲಿ ಪರಿಹಾರವಿದೆ’ ಎಂದು ಹೇಳಿ ಇನ್ನೇನು ವಿರಮಿಸಲು ಹೊರಟಿದ್ದರು. ಅಷ್ಟರಲ್ಲೇ ಸಭಿಕರಲ್ಲಿ ಒಬ್ಬರು ಎದ್ದು ನಿಂತು, ‘ಸರ್ ಒಂದು ಪ್ರಶ್ನೆ ಕೇಳಬುಹುದೆ?’ ಎಂದಾಗ, ‘ಹಾಂ, ಕೇಳಿ, ಕೇಳಿ’ ಎಂದಿದ್ದರು ಅವರು. ಸರ್, ನೀವು ಹೇಳಿದಂತೆ, ವಚನ ಸಾಹಿತ್ಯದಲ್ಲಿ ಜಗತ್ತಿನ ಏನೆಲ್ಲ ಸಮಸ್ಯೆಗಳಿಗೆ ಪರಿಹಾರವಿರಬಹುದು. ಆದರೆ ನಮ್ಮಂಥ ಅಂಗವಿಕಲರ…

4 Comments

ಅಷ್ಟಾವರಣಗಳಲ್ಲಿ ಪ್ರಸಾದ‌ / ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಅಷ್ಟಾವರಣಗಳು ಅಂಗವಾದರೆ, ಪಂಚಾಚಾರಗಳು ಪ್ರಾಣ, ಷಟ್ ಸ್ಥಲಗಳು ಆತ್ಮ. ಇವು ಮೂರೂ ಶರಣ ಧರ್ಮದ ಬೆನ್ನೆಲಬುಗಳು. ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳನ್ನು ಅಂತರಂಗದ ಅರಿವಿನ ಪ್ರಜ್ಞೆಗಳು ಎಂದು ಭಾವಿಸಲಾಗಿದೆ. ಅಷ್ಟಾವರಣಗಳು ಮಾಯೆಯ ಬಾಹ್ಯ ಗೊಂದಲಗಳು ಮತ್ತು ಪ್ರಭಾವಗಳಿಂದ ಭಕ್ತನನ್ನು ರಕ್ಷಿಸುವ ಗುರಾಣಿಗಳು ಅಥವಾ ಹೊದಿಕೆಗಳಾಗಿ ಕಾರ್ಯ ನಿರ್ವಹಿಸುವ 8 ಸದ್ಗುಣಗಳು. ಗುರು, ಲಿಂಗ, ಜಂಗಮ, ಭಸ್ಮ, ರುದ್ರಾಕ್ಷ, ಮಂತ್ರ, ಪ್ರಸಾದ, ಪಾದೊದಕ ಇವು ಅಷ್ಟಾವರಣಗಳು. ಮೊದಲ ಮೂರು ಪೂಜ್ಯವಾದವುಗಳು, ನಂತರದ ಮೂರು ಪೂಜಾ ಸಾಧನಗಳು, ಕೊನೆಯ ಎರಡು ಪೂಜಾ ಪರಿಣಾಮಗಳು. ಬಸವಣ್ಣನವರಿಗಿಂತಲೂ ಹಿಂದೆಯೂ ನಮ್ಮ ನಾಡಿನಲ್ಲಿ ಗುರು ಲಿಂಗ…

0 Comments

ಒಕ್ಕಲಿಗ ಮುದ್ದಣ್ಣನವರ “ದೊಡ್ಡವೆರಡು ಕಂಬದ ಮಧ್ಯದಲ್ಲಿ”ವಚನ ವಿಶ್ಲೇಷಣೆ

ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ,ಇಂತೀ ನಾಲ್ಕರ ಮಧ್ಯದ ಮನೆಗೆಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ,ಮಾಂಸದ ಗೋಡೆ, ಚರ್ಮದ ಹೊದಿಕೆ,ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದುಚಿತ್ರದ ಮನೆ ನೋಡಯ್ಯ.ಆ ಮನೆಗೊಂಬತ್ತು ಬಾಗಿಲು,ಇಡಾ ಪಿಂಗಳವೆಂಬ ಗಾಳಿಯ ಬಾದಳ,ಮೃದು ಕಠಿಣವೆಂಬೆರಡು ಅಗುಳಿಯ ಭೇದ ನೋಡಾ,ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಟ್ಟಿ,ದಿವಾರಾತ್ರಿಯೆಂಬ ಅರುಹು ಮರೆಹಿನಉಭಯವ ಕದಕಿತ್ತು ನೋಡಯ್ಯಾ.ಮನೆ ನಷ್ಟವಾಗಿ ಹೋದಡೆಯೂಮನೆಯೊಡೆಯ ಮರಳಿ ಮತ್ತೊಂದು ಮನೆಗೆಬಪ್ಪುದು ತಪ್ಪದು ನೋಡಯ್ಯಾ.ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ,ಕಾಮಭೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1167 / ವಚನ ಸಂಖ್ಯೆ-1731) ಈ…

4 Comments