ಸಿದ್ಧರಾಮೇಶ್ವರರ ವಚನಗಳಲ್ಲಿ ಸದಾಚಾರ/ಶಿವಶರಣಪ್ಪ ಮದ್ದೂರ್,ಬೆಂಗಳೂರು

ಬಸವ ಪೂರ್ವದಲ್ಲಿ ಕೇವಲ ಜ್ಞಾನಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡಲಾಗಿತ್ತು. ಜ್ಞಾನ ಮತ್ತು ಕ್ರಿಯೆ ಎರಡಕ್ಕೂ ಸಮಾನ ಪ್ರಾಮುಖ್ಯತೆ ಬಂದದ್ದು ಬಸವಣ್ಣವರಿಂದ. ಏನಯ್ಯಾ ವಿಪ್ರರು ನುಡಿದಂತೆ ನಡೆಯರು ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವ ನೆಂತೊಲಿವನನಯ್ಯ ಎಂದು ನುಡಿ(ಜ್ಞಾನ) ಮತ್ತು ನಡೆ (ಕ್ರಿಯೆ) ಎರಡಕ್ಕೂ ಸಮತ್ವವನ್ನು ತಂದು ಕೊಟ್ಟರು. ಜ್ಞಾನವು ಸತ್ಯದ ಅರಿವಾದರೆ ಕ್ರಿಯೆಯು ಸದಾಚಾರ (ಸತ್ಯದ-ಆಚಾರ) ವಾಯಿತು. ಜ್ಞಾನವೇ ಕ್ರಿಯೆ, ಕ್ರಿಯೆಯೇ ಜ್ಞಾನ ಎನ್ನುವಷ್ಟರ ಮಟ್ಟಿಗೆ ಸಮನ್ವಯವಾಯಿತು. ಅಲ್ಲಮರೊಂದಿಗೆ ಕಲ್ಯಾಣಕ್ಕೆ ಬಂದ ಸೊನ್ನಲಿಗೆ ಸಿದ್ಧರಾಮರು, ಅರಿವು ಮತ್ತು ಆಚಾರದ ಸಮನ್ವಯತೆಯ ಮಹತ್ವವನ್ನು ಕಂಡು ಸದಾಚಾರಿಗಳಾದರು.…

0 Comments

ಕಡಕೋಳ ಮಡಿವಾಳಪ್ಪ ಮತ್ತು ಇತರೆ ಸಾಹಿತ್ಯ ಪಥಗಳು / ಶ್ರೀ. ಮಲ್ಲಿಕಾರ್ಜುನ ಕಡಕೋಳ, ದಾವಣಗೆರೆ.

ಮಾಡಿ ಉಣ್ಣೋ ಬೇಕಾದಷ್ಟು/ಬೇಡಿ ಉಣ್ಣೋ ನೀಡಿದಷ್ಟುಮಾಡಿದವಗ ಮಡಿಗಡಬ/ಮಾಡದವಗ ಬರೀಲಡಬ// ಇವು ಕಡಕೋಳ ಮಡಿವಾಳಪ್ಪನವರ ತತ್ವಪದವೊಂದರ ಆಯ್ದ ಸಾಲುಗಳು. ಈ   ಇಡೀ ತತ್ವಪದ ಬಸವಣ್ಣನ ಕಾಯಕ ಮತ್ತು ದಾಸೋಹ ಸಂಕಲ್ಪ ಪ್ರಜ್ಞೆಗಳನ್ನು ಏಕಕಾಲಕ್ಕೆ ಸಂವೇದಿಸುತ್ತದೆ. ಅದರೊಂದಿಗೆ ಉಲ್ಲೇಖಿಸಲೇ ಬೇಕಿರುವ ಮತ್ತೊಂದು ಎಚ್ಚರವೆಂದರೆ ದುಡಿಯುವ ಮತ್ತು ದುಡಿದುದಕ್ಕೆ ಹಕ್ಕಿನಿಂದ ಪಡೆದುಣ್ಣುವ ಕಾರ್ಲ್ ಮಾರ್ಕ್ಸ್ ಶ್ರಮಸಂಸ್ಕೃತಿಯ ವಿಚಾರ ಧಾರೆಗಳನ್ನು, ಕಾರ್ಲ್ ಮಾರ್ಕ್ಸ್ ಕಾಲದ ಪೂರ್ವದಲ್ಲೇ ಈ ತತ್ವಪದ ಹೇಳುತ್ತದೆ.  ಎಲ್ಲೋ ಹುಡುಕಿದೆ ಇಲ್ಲದ ದೇವರ,ಕಲ್ಲು ಮಣ್ಣುಗಳ ಗುಡಿಯೊಳಗೆ. ಇದು ನಮ್ಮ ಕಾಲದ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರ ಕವಿತೆ.…

0 Comments

ಶರಣ ಸಗರದ ಬೊಮ್ಮಣ್ಣನವರ ವಚನ ವಿಶ್ಲೇಷಣೆ / ಡಾ. ಪ್ರದೀಪಕುಮಾರ ಹೆಬ್ರಿ, ಮಂಡ್ಯ.

ಕಂಗಳ ಸೂತಕ ಹೋಯಿತ್ತು, ನಿಮ್ಮಂಗದ ದರ್ಶನದಿಂದ.ಮನದ ಸೂತಕ ಹೋಯಿತ್ತು. ನಿಮ್ಮ ನೆನಹು ವೇಧಿಸಿ,ಸಕಲಸೋಂಕಿನ ಭ್ರಾಂತು ಬಿಟ್ಟಿತ್ತು, ನಿಮ್ಮ ಹಿಂಗದ ಅರಿಕೆಯಲ್ಲಿ,ಇಂತೀ ನಾನಾವಿಧದ ಭೇದೋಪಭೇದಂಗಳೆಲ್ಲವು,ನಿಮ್ಮ ಕಾರುಣ್ಯದಲ್ಲಿಯೆ ಲಯ,ಸಗರದಬೊಮ್ಮನೊಡೆಯ ತನುಮನ ಸಂಗಮೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1676 / ವಚನ ಸಂಖ್ಯೆ-520) ಇದು ಸಗರದ ಬೊಮ್ಮಣ್ಣ ನವರ ವಚನ. ಇವರು ಯಾದಗಿರಿ ಜಿಲ್ಲೆಯ “ಸಗರ” ಗ್ರಾಮದವರು. ಇವರ ಪತ್ನಿ ಶಿವದೇವಿ. ಶಿವನಿಲ್ಲದೆ ಅನ್ಯ ದೈವವಿಲ್ಲವೆಂಬ ವೀರ ನಿಷ್ಠೆಯವರಿವರು, “ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರ” ವಚನಾಂಕಿತದಿಂದ ಬರೆದ 92 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ಇವರ ಪ್ರಸ್ತುತ ಈ ವಚನದಲ್ಲಿ…

0 Comments

ಅನುಭಾವದ ಆಡುಂಬೋಲ ಗೂಗಲ್ಲು / ಡಾ. ಶಶಿಕಾಂತ ಕಾಡ್ಲೂರ, ಲಿಂಗಸೂಗೂರ.

ಈ ಜಗತ್ತು ಪ್ರಾಕೃತಿಕವಾಗಿ ಅಂದರೆ ಭೌಗೋಳಿಕವಾಗಿ ಮತ್ತು ಬುದ್ಧಿವಂತ ಪ್ರಾಣಿ ಎನಿಸಿದ ಮನುಷ್ಯನ ವಿಶೇಷ ಅರಿವಿನ ಕಾರಣವಾಗಿ ಬಹಳಷ್ಟು ಕುತೂಹಲಕಾರಿಯಾದ ಮತ್ತು ವಿಶೇಷವಾದ ಸಂಗತಿಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ಹಾಗಾಗಿ ಇದು ನಮ್ಮಂಥವರನ್ನು ನಿರಂತರವಾಗಿ, ನಾನಾ ಕಾರಣವಾಗಿ ತನ್ನೆಡೆಗೆ ಸೆಳೆಯುತ್ತ ಹೊಸಹೊಸ ಸಂಗತಿಗಳನ್ನು ಬಿಚ್ಚಿಕೊಳ್ಳುತ್ತಾ ಲೋಕದ ಬದುಕಿಗೆ ವಿಶೇಷತೆಯನ್ನು, ಹೊಸತನವನ್ನು ಹಾಗೂ ಚೈತನ್ಯವನ್ನು ತುಂಬುತ್ತಲೇ ಇರುತ್ತದೆ. ಹೀಗಾಗಿ ನಾವು ನಿಂತುಕೊಂಡ ಮತ್ತು ನಮ್ಮ ಸುತ್ತಲಿನ ನೆಲವನ್ನು ಆಗಾಗ ಬಗೆ ಬಗೆಯ ದೃಷ್ಟಿಯಿಂದ ಗಮನಿಸುತ್ತಲೇ ಇರಬೇಕೆನಿಸುತ್ತದೆ. ಈ ಕಾರಣಕ್ಕಾಗಿಯೇ ನನಗೆ ನಮ್ಮ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವಿಶೇಷ ನೆಲೆಯಾದ…

0 Comments

ಹಡಪದ ಅಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮನವರ ವಚನ ವಿಶ್ಲೇಷಣೆ / ಪ್ರೊ. ಜಿ. ಎ.ತಿಗಡಿ, ಧಾರವಾಡ.

ಮನವ ಗೆದ್ದೆಹೆನೆಂದು, ತನುವ ಕರಗಿಸಿ ಕಾಯವ ಮರುಗಿಸಿ,ನಿದ್ರೆಯ ಕೆಡಿಸಿ ವಿದ್ಯೆಯ ಕಲಿತೆಹೆನೆಂಬಬುದ್ಧಿಹೀನರಿರಾ ನೀವು ಕೇಳಿರೋ,ನಮ್ಮ ಶರಣರು ಮನವನೆಂತು ಗೆದ್ದಹರೆಂದಡೆಕಾಮ ಕ್ರೋಧವ ನೀಗಿ,ಲೋಭ ಮೋಹ ಮದ ಮತ್ಸರವ ಛೇದಿಸಿ,ಆಸೆ ರೋಷವಳಿದು, ಜಗದ ಪಾಶವ ಬಿಟ್ಟು,ಆ ಮರುಗಿಸುವ ಕಾಯವನೆಪ್ರಸಾದಕಾಯವ ಮಾಡಿ ಸಲಹಿದರು.ಕೆಡಿಸುವ ನಿದ್ರೆಯನೆ ಯೋಗಸಮಾಧಿಯ ಮಾಡಿ,ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತ ಬಲ್ಲರೊಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-917 / ವಚನ ಸಂಖ್ಯೆ-1242) ದೇಹವನ್ನು ದಂಡಿಸಿ ಮರುಗಿಸಿ, ನಿದ್ರಾಹೀನರಾಗಿ, ವಿದ್ಯೆ ಕಲಿತು ಮನವನ್ನು ಗೆದ್ದನೆಂಬ ಬುದ್ಧಿಹೀನರೇ, ನೀವು ಕೇಳಿರೋ! ಶರಣರು ಮನವ ಗೆಲುವ ರೀತಿಯನ್ನು. ಕಾಮ…

0 Comments

ವಚನಗಳು ಮತ್ತು ವ್ಯಕ್ತಿತ್ವ ವಿಕಸನ / ಸಿದ್ದು ಯಾಪಲಪರವಿ, ಕಾರಟಗಿ, ಕೊಪ್ಪಳ ಜಿಲ್ಲೆ.

ಮನುಷ್ಯನ ಮನಸ್ಸಿನ ಮೇಲೆ ಸಾವಿರಾರು ವರ್ಷಗಳಿಂದ ಅಧ್ಯಯನ ಸಾಗಿಯೇ ಇದೆ. ಆದರೆ ಇನ್ನೂ ನೆಲೆ ನಿಂತಿಲ್ಲ, ನಿಲ್ಲುವುದೂ ಇಲ್ಲ. ಆರು ಸಾವಿರ ವರ್ಷಗಳ ಹಿಂದೆ ಬೋಧಿಸಲಾದ ಕೃಷ್ಣನ ಭಗವದ್ಗೀತಾ, ಬುದ್ಧನ ವಿಪಸನ, ಆಯುರ್ವೇದ ಶಾಸ್ತ್ರದ ಕಾಯ ಚಿಕಿತ್ಸಾ ಮತ್ತು ಬಸವಾದಿ ಶರಣರ ವಚನಗಳು ಆಲೋಚನಾ ಕ್ರಮವನ್ನು ಮುಂದುವರೆಸಿಕೊಂಡು ಸಾಗಿವೆ. ಆಧುನಿಕ ಮನೋವಿಜ್ಞಾನ ವಿದೇಶಗಳಲ್ಲಿ ತನ್ನ ಮನೋ ಸಂಶೋಧನೆಯನ್ನು ಮಾಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಶರಣರು ಅನುಭವ ಮಂಟಪದ ಮೂಲಕ ಬದುಕಿನ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಮನೋವೈಜ್ಞಾನಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಚರ್ಚೆ ಮಾಡಿ,…

0 Comments

ಸರ್ವವೂ ಗುಹೇಶ್ವರನ ಮಾಯೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

12 ನೆ ಶತಮಾನವು ವಚನ ಸಾಹಿತ್ಯ ರಚನೆಯಲ್ಲಿ ಒಂದು ಪ್ರಗತಿ ಪರವಾದ‌ ಕಾಲಘಟ್ಟ. ಸಾಮಾಜಿಕ ಸುಧಾರಣೆಯ ಸಂದರ್ಭದಲ್ಲಿ ರಚನೆಯಾದ ಶರಣ ಸಾಹಿತ್ಯ ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪ್ರಕಟವಾದವು. ಅಂದು ಎಲ್ಲಾ ವರ್ಗದ ಸ್ತ್ರೀಯರು ಸಾಹಿತ್ಯ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಪ್ರಮುಖವಾದ ಘಟ್ಟ. ಸ್ತ್ರೀ ಪುರುಷ ಎಂಬ ಭೇದವನನ್ನು ಅಳಸಿ ಹಾಕಲು ಪ್ರಯತ್ನಿಸಲಾಯುತು. ಸ್ತ್ರೀಯರಿಗೆ ಆತ್ಮ ವಿಶ್ವಾಸ ಸಮಾನತೆಯನ್ನು ಅಭಿವ್ಯಕ್ತಿಯ ಅವಕಾಶವನ್ನು ಒದಗಿಸಿದ್ದು ಇದೇ ಕಾಲದಲ್ಲಿ. "ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ" ಎಂಬ ಸ್ಪಷ್ಟತೆ ಹೆಣ್ಣನ್ನು ಕಂಡ ಬಗೆಯನ್ನು ಜೇಡರ ದಾಸಿಮಯ್ಯನವರು ಭಾವನಾತ್ಮವಾಗಿ…

0 Comments

ಆದಯ್ಯನವರ ವಚನಗಳಲ್ಲಿ ಭೃತ್ಯಾಚಾರ/ಶ್ರೀಮತಿ. ಸವಿತಾ ಮಾಟೂರ,ಇಳಕಲ್ಲ.

ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪನವರ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವಾ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಕವಿ ವಾಣಿಯಂತೆ ಕಲ್ಲು ಮಣ್ಣುಗಳ ಗುಡಿಯಲ್ಲಿಯೆ ಇನ್ನು ದೇವರನ್ನು ಹುಡುಕಿತ್ತಿದ್ದೆವೆ. “ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ ನಾಲಗೆಗೆ” ಶರಣರು ಸಾರಿದ ಅಂತರಂಗ ಶುದ್ಧಿಯಾದರೆ ನಿಜವಾದ ಅಮೃತದ ಸವಿಯನ್ನು ಸವಿಯಬಹುದು.  ಶರಣರು ಜಗದೊಳಗೆ ಅನುಶೃತಗೊಂಡ ಅಘಟಿತ ಚರಿತರು. ವಚನದ ಅಮೃತದ ಸಾರವನ್ನು ನಮಗೆಲ್ಲ ಧಾರೆ ಎರೆದವರು. ಆ ವಚನಾಮೃತದ ಸಾಗರದಲ್ಲಿ ಮುಳುಗಿ ಮಿಂದಾಗಲೆ ನಮಗೆ ಅದರ ಆಳ ಅಗಲದ ಅನುಭವವಾಗುವದು.…

0 Comments

ಆರೋಗ್ಯಕ್ಕೆ ವಚನಾಮೃತ / ಡಾ. ಸಿ. ಆರ್.‌ ಚಂದ್ರಶೇಖರ, ಬೆಂಗಳೂರು.

ಪ್ರಸಕ್ತ ಸಮಾಜದಲ್ಲಿ ನಮ್ಮ ಬದುಕು ಸಂಕೀರ್ಣ ಮತ್ತು ಸಂಕಷ್ಟಮಯವಾಗುತ್ತಿದೆ. ಭೋಗ ಭಾಗ್ಯಗಳ “ಕಂಸ್ಯೂಮರ್”‌ ಜಗತ್ತಿನಲ್ಲಿ ʼಹಣ-ವಸ್ತು-ರಂಜನೆʼಯಿಂದಲೆ ಸುಖ-ಸಂತೋಷವೆಂಬ ಸೂತ್ರ ನಮ್ಮನ್ನು ಬಂಧಿಸಿದೆ. Marks-Materials-Money ಈ ಮೂರೂ ʼಎಂʼಗಳೂ ಬಾಲ್ಯದಿಂದ ಮುಪ್ಪಿನವರೆಗೆ ನಮ್ಮನ್ನು ಕಾಡುತ್ತಿವೆ. ಶಾಲಾ-ಕಾಲೇಜು ವಿದ್ಯಾಭ್ಯಾಸದಲ್ಲಿ Marks (ಅಂಕಗಳು) ನಂತರ ಹಣ ಸಂಪಾದನೆ-ಬೇರೆಯವರಿಗಿಂತ ಹೆಚ್ಚಾಗಿ ನಮಗೇ ಸಿಗಬೇಕು. ಹಾಗೆಯೇ ಐಷಾರಾಮಿ ವಸ್ತುಗಳು (Materials) ಎಷ್ಟಿದ್ದರೂ ಸಾಲದು. ಮನೆಯೊಳಗಿನ ಸ್ನೇಹ ಸಂಬಂಧಗಳು ಮನೆಯ ಹೊರಗಿನ ಸ್ನೇಹ ಸಂಬಂಧಗಳು ಶಿಥಿಲವಾಗುತ್ತಿವೆ. ಯಾರಿಗೆ ಯಾರೋ ಎರವಿನ ಸಂಸಾರ. ನಾನು ಕಂಡ ಹಲವಾರು ಕುಟುಂಬಗಳಲ್ಲಿ ಗಂಡನಿಗೆ ಹೆಂಡತಿಯ ಆಸರೆ ಇಲ್ಲ. ಹೆಂಡತಿಗೆ ಗಂಡನ…

1 Comment

ಅಲ್ಲಮಪ್ರಭುದೇವರ ವಚನ ವಿಶ್ಲೇಷಣೆ / ಶ್ರೀ ಅಳಗುಂಡಿ ಅಂದಾನಯ್ಯ, ಬೆಳಗಾವಿ.

ಕೆಂಡದ ಗಿರಿಯ ಮೇಲೊಂದು,ಅರಗಿನ ಕಂಬವಿದ್ದಿತ್ತು ನೋಡಯ್ಯಾ.ಅರಗಿನ ಕಂಬದ ಮೇಲೆ ಹಂಸೆಯಿದ್ದಿತ್ತು.ಕಂಭ ಬೆಂದಿತ್ತು ಹಂಸೆ ಹಾರಿತ್ತು ಕೆಂಡ ಎತ್ತಲಡಗಿತ್ತು ಗುಹೇಶ್ವರಾ.(ಸಮಗ್ರ ವಚನ ಸಂಪುಟ-2 / 2021 / ಪುಟ. 186 / ವಚನ ಸಂಖ್ಯೆ. 605) ಅಲ್ಲಮಪ್ರಭುಗಳ ಬೆಡಗಿನ ನುಡಿಗಳ ಈ ವಚನವನ್ನು ಮೊದಲಿಗೆ ಸಹಜವಾಗಿ ಓದಿದಾಗ, ಅಲ್ಲಿ ಬಳಸಿರುವ ರೂಪಕದ ಭಾಷೆಯಲ್ಲಿರುವಂಥಾ ಆ ದೃಷ್ಟಾಂತದ ಪದಗಳು; ಸರ್ವೇ ಸಾಮಾನ್ಯವಾದ ಮತ್ತು ಸಿದ್ಧಮಾದರಿಯ ಹಾಗೂ ಜನಜನಿತವಾದ ಅರ್ಥವನ್ನು ನೀಡುತ್ತವೆ. ಅದುದರಿಂದ ಪ್ರತಿ ಸಾಲುಗಳು ನೀಡುವ ಚಿತ್ರಣವನ್ನು ಸುಲಭವಾಗಿ ಗ್ರಹಿಸಿಕೊಂಡು ರೂಪವಾದಂಥ ಒಂದು ಅರ್ಥವನ್ನಿಲ್ಲಿ ಸಹಜವಾಗಿ ಹೇಳಿ ಬಿಡಬಹುದೆಂದು ಖರೆ…

0 Comments