ಶರಣ ಮಾದಾರ ಧೂಳಯ್ಯನವರ ವಚನ ವಿಶ್ಲೇಷಣೆ | ಡಾ. ಶಿವಲೀಲಾ ಬಸವರಾಜ, ಕಾಳಗಿ.

12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನೆಲೆಸಿದ್ದ 770 ಅಮರಗಣಂಗಳಲ್ಲಿ ಮಾದಾರ ಧೂಳಯ್ಯನವರು ಒಬ್ಬರಾಗಿದ್ದಾರೆ. ಇವರು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿನ ಜೀವನದ ಸ್ಪಷ್ಟವಾದ ಮಾಹಿತಿ ದೊರೆತಿರುವುದಿಲ್ಲ. ಸುಪ್ರಸಿದ್ಧ ಕವಿಗಳಾದ ಹರಿಹರ, ಭೀಮಕವಿ, ಸಿದ್ಧನಂಜೇಶ, ಷಡಕ್ಷರದೇವ ಮುಂತಾದವರು. ಮಾದಾರ ಧೂಳಯ್ಯನವರು ಒಬ್ಬ ಮಹಾನ ಕಾಯಕ ಶರಣ ಜೀವಿ ಎಂಬುದನ್ನು ಉಲ್ಲೇಖಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಇವರ ಅಂಗೋದರದ ಮಹಾತ್ಮೆಯನ್ನು ಪ್ರಾಸಂಗಿಕವಾಗಿ ಒತ್ತಿ ಹೇಳಿದ್ದಾರೆ. ತ. ಸು. ಶಾಮರಾಯರ ಶಿವಶರಣರ ಕಥಾರತ್ನಕೋಶದಲ್ಲಿ ಮಾದಾರ ಧೂಳಯ್ಯನವರ ಜೀವನದ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಶರಣ ಧೂಳಯ್ಯನವರು ಪ್ರಾಂಜಲ ಮನಸ್ಸಿನ ಸತ್ಯ, ಶುದ್ಧ ಕಾಯಕಜೀವಿ. ಚಪ್ಪಲಿ ಹೊಲೆಯುವ ಕಾಯಕವನ್ನು…

0 Comments

ಬಸವಣ್ಣನವರ ವಚನಗಳಲ್ಲಿ ಭಾಷೆ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

 ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೇ ಶತಮಾನದ ಸೃಜನ ಅನುಭಾವದ ಭಾಷೆಯಾಗಿ ನಮ್ಮನ್ನು ಆಕರ್ಷಿಸುತ್ತದೆ. ಸಂಸ್ಕೃತ ಭಾಷೆಯ ಭೂಯಿಷ್ಟತೆಯನ್ನು ನಿರಾಕರಿಸಿ ಸರಳ ಸುಲಲಿತ ಹೊಸಗನ್ನಡಕ್ಕೆ ಸಮೀಪವಾಗುವ ದೇಸಿ ಅಧ್ಯಾತ್ಮದ ಪಡೆ ನುಡಿಗಳಾಗಿ ಪ್ರತಿಕ್ರಿಸುಯಿಸುತ್ತವೆ. ಅಕ್ಷರ ಸಂಸ್ಕೃತಿಯನ್ನು  ಅಸ್ತ್ರವಾಗಿಸಿಕೊಂಡದ್ದೇ ಒಂದು ರೋಮಾಂಚನ. ಆಸ್ಥಾನದ ಪಂಡಿತರಿಗೆ ಭಾಷೆಯ ಮೂಲಕ ಕ್ರಾಂತಿಯನ್ನು ಸೃಷ್ಟಿಸಿ ಪ್ರತ್ಯುತ್ತರ ನೀಡಿದವರು ವಚನಕಾರರು. ಆಡು ನುಡಿಯ ದೇಸಿ ಭಾಷೆ ಎಂದರೆ ಮೈಲಿಗೆಯಾಗಿ ಕಂಡಂತಹ ಆ ಕಾಲಘಟ್ಟದಲ್ಲಿ  ಬಸವಣ್ಣನವರ ನಾಯಕತ್ವತ್ವದಲ್ಲಿ ಹಲವಾರು ಶರಣರು ವಚನಗಳನ್ನು ರಚಿಸಿ ಯಶಸ್ವಿಯಾದರು.  12ನೇ ಶತಮಾನದ ಅನುಭಾವಿ ಕವಿ ದಾರ್ಶನಿಕ ಶಿಕ್ಷಣ ತಜ್ಞರೆಂದೇ ಚಿರಪರಿಚಿತ ನಮಗೆ. ಬಸವಣ್ಣನವರ ಭಾಷಾ ಸೌಂದರ್ಯವನ್ನು ಚರ್ಚೆಗೆತ್ತಿಕೊಳ್ಳುವುದು ಸವಾಲಿನ ಕೆಲಸ. ಅವರ ವಚನಗಳ ಪ್ರವೇಶ…

0 Comments

ಕಾಯಕಯೋಗಿ ನುಲಿಯ ಚಂದಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಅವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ.ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದುಅದೇತರ ಪೂಜೆ?ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ,ಮಡಿವಾಳಯ್ಯಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-450/ವಚನ ಸಂಖ್ಯೆ-1285) “ಕಾಯಕವೇ ಶಿವಸಾಧನೆ, ದುಡಿಮೆಯೇ ದಾಸೋಹ” ಎಂಬ ತತ್ವವನ್ನು ತಮ್ಮ ಜೀವನ ಮತ್ತು ವಚನಗಳ ಮೂಲಕ ಬದುಕಿದ ಶ್ರೇಷ್ಠ ಶಿವಶರಣರು ನುಲಿಯ ಚಂದಯ್ಯನವರು. ನುಲಿಯ ಚಂದಯ್ಯ ಅವರು ಬಸವಣ್ಣನವರ ಹಿರಿಯ ಸಮಕಾಲೀನ ಶರಣರಲ್ಲಿ ಒಬ್ಬರು. ಕ್ರಿ. ಶ. 1107 ರ ಸುಮಾರಿಗೆ ಇಂದಿನ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಶಿವಣಗಿ ಗ್ರಾಮದಲ್ಲಿ ಜನಿಸಿದರು. ಅವರು ಹಗ್ಗ ಹೊಸೆಯುವ ಕಾಯಕದಲ್ಲಿ ತೊಡಗಿದ್ದ ಕೊರವ (ನುಲಿ) ಸಮುದಾಯಕ್ಕೆ…

0 Comments

ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಗುರುವೆಂಬೆನೆ ಹಲಬರ ಮಗ,ಲಿಂಗವೆಂಬೆನೆ ಕಲುಕುಟಿಕನ ಮಗ,ಪ್ರಸಾದವೆಂಬೆನೆ ಒಕ್ಕಲಿಗನ ಮಗ,ಪಾದೋದಕವೆಂಬೆನೆ ದೇವೇಂದ್ರನ ಮಗ,ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ,ತನ್ನೊಳಗ ನೋಡೆಂದನಂಬಿಗ ಚೌಡಯ್ಯ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-55/ವಚನ ಸಂಖ್ಯೆ-137) ದೋಣಿಯಿಂದ ನದಿಯನ್ನು ದಾಟಿಸಿದ ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಅಜ್ಞಾನ ಮತ್ತು ಅಂಧಶ್ರದ್ಧೆಯ ಸಾಗರದಿಂದ ಜನರನ್ನು ದಾಟಿಸಲು ಪ್ರಯತ್ನಿಸಿದ ಮಹಾನ್ ಶಿವಶರಣರು. ಶರಣ ಅಂಬಿಗರ ಚೌಡಯ್ಯನವರು 12 ನೇ ಶತಮಾನದ ಪ್ರಮುಖ ಶಿವಶರಣರು ಹಾಗೂ ವಚನಕಾರರು. ಮೈಲಾರ ಶಾಸನದ ಪ್ರಕಾರ ಮತ್ತು ಶಿಶುನಾಳ ಶರೀಫರು ಬರೆದಂಥ “ಶಿವದೇವ ವಿಜಯಂ” ಎಂಬ ಗ್ರಂಥದಲ್ಲಿ ಉಲ್ಲೇಖವಾದಂತೆ…

0 Comments

ಶರಣ ಗುಪ್ತ ಮಂಚಣ್ಣನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ ದೇವರಿಗೆಅಳಿವು ಉಳಿವಲ್ಲದೆ,ಉಳಿಗೆ ಹೊರಗಾದ ಅಳಿಯದವನನರಿಯಾ,ನಾರಾಯಣಪ್ರಿಯ ರಾಮನಾಥ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-119/ವಚನ ಸಂಖ್ಯೆ-298) ಶರಣ ಗುಪ್ತ ಮಂಚಣ್ಣನವರು 12 ನೇ ಶತಮಾನದ ಪ್ರಮುಖ ಶಿವಶರಣರು ಮತ್ತು ವಚನಕಾರರು. ಇವರು ಬಸವಣ್ಣನವರ ಚಿಂತನೆಗಳನ್ನು ಅನುಸರಿಸಿದರೂ ತಮ್ಮನ್ನು ಬಹಿರಂಗವಾಗಿ ಮುಂದಿರಿಸದೆ, ಸರಳ ಮತ್ತು ನೇರವಾದ ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಇವರು ಬಿಜ್ಜಳ ರಾಜನ ಕೋಶಾಗಾರದಲ್ಲಿ ಕರಣಿಕ (ಲೆಕ್ಕಿಗ) ಆಗಿ ಕೆಲಸ ಮಾಡುತ್ತಿದ್ದರು. ಇವರು “ನಾರಾಯಣಪ್ರಿಯ ರಾಮನಾಥ” ವಚನಾಂಕಿತದಿಂದ ಬರೆದ ಸುಮಾರು 100 ವಚನಗಳು ಇಲ್ಲಿಯವರೆಗೆ ಲಭ್ಯವಿವೆ. "ದೇವರ ಭಕ್ತಿ ಬಾಹ್ಯ ಆಡಂಬರದಲ್ಲಲ್ಲ;…

0 Comments

ಶಿವಶರಣ ಬಾಲಸಂಗಣ್ಣನವರ ವಚನ ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ.ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ.ಸುಖವನನುಭವಿಸುವವು ಇಂದ್ರಿಯಂಗಳಲ್ಲ.ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದುಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದುಬೇರೋ, ಮರನೋ? ಮೀರಿ ಬೆಳೆದ ಫಲವೋ?ಎಂಬುದನರಿದು ತಿಳಿದಲ್ಲಿ,ಅರಿದರುಹಿಸಿಕೊಂಬ ನಿರಿಗೆಯ ಬಲ್ಲ,ಆತ ಕಮಠೇಶ್ವರಲಿಂಗವನೊಡಗೂಡಿದ ಶರಣ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-109/ವಚನ ಸಂಖ್ಯೆ-245) ಶರಣ ಬಾಲಸಂಗಣ್ಣನವರು 12 ನೇ ಶತಮಾನದ ಒಬ್ಬ ಶರಣ ವಚನಕಾರ. ಇವರ ಬಗ್ಗೆ ಸಂಪೂರ್ಣ ಮತ್ತು ಖಚಿತವಾದ ಮಾಹಿತಿಗಳು ದೊರೆಯದಿದ್ದರೂ ಕೆಲವು ಪುರಾಣಗಳು, ಕಾವ್ಯಗಳು ಮತ್ತು ವಚನಗಳ ಆಧಾರದ ಮೇಲೆ ತಿಳಿದುಬರುವ ಸಂಗತಿಗಳೆಂದರೆ, ಬಾಲಸಂಗಣ್ಣನವರನ್ನು ಬಾಲಸಂಗಯ್ಯ ಎಂದೂ ಕರೆಯಲಾಗುತ್ತಿತ್ತು. ಕೆಲವು ಪ್ರಾಚೀನ ಗ್ರಂಥಗಳು ಇವರನ್ನು…

0 Comments

ಆತ್ಮಾನುಭೂತಿಯೇ ಅರಿವು, ಅನುಭಾವವೇ ಗುರು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಅಂಗದ ಮೇಲೆ ಲಿಂಗ,ಲಿಂಗದ ಮೇಲೆ ಅಂಗವಿದೇನೊ?ಮನದ ಮೇಲೆ ಅರಿವು,ಅರಿವಿನ ಮೇಲೆ ಕುರುಹು ಇದೇನೊ?ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು,“ನೀ” “ನಾ” ಎಂಬುದಕ್ಕೆ ತೆರಹಿಲ್ಲ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-103/ವಚನ ಸಂಖ್ಯೆ-310) ಈ ವಚನದಲ್ಲಿ ವ್ಯೋಮಕಾಯ ಅಲ್ಲಮ ಪ್ರಭುಗಳು ದೇಹದ (ಅಂಗ) ಮೇಲೆ ಲಿಂಗವಿದೆಯೋ ಅಥವಾ ಲಿಂಗದ ಮೇಲೆ ದೇಹವಿದೆಯೋ ಎಂದು ಪ್ರಶ್ನಿಸುವ ಮೂಲಕ ಇವೆರಡನ್ನು ಬೇರ್ಪಡಿಸಿ ನೋಡುವುದು ಸರಿಯಲ್ಲ ಎಂಬ ಸಂದೇಶವನ್ನು ನೀಡುತ್ತಾರೆ. ಭಕ್ತನ ದೇಹ ಮತ್ತು ಅವನು ಆರಾಧಿಸುವ ಲಿಂಗ ಎರಡೂ ಒಂದೇ ಪರಮ ತತ್ತ್ವದ ಅಭಿವ್ಯಕ್ತಿಗಳಾಗಿವೆ. ಅದೇ ರೀತಿ, ಮನಸ್ಸಿನ ಮೇಲೆ ಅರಿವಿದೆಯೋ ಅಥವಾ…

0 Comments

ಶರಣ ಅಜಗಣ್ಣ ತಂದೆಗಳ ವಚನ  ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ;ಅಂತರಂಗದಲ್ಲಿ ಆಯತವನರಿದವಂಗೆ,ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯಾ.ಅಂತರಂಗದಲ್ಲಿ ಅನುಮಿಷನಾಗಿನಿರಂತರ ಲಿಂಗಸುಖಿ ನೋಡಯ್ಯಾ.ಸರ್ವೇಂದ್ರಿಯ ಸಮ್ಮತವಾಯಿತ್ತುಮಹಾಘನ ಸೋಮೇಶ್ವರ ಮುಂತಾಗಿ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-295) ನಿರ್ವಚನ;ಅಜಗಣ್ಣ ತಂದೆಯವರ ವಚನಗಳು ತತ್ವಜ್ಞಾನ, ಜ್ಞಾನಮಾರ್ಗ ಮತ್ತು ಆರೂಢ ಸ್ಥಿತಿಯನ್ನು ಬಿಂಬಿಸುತ್ತವೆ. ಇಷ್ಟಲಿಂಗ ಪೂಜೆ, ಸದ್ಭಕ್ತಿ ಮತ್ತು ಕಾಯಕದ ಮಹತ್ವವನ್ನು ಇವರ ವಚನಗಳಲ್ಲಿ ಕಾಣಬಹುದು. ತನ್ನ ಅಂತರಂಗದ ಸತ್ಯವನ್ನು, ಆತ್ಮಸ್ವರೂಪವನ್ನು ಅರಿತವನಿಗೆ ಹೊರಗಿನ ಆಡಂಬರ, ಅಹಂಕಾರ, ಪ್ರದರ್ಶನಗಳ ಅವಶ್ಯಕತೆ ಇರುವುದಿಲ್ಲ. ಅವನು ಪ್ರತಿಕ್ಷಣವೂ ಶಿವಸ್ಮರಣೆಯಲ್ಲಿ, ಲಿಂಗಾನುಭವದಲ್ಲಿ ನೆಲೆಸಿರುತ್ತಾನೆ. ಆಗ ಅವನ ಮನಸ್ಸು, ಬುದ್ಧಿ ಹಾಗೂ ಇಂದ್ರಿಯಗಳೆಲ್ಲವೂ ಸಮನ್ವಯಗೊಂಡು ದೈವಿಕ ಶಾಂತಿಯನ್ನು ಅನುಭವಿಸುತ್ತವೆ. "ಅಂತರಂಗದಲ್ಲಿ ಆಯತವನರಿದವಂಗೆ" ಇಲ್ಲಿ "ಆಯತ"…

0 Comments

ನಿರಾಳಪ್ರಿಯ ಸೊಡ್ಡಳಯ್ಯ ಶರಣರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಸರ್ವಸಂಗವ ಪರಿತ್ಯಾಗವ ಮಾಡಿ,ಅರಣ್ಯದಲ್ಲಿದ್ದರೆ ಮೃಗವೆಂಬರು.ಊರಿಗೆ ಬಂದರೆ ಸಂಸಾರಿ ಎಂಬರು.ಭೋಗಿಸಿದರೆ ಕಾಮಿ ಎಂಬರು,ಹೆಣ್ಣ ಬಿಟ್ಟರೆ ಹೊನ್ನಿಲ್ಲ ಎಂಬರು,ಹೊನ್ನ ಬಿಟ್ಟರೆ ಮಣ್ಣಿಲ್ಲ ಎಂಬರು,ಪುಣ್ಯವ ಬಿಟ್ಟರೆ ಪೂರ್ವದ ಕರ್ಮಿ ಎಂಬರು,ಮಾತನಾಡದಿದ್ದರೆ ಮೂಗನೆಂಬರು,ಸಹಜವ ನುಡಿದರೆ ಅಂಜುವನೆಂಬರು,ಇದು ಕಾರಣ ನಿರಾಳಪ್ರಿಯ ಸೊಡ್ಡಳಯ್ಯನಿಮ್ಮ ನನ್ನ ಮಚ್ಚು ಜಗಕ್ಕೊಂದಚ್ಚು. (ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-630/ವಚನ ಸಂಖ್ಯೆ-1352) “ಸೊಡ್ಡಳ” ಎನ್ನುವ ಶಬ್ದವು ವಚನಕಾರರನ್ನು ಕುರಿತಂತೆ ಬಹಳಷ್ಟು ಗೊಂದಲವನ್ನುಂಟು ಮಾಡುತ್ತದೆ. “ಸೊಡ್ಡಳ” ಎನ್ನುವ ಶಬ್ದವು ಬಸವಣ್ಣನವರ ಸಮಕಾಲೀನ ಶರಣ ಸೊಡ್ಡಳ ಬಾಚರಸರ ಜೊತೆಗೆ “ಸಂಕೀರ್ಣ ಸಮಗ್ರ ವಚನ ಸಂಪುಟದ-4” ರ 9ನೇ ಸಂಪುಟದಲ್ಲಿ ಅಜ್ಞಾತ ಶರಣರೆಂದು ಗುರುತಿಸಿದ ಇಬ್ಬರು…

0 Comments

ವಚನ ಭಂಡಾರಿ ಶಾಂತರಸ ಶರಣರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಮಲವ ತೊಳೆಯಬಹುದಲ್ಲದೆ,ಅಮಲವ ತೊಳೆಯಬಹುದೇ ಅಯ್ಯಾ?ಮಾತನಾಡಬಹುದಲ್ಲದೆ, ಅಜಾತನನರಿಯಬಹುದೇ ಅಯ್ಯಾ?ಮಾಟವ ಮಾಡಬಹುದಲ್ಲದೆ,ಮರ್ಮದ ಕೂಟವ ಕೂಡಬಹುದೇ ಅಯ್ಯಾ?ರಣದ ಪಂಥವ ಹೇಳಬಹುದಲ್ಲದೆ,ಕಾದಬಹುದೇ ಅಯ್ಯಾ?ಮಾತುಗಳ ಕೂಡಿ ಓತು ಹೇಳುವವರೆಲ್ಲರು,ಉಮಾಕಾಂತನ ಬಲ್ಲರೆ?ಈ ಮಾತಿನ ಮಾಲೆಗೆ ಅಂಜಿ,ಅಲೇಖನಾದ ಶೂನ್ಯ ಕಲ್ಲಿನೊಳಗೆ ಅದೆ ಹೇಳಾ.(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-27/ವಚನ ಸಂಖ್ಯೆ-71) ವಚನ ಭಂಡಾರಿ ಶಾಂತರಸರು 12 ನೇ ಶತಮಾನದ ವಚನ ಚಳವಳಿಯ ಪ್ರಮುಖ ಶಿವಶರಣರು ಹಾಗೂ ಬಸವಣ್ಣನವರ ಸಮಕಾಲೀನರು. ಅನುಭವ ಮಂಟಪದಲ್ಲಿ ನಡೆದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚರ್ಚೆಗಳನ್ನು ತಾಡೋಲೆಗಳಲ್ಲಿ ದಾಖಲಿಸಿ, ವಚನಗಳನ್ನು ಸಂಗ್ರಹಿಸಿ ಸಂರಕ್ಷಿಸಿದ ಕಾರಣ ಅವರಿಗೆ "ವಚನ ಭಂಡಾರಿ" ಎಂಬ ಗೌರವಾನ್ವಿತ ಬಿರುದು ಲಭಿಸಿದೆ.…

0 Comments