ಬಸವ ಜಯಂತಿ ಆರಂಭ ಮತ್ತು ಹರ್ಡೇಕರ ಮಂಜಪ್ಪನವರ ಸಾಧನೆಗಳ ಅವಲೋಕನ| ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ

ಇವನಾರವ, ಇವನಾರವ,ಇವನಾರವನೆಂದೆನಿಸದಿರಯ್ಯಾ.ಇವ ನಮ್ಮವ, ಇವ ನಮ್ಮವ,ಇವ ನಮ್ಮವನೆಂದೆನಿಸಯ್ಯಾ.ಕೂಡಲಸಂಗಮದೇವಾನಿಮ್ಮ ಮನೆಯ ಮಗನೆಂದೆನಿಸಯ್ಯಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-20/ವಚನ ಸಂಖ್ಯೆ-62) ಈ ವಚನವು 'ನಾನು' ಎಂಬ ಅಹಂಕಾರವನ್ನು ತ್ಯಜಿಸುವ ಮಹತ್ವವನ್ನು ಹೇಳುತ್ತದೆ. "ಇವನು, ಇವನು" ಎಂದು ಬೇರೆತನವನ್ನು ನೋಡುವುದು ಅಜ್ಞಾನ. "ಇವನೇ ನಾನು" ಎಂದು ಏಕತ್ವವನ್ನು ಅರಿತಾಗ ಅಹಂಕಾರ ಕಳೆಯುತ್ತದೆ. ಕೊನೆಯಲ್ಲಿ ನಾನು-ನೀನು ಎಂಬ ಭೇದವೇ ಇಲ್ಲ, ಎಲ್ಲವೂ ಒಂದೇ ಎಂಬ ಜ್ಞಾನಕ್ಕೆ ಬರಬೇಕು ಎಂದು ಈ ವಚನದ ಸಾರವಾಗಿರುತ್ತದೆ. ರಾಷ್ಟ್ರಕವಿ ಕುವೆಂಪು ಅವರು ಹರ್ಡೇಕರ ಮಂಜಪ್ಪನವರಿಗೆ "ಕರ್ನಾಟದ ಮಹಾತ್ಮ" ಎಂದು ಬಿರುದು ಕೊಟ್ಟಿದ್ದರು, ನಂತರ ಅವರಿಗೆ ಕರ್ನಾಟಕದ ಗಾಂಧಿ…

0 Comments

ಶಿವಶರಣ ಮಾದಾರ ಚೆನ್ನಯ್ಯನವರ ವಚನ ನಿರ್ವಚನ | ಡಾ. ಸಾರಿಕಾದೇವಿ ಎಲ್. ಕಾಳಗಿ, ಕಲಬುರಗಿ.

ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.ನುಡಿ ಲೇಸು, ನಡೆಯಧಮವಾದಲ್ಲಿ,ಅದು ಬಿಡುಗಡೆಯಿಲ್ಲದ ಹೊಲೆ.ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?ಆಚಾರವೆ ಕುಲ, ಅನಾಚಾರವೆ ಹೊಲೆ,ಇಂತೀ ಉಭಯವ ತಿಳಿದರಿಯಬೇಕು.ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,ಅರಿ ನಿಜಾ[ತ್ಮ]ರಾಮ ರಾಮನಾ.(ಸಂಕೀರ್ಣ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-447 /ವಚನ ಸಂಖ್ಯೆ-1153) ಶಿವಶರಣ ಮಾದಾರ ಚೆನ್ನಯ್ಯನವರು 12 ನೇ ಶತಮಾನದ  ಶ್ರೇಷ್ಠ ವಚನಕಾರರು ಮತ್ತು ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಜನಿಸಿದರು ಎಂದು ತಿಳಿದು ಬರುತ್ತದೆ. ಇವರು ಬಸವಣ್ಣನವರ ಹಿರಿಯ ಸಮಕಾಲೀನರಾಗಿದ್ದರು. ಇವರು ಅನುಭವ ಮಂಟಪದ ಅನುಭಾವಿಗಳಾಗಿದ್ದರು. ಇವರು ತಮಿಳುನಾಡಿನ ಕರಿಕಾಲ ಚೋಳರಾಜನ ಕುದುರೆ…

0 Comments

ಶರಣ ಕೀಲಾರದ ಭೀಮಣ್ಣನವರ ವಚನ-ನಿರ್ವಚನ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ವಚನ:ನಾನಾ ವರ್ಣದ ಗೋವುಗಳೆಲ್ಲವೂ ಕೂಡಿಒಂದೇ ಹೊಲದಲ್ಲಿ ಮೇದು,ಆರು ಕೆರೆಯ ನೀರ ಕುಡಿದು,ಒಂದೇ ದಾರಿಯಲ್ಲಿ ಬಂದು,ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು.ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು,ಹಾಲಿಗೆ ಏಕವರ್ಣ.ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿಚಟ್ಟಿ ಹತ್ತದೆ, ಹಸುಕು ನಾರದೆ,ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿಕಾಸಿ ಉಣಬಲ್ಲಡೆ ಆತನೆ ಭೋಗಿ.ಆತ ನಿರತಿಶಯಾನುಭಾವ ಶುದ್ಧಾತ್ಮನು,ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-37/ವಚನ ಸಂಖ್ಯೆ-75)ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:ಕೊಟ್ಟಿಗೆ: ದನಕರುಗಳನ್ನು ಕಟ್ಟುವ ಸ್ಥಳ.ಭಾಜನ: ಪಾತ್ರೆ.ಚಟ್ಟಿ: ಮಣ್ಣಿನ ಪಾತ್ರೆ, ಮಡಿಕೆ.ಕೌರು: ಸುಟ್ಟ ವಾಸನೆ, ಹೊಗೆ, ನಾತ.ನಿರತಿಶಯ: ಹೆಚ್ಚಳವಿಲ್ಲದೆ, ಅಸಾಧಾರಣವಲ್ಲದ. ಇದು ಶರಣ ಕೀಲಾರದ…

0 Comments

ನೇಗಿಲಯೋಗಿ ಶರಣ ಒಕ್ಕಲಿಗ ಮುದ್ದಣ್ಣನವರ ವಚನ – ನಿರ್ವಚನ | ಶ್ರೀಮತಿ ಜಗದೇವಿ ದಾಂಡ್ರಾ, ಕಲಬುರಗಿ

ವಚನ:ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು.ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯವನರಿದು ಘಟಿಸಬೇಕು.ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?ಕ್ರೀಯ ಬಿಡಲಿಲ್ಲ, ಅರಿವು ಮರೆಯಲಿಲ್ಲ.ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ?ಫಲವ ಹೊತ್ತ ಪೈರಿನಂತೆ, ಪೈರಿನೊಳಕೊಂಡ ಫಲದಂತೆ,ಅರಿವು ಆಚರಣೆಯೆಲ್ಲ ನಿಂದು, ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆಕಾಮಭೀಮ ಜೀವಧನದೊಡೆಯನೆಂಬುದ ಭಾವಿಸಲಿಲ್ಲ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-767/ವಚನ ಸಂಖ್ಯೆ-1734)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:ಕ್ರೀ: ಕ್ರಿಯೆ, ಕಾರ್ಯ, ಕೆಲಸ.ಘಟಿಸು: ಕೂಡು, ಒಂದಾಗು, ಮಿಳಿತವಾಗು ಒಕ್ಕಲಿಗ ಮುದ್ದಣ್ಣ ಶರಣರು ಅಂದಿನ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. ಮೂಲತಃ ಇವರು ವಿಜಯಪುರ ಜಿಲ್ಲೆಯ ಜೋಳದಹಾಳ…

0 Comments

ಗುರು ಅನಿಮಿಷ ಯೋಗಿ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಅನಿಮಿಷ ಎಂದರೆ ಕಣ್ಣು ಮಿಟುಕಿಸದವನು ಅಥವಾ ಅರೆನಿಮಿಷವೂ ಕಣ್ಣು ಮುಚ್ಚದವನು (ದೇವರು/ದೇವತೆ) ಎಂದರ್ಥ. ಇದು “ಅ” (ಇಲ್ಲ) ಮತ್ತು “ನಿಮಿಷ” (ಕಣ್ಣು ಮಿಟುಕಿಸುವುದು) ಎಂಬ ಪದಗಳಿಂದ ಬಂದಿದೆ. ಪ್ರಮುಖ ಅರ್ಥಗಳು ಮತ್ತು ಸಂದರ್ಭಗಳು: ದೇವತೆಗಳು: ಕಣ್ಣು ಮಿಟುಕಿಸದ ಕಾರಣ ದೇವತೆಗಳನ್ನು ಅನಿಮಿಷರೆಂದು ಕರೆಯಲಾಗುತ್ತದೆ. ಅರ್ಥ: ಅರೆನಿಮಿಷವೂ ಕಣ್ಣು ಮಿಟುಕಿಸದ, ದೃಷ್ಟಿ ಸ್ಥಿರವಾಗಿರುವ ಸ್ಥಿತಿ. ಅನಿಮಿಷ ಯೋಗಿ: ಅಲ್ಲಮಪ್ರಭುದೇವರಿಗೆ ದೀಕ್ಷೆ ನೀಡಿದ ಗುರುಗಳನ್ನು “ಅನಿಮಿಷ ಯೋಗಿ” ಎಂದು ತಿಳಿದು ಬರುತ್ತದೆ. ಈ ಪದವನ್ನು ಸಾಮಾನ್ಯವಾಗಿ ಜಾಗರೂಕತೆ, ದೈವಿಕತೆ ಅಥವಾ ದೀರ್ಘಕಾಲದ ತೀವ್ರವಾದ ದೃಷ್ಟಿಯನ್ನು ಸೂಚಿಸಲು ಬಳಸಲಾಗುತ್ತದೆ. ಸಿಂಗಿರಾಜನ "ಬಸವರಾಜ…

0 Comments

ಶರಣ ಅಮುಗಿದೇವಯ್ಯನವರ ವಚನದ ನಿರ್ವಚನ | ಶ್ರೀ. ಎನ್. ಸಿ. ಶಿವಪ್ರಕಾಶ್, ಮಸ್ಕತ್, ಒಮಾನ್.

ವಚನ:ಜ್ಞಾನದಲರಿದಡೇನಯ್ಯ, ಕ್ರೀಯನಾಚರಿಸದನ್ನಕ್ಕ?ನೆನೆದ ಮಾತ್ರದಲ್ಲಿ ಅಹುದೆ, ಕಾರ್ಯದಲಲ್ಲದೆ?ಕುರುಡ ಕಾಣ ಪಥವ, ಹೆಳವ ನಡೆಯಲರಿಯ.ಒಂದಿಲ್ಲದಿರ್ದಡೊಂದಾಗದು.ಜ್ಞಾನವಿಲ್ಲದಿರ್ದ ಕ್ರೀ ಜಡನು,ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು.ಇದು ಕಾರಣ, ಸಿದ್ಧಸೋಮನಾಥಲಿಂಗವಕೂಡುವ ಶರಣಂಗೆ ಎರಡೂ ಬೇಕು.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-130/ವಚನ ಸಂಖ್ಯೆ-331) ಶರಣ ಅಮುಗಿದೇವಯ್ಯನವರು ಮೂಲತಃ ಪಂಡರಾಪುರ ಸಮೀಪದ ಪುಳಜೆ ಗ್ರಾಮದವರಾಗಿದ್ದು ಅಲ್ಲಿ ನೇಯ್ಗೆ ಕಾಯಕ ಮಾಡಿಕೊಂಡವರಾಗಿದ್ದರು. ಇವರ ಮಡದಿ ಶರಣೆ ಅಮುಗೆ ರಾಯಮ್ಮನವರು ಇಷ್ಟಲಿಂಗಪೂಜಾ ನಿಷ್ಠೆಯುಳ್ಳವರಾಗಿದ್ದ ಅಮುಗಿ ದೇವಯ್ಯನವರಿಗೆ ಸೋಲಾಪೂರದ ಸಿದ್ಧರಾಮ ಶಿವಯೋಗಿಗಳು ಭತ್ತ ಕುಟ್ಟಲು ಹೇಳಿದಾಗ “ನಾವು ಭವಿಗಳ ಸೇವೆ ಮಾಡುವುದಿಲ್ಲ” ಎಂದು ಹೇಳಿ ಮಡದಿ ಅಮುಗಿ ರಾಯಮ್ಮನವರೊಂದಿಗೆ ಕಲ್ಯಾಣಕ್ಕೆ ಬಂದು ಅನುಭವಮಂಟಪದ…

0 Comments

ವಚನಗಳಲ್ಲಿ ವೈಚಾರಿಕ ಪ್ರಜ್ಞೆ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಭಕ್ತಿ ಸುಭಾಷೆಯ ನುಡಿಯ ನುಡಿವೆ,ನುಡಿದಂತೆ ನಡೆವೆ,ನಡೆಯೊಳಗೆ ನುಡಿಯ ಪೂರೈಸುವೆ,ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.ಒಂದು ಜವೆ ಕೊರತೆಯಾದಡೆಎನ್ನನದ್ದಿ ನೀನೆದ್ದು ಹೋಗು,ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-441) ವಚನಗಳಲ್ಲಿ ವೈಚಾರಿಕ ಪ್ರಜ್ಞೆ ಎನ್ನುವ ಶೀರ್ಷಿಕೆಯಲ್ಲಿ 2 ಶಬ್ದಗಳಿವೆ ಒಂದು "ವಚನ" ಮತ್ತೊಂದು "ವೈಚಾರಿಕತೆ". ಇವೆರಡೂ ಶಬ್ದಗಳ ಅರ್ಥವನ್ನು ನೋಡಿಕೊಂಡು ಮುಂದೆ ಹೋಗೋಣ. ವಚನಗಳ ಅರ್ಥ ಮತ್ತು ಸ್ವರೂಪ:ಒಂದು ಭಾಷೆ, ಅದಕ್ಕೆ ಒಂದು ಲಿಪಿ, ಸಾಕ್ಷರತೆಯಿಂದ ಸಾಹಿತ್ಯ ರಚನೆ, ಸಾಹಿತ್ಯದೊಂದಿಗೆ ಅಕ್ಷರೀಕರಣ ಇವು ಸಮಾಜವನ್ನು ಅಥವಾ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಸಮಷ್ಠಿಯನ್ನೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪ್ರಭಾವಶಾಲಿಯಾಗಿ ಒಂದುಗೂಡಿಸುವ…

0 Comments

ವಚನಕಾರರ ದೃಷ್ಟಿಯಲ್ಲಿ ಆತ್ಮ ಸೌಂದರ್ಯ | ಡಾ. ಎಂ. ಮಕ್ತುಂಬಿ, ಭಾಲ್ಕಿ.

ಅಧ್ಯಾತ್ಮ ಸಾಧಕರಾಗಿದ್ದ ವಚನಕಾರರಿಗೆ ಆತ್ಮಸಾಕ್ಷಾತ್ಕಾರವು ಉಳಿದ ಸಾಧನೆಗಳಂತೆ ಮಹತ್ವದ್ದಾಗಿತ್ತು. ಅವರು ಪುರವನ್ನು ಗೆದ್ದಂತೆ; ಪರವನ್ನು ಗೆದ್ದವರು. ಮನೆಯನ್ನು ಗೆದ್ದಂತೆ ಮಾರೂ ಗೆದ್ದವರು; ಆತ್ಮ ಸಾಕ್ಷಾತ್ಕಾರ ಮಾಡಿಕೊಂಡವರಿಗೆ ಎಲ್ಲವೂ ಶಿವಮಯವಾಗಿಯೇ ಕಾಣುತ್ತದೆ; ಸಮಾನವಾಗಯೇ ಕಾಣುತ್ತದೆ. ಈ ದರ್ಶನದ ಹಿನ್ನೆಲೆಯಲ್ಲಿಯೇ ವಚನಕಾರರು ಎಲ್ಲ ತಾರತಮ್ಯಗಳನ್ನು ಮೀರಿ ನಿಂತರು‌. ತಾವು ಬದುಕಿದ್ದ ಯುಗಮಾನವನ್ನು ಎಲ್ಲ ಭೇದಗಳಿಂದ ಬಿಡುಗಡೆ ಮಾಡುವ ಚಳಿವಳಿಯೊಂದನ್ನು ರೂಪಿಸಿದರು‌. ಅದು ಆತ್ಮಸಾಕ್ಷಾತ್ಕಾರದ ಸಾಧನೆಯಾಗಿದ್ದಂತೆ; ಸಮಾಜದಲ್ಲಿದ್ದ ಪರಮಾತ್ಮನ ಶ್ರೇಯ ಸಾಧನೆಯ ಚಳುವಳಿಯೂ ಆಗಿದ್ದಿತು. ಅವರು ಆತ್ಮದ ಆಧಾರದ ಮೇಲೆ ಸಮಾನತೆಯನ್ನು ಸ್ಥಾಪಿಸಲು ಬಯಸಿದರು. ಎಲ್ಲ ಮನುಷ್ಯರಲ್ಲಿಯೂ ಆತ್ಮವಿದೆ. ಅದು ಒಂದೇ…

0 Comments

ಪಂಚಗಣಾಧೀಶರು | ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು.

ಬಸವೋತ್ತರ ಕಾಲದಲ್ಲಿ ಪಂಚಗಣಾಧೀಶರು ಕೆರೆಕುಂಟೆ ಗೋಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತಾಪಿಗಳಿಗೆ, ಗೋವಳಿಗರಿಗೆ, ಶ್ರಮಜೀವಿಗಳಿಗೆ ಅನ್ನಾಹಾರ ಮತ್ತು ಅಧ್ಯಾತ್ಮ ಗುರುಬೋಧೆ ನೀಡಿದವರು. ಕೂಲಹಳ್ಳಿ ಮದ್ದಾನೇಶ. ಅರಸೀಕೆರೆಯ ಕೋಲಶಾಂತೇಶ. ಹರಪನಹಳ್ಳಿ ಕೆಂಪೇಶ(ಕಣಗಲಿ ಕೆಂಪೇಶ). ಕೊಟ್ಟೂರು ಗುರುಬಸವ (ಕೊಟ್ಟೂರೇಶ, ಕೊಟ್ರೇಶ). ನಾಯಕನಹಟ್ಟಿ ತಿಪ್ಪೇಸ್ವಾಮಿ (ಹಟ್ಟಿ ತಿಪ್ಪಯ್ಯ, ತಿಪ್ಪೇಶ). ಎಂಬ ಈ ಪಂಚಗಣಾಧೀಶರು ಹದಿನಾಲ್ಕು ಹಾಗೂ ಹದಿನೈದನೇ ಶತಮಾನದಲ್ಲಿ ಜನಪದರ ಆದರ್ಶ ಸಾಂಸ್ಕೃತಿಕ ನಾಯಕರಾಗಿ ಆಗಿಹೋಗಿದ್ದು, ಬಸವಾದಿ ಪ್ರಮಥರ ಸಾಂಸ್ಕೃತಿಕ ಆಶಯಗಳಿಗಾಗಿ ದುಡಿದು ಅಮರ ದೈವಗಳಾಗಿ ಜೀವಸಮಾಧಿಯಾಗಿದ್ದಾರೆ. ಹಲವಾರು ಜಾನಪದ ಕಾವ್ಯಗಳ ಹುಟ್ಟುವಳಿಗೂ ಇವರು ಮೆರೆದ ಪವಾಡ ಸಾಹಸಗಳು ವಸ್ತುವನ್ನು ಒದಗಿಸಿವೆ. ಕೂಲಹಳ್ಳಿ…

0 Comments