ಶೂನ್ಯಪೀಠದ 6ನೆ ಅಧ್ಯಕ್ಷರಾಗಿ ಮಲೆಯ ಮಾದೇಶ್ವರರು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಭಕ್ತಿಯೆಂಬ ಪೃಥ್ವಿಯ ಮೇಲೆಗುರುವೆಂಬ ಬೀಜವಂಕುರಿಸಿ,ಲಿಂಗವೆಂಬ ಎಲೆಯಾುತ್ತು.ಲಿಂಗವೆಂಬ ಎಲೆಯ ಮೇಲೆವಿಚಾರವೆಂಬ ಹೂವಾಯಿತ್ತು,ಆಚಾರವೆಂಬ ಕಾಯಾಯಿತ್ತು.ನಿಷ್ಪತ್ತಿಯೆಂಬ ಹಣ್ಣಾಯಿತ್ತು.ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-138/ವಚನ ಸಂಖ್ಯೆ-526) ಸದ್ಭಕ್ತಿಯನ್ನು ಆಚರಿಸಿದರೆ ಗುರುವಿನ ಕೃಪೆಗೆ ಪಾತ್ರರಾಗಿ ಸದಾಚಾರಿಗಳಾಗಬಹುದು. ಅಂತಹವುಗಲಿಂದ ನುರಿತ ಹಾಗೂ ಪಕ್ವಗೊಂಡ ಭಕ್ತನನ್ನು ದೇವರು ತನ್ನತ್ತ ಕರೆದು, ತನ್ನವನನ್ನಾಗಿ ಮಾಡಿಕೊಳ್ಳುತ್ತಾನೆ ಎಂದು ವಿಶ್ವಗುರು ಬಸವಣ್ಣನವರು ಈ ವಚನದ ಮೂಲಕ ಉಪದೇಶಿಸಿದ್ದಾರೆ. ಅಂತೆಯೇ ಮಾದೇಶ್ವರರು ಬಸವ ಪಥ ಅನುಸರಿಸಿದ ಶುದ್ಧ ಶರಣ ಪರಂಪರೆಯವರು. ವೈರಾಗ್ಯ ಮೂರ್ತಿಯಾಗಿ ಕ್ರಾಂತಿಕಾರಿ ಶರಣ ಧರ್ಮವನ್ನು ಪ್ರಸಾರಗೈದರು. ಅವರು ವಿಶ್ವಗುರು…

0 Comments

ಪಂಚಗಣಾಧೀಶರು | ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು.

ಬಸವೋತ್ತರ ಕಾಲದಲ್ಲಿ ಪಂಚಗಣಾಧೀಶರು ಕೆರೆಕುಂಟೆ ಗೋಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತಾಪಿಗಳಿಗೆ, ಗೋವಳಿಗರಿಗೆ, ಶ್ರಮಜೀವಿಗಳಿಗೆ ಅನ್ನಾಹಾರ ಮತ್ತು ಅಧ್ಯಾತ್ಮ ಗುರುಬೋಧೆ ನೀಡಿದವರು. ಕೂಲಹಳ್ಳಿ ಮದ್ದಾನೇಶ. ಅರಸೀಕೆರೆಯ ಕೋಲಶಾಂತೇಶ. ಹರಪನಹಳ್ಳಿ ಕೆಂಪೇಶ(ಕಣಗಲಿ ಕೆಂಪೇಶ). ಕೊಟ್ಟೂರು ಗುರುಬಸವ (ಕೊಟ್ಟೂರೇಶ, ಕೊಟ್ರೇಶ). ನಾಯಕನಹಟ್ಟಿ ತಿಪ್ಪೇಸ್ವಾಮಿ (ಹಟ್ಟಿ ತಿಪ್ಪಯ್ಯ, ತಿಪ್ಪೇಶ). ಎಂಬ ಈ ಪಂಚಗಣಾಧೀಶರು ಹದಿನಾಲ್ಕು ಹಾಗೂ ಹದಿನೈದನೇ ಶತಮಾನದಲ್ಲಿ ಜನಪದರ ಆದರ್ಶ ಸಾಂಸ್ಕೃತಿಕ ನಾಯಕರಾಗಿ ಆಗಿಹೋಗಿದ್ದು, ಬಸವಾದಿ ಪ್ರಮಥರ ಸಾಂಸ್ಕೃತಿಕ ಆಶಯಗಳಿಗಾಗಿ ದುಡಿದು ಅಮರ ದೈವಗಳಾಗಿ ಜೀವಸಮಾಧಿಯಾಗಿದ್ದಾರೆ. ಹಲವಾರು ಜಾನಪದ ಕಾವ್ಯಗಳ ಹುಟ್ಟುವಳಿಗೂ ಇವರು ಮೆರೆದ ಪವಾಡ ಸಾಹಸಗಳು ವಸ್ತುವನ್ನು ಒದಗಿಸಿವೆ. ಕೂಲಹಳ್ಳಿ…

0 Comments

ಬಯಲು ಬಯಲನೆ ಬಿತ್ತಿದ ಶರಣರು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ವಚನ ಧರ್ಮದ ಭಕ್ತಿ ಪರಂಪರೆಯಲ್ಲಿ ಬಯಲು ಎಂಬ ಶಬ್ದ ಶರಣರ ವಚನಗಳಲ್ಲಿ ಭಾವನಾತ್ಮಕ ವಿನ್ಯಾಸದ ಮೂಲಕ ಮುಖಾಮುಖಿಯಾಗುತ್ತದೆ. ಶರಣರಲ್ಲಿ ಬಯಲು ಅಗೋಚರ ಇಂದ್ರಿಯಾನಂದಕ್ಕೆ ಮುದ ನೀಡುವ ಶೂನ್ಯವದು. ನಿರಾಳ ಅಗೋಚರ ಶಕ್ತಿಯ ವಿಶಿಷ್ಟ ವಿಶ್ವವದು. ಬೀಜದಲ್ಲಿ ಬೀಜ ಅಡಗಿರುವಂತೆ ಬೆಚ್ಚನೆಯ ಭಾವಾನುಭೂತಿ. ನಿರಾಕಾರದ ಕತ್ತಲೆಯ ಜಗತ್ತು. ವಚನಕಾರರ ಬಯಲು ಎಂದರೆ ಸತ್ಯದ ಪಾವಿತ್ರ್ಯತೆಯನ್ನು ಮುಂದು ಮಾಡುವ ವಿಶೇಷ ರೂಪಕದ ಅವಲೋಕನಕ್ಕೆ ಒಳಪಡಿಸುವ ಮನಸ್ಥಿಯಾಗಿದೆ. ಬಯಲು ಎನ್ನುವ ಸಂವೇದನೆಯನ್ನು ವಚನ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾದ್ಯ. ಗ್ರಹಿಕೆಗೆ ಸಿಗದ ಶಬ್ದಗಳಲ್ಲಿ ಬಂಧಿಸಲು ಸಾಧ್ಯವಾಗದ ವಿಸ್ಮಯ ಆಧ್ಯಾತ್ಮಿಕ ಲೋಕ. ಶೂನ್ಯ…

0 Comments

ಮಹಾಪ್ರಸಾದಿ ಶರಣ ಬಿಬ್ಬಿಬಾಚಯ್ಯನವರು | ಶ್ರೀ. ಲೋಕೇಶ್ ಎನ್. ಮಾನ್ವಿ, ರಾಯಚೂರು ಜಿಲ್ಲೆ.

ರಾಯಚೂರು ಜಿಲ್ಲೆ ಬಿಸಿಲನಾಡು ಎಂದೇ ಹೆಸರುವಾಸಿ‌. ಅದರಷ್ಟೇ ಸಾಹಿತ್ಯದಿಂದ ನೆತ್ತಿಯನ್ನು ತಂಪಾಗಿಸಬಲ್ಲ ಶರಣರು, ದಾಸರು, ಸಂತರು, ಮಹಾಂತರ, ಸಾಹಿತಿಗಳ, ನಾಡು ರಾಯಚೂರು. ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಜಿಲ್ಲೆ ಇದಾಗಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಲಿನಲ್ಲಿ ಕಾಣಸಿಗುವ ಪ್ರಮುಖ ಶರಣರಾದ ಬಿಬ್ಬಿಬಾಚಯ್ಯನವರು ಕೂಡ ರಾಯಚೂರು ಜಿಲ್ಲೆಯ ಶರಣರೇ ಆಗಿದ್ದಾರೆ. ಶರಣ ಬಿಬ್ಬಿಬಾಚಯ್ಯನವರು ಮೂಲತಃ ರಾಯಚೂರು ಜಿಲ್ಲೆಯ ಗಬ್ಬೂರಿನವರಾಗಿದ್ದು, ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾದರೂ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ತೆರಳಿ ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದವರು, ಅನುಭವ ಮಂಟಪದಲ್ಲಿ ಸಕ್ರಿಯವಾಗಿ…

0 Comments

ನಾಥರು ಹಾಗೂ ಶರಣರು | ಡಾ. ಬಸವರಾಜ ಸಬರದ, ಬೆಂಗಳೂರು.

ಅಧ್ಯಾಯ – 01: ನಾಥರು ಹಾಗೂ ಶರಣರು ಭಾರತದಲ್ಲಿ ಅನೇಕ ಧಾರ್ಮಿಕ ಪಂಥಗಳು ಆಗಿ ಹೋಗಿವೆ. ಧಾರ್ಮಿಕ ಕ್ಷೇತ್ರದಲ್ಲಿ ಅನೇಕ ಬೆಳವಣಿಗೆಗಳಾಗಿವೆ. ಧರ್ಮ ಮತ್ತು ಚಳುವಳಿಗಳು ಒಂದು ಕಡೆ ಕೂಡುವುದಿಲ್ಲವೆಂಬ ನಂಬಿಕೆಯಿದೆ. ಮತ-ಧರ್ಮಗಳ ಉದ್ದೇಶವೇ ಬೇರೆ, ಚಳುವಳಿಗಳ ಉದ್ದೇಶವೇ ಬೇರೆಯೆಂದು ಹೇಳಿಕೊಂಡು ಬರಲಾಗಿದೆ. ಆದರೆ ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ಶರಣರು ಧರ್ಮವನ್ನು ಒಂದು ಚಳುವಳಿಯ ಹಾಗೆ ಬೆಳೆಸಿದರು. ಆಗ ಶರಣಧರ್ಮವು ಶರಣ ಚಳುವಳಿಯಾಗಿ ರೂಪಗೊಂಡಿತು. ಧಾರ್ಮಿಕ ಪರಂಪರೆಯಲ್ಲಿ ಹೀಗೆ ಧರ್ಮವೊಂದು ಚಳುವಳಿಯ ರೂಪ ಪಡೆದದ್ದು 12 ನೇಯ ಶತಮಾನದಲ್ಲಿ, ಅದೂ ಕರ್ನಾಟಕದಲ್ಲಿ ಕನ್ನಡದ ವಚನಗಳ ಮೂಲಕವೆಂಬ ಸಂಗತಿಯೇ…

0 Comments

ವಚನ ಪರಂಪರೆ | ಶ್ರೀಮತಿ. ಸುಶೀಲಾ ಸದಾಶಿವಯ್ಯ, ತುಮಕೂರು.

ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಎಂಬ ಪ್ರಕಾರ ಹೆಚ್ಚು ರಚನೆಯಾಗಿ ಅಧಿಕೃತವಾಗಿ ಬೆಳಕಿಗೆ ಬಂದಿದ್ದು 12 ನೇ ಶತಮಾನದ ಶರಣ ಯುಗದಲ್ಲಿ. ಅದಕ್ಕೂ ಮೊದಲು ವಚನಗಳು ರಚನೆಯಾಗಿತ್ತು. ಜೇಡರ ದಾಸಿಮಯ್ಯ ಮೊದಲ ವಚನಕಾರರಾಗಿ ಕಂಡು ಬರುತ್ತಾರೆ. ಶರಣ ಯುಗದಲ್ಲಿ ರಚನೆಯಾದ ವಚನಗಳು ಸ್ವತಂತ್ರ ಭಾಷಾ ರಚನೆಯಿಂದ ಸರಳ, ಅಚ್ಚಗನ್ನಡ ಸೊಗಡಿನಿಂದ ಎಲ್ಲರ ಗಮನ ಸೆಳೆಯುವಂತೆ ಆಯಿತು. ಈ ಯುಗದಲ್ಲಿ ಒಂದು ಇಡೀ ಸಮೂಹವೇ ವಚನಗಳ ರಚನೆಯಲ್ಲಿ ಜಾತಿ, ವರ್ಗ, ವರ್ಣ, ಹೆಣ್ಣು, ಗಂಡು ಎಂಬ ಯಾವ ತಾರತಮ್ಯಕ್ಕೆ ಒಳಗಾಗದೆ ಸಾಮಾಜಿಕ ಕ್ರಾಂತಿಗೆ ವಚನವನ್ನು ಮಾಧ್ಯಮವಾಗಿಸಿಕೊಂಡು ಅಸಂಖ್ಯಾತ ವಚನಗಳನ್ನು…

0 Comments

ಜೇಡರ ದಾಸಿಮಯ್ಯ ಶರಣರ ವಚನ ನಿರ್ವಚನ | ಶ್ರೀಮತಿ. ವಿಜಯಲಕ್ಷ್ಮಿ ಎಂ. ಪಾಟೀಲ, ಕಲಬುರಗಿ.

ವಚನ:ತಾಯ ಗರ್ಭದ ಶಿಶು ತಾಯ ಕುರುಹನರಿಯದು.ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು.ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು.ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ!ರಾಮನಾಥ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-282/ವಚನ ಸಂಖ್ಯೆ-801) ಆದ್ಯ ವಚನಕಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಚನಕಾರರು ಜೇಡರ ದಾಸಿಮಯ್ಯ ಶರಣರು. ಬಸವಣ್ಣನವರ ಹಿರಿಯ ಸಮಕಾಲೀನರಾದ ಈ ಶರಣರು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರು (ಬಿ) ಗ್ರಾಮದಲ್ಲಿ ಜನಿಸಿದವರು. ತಂದೆ ಕಾಮಯ್ಯ ಹಾಗೂ ತಾಯಿ ಶಂಕರಿ ಮತ್ತು ಮಡದಿ ವಚನಕಾರ್ತಿ ಶರಣೆ ದುಗ್ಗಳೆ. ಕುಲ ಕಾಯಕ ನೇಕಾರಿಕೆಯೇ ಈ ಶರಣರ ಕಾಯಕವಾಗಿತ್ತು. “ರಾಮನಾಥ” ಎನ್ನುವ ಅಂಕಿತನಾಮದಲ್ಲಿ ಇವರ…

0 Comments

ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ: ಸಂಕಷ್ಟದ ಬದುಕು ಹಾಗೂ ಅವರ ಸಾಧನೆಗಳು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ರಾವ್‌ ಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರ ಪೂರ್ವಜರು ಮೂಲತಃ ಸವದತ್ತಿ ತಾಲೂಕಿನ ಹಳಕಟ್ಟಿ ಗ್ರಾಮದವರು. ಧಾರವಾಡಕ್ಕೆ ವಲಸೆ ಬಂದ ನೇಕಾರ ಕುಟುಂಬ ಅವರದಾಗಿತ್ತು. ಅವರ ಪೂರ್ಣ ಹೆಸರು ಫಕೀರಪ್ಪ. ಡಾ. ಫ. ಗು. ಹಳಕಟ್ಟಿಯವರ ತಂದೆ ಸಾಹಿಗಳು ಮತ್ತು ಶಿಕ್ಷಕರಾಗಿದ್ದ ಶ್ರೀ ಗುರುಬಸಪ್ಪ ಹಳಕಟ್ಟಿ ಮತ್ತು ತಾಯಿ ಶ್ರೀಮತಿ ದಾನಾದೇವಿ. 02.07.1880 ರಂದು ಧಾರವಾಡದಲ್ಲಿ ಜನಿಸಿದ ಅವರು ತಮ್ಮ ಮೂರನೇಯ ವಯಸ್ಸಿನಲ್ಲಿದ್ದಾಗ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಧಾರವಾಡದಲ್ಲಿ ತಮ್ಮ ಪ್ರಾಥಮಿಕ ಹಾಗೂ 1896 ರಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾಗುತ್ತಾರೆ. ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ 1901…

0 Comments

“ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ” ಕಾರ್ಯಗಾರ | “ಬಯಲ ಬಿತ್ತಿಯಲ್ಲಿ ಶರಣರ ತತ್ವ ಶೋಧ” ಪುಸ್ತಕ ಲೋಕಾರ್ಪಣೆ | ವರದಿ: ಶ್ರೀ ಬಸವರಾಜ ಕುರುಗೋಡ, ರಾಯಚೂರು

ಮಹಾಶಿವರಾತ್ರಿ ಪ್ರಯುಕ್ತ ನಗರದ ಬಸವ ಕೇಂದ್ರದಲ್ಲಿ 13.02.2026 ರಂದು ಸಾಯಂಕಾಲ ಚಿಕ್ಕೋಡಿಯ ವೈದ್ಯ ಶರಣ ಸಾಹಿತ್ಯ ಆರಾಧಕ ಡಾ. ದಯಾನಂದ ನೂಲಿ ಅವರ ನೇತೃತ್ವದಲ್ಲಿ ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ ಕುರಿತು ಕಾರ್ಯಗಾರ ಜರುಗಿತು. ಮೊದಲಿಗೆ ಜಾಗತಿಕ ಲಿಂಗಾಯತ ಮಹಾಸಭೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಸಾಹಿತಿ ಡಾ. ಸರ್ವಮಂಗಳ ಸಕ್ರಿ ಅವರು ಬರೆದ "ಬಯಲ ಬಿತ್ತಿಯಲ್ಲಿ ಶರಣರ ತತ್ವ ಶೋಧ" ಪುಸ್ತಕವನ್ನು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣ ಶ್ರೀ. ಪಿ. ರುದ್ರಪ್ಪ ಕುರಕುಂದಿ ಸೇರಿ ಲೋಕಾರ್ಪಣೆ ಮಾಡಿದರು. ಜೊತೆಗೆ ಡಾ. ದಯಾನಂದ ನೂಲಿ ಅವರ  ಎರಡನೇ ಮುದ್ರಣದ…

0 Comments

ವಚನಗಳಲ್ಲಿ ವೀರಶೈವ ಮತ್ತು ಲಿಂಗಾಯತ (ಲಿಂಗವಂತ) ಪದಬಳಕೆ: ಒಂದು ಪರಾಮರ್ಶೆ | ಡಾ. ವೀರಣ್ಣ ರಾಜೂರ, ಧಾರವಾಡ.

ವಚನ ಸಾಹಿತ್ಯ ನನ್ನ ವಿಶೇಷ ಆಸಕ್ತಿಯ ಅಧ್ಯಯನ ಕ್ಷೇತ್ರ. ಸುಮಾರು 45 ವರ್ಷಗಳಿಂದ ಈ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ, ಬರವಣಿಗೆ, ಗ್ರಂಥ ಪ್ರಕಟಣೆ ಕಾರ್ಯ ಮಾಡುತ್ತ ಬಂದಿದ್ದೇನೆ. ಇದುವರಗೆ ನಾನು 125 ಗ್ರಂಥಗಳನ್ನು ಪ್ರಕಟಿಸಿದ್ದು ಅವುಗಳಲ್ಲಿ 80 ಕ್ಕೂ ಹೆಚ್ಚು ಕೃತಿಗಳು ವಚನ ಸಾಹಿತ್ಯಕ್ಕೆ ಸಂಬಂಧಿಸಿವೆ. ಕರ್ನಾಟಕ ಸರ್ಕಾರ ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಿದ ಸಮಗ್ರ ವಚನ ಸಾಹಿತ್ಯದ 15 ಸಂಪುಟಗಳಲ್ಲಿ ನಾನು 5 ಸಂಪುಟಗಳನ್ನು ಸಂಪಾದಿಸಿದ್ದೇನೆ. ಹೀಗಾಗಿ ವಚನ ಸಾಹಿತ್ಯದ ಹಸ್ತಪ್ರತಿಗಳ ನಿರಂತರ ಒಡನಾಟದಿಂದ ಅವುಗಳ ಸ್ವರೂಪ, ಪರಂಪರೆ, ಪರಿಷ್ಕರಣೆ,…

1 Comment