ಚಿಙ್ಮಯ ಜ್ಞಾನಿ ಚನ್ನಬಸವಣ್ಣನವರ ದೃಷ್ಠಿಯಲ್ಲಿ 12 ನೇ ಶತಮಾನದ ಕಲ್ಯಾಣ | ಡಾ. ಸತೀಶ. ಕೆ. ಇಟಗಿ, ಮುದ್ದೇಬಿಹಾಳ.

ಐತಿಹಾಸಿಕ ಮಂಗಳವೆಡೆಯಿಂದ ದೊರೆ ಬಿಜ್ಜಳನ ರಾಜದಾನಿ ಕಲ್ಯಾಣಕ್ಕೆ ಸ್ಥಳಾಂತರವಾದ ಬಳಿಕ, ಬಸವಣ್ಣನವರು ಮಹಾಮಂತ್ರಿಯಾಗಿ ಅದನ್ನು ಭೂಮಿಯ ಮೇಲಿನ ಕೈಲಾಸವಾಗಿಸಿದ್ದರು. ಅಂತರ್ಜಾತಿ ವಿವಾಹದ ಪರಿಣಾಮವಾಗಿ ಕ್ರಾಂತಿ ಸಂಭವಿಸಿದ ಬಳಿಕ ಅದು ಶರಣರಿಂದ ವಿಮುಖವಾಯಿತು. ಚಾಲುಕ್ಯರ ಆಡಳಿತದ ನಂತರ ಅದಕ್ಕೆ ಕಿಲ್ಲೆ ಕಲ್ಯಾಣವೆಂದೆ ಕರೆಯುವುದು ವಾಡಿಕೆಯಾಗಿತ್ತು. ಕರ್ನಾಟಕ ರಾಜ್ಯ ಏಕೀಕರಣಕ್ಕೂ ಮೊದಲು ಅದಕ್ಕೆ ಬಸವ ಕಲ್ಯಾಣವೆಂದು ಕರೆಯಲು ಶಿಫಾರಸು ಮಾಡಲಾಯಿತು. 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲಿ ಪವಿತ್ರ ಕಲ್ಯಾಣ ಹೇಗಿತ್ತೆಂದು ತಿಳಿದುಕೊಳ್ಳಲು ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ರಚಿಸಿದ ಈ ವಚನವೊಂದು ಸಾಕ್ಷಿಯಾಗುತ್ತದೆ; ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್…

0 Comments

ಶೋಷಣೆಯ ಮಾಧ್ಯಮವಾಗಿ ದಾನ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.ಸುಳಿದು ಬೀಸುವ ವಾಯು ನಿಮ್ಮ ದಾನ.ನಿಮ್ಮ ದಾನವನುಂಡು ಅನ್ಯರ ಹೊಗಳುವಕುನ್ನಿಗಳೆನೇನೆಂಬೆ, ರಾಮನಾಥ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-266/ವಚನ ಸಂಖ್ಯೆ-735) ಈ ವಚನದಲ್ಲಿ ವಚನಕಾರ ಜೇಡರ ದಾಸಿಮಯ್ಯನವರು ದಾನದ ನಿಜವಾದ ಅರ್ಥ ಯಾವುದೆಂದು ಪ್ರಶ್ನಿಸುತ್ತಾರೆ. ಭೂಮಿ (ಇಳೆ), ಬೆಳೆ, ಗಾಳಿ, ನೀರು, ಪ್ರಕೃತಿ ಇವೆಲ್ಲವೂ ಸೃಷ್ಠಿಕರ್ತನಾದ ಪರಶಿವನ ದಾನ, ದೇಣಿಗೆಗಳು. ಯಾವುದನ್ನೂ ಮಾನವರು ಸೃಷ್ಟಿಸಿಲ್ಲ. ಆದಾಗ್ಯೂ ದೇವರು ಕೊಟ್ಟಿದ್ದನ್ನು ತನ್ನದೆಂದು ಅಹಂಕಾರ ಪಡುವ ಹಾಗೂ ಉದಾರತೆಯಿಂದ ಮೆರೆಯುತ್ತ, ಹೊಗಳಿಸಿಕೊಳ್ಳುವುದು ದುರಹಂಕಾರಿಗಳ ಸ್ವಭಾವವಾಗಿದೆ ಎಂದು ಹೇಳುತ್ತಾರೆ. ದೇವರು ದಯಪಾಲಿಸಿದ ದಾನವನ್ನೇ ಮತ್ತೆ ದೇವರಿಗೆ…

0 Comments

ಹಸನಾದ ಮನಕೆ ಶಿವದಾರ ತೋಡಿಸಿದ ಮೇದಾರ ಕೇತಯ್ಯ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಸಮಾಜದಲ್ಲಿ ಧರ್ಮ ಎನ್ನುವ ಪರಿಕಲ್ಪನೆ ಧಾರಣ ಶಕ್ತಿಯಾಗಿ ನಮ್ಮನ್ನು ಹಿಡಿದಿಡಲು ಪ್ರಯತ್ನಿಸುತ್ತದೆ. ವರ್ಗ, ವರ್ಣ, ಸೌಹಾರ್ದತೆ, ಸಹಬಾಳ್ವೆ ನಮ್ಮನ್ನು ವ್ಯಾಖ್ಯಾನಿಸುವತ್ತ ಧಾವಿಸುತ್ತವೆ. ವಚನಗಳ ತಾತ್ವಿಕ ಮೀಮಾಂಸೆ ಭಕ್ತ ಮತ್ತು ಶರಣ ಸಂಬಂಧದಲ್ಲಿ ಧ್ಯಾನಸ್ತ ಮನಸ್ಸಿನ ಒಳ ಆವರಣವಾಗಿದೆ. ಕಾಯಕದ ಮೂಲಕ ದೇವರನ್ನು ಕಾಣುವ ಶ್ರಮ ಸಂಸ್ಕೃತಿಗೆ ನ್ಯಾಯವನ್ನು ಒದಗಿಸುವ ಎತ್ತರಿಸುವ ಪೂಜಿಸುವ ಸಂಸ್ಕೃತಿ ಎಂದರೆ ಶರಣರದು. ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಶರಣ ಮೇದಾರ ಕೇತಯ್ಯನವರು ಬಸವಣ್ಣನವರ ಆಪ್ತರೆಂದು ಜನಪದ ಮತ್ತು ಶರಣ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ. ಬಸವಣ್ಣನವರನ್ನು ಗುರುವಾಗಿ ಜಂಗಮ ದಾಸೋಹದಲ್ಲಿ ತಮ್ಮನ್ನು ಸಮರ್ಪಸಿಕೊಂಡ ಶರಣರು ಇವರು.…

0 Comments

ಮೂಢತ್ವದ ತಲೆಯನ್ನು ವಚನದ ಕತ್ತಿಯಿಂದ ಸ್ವಚ್ಛ ಮಾಡಿದ ಶರಣ ಹಡಪದ ಅಪ್ಪಣ್ಣ | ಶ್ರೀ. ಶರೀಫ ಚಿಗಳ್ಳಿ, ಹುಬ್ಬಳ್ಳಿ.

ಕ್ರಾಂತಿಕಾರಿ ಶರಣ ಹಡಪದ ಅಪ್ರಪಣ್ಣನವರ ಒಂದು ನೆನಪು ... ... ವಚನ ಚಳುವಳಿಯ ಹರಿಕಾರ, ಸಾಮಾಜಿಕ ಕ್ರಾಂತಿಯ ರೂವಾರಿ ಜಗಜ್ಯೋತಿ ಬಸವೇಶ್ವರರ ಆಪ್ತ ಕಾರ್ಯದರ್ಶಿಯಾದ ಹಡಪದ ಅಪ್ಪಣನವರು ಅತ್ಯುತ್ತಮ ವಚನಕಾರರಾಗಿದ್ದರು. 12 ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಖ್ಯಾತವಾಗಿದ್ದ ಅನುಭವ ಮಂಟಪದಲ್ಲಿ ಇವರು ಸಕ್ರೀಯ ಸದಸ್ಯರಾಗಿದ್ದರು. ಇವರು ಬಸವಣ್ಣನವರ ಬಾಲ್ಯದ ಒಡನಾಡಿಗಳಲ್ಲಿ ಒಬ್ಬರಾಗಿದ್ದರು. ಅಂದು ಹಡಪದ ಅವರ ಮುಖ ನೋಡಿದರೆ ಕೆಟ್ಟದಾಗುತ್ತದೆ ಎನ್ನುವ ಕಾಲದಲ್ಲಿ ಮೂಡ ನಂಬಿಕೆ ಹೊಡೆದೋಡಿಸಲು ಸ್ವತಃ ಬಸವಣ್ಣನವರು ಮಂತ್ರಿಯಾಗಿದ್ದಾಗ ನನ್ನನ್ನು ನೋಡಲು ಬರುವವರು ಮೊದಲು ಹಡಪದ ಅಪ್ಪಣ್ಣನವರ ಮುಖ ನೋಡಿ ಬನ್ನಿ…

0 Comments

ವಚನ – ಸಾಂಸ್ಕೃತಿಕ ತಲ್ಲಣಗಳು | ಡಾ. ನಟರಾಜ ಬೂದಾಳು, ತುಮಕೂರು.

ಲೇಖನ ಕೃಪೆ: https://bayalu.co.in/ವಚನ-ಸಾಂಸ್ಕೃತಿಕ-ತಲ್ಲಣಗಳು/ ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಈಗ ನಿವೃತ್ತರು. ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ‘ಮೂಲಮಧ್ಯಮಕಾರಿಕಾ’ವನ್ನು ಕನ್ನಡಕ್ಕೆ ಅನುವಾದಿಸಿದವರು. ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು, ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಚನಗಳನ್ನು ಏಕೆ ಓದುತ್ತಿದ್ದೇವೆ ಮತ್ತು ಹೇಗೆ ಓದುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನು ಇದಿರಾಗದೆ ಗತ್ಯಂತರವಿಲ್ಲ. ವಚನಗಳನ್ನು…

0 Comments

ಮರ್ತ್ಯಕ್ಕೆ ಗುರುವಾಗಿ ಬಂದ ಬಸವಣ್ಣನವರು | ಡಾ. ಸತೀಶ ಕೆ. ಇಟಗಿ,ಮುದ್ದೇಬಿಹಾಳ.

ನಮಃ ಶಿವಾಯ ಲಿಂಗವು,ಓಂ ನಮಃ ಶಿವಾಯ ಬಸವಣ್ಣನು.ನೀನೆ ಎನ್ನ ಮನಸ್ಥಲದಲ್ಲಿ ನಿಂದುಬೆಳಗಿ ತೋರಿದೆಯಾಗಿ,ಇದು ಕಾರಣ, ಕೂಡಲಚೆನ್ನಸಂಗಯ್ಯಆದಿಯಾಧಾರವಿಲ್ಲದಂದು“ಓಂ ನಮಃ ಶಿವಾಯ” ಎನುತಿರ್ದೆನು.(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-10/ವಚನ ಸಂಖ್ಯೆ-16) ಈ ವಚನದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣನವರು, “ನಮಃ ಶಿವಾಯ” ವೇ ಶಿವಲಿಂಗ ಮಂತ್ರದ ಸ್ವರೂಪ, ಬಸವಣ್ಣನವರೂ ಅದೇ “ಓಂ ನಮಃ ಶಿವಾಯ” ತತ್ವದ ಪ್ರತಿರೂಪ. ಮನಸ್ಸಿನೊಳಗಣ ಅಂಧಃಕಾರತ್ವ ಹಾಗೂ ಅಜ್ಞಾನವನ್ನು ಹೋಗಲಾಡಿಸಲು ಇದೇ ಮಂತ್ರ ನೆರವಾಗಿದ್ದು, ಜ್ಞಾನದ ಬೆಳಕನ್ನು ತೋರಿಸುತ್ತದೆ. ಅದಕ್ಕಾಗಿ ನಮಃ ಶಿವಾಯ ಮಂತ್ರದೊಂದಿಗೆ ಬಸವಣ್ಣನವರೂ ಸಹ, ಭಕ್ತನ ಮನದ ಮುಂದನ ಕತ್ತಲು ಹೋಗಲಾಡಿಸಲು ಎರಡೂ ಒಂದೇ ಆಗಿವೆ…

0 Comments

ಶರಣೆ ಕಾಲಕಣ್ಣಿಯ ಕಾಮಮ್ಮ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಸಂಕ್ಷಿಪ್ತ ಪರಿಚಯ:ಲಿಂಗ ತಾರತಮ್ಯ ತೀವ್ರವಾಗಿದ್ದ ಕಾಲಘಟ್ಟದಲ್ಲಿ ಮಹಿಳೆಯಲ್ಲಿ ತಾನೂ ಒಂದು ಚೇತನ ಎಂಬ ಅರಿವನ್ನು ಹುಟ್ಟು ಹಾಕಿದ್ದು 12 ನೇ ಶತಮಾನದ ಕಾಲ. ಇದೊಂದು ಅರಿವಿನ ಸ್ಫೋಟ. ಇದೇ ನಿಜವಾದ ಸ್ತ್ರೀ ಸಮಾನತೆ ಮತ್ತು ಸ್ವಾತಂತ್ರ್ಯದ ದ್ಯೋತಕ. ಮಹಾಮಾನವತಾವಾದಿ ಬಸವಣ್ಣನವರು ಮಹಿಳಾ ಸ್ವಾತಂತ್ರ್ಯದ ಹರಿಕಾರರು. ಶರಣೆ ಕಾಲಕಣ್ಣಿಯ ಕಾಮಮ್ಮನವರು 12 ನೇ ಶತಮಾನದಲ್ಲಿ ಜೀವಿಸಿದ್ದ ಶರಣೆಯಾಗಿದ್ದಾರೆ. ಇವರು ದಲಿತ ಸಮುದಾಯದ ಮಹಿಳೆ. ಕೊರವ, ಕೊಂಚೆಕೊರವ ಸಮುದಾಯದಿಂದ ಬಂದವರು. ಅಂದು ಈ ಜನಾಂಗವನ್ನು ಪಶುಗಳಿಗಿಂತ ಕೀಳಾಗಿ ಕಾಣುತ್ತಿದ್ದರು. ದಲಿತ ಮಹಿಳೆಯರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿತ್ತು. ಇಂತಹ ಮಹಿಳೆಯರಿಗೆ ಅರಿವನ್ನು…

0 Comments

ಬಸವಣ್ಣನವರ ವಚನ ವಿಶ್ಲೇಷಣೆ; ಹಂಜರಬಲ್ಲಿತ್ತೆಂದು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ,ಎಂದೆಂದೂ ಅಳಿಯೆನೆಂದುಗುಡಿಗಟ್ಟಿದೆಯಲ್ಲಾ, ನಿನ್ನ ಮನದಲ್ಲಿ.ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆಕೂಡಲಸಂಗಮದೇವನಲ್ಲದೆ?(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-46/ವಚನ ಸಂಖ್ಯೆ-163) ವಚನ ಚಳುವಳಿಯ ತಾತ್ವಿಕ ಚೌಕಟ್ಟುಗಳು ರೂಪಕ ಮತ್ತು ಪ್ರತಿಮೆಗಳ ಮೇರು ಸಾದೃಶ್ಯವನ್ನು ಬಿಂಬಿಸುತ್ತವೆ. ಗಿಳಿ ಎಂಬ ತಾತ್ವಿಕ ಪರಿಕಲ್ಪನೆ ಜೀವಾತ್ಮದ ಶಕ್ತಿಯಾಗಿ ಜ್ಞಾನಾನುಸಂಧಾನ ಬಯಸುತ್ತದೆ. ಬಸವಣ್ಣನು ಪ್ರಭುವಿನಂತೆ ಬೆರಗನ್ನು ಮುಂದೆ ಮಾಡುವುದಿಲ್ಲ. ಭಕ್ತನಾಗಿಯೇ ಬೆರಗನ್ನು ಅವಲೋಕಿಸುತ್ತಾನೆ. ಮಾಯೆಗೆ ವಶವಾದ ಅಜ್ಞಾನಕ್ಕೆ ಎಚ್ಚರಿಕೆಯನ್ನು ಕೊಡುತ್ತಾ ಅಪ್ಪಿಕೊಳ್ಳುತ್ತಾ “ಹಂಜರ ಬಲ್ಲಿತ್ತೆಂದು ಅಂಜದೆ” ಎಂದು ಅರಿವು ಮತ್ತು ಮಾಯೆಯ ಮಧ್ಯದಲ್ಲಿ ಜೀವಾತ್ಮವೆಂಬ ಗಿಳಿಯು ವಾಸವಾಗಿದೆ. ಈ ದೇಹವು ನಿಸರ್ಗದ ಸಂವೇದನೆಗಳನ್ನು ಅಂತರ್ಗತವಾಗಿ…

0 Comments

ಲೋಕದ ಡೊಂಕ‌ ನೀವೇಕೆ ತಿದ್ದುವಿರಿ| ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಲೋಕದ ಡೊಂಕ‌ ನೀವೇಕೆ ತಿದ್ದುವಿರಿ?ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-124) ೧೨ ನೇ  ಶತಮಾನದ ವಚನ ಸಾಹಿತ್ಯ ಅಂದು ವೈಜ್ಞಾನಿಕ ಮನೋಭಾವದ ವೈಚಾರಿಕತೆಯನ್ನು ಹುಟ್ಟು ಹಾಕಿದ ಕಾಲವದು. ಭಕ್ತಿ ಸಾಹಿತ್ಯದ ಜೊತೆಗೆ ಸಾಮಾಜಿಕ ಚಿಂತನೆಯನ್ನು ಹೇಳಿದ ಶರಣರು ಸಮಾಜವನ್ನು ತಮ್ಮ ಕುಟುಂಬವೆಂದು ಸ್ವೀಕರಿಸಿದ್ದರು. ಹೀಗಾಗಿ ಲೋಕದ ತುಡಿತ ಆಶಯಗಳನ್ನು ತಮ್ಮದಾಗಿಸಿಕೊಂಡರು. ಲೋಕವೆಂದಾಗ ಸಮಾಜ-ಜನರ ನಡುವಿನ ಸಂಬಂಧ  ಸಾಮಾಜಿಕ ಸಮಸ್ಯೆಗಳಾಗಿರುತ್ತವೆ. ಲೋಕದ ಜನರ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬ ಅವಲೋಕನ ಬಹಳ ಮುಖ್ಯವಾಗುತ್ತದೆ. ಲೋಕ ಕಲ್ಯಾಣದ…

0 Comments

ಶರಣ ಉಳಿಯುಮೇಶ್ವರ ಚಿಕ್ಕಯ್ಯನವರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಸಂಕ್ಷಿಪ್ತ ಪರಿಚಯ:ಉಳಿಯುಮೇಶ್ವರ ಚಿಕ್ಕಯ್ಯ, ಉಳಿಯುಮೇಶ್ವರ ಚಿಕ್ಕಣ್ಣ ಎಂಬ ಹೆಸರುಗಳಿಂದ ಗುರುತಿಸಿಕೊಂಡ ಇವರು 12 ನೇ ಶತಮಾನದ ವಿಶ್ವಗುರು ಬಸವಣ್ಣನವರ ಸಮಕಾಲೀನ ಶರಣರಾಗಿದ್ದಾರೆ. ಇವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ “ದೇವರಗುಡಿ” ಎಂಬ ಗ್ರಾಮದವರು. ಇಲ್ಲಿ ದೊರೆತಿರುವ ಒಂದು ಶಾಸನದಲ್ಲಿ 5 ದತ್ತಿಗಳ ಮಾಹಿತಿ ಇದ್ದು ಅದರಲ್ಲಿ 3, 4, 5 ದತ್ತಿಗಳಲ್ಲಿ ಈ ಶರಣರ ಕುರಿತು ಉಲ್ಲೇಖವಿದೆ. 1202 ರ ಶಾಸನವು ಇವರ ಕುರಿತು ಉಲ್ಲೇಖಿಸಿದರೆ 1279 ನೇ ಇಸ್ವಿಯ ಕಲ್ಲೇದೇವರಪುರ ಶಾಸನದಲ್ಲಿ ಅನೇಕ ಶರಣರ ಹೆಸರುಗಳ ಮಧ್ಯದಲ್ಲಿ ಇವರ ಹೆಸರು ಇರುವುದು ಕಂಡುಬಂದಿದೆ. ಕಾಳಾಮುಖ ಆಚಾರ್ಯರೂ,…

1 Comment