ಎಣ್ಣೆ ಬೇರೆ ಬತ್ತಿ ಬೇರೆ | ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.
ಎಣ್ಣೆ ಬೇರೆ ಬತ್ತಿ ಬೇರೆ,ಎರಡೂ ಕೂಡಿ ಸೊಡರಾಯಿತ್ತು.ಪುಣ್ಯ ಬೇರೆ ಪಾಪ ಬೇರೆ,ಎರಡೂ ಕೂಡಿ ಒಡಲಾಯಿತ್ತು.ಮಿಗಬಾರದು ಮಿಗದಿರಬಾರದುಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು.ಕಾಯಗುಣವಳಿದು ಮಾಯಾ ಜ್ಯೋತಿವಾಯು ಕೂಡುವ ಮುನ್ನಭಕ್ತಿ ಮಾಡಬಲ್ಲಾತನೆ ದೇವ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021/ವಚನ ಸಂಖ್ಯೆ-1239) ಒಂದು ಶಬ್ದಾತೀತವಾದ ಅನುಭಾವಿಕ ವಿಷಯವನ್ನು ನಿರೂಪಿಸುವಲ್ಲಿ ಎರಡು ವೈರುಧ್ಯತೆಗಳ ಮಧ್ಯೆ ಒಂದು ಬೆಡಗನ್ನು ಸೃಷ್ಟಿಸಿ ತನ್ಮೂಲಕ ವಿಷಯ ಪ್ರಸ್ತಾವನೆ ಮಾಡುವಲ್ಲಿ ಅಲ್ಲಮ ಪ್ರಭುಗಳು ನಿಸ್ಸೀಮರು. ಸೃಷ್ಟಿಯ ಸಕಲ ಚರಾಚರಗಳಲ್ಲಿಯೂ ದೃಷ್ಟಿಗೆ ಅಗೋಚರವಾದ ಒಂದು ಸೂಕ್ಷ್ಮ ಸಂಬಂಧವಿದೆ. ಅದನ್ನೇ ಅಲ್ಲಮ ಪ್ರಭುಗಳು ಹೀಗೆ ವ್ಯಕ್ತಪಡಿಸಿದ್ದಾರೆ. ಎತ್ತಣ ಮಾಮರ ಎತ್ತಣ ಕೋಗಿಲೆ,ಎತ್ತಣಿಂದೆತ್ತ ಸಂಬಂಧವಯ್ಯಾ.ಬೆಟ್ಟದ ನೆಲ್ಲಿಕಾಯಿ…





Total views : 69455