ಶಿವಶರಣ ಬಾಲಸಂಗಣ್ಣನವರ ವಚನ ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.
ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ.ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ.ಸುಖವನನುಭವಿಸುವವು ಇಂದ್ರಿಯಂಗಳಲ್ಲ.ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದುಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದುಬೇರೋ, ಮರನೋ? ಮೀರಿ ಬೆಳೆದ ಫಲವೋ?ಎಂಬುದನರಿದು ತಿಳಿದಲ್ಲಿ,ಅರಿದರುಹಿಸಿಕೊಂಬ ನಿರಿಗೆಯ ಬಲ್ಲ,ಆತ ಕಮಠೇಶ್ವರಲಿಂಗವನೊಡಗೂಡಿದ ಶರಣ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-109/ವಚನ ಸಂಖ್ಯೆ-245) ಶರಣ ಬಾಲಸಂಗಣ್ಣನವರು 12 ನೇ ಶತಮಾನದ ಒಬ್ಬ ಶರಣ ವಚನಕಾರ. ಇವರ ಬಗ್ಗೆ ಸಂಪೂರ್ಣ ಮತ್ತು ಖಚಿತವಾದ ಮಾಹಿತಿಗಳು ದೊರೆಯದಿದ್ದರೂ ಕೆಲವು ಪುರಾಣಗಳು, ಕಾವ್ಯಗಳು ಮತ್ತು ವಚನಗಳ ಆಧಾರದ ಮೇಲೆ ತಿಳಿದುಬರುವ ಸಂಗತಿಗಳೆಂದರೆ, ಬಾಲಸಂಗಣ್ಣನವರನ್ನು ಬಾಲಸಂಗಯ್ಯ ಎಂದೂ ಕರೆಯಲಾಗುತ್ತಿತ್ತು. ಕೆಲವು ಪ್ರಾಚೀನ ಗ್ರಂಥಗಳು ಇವರನ್ನು…





Total views : 69455