ವ್ಯೋಮಕಾಯ ಅಲ್ಲಮಪ್ರಭುಗಳ ವಚನ- ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹಾಲ ನೇಮವ ಹಿಡಿದಾತ  ಬೆಕ್ಕಾಗಿ ಹುಟ್ಟುವ,ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ,ಅಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ,ಪುಷ್ಪದ ನೇಮವ ಹಿಡಿದಾತ  ತುಂಬಿಯಾಗಿ ಹುಟ್ಟುವ,ಇವು ಷಡುಸ್ಥಲಕ್ಕೆ ಹೊರಗು.ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-45/ವಚನ ಸಂಖ್ಯೆ-120) ಕನ್ನಡ ಸಾಹಿತ್ಯ ಮತ್ತು ವಚನ ಸಂಸ್ಕೃತಿಯನ್ನು ಬಹು ಎತ್ತರಕ್ಕೆ ಒಯ್ದ ಶರಣ ಬೆಡಗಿನ ಭಾಷೆಯ ಹರಿಕಾರ ಅಲ್ಲಮಪ್ರಭುಗಳಾಗಿದ್ದಾರೆ. ವಚನ ಚಂದ್ರಿಕೆಯಲ್ಲಿ ಇವರ 1612 ವಚನಗಳಿವೆ. ಗುಹೇಶ್ವರ, ಗೊಹೇಶ್ವರ ಅಲ್ಲಮಪ್ರಭುಗಳ ವಚನಾಂಕಿತವಾಗಿದೆ. ಬೆಡಗಿನ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಬಹು ಕಠಿಣವೆಂಬ  ಮಾತಿದೆ. ವಚನಗಳಲ್ಲಿ ಬರುವ ರೂಪಕ ಮತ್ತು ಬೆಡಗಿನ…

0 Comments

ಕಡಕೋಳ ಮಡಿವಾಳಪ್ಪನವರ ಕಿರು ಪರಿಚಯ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಅಫ್‌ಜಲಪುರ ತಾಲೂಕಿನ ಚಿಕ್ಕಹಳ್ಳಿ ಬಿದನೂರಿನಲ್ಲಿ ಮಡಿವಾಳಪ್ಪನವರು ಹುಟ್ಟಿದರು. ತಾಯಿ ಗಂಗಮ್ಮ. ಇವರು ತಂದೆಯ ಹೆಸರನ್ನು ಬಚ್ಚಿಟ್ಟರು. ಮಡಿವಾಳಪ್ಪನವರಿಗೆ ಇದು ಒಂದು ದೊಡ್ಡ ಪ್ರಶ್ನೆ ಆಯ್ತು. ಇದೆ ಮುಂದೆ ಅವರಿಗೆ ಸತ್ವ ಪರೀಕ್ಷೆ ಆಗಿ ಪರಿಣಮಿಸಿತು.  ಮಡಿವಾಳಪ್ಪನವರು ಬಾಲಕರಾಗಿದ್ದಾಗ ಆಟ ಆಡುವಾಗ ಒಬ್ಬ ಹೆಣ್ಣು ಮಗಳಿಗೆ ಚೆಂಡು ಬಡಿದಿದ್ದಕ್ಕೆ “ಹಾಟ್ಯಾ ಇನ್ನ ತಂದಿ ಇದ್ರ ಎಷ್ಟು ಮೆರೀತಿದ್ದಿಯೋ ಏನೋ” ಅಂತ ಧ್ವನಿ ಎತ್ತರಿಸಿ ಒದರಾಡಿದಳು. ಆಕಸ್ಮಿಕವಾಗಿ ಮಡಿವಾಳಪ್ಪನವರ ಮೇಲೆ ಆದ ಈ ಆಘಾತದಿಂದ  ಅವರು ಘಾಸಿಗೊಂಡರೂ ಅವರಲ್ಲಿನ ಚೈತನ್ಯ ಜಾಗೃತವಾಯಿತು. ಆಗ ಕರುಣಿಯಾಗಿ ಮಾರ್ಗ ತೋರಿದವರು ಬಿದನೂರು ಮಠದ…

0 Comments

ವ್ಯೋಮಕಾಯ ಅಲ್ಲಮ ಪ್ರಭುಗಳ “ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ” ವಚನ ವಿಶ್ಲೇಷಣೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ,ಮೇದು ಬಂದೆನೆಂದಡೆ,ಇದ ಕಂಡು ಬೆರಗಾದೆ.ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದರೆ,ಇದ ಕಂಡು ಬೆರಗಾದೆ.ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ,ಇದ ಕಂಡು ಬೆರಗಾದೆ, ಗುಹೇಶ್ವರಾ(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-14/ವಚನ ಸಂಖ್ಯೆ-27) ಅಲ್ಲಮಪ್ರಭುಗಳ ಈ ಬೆಡಗಿನ ವಚನ ಮನುಷ್ಯ ಸ್ವಭಾವದ ಒಳ ಸೂಕ್ಷ್ಮತೆಗಳನ್ನು ಸ್ವಾರಸ್ಯಕರ ಮತ್ತು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಅಜ್ಞಾನದಲ್ಲಿ ಓಲಾಡುವ ಮನಸ್ಸಿಗೆ ಎಚ್ಚರಿಕೆ ಕೊಡುವ ಸಮರ್ಥನೆಯಾಗಿದೆ. ಆಧ್ಯಾತ್ಮದ ಬೆಳಕನ್ನು ಉಜ್ವಲಗೊಳಿಸುವ ಸಮರ್ಥನೆಯದು. ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಆ ಕಾಲದ ತಾತ್ವಿಕ ಪರಂಪರೆಗಳ ಅಸ್ತಿತ್ವ ಮತ್ತು ಅನಿರೀಕ್ಷಿತವಾದ ನಿಗೂಢತೆ…

0 Comments

ಮಾದಾರ ಚನ್ನಯ್ಯನವರ ಜಯಂತಿ | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.

ಮಾದಾರ ಚನ್ನಯ್ಯನವರ ಜಯಂತಿ ಅಂಗವಾಗಿ ಅವರನ ಸಾತ್ವಿಕ ಬದುಕು, ನಡೆ ನುಡಿ ಸಿದ್ಧಾಂತ ಕುರಿತು ಲೇಖನ. ಇದ್ದು ಇರದಂತೆ, ಹೊದ್ದೂ ಹೊದೆಯದಂತೆ, ಸದ್ದು ಗದ್ದಲವಿಲ್ಲದೆ, ನಿರಾಳವಾಗಿ, ನಿತ್ಯ ತೃಪ್ತನಾಗಿ ಬದುಕಿದ್ದ ಚನ್ನಯ್ಯನವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ಕಂಚಿಪುರದಲ್ಲಿ. “ನಡೆ ನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ” “ಆಚಾರವೇಕುಲ, ಅನಾಚಾರವೇ ಹೊಲೆಯಂದು ಅರಿತು ಶ್ರಮ ಗೌರವ ಅಳವಡಿಸಿಕೊಂಡ ಭಕ್ತ ಶ್ರೇಷ್ಠ, ಕಾಯಕನಿಷ್ಠೆಯ ಮೇರು ಶಿಖರವನ್ನು ಅಲಂಕರಿಸಿದ ಶರಣ ಚನ್ನಯ್ಯನವರು 12 ನೇ ಶತಮಾನದ ಬಸವ ಸಂಕುಲದ ಆದರ್ಶ ಪುರುಷ. ಮಾದಾರ ಚನ್ನಯ್ಯನವರು ತಮಿಳುನಾಡಿನ ಕಂಚಿ ಪಟ್ಟಣದಲ್ಲಿ ಚೋಳ ರಾಜನ…

0 Comments

ಶರಣ ಮೋಳಿಗೆ ಮಾರಯ್ಯನವರ ವಚನ – ನಿರ್ವಚನ | ಶ್ರೀ. ಗುರುಪ್ರಸಾದ ಕುಚ್ಚಂಗಿ, ಬೆಂಗಳೂರು.

ಆನೆ ಕುದುರೆ ಭಂಡಾರವಿರ್ದಡೇನೊ?ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ,ನಿಃಕಳಂಕ ಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-560/ವಚನ ಸಂಖ್ಯೆ-1504) 770 ಅಮರಗಣಂಗಳಲ್ಲಿ ಒಬ್ಬರು ಮೋಳಿಗೆ ಮಾರಯ್ಯ ಶರಣರು. ಮೂಲತ ಇವರು ಕಾಶ್ಮೀರದ ಮಾಂಡವ್ಯಪುರದ ಅರಸರು. ಬಸವಣ್ಣನವರ ಕೀರ್ತಿವಾರ್ತೆ ಕೇಳಿ ಕಲ್ಯಾಣಕ್ಕೆ ಬಂದು ಆ ಕಾಯಕ ನೆಲದಲ್ಲಿ ಮೋಳಿಗೆ (ಕಟ್ಟಿಗೆ) ಕಾಯಕಗೈದು ಕಲ್ಯಾಣದಲ್ಲಿಯೆ ಲಿಂಗೈಕ್ಯರಾದರು. ಇವರ ಮಡದಿ ಮಹಾದೇವಿ, ಮೋಳಿಗೆ ಮಹಾದೇವಿಯೆಂದೆ ಪ್ರಸಿದ್ಧರಾಗಿರುವರು.…

0 Comments

ಶರಣ ಅಂಬಿಗರ ಚೌಡಯ್ಯನವರ ವಚನದ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25) ಹನ್ನೆರಡನೆಯ ಶತಮಾನದ ಅಂದಿನ ವ್ಯವಸ್ಥೆಯ ಭಾಗವಾಗಿದ್ದ ತೋರಿಕೆಯ ಭ್ರಮಾಧೀನ ಆಚರಣೆಗಳನ್ನು ಶರಣರು ಅಲ್ಲಗಳಿದಿದ್ದಾರೆ. ಅದಕ್ಕಾಗಿ ಉಪಮೆಗಳನ್ನು, ನಿದರ್ಶನಗಳನ್ನು ಬಳಸಿ ಸಾಮಾನ್ಯರಿಗೆ ತಿಳಿಯುವಂತೆ ಸರಳವಾಗಿ, ಸಹಜವಾಗಿ ವಚನಗಳ ಮೂಲಕ ತಿಳಿಸಲು ಯತ್ನಿಸಿದ್ದಾರೆ. ಮಾಯೆಯಲ್ಲಿ ಮುಳುಗಿದ ಮನುಷ್ಯನ ಹುಡುಕಾಟ ಯಾವತ್ತೂ ಹೊರಗಿನ ವಸ್ತು, ವಿಷಯಗಳ ಮೇಲೆಯೇ ಇದೆ. “ತಮ್ಮೊಳಿದ್ದ ಮಹಾಘನವ ಅರಿಯರು” ಎಂಬ ಶರಣ ನುಡಿಯು ಮತ್ತೆ ಮತ್ತೆ ಇದೇ ವಿಷಯದತ್ತ…

0 Comments

ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀ. ಎನ್. ಸಿ. ಶಿವಪ್ರಕಾಶ್, ಮಸ್ಕತ್, ಒಮಾನ್.

ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25) ಈ ವಚನದ ಮುಖೇನ ಶರಣರು ತಮ್ಮ ದೇಹದಲ್ಲಿ ಅಡಗಿರುವ ಲಿಂಗವನ್ನು ಸಾಕ್ಷಾತ್ಕರಿಸುವ ನಿಖರವಾದ ಪರಿಯ ಬಗ್ಗೆ ವಿವರಿಸಿದ್ದಾರೆ. ನಮ್ಮ ದೇಹದಲ್ಲಿರುವ ಲಿಂಗ ಅಡವಿಯಲ್ಲಿ ಬೆಳೆಯುವ ಕಂಟಿ ಗಿಡವಲ್ಲ. ದಟ್ಟಾರಣ್ಯದಲ್ಲಿದ್ದಾರೂ ತನ್ನ ಕಾಯಿಗಳು ಬೇಸಿಗೆಯ ಬಿಸಿಲಿಗೆ ಸಿಡಿಯುವ ಕಾರಣದಿಂದಾಗಿ,  ಕಂಟಿ ಗಿಡ ತನ್ನ ಇರುವನ್ನು ಸುಲಭವಾಗಿ, ತನ್ನನ್ನು ಹುಡುಕುವ ವ್ಯಕ್ತಿಗೆ, ಬಿಟ್ಟು ಕೊಡುತ್ತದೆ. ಹಾಗೆಯೇ ನಮ್ಮೊಳಗಿನ ಲಿಂಗ, ಮಡು (ಸಣ್ಣಕೆರೆ…

0 Comments

ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25) ಕಾನನದ ಅತ್ಯಂತ ಸುಂದರ ಪ್ರಕೃತಿಯಲ್ಲಿ, ನೈಸರ್ಗಿಕ ಸೊಬಗಿನ ತಾಣದಲ್ಲಿ ಅತ್ಯುತ್ತಮ ಸಂಪತ್ತು ಇರುವುದೇ ಹೊರತು ಸಿಡಿದು ಬೀಳುವ ಮುಳ್ಳಿನ ಕಂಟಿಯಲ್ಲ. ಭೌತಿಕವಾಗಿ ಕಾಣುವ ವಸ್ತು ತಾನಲ್ಲ. ಅದೇ ರೀತಿ ಸಂಸಾರವೆಂಬ ಮಡುವಿನೊಳಗೆ ಸಿಗುವುದು ಮೋಹವೆಂಬ ಮೀನಲ್ಲ, ಮುಕ್ತಿ ಮಾರ್ಗವನ್ನರಸಲು ತಪಸ್ಸು ಮಾಡುವೆನು ಎಂದು ಕಷಾಯ ವಸ್ತ್ರಗಳನ್ನು ಧರಿಸುವ ಢಾಂಬಿಕರ ತರಹ ನನಗೆ ವೇಳೆ ಇಲ್ಲ. ನಿಜವಾದ ವ್ಯಕ್ತಿಯನ್ನು ಪರೀಕ್ಷಿಸಲು…

0 Comments

ಬಸವಣ್ಣನವರ ಸ್ವಗತ | ಶ್ರೀ. ಮಹಾಂತೇಶ ನವಲಕಲ್‌, ಕಲಬುರಗಿ.

ಕಲ್ಯಾಣದಲ್ಲಿ ರಾಜಪ್ರಭುತ್ವ ನಮ್ಮನ್ನು ಉಚ್ಚಾಟನೆಗೊಳಿಸಿತ್ತು. ಬಿಜ್ಜಳ ಮಹಾರಾಜರು ಆರು ತಿಂಗಳ ಕಾಲ ನಾನು ಇಲ್ಲಿ ಇರಬಾರದು ಎಂದು ಆಜ್ಞಾಪಿಸಿದ್ದರು. ಆದರೆ ಅವರ ಮಗ ಸೋವಿದೇವ ನನಗೆ ಜೀವಿತಾವಧಿಯಲ್ಲಿ ಕಲ್ಯಾಣಕೆ ಬರಬಾರದು ಎನ್ನುವ ಸುಗ್ರೀವಾಜ್ಞೆ ಹೊರಡಿಸಿದ್ದ. ನಾನು ಅಪ್ಪಣ್ಣಗಳು, ಮಸಣಯ್ಯನವರು ಗುರುಬಸವ ಮಹಾಂತರಂತಹ ಅನೇಕ ತೊಂಬತೈದು ಶರಣರು ಆರಂಭದಲ್ಲಿ ನಮ್ಮ ಕಲ್ಯಾಣ ನಿರ್ಗಮನದ ಪ್ರಯಾಣದಲ್ಲಿ ಭಾಗವಹಿಸಿದ್ದರೂ ಕೂಡ  ಅವರನ್ನು ಶರಣಧರ್ಮಗಳ ಉಪದೇಶಕ್ಕಾಗಿ ಆಯಾ ಆಯಾ ಊರುಗಳಲಿ ಬಿಟ್ಟು ನಾನು ಮತ್ತು ಅಪ್ಪಣ್ಣಗಳು ನಡೆಯುತ್ತ ನಡೆಯುತ್ತ   ಬಾಗೇವಾಡಿಗೆ ಬಂದು ನಿಂತಿದ್ದೆವು. ಇಲ್ಲಿಂದ ಸಂಗಮ ಇನ್ನೂ ಐವತ್ತು ಹರಿದಾರಿಗಳ ದೂರವಿತ್ತು. ಆಗ…

0 Comments

ನುಲಿಯ ಚಂದಯ್ಯನವರ ವಚನ – ನಿರ್ವಚನ | ಶ್ರೀಮತಿ. ಸುವರ್ಣ ಗೋಲಗೇರಿ, ರಾಯಚೂರು.

ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.ಗುರುವಾದಡೂ ಚರಸೇವೆಯ ಮಾಡಬೇಕು.ಲಿಂಗವಾದಡೂ ಚರಸೇವೆಯ ಮಾಡಬೇಕು.ಜಂಗಮವಾದಡೂ ಚರಸೇವೆಯ ಮಾಡಬೇಕುಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು. ಅನುಭವ ಮಂಟಪದ ಅನುಭಾವಿಯಾಗಿ, ಕಾಯಕ ತತ್ವದೊಳಗೆ ನಿಷ್ಠೆಯಿಟ್ಟು, ಕಲ್ಯಾಣ ಕ್ರಾಂತಿಯ ನಂತರ ಅಕ್ಕನಾಗಮ್ಮ, ಚೆನ್ನಬಸವಣ್ಣ ಮುಂತಾದ ಶರಣರೊಂದಿಗೆ ಉಳುವಿಯ ಕಡೆಗೆ ಹೊರಟ ಶರಣರಿವರು. ಜನ್ಮಸ್ಥಳ ವಿಜಾಪುರ ಜಿಲ್ಲೆಯ ಶಿವಣಗಿ ಗ್ರಾಮ. ಕಾಯಕ ನೆಲೆ ಬಸವಕಲ್ಯಾಣ. ಲಿಂಗೈಕ್ಯಗೊಂಡ ಸ್ಥಳ ಚಿತ್ರದುರ್ಗ ಜಿಲ್ಲೆಯ ಆರ್. ನುಲೇನೂರು. ಕಾಯಕ ಮೆದೆಹುಲ್ಲು, ಪುಂಡಿಕಟ್ಟಿಗೆಯಿಂದ ಹಗ್ಗ ಹೊಸೆಯುವುದು. ಇವರ ವಚನಾಂಕಿತ “ಚಂದೇಶ್ವರಲಿಂಗ”. ಇವರು ರಚಿಸಿದ ಒಟ್ಟು 48 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ನಿರ್ವಚನ:ಕಾಯಕ ತತ್ವದ ಪರಾಕಾಷ್ಟತೆ…

1 Comment