ಹಡಪದ ಅಪ್ಪಣ್ಣನವರ ವಚನ – ನಿರ್ವಚನ | ಶ್ರೀಮತಿ. ಶಿವಲೀಲಾ ಭೀಮಳ್ಳಿ, ಕಲಬುರಗಿ.

ವಂದನೆಗೆ ನಿಲ್ಲಬೇಡ, ನಿಂದೆಗಂಜಿ ಓಡಲಿಬೇಡ.ಹಿಂದು ಮುಂದು ಆಡಲಿಬೇಡ, ಸಂದೇಹಗೊಳಲಿಬೇಡ.ದ್ವಂದ್ವಬುದ್ಧಿಯ ಕಳೆದು ನಿಂದಿರೆ,ಬಸವಪ್ರಿಯ ಕೂಡಲಚೆನ್ನಬಸವಣ್ಣ.(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-423/ವಚನ ಸಂಖ್ಯೆ-1030) ಬಸವಣ್ಣನವರ ಮಹಾಮನೆಯ ಮೇಲ್ವಿಚಾರಕರಾಗಿ ಅವರಿಗೆ ಅತ್ಯಂತ ಸಮೀಪದಲ್ಲಿದ್ದು ಬಸವಣ್ಣನವರು ಲಿಂಗೈಕ್ಯರಾಗುವತನಕವೂ ಅವರೊಂದಿಗಿದ್ದ ಮಹಾಶರಣರು ಹಡಪದ ಅಪ್ಪಣ್ಣನವರು. ಇವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಮುಸಬಿನಾಳ ಗ್ರಾಮದವರು. ಇವರ ತಂದೆಯ ಹೆಸರು ಚೆನ್ನವೀರಪ್ಪ ಮತ್ತು ತಾಯಿಯವರ ಹೆಸರು ದೇವಕ್ಕಮ್ಮ. ಮಡದಿ ಸುಪ್ರಸಿದ್ಧ ವಚನಕಾರ್ತಿ ಲಿಂಗಮ್ಮ ತಾಯಿ. ಇವರ ಅಂಕಿತನಾಮ “ಬಸವಪ್ರಿಯ ಕೂಡಲ ಚೆನ್ನಬಸವಣ್ಣ”. ಸಿಕ್ಕ ಒಟ್ಟು ವಚನಗಳು 250. ಕಾಯಕ ಕ್ಷೌರಿಕ ವೃತ್ತಿ. ನಿರ್ವಚನ:ಹಡಪದ ಅಪ್ಪಣ್ಣನವರು…

0 Comments

ಕಾಯಕವೇ ಪ್ರಾಣವಾದ ಶರಣ ಮೇದಾರ ಕೇತಯ್ಯನವರು | ಶ್ರೀ. ಗುರುಪ್ರಸಾದ ಕುಚ್ಚಂಗಿ, ಬೆಂಗಳೂರು.

ಪತ್ನಿ: ಸಾತವ್ವೆ.ಕಾಯಕ: ಗವರಿಗೆ / ಬಿದಿರು ಹೆಣೆಯುವ ಕಾಯಕಸ್ಥಳ: ಉಳವಿ ಬೆಟ್ಟ, ಬೇಲೂರು ತಾಲ್ಲೂಕುಜಯಂತಿ: ಬನದ ಹುಣ್ಣಿಮೆಯಂದು. ಲಭ್ಯವಿರುವ ವಚನಗಳ ಸಂಖ್ಯೆ: 18ಅಂಕಿತ: ಗವರೇಶ್ವರಲಿಂಗ. ಬಸವಯುಗದ ಧೃವತಾರೆ ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕಾಯಕ ಜೀವಿ  ಬಸವಣ್ಣನವರ ಜೀವಪರ ಸಾಮಾಜಿಕ ಶೈಕ್ಷಣಿಕ ಹೋರಾಟಕ್ಕೆ ಮನಸೋತು ಬಂದ ಮೇರು ವ್ಯಕ್ತಿತ್ವವೇ ಶಿವಶರಣ ಮೇದಾರ ಕೇತಯ್ಯನವರು. ಇವರು ಬಸವಣ್ಣನವರಿಂದ ಪ್ರಭಾವಿತರಾಗಿ ಅತ್ಯಂತ ಉತ್ಸಾಹಿಗಳಾಗಿ ಶರಣರ ಚಳುವಳಿಯಲ್ಲಿ ಪಾಲ್ಗೊಂಡವರು ಕೇತಯ್ಯ ಶರಣರು. ಇವರು ಬಸವಣ್ಣನವರನ್ನು ಗುರುವಾಗಿ ಸ್ವೀಕರಿಸಿದವರು. ಬಸವಣ್ಣನವರ ಪ್ರಭಾವದಿಂದ ಗುರು-ಲಿಂಗ-ಜಂಗಮದಲ್ಲೇ ನಿಜಸುಖವನ್ನು ಕಂಡವರು. ಭಕ್ತರಾಗಿ, ಶರಣರಾಗಿ  ಕಾಯಕದಲ್ಲೇ ಕೈಲಾಸವನ್ನು ಕಂಡವರು.…

0 Comments

ಕಾಯಕಯೋಗಿ ಶಿವಶರಣ ಮೇದಾರ ಕೇತಯ್ಯನವರು | ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಸಾವಿರಾರು ವರ್ಷಗಳಿಂದ ಬೇರೂರಿದ ವರ್ಣಾಶ್ರಮ, ಅಂಧಶೃಧ್ಧೆ, ಶೋಷಣೆ ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ ಸಾಮಾಜಿಕ ಕ್ರಾಂತಿಯನ್ನು ಮಾಡಿದವರು ಯುಗಪ್ರವರ್ತಕ ಬಸವಣ್ಣನವರು. ಈ ಕ್ರಾಂತಿಯಲ್ಲಿ ಬಸವಣ್ಣನವರ ಜೊತೆಗೆ ಕೈ ಜೋಡಿಸಿದವರು ಅನೇಕ ಶತಮಾನಗಳಿಂದ ಸಮಾಜದ ಅಲಕ್ಷ್ಯಕ್ಕೆ ಒಳಗಾದ ಕೆಳ ವರ್ಗದವರು, ದೀನದಲಿತರು. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ನುಲಿಯ ಚಂದಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಮುಂತಾದವರು. ಅಂತಹ ಅಗ್ರಗಣ್ಯ ಶರಣರಲ್ಲಿ ಮೇದರ ಕೇತಯ್ಯನವರೂ ಕೂಡ ಒಬ್ಬರು. ಬಸವಣ್ಣನವರಿಂದ ಪ್ರಭಾವಿತರಾಗಿ ಅವರನ್ನು ಗುರುವಾಗಿ ಸ್ವೀಕರಿಸಿ ತನು-ಮನ-ಧನಗಳನ್ನು ಗುರು-ಲಿಂಗ-ಜಂಗಮರಲ್ಲಿ ಅರ್ಪಿಸಿ ನಿಜಸುಖವನ್ನ ಕಂಡವರು ಶರಣ ಮೇದಾರ ಕೇತಯ್ಯನವರು. ಶುದ್ಧ…

0 Comments

ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆ? | ಡಾ. ಬಸವರಾಜ ಸಬರದ, ಬೆಂಗಳೂರು.

ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆ? ಇದೊಂದು ಪ್ರಶ್ನೆ. ಆದರೆ ಇಂದು ಇದು ಪ್ರಶ್ನೆಯಾಗಿ ಉಳಿದಿಲ್ಲ. ಬಸವಣ್ಣನವರು ಪುನರ್ಜನ್ಮವನ್ನು ನಂಬಿರಲಿಲ್ಲವೆಂಬುದಕ್ಕೆ ಅನೇಕ ಆಕರಗಳು ಸಿಗುತ್ತವೆ. ಆದರೆ ಕೆಲವರು ಬಸವಣ್ಣನವರ ಪ್ರಕ್ಷಿಪ್ತ ವಚನಗಳನ್ನಿಟ್ಟುಕೊಂಡು ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆಂದು ಹೇಳಿದ್ದಾರೆ. ಬಸವ ತತ್ವದ ಕೇಂದ್ರವಾದ ಭಾಲ್ಕಿ ಹಿರೇಮಠ ಸಂಸ್ಥಾನ ತರುತ್ತಿರುವ "ಶಾಂತಿಕಿರಣ” ಮಾಸಿಕ ಪ್ರತಿಕೆಯಲ್ಲಿ (ಮೇ-2025) “ಬಸವಣ್ಣನವರ ವಚನಗಳಲ್ಲಿ ಜನ್ಮಾಂತರ ವಿಚಾರ" ಎಂಬ ಲೇಖನ ಪ್ರಕಟವಾಗಿದೆ. ಡಾ. ವಿ. ವಿ. ಹೆಬ್ಬಳ್ಳಿ ಎಂಬುವವರು ಈ ಲೇಖನವನ್ನು ಬರೆದಿದ್ದಾರೆ. ಇಂತಹ ಲೇಖನವನ್ನು ಪ್ರಕಟಿಸುವುದರ ಮೂಲಕ ಭಾಲ್ಕಿ ಹಿರೇಮಠ ಸಂಸ್ಥಾನ ಮತ್ತು ಆ ಪತ್ರಿಕೆಯ ಸಂಪಾದಕ…

0 Comments

ಕಾಯಕ ನಿಷ್ಠೆಯ ಅನುಪಮ ಶರಣ ಮೇದಾರ ಕೇತಯ್ಯನವರು | ಡಾ. ದಯಾನಂದ ನೂಲಿ, ಚಿಕ್ಕೋಡಿ.

ಕಾಯಕನಿಷ್ಠೆಯ ಶರಣ ಮೇದಾರ ಕೇತಯ್ಯನವರ ಸ್ಮರಣೋತ್ಸವ ನಿಮಿತ್ತ ಲೇಖನ. ಮೇದಾರ ಕೇತಯ್ಯನವರು ಮಲೆನಾಡಿನ ಬೇಲೂರು ಎಂಬ ಊರಿನವರು. ಅವರ ಧರ್ಮಪತ್ನಿ ಸಾತವ್ವೆ. ಅವರು ಬಿದರಿನ ಕಾಯಕವನ್ನು ಕೈಗೊಂಡಿದ್ದರು. ಪ್ರತಿನಿತ್ಯವೂ ಬೆಟ್ಟಕ್ಕೆ ಹೋಗಿ ಬಿದಿರುಗಳನ್ನು ಕಡಿದುಕೊಂಡು ಬಂದು ಅವುಗಳಿಂದ ಬುಟ್ಟಿ, ಮೊರ ಮೊದಲಾದವನ್ನು ಹೆಣೆದು ಅವುಗಳನ್ನು ಮಾರಿ ಬಂದ ಹಣದಿಂದ ಜೀವನ ಸಾಗಿಸುವುದರ ಜೊತೆಗೆ ಜಂಗಮ ದಾಸೋಹ ಸೇವೆಯನ್ನು ಮಾಡುತ್ತಿದ್ದರು. ಶಿವಾನುಭವ ಮಂಟಪದಲ್ಲಿ ನಡೆಯುತ್ತಿದ್ದ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು. ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಬಸವಣ್ಣ.ಎನ್ನ ಬುದ್ಧಿಗೆ ಗುರುಲಿಂಗವಾದಾತ, ಬಸವಣ್ಣ.ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ, ಬಸವಣ್ಣ.ಎನ್ನ ಮನಕ್ಕೆ ಜಂಗಮಲಿಂಗವಾದಾತ, ಬಸವಣ್ಣ.ಎನ್ನ ಜೀವಕ್ಕೆ ಪ್ರಸಾದಲಿಂಗವಾದಾತ,…

0 Comments

ಜಂಗಮ ಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮ ದ್ರೋಹ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಜಂಗಮ ಎಂಬ ಪದವು ಸಂಸ್ಕೃತ ಮೂಲದ್ದಾಗಿದೆ. ಕನ್ನಡದಲ್ಲಿ ಸಂಚಾರಿ, ಚಲನಶೀಲ ಎನ್ನಲಾಗುತ್ತಿದೆ. ಶಿವ ಅಥವಾ ಚಲನಶೀಲ ಶಕ್ತಿಯೇ ಜಂಗಮ. ಜಂಗಮರು ಎಂದರೆ ಶಿವ ಭಕ್ತರಾಗಿ ಲಿಂಗಾಯತ ತತ್ವ ಆಚರಿಸುತ್ತಾರೆ. ಅವರು ತಾವು ಧರಿಸುವ ಇಷ್ಟಲಿಂಗದಲ್ಲೇ ಶಿವನ ಸಾಕ್ಷಾತ್ಕಾರ ಹೊಂದುತ್ತಾರೆ. ಜಂಗಮನು ಸಜೀವ ಶಿವನ ಪ್ರತೀಕ. “ಜಂಗ್” ಎಂದರೆ ಗೆಜ್ಜೆಯ ಸದ್ದು. ಹಾಗೂ “ಗಮ” ಎಂದರೆ ಸಂಚಾರ, ಚಲನೆ ಎಂದರ್ಥ. ಜಂಗಮ, ಇದು ಸ್ಥಿರವಲ್ಲದ, ಅಲೆದಾಡುವ, ಇಷ್ಟಲಿಂಗದಲ್ಲೇ ಶಿವನನ್ನು ದರ್ಶಿಸುವಂತೆ ಸಂಚರಿಸಿ ಉಪದೇಶಿಸುವ ಕಾಯಕ. ಶಿವನ ಒಲುಮೆಗಾಗಿ ಮಠ, ಮಂದಿರಗಳಿಗೆ ಮೊರೆ ಹೋದರೆ ದೇವರು ಕಾಣಲಾರ. ಅವೆಲ್ಲವೂ ಸ್ಥಾವರ.…

0 Comments

ಕಲ್ಯಾಣ ಕರ್ನಾಟಕ ಪರಿಸರದ ಶರಣ ಸ್ಮಾರಕಗಳ ಐತಿಹಾಸಿಕ ಮಹತ್ವ | ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ, ಕಲಬುರಗಿ.

ಶರಣರ ಸಾಂಸ್ಕೃತಿಕ ಬದುಕು ಕರ್ನಾಟಕದ ಇತಿಹಾಸಕ್ಕೆ ಕಳಶಪ್ರಾಯ. ಅವರ ಈ ಸಾಂಸ್ಕೃತಿಕ ಬದುಕನ್ನು ಅವರು ನಲೆ ನಿಂತು ಹೋಗಿರುವ ಪ್ರದೇಶ ಹಾಗು ಆ ಪ್ರದೇಶದ ಪರಿಸರದಲ್ಲಿ ಅಭಿವ್ಯಕ್ತಿಗೊಂಡಿರುವ ವಿಚಾರಧಾರೆಗಳಲ್ಲಿ ಕಾಣಬಹುದು. ಶರಣರ ಸ್ಮಾರಕಗಳನ್ನು “ಲೋಕಾಂತ ಚಿಂತಕರ ಏಕಾಂತ ನೆಲೆಗಳೆನ್ನಬಹುದು”. ಮೃತ್ಯುಲೋಕವನ್ನೆ ಕರ್ತಾರನ ಕಮ್ಮಟವಾಗಿಸಿದ ಶರಣರ ಸ್ಮಾರಕಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹರಡಿಕೊಂಡಿವೆ. ಪರಂಪರಾಗತವಾಗಿ ಶರಣರು ಜನಿಸಿದ, ಕಾಯಕ ಮಾಡಿದ, ಧ್ಯಾನ ಮಾಡಿದ, ಐಕ್ಯ ಸ್ಥಳಗಳಾಗಿ, ಲಿಂಗದೀಕ್ಷೆ ನೀಡಿದ, ಧರ್ಮಪ್ರಚಾರ ಮಾಡಿದ, ಪ್ರವಚನ ಗೋಷ್ಠಿಗಳನ್ನು ನಡೆಸಿದ ಸ್ಥಳಗಳಾಗಿ ಅವುಗಳನ್ನು ಗುರುತಿಸಲಾಗಿದೆ. 12 ನೇ ಶತಮಾನದ ವಚನ ಚಳುವಳಿ ಕನ್ನಡ…

0 Comments

ವಚನ ಚಳುವಳಿ: ಸಾಂಸ್ಕೃತಿಕ ಮುಖಾಮುಖಿ | ಶ್ರೀಮತಿ. ಸುನೀತಾ ಮೂರಶಿಳ್ಳಿ, ಧಾರವಾಡ.

12 ನೇಯ ಶತಮಾನ ಎಂದರೆ ಇದು ಒಂದು ಅನ್ವೇಷಣೆಯ ಯುಗ. ಜಗತ್ತನ್ನು ಪಲ್ಲಟಗೊಳಿಸಿದ ಸಂಚಲನೆಯ ಯುಗವೂ ಹೌದು. ಆ ಕಾಲದ ಜಡಗೊಂಡ ಬದುಕನ್ನು ಉತ್ತಮಗೊಳಿಸಿ ಹೊಸ ಮೌಲ್ಯಗಳನ್ನು ರೂಪಿಸುವ ನಿಟ್ಟಿನಲ್ಲಿ ಬದುಕಿನ ಆದರ್ಶದ ರೀತಿಯೇ ಸಾಹಿತ್ಯವಾಗಿ ಹೊರಹೊಮ್ಮಿದ್ದು ಇತಿಹಾಸ. ಬದುಕಿನಿಂದ ಸಾಹಿತ್ಯ ಹಾಗೂ ಸಾಹಿತ್ಯದಿಂದ ಬದುಕು ಒಂದಕ್ಕೊಂದು ಜೀವದಾನ ಪಡೆಯುತ್ತಲೇ ಇಂದಿಗೂ ಜೀವಂತವಾಗಿರುವ ಅಪರೂಪದ ಜೀವನ ಮೌಲ್ಯ ಈ ವಚನಗಳು. ಆದ್ದರಿಂದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ, ಐತಿಹಾಸಿಕ ಚರಿತ್ರೆಯಲ್ಲಿ ವಚನ ಯುಗವೆಂಬುದು ಒಂದು ಮುಖ್ಯ ಘಟ್ಟ. ಇದು ಪ್ರಾಮುಖ್ಯತೆ ಪಡೆಯಲು ಕಾರಣವೇನು? ಜಗತ್ತಿನ ಎಲ್ಲ ಚಳುವಳಿ-ಹೋರಾಟ ಸ್ವಾತಂತ್ರ‍್ಯಕ್ಕಾಗಿ,…

0 Comments

ಶರಣ ನಗೆಯ ಮಾರಿತಂದೆಯವರ ವಚನ ನಿರ್ವಚನ | ಶ್ರೀಮತಿ. ಶಾಂತಾ ಪಸ್ತಾಪೂರ, ಕಲಬುರಗಿ.

ಕಲ್ಲಿಯ ಹಾಕಿ ನೆಲ್ಲವ ತುಳಿದುಗುಬ್ಬಿಯ ಸಿಕ್ಕಿಸುವ ಕಳ್ಳನಂತೆ;ವಾಗದ್ವೈತವ ಕಲಿತುಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡುಮತ್ಸದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆಅದೇತರ ನುಡಿ? ಮಾತಿನ ಮರೆ.ಆತುರವೈರಿ ಮಾರೇಶ್ವರಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-420/ವಚನ ಸಂಖ್ಯೆ-1191) ಭಕ್ತಿಯನ್ನು ಹಾಸ್ಯದ ಮುಖಾಂತರ ಅರುಹಿದ ಮಹಾನುಭಾವಿಗಳು ಶರಣ ನಗೆಯ ಮಾರಿತಂದೆಯವರು. ಇವರ ಜನ್ಮಸ್ಥಳ “ಹಾದರಿಗೆ” ಎಂಬುದಾಗಿಯೆಂದು ಸಂಶೋಧಕರು ಹೇಳಿದ್ದರೂ ಕೂಡ ನಿಖರವಾದ ಮಾಹಿತಿಗಳು ದೊರೆಯದೆ ಇರುವುದರಿಂದ ಕಲಬುರಗಿ ಜಿಲ್ಲೆಯ ಏಲೇರಿ ಇವರ ಜನ್ಮಸ್ಥಳವೂ ಹೌದು ಮತ್ತು ಲಿಂಗೈಕ್ಯರಾದುದು ಇಲ್ಲಿಯೇ. ಕಲ್ಯಾಣದಲ್ಲಿ ಶರಣತ್ವವನ್ನು ಸ್ವೀಕಾರ ಮಾಡಿ ಶರಣರಾಗಿ ನಗುತ್ತ, ನಗಿಸುವ ಕಾಯಕ ಕೈಗೊಂಡವರು. ಶರಣ ನಗೆಯ…

0 Comments

ಕರ್ನಾಟಕದ ಸಾಂಸ್ಕೃತಿಕ ನಾಯಕ: ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಸರ್ಕಾರವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಈ ನೆಲಕ್ಕೆ ಮತ್ತು ಈ ನಾಡಿಗೆ ಅರ್ಪಿಸಿದ ಒಂದು ಉತ್ಕೃಷ್ಟ ಗೌರವ ಆಗಿದೆ. ಪ್ರಸ್ತುತದಲ್ಲಿ ಇದು ಯಾವ ರೀತಿಯಾಗಿ ಔಚಿತ್ಯಪೂರ್ಣವಾಗಿದೆ ಎಂಬುದನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಮೊದಲಿಗೆ ಸಂಸ್ಕೃತಿಯ ಪರಿಭಾಷೆ ವ್ಯಾಖ್ಯಾನಿಸುವುದಾದರೆ; ಸಂಸ್ಕೃತಿ ಎಂದರೆ ಒಂದು ಸಮುದಾಯದ ಜೀವನ ವಿಧಾನ, ರೀತಿ-ನೀತಿ, ನಂಬಿಕೆ, ಆಚಾರ-ವಿಚಾರ, ಸಂಪ್ರದಾಯ, ಮೌಲ್ಯಗಳು, ನೈತಿಕತೆ ಇವೆಲ್ಲವುಗಳ ಒಟ್ಟಾರೆ ಮೊತ್ತ. ಡಿ. ವಿ. ಜಿ ಅವರ ಪ್ರಕಾರ ಪ್ರಕೃತಿ ಸಿದ್ಧವಾದ ಪದಾರ್ಥವನ್ನು ಮನುಷ್ಯ ವಿವೇಕದಿಂದ ಸೊಗಸುಗೊಳಿಸಿದರೆ ಅದು ಸಂಸ್ಕೃತಿ. ಸಂಸ್ಕೃತಿಯು ಬರೀ ಬಾಯಿ ಮಾತಿನ…

0 Comments