ಶರಣ ಅಂಬಿಗರ ಚೌಡಯ್ಯನವರ ವಚನದ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.
ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25) ಹನ್ನೆರಡನೆಯ ಶತಮಾನದ ಅಂದಿನ ವ್ಯವಸ್ಥೆಯ ಭಾಗವಾಗಿದ್ದ ತೋರಿಕೆಯ ಭ್ರಮಾಧೀನ ಆಚರಣೆಗಳನ್ನು ಶರಣರು ಅಲ್ಲಗಳಿದಿದ್ದಾರೆ. ಅದಕ್ಕಾಗಿ ಉಪಮೆಗಳನ್ನು, ನಿದರ್ಶನಗಳನ್ನು ಬಳಸಿ ಸಾಮಾನ್ಯರಿಗೆ ತಿಳಿಯುವಂತೆ ಸರಳವಾಗಿ, ಸಹಜವಾಗಿ ವಚನಗಳ ಮೂಲಕ ತಿಳಿಸಲು ಯತ್ನಿಸಿದ್ದಾರೆ. ಮಾಯೆಯಲ್ಲಿ ಮುಳುಗಿದ ಮನುಷ್ಯನ ಹುಡುಕಾಟ ಯಾವತ್ತೂ ಹೊರಗಿನ ವಸ್ತು, ವಿಷಯಗಳ ಮೇಲೆಯೇ ಇದೆ. “ತಮ್ಮೊಳಿದ್ದ ಮಹಾಘನವ ಅರಿಯರು” ಎಂಬ ಶರಣ ನುಡಿಯು ಮತ್ತೆ ಮತ್ತೆ ಇದೇ ವಿಷಯದತ್ತ…






Total views : 65583