ನಿಜಸುಖಿ ಹಡಪದ ಅಪ್ಪಣ್ಣನವರ ವಚನ ವಿಶ್ಲೇಷಣೆ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಓದಲೇಕೋ ಲಿಂಗದ ಭೇದಾದಿಭೇದವನರಿದವಂಗೆ?ಹಾಡಲೇಕೊ ಹರನ ಕಂಡಾತಂಗೆ?ಬೇಡಿ ಕಾಡಲೇಕೊ ನೋಡುವಕಂಗಳಿಗೆ ತೃಪ್ತಿಯಾದವಂಗೆ?ನೀಡಿ ಮಾಡಲೇಕೊ ಉಡುವಾತನುಉಂಬುವಾತನು ಏಕವಾದ ಮೇಲೆ.ಮುಂದು ನೋಡುವರಾರುಂಟು ಹೇಳಾ,ಬಸವಪ್ರಿಯ ಕೂಡಲ ಚನ್ನಬಸವಣ್ಣಾ?(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-372/ವಚನ ಸಂಖ್ಯೆ-919) ಪ್ರಸ್ತುತ ಅರ್ಥಗರ್ಭಿತವಾದ ವಚನ ನಿಜ ಶರಣರಾದ ಹಡಪದ ಅಪ್ಪಣ್ಣನವರದು. ಹಡಪದರು ಎಂದರೆ ಕ್ಷೌರಿಕರು ಎಂಬ ಸಮಾನ ಪದಗಳು ಬಳಕೆಯಲ್ಲಿವೆ. ಗ್ರಾಮೀಣ ಪ್ರದೇಶಗಳಲ್ಲಿ, ಸಂಕುಚಿತ ಮನದವರಲ್ಲಿ ಹಡಪದರು ಎದುರು ಬಂದರೆ ಅಪಶಕುನವೆಂದು ತರಗುಟ್ಟುತ್ತಿದ್ದ ಕಾಲಘಟ್ಟದಲ್ಲಿ ಹಡಪದ ಅಪ್ಪಣ್ಣನವರನ್ನೇ ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿಸಿಕೊಂಡು ಪ್ರಾಣದಂತೆ ಅವರೊಂದಿಗೆ ಸದಾ ಒಡನಾಡಿದವರು ವಿಶ್ವಗುರು ಬಸವಣ್ಣನವರು. ವ್ಯಕ್ತಿಗೂ ಮತ್ತು ವೃತ್ತಿಗೂ ಏಕಕಾಲಕ್ಕೆ ಗೌರವ ಸಲ್ಲುವಂತಹ…

0 Comments

ವ್ಯೋಮಕಾಯ ಅಲ್ಲಮ ಪ್ರಭುದೇವರ ವಚನ ವಿಶ್ಲೇಷಣೆ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಜಂಗಮವೆ ಹೊರಗಿರಲು ಲಿಂಗಾರ್ಚನೆ ಏವುದಯ್ಯಾ?ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೆ?ಶರಣರು ಬಂದು ಬಾಗಿಲಲ್ಲಿ ನಿಂದಿರಲುತನ್ನ ತಾ ಮರೆದಿಪ್ಪವರ ಕಂಡಡೆನಮ್ಮ ಗುಹೇಶ್ವರ ಲಿಂಗ ಒಡೆಯ ಹಾಯ್ಕದೆ ಮಾಣ್ಬನೆ?(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-440/ವಚನ ಸಂಖ್ಯೆ-1184) ಜಂಗಮಮೂರ್ತಿಯಾದ ಅಲ್ಲಮ ಪ್ರಭುಗಳು ಜ್ಞಾನ ವೈರಾಗ್ಯದ ಎತ್ತರ ಶಿಬರ. ಇವರು ನಿಜವಾದ ಅನುಭಾವಿಗಳು. ಇವರು ಉಸುರಿದ ಅನುಭಾವದ ಒಲವಿನ ನಿಲುವಿನ ನುಡಿಗಳು ಅತ್ಯಂತ ಗಹನವಾದುದು. ತಮ್ಮ ಗುರುವಾದ ಅನಿಮಿಷಯೋಗಿಯಿಂದ ಲಿಂಗದೀಕ್ಷೆ ಪಡೆದುಕೊಂಡು ಲಿಂಗದೊಂದಿಗೆ ಅನುಸಂಧಾನಗೊಳ್ಳುತ್ತಾ ಅಲ್ಲಮ ಪ್ರಭುಗಳು ಶಿವಯೋಗಿಯಾಗಿ, ಮಹಾ ಅನುಭಾವಿಯಾಗಿ ರೂಪುಗೊಳ್ಳುತ್ತಾರೆ. ಲೋಕ ಸಂಚಾರ ಮಾಡುತ್ತಾ ದೀನ-ದುರ್ಬಲರನ್ನು ಸಂತೈಸುತ್ತಾ, ಅಜ್ಞಾನಿಗಳನ್ನು ಎಚ್ಚರಿಸುತ್ತಾ, ಸಾಧಕರಿಗೆ…

0 Comments

ಪ್ರವಚನ ಪಿತಾಮಹ ಪರಮ ಪೂಜ್ಯ ಶ್ರೀ. ಲಿಂಗಾನಂದ ಸ್ವಾಮೀಜಿ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಬಸವ ಬಳ್ಳಿ ಹಬ್ಬಿಸಿ, ಪ್ರವಚನ ಪಿತಾಮಹರಾದ ಮಣಿಗವಳ್ಳಿಯ ಮಾಣಿಕ್ಯ ಆನೆಯೂ ಆ ದಾರಿಯಲ್ಲಿ ಹೋುತ್ತೆಂದಡೆ,ಆಡೂ ಆ ದಾರಿಯಲ್ಲಿ ಹೋುತ್ತೆನ್ನಬಹುದೆ?ಸಂಗನ ಶರಣರಿಗೆ ಆನು ಸರಿಯೆಂದು ಗಳಹಲಿಬಹುದೆ?ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆಹೇಳಾ, ಕೂಡಲಸಂಗಮದೇವಾ?(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-87/ವಚನ ಸಂಖ್ಯೆ-329) ಲಿಂಗಾಯತ ಧರ್ಮ ಮತ್ತು ಬಸವ ತತ್ವ ಬೆಳೆಸಲು ಆನೆಯಾಗಿ ಶರಣರ ಚಳುವಳಿಯ ಮಾರ್ಗ ಹಿಡಿದು ಸಾದನೆಯ ಶಿಖರಕ್ಕೇರಿದ ಪೂಜ್ಯ ಲಿಂಗಾನಂದ ಸ್ವಾಮೀಜಿಗಳು ತಮ್ಮ ಪ್ರಖರ ಪ್ರವಚನದ ಮೂಲಕ ಶರಣರ ಬದುಕನ್ನು ಜೀವಂತವಾಗಿ ಸಾಕ್ಷಿಕರಿಸಿದರು. ವಚನ ಸಾಹಿತ್ಯಕ್ಕೆ ಮರುಜನ್ಮ ನೀಡುವಲ್ಲಿ ಹಾಗೂ ಲಿಂಗಾಯತ ಧರ್ಮಕ್ಕೆ ಹೊಸ ಪಥ ಸೃಷ್ಠಿಸುವಲ್ಲಿ…

0 Comments

ವ್ಯೋಮಕಾಯ ಅಲ್ಲಮ ಪ್ರಭುದೇವರ ವಚನ ವಿಶ್ಲೇಷಣೆ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ನಿರ್ಣಯವನರಿಯದ ಮನವೆ,ದುಗಡವನಾಹಾರಗೊಂಡೆಯಲ್ಲಾ.ಮಾಯಾ ಸೂತ್ರವಿದೇನೊ!ಕಂಗಳೊಳ[ಗಣ] ಕತ್ತಲೆ ತಿಳಿಯದಲ್ಲಾ!ಬೆಳಗಿನೊಳಗಣ ಶೃಂಗಾರ ಬಳಲುತ್ತಿದ್ದುದು,ಗುಹೇಶ್ವರಾ (ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-19/ವಚನ ಸಂಖ್ಯೆ-45) ಅಲ್ಲಮ ಪ್ರಭುದೇವರು “ಯೌಗಿಕ ಮಹಾಪುರುಷರು” ಹಾಗೂ ಲೋಕ ಸಂಚಾರಿಗಳು. ವಿಶ್ವದ ಉದಾತ್ತ ತತ್ವಜ್ಞಾನಿಗಳಲ್ಲಿ ಪ್ರಭುದೇವರು ಶ್ರೇಷ್ಠರಾದವರು. ಪ್ರಭುಗಳ ವೈಚಾರಿಕತೆ, ಯೌಗಿಕ ನಿಲುವು, ಆಧ್ಯಾತ್ಮದ ಔನ್ನತ್ಯಗಳು ಬೆರಗುಗೊಳಿಸುವಂತಹವು. ಲೋಕ ಸಂಚಾರಿಗಳಾಗಿ ಲೋಕದ ಅನುಭವಗಳ ಮೂಲಕ ಸತ್ಯದರ್ಶನವನ್ನು ಕಂಡುಕೊಂಡ ಸಿದ್ಧಪುರುಷರಿವರು. ಅಲ್ಲಮ ಪ್ರಭುಗಳು ವಚನಗಳ ತಾತ್ವಿಕ ಅಧ್ಯಯನ ಕೈಗೊಂಡವರಿಗೆ ತಿಳಿಯುವ ಸಂಗತಿಯೆಂದರೆ ಪ್ರಭುಗಳ ಭಾವುಕತೆಗೆ ಒಳಗಾಗದ ವೈಚಾರಿಕ ಮನಸ್ಥಿತಿಯವರು ಎಂಬುದು. ಪ್ರಭುದೇವರು ಮೃದಂಗವಾದನದಂತಹ ಕಲೆಯಲ್ಲಿ ನಿಪುಣರಾದ ಒಬ್ಬ ಕಲಾವಿದ. ಹೀಗಾಗಿ ತಮ್ಮ…

0 Comments

ಶಿವಶರಣ ಸೊನ್ನಲಾಪುರದ ಸಿದ್ದರಾಮ ಶಿವಯೋಗಿಗಳು | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸೂಗೂರು.

“ವೈರಾಗ್ಯಕ್ಕೆ ಅಲ್ಲಮ, ಭಕ್ತಿಯೋಗಕ್ಕೆ ಬಸವಣ್ಣ, ಅನುಭಾವಕ್ಕೆ ಅಕ್ಕಮಹಾದೇವಿ, ಕಾಯಕಕ್ಕೆ ಸಿದ್ದರಾಮ” ಜಗತ್ತು ಕಂಡ ಶ್ರೇಷ್ಠ ಕರ್ಮಯೋಗಿಗಳಲ್ಲಿ ಯೋಗತಪಸ್ವಿ ಶಿವಯೋಗಿ ಸಿದ್ದರಾಮೇಶ್ವರರ ಆದರ್ಶಮಯ ಜೀವನ ಚರಿತ್ರೆಯ ಕುರಿತು ಲೇಖನ. ಹನ್ನೆರಡನೇಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣದ ಕ್ರಾಂತಿ ಕರ್ನಾಟಕದ ಇತಿಹಾಸದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿಯೂ ಮಹತ್ವಪೂರ್ಣವಾದುದು. ಅದು ಯಾವುದೇ ಒಂದು ವರ್ಗದ ಹಿತ ಕಾಪಾಡುವ ಚಳುವಳಿಯಾಗದೆ, ಸಮಾಜದಲ್ಲಿನ ಕೆಳ ವರ್ಗದವರಿಂದ ಹಿಡಿದು ಎಲ್ಲಾ ವರ್ಗಗಳ ಹಿತವನ್ನು ಕಾಪಾಡಲು ಸಮಾನತೆಯ ತಳಹದಿಯ ಮೇಲೆ ನಡೆಸಿದ ಮುಕ್ತ ಮನಸ್ಸುಗಳ ಒಂದು ವಿಶಿಷ್ಟ ಅಂದೋಲನವಾಗಿತ್ತು. ಬಸವಾದಿ ಶರಣರು ಜನಭಾಷೆಯಲ್ಲಿ ತಮ್ಮ ಕಾಯಕದ…

0 Comments

ಕರ್ಮಯೋಗಿಯಿಂದ ಶಿವಯೋಗಿಯಾದ ಶರಣ ಸಿದ್ಧರಾಮೇಶ್ವರರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಎನ್ನನಾಗಳೆ ಬಂದಿವಿಡಿದೆ ಗಡ ನೀನು.ನಿಮ್ಮ ಹಿಡಿವಡೆ ಹಿಡಿವರು, ತನುವಿರೆ ತನು ಬೇರಾದವರು.ನಿಮ್ಮ ಹಿಡಿವಡೆ ಹಿಡಿವರು, ಮನವಿರೆ ಮನ ಬೇರಾದವರು.ನಿಮ್ಮ ಹಿಡಿವಡೆ ಹಿಡಿವರು, ಕೈಯಿರೆ ಕೈಬೇರಾದವರು.ಈಸುಳ್ಳವರು ಮೊದಲಾಗಿ ನಿಮ್ಮ ಹಿಡಿಯಲಾರರು.ಕಪಿಲಸಿದ್ಧಮಲ್ಲಿಕಾರ್ಜುನಾನಿಮ್ಮ ಹಿಡಿದು ತಡೆಯಲಾನೇತರವನಲ್ಲ.ಕರುಣದಿಂದ ಬಾರಾ, ಎನ್ನ ದೇವರ ದೇವಾ.(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-388/ವಚನ ಸಂಖ್ಯೆ-1246) ಶರಣ ಸಂಕುಲದಲ್ಲಿ ಶಿವಯೋಗಿ ಸಿದ್ಧರಾಮರದು ತುಂಬಾ ಮಹತ್ವದ ಪಾತ್ರವಾಗಿದೆ. ವಿಶಿಷ್ಟ ಆಲೋಚನೆಯುಳ್ಳ ಸಿದ್ಧರಾಮೇಶ್ವರರು ಅದ್ಭುತ ಕನಸುಗಾರರು. “ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು, ಅನುಗೊಂಬನಿತು ಕಾಯಕ ನಡೆಯಬೇಕು” ಎಂಬುದು ಇವರ ಧ್ಯೇಯವಾಕ್ಯವಾಗಿತ್ತು. ಅಂಗಕ್ಕೆ ಲಿಂಗೋಪದೇಶ ಮನಕ್ಕೆ ಮಂತ್ರೋಪದೇಶವಾದ…

0 Comments

ಮಹಾಮಹಿಮ, ಕಾಯಕಯೋಗಿ ಶಿವಯೋಗಿ ಸಿದ್ಧರಾಮೇಶ್ವರರ ಪರಿಚಯ ಲೇಖನ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ,

ಬಸವಣ್ಣನೇ ತಾಯಿ, ಬಸವಣ್ಣನೇ ತಂದೆಬಸವಣ್ಣನೇ ಪರಮಬಂಧುವೆನಗೆ.ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ,ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-244/ವಚನ ಸಂಖ್ಯೆ-798) ಎಂಬುದು ವಚನ ಸಾಹಿತ್ಯದ ಒಂದು ಪ್ರಸಿದ್ಧ ವಚನ. ಸಿದ್ದರಾಮರು ಬಸವಣ್ಣನವರಲ್ಲಿಯೇ ತಂದೆ, ತಾಯಿ, ಬಂಧು, ಬಳಗ ಎಲ್ಲರನ್ನ ಕಾಣುವ ಭಕ್ತಿ ಭಾವನೆಯನ್ನು ಸೂಚಿಸುವ ವಚನ. 12 ನೇಯ ಶತಮಾನದ ಶಿವ-ಶರಣರಲ್ಲಿ ಅಲ್ಲಮಪ್ರಭುಗಳು ಜಂಗಮಲಿಂಗ ಎಂದು, ಬಸವಣ್ಣನವರು ಭಕ್ತಿ ಭಂಡಾರಿ ಎಂದು, ಅಕ್ಕಮಹಾದೇವಿಯವರಿಗೆ ವೀರ ವಿರಾಗಿಣಿ ಎಂದು, ಚನ್ನಬಸವಣ್ಣನವರು ಷಟ್‌ಸ್ಥಳ ಜ್ಞಾನಿ ಎಂದು ಪ್ರಸಿದ್ಧರಾಗಿದ್ದರೆ ಶರಣ ಸಿದ್ದರಾಮಯ್ಯನವರು ಶಿವಯೋಗಿ ಎಂದು ಪ್ರಸಿದ್ಧರಾಗಿದ್ದಾರೆ. ಅನುಭವ ಮಂಟಪದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುತ್ತಾ ಸೊಡ್ಡಳ…

0 Comments

ಸರಳತೆ ಮತ್ತು ಉದಾರತೆಯ ಹರಿಕಾರ: ಹರ್ಡೇಕರ ಮಂಜಪ್ಪನವರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ,ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ.ಒಡೆದು ಸಂಸಾರದ ಹೆಂಟೆಯ,ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ,ಸುಷುಮ್ನನಾಳದಿಂದ ಉದಕವ ತಿದ್ದಿ,ಬಸವಗಳೈವರು ಹಸಗೆಡಿಸಿಹವೆಂದುಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದುಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-95/ವಚನ ಸಂಖ್ಯೆ-231) ಜಂಗಮ ಜ್ಯೋತಿಯಾಗಿ ಲೋಕಪರ್ಯಟನೆಯ ಮೂಲಕ ಸತ್ಯದ ಕಾಣಿಕೆಯನ್ನು ಗುರುತಿಸಿ ಸಕಲರ ಎದೆಯಲ್ಲಿ ಅರಿವಿನ ಬೀಜ ಬಿತ್ತಿದ ವ್ಯೋಮಕಾಯ ಮೂರ್ತಿಗಳಾದ ಅಲ್ಲಮ ಪ್ರಭುಗಳ ವಚನದಂತೆ ಸತ್ಯದ ಬದುಕನ್ನು ಬದುಕಿದ ಹರ್ಡೇಕರ ಮಂಜಪ್ಪನವರು ಸರಳತೆ ಮತ್ತು ಉದಾರತೆ ಎಂಬ ತತ್ವಗಳಡಿಯಲ್ಲಿ ತಮ್ಮ ಬದುಕನ್ನು ಸವೆಯಿಸಿದವರು.…

1 Comment

ಚಿಙ್ಮಯಜ್ಞಾನಿ ಚೆನ್ನಬಸವಣ್ಣನವರ ವಚನ – ನಿರ್ವಚನ | ಶ್ರೀಮತಿ. ಲಲಿತಾ ಇಬ್ರಾಹಿಂಪೂರ, ಕಲಬುರಗಿ.

ಆಕಾಶದಲ್ಲಾಡುವ ಪಟಕ್ಕಾದಡೆಯೂಮೂಲಸೂತ್ರವಿರಬೇಕು.ಕಲಿಯಾದಡೆಯೂ ಕಜ್ಜವಿಲ್ಲದೆ ಆಗದು.ಭೂಮಿಯಿಲ್ಲದೆ ಬಂಡಿ ನಡೆವುದೆ?ಅಂಗಕ್ಕೆ ಲಿಂಗವಿಲ್ಲದೆ ನಿಸ್ಸಂಗವಾಗಬಾರದು.ಕೂಡಲಚೆನ್ನಸಂಗಮದೇವರಲ್ಲಿ ಸಂಗವಿಲ್ಲದೆನಿಸ್ಸಂಗಿಯೆಂದು ನುಡಿಯಬಹುದೆ ಪ್ರಭುವೆ?(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-419/ವಚನ ಸಂಖ್ಯೆ-990) ಷಟ್‌ಸ್ಥಲ ಚಕ್ರವರ್ತಿಯೆಂದೇ ಪ್ರಸಿದ್ಧರಾಗಿರುವ ಮಹಾಜ್ಞಾನಿ ಚೆನ್ನಬಸವಣ್ಣನವರ ವಚನವಿದು. ಇವರು ಶರಣೆ ಅಕ್ಕನಾಗಮ್ಮನವರ ಮತ್ತು ಶರಣ ಶಿವಸ್ವಾಮಿಯವರ ಸುಪುತ್ರರು. ಬಸವಣ್ನನವರ ಸೋದರಳಿಯ. ಕೂಡಲಸಂಗಮದಲ್ಲಿ ಜನಿಸಿದ ಇವರು ಕಲ್ಯಾಣದಲ್ಲಿ ಅನುಭವ ಮಂಟಪದ ಜವಾಬ್ದಾರಿಯನ್ನು ಹೊತ್ತಿದ್ದವರು. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯದ ಉಳುವಿಗಾಗಿ ಹೋರಾಟ ಮಾಡಿದವರು. ಉಳುವಿಯಲ್ಲಿ ಲೀಂಗೈಕ್ಯರಾದವರು. ಕೂಡಲ ಚೆನ್ನಸಂಗಮದೇವಾ ಎನ್ನುವ ವಚನಾಂಕಿತದಿಂದ ವಚನಗಳನ್ನು ಬರೆದಿದ್ದಾರೆ. ಇಲ್ಲಿಯವರೆಗೆ 1792 ವಚನಗಳು ಲಭ್ಯವಾಗಿವೆ.   ನಿರ್ವಚನ:ಅಲ್ಲಮ ಪ್ರಭುಗಳು…

0 Comments

ಶರಣೆ ಆಮುಗೆ ರಾಯಮ್ಮ | ಡಾ. ಸರ್ವಮಂಗಳ ಸಕ್ರಿ, ರಾಯಚೂರು,

ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತನಾಗಿನನ್ನವರು ತನ್ನವರೆಂದು ನುಡಿವ ಕುನ್ನಿಗಳವಿರಕ್ತರೆಂಬೆನೆ ಅಯ್ಯಾ?ಪಕ್ಷ ಪರಪಕ್ಷಂಗಳನರಿತುಹೇಹಂಗಳ ಜರಿಯಬಲ್ಲಡೆ ವಿರಕ್ತನೆಂಬೆನು.ತ್ರಿವಿಧವನತಿಗಳೆದು ವಿರಕ್ತನಾದ ಬಳಿಕತ್ರಿವಿಧವ ಹಿಡಿದ ಗುರುವ ಕಂಡಡೆ,ಅವನ ಅಡಿಗೆರಗಿದೆನಾದಡೆಅಘೋರ ನರಕ ತಪ್ಪದು, ಅದೇನು ಕಾರಣವೆಂದಡೆಭವಪಾಶಂಗಳ ಹರಿದು ಅವಿರಳನಾದ ಕಾರಣ,ವ್ರತಭ್ರಷ್ಟ ಲಿಂಗಬಾಹ್ಯನ ಮುಖವ ನೋಡೆನು.ಹೊನ್ನು ಹೆಣ್ಣು ಮಣ್ಣು ಹಿಡಿವರ ಕಂಡಡೆ,ಎನ್ನ ಗುರುವೆಂದು ಅಡಿಗೆರಗೆನು,ಬಸವಣ್ಣನೆ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-255/ವಚನ ಸಂಖ್ಯೆ-668)  ಶರಣೆ ಆಮುಗೆ ರಾಯಮ್ಮ: ಶರಣ ಅಮುಗೆ ದೇವಯ್ಯನವರ ಧರ್ಮಪತ್ನಿ ಶರಣೆ ಅಮುಗೆ ರಾಯಮ್ಮನವರು ವಿಜಯಪುರ ಜಿಲ್ಲೆಯ ಪುಳಜೆ ಎಂಬ ಗ್ರಾಮದವರು. ಇವರು ಕಂಬಳಿ ನೇಯಗೆ ಕಾಯಕದಲ್ಲಿ ತೊಡಗಿಸಿಕೊಂಡವರು. ಶರಣೆ ಅಮಗೆ ರಾಯಮ್ಮನವರ ಮೊದಲ ಹೆಸರು…

0 Comments