ಪ್ರಥಮ್ ಇಂಟರನ್ಯಾಶನಲ್ ಸ್ಕೂಲ್–ಬೆಂಗಳೂರು ಇವರ ಸಹಯೋಗದೊಂದಿಗೆ ವಚನ ಮಂದಾರ ವೇದಿಕೆಯಿಂದ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಉದ್ಘಾಟನೆ ಕಾರ್ಯಕ್ರಮ.
https://www.youtube.com/watch?v=iXm8WjDtp8k
https://www.youtube.com/watch?v=iXm8WjDtp8k
ಆಕಾರವೆಂಬೆನೆ ನಿರಾಕಾರವಾಗಿದೆನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.ತನ್ನನಳಿದು ನಿಜವುಳಿದಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡುಬದುಕಿದೆನು ಕಾಣಾ ಸಂಗನಬಸವಣ್ಣಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-26/ವಚನ ಸಂಖ್ಯೆ-50) ಶರಣ ಕಿನ್ನರಿ ಬ್ರಹ್ಮಯ್ಯನವರ ಈ ವಚನ ಶರಣ ಮರುಳಶಂಕರದೇವರ ಘನವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಫಲಶೃತಿಯಿಂದ ಹಲವಾರು ಶರಣರು ವಿವಿಧ ಸ್ಥಳಗಳಿಂದ ಕಲ್ಯಾಣಕ್ಕೆ ಆಗಮಿಸಿದ್ದರು. ಹೀಗೆ ಆಗಮಿಸಿದ ಶರಣರಲ್ಲಿ ಅಫಘಾನಿಸ್ತಾನದಿಂದ ಬಂದ ಮರುಳಶಂಕರದೇವರು ಪ್ರಮುಖರು. ಕಲ್ಯಾಣದ ಮಹಾಮನೆಯಲ್ಲಿ ಅಜ್ಞಾತವಾಗಿ ಬದುಕಿದ್ದ ಶರಣ ಮರುಳಶಂಕರದೇವರನ್ನು ವ್ಯೋಮಮೂರ್ತಿ ಅಲ್ಲಮ ಪ್ರಭುಗಳು ಗುರುತಿಸುತ್ತಾರೆ. ಅಲ್ಲಮ ಪ್ರಭುಗಳ ಒಂದು ವಿಶೇಷತೆ ಅಂದರೆ ಅವರ ಲೋಕ…
ಆಕಾಶವಾಣಿಯ ಒಂದು ಸಂದರ್ಶನದಲ್ಲಿ ನಿರೂಪಕರು ಅಜ್ಜಾರ “ನಿಮ್ಮ ಮಾತೃಭಾಷೆ ಮರಾಠಿಯಾದರೂ ಕನ್ನಡದಲ್ಲಿ ಉತ್ಕೃಷ್ಠವಾಗಿ ಬರಿತೀರಿ ಹೆಂಗ” ಅಂತ ಒಂದು ಪ್ರಶ್ನೆಯನ್ನು ಕೇಳತಾರ. ಅದಕ್ಕ ಬೇಂದ್ರೆ ಅಜ್ಜಾರು ಕೊಟ್ಟ ಅನುಪಮ ಉತ್ತರ ಕೇಳಿ ನಿರೂಪರು ಒಂದು ಕ್ಷಣ ಮೂಕವಿಸ್ಮಿತರಾದರು. “ಕನ್ನಡದಾಗ ಚುಲೋತ್ನಂಗ ಬರೀತೇನಂದರ ಅದಕ ಕಾರಣ ಬರಿಯಾಕ ಕನ್ನಡಾನ ಅಷ್ಟು ಚುಲೋ ಐತಿ, ಅದಕ ಆ ಸಾಹಿತ್ಯ ಅಷ್ಟು ಉತ್ಕೃಷ್ಠ ಆಕ್ಕೇತಿ” ಇಂಥ ಅದ್ಭುತ ಕಾವ್ಯ ಗಾರುಡಿಗ ಮತ್ತು ಕನ್ನಡಿಗರ ಮನೆ ಮಾತಾಗಿರುವ ಡಾ. ದ. ರಾ. ಬೇಂದ್ರೆಯವರ ಜನ್ಮದಿನ ಜನೇವರಿ 31. ಇದರ ಪ್ರಯುಕ್ತ ಈ ಲೇಖನ.…
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ 12 ನೇ ಶತಮಾನವು ಒಂದು ವಿಶಿಷ್ಟ ಕಾಲಘಟ್ಟ. ಆ ಕಾಲಘಟ್ಟದ ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ರಾಂತಿಗಳು ವಿಶಿಷ್ಟತೆಗೆ ಕಾರಣಗಳು. ಧರ್ಮ, ದರ್ಶನ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ಬಸವಾದಿ ಶರಣರ ವಚನಗಳಿಗೆ ಮಹತ್ವದ ಸ್ಥಾನವಿದೆ. ಶಿವ ಶರಣರ ಜೀವನ ಬಹುಮುಖಿಯಾದುದು. ಅವರು ಒಂದೆಡೆ ಸಾಧಕರು ಇನ್ನೊಂದೆಡೆ ಸಮ-ಸಮಾಜದ ನಿರ್ಮಾಪಕರು. ಇಂತಹ ಅಗ್ರಗಣ್ಯ ಶಿವಶರಣರಲ್ಲಿ ಶರಣ ಜೇಡರ ದಾಸಿಮಯ್ಯನವರೂ ಒಬ್ಬರು. ಬಸವಣ್ಣನವರ ಹಿರಿಯ ಸಮಕಾಲೀನರು. ವಚನ ಸಾಹಿತ್ಯದಲ್ಲಿ ಕಂಡು ಬರುವಂತೆ ಬಸವಣ್ಣವರಿಗಿಂತ ಮುಂಚಿತವಾಗಿ ವಚನಗಳನ್ನು ರಚಿಸಿದ ಶರಣ ಜೇಡರ ದಾಸಿಮಯ್ಯನವರು ಒಬ್ಬ ಅದ್ಭುತ…
ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತುತಾ ಮಾಡಿದ ಹೆಣ್ಣು ತನ್ನ ತೊಡಯನೇರಿತ್ತುತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತುತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತುಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-188/ವಚನ ಸಂಖ್ಯೆ-608) 12 ನೇ ಶತಮಾನದಲ್ಲಿಯೇ ಶಿವಯೋಗಿ ಸಿದ್ಧರಾಮೇಶ್ವರರು ಮಹಿಳಾ ಶಕ್ತಿಯನ್ನು ಗುರುತಿಸಿ ಗೌರವಿಸಿದ ನಿಜ ಶರಣರು. ಹೆಣ್ಣು ಈ ಸೃಷ್ಠಿಯ ಒಂದು ಭಾಗ. ಮಾನವರು ಎಂಬ ಜನಾಂಗದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನರು. ಪುರುಷನ ಕೊಡುಗೆಯಷ್ಟೇ ಮಹಿಳೆಯ ಕೊಡುಗೆಯೂ ಕೂಡ ಮನುಕುಲದ ಬೆಳವಣಿಗೆಗೆ ಶ್ರೇಷ್ಠವಾಗಿದೆ.…
ಅಂಬಿಗರ ಚೌಡಯ್ಯನವರು ಗುರು ಬಸವಣ್ಣನವರ ಸಮಕಾಲೀನರು. ಚೌಡಯ್ಯನವರ ಕಾಯಕ ದೋಣಿ ನಡೆಸುವುದು. ಬಸವಾದಿ ಶರಣರ ಲಿಂಗ ತತ್ವವನ್ನು ಶ್ರದ್ಧೆಯಿಂದ ಪಾಲಿಸಿ ಲಿಂಗಾಂಗ ಸಾಮರಸ್ಯ ಸಂಪಾದಿಸಿದ ಚೌಡಯ್ಯನವರು ಸಾಮಾಜಿಕ ಕಳಕಳಿ ಉಳ್ಳವರಾಗಿದ್ದರು. ಅಂಬಿಗರ ಚೌಡಯ್ಯನವರ ವಚನಗಳು ನಿರ್ಭೀತಿಯಿಂದ ಕಂಡದ್ದನ್ನು ಕಂಡಂತೆಯೇ, ಮುಚ್ಚುಮರೆ ಇಲ್ಲದೆ ಎಚ್ಚರಿಸುವಂಥವು. ಆಡಂಬರ, ಡಂಭಾಚಾರ, ಮೂಢನಂಬಿಕೆಗಳನ್ನು ಕಂಡರೆ ಕಟು ಮಾತುಗಳಲ್ಲಿ ನಿಂದಿಸಿ ಸರಿ ದಾರಿಗೆ ತರುವ ಹಾಗೂ ದಾರಿ ತಪ್ಪಿದ ಯಾರನ್ನು ಬಿಡದೆ ತಪ್ಪು ದಾರಿಗಳೆವ ಗುರುಗಳನ್ನು ಟೀಕಿಸುತ್ತಿದ್ದರು. ಆದರೆ ಅವರ ಮಾತುಗಳಲ್ಲಿ ದ್ವೇಷ ಅಸೂಯೆಗಳಿರಲಿಲ್ಲ. ತಿದ್ದಿ ಸತ್ಯದ ಆಚರಣೆಗೆ ತರುತ್ತಿದ್ದರು. ತಮ್ಮ ಆಚಾರ ವಿಚಾರ…
ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು,ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು,ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ,ಪೂಜಿಸಿದ ಪುಣ್ಯ ಹೂವಿಗೋ? ನೀರಿಗೋ?ನಾಡೆಲ್ಲಕ್ಕೊ? ಪೂಜಿಸಿದಾತಗೋ?ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-949 / ವಚನ ಸಂಖ್ಯೆ-53) ಯಾರೋ ಬಿತ್ತಿ ಬೆಳಸಿದ ಹೂವಿನ ಗಿಡದಲ್ಲಿನ ಹೂಗಳನ್ನು ಕೊಯ್ದು ತಂದು, ಊರಿನ ಜನರೆಲ್ಲರೂ ಸೇರಿ ಕಟ್ಟಿಸಿದ ಕೆರೆಯ ನೀರನ್ನು ತಂದು ನಾನು ಪೂಜಿಸುತ್ತಿದ್ದೇನೆ ನೋಡಿರೆಂದು ನಾಡಿನ ಜನತೆಗೆ ಹೇಳುತ್ತಾ ಪೂಜಿಸಿದರೆ, ಆ ಪೂಜೆಯಿಂದ ಲಭಿಸುವ ಪುಣ್ಯದ ಫಲ ಯಾರಿಗೆ? ಹೂವಿಗೋ? ಕೆರೆಯ ನೀರಿಗೋ? ಇಡೀ ನಾಡಿಗೋ? ಅಥವಾ…
ಹರನ ಕರುಣೋದಯದ ತೆರದಲಿ ಬೆಳಗು ತೆರೆಯುವ ಹೊತ್ತಿಗೆವೇದಘೋಷದ ದಿವ್ಯಲಹರಿಯು ಮನವು ತೊಳೆಯಲು ಮೆಲ್ಲಗೆಬರುವ ಶ್ರೀಗುರು ಪಾದುಕೆಯ ದನಿ ಅನುರಣಿತವಾಗಲು ಮೌನಕೆಸಿದ್ಧಗಂಗೆಯ ನೆಲವು ಜಲವೂ ನಮಿಸಿ ನಿಲುವುದು ಸುಮ್ಮಗೆ || 01 || ಬೆಟ್ಟ ಬಂಡೆಯ ನಡುವೆ ಗಿಡ ಮರ ಹೂವನೆತ್ತಿರೆ ಪೂಜೆಗೆದೇಗುಲದ ಪೂಜಾರತಿಯ ಗಂಟೆಯ ಮೊಳಗು ಮುಟ್ಟಲು ಬಾನಿಗೆಧೂಪಗಂಧವು ಮಂದಮಂದಾನಿಲ ಜೊತೆಯೊಳು ಮನಸಿಗೆಸಂಭ್ರಮವನುಕ್ಕಿಸೆ ಬೆಳಗು ಇಳಿವುದು ಸಿದ್ಧಗಂಗೆಯ ಕ್ಷೇತ್ರಕೆ || 02 || ಇಲ್ಲಿ ಇಲ್ಲ ಪವಾಡದದ್ಭುತ ಅಥವ ಉತ್ಸವದಬ್ಬರಮುಡಿಯನೆತ್ತಿದೆ ಸರಳ ಸಾಧಾರಣ ನದುಕಿನ ಗೋಪುರದರ ಮೇಲಿದೆ ತ್ಯಾಗಧ್ವಜ ಕೈಬೀಸಿ ಕರೆವುದು ಪಥಿಕರಪರಮ ನಿರಪೇಕ್ಷೆಯಲ್ಲಿ ದಿನವೂ ಸೇವೆಗಾಗಿದೆ…
ಜನಮಾನಸದಲ್ಲಿ ನಡೆದಾಡುವ ದೇವರೆಂದೇ ಭಾವಿಸಲ್ಪಟ್ಟ ಪದ್ಮಭೂಷಣ ಕರ್ನಾಟಕ ರತ್ನ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾಗಿ ಇಂದಿಗೆ ಆರು ವರ್ಷಗಳು ಕಳೆದಿದೆ. ಕರ್ನಾಟಕ ಸರ್ಕಾರ ಸ್ವಾಮೀಜಿಯವರು ಸಮಾಜದ ಉನ್ನತಿಗಾಗಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಿ ಜನವರಿ 21 ನ್ನು ದಾಸೋಹ ದಿನವೆಂದು ಘೋಷಿಸಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ದಾಸೋಹ ಎಂಬುದು ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರಿಂದ ರೂಪುಗೊಂಡ ವಿಶಿಷ್ಟವಾದ ಪರಿಕಲ್ಪನೆ. ಇದು ದಾನಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ವ್ಯವಸ್ಥೆಯಾಗಿದೆ. ಅಂದು ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ತಾನು ಗಳಿಸಿದ್ದರಲ್ಲಿ ಒಂದು ಪಾಲನ್ನು ದೇವರಿಗಾಗಲೀ ಅಥವಾ ಪುರೋಹಿತ ವರ್ಗಕ್ಕಾಗಲೀ ದಾನ…
ಜಾನಪದ ಸಾಹಿತ್ಯವನ್ನು ಸೃಜನಶೀಲ ಮನಸ್ಸುಗಳು ಮೌಖಿಕ ಪರಂಪರೆಯನ್ನು ಸೃಷ್ಟಿಸಿ ಆ ಮೂಲಕ ಸಂಸ್ಕೃತಿ, ಪರಂಪರೆ, ಜಾನಪದ ಸಾಹಿತ್ಯವನ್ನು ಹುಲುಸಾಗಿ ಬೆಳೆಸಿವೆ. ಜನಪದ ಸಾಹಿತ್ಯ ಒಬ್ಬ ಸೃಜನಶೀಲರಲ್ಲಿ ಹುಟ್ಟಿ ಅದು ಗುಂಪಿನಲ್ಲಿ ಬೆಳೆದು ಸಾಮುದಾಯಿಕ ಮನ್ನಣೆಯನ್ನು ಪಡೆದಿದೆ. ಆಯಾಯ ಕಾಲಘಟ್ಟದಲ್ಲಿ ಸೃಷ್ಟಿಯಾಗಿ ಮೌಖಿಕವಾಗಿ ಪರಂಪರೆಯಲ್ಲಿ ಹರಿದು ಬಂದ ಜ್ಞಾನಧಾರೆ ಜಾನಪದ ಸಾಹಿತ್ಯ. ಆ ಕಾಲದಲ್ಲಿ ಏನೇ ಘಟನೆ ಸಂಭವಿಸಿದರೂ ಅದನ್ನು ಮೌಖಿಕ ದಾಖಲೆ ಮಾಡಿದವರು ನಮ್ಮ ಜನಪದರು. ಏಕೆಂದರೆ ಸೃಜನಶೀಲ ಮನಸ್ಸು ಯಾವಾಗಲೂ ಹುಡುಕಾಟದಲ್ಲಿರುತ್ತದೆ. ಆ ಶೋಧನಾ ಆಸಕ್ತಿ ಇಂಥ ಜನಪದ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿದೆ. ಅಂದರೆ ಜನಪದರು…
You cannot copy content of this page