ಶ್ರಾವಣ ವಚನ ಚಿಂತನ-04: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಎಣ್ಣೆ ಬೇರೆ ಬತ್ತಿ ಬೇರೆ; ಎರಡೂ ಸೇರಿ ಸೊಡರಾಯಿತ್ತು.ಪುಣ್ಯ ಬೇರೆ ಪಾಪ ಬೇರೆ; ಎರಡೂ ಕೂಡಿ ಒಡಲಾಯಿತ್ತು.ಮಿಗಬಾರದು, ಮಿಗದಿರಬಾರದು,ಒಡಲಿಚ್ಛೆಯ ಸಲಿಸದೆ ಸಲಿಸದೆ ನಿಮಿಷವಿರಬಾರದು.ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ,ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-71) ಭಕ್ತಿ ಮಾಡಲು ಸಮಯಾಸಮಯವಿಲ್ಲ. ಸಾಧ್ಯವಿದ್ದಾಗಲೇ ಮಾಡಿ ಮುಗಿಸಬೇಕು. ನಾಳೆ ನಾಡದು ಎಂದರೆ ಅದು ಸಾಧಗುವಾಗುವದಿಲ್ಲ. ಭಕ್ತಿಯನ್ನು ಮಾಡುವ ಅವಕಾಶವನ್ನು ಆದಷ್ಟೂ ಮುಂದೂಡುವ ಸ್ವಭಾವ ನಮ್ಮದು. ಇಂಥಹ ಸ್ವಭಾವವನ್ನು ವಿರೋಧಿಸುವ ಅಲ್ಲಮಪ್ರಭುಗಳು ಭಕ್ತಿಮಾಡುವಲ್ಕಿ ಹಿಂಜರಿಯಬಾರದು ಎಂಬುದನ್ನು ಹೇಳುತ್ತಾರೆ. ಭಕ್ತಿ ಮಾಡಿದಾಗಲೇ…





Total views : 65584