ಜಂಗಮ ಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮ ದ್ರೋಹ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಜಂಗಮ ಎಂಬ ಪದವು ಸಂಸ್ಕೃತ ಮೂಲದ್ದಾಗಿದೆ. ಕನ್ನಡದಲ್ಲಿ ಸಂಚಾರಿ, ಚಲನಶೀಲ ಎನ್ನಲಾಗುತ್ತಿದೆ. ಶಿವ ಅಥವಾ ಚಲನಶೀಲ ಶಕ್ತಿಯೇ ಜಂಗಮ. ಜಂಗಮರು ಎಂದರೆ ಶಿವ ಭಕ್ತರಾಗಿ ಲಿಂಗಾಯತ ತತ್ವ ಆಚರಿಸುತ್ತಾರೆ. ಅವರು ತಾವು ಧರಿಸುವ ಇಷ್ಟಲಿಂಗದಲ್ಲೇ ಶಿವನ ಸಾಕ್ಷಾತ್ಕಾರ ಹೊಂದುತ್ತಾರೆ. ಜಂಗಮನು ಸಜೀವ ಶಿವನ ಪ್ರತೀಕ. “ಜಂಗ್” ಎಂದರೆ ಗೆಜ್ಜೆಯ ಸದ್ದು. ಹಾಗೂ “ಗಮ” ಎಂದರೆ ಸಂಚಾರ, ಚಲನೆ ಎಂದರ್ಥ. ಜಂಗಮ, ಇದು ಸ್ಥಿರವಲ್ಲದ, ಅಲೆದಾಡುವ, ಇಷ್ಟಲಿಂಗದಲ್ಲೇ ಶಿವನನ್ನು ದರ್ಶಿಸುವಂತೆ ಸಂಚರಿಸಿ ಉಪದೇಶಿಸುವ ಕಾಯಕ. ಶಿವನ ಒಲುಮೆಗಾಗಿ ಮಠ, ಮಂದಿರಗಳಿಗೆ ಮೊರೆ ಹೋದರೆ ದೇವರು ಕಾಣಲಾರ. ಅವೆಲ್ಲವೂ ಸ್ಥಾವರ.…

0 Comments

ಕಲ್ಯಾಣ ಕರ್ನಾಟಕ ಪರಿಸರದ ಶರಣ ಸ್ಮಾರಕಗಳ ಐತಿಹಾಸಿಕ ಮಹತ್ವ | ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ, ಕಲಬುರಗಿ.

ಶರಣರ ಸಾಂಸ್ಕೃತಿಕ ಬದುಕು ಕರ್ನಾಟಕದ ಇತಿಹಾಸಕ್ಕೆ ಕಳಶಪ್ರಾಯ. ಅವರ ಈ ಸಾಂಸ್ಕೃತಿಕ ಬದುಕನ್ನು ಅವರು ನಲೆ ನಿಂತು ಹೋಗಿರುವ ಪ್ರದೇಶ ಹಾಗು ಆ ಪ್ರದೇಶದ ಪರಿಸರದಲ್ಲಿ ಅಭಿವ್ಯಕ್ತಿಗೊಂಡಿರುವ ವಿಚಾರಧಾರೆಗಳಲ್ಲಿ ಕಾಣಬಹುದು. ಶರಣರ ಸ್ಮಾರಕಗಳನ್ನು “ಲೋಕಾಂತ ಚಿಂತಕರ ಏಕಾಂತ ನೆಲೆಗಳೆನ್ನಬಹುದು”. ಮೃತ್ಯುಲೋಕವನ್ನೆ ಕರ್ತಾರನ ಕಮ್ಮಟವಾಗಿಸಿದ ಶರಣರ ಸ್ಮಾರಕಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹರಡಿಕೊಂಡಿವೆ. ಪರಂಪರಾಗತವಾಗಿ ಶರಣರು ಜನಿಸಿದ, ಕಾಯಕ ಮಾಡಿದ, ಧ್ಯಾನ ಮಾಡಿದ, ಐಕ್ಯ ಸ್ಥಳಗಳಾಗಿ, ಲಿಂಗದೀಕ್ಷೆ ನೀಡಿದ, ಧರ್ಮಪ್ರಚಾರ ಮಾಡಿದ, ಪ್ರವಚನ ಗೋಷ್ಠಿಗಳನ್ನು ನಡೆಸಿದ ಸ್ಥಳಗಳಾಗಿ ಅವುಗಳನ್ನು ಗುರುತಿಸಲಾಗಿದೆ. 12 ನೇ ಶತಮಾನದ ವಚನ ಚಳುವಳಿ ಕನ್ನಡ…

0 Comments

ವಚನ ಚಳುವಳಿ: ಸಾಂಸ್ಕೃತಿಕ ಮುಖಾಮುಖಿ | ಶ್ರೀಮತಿ. ಸುನೀತಾ ಮೂರಶಿಳ್ಳಿ, ಧಾರವಾಡ.

12 ನೇಯ ಶತಮಾನ ಎಂದರೆ ಇದು ಒಂದು ಅನ್ವೇಷಣೆಯ ಯುಗ. ಜಗತ್ತನ್ನು ಪಲ್ಲಟಗೊಳಿಸಿದ ಸಂಚಲನೆಯ ಯುಗವೂ ಹೌದು. ಆ ಕಾಲದ ಜಡಗೊಂಡ ಬದುಕನ್ನು ಉತ್ತಮಗೊಳಿಸಿ ಹೊಸ ಮೌಲ್ಯಗಳನ್ನು ರೂಪಿಸುವ ನಿಟ್ಟಿನಲ್ಲಿ ಬದುಕಿನ ಆದರ್ಶದ ರೀತಿಯೇ ಸಾಹಿತ್ಯವಾಗಿ ಹೊರಹೊಮ್ಮಿದ್ದು ಇತಿಹಾಸ. ಬದುಕಿನಿಂದ ಸಾಹಿತ್ಯ ಹಾಗೂ ಸಾಹಿತ್ಯದಿಂದ ಬದುಕು ಒಂದಕ್ಕೊಂದು ಜೀವದಾನ ಪಡೆಯುತ್ತಲೇ ಇಂದಿಗೂ ಜೀವಂತವಾಗಿರುವ ಅಪರೂಪದ ಜೀವನ ಮೌಲ್ಯ ಈ ವಚನಗಳು. ಆದ್ದರಿಂದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ, ಐತಿಹಾಸಿಕ ಚರಿತ್ರೆಯಲ್ಲಿ ವಚನ ಯುಗವೆಂಬುದು ಒಂದು ಮುಖ್ಯ ಘಟ್ಟ. ಇದು ಪ್ರಾಮುಖ್ಯತೆ ಪಡೆಯಲು ಕಾರಣವೇನು? ಜಗತ್ತಿನ ಎಲ್ಲ ಚಳುವಳಿ-ಹೋರಾಟ ಸ್ವಾತಂತ್ರ‍್ಯಕ್ಕಾಗಿ,…

0 Comments

ಶರಣ ನಗೆಯ ಮಾರಿತಂದೆಯವರ ವಚನ ನಿರ್ವಚನ | ಶ್ರೀಮತಿ. ಶಾಂತಾ ಪಸ್ತಾಪೂರ, ಕಲಬುರಗಿ.

ಕಲ್ಲಿಯ ಹಾಕಿ ನೆಲ್ಲವ ತುಳಿದುಗುಬ್ಬಿಯ ಸಿಕ್ಕಿಸುವ ಕಳ್ಳನಂತೆ;ವಾಗದ್ವೈತವ ಕಲಿತುಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡುಮತ್ಸದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆಅದೇತರ ನುಡಿ? ಮಾತಿನ ಮರೆ.ಆತುರವೈರಿ ಮಾರೇಶ್ವರಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-420/ವಚನ ಸಂಖ್ಯೆ-1191) ಭಕ್ತಿಯನ್ನು ಹಾಸ್ಯದ ಮುಖಾಂತರ ಅರುಹಿದ ಮಹಾನುಭಾವಿಗಳು ಶರಣ ನಗೆಯ ಮಾರಿತಂದೆಯವರು. ಇವರ ಜನ್ಮಸ್ಥಳ “ಹಾದರಿಗೆ” ಎಂಬುದಾಗಿಯೆಂದು ಸಂಶೋಧಕರು ಹೇಳಿದ್ದರೂ ಕೂಡ ನಿಖರವಾದ ಮಾಹಿತಿಗಳು ದೊರೆಯದೆ ಇರುವುದರಿಂದ ಕಲಬುರಗಿ ಜಿಲ್ಲೆಯ ಏಲೇರಿ ಇವರ ಜನ್ಮಸ್ಥಳವೂ ಹೌದು ಮತ್ತು ಲಿಂಗೈಕ್ಯರಾದುದು ಇಲ್ಲಿಯೇ. ಕಲ್ಯಾಣದಲ್ಲಿ ಶರಣತ್ವವನ್ನು ಸ್ವೀಕಾರ ಮಾಡಿ ಶರಣರಾಗಿ ನಗುತ್ತ, ನಗಿಸುವ ಕಾಯಕ ಕೈಗೊಂಡವರು. ಶರಣ ನಗೆಯ…

0 Comments

ಕರ್ನಾಟಕದ ಸಾಂಸ್ಕೃತಿಕ ನಾಯಕ: ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಸರ್ಕಾರವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಈ ನೆಲಕ್ಕೆ ಮತ್ತು ಈ ನಾಡಿಗೆ ಅರ್ಪಿಸಿದ ಒಂದು ಉತ್ಕೃಷ್ಟ ಗೌರವ ಆಗಿದೆ. ಪ್ರಸ್ತುತದಲ್ಲಿ ಇದು ಯಾವ ರೀತಿಯಾಗಿ ಔಚಿತ್ಯಪೂರ್ಣವಾಗಿದೆ ಎಂಬುದನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಮೊದಲಿಗೆ ಸಂಸ್ಕೃತಿಯ ಪರಿಭಾಷೆ ವ್ಯಾಖ್ಯಾನಿಸುವುದಾದರೆ; ಸಂಸ್ಕೃತಿ ಎಂದರೆ ಒಂದು ಸಮುದಾಯದ ಜೀವನ ವಿಧಾನ, ರೀತಿ-ನೀತಿ, ನಂಬಿಕೆ, ಆಚಾರ-ವಿಚಾರ, ಸಂಪ್ರದಾಯ, ಮೌಲ್ಯಗಳು, ನೈತಿಕತೆ ಇವೆಲ್ಲವುಗಳ ಒಟ್ಟಾರೆ ಮೊತ್ತ. ಡಿ. ವಿ. ಜಿ ಅವರ ಪ್ರಕಾರ ಪ್ರಕೃತಿ ಸಿದ್ಧವಾದ ಪದಾರ್ಥವನ್ನು ಮನುಷ್ಯ ವಿವೇಕದಿಂದ ಸೊಗಸುಗೊಳಿಸಿದರೆ ಅದು ಸಂಸ್ಕೃತಿ. ಸಂಸ್ಕೃತಿಯು ಬರೀ ಬಾಯಿ ಮಾತಿನ…

0 Comments

ವ್ಯೋಮಕಾಯ ಅಲ್ಲಮಪ್ರಭುಗಳ ವಚನ- ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹಾಲ ನೇಮವ ಹಿಡಿದಾತ  ಬೆಕ್ಕಾಗಿ ಹುಟ್ಟುವ,ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ,ಅಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ,ಪುಷ್ಪದ ನೇಮವ ಹಿಡಿದಾತ  ತುಂಬಿಯಾಗಿ ಹುಟ್ಟುವ,ಇವು ಷಡುಸ್ಥಲಕ್ಕೆ ಹೊರಗು.ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-45/ವಚನ ಸಂಖ್ಯೆ-120) ಕನ್ನಡ ಸಾಹಿತ್ಯ ಮತ್ತು ವಚನ ಸಂಸ್ಕೃತಿಯನ್ನು ಬಹು ಎತ್ತರಕ್ಕೆ ಒಯ್ದ ಶರಣ ಬೆಡಗಿನ ಭಾಷೆಯ ಹರಿಕಾರ ಅಲ್ಲಮಪ್ರಭುಗಳಾಗಿದ್ದಾರೆ. ವಚನ ಚಂದ್ರಿಕೆಯಲ್ಲಿ ಇವರ 1612 ವಚನಗಳಿವೆ. ಗುಹೇಶ್ವರ, ಗೊಹೇಶ್ವರ ಅಲ್ಲಮಪ್ರಭುಗಳ ವಚನಾಂಕಿತವಾಗಿದೆ. ಬೆಡಗಿನ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಬಹು ಕಠಿಣವೆಂಬ  ಮಾತಿದೆ. ವಚನಗಳಲ್ಲಿ ಬರುವ ರೂಪಕ ಮತ್ತು ಬೆಡಗಿನ…

0 Comments

ಕಡಕೋಳ ಮಡಿವಾಳಪ್ಪನವರ ಕಿರು ಪರಿಚಯ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಅಫ್‌ಜಲಪುರ ತಾಲೂಕಿನ ಚಿಕ್ಕಹಳ್ಳಿ ಬಿದನೂರಿನಲ್ಲಿ ಮಡಿವಾಳಪ್ಪನವರು ಹುಟ್ಟಿದರು. ತಾಯಿ ಗಂಗಮ್ಮ. ಇವರು ತಂದೆಯ ಹೆಸರನ್ನು ಬಚ್ಚಿಟ್ಟರು. ಮಡಿವಾಳಪ್ಪನವರಿಗೆ ಇದು ಒಂದು ದೊಡ್ಡ ಪ್ರಶ್ನೆ ಆಯ್ತು. ಇದೆ ಮುಂದೆ ಅವರಿಗೆ ಸತ್ವ ಪರೀಕ್ಷೆ ಆಗಿ ಪರಿಣಮಿಸಿತು.  ಮಡಿವಾಳಪ್ಪನವರು ಬಾಲಕರಾಗಿದ್ದಾಗ ಆಟ ಆಡುವಾಗ ಒಬ್ಬ ಹೆಣ್ಣು ಮಗಳಿಗೆ ಚೆಂಡು ಬಡಿದಿದ್ದಕ್ಕೆ “ಹಾಟ್ಯಾ ಇನ್ನ ತಂದಿ ಇದ್ರ ಎಷ್ಟು ಮೆರೀತಿದ್ದಿಯೋ ಏನೋ” ಅಂತ ಧ್ವನಿ ಎತ್ತರಿಸಿ ಒದರಾಡಿದಳು. ಆಕಸ್ಮಿಕವಾಗಿ ಮಡಿವಾಳಪ್ಪನವರ ಮೇಲೆ ಆದ ಈ ಆಘಾತದಿಂದ  ಅವರು ಘಾಸಿಗೊಂಡರೂ ಅವರಲ್ಲಿನ ಚೈತನ್ಯ ಜಾಗೃತವಾಯಿತು. ಆಗ ಕರುಣಿಯಾಗಿ ಮಾರ್ಗ ತೋರಿದವರು ಬಿದನೂರು ಮಠದ…

0 Comments

ವ್ಯೋಮಕಾಯ ಅಲ್ಲಮ ಪ್ರಭುಗಳ “ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ” ವಚನ ವಿಶ್ಲೇಷಣೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ,ಮೇದು ಬಂದೆನೆಂದಡೆ,ಇದ ಕಂಡು ಬೆರಗಾದೆ.ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದರೆ,ಇದ ಕಂಡು ಬೆರಗಾದೆ.ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ,ಇದ ಕಂಡು ಬೆರಗಾದೆ, ಗುಹೇಶ್ವರಾ(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-14/ವಚನ ಸಂಖ್ಯೆ-27) ಅಲ್ಲಮಪ್ರಭುಗಳ ಈ ಬೆಡಗಿನ ವಚನ ಮನುಷ್ಯ ಸ್ವಭಾವದ ಒಳ ಸೂಕ್ಷ್ಮತೆಗಳನ್ನು ಸ್ವಾರಸ್ಯಕರ ಮತ್ತು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಅಜ್ಞಾನದಲ್ಲಿ ಓಲಾಡುವ ಮನಸ್ಸಿಗೆ ಎಚ್ಚರಿಕೆ ಕೊಡುವ ಸಮರ್ಥನೆಯಾಗಿದೆ. ಆಧ್ಯಾತ್ಮದ ಬೆಳಕನ್ನು ಉಜ್ವಲಗೊಳಿಸುವ ಸಮರ್ಥನೆಯದು. ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಆ ಕಾಲದ ತಾತ್ವಿಕ ಪರಂಪರೆಗಳ ಅಸ್ತಿತ್ವ ಮತ್ತು ಅನಿರೀಕ್ಷಿತವಾದ ನಿಗೂಢತೆ…

0 Comments

ಮಾದಾರ ಚನ್ನಯ್ಯನವರ ಜಯಂತಿ | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.

ಮಾದಾರ ಚನ್ನಯ್ಯನವರ ಜಯಂತಿ ಅಂಗವಾಗಿ ಅವರನ ಸಾತ್ವಿಕ ಬದುಕು, ನಡೆ ನುಡಿ ಸಿದ್ಧಾಂತ ಕುರಿತು ಲೇಖನ. ಇದ್ದು ಇರದಂತೆ, ಹೊದ್ದೂ ಹೊದೆಯದಂತೆ, ಸದ್ದು ಗದ್ದಲವಿಲ್ಲದೆ, ನಿರಾಳವಾಗಿ, ನಿತ್ಯ ತೃಪ್ತನಾಗಿ ಬದುಕಿದ್ದ ಚನ್ನಯ್ಯನವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ಕಂಚಿಪುರದಲ್ಲಿ. “ನಡೆ ನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ” “ಆಚಾರವೇಕುಲ, ಅನಾಚಾರವೇ ಹೊಲೆಯಂದು ಅರಿತು ಶ್ರಮ ಗೌರವ ಅಳವಡಿಸಿಕೊಂಡ ಭಕ್ತ ಶ್ರೇಷ್ಠ, ಕಾಯಕನಿಷ್ಠೆಯ ಮೇರು ಶಿಖರವನ್ನು ಅಲಂಕರಿಸಿದ ಶರಣ ಚನ್ನಯ್ಯನವರು 12 ನೇ ಶತಮಾನದ ಬಸವ ಸಂಕುಲದ ಆದರ್ಶ ಪುರುಷ. ಮಾದಾರ ಚನ್ನಯ್ಯನವರು ತಮಿಳುನಾಡಿನ ಕಂಚಿ ಪಟ್ಟಣದಲ್ಲಿ ಚೋಳ ರಾಜನ…

0 Comments

ಶರಣ ಮೋಳಿಗೆ ಮಾರಯ್ಯನವರ ವಚನ – ನಿರ್ವಚನ | ಶ್ರೀ. ಗುರುಪ್ರಸಾದ ಕುಚ್ಚಂಗಿ, ಬೆಂಗಳೂರು.

ಆನೆ ಕುದುರೆ ಭಂಡಾರವಿರ್ದಡೇನೊ?ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ,ನಿಃಕಳಂಕ ಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-560/ವಚನ ಸಂಖ್ಯೆ-1504) 770 ಅಮರಗಣಂಗಳಲ್ಲಿ ಒಬ್ಬರು ಮೋಳಿಗೆ ಮಾರಯ್ಯ ಶರಣರು. ಮೂಲತ ಇವರು ಕಾಶ್ಮೀರದ ಮಾಂಡವ್ಯಪುರದ ಅರಸರು. ಬಸವಣ್ಣನವರ ಕೀರ್ತಿವಾರ್ತೆ ಕೇಳಿ ಕಲ್ಯಾಣಕ್ಕೆ ಬಂದು ಆ ಕಾಯಕ ನೆಲದಲ್ಲಿ ಮೋಳಿಗೆ (ಕಟ್ಟಿಗೆ) ಕಾಯಕಗೈದು ಕಲ್ಯಾಣದಲ್ಲಿಯೆ ಲಿಂಗೈಕ್ಯರಾದರು. ಇವರ ಮಡದಿ ಮಹಾದೇವಿ, ಮೋಳಿಗೆ ಮಹಾದೇವಿಯೆಂದೆ ಪ್ರಸಿದ್ಧರಾಗಿರುವರು.…

0 Comments