ಅರಮನೆ-ಗುರುಮನೆ ಹಿರಿದಾದ ಕಾರಣ, ಹಾದರ ಸಲ್ಲ/ ಡಾ. ಬಸವರಾಜ ಸಾದರ.

ಸಮಾನತೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಧಾನ ತತ್ವ ಮತ್ತು ಲಕ್ಷಣ. ಇದನ್ನು 900 ವರ್ಷಗಳ ಹಿಂದೆಯೇ ತಮ್ಮ ವೈಯಕ್ತಿಕ ಮತ್ತು ಸಾಮುದಾಯಿಕ ಬದುಕುಗಳಲ್ಲಿ ಪ್ರಾಯೋಗಿಕವಾಗಿ ಆಚರಿಸಿ, ಅದರ ಫಲಿತಗಳನ್ನು ವ್ಯವಸ್ಥೆಯ ಸುಸ್ಥಿತಿಗಾಗಿ ಧಾರೆಯೆರೆದವರು ಕನ್ನಡ ಶರಣರು. ಪುರಾತನ ಭಾರತೀಯ ಪರಂಪರೆಯ ಕ್ರೌರ್ಯದ ಪರಮಾಧಿಯೆಂಬಂತೆಯೇ ಹರಿದುಕೊಂಡು ಬಂದಿದ್ದ ಶೋಷಣೆಯನ್ನು ಪ್ರತಿಭಟಿಸಿ, ಸ್ಥಗಿತ ವ್ಯವಸ್ಥೆಯನ್ನು ಚಲನಶೀಲಗೊಳಿಸಿ, ವರ್ಗ, ವರ್ಣ, ಲಿಂಗಭೇದರಹಿತ ಸಮಾಜವನ್ನು ನಿರ್ಮಿಸುವ ಗುರಿ ಹೊಂದಿದ್ದ ಅವರು, ಸಾಧ್ಯವಿರುವ ಎಲ್ಲ ಕ್ಷೇತ್ರಗಳಲ್ಲೂ ಸಮಾನತೆಯ ಕ್ರಿಯಾಪರಿಕಲ್ಪನೆಯನ್ನು ಆಚರಣೆಗಳ ಮೂಲಕ ಜಾರಿಗೆ ತಂದರು. ಇದರ ಫಲಿತವೆಂಬಂತೆ ಶೂದ್ರವರ್ಗದ ಜನ ಹಾಗೂ ಮಹಿಳೆಯರು ಸಮಾಜದ…

1 Comment

ಪರಮ ಪೂಜ್ಯ ಶ್ರೀ ಮ. ನಿ. ಪ್ರ. ಶ್ರೀ. ಗುರುಮಹಾಂತ ಸ್ವಾಮೀಜಿಯವರ ಪಟ್ಟಾಧಿಕಾರದ 20 ನೇ ವರ್ಷದ ಸಂಭ್ರಮಾಚರಣೆ / ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸೂಗೂರ.

ಬಸವ ಭಕ್ತಿ ಸಂಪನ್ನರು, ಸದು ವಿನಯದ ಭಂಡಾರಿಗಳು, ಸುಶಿಕ್ಷಿತ ವಿದ್ಯಾವಂತರು ಹಾಗೂ ಮಾತೃ ಹೃದಯಿಗಳಾದ ಶ್ರೀ. ಮ. ನಿ. ಪ್ರ. ಗುರು ಮಹಾಂತ ಪೂಜ್ಯರ ಪಟ್ಟಾಧಿಕಾರದ 20 ನೇ ವರ್ಷದ ಸಂಭ್ರಮಾಚರಣೆಗೆ ಭಕ್ತಿಯ ಪ್ರಣಾಮಗಳು. ಶರಣ ದಂಪತಿಗಳಾದ ಶ್ರೀ. ವೀರಪ್ಪನವರು ಹಾಗೂ ಶ್ರೀಮತಿ. ಶಾಂತಮ್ಮನವರ ಉದರದಲ್ಲಿ  27.05.1960 ರಂದು ಗದಗ ಜಿಲ್ಲೆಯ ನರಗುಂದದಲ್ಲಿ ಜನಿಸಿದರು. ಇವರ ಪ್ರಾಥಮಿಕ, ಪ್ರೌಢ & ಪದವಿ ಪೂರ್ವ ಶಿಕ್ಷಣ ನರಗುಂದದಲ್ಲಿಯೇ ಆಯಿತು. ನಂತರ ಪದವಿ ಶಿಕ್ಷಣವನ್ನು ಧಾರವಾಡದ ಮುರುಘಾ ಮಠದ ವಸತಿ ನಿಲಯದಲ್ಲಿದ್ದು ಬಿ. ಎ. ಮತ್ತು ಎಲ್. ಎಲ್. ಬಿ…

0 Comments

ಕಲ್ಯಾಣ ಕ್ರಾಂತಿ / ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ,ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯಾ,ನಾನು, ನೀವು ಬಂದ ಕಾರ್ಯಕ್ಕೆ ಪ್ರಭುದೇವರು ಬಂದರಯ್ಯಾ,ಕಲ್ಯಾಣವೆಂಬುದು ಪ್ರಣತೆಯಾಗಿತ್ತು,ನಾನು ತೈಲವಾದೇನು, ನೀವು ಬತ್ತಿಯಾದಿರಿ,ಪ್ರಭುದೇವರು ಜ್ಯೋತಿಯಾದರು,ಪ್ರಣತೆ ಒಡೆದಿತ್ತು, ತೈಲ ಚೆಲ್ಲಿತ್ತು,ಬತ್ತಿ ಬಿದ್ದಿತ್ತಯ್ಯಾ, ಜ್ಯೋತಿ ನಂದಿತ್ತಯ್ಯಾ,ನಮ್ಮ ಕೂಡಲಸಂಗಮ ಶರಣರ ಮನ ನೊಂದಿತ್ತಯ್ಯಾ. ಈ ವಚನ ಸಮಗ್ರ ವಚನ ಸಂಪುಟದಲ್ಲಿ ಇಲ್ಲ. ಇದು ಕಾಲಜ್ಞಾನದ ವಚನವೆಂದು ಮೊಟ್ಟ ಮೊದಲು ಉತ್ತಂಗಿ ಚೆನ್ನಪ್ಪನವರು ಕಲಬುರ್ಗಿಯಲ್ಲಿ ಜರುಗಿದ ಅಖಿಲ ಭಾರತ 32 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಭಾಷಣದ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ. ಸಮ್ಮೇಳನ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-32ಸರ್ವಾಧ್ಯಕ್ಷರು…

0 Comments

ಸುಯಿಧಾನಿ ಅಕ್ಕ ಮಹಾದೇವಿ / ಡಾ. ಹೇಮಾ ಪಟ್ಟಣಶೆಟ್ಟಿ, ಧಾರವಾಡ.

ಕದಳಿ ಎಂಬುದು ತನು, ಕದಳಿ ಎಂಬುದು ಮನ,ಕದಳಿ ಎಂಬುದು ವಿಷಯಂಗಳು.ಕದಳಿ ಎಂಬುದು ಭವಘೋರಾರಣ್ಯ.ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದುಕದಳಿಯ ಬನದಲ್ಲಿ ಭವಹರನ ಕಂಡೆನು.ಭವ ಗೆದ್ದು ಬಂದ ಮಗಳೆಂದುಕರುಣದಿ ತೆಗೆದು ಬಿಗಿದಪ್ಪಿದಡೆಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು.(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-52 / ವಚನ ಸಂಖ್ಯೆ-139) ಎಂದು ಪ್ರತೀಕಾತ್ಮಕವಾಗಿ ನುಡಿದು, ಕದಳಿಯಲ್ಲೇ ಲೀನಳಾದ ಮಹಾದೇವಿಯಕ್ಕನವರು ಕನ್ನಡದ ಮೊಟ್ಟಮೊದಲ ಕವಯಿತ್ರಿ ಅಷ್ಟೇ ಅಲ್ಲ ಶ್ರೇಷ್ಠ ಕವಯಿತ್ರಿಯೂ ಕೂಡ. ಕರ್ನಾಟಕದ ಮೊದಲ ಅನುಭಾವಿ ಮಹಿಳೆಯೂ ಹೌದು. ಜೀವನದಲ್ಲಿ ಹಲವಾರು ಏರಿಳಿತ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ, ಸಾಧನೆಯ ಮಾರ್ಗ…

0 Comments

ವಚನಗಳಲ್ಲಿ ಮಹಿಳೆಯರ ಸಬಲೀಕರಣ / ಶ್ರೀಮತಿ ನಾಗರತ್ನ ಜಿ ಕೆ, ಮೈಸೂರು.

ಪ್ರಥಮನಾಮಕ್ಕೀಗ ಬಸವಾಕ್ಷರವೆ ಬೀಜ.ಗುರುನಾಮ ಮೂಲಕ್ಕೆ ಅಕ್ಷರಾಂಕ.ಬಸವಣ್ಣ ಬಸವಣ್ಣ ಬಸವಣ್ಣ ಎಂದೀಗದೆಸೆಗೆಟ್ಟೆನೈ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ನಾಲ್ಕು-2021 / ಪುಟ ಸಂಖ್ಯೆ-405 / ವಚನ ಸಂಖ್ಯೆ-1293) 12 ನೇ ಶತಮಾನದಲ್ಲಿನ ವಚನಕಾರ್ತಿಯರಿಗೆ ಸ್ವಾತಂತ್ರ್ಯ, ಸಮಾನತೆ, ಸಬಲೀಕರಣ ದೊರೆತದ್ದೇ ಬಸವಣ್ಣರಿಂದ ಎಂದು ಮಮಗೆ ತಿಳಿದ ವಿಷಯ. ಪುರುಷ ಪ್ರಧಾನವಾಗಿದ್ದ 12 ನೇ ಶತಮಾನದಲ್ಲಿ ಹೆಣ್ಣು ಮೈಲಿಗೆ, ಹೆಣ್ಣು ಅಬಲೆ, ಹೆಣ್ಣು ಅಶಕ್ತಳು, ಹೆಣ್ಣು ಕನಿಷ್ಠಳು ಎಂದೆಲ್ಲಾ ತಿಳಿದಿದ್ದ ಆ ಕಾಲ ಘಟ್ಟದಲ್ಲಿ ಹೆಣ್ಣು ಜೀವಾತ್ಮಳು, ಹೆಣ್ಣು ಸಶಕ್ತೆ, ಹೆಣ್ಣು ಸಬಲೆ, ಎಂದು ತೋರಿಸಿಕೊಟ್ಟದ್ದು ಬಸವಣ್ಣನವರು. ತಾ ಮಾಡಿದ ಹೆಣ್ಣು…

0 Comments

ಅವಗುಣಗಳು ಬಿಟ್ಟು ಬಿಡುವುದೇ ಜೀವನ ದರುಶನ / ಡಾ. ಸಿದ್ದು ಯಾಪಲಪರವಿ, ಗದಗ.

ಮನುಷ್ಯ ದುಃಖಿತನಾಗುವುದು ಸಹಜ, ಅದರ ಹಿನ್ನೆಲೆ ಅರಿತು ಪರಿಹಾರ ಕಂಡುಕೊಳ್ಳದಿದ್ದರೆ ಶೋಷಣೆ ಬೆಂಬಿಡದೆ ಕಾಡುತ್ತದೆ. ಧರ್ಮ ಎಂದೂ ಶೋಷಣೆ ಅಸ್ತ್ರವಾಗಬಾರದು, ಜ್ಞಾನಿಗಳು, ಅನುಭಾವಿಗಳು, ಶರಣರು ಇದರ ಪೂರ್ವಾಪರ ಚಿಂತನೆ ಮಾಡಿ ಪರಿಹಾರ ಹುಡುಕುವ ಮನೋಭೂಮಿಕೆ ಬಸವಾದಿ ಶರಣರು ನಮಗೆ ಧಾರೆ ಎರೆದಿದ್ದಾರೆ. ಬದುಕು ಸುಧಾರಿಸಲು ಪಾಠ ಕಲಿಸಿದವರು ಮಹಾವೀರ, ಬುದ್ಧ, ಬಸವ. ಆದರೆ ಇನ್ನೂತನಕ ನಾವಾದರು ನಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳದೆ ಅಜ್ಞಾನವೆಂಬ ಕೂಪದಲ್ಲಿ ಬಿದ್ದು ಅಹಂಕಾರವೆಂಬ ಮಿತಿಗೆ ಒಳಪಟ್ಟು ಇಡೀ ಜೀವನ ಜರ್ಝರಿತ ಮಾಡಿಕೊಳ್ಳುತಿರುವುದು ಸರ್ವೆ ಸಾಮಾನ್ಯವಾಗಿದೆ. ನಮ್ಮ ಶಕ್ತಿ ಸಾಮರ್ಥ್ಯ ನಮಗೆ ಅರಿವಾಗಬೇಕಾದರೆ ಕೆಲವೊಂದು ಮೂಲಭೂತ…

0 Comments

ಅಲ್ಲಮ ಅನುಭಾವದ ಅನರ್ಘ್ಯ ರತ್ನ / ಡಾ. ಸಿದ್ದು ಯಾಪಲಪರವಿ, ಗದಗ.

ಜಾತಿ ಜಾತಿ ಮಧ್ಯೆ ಸಂಘರ್ಷ, ಕಂದಾಚಾರ, ಮೂಢನಂಬಿಕೆ ಅಟ್ಟಹಾಸ, ಅಸಮಾನತೆಯ ತಾಂಡವ ನೃತ್ಯ ಮೇಲು ಕೀಳೆಂಬ ಜಂಜಾಟದ ಮಧ್ಯೆಯ 12 ನೇಯ ಶತಮಾನ ವೈಚಾರಿಕ ವೈಜ್ಞಾನಿಕ ತಳಹದಿ ಹಾಸು ಹೊಕ್ಕಾಗಿಸಿ ಅನುಭವ ಮಂಟಪವೆಂಬ ಶರಣರ ಅನುಭವ ಚಿಂತನ ಮಂಥನಕ್ಕೆ ಗ್ರಾಸ ಒದಗಿಸಿದ್ದು, ಅದರ ಪೀಠಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅಲ್ಲಮ ಪ್ರಭು ದೇವರು ಅನುಭಾವದ ಅನರ್ಘ್ಯರತ್ನ. ಇಂದಿನ ಪಾರ್ಲಿಮೆಂಟ್ ಜನಸಾಮಾನ್ಯರ ಆಶೋತ್ತರಗಳನ್ನು ಪೂರೈಸಿದರೆ, ಅಂದಿನ ಅನುಭವ ಮಂಟಪ ಜೀವ ಸಂಕುಲದ ಸರ್ವಾಂಗೀಣ ಬದುಕಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಪೂರೈಸಿ ಇಂದು ನಮ್ಮ ಗಮನಕ್ಕೂ ಬಾರದ ಸಾವಿರಾರು ಸಂಕಷ್ಟದ ಸಂಕೋಲೆಗಳಿಗೆ…

1 Comment

ಶ್ರಾವಣ ಮಾಸದ ಚಿಂತನೆ-01 / ಅವಿರಳಜ್ಞಾನಿ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ / ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

(ಶ್ರಾವಣಮಾಸದ ನಿಮಿತ್ತ ನಾಡಿನಾದ್ಯಂತ ಪುರಾಣ ಪ್ರವಚನ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ ಕುರಿತು ಶ್ರಾವಣ ಮಾಸದ ಪರ್ಯಂತ ಕೆಲವು ಚಿಂತನೆಗಳನ್ನು ಪ್ರಕಟಿಸಬೇಕೆಂಬ ಆಶಯ ನನ್ನದು. ಓದಿ ಅಭಿಪ್ರಾಯ, ಸಲಹೆ, ಸೂಚನೆ, ಮಾರ್ಗದರ್ಶನ ಮಾಡಬೇಕೆಂದು ವಿನಂತಿಸುವೆ) ಮರ್ತ್ಯಲೋಕದ ಭಕ್ತರ ಮನವಬೆಳಗಲೆಂದು ಇಳಿತಂದನಯ್ಯಾ ಶಿವನು.ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ.ಚಿತ್ತದ ಪ್ರಕೃತಿಯ ಹಿಂಗಿಸಿ,ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ,ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ.ಭಾವವೆಲ್ಲ ಮಹಾಘನದ ಬೆಳಗು.ಚೆನ್ನಮಲ್ಲಿಕಾರ್ಜುನಯ್ಯಾ,ನಿಮ್ಮ ಶರಣ ಸಮ್ಯಕ್ ಜ್ಞಾನಿ ಚೆನ್ನಬಸವಣ್ಣನಶ್ರೀಪಾದಕ್ಕೆ ಶರಣೆಂದುಎನ್ನ ಭವಂ ನಾಸ್ತಿಯಾಯಿತ್ತಯ್ಯಾ ಪ್ರಭುವೆ.(ಸಮಗ್ರ ವಚನ ಸಂಪುಟ: 5-2021 / ಪುಟ…

0 Comments

ಬೆಳಗಾವಿ ಜಿಲ್ಲೆಯಲ್ಲಿ ಶರಣರ ಹೆಜ್ಜೆ ಗುರುತುಗಳು / ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಕ್ರಾಂತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಬಸವಣ್ಣನವರು ಸರ್ವಸಮಾನತೆ, ಕಾಯಕ, ದಾಸೋಹ ತತ್ವಗಳ ಮೂಲಕ ಸರ್ವಾಂಗ ಸುಂದರ ಸಮಾಜ ನಿರ್ಮಾಣಕ್ಕಾಗಿ ಮಾಡಿದ ಈ ಕ್ರಾಂತಿ ಮನುಕುಲದ ಏಕತೆಗಾಗಿ ನಡೆದ ಮೊದಲ ಪ್ರಯತ್ನವಾಗಿದೆ. ಸಾವಿರಾರು ವರ್ಷಗಳಿಂದ ಶೋಷಿತ, ದಮನಿತ ಸಮುದಾಯಕ್ಕೆ ಧ್ವನಿಯನ್ನು ಕೊಟ್ಟ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಬಸವಣ್ಣನವರ ಕೀರ್ತಿ, ವಾರ್ತೆಗಳನ್ನು ಕೇಳಿ ಕಾಶ್ಮೀರದಿಂದ, ಗುಜರಾತದಿಂದ, ದೂರದ ಕಂದಹಾರದಿಂದ, ಮಹಾರಾಷ್ಟ್ರದಿಂದ ಹೀಗೆ ದೇಶ-ವಿದೇಶಗಳಿಂದ ಅಭಿಮಾನಿ ಶರಣರು ಕಲ್ಯಾಣಕ್ಕೆ ಬಂದರು. ಕಲ್ಯಾಣ ಪಟ್ಟಣ ಭೂ ಕೈಲಾಸವಾಯಿತು. ಬಸವಣ್ಣನವರು ಸ್ಥಾಪಿಸಿದ “ಅನುಭವ ಮಂಟಪ” ಜಗತ್ತಿನ ಮೊಟ್ಟ…

0 Comments

ಅಷ್ಟಾವರಣಗಳಲ್ಲಿ ರುದ್ರಾಕ್ಷಿ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ನಮ್ಮ ಶರಣ ಸಂಸ್ಕೃತಿಯ ಇತಿಹಾಸದಲ್ಲಿ ಪರಸ್ಪರ ಪೂರಕವಾದ ಎರಡು ಅಂಶಗಳಿಗೆ ಒತ್ತುಕೊಡುತ್ತೇವೆ. ಒಂದು ಭೌತಿಕ ಇನ್ನೊಂದು ಆಧ್ಯಾತ್ಮಿಕ. ಭಕ್ತಿಯ ಮೇರುತನವನ್ನು ಬಿಂಬಿಸುವ ಶರಣ ಧರ್ಮದ ಅಷ್ಟಾವರಣ ಆಧ್ಯಾತ್ಮಿಕ ಬೆಳವಣಿಗೆಯ ಪವಿತ್ರತೆಯನ್ನು ಬಿಂಬಿಸುವ ಸಾಧನವದು. ಅರಿವಿನ ಚಿಂತನೆಯನ್ನು ಅಧ್ಯಾತ್ಮದಲ್ಲಿ ಅನುಷ್ಠಾನಗೊಳಿಸುವ ಶಕ್ತಿಯದು. ಸುಪ್ತ ಶಕ್ತಿಯ ಆರಾಧನೆ ಅದುವೇ ರುದ್ರಾಕ್ಷಿಯಾಗಿದೆ. ರುದ್ರಾಕ್ಷಿಯನ್ನು ಧರಿಸುವ ಆರಾಧನೆ ವೈಯಕ್ತಿಕ ಪ್ರಾರ್ಥನೆಯಲ್ಲ. ಶರಣ ಧರ್ಮದ ಶ್ರೇಷ್ಠತೆಯನ್ನು ಬಿಂಬಿಸುವ ಕ್ರಮ ರುದ್ರಾಕ್ಷಿಯಾಗಿದೆ. ವಿಭೂತಿಯಂತೆ ರುದ್ರಾಕ್ಷಿಯು ಭಕ್ತಿಯ ಸಾಧನೆಯನ್ನು ಬಿಂಬಿಸುವಬಹಿರ್ಮುಖದ ಆವರಣವಾಗಿದೆ. ಅಕ್ಷಿ ಎಂದರೆ ಕಣ್ಣು. ರುದ್ರಾಕ್ಷಿ ಎಂದರೆ ಶಿವನ ಕಣ್ಣು. ತ್ರಿಪುರ ಸಂಹಾರದ ಸಂದರ್ಭದಲ್ಲಿ ಶಿವನ…

0 Comments