ತತ್ವಪದಕಾರರು ಏಕಾಂಗಿ ಹೋರಾಟಗಾರರು | ಡಾ. ಸರ್ವಮಂಗಳ ಸಕ್ರಿ | ರಾಯಚೂರು.

ತತ್ವಪದಕಾರರು ಏಕಾಂಗಿ ಹೋರಾಟಗಾರರು. ಸಮಾಜದಲ್ಲಿ ಏಕ ವ್ಯಕ್ತಿಗಳಾಗಿ ಅನುಭಾವಿಕ ಬದುಕನ್ನು ಸ್ವೀಕರಿಸಿದವರು. ಸಮಾಜದಲ್ಲಿದ್ದ ಭ್ರಷ್ಟಾಚಾರ ಅಪ್ರಮಾಣಿಕತೆ ಜಾತೀಯತೆಯಂತ ಕರ್ಮಕಾಂಡಗಳಿಗೆ ಕಾರಣವಾಗುವ ಜನರಿಗೆ ತಮ್ಮ ಸನ್ನಡತೆಯ ಮೂಲಕ ನಡೆ ನುಡಿಯಲ್ಲೊಂದಾದ ಬದುಕನ್ನು ತೋರಿಸಿ ಕೊಟ್ಟರು. ತತ್ವ ವಿಚಾರಳಿಂದ ಸಮಾಜದ ಕಳಕಳಿ ಸಾದ್ಯ ಎಂಬುದು.. ದಿನ ನಿತ್ಯದ ಮೌಡ್ಯ ಆಚರಣೆಗಳಿಗೆ ವಿಡಂಬನೆಗೆ ಸೀಮಿತವಾಗದೆ ಸಾಮಾಜಿಕ ಪರಿವರ್ತನೆಗಳಲ್ಲಿನ ಸಮಸ್ಯೆಗಳನ್ನು ಅರಿಯುವತ್ತ ಬಗೆಹರಿಸುವ ಪ್ರಯತ್ನ ಮಾಡಿದರು, ಪ್ರೇರೇಪಿಸಿದರು. ಇಂಥಹ ಜ್ವಲಂತ ಸಮಸ್ಯೆಗಳನ್ನು ಆರ್ಭಟವಿಲ್ಲದೆ, ಆಡಂಬರವಿಲ್ಲದೆ, ಅಹಂಕಾರ ಮುಕ್ತತೆಯಿಂದ ಸಹ ಚಿಂತನೆಗಳಿಂದ ಪ್ರಾಮಾಣಿಕವಾಗಿ ಬಿಡಿಸಿ ತೋರಿಸಿದರು. ಅನುಭಾವಿ ಬದುಕಿನ ಧಾರ್ಮಿಕ ಸಂಸ್ಕ್ರತಿಯ ಬೆಳವಣಿಗೆಗೆ ಕಾರಣರಾದರು.…

0 Comments

ಶಿವಯೋಗಿ ಸಿದ್ಧರಾಮರ ವಚನಗಳಲ್ಲಿ ಜಂಗಮ / ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಯುಗಯುಗಗಳು ಸಂದರೂ ಇನ್ನೂ ಸಾವಿರಾರು ಯುಗಗಳು ಸಂದರೂ ಈ ಜಗತ್ತು ಬದುಕಿರುವವರೆಗೂ ಶರಣರು ಬದುಕಿರುತ್ತಾರೆ. ಅಂತಹ ಅಪರೂಪವಾದ ಮೌಲಿಕವಾದ, ಅಸ್ಖಲಿತವಾದ ಕಾಲಘಟ್ಟ ಅದುವೆ ಹನ್ನೆರಡನೆಯ ಶತಮಾನ. ಎಲ್ಲಾ ಧರ್ಮಗಳೂ ಸತ್ಯ, ಆನಂದ, ಮೋಕ್ಷಗಳನೆ ಮೂಲಬೇರಾಗಿಸಿದವು. ಎಲ್ಲವುದರ ಆಚರಣೆ, ಸಂಸ್ಕೃತಿ, ಶೈಲಿ, ವಿಭಿನ್ನವೆ. ಎಲ್ಲವುಗಳಲ್ಲೂ ಅವುಗಳದೇ ಆದ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳೂ ಕೂಡಾ ಇದ್ದೇ ಇವೆ. ಹಾಗೆ ಎಲ್ಲವೂ ವ್ಯಕ್ತಿಗತ ಆನಂದದ ಮೋಕ್ಷದ ಪಥವ ತೋರಿದರೆ ಸಮಗ್ರತೆಯ ಸಾರವಾದ ಬಸವ ಪ್ರಣೀತ ಶರಣಧರ್ಮವು ಆ ಎಲ್ಲ ಚೌಕಟ್ಟುಗಳ ತೆಕ್ಕೆಗೆ ಸೇರದೆ ವ್ಯಕ್ತಿಗತ ಆನಂದದ ಪಾತಳಿಯ ಸಮಷ್ಠಿಯ ಆನಂದದಲ್ಲಿ…

0 Comments

ಶ್ರೀ ಸಿದ್ದಗಂಗಾ ಮಠ-ತುಮಕೂರಿನ ಹಳೆಯ ವಿದ್ಯಾರ್ಥಿಯೊಬ್ಬನ ನೆನಪುಗಳು / ಡಾ. ಎಮ್.‌ ಎನ್‌, ಚನ್ನಬಸಪ್ಪ, ತುಮಕೂರು.

ಅಮೃತ ಗಂಗಾ: ಅಮೃತ ಮಹೋತ್ಸವದ ವಿಶೇಷ ಸಂಚಿಕೆಯಲ್ಲಿ ಡಾ. ಎಂ.ಎನ್. ಚನ್ನಬಸಪ್ಪ, ಪ್ರಾಂಶುಪಾಲರು, ಎಸ್.ಐ. ಟಿ., ತುಮಕೂರು ಇವರು ಬರೆದ ಲೇಖನ. ಕೆಲವು ಸ್ನೇಹಿತರು ನನ್ನ ಬಗ್ಗೆ ನೀನು ತುಂಬಾ ಅದೃಷ್ಟವಂತ ಎಂದು ಹೇಳುತ್ತಾರೆ. ಇದು ನಿಜ. ನಮ್ಮ ಊರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಮಾಡರಹಳ್ಳಿ. 1940 ರ ದಶಕದಲ್ಲಿ ನಮ್ಮ ಹಳ್ಳಿಯ ಮಟ್ಟಕ್ಕೆ ಹೋಲಿಸಿದರೆ ನಮ್ಮದು ಮಧ್ಯಮ ವರ್ಗದ ಕುಟುಂಬ ಅನ್ನಬಹುದಾಗಿತ್ತು. ಬೆಂಗಳೂರಿನ ಆರ್. ವಿ. ವಿದ್ಯಾ ಸಂಸ್ಥೆಯ ಸ್ಥಾಪನೆ ಮತ್ತು ಬೆಳವಣಿಗೆಗೆ ಕಾರಣಕರ್ತರಾದ ಶ್ರೀ ಎಂ. ಸಿ. ಶಿವಾನಂದಶರ್ಮರು (ಅವರ ಪೂರ್ವ…

0 Comments

ಕನ್ನಡ ಸಂಶೋಧನ ಜಗತ್ತಿನಲ್ಲಿ ಸಂಚಲನವನ್ನುಂಟು ಮಾಡಿದ ಮಾರ್ಗ-1 / ಶ್ರೀ. ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

“ಮಾರ್ಗ” ಶಬ್ದಕ್ಕೆ ಅನ್ವೇಷಣೆ, ದಾರಿ, ಪದ್ಧತಿಯೆಂದು ಮೂರು ಅರ್ಥಗಳಿವೆ. ಸಾಹಿತ್ಯಕ್ಷೇತ್ರದಲ್ಲಿ ಈ ಮೂರೂ ಬಗೆಯ ಕಾರ್ಯಮಾಡಿರುವ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ತಮ್ಮ ಎಲ್ಲ ಸಂಶೋಧನ ಪ್ರಬಂಧಗಳ ಸಂಕಲನವಾಗಿರುವ 8 ಸಂಪುಟಗಳಿಗೆ ಇಟ್ಟ ಶೀರ್ಷೀಕೆ “ಮಾರ್ಗ” ಹೆಸರು ತುಂಬ ಅನ್ವರ್ಥಕವಾಗಿದೆ. ಇದಲ್ಲದೆ ಅವರ ಪಿಎಚ್.ಡಿ ಪ್ರಬಂಧದ ಹೆಸರು “ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ”, ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥದ ಹೆಸರು “ಮಹಾಮಾರ್ಗ”, ಅವರು ಹುಟ್ಟಿದ್ದು ಮಾರ್ಗಶೀರ್ಷ ಮಾಸದಲ್ಲಿ. ಈ ಎಲ್ಲ ಆಕಸ್ಮಿಕಗಳ ಸಮನ್ವಯವೂ ಕುತೂಹಲಕರವೆನಿಸುತ್ತದೆ. ಕನ್ನಡ ಸೃಜನಶೀಲ ಸಾಹಿತ್ಯವು ನವೋದಯ, ನವ್ಯ, ನವ್ಯೋತ್ತರವೆಂಬ ಘಟ್ಟಗಳನ್ನು ರೂಪಿಸಿಕೊಳ್ಳುತ್ತ…

0 Comments

ಭಕ್ತ ಸ್ಥಲ / ಡಾ. ಸರ್ವಮಂಗಳ ಸಕ್ರಿ,ರಾಯಚೂರು.

ಷಟ್ ಸ್ಥಲಗಳಲ್ಲಿ ಪ್ರಾರಂಂಭಿಕ ನಿವೇದನೆ ಭಕ್ತ ಸ್ಥಲವಾಗಿದೆ. ದೇವರೊಂದಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವ ತಾತ್ವಿಕ ಅನುಸಂಧಾನದ ಸಮರ್ಪಣೆ ಇದು. ಶರಣರ ಆನಂದದ ಭಾವವೇ ಭಕ್ತಿ ಭಾವವಾಗಿದೆ. ಇದೊಂದು ತೆರೆನಾಗಿ ದೇವರೊಂದಿಗೆ ಒಂದಾಗುವ ಭಾವುಕ ಪ್ರಜ್ಞೆ. ತಾಯಿ ಭಾವದ ಮಮತೆಯದು. ಭಕ್ತನಾಗುವುದೆಂದರೆ ಮನ ಆರ್ದ್ರವಾಗುವುದು, ನೀರಾಗುವುದು. ಇನ್ನೊಂದರ ಜೊತೆಗೆ ಸಂಯೋಗವಾಗುವ ಪರಿಯದು. ಹೀಗಾಗಿ ಇಲ್ಲಿ ಅದ್ವೈತದ ಆತ್ಮತೃಪ್ತಿ ಅಡಗಿರುತ್ತದೆ. ಈ ಮನದಲ್ಲಿ ಲೌಕಿಕ ವ್ಯವಹಾರಗಳು ನಡೆಯುತ್ತಿರುವುದು ಭಕ್ತಿ ಎಂಬ ಮಂತ್ರ ಸ್ವರೂಪಗಳಿಂದ. ಬಸವಣ್ಣನವರಿಗೆ ಸಂಗಮನಾಥನೊಂದಿಗೆ ಉಂಟಾಗುವ ಭಕ್ತಿ ಭಾವ, ಅಲ್ಲಮಪ್ರಭುಗಳಿಗೆ ಗುಹೇಶ್ವರನೊಂದಿಗೆ ಏಕವಾಗುವ, ಅಕ್ಕಮಹಾದೇವಿಗೆ ಚೆನ್ನಮಲ್ಲಿಕಾರ್ಜುನನನ್ನು ಕಾಣುವ ದೈವಿಕ…

0 Comments

ಅನ್ನಭೇದ-ಪಂಕ್ತಿಭೇದದ ಕ್ರೌರ್ಯಾಸಹ್ಯಕ್ಕೆ ಸಮಾನತೆಯ ಸೂತ್ರ / ಡಾ. ಬಸವರಾಜ ಸಾದರ, ಬೆಂಗಳೂರು.

ಉಚ್ಚವರ್ಣದವರ ಊಟದ ಪಂಕ್ತಿಯಲ್ಲಿ ಕುಳಿತ ಶೂದ್ರ ವ್ಯಕ್ತಿಗಳನ್ನು ಅಲ್ಲಿಂದ ಎಬ್ಬಿಸಿ ಹೊರಗಟ್ಟಿದ ಹಲವಾರು ಘಟನೆಗಳು ನಮ್ಮಲ್ಲಿ ವರದಿಯಾಗಿದೆ. ಸೆಕ್ಯೂಲರ್ ಪ್ರಜಾಪ್ರಭುತ್ವದ ಕಾನೂನುಗಳನ್ನು ತುಳಿದಿಕ್ಕಿ, ಜಾತ್ಯಹಂಕಾರವನ್ನೇ ಮೆರೆಸುವ ವರ್ಣವ್ಯವಸ್ಥೆ ಜೀವಂತವಿರುವಲ್ಲಿ ಇವು ಮೊದಲನೆಯ ಘಟನೆಗಳೇನೂ ಅಲ್ಲ; ಕೊನೆಯವೂ ಆಗಲಿಕ್ಕಿಲ್ಲ. ಪಂಕ್ತಿ ಮತ್ತು ಊಟಕ್ಕೆ ಮಾತ್ರ ಸೀಮಿತವಾಗದ ಹಾಗೂ ಇಡೀ ಶೂದ್ರವರ್ಗವನ್ನು ಹಲವು ಬಗೆಗಳಲ್ಲಿ ಶೋಷಿಸುತ್ತ ಬಂದಿರುವ ಈ ಮಾನವ ಕ್ರೌರ್ಯವು ಪಶು-ಪಕ್ಷಿ ಸಂಕುಲದಲ್ಲಿಯೂ ಇಲ್ಲ. ತಳವರ್ಗಗಳ ಅಸ್ತಿತ್ವ ಮತ್ತು ಅಸ್ಮಿತೆಯನ್ನೇ ಮಣ್ಣು ಮಾಡುತ್ತಿರುವ ಇಂಥ ಅಸ್ಪೃಶ್ಯತೆಯಾಚರಣೆ ಭರತ ಭೂಮಿಗಂಟಿದ ಮಹಾ ಕೊಳೆ. ಅನ್ಯಾಯ-ಅಸಮಾನತೆ-ಅಸ್ಪೃಶ್ಯತೆಯನ್ನು ನಿಯಂತ್ರಿಸಲೆಂದೇ ಕಠಿಣ ಕಾನೂನುಗಳು ಜಾರಿಯಿರುವ…

0 Comments

ಷಟ್ ಸ್ಥಲಗಳು / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

12 ನೇ ಶತಮಾನದ ಶರಣರ ಷಟ್ ಸ್ಥಲಗಳು ಆಧ್ಯಾತ್ಮಿಕ ಬದುಕಿನ ಧಾರ್ಮಿಕ ತತ್ವಗಳನ್ನು ಪ್ರೇರೇಪಿಸುತ್ತದೆ. ಶರಣ ಧರ್ಮದ ಸಾಧನೆ, ನಡೆ ನುಡಿಗಳು ಹಾಗೂ ಭಕ್ತಿ ಜ್ಞಾನ ಸಾಮರಸ್ಯವನ್ನು ಬಿಂಬಿಸುವ ತತ್ವಗಳೇ ಷಟ್ ಸ್ಥಲಗಳಾಗಿವೆ. ಶರಣರು ತಮ್ಮ ಧರ್ಮದ ತಾತ್ವಿಕ ಸ್ವಾತಂತ್ರ್ಯದ ಸ್ಥಲಗಳ ವಿವೇಚನೆಯಲ್ಲಿ ಲಿಂಗಾಯತ ಧರ್ಮದ ವಿವೇಚನೆಯನ್ನು ಕಟ್ಟಿಕೊಟ್ಟಿದ್ದಾರೆ. ಭಕ್ತನಾದರೆ ತನು ಮನದ ಮೇಲಣ ಆಸೆ ಅಳಿದಿರಬೇಕು. ಮಾಹೇಶ್ವರನಾದರೆ ಪರಧನ ಪರಸತಿ ಆಸೆ ಅಳಿದಿರಬೇಕು. ಪ್ರಸಾದಿಯಾದರೆ ಪ್ರಸಾದವ ಕೊಂಡ ಕಾಯ ಅಳಿಯದೇ ಉಳಿದಿರಬೇಕು. ಪ್ರಾಣಲಿಂಗಯಾದರೆ ಸುಖ-ದುಃಖಾದಿಗಳನ್ನು ಮರೆತು ಪ್ರಾಣ ಲಿಂಗಸ್ಥಲದಲ್ಲಿ ಸುಸ್ಥಿರನಾಗಿರಬೇಕು. ಶರಣನಾದರೆ ಸತಿಪತಿ ಭಾವವಳಿದಿರ ಬೇಕು.…

0 Comments

ಮಾಗಿದ ಮಗುತನದ ಮಾನವತಾ ಮೂರ್ತಿ “ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಗಳು” / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

(ಪೂಜ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ತ ವಿಶೇಷ ಲೇಖನ) ಸತ್ತು ಹುಟ್ಟಿ ಕೆಟ್ಟವರೆಲ್ಲರು,ದೇವಲೋಕಕ್ಕೆ ಹೋದರೆಂಬಬಾಲಭಾಷೆಯ ಕೇಳಲಾಗದು.ಸಾಯದ ಮುನ್ನ ಸ್ವಯವನರಿದಡೆದೇವನೊಲಿವ ನಮ್ಮ ಗುಹೇಶ್ವರನು.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-189/ವಚನ ಸಂಖ್ಯೆ-606) “ಬೆಳಕು” ತುಳುಕಾಡುವುದು ಎಂದರೆ ಇದೆ ಇರಬಹುದು ಎಂದು ನನಗೆ ಪೂಜ್ಯ ಸಿದ್ದೇಶ್ವರ ಶ್ರೀಗಳ ಮಾತುಗಳನ್ನು ಕೇಳಿದಾಗಲೆಲ್ಲ ಅನಿಸುವುದು. “ತನ್ಮಯತೆ” ಎಂಬುದಕ್ಕೆ ಅರ್ಥವನ್ನು ನಾನು ಪದಕೋಶದಲ್ಲಿ ಹುಡುಕಲಿಲ್ಲ. ಶ್ರೀಗಳ ಮೃದುವಾದ ಪದಗಳಲ್ಲಿ ಕಂಡೆ ಅವರ ನುಡಿ ಕೇಳಿದಾಗಲೆಲ್ಲಾ ಕಳೆದು ಹೋಗುವುದು ಭಾವ ಪರವಶತೆಗೆ ಒಳಗಾಗುವ ಸ್ಥಿತಿಗೆ ತಲುಪಿದಾಗಲೆಲ್ಲಾ “ತನ್ನಯತೆ” ಎಂಬುದು ಇದೇ ಎಂಬುದನ್ನು ಅನುಭವಿಸಿದೆ. ಇದು ಕೇವಲ ನನ್ನ ಒಬ್ಬಳ…

0 Comments

ಜೀವನ ಮೌಲ್ಯಗಳು – ಶರಣರ ಕೊಡುಗೆ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಶರಣರು ಅವರ ಹಿರಿಮ ಗರಿಮೆಗಳನ್ನು ಅವರ ಹಾಗೆಯೇ ಇರುವವರೇ ಬಲ್ಲರು. ಅವರು ನಿಜವನರಿದದ ನಿಶ್ಚಿಂತರು. ಮರಣವನ್ನೇ ಗೆಲಿದ ಮಹಂತರು. ಘನವ ಕಂಡ ಮಹಿಮರು. ಬಯಲು ಬಿತ್ತಿ ಬಯಲು ಬೆಳೆದು ಬಯಲನುಂಡು ಬಯಲಾದ ಬಯಲಯೋಗಿಗಳು. ಶರಣರ ಮಾತುಗಳೂ ಹಾಗೆಯ, ಮಧುರ, ಜೇನು ಬೆರೆಸಿದ ಹಾಲಿನಂತೆ ಸವಿ, ಕೆಲವೊಮ್ಮೆ ಕಠಿಣ, ಕೆಲವೂಮ್ಮೆ ಕಹಿ. ಅದರಕ್ಕೆ ಕಹಿಯಾದರು ಉದರಕ್ಕೆ ಸಿಹಿ. ಅವು ಮನದ ಕತ್ತಲೆಉನ್ನು ಕಳೆಯುವ ಜ್ಯೋತಿಗಳು. ಅವುಗಳಲ್ಲಿ ಹದವಾದ ಹಾಗೂ ಹಸನಾದ ಬದುಕಿಗೆ ಬೇಕಾಗುವ ಅವಶ್ಯಕವಾದವುಗಳೆಲ್ಲ ಇವೆ. ಹೊರಗೆ ಕಾವ್ಯದ ಸೊಬಗು, ಒಳಗೆ ಅನುಭವದ ಜೇನು - ಅನುಭಾವದ ಅಮೃತ.…

0 Comments

ಶರಣರು ಕಂಡ ಬಸವಣ್ಣ: ಬಸವಣ್ಣನವರ ವ್ಯಕ್ತಿತ್ವದ ಅನಾವರಣ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ವಚನ ಸಾಹಿತ್ಯ ಮತ್ತು ಶರಣ ಸಿದ್ಧಾಂತ ಹಾಗೂ ಸಂಸ್ಕೃತಿಯ ಪುಸ್ತಕಗಳನ್ನು ಓದುವ ಹವ್ಯಾಸ ಬಹುಶಃ ಮಕ್ಕಳ ಸಾಹಿತ್ಯ ಮತ್ತು ವಚನ ಸಾಹಿತ್ಯದಲ್ಲಿ ತಮ್ಮ ಜೀವನವನ್ನು ಸವೆಸಿದ ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರಿಂದ ನನಗೆ ಬಂದ ಬಳುವಳಿ ಅನಿಸುತ್ತೆ. ಈ ಲೇಖನವನ್ನು ಬರೆಯುವುದಕ್ಕೆ ಅವರು ನನಗಿತ್ತ ಪ್ರೇರಣೆಯೇ ಕಾರಣ. ಕಳೆದ ಸುಮಾರು ಎರಡೂವರೆ ಮೂರು ದಶಕಗಳಿಂದ ಶರಣರ ಕುರಿತು ಮಾಹಿತಿ ಸಂಗ್ರಹಿಸಲು ನಮಗೆ ಸಿಕ್ಕ ಮೌಲ್ಯಯುತವಾದ ಆಕರಗಳು ಅಂದರೆ ಡಾ. ಫ. ಗು. ಹಳಕಟ್ಟಿಯವರ 770 ಅಮರ ಗಣಂಗಳ ಸಂಗ್ರಹ, ಶೂನ್ಯ ಸಂಪಾದನೆಗಳು, ಬಸವ…

0 Comments