ಶ್ರಾವಣ ಮಾಸದ ಚಿಂತನೆ-01 / ಅವಿರಳಜ್ಞಾನಿ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ / ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

(ಶ್ರಾವಣಮಾಸದ ನಿಮಿತ್ತ ನಾಡಿನಾದ್ಯಂತ ಪುರಾಣ ಪ್ರವಚನ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ ಕುರಿತು ಶ್ರಾವಣ ಮಾಸದ ಪರ್ಯಂತ ಕೆಲವು ಚಿಂತನೆಗಳನ್ನು ಪ್ರಕಟಿಸಬೇಕೆಂಬ ಆಶಯ ನನ್ನದು. ಓದಿ ಅಭಿಪ್ರಾಯ, ಸಲಹೆ, ಸೂಚನೆ, ಮಾರ್ಗದರ್ಶನ ಮಾಡಬೇಕೆಂದು ವಿನಂತಿಸುವೆ) ಮರ್ತ್ಯಲೋಕದ ಭಕ್ತರ ಮನವಬೆಳಗಲೆಂದು ಇಳಿತಂದನಯ್ಯಾ ಶಿವನು.ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ.ಚಿತ್ತದ ಪ್ರಕೃತಿಯ ಹಿಂಗಿಸಿ,ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ,ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ.ಭಾವವೆಲ್ಲ ಮಹಾಘನದ ಬೆಳಗು.ಚೆನ್ನಮಲ್ಲಿಕಾರ್ಜುನಯ್ಯಾ,ನಿಮ್ಮ ಶರಣ ಸಮ್ಯಕ್ ಜ್ಞಾನಿ ಚೆನ್ನಬಸವಣ್ಣನಶ್ರೀಪಾದಕ್ಕೆ ಶರಣೆಂದುಎನ್ನ ಭವಂ ನಾಸ್ತಿಯಾಯಿತ್ತಯ್ಯಾ ಪ್ರಭುವೆ.(ಸಮಗ್ರ ವಚನ ಸಂಪುಟ: 5-2021 / ಪುಟ…

0 Comments

ಬೆಳಗಾವಿ ಜಿಲ್ಲೆಯಲ್ಲಿ ಶರಣರ ಹೆಜ್ಜೆ ಗುರುತುಗಳು / ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಕ್ರಾಂತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಬಸವಣ್ಣನವರು ಸರ್ವಸಮಾನತೆ, ಕಾಯಕ, ದಾಸೋಹ ತತ್ವಗಳ ಮೂಲಕ ಸರ್ವಾಂಗ ಸುಂದರ ಸಮಾಜ ನಿರ್ಮಾಣಕ್ಕಾಗಿ ಮಾಡಿದ ಈ ಕ್ರಾಂತಿ ಮನುಕುಲದ ಏಕತೆಗಾಗಿ ನಡೆದ ಮೊದಲ ಪ್ರಯತ್ನವಾಗಿದೆ. ಸಾವಿರಾರು ವರ್ಷಗಳಿಂದ ಶೋಷಿತ, ದಮನಿತ ಸಮುದಾಯಕ್ಕೆ ಧ್ವನಿಯನ್ನು ಕೊಟ್ಟ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಬಸವಣ್ಣನವರ ಕೀರ್ತಿ, ವಾರ್ತೆಗಳನ್ನು ಕೇಳಿ ಕಾಶ್ಮೀರದಿಂದ, ಗುಜರಾತದಿಂದ, ದೂರದ ಕಂದಹಾರದಿಂದ, ಮಹಾರಾಷ್ಟ್ರದಿಂದ ಹೀಗೆ ದೇಶ-ವಿದೇಶಗಳಿಂದ ಅಭಿಮಾನಿ ಶರಣರು ಕಲ್ಯಾಣಕ್ಕೆ ಬಂದರು. ಕಲ್ಯಾಣ ಪಟ್ಟಣ ಭೂ ಕೈಲಾಸವಾಯಿತು. ಬಸವಣ್ಣನವರು ಸ್ಥಾಪಿಸಿದ “ಅನುಭವ ಮಂಟಪ” ಜಗತ್ತಿನ ಮೊಟ್ಟ…

0 Comments

ಅಷ್ಟಾವರಣಗಳಲ್ಲಿ ರುದ್ರಾಕ್ಷಿ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ನಮ್ಮ ಶರಣ ಸಂಸ್ಕೃತಿಯ ಇತಿಹಾಸದಲ್ಲಿ ಪರಸ್ಪರ ಪೂರಕವಾದ ಎರಡು ಅಂಶಗಳಿಗೆ ಒತ್ತುಕೊಡುತ್ತೇವೆ. ಒಂದು ಭೌತಿಕ ಇನ್ನೊಂದು ಆಧ್ಯಾತ್ಮಿಕ. ಭಕ್ತಿಯ ಮೇರುತನವನ್ನು ಬಿಂಬಿಸುವ ಶರಣ ಧರ್ಮದ ಅಷ್ಟಾವರಣ ಆಧ್ಯಾತ್ಮಿಕ ಬೆಳವಣಿಗೆಯ ಪವಿತ್ರತೆಯನ್ನು ಬಿಂಬಿಸುವ ಸಾಧನವದು. ಅರಿವಿನ ಚಿಂತನೆಯನ್ನು ಅಧ್ಯಾತ್ಮದಲ್ಲಿ ಅನುಷ್ಠಾನಗೊಳಿಸುವ ಶಕ್ತಿಯದು. ಸುಪ್ತ ಶಕ್ತಿಯ ಆರಾಧನೆ ಅದುವೇ ರುದ್ರಾಕ್ಷಿಯಾಗಿದೆ. ರುದ್ರಾಕ್ಷಿಯನ್ನು ಧರಿಸುವ ಆರಾಧನೆ ವೈಯಕ್ತಿಕ ಪ್ರಾರ್ಥನೆಯಲ್ಲ. ಶರಣ ಧರ್ಮದ ಶ್ರೇಷ್ಠತೆಯನ್ನು ಬಿಂಬಿಸುವ ಕ್ರಮ ರುದ್ರಾಕ್ಷಿಯಾಗಿದೆ. ವಿಭೂತಿಯಂತೆ ರುದ್ರಾಕ್ಷಿಯು ಭಕ್ತಿಯ ಸಾಧನೆಯನ್ನು ಬಿಂಬಿಸುವಬಹಿರ್ಮುಖದ ಆವರಣವಾಗಿದೆ. ಅಕ್ಷಿ ಎಂದರೆ ಕಣ್ಣು. ರುದ್ರಾಕ್ಷಿ ಎಂದರೆ ಶಿವನ ಕಣ್ಣು. ತ್ರಿಪುರ ಸಂಹಾರದ ಸಂದರ್ಭದಲ್ಲಿ ಶಿವನ…

0 Comments

ಪರಮ ಪೂಜ್ಯ ಶ್ರೀ ಮ. ನಿ. ಪ್ರ. ಡಾ. ಮಹಾಂತ ಶಿವಯೋಗಿಗಳವರ ಜನ್ಮದಿನದ ಭಕ್ತಿಯ ನಮನಗಳು / ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.

ಮಾಡುವಂತಿರಬೇಕು, ಮಾಡದಂತಿರಬೇಕು.ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.ಕೂಡಲಸಂಗಮದೇವರನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು.(ಸಮಗ್ರ ವಚನ ಸಂಪುಟ: ಒಂದು-2016 ಪುಟ ಸಂಖ್ಯೆ-120/ವಚನ ಸಂಖ್ಯೆ-1310) ಸಕಲ ಜೀವಾತ್ಮರ ಲೇಸಿಗಾಗಿ, ಮಾನವ ಕುಲದ ಕಲ್ಯಾಣಕ್ಕಾಗಿ ದೀನ ದಲಿತರ ಶೂದ್ರ ಅಸ್ಪೃಶ್ಯರ ಉದ್ಧಾರಕ್ಕಾಗಿ ಕಲ್ಯಾಣ ಕ್ರಾಂತಿಗೈದ ವಿಶ್ವಗುರು ಬಸವಣ್ಣನವರ ಜನ್ಮಭೂಮಿಯಾದ ಅಂದಿನ ವಿಜಾಪುರ ಜಿಲ್ಲೆಯ ಹಿಪ್ಪರಿಗಿ ಪಾಲ್ ಬಾವಿ ಹಿರಿಯಮಠದ ಶರಣ ದಂಪತಿಗಳಾದ ಶ್ರೀ ವಿರೂಪಾಕ್ಷಯ್ಯ ಹಾಗೂ ನೀಲಮ್ಮನವರ ಉದರದಲ್ಲಿ 1930 ಆಗಸ್ಟ್ 1 ರಂದು ಜನಿಸಿದರು. ಸೌದಿಯ ವಿರಕ್ತ ಮಠದ ಪೂಜ್ಯ ಶ್ರೀ ಸಂಗನ ಬಸವ ಶಿವಯೋಗಿಗಳ ಕೃಪೆಗೆ ಪಾತ್ರರಾಗಿ “ಮಹಾಂತ” ರೆಂದು ನಾಮಕರಣಗೊಂಡು ಆ ಮಠದ…

0 Comments

“ವೈಚಾರಿಕ ಶರಣ ಹಡಪದ ಅಪ್ಪಣ್ಣ”/ ಡಾ.ರಾಜೇಶ್ವರಿ ವೀ.ಶೀಲವಂತ, ಬೀಳಗಿ.

ಹನ್ನೆರಡನೆಯ ಶತಮಾನದಲ್ಲಿ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ದುಡಿಯುವ ವರ್ಗದ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡಿದ್ದು ಶರಣ ಚಳುವಳಿ. ಈ ಚಳುವಳಿಯಲ್ಲಿ ಶತಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಶೋಷಣೆ,ಅವಮಾನಕ್ಕೊಳಗಾಗಿದ್ದ ಕಷ್ಟಸಹಿಷ್ಣುಗಳು, ಶ್ರಮಜೀವಿಗಳೆಲ್ಲರೂ ಒಂದಾಗಿ ಇದಕ್ಕೆಲ್ಲ ಕಾರಣವಾದ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು. ಜಾತಿ,ವರ್ಣ,ವರ್ಗ,ಲಿಂಗಗಳನ್ನು ಆಧರಿಸಿ ಅಸಮಾನತೆಯಿಂದ ನಿರ್ಮಾಣಗೊಂಡಿದ್ದ ಸಮಾಜವನ್ನು ಧಿಕ್ಕರಿಸಿ, ಪ್ರತಿಯಾಗಿ ಸಹಬಾಳ್ವೆ, ಸಮಾನತೆ, ಪರಸ್ಪರ ಸಹಕಾರ, ಸಹಾನುಭೂತಿ, ಅರಿವು, ಆಚಾರ, ನಡೆನುಡಿ ಸಿದ್ಧಾಂತಗಳ ಆಧಾರದ ಮೇಲೆ ಜನಮುಖಿ ಸಮಾಜವನ್ನು ನಿರ್ಮಿಸಿದರು. ಅಂದಿನ ಸಮಾಜವು ತಮ್ಮಲ್ಲಿ ಬಿತ್ತಿದ ಕಿಳರಿಮೆ,ಭಯ,ಅವೈಚಾರಿಕತೆಗಳನ್ನು ಕಿತ್ತೊಗೆದರು. ಕಸಬುದಾರರು,ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅಸ್ಪೃಶ್ಯರು ಅಕ್ಷರಜ್ಞಾನವನ್ನು, ವೈಚಾರಿಕತೆಯ ಮನೋಭಾವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು,…

0 Comments

“ವಚನಗಳಲ್ಲಿ ಪ್ರಸಾದ ತತ್ವ” / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ

12 ನೇ ಶತಮಾನವು ಮನುಕುಲದ ಇತಿಹಾಸದಲ್ಲಿ ವಿಶೇಷವಾದಂತಹ ಕಾಲ, ಅದು ಪಾರಮಾರ್ಥವನ್ನು ಸಕಲ ಮಾನವರಿಗೆ ಉಣಬಡಿಸಿದಂತಹ ಶತಮಾನ. ಮಾನವ ಕುಲಕ್ಕೆ ಬದುಕನ್ನು ಕಲಿಸಿದ ಶತಮಾನ ಭವ-ಭವದಲ್ಲಿ ಬೇಯುತ್ತಿದ್ದ ಮಾನವರು ಶರಣಾಗುವ ಮಾರ್ಗ ಕಲಿಸಿದಂತಹ, ಬೆಳಕಿಗೆ ಬಂದಂತಹ ಶತಮಾನ ದೇವನ ಹಂಬಲವುಳ್ಳವರಿಗೆ ಗುರು ಕಾರುಣ್ಯವು ಲಭಿಸಿದಂತಹ ಕಾಲ. ಅದು ಬಸವಣ್ಣನವರು ಅವತರಿಸಿದ ಕಾಲ ಕನಿಷ್ಠವೆನಿಸಿದ ವ್ಯಕ್ತಿಗಳನ್ನು ಆಧ್ಯಾತ್ಮಿಕದ ತುಟ್ಟ ತುದಿಗೆ ಕರೆದೊಯ್ಯವುವ ಅಸ್ಸಿಮ ಶಕ್ತಿ ಬಸವಣ್ಣನವರ ಬೋಧನೆಯಲ್ಲಿ ತುಂಬಿತ್ತು. ಪ್ರತಿಯೊಬ್ಬರ ನಡೆ-ನುಡಿ, ಆಚಾರ-ವಿಚಾರ ಮನೋಭಾವ ಗುಣಗಳು, ಬದುಕುವ ರೀತಿ ಇತ್ಯಾದಿಗಳೆಲ್ಲವನ್ನು ತಿದ್ದಿ ತೀಡಿ, ಅವರನ್ನು ಆದ್ಯಾತ್ಮಿಕದ ನೆಲೆಯಲ್ಲಿ ಮೇಲಕ್ಕೇರಿರಿಸಿ,…

0 Comments

“ಶರಣ ಸಿದ್ದರಾಮೇಶ್ವರರ ವಚನಗಳಲ್ಲಿ ಲಿಂಗ ದರ್ಪಣ”/ ಡಾ. ಸರ್ವಮಂಗಳ ಸಕ್ರಿ

ವ್ಯಕ್ತಿ ಮತ್ತು ಮಾನವ ಸಂಬಂಧಗಳ ಸಮಾಜದಲ್ಲಿ ಆಧ್ಯಾತ್ಮಕ್ಕೆ ವಿಶೇಷವಾದ ಸ್ಥಾನವಿದೆ. ಶರಣರ ಸಾಮಾಜಿಕ ಕಾಳಜಿ ಸ್ವತಂತ್ರ ವಚನಗಳು ನಮಗೆ ಮುಖಾಮುಖಿಯಾಗುತ್ತವೆ. ಇಂದ್ರಿಯ ಅಗೋಚರ ಭೌತಿಕ ಪ್ರಪಂಚವನ್ನು ಮೀರಿದ ಜ್ಞಾನದ ಹರವು ಹಾಗು ಆಧ್ಯಾತ್ಮದ ತಿಳುವಳಿಕೆ ಧರ್ಮವಾಗಿದೆ. ವಚನ ಧರ್ಮ ಭಾಷೆಯ ಹಿಂದೆ ಧಾರ್ಮಿಕ ನಂಬಿಕೆ ತಾತ್ವಿಕ ಆ‍ಚರಣೆಗಳು ಶರಣ ಸಂಸ್ಕ್ರತಿಯ ಸಂಗಮವೆಂದು ಸ್ಪಷ್ಟ ಪಡಿಸಬಹುದು. ಯಾವುದೇ ಧರ್ಮ ಶೂನ್ಯದಿಂದ ಹುಟ್ಟಿರುವುದಿಲ್ಲ. ಚರಿತ್ರೆಯ ನಿರ್ಧಿಷ್ಟ ಒತ್ತಡಗಳಿಂದ ಹುಟ್ಟಿರುತ್ತದೆ. 12 ನೇ ಶತಮಾನದ ಲಿಂಗಾಯತ ಧರ್ಮ ಇದಕ್ಕೆ ಹೊರತಲ್ಲ. ಅನೇಕ ಧಾರ್ಮಿಕ ಪಂಥಗಳ ದಶ೯ನಗಳನ್ನು ಒಡಲಲ್ಲಿಟ್ಟುಕೊಂಡು ಅಷ್ಟಾವರಣ ತತ್ವಗಳನ್ನು ಜೋಪಾನ…

0 Comments

“ಸಿದ್ದರಾಮೇಶ್ವರರ ವಚನಗಳಲ್ಲಿ ಸ್ತ್ರೀ ಸಂವೇದನೆಯ ಅಂಶಗಳು”/ ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಸೊನ್ನಲಿಗೆಯ ಸಿದ್ಧರಾಮೇಶ್ವರರು ಕಾಯಕಜೀವಿ. ಸಾಮಾಜಿಕ ಜವಾಬ್ದಾರಿಗಳನ್ನು ಜತನದಿಂದ ಕೈಗೊಂಡ ಕರ್ಮಯೋಗಿ. ಲೋಕ ಕಲ್ಯಾಣಾರ್ಥವಾಗಿ ತಮ್ಮ ಬದುಕನ್ನು ಸವೆಸಿದ ಸಿದ್ಧ ಶಿವಯೋಗಿ. ಸಿದ್ಧರಾಮೇಶ್ವರರು ತಮ್ಮ ಇಡಿ ಬದುಕಿನುದ್ದಕ್ಕೂ ಕಾಯಕವನ್ನೇ ಉಸಿರಾಗಿರಿಸಿಕೊಂಡಿದ್ದರು. ಬದ್ಧತೆಗೆ ತುಡಿದ ಸಿದ್ಧರಾಮೇಶ್ವರರು ಶರಣ ತತ್ವಗಳನ್ನು ರೂಢಿಸಿಕೊಂಡವರು. ಮಾನವೀಯತೆಯ ಮೌಲ್ಯಗಳಿಂದ ವ್ಯಷ್ಟಿಯಿಂದ ಸಮಷ್ಟಿಯನ್ನು ಬೆಸೆದವರು. ತಮ್ಮ ವಚನಗಳ ಮೂಲಕ ಶ್ರೇಷ್ಠ ಮಾನವೀಯ ಸಂವೇದನೆಗಳನ್ನು ಹಂಚಿದವರು ಮತ್ತು ಚಿಂತಿಸಿದವರು. ಇವರದು ಅಪರೂಪದಲ್ಲೇ ಅಪರೂಪದ ವ್ಯಕ್ತಿತ್ವ. ಸಕಲ ಚರಾ-ಚರ ಚೇತನವನ್ನು ಪ್ರೀತಿಸಿದ ಇವರಲ್ಲಿ ತಾಯ್ತನವಿದೆ. ಹೆಂಗರುಳಿದೆ. ಈ ಕಾರಣದಿಂದಲೇ ಸಿದ್ಧರಾಮೇಶ್ವರರು ಪಶು, ಪಕ್ಷಿ ಮುಂತಾದ ಜೀವ ಚೇತನಗಳಿಗಾಗಿ ಕೆರೆ-ಕಟ್ಟೆ ಬಾವಿಗಳನ್ನು,…

0 Comments

“ಪೈರಿಗೆ ನೀರು ಬೇಕೆಂಬಲ್ಲಿ”/ ಚನ್ನಪ್ಪ ಅಂಗಡಿ,ಧಾರವಾಡ

ವೃಷ್ಟಿಮೂಲ ಕೃಷಿಃ ಸರ್ವಾ ವೃಷ್ಟಿಮೂಲಂ ಚ ಜೀವನಮ್ |ತಸ್ಮಾದಾದೌ ಪ್ರಯತ್ನೇನ ವೃಷ್ಟಿಜ್ಞಾನಂ ಸಮಾಚರೇತ್ ||(ಕೃಷಿ ಪರಾಶರ - ಪರಾಶರ ಮುನಿ: 10 ನೇ ಶ್ಲೋಕ) ಮೂಲತಃ ಕೃಷಿಯು ಮಳೆಯನ್ನು ಅವಲಂಬಿಸಿದೆ. ಹಾಗೆ ನೋಡಿದರೆ ಸಮಗ್ರ ಜೀವನವೇ ಮಳೆಯನ್ನು ಅವಲಂಬಿಸಿದೆ. ಆದ್ದರಿಂದ ಮೊಟ್ಟಮೊದಲನೆಯದಾಗಿ ಮಳೆಯ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯವೆಂದು ಪ್ರಾಚೀನ ಋಷಿ ಪರಾಶರ ಹೇಳಿದ್ದಾನೆ. ಕೃಷಿ ಮಳೆಯನ್ನು ಅವಲಂಬಿಸುವುದೆಂದರೆ ನೀರನ್ನು ಅವಲಂಬಿಸುವುದೆಂದೇ ಅರ್ಥ. ‘ಮಣ್ಣು-ನೀರು-ಸಸ್ಯ-ಆಹಾರ’ ಇಷ್ಟು ಹೇಳಿಬಿಟ್ಟರೆ ಅದು ಪ್ರಕೃತಿಯಾಗುತ್ತದೆ. ‘ಕೃಷಿ’ ಎಂದು ಬಿಟ್ಟರೆ ಅದು ಮಾನವ ನಿರ್ಮಿತವಾಗುತ್ತದೆ. ಮನುಷ್ಯನ ಪ್ರವೇಶಿಕೆ ಎಂದರೆ ನಿಸರ್ಗದ ನಿಯತಿಯನ್ನು…

0 Comments

ವಚನ ಸಾಹಿತ್ಯದಲ್ಲಿ ಕಾಯಕ ತತ್ವ / ಡಾ. ಮಲ್ಲಿಕಾರ್ಜುನ ಕೆ.

ವಚನ ಸಾಹಿತ್ಯದ ಕಾಲವು ಕನ್ನಡ ಸಾಹಿತ್ಯದ ಪರ್ವಕಾಲ, ಸುವರ್ಣಯುಗ ಕಾಲವೆಂದು ಕರೆಯಬಹುದು. ಹಾಗಾಗಿ ೧೨ನೇ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ. ವೇದಗಳ ಕಾಲದಿಂದಲೂ ಸಾಹಿತ್ಯ ಪಂಡಿತರ, ವಿದ್ವಾಂಸರ ಸ್ವತ್ತಾಗಿ, ಸಂಸ್ಕೃತ ಭೂಯಿಷ್ಠವಾಗಿದ್ದು, ಶ್ರೀಸಾಮಾನ್ಯರಿಗೆ ಇವರ ರಚನೆಗಳು ಅರ್ಥವಾಗುತ್ತಿರಲಿಲ್ಲ. ಶತ ಶತಮಾನಗಳಿಂದಲೂ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾಗ್ರಹವನ್ನು ಸರಿಪಡಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಯುಗದ ಶರಣೆಯರ ಅಮೋಘ ಕೊಡುಗೆಯನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲ ಘಟ್ಟದಲ್ಲಿ ಜಾತಿ-ಮತ, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ‘ಅನುಭವ ಮಂಟಪ'ದಲ್ಲಿ ಸೇರಿ ವಾದ-ಸಂವಾದ, ಚರ್ಚೆಗಳಲ್ಲಿ ಪಾಲ್ಗೊಂಡಿರುವುದನ್ನು ಕಾಣುತ್ತೇವೆ. ವಚನಕಾರ್ತಿಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕರಂತೆ…

1 Comment