ಬಸವಣ್ಣನವರ ವಚನ ವಿಶ್ಲೇಷಣೆ | ಡಾ. ನೀಲಾಂಬಿಕಾ ಪೋಲಿಸ ಪಾಟೀಲ, ಕಲಬುರಗಿ.
ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು.ಸಸಿಯೊಳಗಣ ರಸದ ರುಚಿಯಂತಿದ್ದಿತ್ತು.ನನೆಯೊಳಗಣ ಪರಿಮಳದಂತಿದ್ದಿತ್ತು.ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು. (ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-5/ವಚನ ಸಂಖ್ಯೆ-1) ಬಸವಣ್ಣನವರು ವಿಶ್ವ ಕಂಡ ಮಹಾನ್ ದಾರ್ಶನಿಕರು ಮತ್ತು ಮಹಾನ್ ಮಾನವತಾವಾದಿಗಳು. ಮಾನವ ಇಹ-ಪರ ಎರಡನ್ನೂ ಹೇಗೆ ಸಾಧಿಸಕೊಳ್ಳಬೇಕೆಂಬುದನ್ನು ತಮ್ಮ ನಡೆ ಮತ್ತು ನುಡಿಯಿಂದ ತೋರಿಸಿ ಕೊಟ್ಟವರು. ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಾಗೇವಾಡಿ, ಸಾಧನಾ ಭೂಮಿ ಅದೇ ಜಿಲ್ಲೆಯ ಕೂಡಲ ಸಂಗಮ, ಕಾಯಕ ಭೂಮಿ ಬೀದರ ಜಿಲ್ಲೆಯ ಬಸವಕಲ್ಯಾಣ. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಅಕ್ಕ ಶರಣೆ ಅಕ್ಕನಾಗಮ್ಮ, ಮಡದಿಯರು ಶರಣಿ ಗಂಗಾಂಬಿಕೆ ಮತ್ತು ಶರಣಿ ನೀಲಾಂಬಿಕಾ,…