ಬಸವಣ್ಣನವರ ವಚನ ವಿಶ್ಲೇಷಣೆ |  ಡಾ. ನೀಲಾಂಬಿಕಾ ಪೋಲಿಸ ಪಾಟೀಲ, ಕಲಬುರಗಿ.

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು.ಸಸಿಯೊಳಗಣ ರಸದ ರುಚಿಯಂತಿದ್ದಿತ್ತು.ನನೆಯೊಳಗಣ ಪರಿಮಳದಂತಿದ್ದಿತ್ತು.ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು. (ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-5/ವಚನ ಸಂಖ್ಯೆ-1) ಬಸವಣ್ಣನವರು ವಿಶ್ವ ಕಂಡ ಮಹಾನ್ ದಾರ್ಶನಿಕರು ಮತ್ತು ಮಹಾನ್ ಮಾನವತಾವಾದಿಗಳು. ಮಾನವ ಇಹ-ಪರ ಎರಡನ್ನೂ ಹೇಗೆ ಸಾಧಿಸಕೊಳ್ಳಬೇಕೆಂಬುದನ್ನು ತಮ್ಮ ನಡೆ ಮತ್ತು ನುಡಿಯಿಂದ ತೋರಿಸಿ ಕೊಟ್ಟವರು. ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಾಗೇವಾಡಿ, ಸಾಧನಾ ಭೂಮಿ ಅದೇ ಜಿಲ್ಲೆಯ ಕೂಡಲ ಸಂಗಮ, ಕಾಯಕ ಭೂಮಿ ಬೀದರ ಜಿಲ್ಲೆಯ ಬಸವಕಲ್ಯಾಣ. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಅಕ್ಕ ಶರಣೆ ಅಕ್ಕನಾಗಮ್ಮ, ಮಡದಿಯರು ಶರಣಿ ಗಂಗಾಂಬಿಕೆ ಮತ್ತು ಶರಣಿ ನೀಲಾಂಬಿಕಾ,…

0 Comments

ಪರಿಶುದ್ಧ ಅಂತಃಕರಣದ ಶರಣೆ ಸೂಳೆ ಸಂಕವ್ವೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

12 ನೇ ಶತಮಾನದ ಶರಣ ಚಳುವಳಿ ಎಂಬುದು ಜಗತ್ತು ಕಂಡ ಅಪರೂಪದ ಕಾಲಘಟ್ಟ.  ಶತ-ಶತಮಾನಗಳಿಂದಲೂ ವರ್ಗ, ವರ್ಣ, ಲಿಂಗ ಭೇದದಿಂದ ಶೋಷಿತ ಜನಾಂಗದವರು ತತ್ತರಿಸಿ ಹೋಗಿದ್ದರು. ಬಸವ ಬೆಳಗಿನಲ್ಲಿ ಸ್ವಾತಂತ್ರ್ಯದ ಕಿಟಕಿಗಳನ್ನು ತೆರೆದು ಪರಿಶುದ್ಧವಾದ ಗಾಳಿ, ಬೆಳಕು ಪಡೆದು ಸರ್ವ ಸಮಾನವಾದ ಹಕ್ಕುಗಳಿಗೆ ಭಾಜನರಾಗಿದ್ದು ಇಂದಿಗೂ ಒಂದು ಬೆರಗು. ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದ ಹಡಪದ, ಮಾದರ, ಡೋಹರ, ಅಂಬಿಗ, ಮಡಿವಾಳರಂಥ ಕಾಯಕ ಜೀವಿಗಳು ಇಲ್ಲಿ ಸಮಾನ  ಗೌರವವನ್ನು ಕಂಡು ಸ್ವಾಭಿಮಾನದ ಬದುಕಿನ ಭಾಷ್ಯವನ್ನು ಬರೆದರು. ಇನ್ನೂ ಮುಂದುವರೆದು ಕಳ್ಳರು ಸಾರಾಯಿ ಮಾರುವವರು ಕೂಡ ಇಲ್ಲಿ ತಮ್ಮ ಮನಸ್ಸನ್ನು…

0 Comments

ಅರಿವಿನ ಪೂಜಾವಿಧಾನ | ಡಾ. ಬಸವರಾಜ ಸಾದರ, ಬೆಂಗಳೂರು.

ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಅಯ್ಯಾ,ಆಗುವುದೆ ಆಗುವುದೆ ಲಿಂಗಾರ್ಚನೆ?ನೀರೆರೆಯಲಿಕ್ಕಾತನೇನು ಬಿಸಿಲಿನಿಂದ ಬಳಲಿದನೆ?ಪುಷ್ಪದಿಂದ ಧರಿಸಲಿಕ್ಕಾತನೇನು ವಿಟರಾಜನೆ?ನಿನ್ನ ಮನವೆಂಬ ನೀರಿಂದ,ಜ್ಞಾನವೆಂಬ ಪುಷ್ಪದಿಂದ ಪೂಜಿಸಬಲ್ಲಡೆಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ,ಕಪಿಲಸಿದ್ಧಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-439/ವಚನ ಸಂಖ್ಯೆ-1401) ನಮ್ಮ ಪರಂಪರಾಗತ ಪೂಜಾ ವಿಧಾನಗಳು ಬಹುತೇಕ ಬಾಹ್ಯಾಡಂಬರದ ಆಚರಣೆಗಳಾಗಿವೆ. ಇಂಥ ಪೂಜೆಗಳು ಪೂಜಿಸುವವರ ಒಳಗನ್ನು ಬೆಳಗಿಸುವುದಕ್ಕಿಂತ ಹೆಚ್ಚಾಗಿ, ನೋಡುವವರ ಕಣ್ಣುಗಳಿಗೆ ಆಕರ್ಷಕ ಮತ್ತು ವರ್ಣರಂಜಿತವಾಗಿ ಕಾಣಬೇಕೇಂಬ ಬಯಕೆಯಿಂದಲೇ ನಡೆಯುವಂಥವು. ನಮ್ಮ ಕೋಟಿ ಕೋಟಿ ದೇವಾಲಯಗಳಲ್ಲಿರುವ ಮೂರ್ತಿಗಳಿಗೆ ನಿತ್ಯವೂ ನಡೆಸಲಾಗುವ ವಿವಿಧ ಪೂಜೆ, ಅಭಿಷೇಕ ಮತ್ತು ಮಾಡುವ ಹೂವಿನ ಅಲಂಕಾರಗಳು ಇದನ್ನೇ ಸಾಕ್ಷೀಕರಿಸುತ್ತವೆ. ಇದು ಎಲ್ಲ…

1 Comment

ಜನಪದ ಸಾಹಿತ್ಯದಲ್ಲಿ ಕುಂಬಾರ ಗುಂಡಯ್ಯ / ಡಾ. ನೀಲಾಂಬಿಕಾ ಪೊಲೀಸಪಾಟೀಲ

ಕುಂಬಾರ ಗುಂಡಯ್ಯ ತುಂಬಿ ತಿಗರಿಗ ಕೆಸರಶಂಭು ಹರನೆಂದು ತಿರುಗಿಸಲು | ಶಿವಕುಣಿದಹಂಬಲಿಸಿ ಜಂಗ ಕಟಗೊಂಡು 12 ನೇಯ ಶತಮಾನದ ವಚನ ಚಳುವಳಿಯ ಸಂದರ್ಭದಲ್ಲಿ ಬಸವಾದಿ ಶಿವಶರಣರು ತೋರಿದ ಸಮಾನತೆ ತತ್ವ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಒಕ್ಕಟ್ಟಿನಲ್ಲಿ ಬಲವಿದೆಯೆಂಬುದನ್ನು ತೋರಿಸಿಕೊಟ್ಟವರು ಬಸವಾದಿ ಪ್ರಮಥರು. ಮೇಲು-ಕೀಳು, ಹೆಣ್ಣು-ಗಂಡು, ಸ್ತ್ರೀ-ಪುರುಷ, ಬಡವ-ಬಲ್ಲಿದವೆಂಬ ಭೇದಗಳನ್ನೆಲ್ಲ ತೊಲಗಿಸಿ ಸಮಾನತೆ ತತ್ವದ ಅನುಭವ ಮಂಟಪದಲ್ಲಿ ಒಂದಾಗಿ ಕುಳಿತು ಎಲ್ಲರೂ ಅನುಭಾವಿಗಳಾಗಿ ಶರಣರೆನಿಸಿಕೊಂಡರು. ಅಂತಹ ಶರಣರತ್ನಗಳಲ್ಲಿ ಕುಂಬಾರ ಗುಂಡಯ್ಯ ಶರಣರು ಒಬ್ಬರು. ಕುಂಬಾರ ಗುಂಡಯ್ಯ ಮುಗ್ಧ ಶರಣರು, ಕಾಯಕ ಜೀವಿಗಳು, ದಾಸೋಹ ನಿಷ್ಠರಾಗಿದ್ದ ಈ ಶರಣರ ಶಿವಭಕ್ತಿ…

0 Comments

ಶಿವಶರಣ ಕಾಯಕಯೋಗಿ ಕುಂಬಾರ ಗುಂಡಯ್ಯ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಬೇಡೆನೆಗೆ ಕೈಲಾಸ, ಬಾಡುವುದು ಕಾಯಕವುನೀಡೆನಗೆ ಕಾಯಕವ – ಕುಣಿದಾಡಿನಾಡಿ ಹಂದರಕೆ ಹಬ್ಬಿಸುವೆ!… … … ಜನಪದ ಕವಿ ಸಾವಳಿಗೇಶ ಇಡೀ ಶರಣ ಪರಂಪರೆಯಲ್ಲಿ ಬಹುಮುಖ್ಯವಾಗಿ ಕಾಯಕಕ್ಕೆ ಪ್ರಾಮುಖ್ಯತೆ ಇದೆ. ಶಿವಶರಣರ ವೈಶಿಷ್ಟ್ಯವೆಂದರೆ ಕಾಯಕವನ್ನು ವೃತದಂತೆ ಕಟ್ಟುನಿಟ್ಟಾಗಿ ಪರಿಪಾಲಿಸುವುದು. ಶ್ರಮದ ಬೆವರಹನಿಯಲ್ಲಿ ಅವರು ಲಿಂಗದ ಮೈ ತೊಳೆದವರು. ಆ ಲಿಂಗಪ್ಪನಿಗೂ ಅಷ್ಟೇ ಈ ಶ್ರಮಜೀವಿ ಶರಣರ ಮೈಬೆವರಿನ ಮಜ್ಜನವು ಗಂಗಾಜಲದ ಮಜ್ಜನಕ್ಕಿಂತ ಶ್ರೇಷ್ಠ ಎಂಬುದು. ನುಲಿಯ ಚಂದಯ್ಯ, ಮಾದಾರ ಚನ್ನಯ್ಯ, ಮೋಳಿಗೆಯ ಮಾರಯ್ಯ, ಸತ್ಯಣ್ಣ, ಮುಂತಾದ ಶಿವಶರಣ ಪುಣ್ಯಕಥೆಗಳನ್ನಾಲಿಸಿದಾಗ ಅವರು ಕಾಯಕಕ್ಕೆ ಕೊಟ್ಟ ಮಹತ್ವ ಅದರಲ್ಲಿ ಅವರು ತೋರುವ…

1 Comment

ಕಾಯಕ ನಿಷ್ಠೆಯ ಕುಂಬಾರ ಗುಂಡಯ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಕುಂಬಾರರೆಲ್ಲರು ಗುಂಡಯ್ಯನಾಗಬಲ್ಲರೆ?ಮಡಿವಾಳರೆಲ್ಲರು ಮಾಚಯ್ಯನಾಗಬಲ್ಲರೆ?ಜೀಡರೆಲ್ಲರು ದಾಸಿಮಯ್ಯನಾಗಬಲ್ಲರೆ?ಎನ್ನ ಗುರು ಕಪಿಲಸಿದ್ಧಮಲ್ಲೇಶ್ವರಯ್ಯಾ,ಪ್ರಾಣಿಗಳ ಕೊಂದು ಪರಿಹರಿಸಬಲ್ಲಡೆತೆಲುಗ ಜೊಮ್ಮಯ್ಯನಾಗಬಲ್ಲರೆ?(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-447/ವಚನ ಸಂಖ್ಯೆ-1431) ಸಿದ್ಧರಾಮೇಶ್ವರರ ಈ ವಚನವೊಂದೆ ಸಾಕು ಗುಂಡಯ್ಯನವರ ಘನತೆಯನ್ನು ತಿಳಿಯಲು.ಕೆಲಸಕ್ಕೆ ಹೊಸ ಅರ್ಥವನ್ನು ಕೊಟ್ಟು ಕೀಳು ಮಟ್ಟದ ಕಸಬನ್ನು ಕಾಯಕವೆನ್ನುವ ದೈವತ್ವದೆಡೆಗೆ ಕರೆದೊಯ್ದದ್ದು ಬಸವಾದಿ ಶರಣ-ಶರಣೆಯರು. ಮಡಿವಾಳ, ಬಡಗಿ, ಕುಂಬಾರ, ಕಮ್ಮಾರ, ನೇಕಾರ ಹಾರುವ ಎಲ್ಲರೂ ಒಂದೇ ಎಂಬ ತತ್ವವನ್ನು ವಿಶ್ವಕ್ಕೆ ತಿಳಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರ ಅನುಭವ ಮಂಟಪದ 770 ಅಮರಗಣಂಗಳ ಶರಣರಲ್ಲಿ ಒಬ್ಬರು ನಮ್ಮ ಕುಂಬಾರ ಗುಂಡಯ್ಯನವರು. ಗುಂಡಯ್ಯನವರ ಜನ್ಮ ಸ್ಥಳ ಬೀದರಿನ ಭಲ್ಲುಕೆ (ಈಗಿನ…

0 Comments

ಪಂಚಭೂತಗಳಲ್ಲಿ ಬಸವನೆಂಬ ದೇವರು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಅಲ್ಲಮ ಪ್ರಭುವಿನ ವಚನ ವ್ಯಾಖ್ಯಾನಗಳು ಶರಣ ಧರ್ಮದ ಮೀಮಾಂಸೆಯ ತಿರುಳೆಂದರೂ ಸರಿ. ಪ್ರಭು ಪುರಾಣ ಕಲ್ಪಿತ ವಿಧಿ ವಿಧಾನಗಳನ್ನು ಸ್ವಾರಸ್ಯಕರವಾಗಿ ವೈಚಾರಿಕವಾಗಿ ಹೇಳುತ್ತಾನೆ. ಶಾಂತಿ ಹೋಮ ಹವನ ಪೂಜೆಗಳು ತನಗೆ ಬೇಡವಾದ ವಿಚಾರಗಳ ಬಗ್ಗೆ ಎಚ್ಚರಿಸುತ್ತಾನೆ. ಅಲ್ಲಮನ ವಚನ ಭಾಷೆಗೆ ಪುರಾಣ ಕಲ್ಪಿತ ವಸ್ತುವನ್ನು ಮೀರುವ ಗುಣವಿದೆ. ಜಲ ಎನ್ನುವ ವಿಶಿಷ್ಟ ತಾತ್ವಿಕ ಪ್ರತಿಮೆಯನ್ನು ಲೌಕಿಕ ಪಾದಗಳಿಗೆ ಹೋಲಿಸಿ ಹೇಳಿದ್ದು ಬೆಡಗಿನ ಭಾಷೆಯ ಅನುಭಾವಿಗೆ ಮಾತ್ರ ಸಾಧ್ಯವಾಗುತ್ತದೆ. ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದುಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ.ಧರೆಯ ತಾಗಿದ ಪಾದವ ಧಿಗಿಲನೆ ಎತ್ತಲುಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ…

0 Comments

ಶರಣಸಂಸ್ಕೃತಿ/ ಪ್ರೊ. ಬಸವರಾಜ ಕಡ್ಡಿ, ಜಮಖಂಡಿ.

ಸಂಸ್ಕಾರಗಳ ಒಟ್ಟು ಮೊತ್ತವೆ ಸಂಸ್ಕೃತಿ. ಸಂಸ್ಕಾರ ಕಾರಣವಾದರೆ, ಸಂಸ್ಕೃತಿ ಅದರ ಪರಿಣಾಮ. ಉದಾಹರಣೆಗೆ ಹಾಲೊಳಗೆ ತುಪ್ಪವಿದೆ. ಆದರೆ, ಅದು ಅವ್ಯಕ್ತವಾಗಿದೆ. ಅದು ವ್ಯಕ್ತವಾಗಬೇಕಾದರೆ ಹಾಲನ್ನು ಕಾಯಿಸಬೇಕು, ಹೆಪ್ಪಿಡಬೇಕು. ಮೊಸರಾದ ನಂತರ ಕಡೆಯಬೇಕು, ಮಜ್ಜಿಗೆಯಲ್ಲಿ ಬರುವ ಬೆಣ್ಣೆಯನ್ನು ಕಾಯಿಸಬೇಕು. ಆಗ ತುಪ್ಪ ಘಮಘಮಿಸುವುದು. ಹೀಗೆ ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವುದು. ಹಾಗೆಯೇ ಶಿಲೆಗೆ ಸಂಸ್ಕಾರ ಕೊಟ್ಟರೆ ಶಿಲ್ಪವಾಗುವುದು. ಶಿಲೆಯಲ್ಲಿ ಸುಂದರ ಮೂರ್ತಿಗೆ ಬೇಕಾದ ಮತ್ತು ಬೇಡವಾದ ಸಂಗತಿಗಳೆರಡೂ ಇವೆ. ಶಿಲ್ಪವಾಗಲು ಬೇಕಾದುದನ್ನು ಮಾತ್ರ ಉಳಿಸಿ ಬೇಡವಾದುದೆಲ್ಲವನ್ನೂ ಶಿಲ್ಪಿಯು ಕೌಶಲದಿಂದ ಉಳಿಯ ಪೆಟ್ಟುಗಳ ಮೂಲಕ ತೆಗೆದು ಹಾಕಿದರೆ ಸುಂದರ ಮೂರ್ತಿ…

0 Comments

ಶರಣರ ಚಿಂತನೆಯ ಆಧುನಿಕತೆ / ಡಾ. ವೈ. ಎಂ. ಯಾಕೊಳ್ಳಿ ಸವದತ್ತಿ.

ನಮ್ಮ ಸಮಕಾಲೀನ ಬದುಕನ್ನು ಕುರಿತು ಚಿಂತಿಸಲಾರದ ಸಾಹಿತ್ಯ ಅರ್ಥಪೂರ್ಣ ಎನಿಸಲಾರದು. ಇಹದ ಮತ್ತು ಪರದ ಲೌಕಿಕ ಬದುಕಿನ ಬೇಸಾಯಗಾರರಾದ ಶರಣರು ತಮ್ಮ ವರ್ತಮಾನಕ್ಕೆ ಸ್ಪಂದಿಸಿ ಬದುಕಿದವರಾಗಿದ್ದವರು. ಹಾಗೆಯೇ ಬರೆದವರಾಗಿದ್ದರು. ಅಂತೆಯೇ ಅವರ ವಚನಗಳು ಅಂದಿಗೂ ಇಂದಿಗೂ ಮುಖ್ಯವೆನಿಸಿವೆ. ಶರಣರ ವಿಚಾರಗಳು ಇಂದಿನ ಆಧುನಿಕ ಜಗತ್ತಿನ ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರವಾಗಿವೆ ಎಂಬುದನ್ನು ಹಿರಿಯ ಸಾಹಿತಿಗಳಾದ ಡಾ. ದೇ. ಜವರೇಗೌಡ ಅವರು ಬಸವಣ್ಣನವರು ಒಂದೇ ಒಂದು ವಚನದಲ್ಲಿ ಸಾರಿರುವದನ್ನು ವಿವರಿಸಿದ್ದಾರೆ. ಸಧ್ಯದ ಬದುಕು ಸಾರ್ಥಕಗೊಳ್ಳುವ ಪರಿ ಯಾವುದು ಎಂಬುದನ್ನು ತಮ್ಮ ಸಪ್ತಸೂತ್ರಗಳನ್ನು ಸಮಾಹಿತಗೊಳಿಸಿರುವ “ಕಳಬೇಡ ಕೊಲಬೇಡ” ಎಂಬ ವಚನದಲ್ಲಿ…

0 Comments

ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ “ನೆಲದ ಮರೆಯಲಡಗಿದ ನಿಧಾನದಂತೆ” ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ, ಬೆಳಗಾವಿ ಜಿಲ್ಲೆ.

ನೆಲದ ಮರೆಯಲಡಗಿದ ನಿಧಾನದಂತೆ,ಮುಗಿಲ‌ ಮರೆಯಲಡಗಿದ ಮಿಂಚಿನಂತೆ,ಬಯಲ ಮರೆಯಲಡಗಿದ ಮರೀಚಿಯಂತೆಕಂಗಳ‌ ಮರೆಯಲಡಗಿದೆ ಬೆಳಗಿನಂತೆ-ಗುಹೇಶ್ವರಾ ನಿಮ್ಮ ನಿಲುವು(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-8/ವಚನ ಸಂಖ್ಯೆ-4) ದೈವದ ವಿಸ್ತಾರವನ್ನು ಶರಣರು ವಿವರಿಸಿದ ಹಾಗೆ ಮತ್ತಾರೂ ವಿವರಿಸಿಲ್ಲ. ಎಲ್ಲವೂ ಸಾಧ್ಯವಾಗುವದು ನಡೆಯುವದು, ನಿಲ್ಲುವದು ಪ್ರತಿಬಂಧಿಸುವದು ಇದೆಲ್ಲವೂ ದೈವದಿಂದಲೇ ಎಂದು ಶರಣರು‌ ಪ್ರಖರವಾಗಿ‌ ನಂಬಿದ್ದರು. ಇದನ್ನೆ ಸೃಷ್ಟಿ-ಸ್ಥಿತಿ-ಲಯ ಎನ್ನುವ ಪದಗಳಲ್ಲಿ ವಿವರಿಸಲಾಗುತ್ತದೆ ಈ‌ ಮೂರು‌ ಸಾಧ್ಯವಾಗುವದು ದೈವದಿಂದಲೇ‌ ಹೊರತು‌ ಬೇರಾರಿಂದಲೂ‌ ಸಾಧ್ಯವಿಲ್ಲ ಎನ್ನುವದು ಅವರ ದೃಢ ಅಭಿಪ್ರಾಯ. ನಮ್ಮ‌ ಕಣ್ಣಿನ‌ ಮಿತಿಗೆ ಸಿಗದ ವಿಸ್ತಾರ ದೈವದ್ದು ಎನ್ನುವ ಶರಣರು ಅದನ್ನು ಹಿಡಿಯಲಾಗದು ಎನ್ನುತ್ತಾರೆ. "ಆಕಾಶದಿಂದತ್ತ…

0 Comments