ಪಂಚಭೂತಗಳಲ್ಲಿ ಬಸವನೆಂಬ ದೇವರು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಅಲ್ಲಮ ಪ್ರಭುವಿನ ವಚನ ವ್ಯಾಖ್ಯಾನಗಳು ಶರಣ ಧರ್ಮದ ಮೀಮಾಂಸೆಯ ತಿರುಳೆಂದರೂ ಸರಿ. ಪ್ರಭು ಪುರಾಣ ಕಲ್ಪಿತ ವಿಧಿ ವಿಧಾನಗಳನ್ನು ಸ್ವಾರಸ್ಯಕರವಾಗಿ ವೈಚಾರಿಕವಾಗಿ ಹೇಳುತ್ತಾನೆ. ಶಾಂತಿ ಹೋಮ ಹವನ ಪೂಜೆಗಳು ತನಗೆ ಬೇಡವಾದ ವಿಚಾರಗಳ ಬಗ್ಗೆ ಎಚ್ಚರಿಸುತ್ತಾನೆ. ಅಲ್ಲಮನ ವಚನ ಭಾಷೆಗೆ ಪುರಾಣ ಕಲ್ಪಿತ ವಸ್ತುವನ್ನು ಮೀರುವ ಗುಣವಿದೆ. ಜಲ ಎನ್ನುವ ವಿಶಿಷ್ಟ ತಾತ್ವಿಕ ಪ್ರತಿಮೆಯನ್ನು ಲೌಕಿಕ ಪಾದಗಳಿಗೆ ಹೋಲಿಸಿ ಹೇಳಿದ್ದು ಬೆಡಗಿನ ಭಾಷೆಯ ಅನುಭಾವಿಗೆ ಮಾತ್ರ ಸಾಧ್ಯವಾಗುತ್ತದೆ. ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದುಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ.ಧರೆಯ ತಾಗಿದ ಪಾದವ ಧಿಗಿಲನೆ ಎತ್ತಲುಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ…

0 Comments

ಶರಣಸಂಸ್ಕೃತಿ/ ಪ್ರೊ. ಬಸವರಾಜ ಕಡ್ಡಿ, ಜಮಖಂಡಿ.

ಸಂಸ್ಕಾರಗಳ ಒಟ್ಟು ಮೊತ್ತವೆ ಸಂಸ್ಕೃತಿ. ಸಂಸ್ಕಾರ ಕಾರಣವಾದರೆ, ಸಂಸ್ಕೃತಿ ಅದರ ಪರಿಣಾಮ. ಉದಾಹರಣೆಗೆ ಹಾಲೊಳಗೆ ತುಪ್ಪವಿದೆ. ಆದರೆ, ಅದು ಅವ್ಯಕ್ತವಾಗಿದೆ. ಅದು ವ್ಯಕ್ತವಾಗಬೇಕಾದರೆ ಹಾಲನ್ನು ಕಾಯಿಸಬೇಕು, ಹೆಪ್ಪಿಡಬೇಕು. ಮೊಸರಾದ ನಂತರ ಕಡೆಯಬೇಕು, ಮಜ್ಜಿಗೆಯಲ್ಲಿ ಬರುವ ಬೆಣ್ಣೆಯನ್ನು ಕಾಯಿಸಬೇಕು. ಆಗ ತುಪ್ಪ ಘಮಘಮಿಸುವುದು. ಹೀಗೆ ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವುದು. ಹಾಗೆಯೇ ಶಿಲೆಗೆ ಸಂಸ್ಕಾರ ಕೊಟ್ಟರೆ ಶಿಲ್ಪವಾಗುವುದು. ಶಿಲೆಯಲ್ಲಿ ಸುಂದರ ಮೂರ್ತಿಗೆ ಬೇಕಾದ ಮತ್ತು ಬೇಡವಾದ ಸಂಗತಿಗಳೆರಡೂ ಇವೆ. ಶಿಲ್ಪವಾಗಲು ಬೇಕಾದುದನ್ನು ಮಾತ್ರ ಉಳಿಸಿ ಬೇಡವಾದುದೆಲ್ಲವನ್ನೂ ಶಿಲ್ಪಿಯು ಕೌಶಲದಿಂದ ಉಳಿಯ ಪೆಟ್ಟುಗಳ ಮೂಲಕ ತೆಗೆದು ಹಾಕಿದರೆ ಸುಂದರ ಮೂರ್ತಿ…

0 Comments

ಶರಣರ ಚಿಂತನೆಯ ಆಧುನಿಕತೆ / ಡಾ. ವೈ. ಎಂ. ಯಾಕೊಳ್ಳಿ ಸವದತ್ತಿ.

ನಮ್ಮ ಸಮಕಾಲೀನ ಬದುಕನ್ನು ಕುರಿತು ಚಿಂತಿಸಲಾರದ ಸಾಹಿತ್ಯ ಅರ್ಥಪೂರ್ಣ ಎನಿಸಲಾರದು. ಇಹದ ಮತ್ತು ಪರದ ಲೌಕಿಕ ಬದುಕಿನ ಬೇಸಾಯಗಾರರಾದ ಶರಣರು ತಮ್ಮ ವರ್ತಮಾನಕ್ಕೆ ಸ್ಪಂದಿಸಿ ಬದುಕಿದವರಾಗಿದ್ದವರು. ಹಾಗೆಯೇ ಬರೆದವರಾಗಿದ್ದರು. ಅಂತೆಯೇ ಅವರ ವಚನಗಳು ಅಂದಿಗೂ ಇಂದಿಗೂ ಮುಖ್ಯವೆನಿಸಿವೆ. ಶರಣರ ವಿಚಾರಗಳು ಇಂದಿನ ಆಧುನಿಕ ಜಗತ್ತಿನ ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರವಾಗಿವೆ ಎಂಬುದನ್ನು ಹಿರಿಯ ಸಾಹಿತಿಗಳಾದ ಡಾ. ದೇ. ಜವರೇಗೌಡ ಅವರು ಬಸವಣ್ಣನವರು ಒಂದೇ ಒಂದು ವಚನದಲ್ಲಿ ಸಾರಿರುವದನ್ನು ವಿವರಿಸಿದ್ದಾರೆ. ಸಧ್ಯದ ಬದುಕು ಸಾರ್ಥಕಗೊಳ್ಳುವ ಪರಿ ಯಾವುದು ಎಂಬುದನ್ನು ತಮ್ಮ ಸಪ್ತಸೂತ್ರಗಳನ್ನು ಸಮಾಹಿತಗೊಳಿಸಿರುವ “ಕಳಬೇಡ ಕೊಲಬೇಡ” ಎಂಬ ವಚನದಲ್ಲಿ…

0 Comments

ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ “ನೆಲದ ಮರೆಯಲಡಗಿದ ನಿಧಾನದಂತೆ” ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ, ಬೆಳಗಾವಿ ಜಿಲ್ಲೆ.

ನೆಲದ ಮರೆಯಲಡಗಿದ ನಿಧಾನದಂತೆ,ಮುಗಿಲ‌ ಮರೆಯಲಡಗಿದ ಮಿಂಚಿನಂತೆ,ಬಯಲ ಮರೆಯಲಡಗಿದ ಮರೀಚಿಯಂತೆಕಂಗಳ‌ ಮರೆಯಲಡಗಿದೆ ಬೆಳಗಿನಂತೆ-ಗುಹೇಶ್ವರಾ ನಿಮ್ಮ ನಿಲುವು(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-8/ವಚನ ಸಂಖ್ಯೆ-4) ದೈವದ ವಿಸ್ತಾರವನ್ನು ಶರಣರು ವಿವರಿಸಿದ ಹಾಗೆ ಮತ್ತಾರೂ ವಿವರಿಸಿಲ್ಲ. ಎಲ್ಲವೂ ಸಾಧ್ಯವಾಗುವದು ನಡೆಯುವದು, ನಿಲ್ಲುವದು ಪ್ರತಿಬಂಧಿಸುವದು ಇದೆಲ್ಲವೂ ದೈವದಿಂದಲೇ ಎಂದು ಶರಣರು‌ ಪ್ರಖರವಾಗಿ‌ ನಂಬಿದ್ದರು. ಇದನ್ನೆ ಸೃಷ್ಟಿ-ಸ್ಥಿತಿ-ಲಯ ಎನ್ನುವ ಪದಗಳಲ್ಲಿ ವಿವರಿಸಲಾಗುತ್ತದೆ ಈ‌ ಮೂರು‌ ಸಾಧ್ಯವಾಗುವದು ದೈವದಿಂದಲೇ‌ ಹೊರತು‌ ಬೇರಾರಿಂದಲೂ‌ ಸಾಧ್ಯವಿಲ್ಲ ಎನ್ನುವದು ಅವರ ದೃಢ ಅಭಿಪ್ರಾಯ. ನಮ್ಮ‌ ಕಣ್ಣಿನ‌ ಮಿತಿಗೆ ಸಿಗದ ವಿಸ್ತಾರ ದೈವದ್ದು ಎನ್ನುವ ಶರಣರು ಅದನ್ನು ಹಿಡಿಯಲಾಗದು ಎನ್ನುತ್ತಾರೆ. "ಆಕಾಶದಿಂದತ್ತ…

0 Comments

ಶರಣೆ ಸತ್ಯಕ್ಕನವರ ವಚನ ವಿಶ್ಲೇಷಣೆ | ಗಂಡಗಂಡಿರ ಎದೆಯ ಮೆಟ್ಟಿ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಗಂಡಗಂಡರ ಎದೆಯ ಮೆಟ್ಟಿ ನಡೆವರುಂಟೆ?ಗಂಡಗಂಡರ ಚಲ್ಲಣವ ಮಾಡಿ ಉಟ್ಟವರುಂಟೆ?ಗಂಡಗಂಡರ ಚರ್ಮವ ಹೊದ್ದವರುಂಟೆ?ಗಂಡಗಂಡರ ತೊಟ್ಟವರುಂಟೆ?ಗಂಡಗಂಡರ ತುರುಬಿದವರುಂಟೆ?ಗಂಡಗಂಡರ ಭಸ್ಮವಮಾಡಿ ಹೂಸಿದವರುಂಟೆ?ಗಂಡಗಂಡರಿಗೆ ಗಂಡನ ಕಣ್ಣು ಕಾಲಲ್ಲದೆ.ಗಂಡಗಂಡರಿಗೆ ಗಂಡನ ಶಿರ ಕರದಲ್ಲದೆ.ಗಂಡುವೇಷವೆಂಬುದು ನಿಮ್ಮ ಶಕ್ತಿರೂಪು.ಗಂಡರಿಗೆ ಗಂಡನು ನಡೆಯಿತ್ತೆ ಬಟ್ಟೆಎಂಬುದು ನಿಮಗೆ ಸಂದಿತ್ತು. ಶಂಭುಜಕ್ಕೇಶ್ವರ ಶರಣ ಜಗದೊಳಗೊಬ್ಬನೆ ಗಂಡನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-442/ವಚನ ಸಂಖ್ಯೆ-1214)ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:ಗಂಡ: ಪತಿ, ಲಿಂಗ, ಗುರು.ಚಲ್ಲಣ: ಪಾಯಜಾಮು, ಸಡಿಲ ಉಡುಪು.ತುರುಬಿದವರು: ಲಂಪಟ, ಹೆಣ್ಣಿನ ಮೋಹದ ಧ್ಯಾನದಲ್ಲಿರುವವ.ಬಟ್ಟೆ: ದಾರಿ, ಮಾರ್ಗ. ಶಿವಶರಣೆಯರಲ್ಲಿ ಸತ್ಯಕ್ಕನವರು ಏಕದೇವೋಪಾಸನೆಗೆ ಹೆಸರಾದವರು. ಇವರ ವಚನಗಳಲ್ಲಿಯೂ ಕೂಡ ಏಕದೇವೋಪಾಸನೆ ತತ್ವ ಪ್ರಮುಖವಾಗಿ…

0 Comments

Mystic Messiah Allama Prabhu Vachana Analysis | ಆರೂ ಇಲ್ಲದ ಅರಣ್ಯದೊಳಗೆ | Shri. Vishwanand Pattanashetty | Sunnyvale | California 94086.

ಆರೂ ಇಲ್ಲದ ಅರಣ್ಯದೊಳಗೆ ಮನೆಯ ಕಟ್ಟಿದರೆ,ಕಾಡುಗಿಚ್ಚು ಎದ್ದುಬಂದು ಹತ್ತಿತ್ತಲ್ಲಾ!ಆ ಉರಿಯೊಳಗೆ ಮನೆ ಬೇವಲ್ಲಿ,ಮನೆಯೊಡೆಯನೆತ್ತ ಹೋದನೊ?ಆ ಉರಿಯೊಳಗೆ ಬೆಂದ ಮನೆ,ಚೇಗೆಯಾಗುದದ ಕಂಡು,ಮನೆಯೊಡೆಯನಳಲುತ್ತ ಬಳಲುತ್ತೈದಾನೆ.ಗುಹೇಶ್ವರಾ, ನಿಮ್ಮ ಒಲವಿಲ್ಲದ ಠಾವ ಕಂಡು,ಮನದಲ್ಲಿ ಹೇಸಿ ತೊಲಗಿದೆನಯ್ಯಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-30/ವಚನ ಸಂಖ್ಯೆ-76)ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:ಚೇಗೆ: ಹಾನಿ, ಭಂಗ, ಕೇಡು.ಠಾವ: ಸ್ಥಾನ, ಸ್ಥಳ. Transliteration:Aaroo illada aranyadolage Maneya kattidare,Kaadugichchu eddubandu hattittalla!Aa uriyolage mane bevalli,Maneyodeyanetta hodano?Aa uriyolage benda mane,Chegeyaduda kandu,Maneyodeyanalalutta balaluttaidaanai.Guheshwara, nimma olavillada thava kandu,Manadalli hesi tolagidenayya. Translation:When building a…

1 Comment

ಅಂಬಿಗರ ಚೌಡಯ್ಯನವರ ವಚನ | ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು | ಪ್ರೊ. ಜಿ. ಎ. ತಿಗಡಿ, ಧಾರವಾಡ.

ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು,ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು,ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ,ಪೂಜಿಸಿದ ಪುಣ್ಯ ಹೂವಿಗೋ? ನೀರಿಗೋ?ನಾಡೆಲ್ಲಕ್ಕೊ? ಪೂಜಿಸಿದಾತಗೋ?ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-949 / ವಚನ ಸಂಖ್ಯೆ-53) ಯಾರೋ ಬಿತ್ತಿ ಬೆಳಸಿದ ಹೂವಿನ ಗಿಡದಲ್ಲಿನ ಹೂಗಳನ್ನು ಕೊಯ್ದು ತಂದು, ಊರಿನ ಜನರೆಲ್ಲರೂ ಸೇರಿ ಕಟ್ಟಿಸಿದ ಕೆರೆಯ ನೀರನ್ನು ತಂದು ನಾನು ಪೂಜಿಸುತ್ತಿದ್ದೇನೆ ನೋಡಿರೆಂದು ನಾಡಿನ ಜನತೆಗೆ ಹೇಳುತ್ತಾ ಪೂಜಿಸಿದರೆ, ಆ ಪೂಜೆಯಿಂದ ಲಭಿಸುವ ಪುಣ್ಯದ ಫಲ ಯಾರಿಗೆ? ಹೂವಿಗೋ? ಕೆರೆಯ ನೀರಿಗೋ? ಇಡೀ ನಾಡಿಗೋ? ಅಥವಾ…

0 Comments

ಎಸೆವಕ್ಷರಕ್ಕೆ ಹೆಸರಿಲ್ಲ | ಶರಣೆ ನೀಲಾಂಬಿಕೆಯವರ ವಚನ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಎಸೆವಕ್ಷರಕ್ಕೆ ಹೆಸರಿಲ್ಲ, ಆ ಹೆಸರಿಂಗೆ ರೂಹಿಲ್ಲ;ರೂಪಿಂಗೆ ನಿರೂಪಿಲ್ಲ.ನಿರೂಪಳಿದು ನಿರಾಕುಳವಾಗಿನೀರಸಂಗಕ್ಕೆ ಹೋದರೆ,ಆ ನೀರು ಬಯಲಾಳವತೋರಿತ್ತಯ್ಯ ಸಂಗಯ್ಯ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-343/ವಚನ ಸಂಖ್ಯೆ-909) ಬದುಕು ಒಂದು ವಿಧವಾಗಿ ಯೋಚಿಸಿದರೆ ಬಿಡಿ ಬಿಡಿಯಾದ ಅಕ್ಷರಗಳೇ. ಬದುಕು ಪೂರ್ತಿ ಅನಿರೀಕ್ಷಿತವಾದ ಘಟನೆಗಳೆ. ಪ್ರತಿ ಕ್ಷಣವು ಮುಂದೇನಾಗುವುದೆಂದು ಊಹಿಸಲು ಸಾಧ್ಯವಿಲ್ಲ. ಅನುಕ್ಷಣವೂ ಮನ ಒಂದಿಲ್ಲಾ ಒಂದು ಗೋಜಲುಗಳಿಗೆ ಒಡ್ಡಿಕೊಳ್ಳುತ್ತಲೇ ನಡೆವುದು. ಎಷ್ಟೋ ಬಾರಿ ತನ್ನದಲ್ಲದ ತಪ್ಪಿಗಾಗಿ ಶಿಕ್ಷೆ, ಅವಮಾನ, ಅನುಕ್ಷಣವೂ ಹೋರಾಟ. ಈ ಎಲ್ಲ ಓಟದ ಮಧ್ಯ ಅಲ್ಲಿಗೊಂದು ಇಲ್ಲಿಗೊಂದು ನೆಮ್ಮದಿಯ ಉಸಿರಾಟ. ಇವೆಲ್ಲದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ಇವೆಲ್ಲಕ್ಕೂ ಅರ್ಥ ಕಲ್ಪಿಸುವುದೂ…

0 Comments

ಬೊಂತಾದೇವಿಯವರ ವಚನ ವಿಶ್ಲೇಷಣೆ / ಘಟದೊಳಗಣ ಬಯಲು / ಶ್ರೀ ಸಿದ್ಧೇಶ್ವರ ಸ್ವಾಮೀಯವರು.

ಘಟದೊಳಗಣ ಬಯಲು,ಮಠದೊಳಗಣ ಬಯಲು,ಬಯಲು ಬಯಲು ಬಯಲು?ತಾನೆಲ್ಲಾ ಬಯಲು, ಬಿಡಾಡಿ ಬಯಲು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-392/ವಚನ ಸಂಖ್ಯೆ-1093) ಇದು ಬೊಂತಾದೇವಿಯವರ ವಚನ. ಅವರು ಕಾಶ್ಮೀರದ ರಾಜಮನೆತನದ ರಾಜಪುತ್ರಿ. ಪರಮಸತ್ಯ ಪರಮಾತ್ಮನ ಶೋಧನೆಗಾಗಿ ರಾಜ ಭೋಗವನೆಲ್ಲ ತೊರೆದವರು. ರಾಜ ಪೋಷಾಕವನೆಲ್ಲ ಬಿಟ್ಟು ಕೇವಲ ಕೌದಿಯನ್ನು ಮೈಮೇಲೆ ಹೊತ್ತುಕೊಂಡರು. ಜನ ಕೇಳಿದರು “ಹೀಗೇಕೆ” ಎಂದು. ರಾಜ ಪೋಷಾಕು ಹಾಗೂ ಕೌದಿ ಎರಡೂ ಬಯಲಾಗುತ್ತವೆ ಎಂದರವರು. ಕೌದಿಯು ಹಲವಾರು ತುಂಡು ಬಟ್ಟೆಗಳ ತೇಪೆ. ನಮ್ಮ ಬದುಕು, ವಿದ್ಯೆ, ಬುದ್ದಿ ಎಲ್ಲವೂ ಒಂದು ರೀತಿ ಮಿಶ್ರಣ, ತೇಪೆ. ಅಲ್ಲಿಷ್ಟು ಇಲ್ಲಿಷ್ಟು ನೋಡಿ, ಓದಿ,…

0 Comments

ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ: ಅಚಲಸಿಂಹಾಸನವನಿಕ್ಕಿ / ಸಚರಾಚರವ ನುಂಗುವ ಪರಿ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಚಲಸಿಂಹಾಸನವನಿಕ್ಕಿ;ನಿಶ್ಚಲ ಮಂಟಪದ ಸಂಚದೋವರಿಯೊಳಗೆ;ರುಚಿಗಳೆಲ್ಲವ ನಿಲಿಸಿಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ,ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ,ಖೇಚರಾದಿಯ ಗಮನ.ವಿಚಾರಿಪರ ನುಂಗಿ. ಗುಹೇಶ್ವರ ನಿಂದ ನಿಲುವುಸಚರಾಚರವ ಮೀರಿತ್ತು.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-72/ವಚನ ಸಂಖ್ಯೆ-196)ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:ಸಂಚದೋವರಿ: ಹೃದಯವೆಂಬ ಗೂಢಗವಿ, ಶಿರದ ಅಂತರಂಗದ ಚಿತ್‌ ಆಕಾಶದ ಗವಿ.ಓವರಿ: ರಹಸ್ಯದ ಕೋಣೆ, ಒಳಮನೆ, ಪಕ್ಕದ ಮನೆ, ಕವಚ, ಒರೆ.ರುಚಿ: ಕಾಂತಿ, ಕಿರಣ, ಆಸಕ್ತಿ.ಪಂಚರತ್ನಗಳು: ವಜ್ರ, ವೈಢೂರ‍್ಯ, ನೀಲಿ, ಪದ್ಮರಾಗ ಮತು ಹವಳ.ಖೇಚರ: ಗಂಧರ್ವ.ಖೇಚರಾದಿಯ ಗಮನ: ವಿವೇಕಿಯ ಗಮನಾಗಮನ. ಅಲ್ಲಮ ಪ್ರಭುದೇವರು ಈ ನಾಡು ಕಂಡ ಅಪರೂಪದ ದಾರ್ಶನಿಕರು. ಎಲ್ಲ…

0 Comments