ವ್ಯೋಮಕಾಯ ಅಲ್ಲಮ ಪ್ರಭುದೇವರ ವಚನ ವಿಶ್ಲೇಷಣೆ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ನಿರ್ಣಯವನರಿಯದ ಮನವೆ,ದುಗಡವನಾಹಾರಗೊಂಡೆಯಲ್ಲಾ.ಮಾಯಾ ಸೂತ್ರವಿದೇನೊ!ಕಂಗಳೊಳ[ಗಣ] ಕತ್ತಲೆ ತಿಳಿಯದಲ್ಲಾ!ಬೆಳಗಿನೊಳಗಣ ಶೃಂಗಾರ ಬಳಲುತ್ತಿದ್ದುದು,ಗುಹೇಶ್ವರಾ (ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-19/ವಚನ ಸಂಖ್ಯೆ-45) ಅಲ್ಲಮ ಪ್ರಭುದೇವರು “ಯೌಗಿಕ ಮಹಾಪುರುಷರು” ಹಾಗೂ ಲೋಕ ಸಂಚಾರಿಗಳು. ವಿಶ್ವದ ಉದಾತ್ತ ತತ್ವಜ್ಞಾನಿಗಳಲ್ಲಿ ಪ್ರಭುದೇವರು ಶ್ರೇಷ್ಠರಾದವರು. ಪ್ರಭುಗಳ ವೈಚಾರಿಕತೆ, ಯೌಗಿಕ ನಿಲುವು, ಆಧ್ಯಾತ್ಮದ ಔನ್ನತ್ಯಗಳು ಬೆರಗುಗೊಳಿಸುವಂತಹವು. ಲೋಕ ಸಂಚಾರಿಗಳಾಗಿ ಲೋಕದ ಅನುಭವಗಳ ಮೂಲಕ ಸತ್ಯದರ್ಶನವನ್ನು ಕಂಡುಕೊಂಡ ಸಿದ್ಧಪುರುಷರಿವರು. ಅಲ್ಲಮ ಪ್ರಭುಗಳು ವಚನಗಳ ತಾತ್ವಿಕ ಅಧ್ಯಯನ ಕೈಗೊಂಡವರಿಗೆ ತಿಳಿಯುವ ಸಂಗತಿಯೆಂದರೆ ಪ್ರಭುಗಳ ಭಾವುಕತೆಗೆ ಒಳಗಾಗದ ವೈಚಾರಿಕ ಮನಸ್ಥಿತಿಯವರು ಎಂಬುದು. ಪ್ರಭುದೇವರು ಮೃದಂಗವಾದನದಂತಹ ಕಲೆಯಲ್ಲಿ ನಿಪುಣರಾದ ಒಬ್ಬ ಕಲಾವಿದ. ಹೀಗಾಗಿ ತಮ್ಮ…





Total views : 59314