ಆಮುಗೆ ರಾಯಮ್ಮನವರ ವಚನ ವಿಶ್ಲೇಷಣೆ: ಸಂತೆ ಜನಪದರ ಸಂಸ್ಕೃತಿ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಪಟ್ಟಣದ ಸೂಳೆಯ ಕೂಡೆ ಪರಬ್ರಹ್ಮ ನುಡಿಯಲೇಕೆ?ಸಂತೆಗೆ ಬಂದವರ ಕೂಡೆ ಸಹಜವ ನುಡಿಯಲೇಕೆ?ಕತ್ತೆಯನೇರುವರ ಕೂಡೆ ನಿತ್ಯರೆಂದು ನುಡಿಯಲೇಕೆ?ಹೊತ್ತು ಹೋಕರ ಕೂಡೆ ಕರ್ತನ ಸುದ್ದಿಯ ನುಡಿಯಲೇಕೆ?ಆಮುಗೇಶ್ವರಲಿಂಗವನರಿದ ಶರಣಂಗೆ ಹತ್ತು ಸಾವಿರವನೋದಲೇಕೆ?ಹತ್ತು ಸಾವಿರ ಕೇಳಲೇಕೆ? ಭ್ರಷ್ಟರ ಕೂಡೆ ನುಡಿಯಲೇಕೆ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-862 / ವಚನ ಸಂಖ್ಯೆ-663) ವಚನ ಸಾಹಿತ್ಯ ಪರಂಪರೆಯಲ್ಲಿ ಮತ್ತೊಬ್ಬ ದಿಟ್ಟ ಮಹಿಳಾ ವಚನಕಾರ್ತಿಯೆಂದರೆ ಆಮುಗೆ ರಾಯಮ್ಮ. ಆಮುಗೆ ದೇವಯ್ಯನ ಧರ್ಮಪತ್ನಿ ಈಕೆ. ಆಮುಗೆ ದೇವಯ್ಯನ ಸಾಂಗತ್ಯದಲ್ಲಿ ಈ ದಂಪತಿಗಳ ಪ್ರಸ್ತಾಪವಿದೆ. ಸೊಲ್ಲಾಪುರದ ನೇಕಾರಿಕೆಯ ಕಾಯಕದಲ್ಲಿ ತಮ್ಮನ್ನು ಇವರು ತೊಡಗಿಸಿಕೊಂಡಿದ್ದರು. ಆಮುಗೆ ರಾಯಮ್ಮ ತನ್ನ…

0 Comments

ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ? ವ್ಯೋಮಕಾಯ ಅಲ್ಲಮಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ.

ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?ಬೇಟದ ಮರುಳಗೆ ಲಜ್ಜೆ ಮುನ್ನುಂಟೆ?ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ?ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ?ಗುಹೇಶ್ವರಲಿಂಗಕ್ಕೆ ಕುರುಹು‌ ಮುನ್ನುಂಟೇ?(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-138 / ವಚನ ಸಂಖ್ಯೆ-425) ನಿಜವಾದ ಭಕ್ತನಾದವನು ಪೂಜೆ ಎಂಬ ಆಚರಣೆಯ ಬಗೆಗೆ ಅಷ್ಟಾಗಿ ಗಮನವನ್ನು ಕೊಡಬೇಕಾಗಿಲ್ಲ ಎಂಬುದು ಅಲ್ಲಮರ ವಿಚಾರವಾಗಿದೆ. ಬಹಿರಂಗದ ಆಚರಣೆಗಳು ಕೇವಲ ನಮ್ಮ ತೋರಿಕೆಯ ಅಭಿವ್ಯಕ್ತಿಗಳೇ ಹೊರತು ನಿಜವಾದ ಲಿಂಗ ಪೂಜೆಯನ್ನುವದು ಅದು ಭಕ್ತನು ಲಿಂಗಕ್ಕೆ ತನ್ನನ್ನು ನಿರಹಂಭಾವದಿಂದ ಅರ್ಪಿಸಿಕೊಳ್ಳುವದರಲ್ಲಿದೆ ಎನ್ನುವದು ಶರಣರ ವಿಚಾರವಾಗಿದೆ. ಇನ್ನೊಂದು ರೀತಿಯಿಂದ ಆಲೋಚನೆ ಮಾಡಿದಾಗಲೂ ಕೂಡ ಪೂಜೆ…

0 Comments

ವೀರಗಂಟಿ ಶರಣ ಮಡಿವಾಳ ಮಾಚಿದೇವರ ವಚನ “ಉಟ್ಟ ಸೀರೆಯ ಹರಿದು ಹೋದಾತ” ವಿಶ್ಲೇಷಣೆ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ.ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.ಸೀಮೆ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ.ಲಿಂಗಕ್ಕೆ ಮಾಡಿದುದ ಸೋಂಕದೇ ಹೋದೆಯಲ್ಲಾ ಬಸವಣ್ಣ.ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡುಹೋದೆಯಲ್ಲಾ ಬಸವಣ್ಣ.ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ.ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾಕಲಿದೇವರದೇವಾ.(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-1416/ವಚನ ಸಂಖ್ಯೆ-516) ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಶರಣರ ಕಗ್ಗೊಲೆಯಾದ ವಿಷಮ ಪರಿಸ್ಥಿತಿಯಲ್ಲಿ ಮಡಿವಾಳ ಮಾಚಿದೇವರು ಅತ್ಯಂತ ಸಾಹಸದಿಂದ ಶರಣ ಧರ್ಮ ಸಂರಕ್ಷಣೆ ಮತ್ತು ವಚನ ಸಾಹಿತ್ಯದ ರಕ್ಷಣೆಯ ದಂಡ…

0 Comments

ಅಲ್ಲಮ ಪ್ರಭುಗಳ ವಚನ “ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ” ವಿಶ್ಲೇಷಣೆ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿಯೋಗದ ಹೊಲಬ ನೀನೆತ್ತ ಬಲ್ಲೆ?ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡುಮದ ಮತ್ಸರ ಬೇಡ ಹೊದುಕುಳಿಗೊಳಬೇಡಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-156 / ವಚನ ಸಂಖ್ಯೆ-229)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.ಅಗ್ನಿ: ಹೃದಯದಲ್ಲಿ ಹುದುಗಿದ ಜ್ಞಾನ, ಸ್ವಾನುಭವ ಪ್ರಭೆ, ತನು ಗುಣ ಸಂಬಂಧಿ, ಅಹಂಕಾರದಿಂದ ಕೂಡಿದ ದೇಹ, ಅರಿಷಡ್ವರ್ಗಗಳ ಸಂಕೇತ.ಉದಕ : ನೀರು, ಸಂಸಾರ ವಿಷಯ-ವ್ಯಾಮೋಹಗಳ ಸಂಕೇತ, ಮನಸ್ಸು, ಮನದ ನಿಲುವು, ಪರಮಾನಂದ ಜಲ, ಪ್ರಶಾಂತ ಭಾವ.ವಾಯು: ಪ್ರಾಣಶಕ್ತಿಯ ಸಂಕೇತ.ಆಕಾಶ:…

0 Comments

ಗಿರಿಯಲ್ಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಗಿರಿಯಲ್ಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ ನವಿಲು?ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ?ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ?ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ?ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆಅನ್ಯಕ್ಕೆಳಸುವುದೆ ಎನ್ನ ಮನ?ಪೇಳಿರೆ, ಕೆಳದಿಯರಿರಾ?(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-67/ವಚನ ಸಂಖ್ಯೆ-189) ವೈರಾಗ್ಯನಿಧಿ ಅಕ್ಕಮಹಾದೇವಿಯವರು ವಚನಕಾರ್ತಿಯರ ಸಾಲಿನಲ್ಲಿ ಅಷ್ಟೆ ಅಲ್ಲದೆ ಒಟ್ಟಾರೆ ವಚನ ಸಾಹಿತ್ಯ ಪರಂಪರೆಯಲ್ಲೇ ಅತ್ಯಂತ ಶ್ರೇಷ್ಠ ವಚನಕಾರ್ತಿಯಾಗಿದ್ದಾರೆ. ಅದಕ್ಕೆಂದೇ ಅಕ್ಕಮಹಾದೇವಿಯರ ವಚನಗಳ ಶ್ರೇಷ್ಠತೆಯನ್ನು ಅವಿರಳಜ್ಞಾನಿ ವನ್ನಬಸವಣ್ಣನವರು ತಮ್ಮದೊಂದು ವಚನದಲ್ಲಿ ನಿರೂಪಿಸುವುದನ್ನು ನಾವು ನೆನಪಿಸಿಕೊಳ್ಳುವುದು. ಆದ್ಯರ ಅರವತ್ತು ವಚನಕ್ಕೆದಣ್ಣಾಯಕರ ಇಪ್ಪತ್ತು ವಚನ,ದಣ್ಣಾಯಕರ ಇಪ್ಪತ್ತು ವಚನಕ್ಕೆಪ್ರಭುದೇವರ ಹತ್ತುವಚನ,ಪ್ರಭುದೇವರ ಹತ್ತು ವಚನಕ್ಕೆಅಜಗಣ್ಣನ ಅಯ್ದು ವಚನ,ಅಜಗಣ್ಣನ ಅಯ್ದು ವಚನಕ್ಕೆಕೂಡಲಚೆನ್ನಸಂಗಮದೇವಾ,ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ.(ಸಮಗ್ರ ವಚನ ಸಂಪುಟ:…

0 Comments

ಕೋಲ ತುದಿಯ ಕೋಡಗದಂತೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕೋಲ ತುದಿಯ ಕೋಡಗದಂತೆ,ನೇಣ ತುದಿಯ ಬೊಂಬೆಯಂತೆ,ಆಡಿದೆನಯ್ಯಾ ನೀನಾಡಿಸಿದಂತೆ,ಆನು ನುಡಿದೆನಯ್ಯಾ ನೀ ನುಡಿಸಿದಂತೆ,ಆನು ಇದ್ದೆನಯ್ಯಾ ನೀನು ಇರಿಸಿದಂತೆ,ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-181)ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:ಯಂತ್ರವಾಹಕ: ಯಂತ್ರಗಳನ್ನು ನಡೆಸುವವ, ವಾಹನ ಚಾಲಕ. ವೈರಾಗ್ಯನಿಧಿ ಅಕ್ಕಮಹಾದೇವಿಯವರು 12 ನೇ ಶತಮಾನದಲ್ಲಿ ಉದಯಿಸಿದ ಅನುಪಮ ಕವಿಯಿತ್ರಿ. ಅಂತರ್ಮುಖಿಯಾದ ಶರಣೆ ಅಕ್ಕಮಹಾದೇವಿಯವರಿಗೆ ಕಾವ್ಯ ಭಾಷೆ ಸಿದ್ಧಸಿತ್ತು. ಅವರ ಅಧ್ಯಯನಶೀಲತೆ, ಸ್ವತಂತ್ರ ವೈಚಾರಿಕತೆ, ಅವರು ಕಂಡಂಥ ಜೀವನಾನುಭವ, ಅಭಿವ್ಯಕ್ತಿಯ ವಿಶಿಷ್ಠ ಶೈಲಿ ಅವರನ್ನು ಅನುಪಮ ಕವಿಯಿತ್ರಿಯಾಗಿ ಗುರುತಿಸುವಲ್ಲಿ ಸಹಕರಿಸುವ ಅಂಶಗಳಾಗಿವೆ. ನಾವಿಂದು ಹೇಳುವ ಕವಿ…

0 Comments

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆಧರೆ ಹತ್ತಿ ಉರಿದಡೆ ನಿಲಲುಬಾರದು.ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,ನಾರಿ ತನ್ನ ಮನೆಯಲ್ಲಿ ಕಳುವಡೆ,ತಾಯ ಮೊಲೆವಾಲು ನಂಜಾಗಿ ಕೊಲುವಡೆ,ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-26) 12 ನೇ ಶತಮಾನದಲ್ಲಿ ರಚನೆಯಾದ ಶರಣ ಸಾಹಿತ್ಯ ಅಥವಾ ವಚನ ಸಾಹಿತ್ಯವು 21 ನೇ ಶತಮಾನದಲ್ಲಿಯೂ ಕೂಡ ನಾವು ಬದುಕುತ್ತಿರುವ ಬದುಕಿನ ದಾರಿಗೆ ಮೌಲ್ಯಯುತವಾದ ಬೆಳಕನ್ನು ಚೆಲ್ಲುತ್ತಿರುವ ದಾರಿ ದೀಪಗಳಾಗಿವೆ. “ವ್ಯಕ್ತಿಗಳ ಪರಿವರ್ತನೆಯೇ ಸಮಾಜದ ಪರಿವರ್ತನೆ” ಎಂಬುದನ್ನು ಶರಣರು ತಮ್ಮ ಚಿಂತನೆಗಳ ಮೂಲಕ ತಮ್ಮ ನಡೆ-ನುಡಿ ಸಿದ್ಧಾಂತದ ಮೂಲಕ ಸಾಕ್ಷೀಕರಿಸಿದರು. ವಚನ ಸಾಹಿತ್ಯ…

0 Comments

ಅಲ್ಲಮಪ್ರಭುಗಳ “ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ” ವಚನ ವಿಶ್ಲೇಷಣೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ,ಮೇದು ಬಂದೆನೆಂದಡೆ,ಇದ ಕಂಡು ಬೆರಗಾದೆ.ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದಡೆ,ಇದ ಕಂಡು ಬೆರಗಾದೆ.ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ,ಇದ ಕಂಡು ಬೆರಗಾದೆ, ಗುಹೇಶ್ವರಾ(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-14/ವಚನ ಸಂಖ್ಯೆ-27) ಅಲ್ಲಮಪ್ರಭುಗಳ ಈ ಬೆಡಗಿನ ವಚನ ಮನುಷ್ಯ ಸ್ವಭಾವದ ಒಳ ಸೂಕ್ಷ್ಮತೆಗಳನ್ನು ಸ್ವಾರಸ್ಯಕರ ಮತ್ತು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಅಜ್ಞಾನದಲ್ಲಿ ಓಲಾಡುವ ಮನಸ್ಸಿಗೆ ಎಚ್ಚರಿಕೆ ಕೊಡುವ ಸಮರ್ಥನೆಯಾಗಿದೆ. ಆಧ್ಯಾತ್ಮದ ಬೆಳಕನ್ನು ಉಜ್ವಲಗೊಳಿಸುವ ಸಮರ್ಥನೆಯದು. ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಆ ಕಾಲದ ತಾತ್ವಿಕ ಪರಂಪರೆಗಳ ಅಸ್ತಿತ್ವ ಮತ್ತು ಅನಿರೀಕ್ಷಿತವಾದ ನಿಗೂಢತೆ…

0 Comments

ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ / ಶ್ರೀಮತಿ. ದೇವೇಂದ್ರಮ್ಮ, ರಾಯಚೂರು.

ಆಸೆಯೆಂಬುದು ಅರಸಿಂಗಲ್ಲದೆ,ಶಿವಭಕ್ತರಿಗುಂಟೆ ಅಯ್ಯಾ?ರೋಷವೆಂಬುದು ಯಮದೂತರಿಗಲ್ಲದೆ,ಅಜಾತರಿಗುಂಟೆ ಅಯ್ಯಾ?ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆದೂರ ಮಾರಯ್ಯ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-708) ಆಸೆ ಅನ್ನುವುದು ಅರಸನಾದ ಭವಿಗೆ ಇರತದ. ಅರಸನಿಗೆ ಈ ರಾಜ್ಯ ಗಳಿಸಿದರೆ ಇನ್ನೊಂದು ರಾಜ್ಯ ಗಳಿಸಬೇಕು. ಇನ್ನೊಂದು ರಾಜ್ಯ ಗಳಿಸಿದರೇ ಮಗದೊಂದು ರಾಜ್ಯದ ಅಧಿಕಾರ ನನ್ನ ಕೈಲಿ ಇರತದ, ಅಧಿಕಾರ ಇದ್ದರೇ ನನಗ ಮರ್ಯಾದೆ ಗೌರವ ಸಿಗತದ ಅನ್ನುವ ಭಾವನೆ ರಾಜನಿಗೆ ಇರುತ್ತದೆ. ಶಿವಭಕ್ತರಾದ ನಮಗ ಯಾಕೆ ಅಂತಹ ಆಸೆ? ಯಾವ ಅಧಿಕಾರ, ಆಸ್ತಿ, ದುಡ್ಡು, ಅನ್ಯಾಯದ ದುಡಿಮೆಯ ಆಸೆಯೂ ನಮಗೆ ಬೇಡ. ಸತ್ಯ ಶುದ್ಧ ಕಾಯಕದಿಂದ…

0 Comments

“ಸಾವಿರ ವ್ರತ-ಸಾಧನೆಯ ಫಲಗಳನ್ನೂ ಮಣ್ಣುಗೂಡಿಸುವ ಒಂದು ಹಾದರ” ಡಾ. ಬಸವರಾಜ ಸಾದರ,ಬೆಂಗಳೂರು.

ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾದ ‘ಕೆಲವು’ ಮಠಾಧಿಪತಿಗಳ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಮುಕ್ತ ಚರ್ಚೆ ನಡೆಯುತ್ತಿತ್ತು. ಸಹಜವಾಗಿಯೇ ಅಲ್ಲಿ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಅದರಲ್ಲಿ ಒಂದು ಪಕ್ಷದವರು ಅತ್ಯಾಚಾರಿ ಸ್ವಾಮಿಗಳನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದರೆ, ಮತ್ತೊಂದು ಕಡೆಯವರು ಅವರನ್ನೇ ಸಮರ್ಥಿಸಿಕೊಳ್ಳುತ್ತಿದ್ದರು. ಸಮರ್ಥನೆ ಮಾಡಿಕೊಳ್ಳುತ್ತಿದ್ದವರು ತಮ್ಮ ಮಾತುಗಳಿಗೆ ಕೊಡುತ್ತಿದ್ದ ಸಾಕ್ಷಿಗಳು ಅಚ್ಚರಿ ಮೂಡಿಸುವಂತಿದ್ದವು. ಕೆಲವೆಂದರೆ:• ಪಟ್ಟಾಭಿಷೇಕವಾದ ದಿನದಿಂದ ಈವರೆಗೂ ನಮ್ಮ ಸ್ವಾಮಿಗಳು ಮಾಡಿರುವ ಸಮಾಜೋಪಯೋಗಿ ಕೆಲಸಗಳು ಸಾವಿರಾರು.• ನೂರಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ.• ಉಚಿತ ಪ್ರಸಾದ ನಿಲಯಗಳನ್ನು ನಡೆಸುತ್ತಿದ್ದಾರೆ.• ನಿರಂತರ…

1 Comment