ಅಂಬಿಗರ ಚೌಡಯ್ಯನವರ ವಚನ | ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು | ಪ್ರೊ. ಜಿ. ಎ. ತಿಗಡಿ, ಧಾರವಾಡ.

ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು,ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು,ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ,ಪೂಜಿಸಿದ ಪುಣ್ಯ ಹೂವಿಗೋ? ನೀರಿಗೋ?ನಾಡೆಲ್ಲಕ್ಕೊ? ಪೂಜಿಸಿದಾತಗೋ?ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-949 / ವಚನ ಸಂಖ್ಯೆ-53) ಯಾರೋ ಬಿತ್ತಿ ಬೆಳಸಿದ ಹೂವಿನ ಗಿಡದಲ್ಲಿನ ಹೂಗಳನ್ನು ಕೊಯ್ದು ತಂದು, ಊರಿನ ಜನರೆಲ್ಲರೂ ಸೇರಿ ಕಟ್ಟಿಸಿದ ಕೆರೆಯ ನೀರನ್ನು ತಂದು ನಾನು ಪೂಜಿಸುತ್ತಿದ್ದೇನೆ ನೋಡಿರೆಂದು ನಾಡಿನ ಜನತೆಗೆ ಹೇಳುತ್ತಾ ಪೂಜಿಸಿದರೆ, ಆ ಪೂಜೆಯಿಂದ ಲಭಿಸುವ ಪುಣ್ಯದ ಫಲ ಯಾರಿಗೆ? ಹೂವಿಗೋ? ಕೆರೆಯ ನೀರಿಗೋ? ಇಡೀ ನಾಡಿಗೋ? ಅಥವಾ…

0 Comments

ಎಸೆವಕ್ಷರಕ್ಕೆ ಹೆಸರಿಲ್ಲ | ಶರಣೆ ನೀಲಾಂಬಿಕೆಯವರ ವಚನ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಎಸೆವಕ್ಷರಕ್ಕೆ ಹೆಸರಿಲ್ಲ, ಆ ಹೆಸರಿಂಗೆ ರೂಹಿಲ್ಲ;ರೂಪಿಂಗೆ ನಿರೂಪಿಲ್ಲ.ನಿರೂಪಳಿದು ನಿರಾಕುಳವಾಗಿನೀರಸಂಗಕ್ಕೆ ಹೋದರೆ,ಆ ನೀರು ಬಯಲಾಳವತೋರಿತ್ತಯ್ಯ ಸಂಗಯ್ಯ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-343/ವಚನ ಸಂಖ್ಯೆ-909) ಬದುಕು ಒಂದು ವಿಧವಾಗಿ ಯೋಚಿಸಿದರೆ ಬಿಡಿ ಬಿಡಿಯಾದ ಅಕ್ಷರಗಳೇ. ಬದುಕು ಪೂರ್ತಿ ಅನಿರೀಕ್ಷಿತವಾದ ಘಟನೆಗಳೆ. ಪ್ರತಿ ಕ್ಷಣವು ಮುಂದೇನಾಗುವುದೆಂದು ಊಹಿಸಲು ಸಾಧ್ಯವಿಲ್ಲ. ಅನುಕ್ಷಣವೂ ಮನ ಒಂದಿಲ್ಲಾ ಒಂದು ಗೋಜಲುಗಳಿಗೆ ಒಡ್ಡಿಕೊಳ್ಳುತ್ತಲೇ ನಡೆವುದು. ಎಷ್ಟೋ ಬಾರಿ ತನ್ನದಲ್ಲದ ತಪ್ಪಿಗಾಗಿ ಶಿಕ್ಷೆ, ಅವಮಾನ, ಅನುಕ್ಷಣವೂ ಹೋರಾಟ. ಈ ಎಲ್ಲ ಓಟದ ಮಧ್ಯ ಅಲ್ಲಿಗೊಂದು ಇಲ್ಲಿಗೊಂದು ನೆಮ್ಮದಿಯ ಉಸಿರಾಟ. ಇವೆಲ್ಲದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ಇವೆಲ್ಲಕ್ಕೂ ಅರ್ಥ ಕಲ್ಪಿಸುವುದೂ…

0 Comments

ಬೊಂತಾದೇವಿಯವರ ವಚನ ವಿಶ್ಲೇಷಣೆ / ಘಟದೊಳಗಣ ಬಯಲು / ಶ್ರೀ ಸಿದ್ಧೇಶ್ವರ ಸ್ವಾಮೀಯವರು.

ಘಟದೊಳಗಣ ಬಯಲು,ಮಠದೊಳಗಣ ಬಯಲು,ಬಯಲು ಬಯಲು ಬಯಲು?ತಾನೆಲ್ಲಾ ಬಯಲು, ಬಿಡಾಡಿ ಬಯಲು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-392/ವಚನ ಸಂಖ್ಯೆ-1093) ಇದು ಬೊಂತಾದೇವಿಯವರ ವಚನ. ಅವರು ಕಾಶ್ಮೀರದ ರಾಜಮನೆತನದ ರಾಜಪುತ್ರಿ. ಪರಮಸತ್ಯ ಪರಮಾತ್ಮನ ಶೋಧನೆಗಾಗಿ ರಾಜ ಭೋಗವನೆಲ್ಲ ತೊರೆದವರು. ರಾಜ ಪೋಷಾಕವನೆಲ್ಲ ಬಿಟ್ಟು ಕೇವಲ ಕೌದಿಯನ್ನು ಮೈಮೇಲೆ ಹೊತ್ತುಕೊಂಡರು. ಜನ ಕೇಳಿದರು “ಹೀಗೇಕೆ” ಎಂದು. ರಾಜ ಪೋಷಾಕು ಹಾಗೂ ಕೌದಿ ಎರಡೂ ಬಯಲಾಗುತ್ತವೆ ಎಂದರವರು. ಕೌದಿಯು ಹಲವಾರು ತುಂಡು ಬಟ್ಟೆಗಳ ತೇಪೆ. ನಮ್ಮ ಬದುಕು, ವಿದ್ಯೆ, ಬುದ್ದಿ ಎಲ್ಲವೂ ಒಂದು ರೀತಿ ಮಿಶ್ರಣ, ತೇಪೆ. ಅಲ್ಲಿಷ್ಟು ಇಲ್ಲಿಷ್ಟು ನೋಡಿ, ಓದಿ,…

0 Comments

ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ: ಅಚಲಸಿಂಹಾಸನವನಿಕ್ಕಿ / ಸಚರಾಚರವ ನುಂಗುವ ಪರಿ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಚಲಸಿಂಹಾಸನವನಿಕ್ಕಿ;ನಿಶ್ಚಲ ಮಂಟಪದ ಸಂಚದೋವರಿಯೊಳಗೆ;ರುಚಿಗಳೆಲ್ಲವ ನಿಲಿಸಿಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ,ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ,ಖೇಚರಾದಿಯ ಗಮನ.ವಿಚಾರಿಪರ ನುಂಗಿ. ಗುಹೇಶ್ವರ ನಿಂದ ನಿಲುವುಸಚರಾಚರವ ಮೀರಿತ್ತು.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-72/ವಚನ ಸಂಖ್ಯೆ-196)ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:ಸಂಚದೋವರಿ: ಹೃದಯವೆಂಬ ಗೂಢಗವಿ, ಶಿರದ ಅಂತರಂಗದ ಚಿತ್‌ ಆಕಾಶದ ಗವಿ.ಓವರಿ: ರಹಸ್ಯದ ಕೋಣೆ, ಒಳಮನೆ, ಪಕ್ಕದ ಮನೆ, ಕವಚ, ಒರೆ.ರುಚಿ: ಕಾಂತಿ, ಕಿರಣ, ಆಸಕ್ತಿ.ಪಂಚರತ್ನಗಳು: ವಜ್ರ, ವೈಢೂರ‍್ಯ, ನೀಲಿ, ಪದ್ಮರಾಗ ಮತು ಹವಳ.ಖೇಚರ: ಗಂಧರ್ವ.ಖೇಚರಾದಿಯ ಗಮನ: ವಿವೇಕಿಯ ಗಮನಾಗಮನ. ಅಲ್ಲಮ ಪ್ರಭುದೇವರು ಈ ನಾಡು ಕಂಡ ಅಪರೂಪದ ದಾರ್ಶನಿಕರು. ಎಲ್ಲ…

0 Comments

ಆಮುಗೆ ರಾಯಮ್ಮನವರ ವಚನ ವಿಶ್ಲೇಷಣೆ: ಸಂತೆ ಜನಪದರ ಸಂಸ್ಕೃತಿ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಪಟ್ಟಣದ ಸೂಳೆಯ ಕೂಡೆ ಪರಬ್ರಹ್ಮ ನುಡಿಯಲೇಕೆ?ಸಂತೆಗೆ ಬಂದವರ ಕೂಡೆ ಸಹಜವ ನುಡಿಯಲೇಕೆ?ಕತ್ತೆಯನೇರುವರ ಕೂಡೆ ನಿತ್ಯರೆಂದು ನುಡಿಯಲೇಕೆ?ಹೊತ್ತು ಹೋಕರ ಕೂಡೆ ಕರ್ತನ ಸುದ್ದಿಯ ನುಡಿಯಲೇಕೆ?ಆಮುಗೇಶ್ವರಲಿಂಗವನರಿದ ಶರಣಂಗೆ ಹತ್ತು ಸಾವಿರವನೋದಲೇಕೆ?ಹತ್ತು ಸಾವಿರ ಕೇಳಲೇಕೆ? ಭ್ರಷ್ಟರ ಕೂಡೆ ನುಡಿಯಲೇಕೆ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-862 / ವಚನ ಸಂಖ್ಯೆ-663) ವಚನ ಸಾಹಿತ್ಯ ಪರಂಪರೆಯಲ್ಲಿ ಮತ್ತೊಬ್ಬ ದಿಟ್ಟ ಮಹಿಳಾ ವಚನಕಾರ್ತಿಯೆಂದರೆ ಆಮುಗೆ ರಾಯಮ್ಮ. ಆಮುಗೆ ದೇವಯ್ಯನ ಧರ್ಮಪತ್ನಿ ಈಕೆ. ಆಮುಗೆ ದೇವಯ್ಯನ ಸಾಂಗತ್ಯದಲ್ಲಿ ಈ ದಂಪತಿಗಳ ಪ್ರಸ್ತಾಪವಿದೆ. ಸೊಲ್ಲಾಪುರದ ನೇಕಾರಿಕೆಯ ಕಾಯಕದಲ್ಲಿ ತಮ್ಮನ್ನು ಇವರು ತೊಡಗಿಸಿಕೊಂಡಿದ್ದರು. ಆಮುಗೆ ರಾಯಮ್ಮ ತನ್ನ…

0 Comments

ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ? ವ್ಯೋಮಕಾಯ ಅಲ್ಲಮಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ.

ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?ಬೇಟದ ಮರುಳಗೆ ಲಜ್ಜೆ ಮುನ್ನುಂಟೆ?ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ?ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ?ಗುಹೇಶ್ವರಲಿಂಗಕ್ಕೆ ಕುರುಹು‌ ಮುನ್ನುಂಟೇ?(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-138 / ವಚನ ಸಂಖ್ಯೆ-425) ನಿಜವಾದ ಭಕ್ತನಾದವನು ಪೂಜೆ ಎಂಬ ಆಚರಣೆಯ ಬಗೆಗೆ ಅಷ್ಟಾಗಿ ಗಮನವನ್ನು ಕೊಡಬೇಕಾಗಿಲ್ಲ ಎಂಬುದು ಅಲ್ಲಮರ ವಿಚಾರವಾಗಿದೆ. ಬಹಿರಂಗದ ಆಚರಣೆಗಳು ಕೇವಲ ನಮ್ಮ ತೋರಿಕೆಯ ಅಭಿವ್ಯಕ್ತಿಗಳೇ ಹೊರತು ನಿಜವಾದ ಲಿಂಗ ಪೂಜೆಯನ್ನುವದು ಅದು ಭಕ್ತನು ಲಿಂಗಕ್ಕೆ ತನ್ನನ್ನು ನಿರಹಂಭಾವದಿಂದ ಅರ್ಪಿಸಿಕೊಳ್ಳುವದರಲ್ಲಿದೆ ಎನ್ನುವದು ಶರಣರ ವಿಚಾರವಾಗಿದೆ. ಇನ್ನೊಂದು ರೀತಿಯಿಂದ ಆಲೋಚನೆ ಮಾಡಿದಾಗಲೂ ಕೂಡ ಪೂಜೆ…

0 Comments

ವೀರಗಂಟಿ ಶರಣ ಮಡಿವಾಳ ಮಾಚಿದೇವರ ವಚನ “ಉಟ್ಟ ಸೀರೆಯ ಹರಿದು ಹೋದಾತ” ವಿಶ್ಲೇಷಣೆ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ.ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.ಸೀಮೆ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ.ಲಿಂಗಕ್ಕೆ ಮಾಡಿದುದ ಸೋಂಕದೇ ಹೋದೆಯಲ್ಲಾ ಬಸವಣ್ಣ.ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡುಹೋದೆಯಲ್ಲಾ ಬಸವಣ್ಣ.ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ.ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾಕಲಿದೇವರದೇವಾ.(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-1416/ವಚನ ಸಂಖ್ಯೆ-516) ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಶರಣರ ಕಗ್ಗೊಲೆಯಾದ ವಿಷಮ ಪರಿಸ್ಥಿತಿಯಲ್ಲಿ ಮಡಿವಾಳ ಮಾಚಿದೇವರು ಅತ್ಯಂತ ಸಾಹಸದಿಂದ ಶರಣ ಧರ್ಮ ಸಂರಕ್ಷಣೆ ಮತ್ತು ವಚನ ಸಾಹಿತ್ಯದ ರಕ್ಷಣೆಯ ದಂಡ…

0 Comments

ಅಲ್ಲಮ ಪ್ರಭುಗಳ ವಚನ “ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ” ವಿಶ್ಲೇಷಣೆ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿಯೋಗದ ಹೊಲಬ ನೀನೆತ್ತ ಬಲ್ಲೆ?ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡುಮದ ಮತ್ಸರ ಬೇಡ ಹೊದುಕುಳಿಗೊಳಬೇಡಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-156 / ವಚನ ಸಂಖ್ಯೆ-229)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.ಅಗ್ನಿ: ಹೃದಯದಲ್ಲಿ ಹುದುಗಿದ ಜ್ಞಾನ, ಸ್ವಾನುಭವ ಪ್ರಭೆ, ತನು ಗುಣ ಸಂಬಂಧಿ, ಅಹಂಕಾರದಿಂದ ಕೂಡಿದ ದೇಹ, ಅರಿಷಡ್ವರ್ಗಗಳ ಸಂಕೇತ.ಉದಕ : ನೀರು, ಸಂಸಾರ ವಿಷಯ-ವ್ಯಾಮೋಹಗಳ ಸಂಕೇತ, ಮನಸ್ಸು, ಮನದ ನಿಲುವು, ಪರಮಾನಂದ ಜಲ, ಪ್ರಶಾಂತ ಭಾವ.ವಾಯು: ಪ್ರಾಣಶಕ್ತಿಯ ಸಂಕೇತ.ಆಕಾಶ:…

0 Comments

ಗಿರಿಯಲ್ಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಗಿರಿಯಲ್ಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ ನವಿಲು?ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ?ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ?ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ?ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆಅನ್ಯಕ್ಕೆಳಸುವುದೆ ಎನ್ನ ಮನ?ಪೇಳಿರೆ, ಕೆಳದಿಯರಿರಾ?(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-67/ವಚನ ಸಂಖ್ಯೆ-189) ವೈರಾಗ್ಯನಿಧಿ ಅಕ್ಕಮಹಾದೇವಿಯವರು ವಚನಕಾರ್ತಿಯರ ಸಾಲಿನಲ್ಲಿ ಅಷ್ಟೆ ಅಲ್ಲದೆ ಒಟ್ಟಾರೆ ವಚನ ಸಾಹಿತ್ಯ ಪರಂಪರೆಯಲ್ಲೇ ಅತ್ಯಂತ ಶ್ರೇಷ್ಠ ವಚನಕಾರ್ತಿಯಾಗಿದ್ದಾರೆ. ಅದಕ್ಕೆಂದೇ ಅಕ್ಕಮಹಾದೇವಿಯರ ವಚನಗಳ ಶ್ರೇಷ್ಠತೆಯನ್ನು ಅವಿರಳಜ್ಞಾನಿ ವನ್ನಬಸವಣ್ಣನವರು ತಮ್ಮದೊಂದು ವಚನದಲ್ಲಿ ನಿರೂಪಿಸುವುದನ್ನು ನಾವು ನೆನಪಿಸಿಕೊಳ್ಳುವುದು. ಆದ್ಯರ ಅರವತ್ತು ವಚನಕ್ಕೆದಣ್ಣಾಯಕರ ಇಪ್ಪತ್ತು ವಚನ,ದಣ್ಣಾಯಕರ ಇಪ್ಪತ್ತು ವಚನಕ್ಕೆಪ್ರಭುದೇವರ ಹತ್ತುವಚನ,ಪ್ರಭುದೇವರ ಹತ್ತು ವಚನಕ್ಕೆಅಜಗಣ್ಣನ ಅಯ್ದು ವಚನ,ಅಜಗಣ್ಣನ ಅಯ್ದು ವಚನಕ್ಕೆಕೂಡಲಚೆನ್ನಸಂಗಮದೇವಾ,ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ.(ಸಮಗ್ರ ವಚನ ಸಂಪುಟ:…

0 Comments

ಕೋಲ ತುದಿಯ ಕೋಡಗದಂತೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕೋಲ ತುದಿಯ ಕೋಡಗದಂತೆ,ನೇಣ ತುದಿಯ ಬೊಂಬೆಯಂತೆ,ಆಡಿದೆನಯ್ಯಾ ನೀನಾಡಿಸಿದಂತೆ,ಆನು ನುಡಿದೆನಯ್ಯಾ ನೀ ನುಡಿಸಿದಂತೆ,ಆನು ಇದ್ದೆನಯ್ಯಾ ನೀನು ಇರಿಸಿದಂತೆ,ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-181)ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:ಯಂತ್ರವಾಹಕ: ಯಂತ್ರಗಳನ್ನು ನಡೆಸುವವ, ವಾಹನ ಚಾಲಕ. ವೈರಾಗ್ಯನಿಧಿ ಅಕ್ಕಮಹಾದೇವಿಯವರು 12 ನೇ ಶತಮಾನದಲ್ಲಿ ಉದಯಿಸಿದ ಅನುಪಮ ಕವಿಯಿತ್ರಿ. ಅಂತರ್ಮುಖಿಯಾದ ಶರಣೆ ಅಕ್ಕಮಹಾದೇವಿಯವರಿಗೆ ಕಾವ್ಯ ಭಾಷೆ ಸಿದ್ಧಸಿತ್ತು. ಅವರ ಅಧ್ಯಯನಶೀಲತೆ, ಸ್ವತಂತ್ರ ವೈಚಾರಿಕತೆ, ಅವರು ಕಂಡಂಥ ಜೀವನಾನುಭವ, ಅಭಿವ್ಯಕ್ತಿಯ ವಿಶಿಷ್ಠ ಶೈಲಿ ಅವರನ್ನು ಅನುಪಮ ಕವಿಯಿತ್ರಿಯಾಗಿ ಗುರುತಿಸುವಲ್ಲಿ ಸಹಕರಿಸುವ ಅಂಶಗಳಾಗಿವೆ. ನಾವಿಂದು ಹೇಳುವ ಕವಿ…

0 Comments