ಹಡಪದ ಅಪ್ಪಣ್ಣನವರ ವಚನ – ನಿರ್ವಚನ | ಶ್ರೀಮತಿ. ಶಿವಲೀಲಾ ಭೀಮಳ್ಳಿ, ಕಲಬುರಗಿ.
ವಂದನೆಗೆ ನಿಲ್ಲಬೇಡ, ನಿಂದೆಗಂಜಿ ಓಡಲಿಬೇಡ.ಹಿಂದು ಮುಂದು ಆಡಲಿಬೇಡ, ಸಂದೇಹಗೊಳಲಿಬೇಡ.ದ್ವಂದ್ವಬುದ್ಧಿಯ ಕಳೆದು ನಿಂದಿರೆ,ಬಸವಪ್ರಿಯ ಕೂಡಲಚೆನ್ನಬಸವಣ್ಣ.(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-423/ವಚನ ಸಂಖ್ಯೆ-1030) ಬಸವಣ್ಣನವರ ಮಹಾಮನೆಯ ಮೇಲ್ವಿಚಾರಕರಾಗಿ ಅವರಿಗೆ ಅತ್ಯಂತ ಸಮೀಪದಲ್ಲಿದ್ದು ಬಸವಣ್ಣನವರು ಲಿಂಗೈಕ್ಯರಾಗುವತನಕವೂ ಅವರೊಂದಿಗಿದ್ದ ಮಹಾಶರಣರು ಹಡಪದ ಅಪ್ಪಣ್ಣನವರು. ಇವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಮುಸಬಿನಾಳ ಗ್ರಾಮದವರು. ಇವರ ತಂದೆಯ ಹೆಸರು ಚೆನ್ನವೀರಪ್ಪ ಮತ್ತು ತಾಯಿಯವರ ಹೆಸರು ದೇವಕ್ಕಮ್ಮ. ಮಡದಿ ಸುಪ್ರಸಿದ್ಧ ವಚನಕಾರ್ತಿ ಲಿಂಗಮ್ಮ ತಾಯಿ. ಇವರ ಅಂಕಿತನಾಮ “ಬಸವಪ್ರಿಯ ಕೂಡಲ ಚೆನ್ನಬಸವಣ್ಣ”. ಸಿಕ್ಕ ಒಟ್ಟು ವಚನಗಳು 250. ಕಾಯಕ ಕ್ಷೌರಿಕ ವೃತ್ತಿ. ನಿರ್ವಚನ:ಹಡಪದ ಅಪ್ಪಣ್ಣನವರು…





Total views : 55993