ಆಮುಗೆ ರಾಯಮ್ಮನವರ ವಚನ ವಿಶ್ಲೇಷಣೆ: ಸಂತೆ ಜನಪದರ ಸಂಸ್ಕೃತಿ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಪಟ್ಟಣದ ಸೂಳೆಯ ಕೂಡೆ ಪರಬ್ರಹ್ಮ ನುಡಿಯಲೇಕೆ?ಸಂತೆಗೆ ಬಂದವರ ಕೂಡೆ ಸಹಜವ ನುಡಿಯಲೇಕೆ?ಕತ್ತೆಯನೇರುವರ ಕೂಡೆ ನಿತ್ಯರೆಂದು ನುಡಿಯಲೇಕೆ?ಹೊತ್ತು ಹೋಕರ ಕೂಡೆ ಕರ್ತನ ಸುದ್ದಿಯ ನುಡಿಯಲೇಕೆ?ಆಮುಗೇಶ್ವರಲಿಂಗವನರಿದ ಶರಣಂಗೆ ಹತ್ತು ಸಾವಿರವನೋದಲೇಕೆ?ಹತ್ತು ಸಾವಿರ ಕೇಳಲೇಕೆ? ಭ್ರಷ್ಟರ ಕೂಡೆ ನುಡಿಯಲೇಕೆ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-862 / ವಚನ ಸಂಖ್ಯೆ-663) ವಚನ ಸಾಹಿತ್ಯ ಪರಂಪರೆಯಲ್ಲಿ ಮತ್ತೊಬ್ಬ ದಿಟ್ಟ ಮಹಿಳಾ ವಚನಕಾರ್ತಿಯೆಂದರೆ ಆಮುಗೆ ರಾಯಮ್ಮ. ಆಮುಗೆ ದೇವಯ್ಯನ ಧರ್ಮಪತ್ನಿ ಈಕೆ. ಆಮುಗೆ ದೇವಯ್ಯನ ಸಾಂಗತ್ಯದಲ್ಲಿ ಈ ದಂಪತಿಗಳ ಪ್ರಸ್ತಾಪವಿದೆ. ಸೊಲ್ಲಾಪುರದ ನೇಕಾರಿಕೆಯ ಕಾಯಕದಲ್ಲಿ ತಮ್ಮನ್ನು ಇವರು ತೊಡಗಿಸಿಕೊಂಡಿದ್ದರು. ಆಮುಗೆ ರಾಯಮ್ಮ ತನ್ನ…