ಕಾಗೆಯ ತಿಂದವನಲ್ಲದೆ ಭಕ್ತನಲ್ಲ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಕಾಗೆಯ ತಿಂದವನಲ್ಲದೆ | ಭಕ್ತನಲ್ಲಕೋಣವ ತಿಂದವನಲ್ಲದೆ | ಮಹೇಶ್ವರನಲ್ಲಕೋಡಗ ತಿಂದವನಲ್ಲದೆ | ಪ್ರಸಾದಿಯಲ್ಲನಾಯ ತಿಂದವನಲ್ಲದೆ | ಪ್ರಾಣಲಿಂಗಿಯಲ್ಲಹೇಯವ ತಿಂದವನಲ್ಲದೆ | ಶರಣನಲ್ಲಇಂತೈವರ ತಿಂದವನಲ್ಲದೆ | ಲಿಂಗೈಕ್ಯನಲ್ಲ ಗುಹೇಶ್ವರಾ ||(ಸಮಗ್ರ ವಚನ ಸಂಪುಟ: ಐದು-2016/ಪುಟ ಸಂಖ್ಯೆ-256/ವಚನ ಸಂಖ್ಯೆ-1061) ಅಲ್ಲಮಪ್ರಭುಗಳ ಈ ವಚನವು ಷಟ್‌ಸ್ಥಲ ವಿಮರ್ಶೆಯ ಮೂಲಕ ಸಾಮಾಜಿಕ ವಾಸ್ತವಗಳನ್ನು ಬೆಡಗಿನ ಮನಸ್ತಿತಿ ಮೂಲಕ ಪ್ರವೇಶಿಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಮನುಷ್ಯರ ಶರೀರದಲ್ಲಿ ಮೃಗ. ಮತ್ತು ಪಕ್ಷಿಯ ಸ್ವಭಾವಗಳು ವಾಸವಾಗಿರುತ್ತವೆ. ಪ್ರಾಣಿ ಪಕ್ಷಿ ಸಂಕುಲಗಳನ್ನು ಆಧ್ಯಾತ್ಮಿಕ ಮನೋಲೋಕದಲ್ಲಿ "ಕಾಗೆಯನ್ನು ತಿಂದವನಲ್ಲದೆ ಭಕ್ತನಾಗಲು ಸಾಧ್ಯವಾಗವಾಗುವುದಿಲ್ಲ” ಎನ್ನುವ ವ್ಯಂಗೋಕ್ತಿಯ ಪರಿಕ್ರಮವಿಲ್ಲಿ ಕಾಣಬಹುದು. ಪಕ್ಷಿ…

0 Comments

ಲದ್ದೆಯ ಸೋಮಯ್ಯ ಶರಣರ ವಚನ – ನಿರ್ವಚನ | ಶ್ರೀಮತಿ. ಲಕ್ಷ್ಮಿ ಪಾಟೀಲ, ಕಲಬುರಗಿ.

ವಚನ:ಆವ ಕಾಯಕವಾದಡೂ ಸ್ವಕಾಯಕವ ಮಾಡಿ,ಗುರು ಲಿಂಗ ಜಂಗಮರ ಮುಂದಿಟ್ಟು,ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು,ವ್ಯಾಧಿ ಬಂದಡೆ ನೆರಳು, ಬೇನೆ ಬಂದಡೆ ಒರಲು,ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,ಭಾಪು ಲದ್ದೆಯ ಸೋಮಾ?(ಸಮಗ್ರ ವಚನ ಸಂಪುಟ-9/2001/ಪುಟ. ಸಂ-8/ವಚನ. ಸಂ. 20) ಅನುಭವ ಮಂಟಪದ ಅನುಭಾವಿ ಶರಣರು ಲದ್ದೆಯ ಸೋಮಯ್ಯನವರು. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಲಾದಾ ಗ್ರಾಮದವರು.  ಮಡದಿ ಹೆಸರು ಮಂಗಮ್ಮ. ಹುಲ್ಲು ಮಾರುವ ಕಾಯಕ ಕೈಕೊಳ್ಳುವ ಇವರು ತಮ್ಮ ಗ್ರಾಮದಲ್ಲಿ ಹುಲ್ಲು ಕೊಯಿದು ಹುಲಸೂರಿನಲ್ಲಿ ತಂದು ಮಾರುತ್ತಿದ್ದರು. ಹುಲಸೂರು ಗ್ರಾಮದಲ್ಲಿ ಇವರ ಹೆಸರಿನಲ್ಲಿ ಗುಡಿಯೊಂದು ಇದೆ. ಇವರ…

0 Comments

ಆದಯ್ಯ ಶರಣರ ವಚನ – ನಿರ್ವಚನ ವಚನ | ಶ್ರೀಮತಿ ಸುರೇಖಾ ಶೀರಪಾಟೀಲ, ಕಲಬುರಗಿ.

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,ಪ್ರಾಣದಲ್ಲಿ ನಿರ್ಭಯ, ಚಿತ್ತದಲಿ ನಿರಪೇಕ್ಷೆ.ವಿಷಯಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೋ.(ಸಮಗ್ರ ವಚನ ಸಂಪುಟ-ಆರು/2021/ಪುಟ. ಸಂ-346/ವಚನ. ಸಂ. 954) ಶರಣ ಆದಯ್ಯನವರು 12 ನೇ ಶತಮಾನದ ಅನುಭವ ಮಂಟಪದ ಅನುಭಾವಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ವಚನಗಳಲ್ಲಿ ಬಸವಣ್ಣ, ಮಡಿವಾಳ, ಅಲ್ಲಮಪ್ರಭುದೇವರು, ಮಡಿವಾಳ ಮಾಚಿದೇವರು ಮುಂತಾದ ಶರಣರನ್ನು ಸ್ಮರಿಸಿರುವದರಿಂದ ಇವರು ಬಸವಣ್ಣನವರ ಸಮಕಾಲೀನರು ಎನ್ನಬಹುದು. ಶರಣ ಆದಯ್ಯನವರು ಮೂಲತ ಸೌರಾಷ್ಟ್ರ ಅಂದರೆ ಗುಜರಾತಿನವರು. ತಂದೆ ಪಾರದತ್ತ, ತಾಯಿ ಪುಣ್ಯವತಿ. ಇವರ ಕಾಯಕ ಚಿನ್ನ ಮುತ್ತಿನ (ಹರದಿಕೆ) ವ್ಯಾಪಾರ. ಈ…

0 Comments

ಶಿವಶರಣ ಮಾದಾರ ಚೆನ್ನಯ್ಯನವರ ವಚನ ನಿರ್ವಚನ | ಡಾ. ಸಾರಿಕಾದೇವಿ ಎಲ್. ಕಾಳಗಿ, ಕಲಬುರಗಿ.

ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.ನುಡಿ ಲೇಸು, ನಡೆಯಧಮವಾದಲ್ಲಿ,ಅದು ಬಿಡುಗಡೆಯಿಲ್ಲದ ಹೊಲೆ.ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?ಆಚಾರವೆ ಕುಲ, ಅನಾಚಾರವೆ ಹೊಲೆ,ಇಂತೀ ಉಭಯವ ತಿಳಿದರಿಯಬೇಕು.ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,ಅರಿ ನಿಜಾ[ತ್ಮ]ರಾಮ ರಾಮನಾ.(ಸಂಕೀರ್ಣ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-447 /ವಚನ ಸಂಖ್ಯೆ-1153) ಶಿವಶರಣ ಮಾದಾರ ಚೆನ್ನಯ್ಯನವರು 12 ನೇ ಶತಮಾನದ  ಶ್ರೇಷ್ಠ ವಚನಕಾರರು ಮತ್ತು ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಜನಿಸಿದರು ಎಂದು ತಿಳಿದು ಬರುತ್ತದೆ. ಇವರು ಬಸವಣ್ಣನವರ ಹಿರಿಯ ಸಮಕಾಲೀನರಾಗಿದ್ದರು. ಇವರು ಅನುಭವ ಮಂಟಪದ ಅನುಭಾವಿಗಳಾಗಿದ್ದರು. ಇವರು ತಮಿಳುನಾಡಿನ ಕರಿಕಾಲ ಚೋಳರಾಜನ ಕುದುರೆ…

0 Comments

ಶರಣ ಕೀಲಾರದ ಭೀಮಣ್ಣನವರ ವಚನ-ನಿರ್ವಚನ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ವಚನ:ನಾನಾ ವರ್ಣದ ಗೋವುಗಳೆಲ್ಲವೂ ಕೂಡಿಒಂದೇ ಹೊಲದಲ್ಲಿ ಮೇದು,ಆರು ಕೆರೆಯ ನೀರ ಕುಡಿದು,ಒಂದೇ ದಾರಿಯಲ್ಲಿ ಬಂದು,ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು.ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು,ಹಾಲಿಗೆ ಏಕವರ್ಣ.ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿಚಟ್ಟಿ ಹತ್ತದೆ, ಹಸುಕು ನಾರದೆ,ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿಕಾಸಿ ಉಣಬಲ್ಲಡೆ ಆತನೆ ಭೋಗಿ.ಆತ ನಿರತಿಶಯಾನುಭಾವ ಶುದ್ಧಾತ್ಮನು,ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-37/ವಚನ ಸಂಖ್ಯೆ-75)ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:ಕೊಟ್ಟಿಗೆ: ದನಕರುಗಳನ್ನು ಕಟ್ಟುವ ಸ್ಥಳ.ಭಾಜನ: ಪಾತ್ರೆ.ಚಟ್ಟಿ: ಮಣ್ಣಿನ ಪಾತ್ರೆ, ಮಡಿಕೆ.ಕೌರು: ಸುಟ್ಟ ವಾಸನೆ, ಹೊಗೆ, ನಾತ.ನಿರತಿಶಯ: ಹೆಚ್ಚಳವಿಲ್ಲದೆ, ಅಸಾಧಾರಣವಲ್ಲದ. ಇದು ಶರಣ ಕೀಲಾರದ…

0 Comments

ನೇಗಿಲಯೋಗಿ ಶರಣ ಒಕ್ಕಲಿಗ ಮುದ್ದಣ್ಣನವರ ವಚನ – ನಿರ್ವಚನ | ಶ್ರೀಮತಿ ಜಗದೇವಿ ದಾಂಡ್ರಾ, ಕಲಬುರಗಿ

ವಚನ:ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು.ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯವನರಿದು ಘಟಿಸಬೇಕು.ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?ಕ್ರೀಯ ಬಿಡಲಿಲ್ಲ, ಅರಿವು ಮರೆಯಲಿಲ್ಲ.ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ?ಫಲವ ಹೊತ್ತ ಪೈರಿನಂತೆ, ಪೈರಿನೊಳಕೊಂಡ ಫಲದಂತೆ,ಅರಿವು ಆಚರಣೆಯೆಲ್ಲ ನಿಂದು, ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆಕಾಮಭೀಮ ಜೀವಧನದೊಡೆಯನೆಂಬುದ ಭಾವಿಸಲಿಲ್ಲ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-767/ವಚನ ಸಂಖ್ಯೆ-1734)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:ಕ್ರೀ: ಕ್ರಿಯೆ, ಕಾರ್ಯ, ಕೆಲಸ.ಘಟಿಸು: ಕೂಡು, ಒಂದಾಗು, ಮಿಳಿತವಾಗು ಒಕ್ಕಲಿಗ ಮುದ್ದಣ್ಣ ಶರಣರು ಅಂದಿನ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. ಮೂಲತಃ ಇವರು ವಿಜಯಪುರ ಜಿಲ್ಲೆಯ ಜೋಳದಹಾಳ…

0 Comments

ಶರಣ ಅಮುಗಿದೇವಯ್ಯನವರ ವಚನದ ನಿರ್ವಚನ | ಶ್ರೀ. ಎನ್. ಸಿ. ಶಿವಪ್ರಕಾಶ್, ಮಸ್ಕತ್, ಒಮಾನ್.

ವಚನ:ಜ್ಞಾನದಲರಿದಡೇನಯ್ಯ, ಕ್ರೀಯನಾಚರಿಸದನ್ನಕ್ಕ?ನೆನೆದ ಮಾತ್ರದಲ್ಲಿ ಅಹುದೆ, ಕಾರ್ಯದಲಲ್ಲದೆ?ಕುರುಡ ಕಾಣ ಪಥವ, ಹೆಳವ ನಡೆಯಲರಿಯ.ಒಂದಿಲ್ಲದಿರ್ದಡೊಂದಾಗದು.ಜ್ಞಾನವಿಲ್ಲದಿರ್ದ ಕ್ರೀ ಜಡನು,ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು.ಇದು ಕಾರಣ, ಸಿದ್ಧಸೋಮನಾಥಲಿಂಗವಕೂಡುವ ಶರಣಂಗೆ ಎರಡೂ ಬೇಕು.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-130/ವಚನ ಸಂಖ್ಯೆ-331) ಶರಣ ಅಮುಗಿದೇವಯ್ಯನವರು ಮೂಲತಃ ಪಂಡರಾಪುರ ಸಮೀಪದ ಪುಳಜೆ ಗ್ರಾಮದವರಾಗಿದ್ದು ಅಲ್ಲಿ ನೇಯ್ಗೆ ಕಾಯಕ ಮಾಡಿಕೊಂಡವರಾಗಿದ್ದರು. ಇವರ ಮಡದಿ ಶರಣೆ ಅಮುಗೆ ರಾಯಮ್ಮನವರು ಇಷ್ಟಲಿಂಗಪೂಜಾ ನಿಷ್ಠೆಯುಳ್ಳವರಾಗಿದ್ದ ಅಮುಗಿ ದೇವಯ್ಯನವರಿಗೆ ಸೋಲಾಪೂರದ ಸಿದ್ಧರಾಮ ಶಿವಯೋಗಿಗಳು ಭತ್ತ ಕುಟ್ಟಲು ಹೇಳಿದಾಗ “ನಾವು ಭವಿಗಳ ಸೇವೆ ಮಾಡುವುದಿಲ್ಲ” ಎಂದು ಹೇಳಿ ಮಡದಿ ಅಮುಗಿ ರಾಯಮ್ಮನವರೊಂದಿಗೆ ಕಲ್ಯಾಣಕ್ಕೆ ಬಂದು ಅನುಭವಮಂಟಪದ…

0 Comments

ಜೇಡರ ದಾಸಿಮಯ್ಯ ಶರಣರ ವಚನ ನಿರ್ವಚನ | ಶ್ರೀಮತಿ. ವಿಜಯಲಕ್ಷ್ಮಿ ಎಂ. ಪಾಟೀಲ, ಕಲಬುರಗಿ.

ವಚನ:ತಾಯ ಗರ್ಭದ ಶಿಶು ತಾಯ ಕುರುಹನರಿಯದು.ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು.ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು.ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ!ರಾಮನಾಥ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-282/ವಚನ ಸಂಖ್ಯೆ-801) ಆದ್ಯ ವಚನಕಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಚನಕಾರರು ಜೇಡರ ದಾಸಿಮಯ್ಯ ಶರಣರು. ಬಸವಣ್ಣನವರ ಹಿರಿಯ ಸಮಕಾಲೀನರಾದ ಈ ಶರಣರು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರು (ಬಿ) ಗ್ರಾಮದಲ್ಲಿ ಜನಿಸಿದವರು. ತಂದೆ ಕಾಮಯ್ಯ ಹಾಗೂ ತಾಯಿ ಶಂಕರಿ ಮತ್ತು ಮಡದಿ ವಚನಕಾರ್ತಿ ಶರಣೆ ದುಗ್ಗಳೆ. ಕುಲ ಕಾಯಕ ನೇಕಾರಿಕೆಯೇ ಈ ಶರಣರ ಕಾಯಕವಾಗಿತ್ತು. “ರಾಮನಾಥ” ಎನ್ನುವ ಅಂಕಿತನಾಮದಲ್ಲಿ ಇವರ…

0 Comments

ಶರಣ ಘಟ್ಟಿವಾಳಯ್ಯನವರ ವಚನ ನಿರ್ವಚನ | ಶ್ರೀಮತಿ. ಶಶಿಕಲಾ. ಬಿ. ಕೆ. ಬೆಂಗಳೂರು.

ನೀರೊಳಗೆ ಕಿಚ್ಚಿರ್ದು ನೆಳಲ ಸುಟ್ಟಿತ್ತು!ನೆಳಲ ಸುಟ್ಟ ಬೂದಿಯನಿಟ್ಟು ಕೊಂಡಡೆ ಭೂಮಿ ಸತ್ತಿತ್ತು!ಆಕಾಶ ಹೊತ್ತಿತ್ತು! ದೇವನ ದೇವತ್ವ ಕೆಟ್ಟಿತ್ತು!ದೇವಿಯ ಒಕತನ ಮುರಿಯಿತ್ತು!ಕೇಳಬಾರದ ಠಾವಿನಲ್ಲಿ ಕಾಣಬಾರದ ಲಿಂಗ ಮೂರ್ತಿಗೊಂಡಿರೆನೋಡಬಾರದ ಪೂಜೆಯಾಯಿತ್ತು!ಚಿಕ್ಕಯ್ಯಪ್ರಿಯ ಸಿದ್ಧಲಿಂಗಾಪ್ರಭುದೇವ[ರ] ನಿಲವ ಕಂಡು ಇಲ್ಲ ಇಲ್ಲವೆನುತಿರ್ದೆನು.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-188/ವಚನ ಸಂಖ್ಯೆ-490) ಘಟ್ಟಿವಾಳಯ್ಯ ಶರಣರು ಅನುಭವ ಮಂಟಪದ ಅನುಭಾವಿಗಳು. ಧೀರೋದಾತ್ತ ನಡೆ ನುಡಿಯ ಗಟ್ಟಿಗ ಶರಣರಿವರು. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯವರೆಂಬುದು ಸಂಶೋಧಕರ ಅಭಿಪ್ರಾಯ. ಅಲ್ಲಿರುವ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ  ಬಾರಿಸುವ ಕಾಯಕ ಕೈಗೊಂಡವರು. ಸಂಸಾರಿಗಳಾಗಿದ್ದ ಈ ಶರಣರು ಸಂತೋಷದಿಂದಲೆ ಸಂಸಾರ ಮಾಡಿದವರಾಗಿದ್ದವರು. ಆದರೆ ಮುಂದೆ ಮಡದಿ ಮಾಡಿದ…

0 Comments

ಗೋಲ್ಲಾಳೇಶ್ವರ ಶರಣರ ವಚನ ನಿರ್ವಚನ | ಶ್ರೀಮತಿ ರೇಣುಕಾ ಮೈಸಲಿಗೆ, ಕಲಬುರಗಿ.

ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.ಇಂತಿವನೆಲ್ಲವನರಿವ ಚಿತ್ತ ದೇವರಲ್ಲ.ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ:ಕಂಡವರೊಳಗೆ ಕೈಕೊಂಡಾಡದೆ,ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ,ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ,ವೀರಬೀರೇಶ್ವರಲಿಂಗದೊಳಗಾದ ಶರಣ.(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-88) ಅನುಭವ ಮಂಟಪದ ಮೇರು ಅನುಭಾವಿ ಶರಣರು ಗೋಲ್ಲಾಳೇಶ್ವರರು. ಇವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೋಲಗೇರಿ ಎಂಬ ಗ್ರಾಮ. ತಂದೆ ಬಲ್ಲುಗ ತಾಯಿ ದುಗ್ಗಳೆ. ಇವರ ಕಾಯಕ ಕುರಿ ಕಾಯುವದು. "ವೀರ ಬೀರೇಶ್ವರ"…

0 Comments