ಬಸವಣ್ಣನವರ ವಚನ ವಿಶ್ಲೇಷಣೆ: ಮೊರನ ಗೋಟಿಲಿ ಬಪ್ಪ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಮೊರನ ಗೋಟಿಲಿ ಬಪ್ಪ ಕಿರುಕುಳ ದೈವಕ್ಕೆಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.ಕುರಿ ಸತ್ತು ಕಾವುದೆ ಹರ ಮುಳಿದವರ?ಕುರಿ ಬೇಡ, ಮರಿ ಬೇಡ,ಬರಿಯ ಪತ್ರೆಯ ತಂದು ಮರೆಯದೆ ಪೂಜಿಸುನಮ್ಮ ಕೂಡಲಸಂಗಮದೇವನ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-52 / ವಚನ ಸಂಖ್ಯೆ-560) ವಚನ ಸಾಹಿತ್ಯಕ್ಕೆ ಅದರದೇ ಆದ ತಾತ್ವಿಕತೆ ಇದೆ. ವಚನ ಸಾಹಿತ್ಯದ ಬಹು ಮುಖ್ಯವಾದ ಎರಡು ನೆಲೆಗಳು ಎಂದರೆ ಒಂದು "ಸಾಮಾಜಿಕ ಜವಾಬ್ದಾರಿ" ಮತ್ತೊಂದು "ಅಭಿವ್ಯಕ್ತಿ ಸ್ವಾತಂತ್ರ". ಶರಣರ ತಾತ್ವಿಕ ಸಿದ್ದಾಂತಗಳಿಗೆ ಇವೆರಡು ಮೂಲ ತಳಹದಿಯಾಗಿವೆ. ಶರಣರ ಅನುಭವ ಅನುಭಾವವಾಗಿ ಬದುಕಿನ ಸತ್ಯದ ಅನಾವರಣಕ್ಕೆ ನಾಂದಿಯಾಗಿತ್ತು. ಕಾರಣ ಇಷ್ಟೇ ಶರಣರು…





Total views : 55993