ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ? ವ್ಯೋಮಕಾಯ ಅಲ್ಲಮಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ.
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?ಬೇಟದ ಮರುಳಗೆ ಲಜ್ಜೆ ಮುನ್ನುಂಟೆ?ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ?ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ?ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೇ?(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-138 / ವಚನ ಸಂಖ್ಯೆ-425) ನಿಜವಾದ ಭಕ್ತನಾದವನು ಪೂಜೆ ಎಂಬ ಆಚರಣೆಯ ಬಗೆಗೆ ಅಷ್ಟಾಗಿ ಗಮನವನ್ನು ಕೊಡಬೇಕಾಗಿಲ್ಲ ಎಂಬುದು ಅಲ್ಲಮರ ವಿಚಾರವಾಗಿದೆ. ಬಹಿರಂಗದ ಆಚರಣೆಗಳು ಕೇವಲ ನಮ್ಮ ತೋರಿಕೆಯ ಅಭಿವ್ಯಕ್ತಿಗಳೇ ಹೊರತು ನಿಜವಾದ ಲಿಂಗ ಪೂಜೆಯನ್ನುವದು ಅದು ಭಕ್ತನು ಲಿಂಗಕ್ಕೆ ತನ್ನನ್ನು ನಿರಹಂಭಾವದಿಂದ ಅರ್ಪಿಸಿಕೊಳ್ಳುವದರಲ್ಲಿದೆ ಎನ್ನುವದು ಶರಣರ ವಿಚಾರವಾಗಿದೆ. ಇನ್ನೊಂದು ರೀತಿಯಿಂದ ಆಲೋಚನೆ ಮಾಡಿದಾಗಲೂ ಕೂಡ ಪೂಜೆ…





Total views : 62413