ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ / ಶ್ರೀಮತಿ. ಅನುಪಮಾ ಪಾಟೀಲ.

ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ,ಎನ್ನ ಬಿಡು, ತನ್ನ ಬಿಡು ಎಂಬುದು ಕಾಯವಿಕಾರ.ಎನ್ನ ಬಿಡು, ತನ್ನ ಬಿಡು ಎಂಬುದು ಮನೊವಿಕಾರ.ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನಮನ ನಿಮ್ಮನೈದುಗೆ, ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-14 / ವಚನ ಸಂಖ್ಯೆ-36) ಮಾನವನು ತನ್ನ ಜೀವನದಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವದು ಮುಖ್ಯವಾಗಿದೆ. ಆಧ್ಯಾತ್ಮವು ಅಂತರಂಗವನ್ನು ಶುದ್ಧಗೊಳಿಸುವದರೊಂದಿಗೆ ಬಹಿರಂಗದ ದುಃಖವನ್ನು ದೂರ ಮಾಡುತ್ತದೆ, ಅಂತರಂಗ ಶುದ್ಧವಾಗಿರಬೇಕೆಂದರೆ ಮನಸ್ಸು ಒಳ್ಳೆಯದನ್ನು ಆಲೋಚಸುತ್ತಿರಬೇಕು. ದೇಹ ಮತ್ತು ಮನಸ್ಸು ಎರಡು ಅತಿ ಮುಖ್ಯ ಅಂಗಗಳು. ದೇಹ ಸ್ಥೂಲ ಶರೀರವಾದರೆ ಮನಸ್ಸು ಸೂಕ್ಷ್ಮ ಶರೀರ ಅಂತ ಗುರುತಿಸಲಾಗಿದೆ. ಎರಡನ್ನೂ…

0 Comments

“ಬೆಳಗಿನೊಳಗಣ ಬೆಳಗು” / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಶಬ್ದವೆಂಬೆನೆ? ಶ್ರೋತ್ರದೆಂಜಲು. ಸ್ಪರ್ಶವೆಂಬೆನೆ? ತ್ವಕ್ಕಿನೆಂಜಲು.ರೂಪೆಂಬೆನೆ? ನೇತ್ರದೆಂಜಲು. ರುಚಿಯೆಂಬೆನೆ? ಘ್ರಾಣದೆಂಜಲು.ಪರಿಮಳವೆಂಬೆನೆ? ಘ್ರಾಣದೆಂಜಲು. ನಾನೆಂಬೆನೆ? ಅರಿವಿನೆಂಜಲು.ಎಂಜಲೆಂಬೆ ಭಿನ್ನವಳಿದ, ಬೆಳಗಿನೊಳಗಣ ಬೆಳಗುಗುಹೇಶ್ವರನೆಂಬ ಲಿಂಗವು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-182 / ವಚನ ಸಂಖ್ಯೆ-564) ವಚನ ಸಾಹಿತ್ಯದ ಬೆಡಗಿನ ಭಾಷೆಯ ಹರಿಕಾರ ಅಲ್ಲಮಪ್ರಭುಗಳು. ಅಲ್ಲಮ ಪ್ರಭುಗಳ ವಚನಗಳು ಪಾರಮಾರ್ಥಿಕ, ಸೃಜನಶೀಲತೆಗೆ ಮತ್ತು ವೈಚಾರಿಕ ಬದ್ಧತೆಗೆ ಒಳಗಾಗುತ್ತವೆ. ವಚನ ಸಾಹಿತ್ಯ ಸಂಸ್ಕೃತಿಗೆ ಅಲ್ಲಮ ಪ್ರಭುಗಳಿಗೆ ವಿಶಿಷ್ಟ ಮತ್ತು ಗಂಭೀರ ಸ್ಥಾನವಿದೆ. ಅಲ್ಲಮ ಪ್ರಭುಗಳ ತತ್ವ ಮತ್ತು ಸಿದ್ಧಾಂತವನ್ನು ಪ್ರತಿಕ್ರಿಯಿಸುವಾಗ 12 ನೇ ಶತಮಾನದ ಸಾಮಾನ್ಯ ಭಾಷೆ ಪರಿವರ್ತನಾಶೀಲತೆಯನ್ನು ಪಡೆದುಕೊಳ್ಳುತ್ತದೆ. ವಚನ ಭಾಷೆಯ…

0 Comments

ಪರಮ ಪೂಜ್ಯ ಶ್ರೀ ಮ. ನಿ. ಪ್ರ. ಡಾ. ಮಹಾಂತ ಶಿವಯೋಗಿಗಳವರ ಜನ್ಮದಿನದ ಭಕ್ತಿಯ ನಮನಗಳು / ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.

ಮಾಡುವಂತಿರಬೇಕು, ಮಾಡದಂತಿರಬೇಕು.ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.ಕೂಡಲಸಂಗಮದೇವರನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು.(ಸಮಗ್ರ ವಚನ ಸಂಪುಟ: ಒಂದು-2016 ಪುಟ ಸಂಖ್ಯೆ-120/ವಚನ ಸಂಖ್ಯೆ-1310) ಸಕಲ ಜೀವಾತ್ಮರ ಲೇಸಿಗಾಗಿ, ಮಾನವ ಕುಲದ ಕಲ್ಯಾಣಕ್ಕಾಗಿ ದೀನ ದಲಿತರ ಶೂದ್ರ ಅಸ್ಪೃಶ್ಯರ ಉದ್ಧಾರಕ್ಕಾಗಿ ಕಲ್ಯಾಣ ಕ್ರಾಂತಿಗೈದ ವಿಶ್ವಗುರು ಬಸವಣ್ಣನವರ ಜನ್ಮಭೂಮಿಯಾದ ಅಂದಿನ ವಿಜಾಪುರ ಜಿಲ್ಲೆಯ ಹಿಪ್ಪರಿಗಿ ಪಾಲ್ ಬಾವಿ ಹಿರಿಯಮಠದ ಶರಣ ದಂಪತಿಗಳಾದ ಶ್ರೀ ವಿರೂಪಾಕ್ಷಯ್ಯ ಹಾಗೂ ನೀಲಮ್ಮನವರ ಉದರದಲ್ಲಿ 1930 ಆಗಸ್ಟ್ 1 ರಂದು ಜನಿಸಿದರು. ಸೌದಿಯ ವಿರಕ್ತ ಮಠದ ಪೂಜ್ಯ ಶ್ರೀ ಸಂಗನ ಬಸವ ಶಿವಯೋಗಿಗಳ ಕೃಪೆಗೆ ಪಾತ್ರರಾಗಿ “ಮಹಾಂತ” ರೆಂದು ನಾಮಕರಣಗೊಂಡು ಆ ಮಠದ…

0 Comments

ಅಕ್ಕನಾಗಮ್ಮ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ

ತಮ್ಮ ಬಸವನ ದಾಸೋಹ ಮನಿಯಾಗಒಮ್ಮನದಿ ಹುಟ್ಟು ಹಿಡದಾಳ ನಾಗಮ್ಮಓಂಯೆಂದು ತಾನು ನೀಡುತ್ತಾ 12 ನೇಯ ಶತಮಾನದ ಕಲ್ಯಾಣದ ಪವಿತ್ರಭೂಮಿಯಲ್ಲಿ ಎಲ್ಲ ಶರಣರಿಗೂ ಹಿರಿಯರೆನಿಸಿ ಅನುಭವಮಂಟಪದ ಅನುಭಾವಿಯಾಗಿ ದಾಸೋಹ ಮನೆಯ ಪರಂದಾಸೋಹಿಯಾಗಿ ಬಾಳಿಬದುಕಿದ ಶರಣೆ ಕ್ರಾಂತಿಯೋಗಿ ಅಕ್ಕನಾಗಮ್ಮ. ನಾಗಲಾಂಬಿಕೆ, ಅಕ್ಕನಾಗಮ್ಮ ಮುಂತಾದ ನಾಮಗಳಿಂದ ಪ್ರಸಿದ್ಧಿಗೊಂಡಿರುವ ಈ ತಾಯಿಗೆ ಜನಪದರು ಮನತುಂಬಿ ಹಾಡುತ್ತಾರೆ. ಶಿವಯೋಗದ ಭೂಮಿಯದು ಕಲ್ಯಾಣ ಊರದುಶಿವಯೋಗದ ದಂಡು ಹಿಡದಾಳ ನಾಗಮ್ಮಶಿವಯೋಗಿ ಆಗಿ ಕುಂತಾಳ. ಕಲ್ಯಾಣ ನಾಡು ಶಿವಯೋಗಿಗಳ ನಾಡು. ಶಿವಪಾರಮ್ಯ ಸಾಧಿಸಿದವರ ಬೀಡು ಮಾಡಿದರು ಶಿವನಿಗಾಗಿ, ನೀಡಿದರು ಶಿವನಿಗಾಗಿ. ‘ಶಿವ’ ಎಂಬುದು ಅವರಿಗೆ ಸಮಾಜವೆನ್ನುವ ಜಂಗಮ. ಆ…

0 Comments

ಅಕ್ಕಮಹಾದೇವಿ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ.

ಬಸವಾದಿ ಶರಣರು ಮಾಡಿದ ಅತ್ಯಂತ ಮಹತ್ವಪೂರ್ಣ ಕಾರ್ಯವೆಂದರೆ ಸಮಾನತೆ ತತ್ವ ಪಾಲಿಸಿದ್ದು. ದೂರದೃಷ್ಟಿಯುಳ್ಳ ಶರಣರ ಅಂದಿನ ಆ ತತ್ವವೇ ದೇಶ-ದೇಶಗಳ ಇಂದಿನ ಸಂವಿಧಾನಗಳಲ್ಲಿ, ವಿದ್ವಾಂಸರಲ್ಲಿ, ವೈಚಾರಿಕ, ಪ್ರಜ್ಞೆಯುಳ್ಳವರಲ್ಲಿ, ಕಟ್ಟಿಕೊಂಡಿದೆ. ಜಾತಿ, ಮತ, ಪಂಥ, ಲಿಂಗಗಳ ಮಧ್ಯೆ ಆಳವಾಗಿ ಬಿರುಕು ಬಿಟ್ಟ ಅಸಮಾನತೆಯನ್ನು ಶರಣರು ಕಾಂಕ್ರೇಟ್ ಹಾಕಿ ಆ ಬಿರುಕನ್ನು ಮುಚ್ಚಿಬಿಟ್ಟರು. ಅವರ ಆ ಸಮಾನತೆ ಮನುಕುಲದ ಇತಿಹಾಸವನ್ನು ಬದಲಾಯಿಸಿತು. ಅದರಲ್ಲಿ ಲಿಂಗ ಸಮಾನತೆ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಜಗತ್ತಿನಲ್ಲಿಯೇ ಅತೀ ಶೋಷಣೆಗೆ ಒಳಪಟ್ಟವಳು ಹೆಣ್ಣು. ಮೇಲ್ವರ್ಗದಿಂದ ಹಿಡಿದು ಕೆಳ ಜಾತಿಯ ಜನರಲ್ಲಿ ಸ್ತ್ರೀ ಶೋಷಣೆಗೆ ಒಳಗಾಗಿದ್ದಾಳೆ. ಅಜ್ಞಾನಿ…

0 Comments

ಹರಳಯ್ಯ ಶರಣರು / ಡಾ. ನೀಲಾಂಬಿಕಾ ಪೊಲೀಸ ಪಾಟೀಲ, ಕಲಬುರಗಿ.

ಹರರೂಪಿ ಹರಳಯ್ಯ ಮತ್ತು ಅವರ ಮಡದಿ ಕಲ್ಯಾಣಮ್ಮನವರ ಬಲ ಮತು ಎಡತೊಡೆಯ ಚರ್ಮವು ತೆಗೆದು ಮಾಡಿದ್ದ ಚರ್ಮಾವುಗಳಿಗೆ ಪೃಥ್ವಿಯು ಸಮಬಾರದು ಎಂಬ ಬಸವಣ್ಣನವರ ವಚನದ ನುಡಿಗೆ ಸಾಕ್ಷಿಯಾಗಿದೆ. ಬಸವಣ್ಣ ಮತ್ತು ಶರಣರ ನಡುವೆ ಎಂತಹ ಸಂಬಂಧವಿತ್ತು ಎನ್ನುವುದಕ್ಕೆ ಈ ಚಮ್ಮಾವುಗೆಗಳು ಸಾಕ್ಷಿಯಾಗಿವೆ. ಸಮಾನತೆ ಕೇವಲ ಆಡುವ ನುಡಿಯಲ್ಲ ಅದಕ್ಕೆ ಶರಣರು ಬದ್ಧರಾಗಿದ್ದರು ಎನ್ನುವುದಕ್ಕೆ ಈ ಚಮ್ಮಾವುಗೆಗಳು ನಿದರ್ಶನವಾಗಿವೆ. ಅನುಭವ ಮಂಟಪದ ಮಹಾನುಭವಿಗಳು ಹರಳಯ್ಯ ಕಲ್ಯಾಣಮ್ಮ ಶರಣರು. ಕಲ್ಯಾಣ ಊರಾಗ ಅರ‍್ಹೆಂತ ಸತಿಪತಿನಿಲ್ಲದೆ ಚಪ್ಪಲಿ ತಾ ಹೊಲಿದು | ಮಾಡ್ಯಾರಮನಮುಟ್ಟಿ ಅವರು ದಾಸೋಹ ಅವರ ಕಾಯಕ ಚಪ್ಪಲಿ ಹೊಲಿಯುವದು…

2 Comments

“ವೈಚಾರಿಕ ಶರಣ ಹಡಪದ ಅಪ್ಪಣ್ಣ”/ ಡಾ.ರಾಜೇಶ್ವರಿ ವೀ.ಶೀಲವಂತ, ಬೀಳಗಿ.

ಹನ್ನೆರಡನೆಯ ಶತಮಾನದಲ್ಲಿ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ದುಡಿಯುವ ವರ್ಗದ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡಿದ್ದು ಶರಣ ಚಳುವಳಿ. ಈ ಚಳುವಳಿಯಲ್ಲಿ ಶತಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಶೋಷಣೆ,ಅವಮಾನಕ್ಕೊಳಗಾಗಿದ್ದ ಕಷ್ಟಸಹಿಷ್ಣುಗಳು, ಶ್ರಮಜೀವಿಗಳೆಲ್ಲರೂ ಒಂದಾಗಿ ಇದಕ್ಕೆಲ್ಲ ಕಾರಣವಾದ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು. ಜಾತಿ,ವರ್ಣ,ವರ್ಗ,ಲಿಂಗಗಳನ್ನು ಆಧರಿಸಿ ಅಸಮಾನತೆಯಿಂದ ನಿರ್ಮಾಣಗೊಂಡಿದ್ದ ಸಮಾಜವನ್ನು ಧಿಕ್ಕರಿಸಿ, ಪ್ರತಿಯಾಗಿ ಸಹಬಾಳ್ವೆ, ಸಮಾನತೆ, ಪರಸ್ಪರ ಸಹಕಾರ, ಸಹಾನುಭೂತಿ, ಅರಿವು, ಆಚಾರ, ನಡೆನುಡಿ ಸಿದ್ಧಾಂತಗಳ ಆಧಾರದ ಮೇಲೆ ಜನಮುಖಿ ಸಮಾಜವನ್ನು ನಿರ್ಮಿಸಿದರು. ಅಂದಿನ ಸಮಾಜವು ತಮ್ಮಲ್ಲಿ ಬಿತ್ತಿದ ಕಿಳರಿಮೆ,ಭಯ,ಅವೈಚಾರಿಕತೆಗಳನ್ನು ಕಿತ್ತೊಗೆದರು. ಕಸಬುದಾರರು,ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅಸ್ಪೃಶ್ಯರು ಅಕ್ಷರಜ್ಞಾನವನ್ನು, ವೈಚಾರಿಕತೆಯ ಮನೋಭಾವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು,…

0 Comments

“ವಚನಗಳಲ್ಲಿ ಪ್ರಸಾದ ತತ್ವ” / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ

12 ನೇ ಶತಮಾನವು ಮನುಕುಲದ ಇತಿಹಾಸದಲ್ಲಿ ವಿಶೇಷವಾದಂತಹ ಕಾಲ, ಅದು ಪಾರಮಾರ್ಥವನ್ನು ಸಕಲ ಮಾನವರಿಗೆ ಉಣಬಡಿಸಿದಂತಹ ಶತಮಾನ. ಮಾನವ ಕುಲಕ್ಕೆ ಬದುಕನ್ನು ಕಲಿಸಿದ ಶತಮಾನ ಭವ-ಭವದಲ್ಲಿ ಬೇಯುತ್ತಿದ್ದ ಮಾನವರು ಶರಣಾಗುವ ಮಾರ್ಗ ಕಲಿಸಿದಂತಹ, ಬೆಳಕಿಗೆ ಬಂದಂತಹ ಶತಮಾನ ದೇವನ ಹಂಬಲವುಳ್ಳವರಿಗೆ ಗುರು ಕಾರುಣ್ಯವು ಲಭಿಸಿದಂತಹ ಕಾಲ. ಅದು ಬಸವಣ್ಣನವರು ಅವತರಿಸಿದ ಕಾಲ ಕನಿಷ್ಠವೆನಿಸಿದ ವ್ಯಕ್ತಿಗಳನ್ನು ಆಧ್ಯಾತ್ಮಿಕದ ತುಟ್ಟ ತುದಿಗೆ ಕರೆದೊಯ್ಯವುವ ಅಸ್ಸಿಮ ಶಕ್ತಿ ಬಸವಣ್ಣನವರ ಬೋಧನೆಯಲ್ಲಿ ತುಂಬಿತ್ತು. ಪ್ರತಿಯೊಬ್ಬರ ನಡೆ-ನುಡಿ, ಆಚಾರ-ವಿಚಾರ ಮನೋಭಾವ ಗುಣಗಳು, ಬದುಕುವ ರೀತಿ ಇತ್ಯಾದಿಗಳೆಲ್ಲವನ್ನು ತಿದ್ದಿ ತೀಡಿ, ಅವರನ್ನು ಆದ್ಯಾತ್ಮಿಕದ ನೆಲೆಯಲ್ಲಿ ಮೇಲಕ್ಕೇರಿರಿಸಿ,…

0 Comments

“ಅಂಜಿದರಾಗದು, ಅಳುಕಿದರಾಗದು”/ ಲಿಂ. ಶ್ರೀ. ಈಶ್ವರಗೌಡ ಪಾಟೀಲ, ನರಗುಂದ.

ಅಂಜಿದಡೆ ಮಾಣದು, ಅಳುಕಿದಡೆ ಮಾಣದು,ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.ಕಕ್ಕುಲತೆಗೆ ಬಂದಡೆ ಆಗದು ನೋಡಾ.ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು,ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-63 / ವಚನ ಸಂಖ್ಯೆ-688) ಬಸವಣ್ಣನವರು ಜೀವನದಲ್ಲಿ ಯಾವದಕ್ಕೂ ಅಂಜದೆ ಅಳುಕದೆ ಬಂದದ್ದನ್ನ ಎದುರಿಸಿ ಸಾಧನೆಯಲ್ಲಿ ಮುಂದುವರೆಯಬೇಕು ಎಂಬುದನ್ನ ಇಲ್ಲಿ ಹೇಳುತ್ತಿದ್ದಾರೆ. ಲಲಾಟ ಲಿಖಿತ ಅಂದರೆ ಹಣೆಯ ಬರಹವನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ಅಂಜಿದರೂ ಬುಡುವದಿಲ್ಲ, ಅಳುಕಿದರೂ ಬಿಡುವದಿಲ್ಲ, ವಜ್ರ ಪಂಜರದೊಳಗಿದ್ದರೂ ಬಿಡುವದಿಲ್ಲ. ಬರಬೇಕಾಗಿದ್ದು ಬಂದೆ ಬರುತ್ತದೆ. ಇದು ವಿಧಿವಾದವನ್ನ ಎತ್ತಿ ಹಿಡಿಯುವಂತೆ ಕಂಡರೂ ಆ ಹಣೆಬರಹಕ್ಕೆ ಎಲ್ಲವನ್ನೂ…

0 Comments

“ಶರಣ ಸಿದ್ದರಾಮೇಶ್ವರರ ವಚನಗಳಲ್ಲಿ ಲಿಂಗ ದರ್ಪಣ”/ ಡಾ. ಸರ್ವಮಂಗಳ ಸಕ್ರಿ

ವ್ಯಕ್ತಿ ಮತ್ತು ಮಾನವ ಸಂಬಂಧಗಳ ಸಮಾಜದಲ್ಲಿ ಆಧ್ಯಾತ್ಮಕ್ಕೆ ವಿಶೇಷವಾದ ಸ್ಥಾನವಿದೆ. ಶರಣರ ಸಾಮಾಜಿಕ ಕಾಳಜಿ ಸ್ವತಂತ್ರ ವಚನಗಳು ನಮಗೆ ಮುಖಾಮುಖಿಯಾಗುತ್ತವೆ. ಇಂದ್ರಿಯ ಅಗೋಚರ ಭೌತಿಕ ಪ್ರಪಂಚವನ್ನು ಮೀರಿದ ಜ್ಞಾನದ ಹರವು ಹಾಗು ಆಧ್ಯಾತ್ಮದ ತಿಳುವಳಿಕೆ ಧರ್ಮವಾಗಿದೆ. ವಚನ ಧರ್ಮ ಭಾಷೆಯ ಹಿಂದೆ ಧಾರ್ಮಿಕ ನಂಬಿಕೆ ತಾತ್ವಿಕ ಆ‍ಚರಣೆಗಳು ಶರಣ ಸಂಸ್ಕ್ರತಿಯ ಸಂಗಮವೆಂದು ಸ್ಪಷ್ಟ ಪಡಿಸಬಹುದು. ಯಾವುದೇ ಧರ್ಮ ಶೂನ್ಯದಿಂದ ಹುಟ್ಟಿರುವುದಿಲ್ಲ. ಚರಿತ್ರೆಯ ನಿರ್ಧಿಷ್ಟ ಒತ್ತಡಗಳಿಂದ ಹುಟ್ಟಿರುತ್ತದೆ. 12 ನೇ ಶತಮಾನದ ಲಿಂಗಾಯತ ಧರ್ಮ ಇದಕ್ಕೆ ಹೊರತಲ್ಲ. ಅನೇಕ ಧಾರ್ಮಿಕ ಪಂಥಗಳ ದಶ೯ನಗಳನ್ನು ಒಡಲಲ್ಲಿಟ್ಟುಕೊಂಡು ಅಷ್ಟಾವರಣ ತತ್ವಗಳನ್ನು ಜೋಪಾನ…

0 Comments