“ಬಸವಣ್ಣ”/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ
ಶರಣೆಂದೆ ಶಿವನಿಗೆ ಶರಣೆಂದೆಗುರುವಿಗೆಶರಣೆಂದೆಜಗದಗುರುವಿಗೆ | ಬಸವಗಶರಣೆಂದುಕೈಯ ಮುಗದೇನ. ಜನಪದ ಸಾಹಿತ್ಯದ ಜೀವ ಜೀವಾಳವಾಗಿದ್ದಾರೆ ಬಸವಣ್ಣನವರು. ಆ ಜನಪದರಿಗೆ ಅವರು ಎಲ್ಲವೂ ಆಗಿದ್ದಾರೆ. ದೇವರು, ಗುರು, ಮಾರ್ಗದರ್ಶಕ, ಅರಿವು ಕೊಟ್ಟವರು, ಕಾಯಕ ದಾಸೋಹ ಪರಿಕಲ್ಪನೆ ಅಷ್ಟೇ ಅಲ್ಲ ಸುಖಕ್ಕೂ ದುಃಖಕ್ಕೂ ಎಲ್ಲಕ್ಕೂ ಅವರಿಗೆ ಆಧಾರ ಬಸವಣ್ಣನವರು. ಬಸವ ಎಂಬ ನುಡಿ ಬಾಯಿಗೆ ಬಂದರಸೂಸಾಡ್ಯಾವ ಶಿವನುಡಿ ಮನದಾಗ | ಎಲೆ ಮನವೆಬಸವ ಎಂಬುದು ಬಿಡಬ್ಯಾಡ ಎಂದು ಹರಿದಾಡುವ ಮನಸ್ಸಿಗೆ ಬೇಡಿಕೊಳ್ಳುತ್ತಾ ಕಲ್ಲಿಗೆ ಮುಕ್ಹಾಕಿ ಎಲ್ಲ ದೇವರ ನೆನೆದೆಕಲ್ಯಾಣದ ಬಸವಗ ಮೊದಲಿಗೆ | ನೆನೆದರಕಲ್ಲೆಂಬುದು ನಮಗ ಹಗುರಾಗಿ ಎಂದು ಬಸವಣ್ಣನವರನ್ನು ನೆನೆಯುತ್ತಾರೆ.…