ಬದುಕಿದೆನು ಕಾಣಾ! | ನಾಡೋಜ ಡಾ. ಗೊ. ರು. ಚನ್ನಬಸಪ್ಪ, ಬೆಂಗಳೂರು.
ಆದಿಯುಗದಲ್ಲೊಬ್ಬಳು ಮಾಯಾಂಗನೆ,ಹಲವು ಬಣ್ಣದ ವಸ್ತ್ರವನುಟ್ಟುಕೊಂಡು,ಹೆಡಿಗೆ ತುಂಬ ದೇವರ ಹೊತ್ತುಕೊಂಡು,ಓ ದೇವರ ಕೊಳ್ಳಿರಯ್ಯಾ, ಓ ದೇವರ ಕೊಳ್ಳಿರಯ್ಯಾ ಎಂದಳು.ಎಂದಡೆ ಆ ದೇವರನಾರೂ ಕೊಂಬವರಿಲ್ಲ.ನಾನು ಒಂದರಿವೆಯ ಕೊಟ್ಟು, ಆ ದೇವರ ಕೊಂಡು,ಎನ್ನ ಹೆತ್ತ ತಂದೆ ಬಸವಣ್ಣನ ಪ್ರಸಾದದಿಂದಬದುಕಿದೆನು ಕಾಣಾ, ಕಲಿದೇವರದೇವಾ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-206/ವಚನ ಸಂಖ್ಯೆ-498) ಹನ್ನೆರಡನೆಯ ಶತಮಾನದ ಮಡಿವಾಳ ಮಾಚಿತಂದೆವರು ಈ ನುಡಿ ಗೌರವದ ಕಾರಣ ಪುರುಷ ಬಸವಣ್ಣನವರ ಜಯಂತಿಯನ್ನು ಎಲ್ಲ ಕಡೆ ಆಚರಿಸುತ್ತಿದ್ದೇವೆ. ಈ ನೆಪದಲ್ಲಾದರೂ ಆ ಜೀವನ ಜ್ಯೋತಿಯ ಸ್ಮರಣೆಯನ್ನು ಜೀವಂತವಾಗಿ ಇಟ್ಟಿದ್ದೇವೆಂಬುದೇ ಒಂದು ಸಮಾಧಾನ. ಹನ್ನೆರಡನೆಯ ಶತಮಾನದಲ್ಲಿ ಸೃಷ್ಟಿಯಾದ ವಚನೋದ್ಯಾನದ ವಿಚಾರ ಫಲವೃಕ್ಷಗಳಲ್ಲಿ…