ಕಾಯಕ ನಿಷ್ಠೆಯ ಕುಂಬಾರ ಗುಂಡಯ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಕುಂಬಾರರೆಲ್ಲರು ಗುಂಡಯ್ಯನಾಗಬಲ್ಲರೆ?ಮಡಿವಾಳರೆಲ್ಲರು ಮಾಚಯ್ಯನಾಗಬಲ್ಲರೆ?ಜೀಡರೆಲ್ಲರು ದಾಸಿಮಯ್ಯನಾಗಬಲ್ಲರೆ?ಎನ್ನ ಗುರು ಕಪಿಲಸಿದ್ಧಮಲ್ಲೇಶ್ವರಯ್ಯಾ,ಪ್ರಾಣಿಗಳ ಕೊಂದು ಪರಿಹರಿಸಬಲ್ಲಡೆತೆಲುಗ ಜೊಮ್ಮಯ್ಯನಾಗಬಲ್ಲರೆ?(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-447/ವಚನ ಸಂಖ್ಯೆ-1431) ಸಿದ್ಧರಾಮೇಶ್ವರರ ಈ ವಚನವೊಂದೆ ಸಾಕು ಗುಂಡಯ್ಯನವರ ಘನತೆಯನ್ನು ತಿಳಿಯಲು.ಕೆಲಸಕ್ಕೆ ಹೊಸ ಅರ್ಥವನ್ನು ಕೊಟ್ಟು ಕೀಳು ಮಟ್ಟದ ಕಸಬನ್ನು ಕಾಯಕವೆನ್ನುವ ದೈವತ್ವದೆಡೆಗೆ ಕರೆದೊಯ್ದದ್ದು ಬಸವಾದಿ ಶರಣ-ಶರಣೆಯರು. ಮಡಿವಾಳ, ಬಡಗಿ, ಕುಂಬಾರ, ಕಮ್ಮಾರ, ನೇಕಾರ ಹಾರುವ ಎಲ್ಲರೂ ಒಂದೇ ಎಂಬ ತತ್ವವನ್ನು ವಿಶ್ವಕ್ಕೆ ತಿಳಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರ ಅನುಭವ ಮಂಟಪದ 770 ಅಮರಗಣಂಗಳ ಶರಣರಲ್ಲಿ ಒಬ್ಬರು ನಮ್ಮ ಕುಂಬಾರ ಗುಂಡಯ್ಯನವರು. ಗುಂಡಯ್ಯನವರ ಜನ್ಮ ಸ್ಥಳ ಬೀದರಿನ ಭಲ್ಲುಕೆ (ಈಗಿನ…

0 Comments

ವ್ಯೋಮಕಾಯ ಅಲ್ಲಮ ಪ್ರಭುದೇವರ ವಚನಗಳಲ್ಲಿ ಬಸವ ದರ್ಶನ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಕಲ್ಯಾಣವೆಂಬ ಪ್ರಣತೆಯಲ್ಲಿಭಕ್ತಿರಸವೆಂಬ ತೈಲವನೆರೆದು,ಆಚಾರವೆಂಬ ಬತ್ತಿಗೆಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲುತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾಅಸಂಖ್ಯಾತ ಭಕ್ತಗಣಂಗಳು.ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯಸಂಗನಬಸವಣ್ಣನ ಮಹಿಮೆಯ ನೋಡಾಸಿದ್ಧರಾಮಯ್ಯಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-396/ವಚನ ಸಂಖ್ಯೆ-1059) ಲೋಕ ಸಂಚಾರ ಮಾಡುತ್ತ ಶಿವಯೋಗಿ ಸಿದ್ಧರಾಮರೊಡಗೂಡಿ ಕಲ್ಯಾಣಕ್ಕೆ ಪುರ ಪ್ರವೇಶ ಮಾಡಿ ಮಹಾಮನೆಯತ್ತ ಬಂದಾಗ, ನೂರಾರು ಶಿವ ಶರಣ-ಶರಣೆಯರು ಹಣೆಯಲ್ಲಿ ಭಸ್ಮ, ಕೊರಳಲ್ಲಿ ಇಷ್ಟಲಿಂಗ, ರುದ್ರಾಕ್ಷಿ ಮಾಲೆ, ಶುಭ್ರ ವಸ್ತ್ರ ಧರಿಸಿ ಮಹಾಮನೆಯತ್ತ ಸಾಗುತ್ತಿದ್ದರು. ಈ ದೃಶ್ಯಗಳನ್ನು ನೋಡಿದ ಅಲ್ಲಮರು ಮೇಲಿನಂತೆ ಉದ್ಗರಿಸುತ್ತಾ ಕಲ್ಯಾಣದ ಚಿತ್ರಣವನ್ನು ನೀಡುತ್ತಾರೆ. ಮಹಾಮನೆಯ…

1 Comment

ಅಪ್ಪನ ಹೆಸರಿನ ಮಗ ಬಸವರಾಜ | ಡಾ. ಬಸವರಾಜ ಸಾದರ, ಬೆಂಗಳೂರು.

ಇಂದು ಅಪ್ಪಂದಿರ ದಿನವಂತೆ!!! ಇಂಥ ಯಾವ ದಿನಗಳ ತಳಬುಡಗಳೂ ಗೊತ್ತಿರದ ನನ್ನ ಅಪ್ಪನಂಥ ನಿರಕ್ಷರಿ. ತನ್ನ ಕುಟುಂಬದ ಸದಸ್ಯರ ತುತ್ತಿನ‌ ಚೀಲ ತುಂಬಿಸಲು ಹೆಣಗಾಡುತ್ತಿದ್ದ ದಿನಗಳು ನೆನಪಾಗಿ ಹೃದಯ ಕಲಕುತ್ತದೆ. ಶಿಕ್ಷಣದ ಖರ್ಚಿಗೆ ಕೊಡಲು ಹಣವಿಲ್ಲದೆ ತನ್ನ‌ ಮಗ ಕಲಿಯಲು ಅದು ಹೇಗೆ ಹಣ ಹೊಂದಿಸುತ್ತಿರಬಹುದು? ಎಂಬ ಕಲ್ಪನೆಯೂ ಇಲ್ಲದಿರುವಾಗ ಅದೊಂದು ದಿನ‌ ಧಾರವಾಡಕ್ಕೆ ಬಂದಾಗ ನಾನು‌ ಸಪ್ತಾಪುರದ ಕೆಲವು ಓಣಿಗಳಲ್ಲಿ ಮನೆ ಮನೆಗೆ ತಿರುತಿ ರುಗಿ ನಾನು ಪೇಪರ್ ಹಾಕುತ್ತಿದ್ದುದನ್ನು ನೋಡಿ “ಬಾ” ಎಂದು ಹೃದಯ ಬಿರಿವಂತೆ ಅತ್ತಿದ್ದು ನೆನಪಾದರೆ ಕರುಳು ಚುರ್ ಎನ್ನುತ್ತದೆ. ಇಷ್ಟಾದರೂ…

0 Comments

ನಿಜ ಶರಣ ಅಂಬಿಗರ ಚೌಡಯ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಕಲ್ಲದೇವರ ಪೂಜೆಯ ಮಾಡಿ, ಕಲಿಯುಗ[ದ]ಕತ್ತೆಗಳಾಗಿ ಹುಟ್ಟಿದರು.ಮಣ್ಣದೇವರ ಪೂಜಿಸಿ ಮಾನಹೀನರಾದರು.ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು.[ಇಂತಪ್ಪ] ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು!ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-40/ವಚನ ಸಂಖ್ಯೆ-98) ಅಂಬಿಗರ ಚೌಡಯ್ಯ 12 ನೇ ಶತಮಾನದ ಬಸವಣ್ಣನವರ ಅನುಯಾಯಿ ಸಾವಿರಾರು ವರ್ಷಗಳಿಂದ ಧರ್ಮ–ದೇವರುಗಳ ಬಗ್ಗೆ ಸಮಾಜದಲ್ಲಿ ಬೇರೊರಿಂದ್ದ ಮೂಢ ನಂಬಿಕೆಗಳನ್ನೆಲ್ಲ ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯನವರು ಹೊಡೆದೊಡಿಸಲು ಪ್ರಯತ್ನ ಮಾಡುತ್ತ ವಿಚಾರ ಪರವಾದ ಮತ್ತು ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮಾಡಿಸಲು ಶ್ರಮಪಟ್ಟರು. ಧರ್ಮ–ದೇವರು ಕೇವಲ ಶ್ರೀಮಂತರ ಸೊತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ–ಮೋಕ್ಷ…

1 Comment

ಶರಣ ವೀರ ಗೊಲ್ಲಾಳೇಶ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಪ್ರಪಂಚದ ಇತಿಹಾಸವನ್ನು ಅವಲೋಕಿಸಿದಾಗ 12 ನೇ ಶತಮನಾದಲ್ಲಿ ವಿಶ್ವಮಾನವ ಸಂದೇಶವನ್ನು ಸಾರಿದ ಹೆಮ್ಮಯ ಕನ್ನಡ ನಾಡಿದು. ಆ ಕಾಲಘಟ್ಟವನ್ನು ಅವಿಸ್ಮರಣೀಯವನ್ನಾಗಿ ಮಾಡಿದವರು ಬಸವಾದಿ ಶರಣರು. ಕೆಲವೇ ವರ್ಷಗಳಲ್ಲಿ ನೂರಾರು ಶಿವಶರಣರು ಜೀವನದ ಎಲ್ಲಾ ರಂಗಗಳ ಕುರಿತು ಅರ್ಥಪೂರ್ಣ ಚಿಂತನೆ ನಡೆಸಿದ ಕಾಲಘಟ್ಟವದು. ಎಲ್ಲರ ಪ್ರಮುಖ ಉದ್ದೇಶ ಮಾನವ ಕಲ್ಯಾಣವಾಗಿತ್ತು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಚಳುವಳಿ ಕಾಯಕ ಜೀವಿಗಳ ಚಳುವಳಿ ಆಗಿತ್ತು. ಕಾಯಕ ವರ್ಗದ ಎಲ್ಲ ಜನರು ಚಳುವಳಿಯಲ್ಲಿ ಪಾಲ್ಗೊಂಡರು. ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ, ಆಯ್ದಕ್ಕಿ ಮಾರಯ್ಯ, ಒಕ್ಕಲಿಗ ಮುದ್ದಣ್ಣ, ಕೊಟ್ಟಣದ ಸೋಮವ್ವ, ತುರುಗಾಹಿ ರಾಮಣ್ಣ, ನುಲಿಯ…

0 Comments

ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ವಚನಗಳ ಪ್ರಸ್ತುತತೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ವಚನ ಸಾಹಿತ್ಯ ಮತ್ತು ಬಸವ ತತ್ವ ಎನ್ನುವುದು ಒಂದು ಜೀವನ ಕ್ರಮ. ಕನ್ನಡದ ಮೇರುತನವನ್ನು ಬಿಂಬಿಸುವ ಅದರ ಪ್ರಭಾವ ಅಪಾರ. ಹೀಗಾಗಿ ಶರಣ ಸಂಸ್ಕೃತಿಯ ಬಯಲಲ್ಲಿ ಬಸವ ತತ್ವ ವಿಶಾಲವಾಗಿ ಬೆಳೆದಿದೆ. ತಾತ್ವಿಕವಾಗಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ನಾವು ಪಡೆದುಕೊಂಡಿರುವ ಶರಣ ಧರ್ಮದ ಆಧ್ಯಾತ್ಮಿಕ ತತ್ವವು ಆರೋಗ್ಯಪೂರ್ಣ ಸಮಾಜವನ್ನು ನಮಗೆ ನೀಡಿದೆ. ಹೀಗಾಗಿ ಬಸವಾದಿ ಶರಣರ ಬೌದ್ಧಿಕ ಚಿಂತನೆಗಳ ಅನುಸಂಧಾನ ಮಾಡುವ. ಪುನರ್ ಮೌಲ್ಯೀಕರಣ ಮಾಡುವ ಅಗತ್ಯತೆ ಇಂದಿದೆ. ನಮ್ಮ ವರ್ತಮಾನ ಕಾಲದ ಒಳನೋಟ ಜನಪರವಾದ ಚಿಂತನೆಗಳು ತಾತ್ವಿಕವಾಗಿ ಹೇಗೆ ನೆಲೆಗೊಂಡಿವೆ ಎಂಬುದನ್ನು ಶ್ರೀ ಸಿದ್ದರಾಮೇಶ್ವರರ ವಚನಗಳಲ್ಲಿ…

0 Comments

ಪರಮಪೂಜ್ಯ ಶ್ರೀ ಮ. ನಿ. ಪ್ರ ಡಾ. ಮಹಾಂತ ಶಿವಯೋಗಿಗಳ 7 ನೇ ಪುಣ್ಯ ಸ್ಮರಣೋತ್ಸವದ ಭಕ್ತಿಯ ನಮನಗಳು | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.

ಓಂ ಶ್ರೀ ಗುರುಬಸವ ಲಿಂಗಾಯ ನಮಃ ಬಸವಜ್ಯೋತಿ, ಮಹಾಂತ ಜೋಳಿಗೆಯ ಶಿವ ಶಿಲ್ಪಿ, ಶಿವಾನುಭವ ಚರವರ್ಯ ಎಂದೇ ಖ್ಯಾತರಾದ ಪೂಜ್ಯ ಶ್ರೀ ಶ್ರೀ ಶ್ರೀ ಮಹಾಂತಶಿವಯೋಗಿಗಳು ಈ ನಾಡು ಕಂಡ ಮಹಾನ್ ಚೇತನರು. ಮಾನವೀಯತೆಯ ಮಾತೃ ಹೃದಯಿಗಳು. ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಅಜ್ಞಾನ, ಮೂಡನಂಬಿಕೆಗಳನ್ನು ತೊಲಗಿಸಲು ಹಗಲಿರುಳು ಶ್ರಮಿಸಿದರು. ಮಹಾಂತ ಜೋಳಿಗೆಯನ್ನು ಹುಟ್ಟುಹಾಕಿ ಜನರಲ್ಲಿರತಕ್ಕಂತ ದುಶ್ಚಟ & ದುರ್ವ್ಯಸನಗಳನ್ನು ದೂರ ಮಾಡಿ ಸಾವಿರಾರು ಹೃದಯಗಳನ್ನು ಪರಿವರ್ತನೆ ಮಾಡಿ ಬದುಕಿಗೆ ಬೆಳಕು ತಂದರು. ಬಸವಣ್ಣ ಇವರ ಅಂಗವಾದ. ಮಡಿವಾಳ ಮಾಚಿದೇವರು ಇವರ ಮನಸ್ಸಾದರು.…

0 Comments

ಕನ್ನಡ ಸಾಹಿತ್ಯ ಪರಿಷತ್ತಿಗಿಂತ ಮುಂಚೆ ಡ್ಯೆಪುಟಿ ಚೆನ್ನಬಸಪ್ಪನವರಿಂದ ಪ್ರವರ್ಧಮಾನಕ್ಕೆ ಬಂದ ಕನ್ನಡಿಗರ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆಧಾರವಾಡದ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ | ಶ್ರೀ. ಮಹೇಶ ಚನ್ನಂಗಿ | ಚನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆ.

05.05.1915 ರಂದು ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಮೈಸೂರಿನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪನೆಯಾಗಿರುವುದು ಜಗಜ್ಜಾಹೀರಾದ ಸಂಗತಿ. ಇದರ ಕೇಂದ್ರ ಕಚೇರಿ ಬೆಂಗಳೂರು ನಗರದ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿದೆ 18 ವರ್ಷ ಮೇಲ್ಪಟ್ಟ ಓದು ಬರಹ ಬರುವರೆಲ್ಲರೂ ಇದರ ಸದಸ್ಯರಾಗಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮೈಸೂರಿನ ನಾಲ್ವಡಿ ಕೃಷ್ಣರಾಜರ ಒಡೆಯರು ಎಷ್ಟೊಂದು ಹಣಕಾಸಿನ ಸಹಾಯವನ್ನು ನೀಡಿದ್ದಾರೆಯೋ ಅಷ್ಟೇ ಪ್ರಮಾಣದಲ್ಲಿ ಸಹಾಯವನ್ನು ಬೆಳಗಾವ ಜಿಲ್ಲೆಯ ಮಹಾದಾನಿ ರಾಜ ಲಖಮನಗೌಡ ಸರದೇಸಾಯಿ ಅವರು ನೀಡಿದ್ದಾರೆ. ಸಂಸ್ಥಾಪನೆಯ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಕನ್ನಡ…

0 Comments

ವಚನಕಾರರ ಪರಿಕಲ್ಪನೆಯ ಶಿವಯೋಗ | ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಶಿವಮೊಗ್ಗ.

ಇಷ್ಟಲಿಂಗದ ಪರಿಕಲ್ಪನೆ: ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವಭಂಗಿತರ ಮುಖವ ನೋಡಲಾಗದು. ಅದೆಂತೆಂದಡೆ;ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವಹಾದರಗಿತ್ತಿಯಂತೆ ಅವಂದಿರ ಭಕ್ತಿ.ಅಂತಪ್ಪ ಪಂಚಮಹಾಪಾತಕರಮುಖದತ್ತ ತೋರದಿರಾ ಗುಹೇಶ್ವರಾ(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-209/ವಚನ ಸಂಖ್ಯೆ-703) ಅಂಗದ ಮೇಲೆ ಧರಿಸಿದ ಲಿಂಗವನ್ನು ಹೊರತುಪಡಿಸಿ ಬೇರೆಡೆ ದೇವರನ್ನು ಹುಡುಕುವುದು, ಪೂಜಿಸುವುದು ಸಲ್ಲದು ಎಂದು ಈ ವಚನ ಹೇಳುತ್ತದೆ. ಇಂತಹ ನಡೆಗಳನ್ನು ಅತ್ಯಂತ ಆಕ್ರೋಶದಿಂದ ವಚನಕಾರರು ಖಂಡಿಸಿದ್ದಾರೆ. ಈ ವಚನಗಳನ್ನು ಗಮನಿಸಿದಾಗ ವಚನಕಾರರು ದೇವರ ವಿಚಾರದಲ್ಲಿ ಒಂದು ನಿರ್ದಿಷ್ಟತೆಯನ್ನು ಹೇರುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಅಭಿಪ್ರಾಯ ಒಪ್ಪುವಂತಹದ್ದಲ್ಲ, ಏಕೆಂದರೆ ವಚನಕಾರರು…

0 Comments

ಕಾಯಕ ನಿರತೆ ಕದಿರೆ ರೇಮವ್ವೆ | ಡಾ. ಸುಜಾತ ಅಕ್ಕಿ, ಮೈಸೂರು.

ಕನ್ನಡ ನಾಡಿನಲ್ಲಿ ಹನ್ನೆರಡನೆಯ ಶತಮಾನದಲ್ಲಿ ವಚನ ಚಳುವಳಿ ಸಮಾನತೆಯ ನೆಲೆಯಲ್ಲಿ ಅಕ್ಷರ ಕ್ರಾಂತಿ ಎಂಬ ಇಷ್ಟಲಿಂಗ ಸಾಹಿತ್ಯ ವಿಶಿಷ್ಟವಾಗಿ ಬೆಳೆಯಿತು. ಅಕ್ಷರ ಕಲಿಕೆಯು ಪ್ರತಿಯೊಬ್ಬರ ಹಕ್ಕು ಎಂದು ಸಾಬೀತು ಪಡಿಸಿದವರು ಶಿವಶರಣರು. ಬಸವಾದಿ ಪ್ರಮಥರು ನಡೆಯಲ್ಲಿ ನುಡಿಯಲ್ಲಿ ಒಂದಾದವರು. ದುಡಿತ ವರ್ಗದವರಿಗೆ ಸಮಾಜದಲ್ಲಿ ಆತ್ಮಸ್ಥೈರ್ಯವನ್ನು ತುಂಬಿದವರು ಬಸವಣ್ಣನವರು. ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಮಾನವೀಯ ಮೌಲ್ಯಗಳನ್ನು ಸಾರಿ ಸಾಕ್ಷೀಕರಿಸಿದವರು. ಲಿಂಗ ಬೇಧ, ವರ್ಗಬೇಧ ತಾರತಮ್ಯ, ಸಾಂಸ್ಥಿಕವಲ್ಲದ, ಪೌರೋಹಿತ್ಯವಿಲ್ಲದ ಸರ್ವ ಸಮಾನತೆಯ ಬಸವಣ್ಣನವರ ನಿಲುವು ವಿಶ್ವಕ್ಕೆ ಮಾದರಿಯಾಗಿದೆ. ಮಹಿಳೆಯರೆಲ್ಲಾ ಅಕ್ಷರ ಕಲಿತು ವಚನಗಳನ್ನು ಬರೆದು ತಮ್ಮ ಅಭಿವ್ಯಕ್ತಿ…

0 Comments