ನಾಥರು ಹಾಗೂ ಶರಣರು | ಡಾ. ಬಸವರಾಜ ಸಬರದ, ಬೆಂಗಳೂರು.
ಅಧ್ಯಾಯ – 01: ನಾಥರು ಹಾಗೂ ಶರಣರು ಭಾರತದಲ್ಲಿ ಅನೇಕ ಧಾರ್ಮಿಕ ಪಂಥಗಳು ಆಗಿ ಹೋಗಿವೆ. ಧಾರ್ಮಿಕ ಕ್ಷೇತ್ರದಲ್ಲಿ ಅನೇಕ ಬೆಳವಣಿಗೆಗಳಾಗಿವೆ. ಧರ್ಮ ಮತ್ತು ಚಳುವಳಿಗಳು ಒಂದು ಕಡೆ ಕೂಡುವುದಿಲ್ಲವೆಂಬ ನಂಬಿಕೆಯಿದೆ. ಮತ-ಧರ್ಮಗಳ ಉದ್ದೇಶವೇ ಬೇರೆ, ಚಳುವಳಿಗಳ ಉದ್ದೇಶವೇ ಬೇರೆಯೆಂದು ಹೇಳಿಕೊಂಡು ಬರಲಾಗಿದೆ. ಆದರೆ ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ಶರಣರು ಧರ್ಮವನ್ನು ಒಂದು ಚಳುವಳಿಯ ಹಾಗೆ ಬೆಳೆಸಿದರು. ಆಗ ಶರಣಧರ್ಮವು ಶರಣ ಚಳುವಳಿಯಾಗಿ ರೂಪಗೊಂಡಿತು. ಧಾರ್ಮಿಕ ಪರಂಪರೆಯಲ್ಲಿ ಹೀಗೆ ಧರ್ಮವೊಂದು ಚಳುವಳಿಯ ರೂಪ ಪಡೆದದ್ದು 12 ನೇಯ ಶತಮಾನದಲ್ಲಿ, ಅದೂ ಕರ್ನಾಟಕದಲ್ಲಿ ಕನ್ನಡದ ವಚನಗಳ ಮೂಲಕವೆಂಬ ಸಂಗತಿಯೇ…





Total views : 59316