ಅಮರಗೊಂಡದಲ್ಲಿ ಬಸವ ಪುರಾಣ ಆಲಿಸಿ ಸದ್ಗತಿ ಹೊಂದಿದ ಗುಬ್ಬಿಗಳು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.
ಶ್ರವಣ ಎಂದರೆ ಆಲಿಸುವಿಕೆ. ಕೇವಲ ಕೇಳುವುದಲ್ಲ, ಅರಿತು ಅಳವಡಿಸಿಕೊಳ್ಳುವುದು. ಶರಣರ ವಚನಗಳಲ್ಲಿ ಶ್ರವಣವು ಶಿವತತ್ವದ ಅರಿವು, ಗುರು ಉಪದೇಶ ಮತ್ತು ಭಕ್ತಿ ಮಾರ್ಗದ ಮೂಲವೆಂದು ಬಣ್ಣಿಸಲಾಗಿದೆ. ವಿಶ್ವಗುರು ಬಸವಣ್ಣನವರ ಪ್ರಕಾರ ಭಕ್ತರು ಪರಮಾತ್ಮನ ಗುಣಗಾನವನ್ನು ಭಕ್ತಿಯಿಂದ ಆಲಿಸಿ ಮನನ ಮಾಡುವುದಾಗಿದೆ. ಅದಕ್ಕೆಂದು ಬಸವಣ್ಣನವರು ಶರಣರ ಉಪದೇಶ ಕೇಳುವುದು, ಅವರ ಸಂಗ ಮಾಡುವುದೇ ನಿಜವಾದ ಭಕ್ತಿ ಎಂದಿದ್ದಾರೆ. ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ,ಸಕೃತು ನಿಮ್ಮ ನೆನೆಯಲು ಎನಗೆ ತೆರಹಿಲ್ಲಯ್ಯಾ!ಕರುಣಾಕರ, ಅಭಯಕರ, ವರದ, ನೀ ಕರುಣಿಸಯ್ಯಾ.ಸಂಸಾರಬಂಧನವನು ಮಾಣಿಸಿ, ಎನಗೆ ಕೃಪೆಯ ಮಾಡಿ,ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು,ಭಕ್ತಜನಮನೋವಲ್ಲಭ ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-22/ವಚನ…




Total views : 67060