“ಗಂಗೆಗೆ ಕಟ್ಟಿಲ್ಲ ಲಿಂಗಕ್ಕೆ ಮುಟ್ಟಿಲ್ಲ” / ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೇ ಶತಮಾನ ಒಂದು ಪರ್ವ ಕಾಲ. ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಧಾರ್ಮಿಕ ಪ್ರವೃತ್ತಿಗಳ ಕಾಲಘಟ್ಟ. ಧಾರ್ಮಿಕ ಇತಿಹಾಸದಲ್ಲಿ ಬಸವಣ್ಣನವರ ಸ್ಥಾನ ವಿಶಿಷ್ಟವಾದದ್ದು. ಜಾತಿ ಸೂತಕಗಳ ಶಾಪಕ್ಕೆ ನರಳುತ್ತಿರುವ ದೇಶದಲ್ಲಿ 900 ವರ್ಷಗಳ ಹಿಂದೆಯೇ ಜಾತಿ ಸೂತಕಗಳ ನಿರ್ಮೂಲನೆ ಮಾಡಿದ ಮಹಾ ಮಾನವತಾವಾದಿ. ಅಂದು ವರ್ಗ ತಾರತಮ್ಯ, ಅಸಮಾನತೆ, ಲಿಂಗ, ಜಾತಿ ಭೇದ ಪಿಡುಗುಗಳ ವಿರುದ್ಧ ಹೋರಾಡಿದ ಶರಣರು, ವೈದಿಕ ಮತ್ತು ಜೈನ ಧರ್ಮಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಶರಣರು ಮಾತನಾಡುತ್ತಿರಲಿಲ್ಲ ಅವರ ನಡೆಯೇ ಮಾತಾಗಿತ್ತು. ಕೇವಲ ತತ್ವ ಸಿದ್ಧಾಂತಗಳಿಂದ ಬದಲಾವಣೆ ಅಸಾಧ್ಯವೆಂದು…