“ಸಿದ್ದರಾಮೇಶ್ವರರ ವಚನಗಳಲ್ಲಿ ಸ್ತ್ರೀ ಸಂವೇದನೆಯ ಅಂಶಗಳು”/ ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಸೊನ್ನಲಿಗೆಯ ಸಿದ್ಧರಾಮೇಶ್ವರರು ಕಾಯಕಜೀವಿ. ಸಾಮಾಜಿಕ ಜವಾಬ್ದಾರಿಗಳನ್ನು ಜತನದಿಂದ ಕೈಗೊಂಡ ಕರ್ಮಯೋಗಿ. ಲೋಕ ಕಲ್ಯಾಣಾರ್ಥವಾಗಿ ತಮ್ಮ ಬದುಕನ್ನು ಸವೆಸಿದ ಸಿದ್ಧ ಶಿವಯೋಗಿ. ಸಿದ್ಧರಾಮೇಶ್ವರರು ತಮ್ಮ ಇಡಿ ಬದುಕಿನುದ್ದಕ್ಕೂ ಕಾಯಕವನ್ನೇ ಉಸಿರಾಗಿರಿಸಿಕೊಂಡಿದ್ದರು. ಬದ್ಧತೆಗೆ ತುಡಿದ ಸಿದ್ಧರಾಮೇಶ್ವರರು ಶರಣ ತತ್ವಗಳನ್ನು ರೂಢಿಸಿಕೊಂಡವರು. ಮಾನವೀಯತೆಯ ಮೌಲ್ಯಗಳಿಂದ ವ್ಯಷ್ಟಿಯಿಂದ ಸಮಷ್ಟಿಯನ್ನು ಬೆಸೆದವರು. ತಮ್ಮ ವಚನಗಳ ಮೂಲಕ ಶ್ರೇಷ್ಠ ಮಾನವೀಯ ಸಂವೇದನೆಗಳನ್ನು ಹಂಚಿದವರು ಮತ್ತು ಚಿಂತಿಸಿದವರು. ಇವರದು ಅಪರೂಪದಲ್ಲೇ ಅಪರೂಪದ ವ್ಯಕ್ತಿತ್ವ. ಸಕಲ ಚರಾ-ಚರ ಚೇತನವನ್ನು ಪ್ರೀತಿಸಿದ ಇವರಲ್ಲಿ ತಾಯ್ತನವಿದೆ. ಹೆಂಗರುಳಿದೆ. ಈ ಕಾರಣದಿಂದಲೇ ಸಿದ್ಧರಾಮೇಶ್ವರರು ಪಶು, ಪಕ್ಷಿ ಮುಂತಾದ ಜೀವ ಚೇತನಗಳಿಗಾಗಿ ಕೆರೆ-ಕಟ್ಟೆ ಬಾವಿಗಳನ್ನು,…

0 Comments

“ಬಸವಣ್ಣ”-ಭಾಗ ೨/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ

ಬಸವಣ್ಣನವರು ಪ್ರಧಾನಿಯಾಗಿ ಕೇವಲ ಭೋಗಿಯಾಗಿ ಕೂಡಲಿಲ್ಲ. ತ್ಯಾಗಿಯಾಗಿ, ಯೋಗಿಯಾಗಿ ಲಿಂಗಾಂಗಿಯಾಗಿ ಒಂದೆಡೆ ಸಮಾಜೋದ್ಧಾರ, ಇನ್ನೊಂದೆಡೆ ಆತ್ಮೋದ್ಧಾರಕ್ಕಾಗಿ ಕಂಕಣ ಬದ್ಧರಾದರು. ಲಿಂಗಾಂಗಿಯಾಗಿ ಲಿಂಗಾಯತ ಧರ್ಮಕಟ್ಟಿ, ಸಮಾನತೆ ಅದರ ಕುರುಹು ಮಾಡಿದರು. ನಮ್ಮವ ನಮ್ಮವರು ಎನ್ನುತಾ ಬಸವಣ್ಣಒಮ್ಮನದಿ ಎಲ್ಲರ ಅಪ್ಪಿಕೊಂಡು | ಅಳಿಸ್ಯಾರನಾನು ನಿನ್ನೆಂಬ ಬೇಧವ ಬಸವಣ್ಣನವರ ಮನಸ್ಸನ್ನು ಈ ಜಗತ್ತು ಬಹು ಬೇಗನೆ ಅರಿತುಕೊಂಡಿತು ಎನ್ನುತ್ತಾರೆ ಜನಪದರು. ಅವರದು ತಾಯಿ ಹೃದಯ, ಎಲ್ಲರನ್ನು ಕೈಮಾಡಿ ಕರೆಯಿತು ಅದು. ಅವರ ಅಯ್ಯಾ ಅಪ್ಪಾ ಎನ್ನುವ ಮನಸ್ಸಿಗೆ ನಾಟು ವಂತಹ ನುಡಿ ಮತ್ತುಗಳು ಎಲ್ಲ ಜಾತಿಯವರನ್ನು ಕಲ್ಯಾಣದತ್ತ ಕರೆದ್ಯೋಯದವು. ಸಾಗಿ ಬಂದಾರ…

0 Comments

“ಬಸವಣ್ಣ”/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ

ಶರಣೆಂದೆ ಶಿವನಿಗೆ ಶರಣೆಂದೆಗುರುವಿಗೆಶರಣೆಂದೆಜಗದಗುರುವಿಗೆ | ಬಸವಗಶರಣೆಂದುಕೈಯ ಮುಗದೇನ. ಜನಪದ ಸಾಹಿತ್ಯದ ಜೀವ ಜೀವಾಳವಾಗಿದ್ದಾರೆ ಬಸವಣ್ಣನವರು. ಆ ಜನಪದರಿಗೆ ಅವರು ಎಲ್ಲವೂ ಆಗಿದ್ದಾರೆ. ದೇವರು, ಗುರು, ಮಾರ್ಗದರ್ಶಕ, ಅರಿವು ಕೊಟ್ಟವರು, ಕಾಯಕ ದಾಸೋಹ ಪರಿಕಲ್ಪನೆ ಅಷ್ಟೇ ಅಲ್ಲ ಸುಖಕ್ಕೂ ದುಃಖಕ್ಕೂ ಎಲ್ಲಕ್ಕೂ ಅವರಿಗೆ ಆಧಾರ ಬಸವಣ್ಣನವರು. ಬಸವ ಎಂಬ ನುಡಿ ಬಾಯಿಗೆ ಬಂದರಸೂಸಾಡ್ಯಾವ ಶಿವನುಡಿ ಮನದಾಗ | ಎಲೆ ಮನವೆಬಸವ ಎಂಬುದು ಬಿಡಬ್ಯಾಡ ಎಂದು ಹರಿದಾಡುವ ಮನಸ್ಸಿಗೆ ಬೇಡಿಕೊಳ್ಳುತ್ತಾ ಕಲ್ಲಿಗೆ ಮುಕ್ಹಾಕಿ ಎಲ್ಲ ದೇವರ ನೆನೆದೆಕಲ್ಯಾಣದ ಬಸವಗ ಮೊದಲಿಗೆ | ನೆನೆದರಕಲ್ಲೆಂಬುದು ನಮಗ ಹಗುರಾಗಿ ಎಂದು ಬಸವಣ್ಣನವರನ್ನು ನೆನೆಯುತ್ತಾರೆ.…

0 Comments

“ಪೈರಿಗೆ ನೀರು ಬೇಕೆಂಬಲ್ಲಿ”/ ಚನ್ನಪ್ಪ ಅಂಗಡಿ,ಧಾರವಾಡ

ವೃಷ್ಟಿಮೂಲ ಕೃಷಿಃ ಸರ್ವಾ ವೃಷ್ಟಿಮೂಲಂ ಚ ಜೀವನಮ್ |ತಸ್ಮಾದಾದೌ ಪ್ರಯತ್ನೇನ ವೃಷ್ಟಿಜ್ಞಾನಂ ಸಮಾಚರೇತ್ ||(ಕೃಷಿ ಪರಾಶರ - ಪರಾಶರ ಮುನಿ: 10 ನೇ ಶ್ಲೋಕ) ಮೂಲತಃ ಕೃಷಿಯು ಮಳೆಯನ್ನು ಅವಲಂಬಿಸಿದೆ. ಹಾಗೆ ನೋಡಿದರೆ ಸಮಗ್ರ ಜೀವನವೇ ಮಳೆಯನ್ನು ಅವಲಂಬಿಸಿದೆ. ಆದ್ದರಿಂದ ಮೊಟ್ಟಮೊದಲನೆಯದಾಗಿ ಮಳೆಯ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯವೆಂದು ಪ್ರಾಚೀನ ಋಷಿ ಪರಾಶರ ಹೇಳಿದ್ದಾನೆ. ಕೃಷಿ ಮಳೆಯನ್ನು ಅವಲಂಬಿಸುವುದೆಂದರೆ ನೀರನ್ನು ಅವಲಂಬಿಸುವುದೆಂದೇ ಅರ್ಥ. ‘ಮಣ್ಣು-ನೀರು-ಸಸ್ಯ-ಆಹಾರ’ ಇಷ್ಟು ಹೇಳಿಬಿಟ್ಟರೆ ಅದು ಪ್ರಕೃತಿಯಾಗುತ್ತದೆ. ‘ಕೃಷಿ’ ಎಂದು ಬಿಟ್ಟರೆ ಅದು ಮಾನವ ನಿರ್ಮಿತವಾಗುತ್ತದೆ. ಮನುಷ್ಯನ ಪ್ರವೇಶಿಕೆ ಎಂದರೆ ನಿಸರ್ಗದ ನಿಯತಿಯನ್ನು…

0 Comments

“ಜನಪದ ಸಾಹಿತ್ಯದಲ್ಲಿ ಕುಂಬಾರ ಗುಂಡಯ್ಯ”/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ.

ಕುಂಬಾರ ಗುಂಡಯ್ಯ ತುಂಬಿ ತಿಗರಿಗ ಕೆಸರಶಂಭು ಹರನೆಂದು ತಿರುಗಿಸಲು | ಶಿವಕುಣಿದಹಂಬಲಿಸಿ ಜಂಗ ಕಟಗೊಂಡು12 ನೇಯ ಶತಮಾನದ ವಚನ ಚಳುವಳಿಯ ಸಂದರ್ಭದಲ್ಲಿ ಬಸವಾದಿ ಶಿವಶರಣರು ತೋರಿದ ಸಮಾನತೆ ತತ್ವ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಒಕ್ಕಟ್ಟಿನಲ್ಲಿ ಬಲವಿದೆಯೆಂಬುದನ್ನು ತೋರಿಸಿಕೊಟ್ಟವರು ಬಸವಾದಿ ಪ್ರಮಥರು. ಮೇಲು-ಕೀಳು, ಹೆಣ್ಣು-ಗಂಡು, ಸ್ತ್ರೀ-ಪುರುಷ, ಬಡವ-ಬಲ್ಲಿದವೆಂಬ ಭೇದಗಳನ್ನೆಲ್ಲ ತೊಲಗಿಸಿ ಸಮಾನತೆ ತತ್ವದ ಅನುಭವ ಮಂಟಪದಲ್ಲಿ ಒಂದಾಗಿ ಕುಳಿತು ಎಲ್ಲರೂ ಅನುಭಾವಿಗಳಾಗಿ ಶರಣರೆನಿಸಿಕೊಂಡರು. ಅಂತಹ ಶರಣರತ್ನಗಳಲ್ಲಿ ಕುಂಬಾರ ಗುಂಡಯ್ಯ ಶರಣರು ಒಬ್ಬರು. ಕುಂಬಾರ ಗುಂಡಯ್ಯ ಮುಗ್ಧ ಶರಣರು, ಕಾಯಕ ಜೀವಿಗಳು, ದಾಸೋಹ ನಿಷ್ಠರಾಗಿದ್ದ ಈ ಶರಣರ ಶಿವಭಕ್ತಿ ಅಪಾರವಾದುದು.…

0 Comments

“ಅಧ್ಯಾತ್ಮ ಮತ್ತು ವಿಜ್ಞಾನಗಳ ಸಾಮ್ಯತೆಯ ಪ್ರಾಯೋಗಿಕ ಪ್ರತಿಪಾದನೆ” ಲೇಖಕರು: ಡಾ. ಬಸವರಾಜ ಸಾದರ.

ಧರ್ಮಕ್ಕೂ, ವಿಜ್ಞಾನಕ್ಕೂ ಎಂಥ ಸಂಬಂಧವಿದೆ? ಎಂಬ ಪ್ರಶ್ನೆ ಹಲವಾರು ವಿಜ್ಞಾನಿಗಳನ್ನೂ, ಧಾರ್ಮಿಕ ಚಿಂತಕರನ್ನೂ ನಿರಂತರ ಕಾಡುತ್ತ ಬಂದಿದೆ. ಶ್ರೇಷ್ಠ ವಿಜ್ಞಾನಿಗಳನೇಕರು ಧರ್ಮದಲ್ಲಿ ವಿಜ್ಞಾನವನ್ನೂ, ವಿಜ್ಞಾನದಲ್ಲಿ ಧರ್ಮವನ್ನೂ ಕಂಡಿದ್ದಾರೆ. ಹಾಗೆಯೇ ವೈಚಾರಿತೆಯನ್ನು ಗೌರವಿಸುವ ಕೆಲವು ‘ನಿಜ’ ಧಾರ್ಮಿಕರೂ ಅದೇ ಅಭಿಪ್ರಾಯದವರಾಗಿದ್ದಾರೆ. ಆದರೆ, ಇವರೆಲ್ಲ ತಮ್ಮ ಈ ಅಭಿಪ್ರಾಯಗಳ ಪ್ರತಿಪಾದನೆಯಲ್ಲಿ ಪ್ರಾಯೋಗಿಕ ಕ್ರಮವನ್ನು ಅನುಸರಿಸಿಲ್ಲವೆನಿಸುತ್ತದೆ. ನಂಬಿಗೆ ಹಾಗೂ ಭಾವನಾತ್ಮತ ನೆಲೆಯಲ್ಲಿ ಇವರೆಲ್ಲ ಈ ಸಂಬಂಧ ಕುರಿತು ಮಾತಾಡಿದ್ದಾರೆಯೇ ಹೊರತು, ಪ್ರಯೋಗಾತ್ಮಕ ಕ್ರಮ ಇಲ್ಲಿಲ್ಲ. ಅದನ್ನು ಹಾಗೆ ತೋರಿಸುವುದು ಕಷ್ಟದ ಕೆಲಸವೂ ಹೌದು. ಅಚ್ಚರಿಯೆಂದರೆ, ಇಂಥ ಕಷ್ಟದ ಕೆಲಸವನ್ನೂ ಹನ್ನೆರಡನೆಯ ಶತಮಾನದ…

1 Comment

ವಚನ ಸಾಹಿತ್ಯದಲ್ಲಿ ಕಾಯಕ ತತ್ವ / ಡಾ. ಮಲ್ಲಿಕಾರ್ಜುನ ಕೆ.

ವಚನ ಸಾಹಿತ್ಯದ ಕಾಲವು ಕನ್ನಡ ಸಾಹಿತ್ಯದ ಪರ್ವಕಾಲ, ಸುವರ್ಣಯುಗ ಕಾಲವೆಂದು ಕರೆಯಬಹುದು. ಹಾಗಾಗಿ ೧೨ನೇ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ. ವೇದಗಳ ಕಾಲದಿಂದಲೂ ಸಾಹಿತ್ಯ ಪಂಡಿತರ, ವಿದ್ವಾಂಸರ ಸ್ವತ್ತಾಗಿ, ಸಂಸ್ಕೃತ ಭೂಯಿಷ್ಠವಾಗಿದ್ದು, ಶ್ರೀಸಾಮಾನ್ಯರಿಗೆ ಇವರ ರಚನೆಗಳು ಅರ್ಥವಾಗುತ್ತಿರಲಿಲ್ಲ. ಶತ ಶತಮಾನಗಳಿಂದಲೂ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾಗ್ರಹವನ್ನು ಸರಿಪಡಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಯುಗದ ಶರಣೆಯರ ಅಮೋಘ ಕೊಡುಗೆಯನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲ ಘಟ್ಟದಲ್ಲಿ ಜಾತಿ-ಮತ, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ‘ಅನುಭವ ಮಂಟಪ'ದಲ್ಲಿ ಸೇರಿ ವಾದ-ಸಂವಾದ, ಚರ್ಚೆಗಳಲ್ಲಿ ಪಾಲ್ಗೊಂಡಿರುವುದನ್ನು ಕಾಣುತ್ತೇವೆ. ವಚನಕಾರ್ತಿಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕರಂತೆ…

1 Comment

ವಚನ ಸಾಹಿತ್ಯ ಹಾಗೂ ಪರಿಸರ ಪ್ರಜ್ಞೆ ಮತ್ತು UN’s Sustainable Goals of Environment

ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ.ನಾ ನೋಡುತಿಹ ಆಕಾಶದ ಚಂದ್ರ ಸೂರ್ಯರಭಕ್ತನ ಮಾಡಿದಲ್ಲದೆ ನಾ ನೋಡೆನಯ್ಯಾ.[ನಾನು ಬಳಸುವ] ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ.ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆಕೊಳ್ಳೆನು ಕೂಡಲಚನ್ನಸಂಗಾ ನಿಮ್ಮಾಣೆ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-305 / ವಚನ ಸಂಖ್ಯೆ-89) ಈ ಭೂಮಿ ರಚನೆಯಾಗಿದ್ದು “Big Bang Theory” ಯಿಂದ ಅಂತ ಭೌಗೋಳಿಕ ಮತ್ತು ಖಗೋಳ ಭೌತಶಾಸ್ತ್ರಜ್ಞದ ಎಲ್ಲ ವಿಜ್ಞಾನಿಗಳೂ ಖಚಿತವಾಗಿ ನಿರ್ಧಾರ ಮಾಡಿದ್ದಾರೆ. ಹಲವಾರು ವಿಜ್ಞಾನಿಗಳು ತಮ್ಮ ಪುಸ್ತಕಗಳಲ್ಲಿ ಈ ವಿಷಯವನ್ನು ಮಂಡಿಸಿದ್ದಾರೆ.  Stephen Hawking…

1 Comment

ಜನಪದ ಮತ್ತು ಲಿಂಗಾಯತ ಧರ್ಮ / ಡಾ. ನೀಲಾಂಬಿಕಾ ಪೊಲೀಸಪಾಟೀಲ

ಜನಪದ ಬೇರು ಉಳಿದಿದ್ದೆಲ್ಲ ನಾರು”‘ಧರ್ಮನೀತಿ ವಿಶ್ವಕೋಶ’ ದ (Encyclopedia of Religion & Ethics) ಸಂಪಾದಕರಾದ ಜೇಮ್ಸ್ ಹೆಸ್ಟಿಂಗ್‌ರ “ಇತಿಹಾಸವು ಒಂದು ರಾಜ್ಯದ ಅಥವಾ ರಾಷ್ಟ್ರೀಯ ಜೀವನದಲ್ಲಿ ದಾಖಲಾದರೆ, ಜನಪದ ಸಾಹಿತ್ಯವು ಪ್ರಾಗೈತಿಹಾಸಿಕ ಜೀವನದ ಪರಂಪರಾಗತ ಸಂಗತಿಯಾಗಿದೆ ಎನ್ನುತ್ತಾರೆ. ಮುಂದುವರಿದು ‘ಅವು ಕೇವಲ ಕಲ್ಪನಾತೀತವಲ್ಲ, ಜಾನಪದ ಕತೆಗಳು ಜನಾಂಗದ ಪುರಾಣಗಳು, ವಿಜ್ಞಾನ ಯುಗಕ್ಕೂ ಹಿಂದಿನ ವಿಜ್ಷಾನವು ಅದ್ಭುತಗಳ ಬಗ್ಗೆ ನೀಡಿದ ವಿವರಣೆಗಳೆ ಪುರಾಣಗಳು” ಎಂದು ಜನಪದ ಸಾಹಿತ್ಯದ ಮಹತ್ವ ತಿಳಿಸುತ್ತಾರೆ. ಒಂದು ಕಾಲದ ಘಟನೆಯನ್ನು ನಡೆದು ಹೋದ ಸಂಗತಿಯನ್ನು ತಿಳಿದುಕೊಳ್ಳಲು ಹೊರಟಾಗ ಇತಿಹಾಸ ಅನೇಕ ವಿಷಯಗಳು ಆಧಾರವಾಗುತ್ತವೆ.…

1 Comment

ಇತಿಹಾಸದ ಮಹಿಳೆ ಪುರಾಣವಾದ ಶಿವಶರಣೆ “ದಾನಮ್ಮನವರು”/ಡಾ. ಪುಷ್ಪಾ ಶಲವಡಿಮಠ.

ಭಾರತೀಯ ಮೂಲ ಸಂಸ್ಕೃತಿ ಮಾತೃ ಪ್ರಧಾನವಾದದ್ದು. ಕೃಷಿ ಪ್ರಾಧಾನ್ಯತೆಯನ್ನು ಕಾಯ್ದುಕೊಂಡು ಬಂದ ಮಹಿಳೆ ಪ್ರಕೃತಿಯ ಸಹಜತೆಗೆ ಪರ್ಯಾವಾಗಿದ್ದಳು. ಕಾಲದ ಗರ್ಭದಲ್ಲಿ ಮಾತೃ ಪ್ರಾಧಾನ್ಯತೆ ದೂರ ಸರಿದು, ಪುರಾಣದ ಪಳೆಯುಳಿಕೆಯಾಗಿ ಉಳಿದುಕೊಂಡಿದೆ. ಪುರಾಣ ವ್ಯಕ್ತಿಗಳಾಗಿ ಪ್ರಸಿದ್ಧಿ ಪಡೆದಿರುವ ರಾಮಾಯಣದ ಸೀತೆ ಮಣ್ಣನಿಂದ ಜನಿಸಿ ಮಣ್ಣಾದವಳು. ಎಂಥವರನ್ನೂ ಬೆತ್ತಲಗೊಳಿಸಿದ ರೇಣುಕ ಗುಡ್ಡದ ಎಲ್ಲಮ್ಮಳಾಗಿ ಎಲ್ಲೆ ಮೀರಿ ಅಮ್ಮನಾದಳು. ಇದೇ ರೀತಿ ಕರ್ನಾಟಕದಲ್ಲಿ ಮತ್ತು ಕರ್ನಾಟಕದ ಹೊರಗಡೆ ಶಕ್ತಿ ದೇವತೆ ಎಂದು ಪ್ರಸಿದ್ಧಳಾದ ಗುಡ್ಡಾಪುರದ ದಾನಮ್ಮದೇವಿ ಅಸಂಖ್ಯಾತ ಭಕ್ತ ಸಮೂಹದಿಂದ ಪೂಜೆಗೊಂಡು ಪುರಾಣದ ಕಥೆಯಾಗಿ ಉಳಿದುಕೊಂಡಿದ್ದಾಳೆ, ಆದರೆ, ದಾನಮ್ಮ ಒಬ್ಬ ಐತಿಹಾಸಿಕ…

2 Comments