ಬಸವಣ್ಣನವರ ವಚನಗಳಲ್ಲಿ ಸಾಂಸ್ಕೃತಿಕ ನೆಲೆಗಳು /   ಡಾ. ಲಕ್ಷ್ಮೀಕಾಂತ ಪಂಚಾಳ

ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆ ವಚನ ಸಾಹಿತ್ಯ. ಅಟ್ಟದೆತ್ತರದಂತಿದ್ದ ಸಾಹಿತ್ಯವನ್ನು ಜನಸಾಮಾನ್ಯರ ಮಟ್ಟಕ್ಕಿಳಿಸಿದ ಕೀರ್ತಿ ವಚನಕಾರರದ್ದಾಗಿದೆ. ಜಾತ್ಯತೀತ, ವರ್ಗಾತೀತ, ಲಿಂಗಾತೀತ, ರೂಪಾತೀತ, ಛಂದೋತೀತವಾಗಿ ವಚನಕಾರರು ತಾವು ಕಂಡುಂಡ ಅನುಭವವನ್ನು ಗದ್ಯವು ಅಲ್ಲದ, ಪದ್ಯವು ಅಲ್ಲದ, ಆದರೆ ಹೃದ್ಯವೇದ್ಯವಾಗುವ ವಿಶಿಷ್ಟ ರೀತಿಯ ವಚನದ ರಚನೆ ಮಾಡಿದರು. ಸಾರ್ವಕಾಲಿಕ ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ದಯೆ, ಕರುಣೆ, ಅನುಕಂಪ, ಸಮಾನತೆ, ಸಹಕಾರ, ಜಾತ್ಯತೀತ, ಕಾಯಕ, ದಾಸೋಹ ಮೊದಲಾದವು ಹನ್ನೆರಡನೆ ಶತಮಾನದಿಂದ ಇಂದಿನವರೆಗೂ ನವನೀತದಂತೆ ಹೊಳಪು ಪಡೆದು ಸಮಕಾಲೀನತೆ ಪಡೆದುಕೊಂಡಿವೆ. ಇಂತಹ ವಚನ ಸಾಹಿತ್ಯದ ಮೇರು ಪ್ರಮಥ…

0 Comments

ಡಾ. ಶೀಲಾದೇವಿ ಮಳಿಮಠ-ಜ್ಞಾನದಿಂದ ಅನುಪಮ ಸುಜ್ಞಾನದೆಡೆಗೆ ಕೊಂಡೊಯ್ಯುವ ಚಿಂತಾಮಣಿ

ಅಖಂಡ ಮಂಡಲಾಕಾರಂ | ವ್ಯಾಪ್ತಂ ಯೇನ ಚರಾಚರಂ ||ತತ್ಪದಂ ದರ್ಶಿತಂ ಯೇನ | ತಸ್ಮೈ ಶ್ರೀ ಗುರವೇ ನಮಃ ‖ ಅಜ್ಞಾನ ತಿಮಿರಾಂಧಸ್ಯ | ಜ್ಞಾನಾಂಜನ ಶಲಾಕಯಾ ||ಚಕ್ಷುಃ ಉನ್ಮೀಲಿತಂ ಯೇನ | ತಸ್ಮೈ ಶ್ರೀಗುರವೇ ನಮಃ ‖ ಗುರು ಬ್ರಹ್ಮಾ ಗುರುರ್ವಿಷ್ಣುಃ | ಗುರು ದೇವೋ ಮಹೇಶ್ವರಃ ||ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈ ಶ್ರೀಗುರವೇ ನಮಃ ‖ Primary objective of education is to make children fearless  - Swami Vivekananda “ಶಿಕ್ಷಣದ ಮೂಲಭೂತ ಉದ್ದೇಶ ಅಂದರೆ ವಿದ್ಯಾರ್ಥಿಗಳನ್ನು ಧೈರ್ಯವಂತರನ್ನಾಗಿ ಮಾಡುವುದು”.…

0 Comments

ಡಾ. ಸರ್ವಮಂಗಳಾ ಸಕ್ರಿ, ರಾಯಚೂರು

16 ನೇ ವರ್ಷಕ್ಕೆ ಮದುವೆಯಾಗಿ, ಇಬ್ಬರು ಮಕ್ಕಳ ತಾಯಿಯಾದ ನಂತರ ಪುನಃ ಓದುವ ಹಂಬಲದೊಂದಿಗೆ, ಎಲ್ಲರ ವಿರೋಧದ ನಡುವೆಯೂ PUC ಮಾಡಿ, ನಂತರ B.A. ಮತ್ತು M.A. ಮಾಡಿ, ತದನಂತರ ಸಂಶೋಧನೆ ಮಾಡಿ Ph D ಪದವಿಯನ್ನೂ ಸಹ ಪಡೆದು, ಕಾಲೇಜಿನಲ್ಲಿ ಉಪನ್ಯಾಸಕಿಯಾದ ಸಂಘರ್ಷಪೂರ್ಣ ಕಥೆ ಕೇಳಿದರೆ ಯಾವುದೋ ಅನಂತನಾಗ ಮತ್ತು ಲಕ್ಷ್ಮಿ ಅಭಿನಯಿಸಿದ ಕೌಟುಂಬಿಕ ಚಲನಚಿತ್ರದಂತೆ ಭಾಸವಾಗುತ್ತದಲ್ಲವೇ. ಇಲ್ಲ, ಇದು ನಿಜ ಜೀವನದ ಸಾಹಸಪೂರ್ಣ ಕಥೆಯ ನೈಜ ನಿರೂಪಣೆ. ಇಂದಿನ ಕಥೆಯ ನಾಯಕಿ ಹಾಗೂ ಇಂದಿನ ವಿಶೇಷ ಅತಿಥಿ ಸಾಹಸೀ ಸೃಜನಶೀಲ ಸಂಶೋಧನಾತ್ಮಕ ಬರಹಗಾರರಾದ ರಾಯಚೂರಿನ…

1 Comment

ಲಿಂಗಭೇದ ಅಳಿಸಿ ಸಮಾನತೆ ಸಾರಿದ ಶರಣರು/ಡಾ. ರಾಜೇಶ್ವರಿ. ವೀ. ಶೀಲವಂತ.

ಜಗತ್ತಿನಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಮೊಟ್ಟಮೊದಲು ಪ್ರತಿಪಾದಿಸಿದ ಧರ್ಮ ಶರಣಧರ್ಮ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಹಿಳೆಗೆ ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ನೀಡಿ ಅವರನ್ನು ಮೊದಲು ಗೌರವಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಸ್ತ್ರೀಯು ಸಮಾಜದಲ್ಲಿ ಪುರುಷನಿಗೆ ಸಮಾನವೆಂದು ತಿಳಿದುಕೊಂಡು ಸ್ತ್ರೀ ಸಮಾನತೆಯನ್ನು ತಮ್ಮ ಚಳುವಳಿಯ ಮುಖ್ಯ ಉದ್ದೇಶಗಳಲ್ಲಿ ಒಂದನ್ನಾಗಿಸಿಕೊಂಡು ಆಕೆಗೆ ಸಮಾನ ಸ್ಥಾನಮಾನ, ಸವಲತ್ತುಗಳನ್ನು ಕಲ್ಪಿಸಿಕೊಟ್ಟವರು ಶರಣರು. ಜೊತೆಗೆ ಆಕೆ ಅತ್ಯಂತ ಸೊಗಸಾಗಿ, ಗಂಭೀರವಾಗಿ ವಚನಗಳನ್ನು ರಚನೆ ಮಾಡುವ ಮಟ್ಟಿಗೆ ಬೆಳೆಯಿಸಿ ವಚನಕಾರ್ತಿಯರ ಸಮೂಹವನ್ನು ಸೃಷ್ಟಿಸಿದವರು ಶರಣರು. ತಮಗೆ ಸರಿಸಮನಾದ ಸ್ಥಾನವನ್ನು ಕಲ್ಪಿಸಿ ಆಲೋಚಿಸುವಲ್ಲಿ,ಅನುಭವಗಳನ್ನು ಅಭಿವ್ಯಕ್ತಿಸುವಲ್ಲಿ ಅನುಭವದೆತ್ತರಕ್ಕೆ ಎರುವದನ್ನು…

0 Comments

ಬಸವಯುಗದ ವಚನಗಳಲ್ಲಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸಂವೇದನಾ ಶೀಲತೆ, ಒಂದು ಚಿಂತನೆ/ ಶ್ರೀ.ವಿಜಯಕುಮಾರ ಕಮ್ಮಾರ

ಹನ್ನೆರಡನೇ ಶತಮಾನದಲ್ಲಿ ಬಸವಣ್ಣವರ ಕ್ರಾಂತಿಯು ಶ್ರೇಣೀಕೃತ ಸಮಾಜದಲ್ಲಿನ ದೀನ ದಲಿತರನ್ನು ಮೇಲೆತ್ತುವುದರ ಜೊತೆಗೆ ಕಡೆಗಣಿಸಲ್ಪಟ್ಟ ಮಹಿಳೆಯರನ್ನು ಉದ್ಧರಿಸುವುದಾಗಿತ್ತು. ಅಕ್ಷರಲೋಕಕ್ಕೆ ಅಪರಿಚಿತರಾದಂತ ಮಹಿಳೆಯರಿಗೆ ಆತ್ಮ ಗೌರವ ಕೊಟ್ಟು ಅಷ್ಟೇ ಅಲ್ಲ ಅವರನ್ನು ವಚನಕಾರ್ತಿಯರನ್ನಾಗಿ ಮಾಡಿದ್ದು ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ಬಹುದೊಡ್ಡ ಸಾಧನೆ. ವಚನ ಸಾಹಿತ್ಯದಲ್ಲಿ ಒಟ್ಟು 67/68 ಶರಣೆಯರ ಉಲ್ಲೇಖ ಬರುತ್ತದೆ. ಹೆಸರುಗಳು ಒಂದಕ್ಕೊಂದು ಸೇರಿರಬಹುದು. ಮಹಾದೇವಿ ಅಂತಾನೇ ಸುಮಾರು 8/9 ಶರಣೆಯರ ಹೆಸರುಗಳಿವೆ. ಗುಡ್ಡವ್ವೆ ಅಂತಾನೇ 3 ಹೆಸರುಗಳಿವೆ. ಒಟ್ಟಾರೆ ವಚನ ಸಾಹಿತ್ಯದಲ್ಲಿ If we delete the cross reference names, ನಮಗ ಸುಮಾರು…

0 Comments

POLITICAL PHILOSOPHY IN VACHANA LITERATURE AND ITS IMPACT ON “POLITICS & EGALITARIANISM”

(Photo Courtesy: Internet) INTRODUCTION: Democracy, as a subject material in Political Science and Vachana Literature shows us very significant doctrines. Besides leading towards the path of egalitarian society, the principles written in Vachana Literature are far better than the modern day’s Political Theories and Values, which covers all gambit of Micro & Macro Socio-Economic Approaches, Religious as well as Political Science on…

0 Comments

ವ್ರತಾಚಾರ ನಿಷ್ಠೆಯ ಅಕ್ಕಮ್ಮ / ಡಾ. ರಘುಶಂಖ ಭಾತಂಬ್ರಾ,ಬೀದರ

        ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ        ಕಾಯಕವ ಮಾಡಿ,        ಭಕ್ತರ ಪಡುಗ, ಪಾದತ್ರಾಣ, ಪಹರಿ,        ಬಾಗಿಲು, ಬೊಕ್ಕಸ, ಬಿಯಗ        ಮುಂತಾದ ಕಾಯಕವಂ ಮಾಡಿಕೊಂಡು        ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ-        ಈ ಭಕ್ತನ ಅಂಗಳ ಅವಿಮುಕ್ತ ಕ್ಷೇತ್ರ,        ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ       (ಶಿವಶರಣೆಯರ ವಚನಸಂಪುಟ-೫, ವಚನ-೩೬೫ ಪುಟ-೧೧೫) ಅಕ್ಕಮ್ಮನ ವಚನದಂತೆ ಅಸಿ ಮಸಿಗಿಂತ ಕೃಷಿಕ್ಷೇತ್ರವು ಮಾನವನ ಸರ್ವಾಂಗೀಣ ಪ್ರಗತಿಗೆ ಅವಿಭಾಜ್ಯ ಅಂಗವಾಗಿರುವAತೆ, ನೂರಾರು ವೃತ್ತಿಗಳಿಗೆ, ಅಸಂಖ್ಯಾತ ಕ್ರಿಮಿ-ಕೀಟ, ಪ್ರಾಣಿ-ಪಕ್ಷಿಗಳಾದಿ ಜೀವಸಂಕುಲಕ್ಕೆ ಪೂರಕವಾಗಿದೆ, ಪೋಷಕವಾಗಿದೆ. ಕೃಷಿಕಾರ್ಯವನ್ನು ಅವಲಂಬಿಸಿ ಬದುಕುತ್ತಿರುವ, ಜೀವನಾಶ್ಯಕ ವಸ್ತುಗಳ ಉತ್ಪಾದಕ ಚಟುವಟಿಕೆಯಲ್ಲಿ…

0 Comments

ಡಾ. ರಾಜೇಶ್ವರಿ ಶೀಲವಂತ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಈ ಅನುಭಾವದ ಮಾತನ್ನೇ ಇನ್ನೂ ಸ್ವಲ್ಪ ಮುಂದೆ ತೆಗೆದುಕೊಂಡು ಹೋದರೆ ಇವತ್ತಿನ ನಮ್ಮ ವಿಶೇಷ ಅತಿಥಿಯ ಅದ್ಭುತ ಪರಿಚಯ ನಮಗಾಗುತ್ತದೆ. ಒಂದು M. Phil ಪ್ರಭಂಧ, ಒಂದು Ph.D ಪ್ರಭಂಧ, ಒಂದು ಪ್ರಸಾರಾಂಗ ಮಾಲಿಕೆಯ ಗ್ರಂಥ. Ph.D ಪಡೆದ ಬೀಳಗಿ ತಾಲ್ಲೂಕಿನ ಪ್ರಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಹೀಗೆ ಕಲಿಯುವುದರ ಜೊತೆಗೆ ವಿಶ್ವ ವಿದ್ಯಾಲಯವನ್ನೇ ತಮ್ಮೊಂದಿಗೆ ಸಮ್ಮಿಳಿತಗೊಳಿಸಿ ಸಂಶೋಧನೆಗೆ ಒಂದು ಮೌಲ್ವಿಕ ಅರ್ಥ ತಂದುಕೊಟ್ಟ ಇಂದಿನ ವಿಶೇಷ ಅತಿಥಿ ನಮ್ಮ “ಅಕ್ಕನ ಅರಿವು” ಬಳಗದ ಸದಸ್ಯೆ ಡಾ. ರಾಜೇಶ್ವರಿ. ವೀ.…

0 Comments

Fiscal Policy: ವಚನಕಾರರು ಕಂಡಂತೆ ವಿತ್ತೀಯ ಕಾರ್ಯನೀತಿ ಒಂದು ಅನುಪಮ ಸಮಕಾಲೀನ ಚಿತ್ರಣ

ಅಮರಾವತಿಯ | ಪಟ್ಟಣದೊಳಗೆ ||ದೇವೇಂದ್ರನಾಳುವ | ನಂದನವನವಯ್ಯಾ ||ಅತ್ತ ಸಾರಲೆ ಕಾಮಯ್ಯ | ಮೋಹವೇ ನಿನಗೆ? ||ಲೋಕಾದಿಲೋಕವೆಲ್ಲವ | ಮರುಳು ಮಾಡಿದೆ ||ಕಾಮಾ | ಗುಹೇಶ್ವರಲಿಂಗವನರಿಯೊ ||(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-149 / ವಚನ ಸಂಖ್ಯೆ-131) ದೇವೇಂದ್ರನ ರಾಜಧಾನಿ ಅಮರಾವತಿಯು ಅಮರರಾದ ದೇವಾನು-ದೇವತೆಗಳ ವಾಸಸ್ಥಾನ ಎನ್ನುವುದು ದ್ವೈತ ತತ್ವವನ್ನು ನಂಬುವ ಜನಗಳ ಕಲ್ಪನೆ. ಅದು ಫಲಭರಿತ ಹಣ್ಣುಗಳು, ಸುಗಂಧ ಸುವಾಸನೆ ಬೀರುವ ಹೂವುಗಳು ಮತ್ತು ಸೇವಕಿಯರು ಮುಂತಾದವುಗಳಿಂದ ಕೂಡಿ ಪಂಚೇಂದ್ರಿಯಗಳಿಗೆ ಆನಂದದ ಅನುಭವವನ್ನು ನೀಡುವ ಲೋಕ. ಕಾಮನೇ, ಮೋಹದಿಂದೊಡಗೂಡಿದ ಲೋಕದ ಜನರನ್ನು ಕಾಡುವ…

0 Comments

ಪಾರ್ಲಿಮೆಂಟ್‌, ಮ್ಯಾಗ್ನಾ ಕಾರ್ಟಾ ಮತ್ತು ಬಸವೇಶ್ವರ/ಶ್ರೀ.ವಿಜಯಕುಮಾರ ಕಮ್ಮಾರ

ಮ್ಯಾಗ್ನಾ ಕಾರ್ಟಾದ ಉಳಿದಿರುವ ನಾಲ್ಕು ದಾಖಲೆಗಳಲ್ಲಿ ಒಂದರ ಚಿತ್ರ.(ಸಾಂದರ್ಭಿಕ ಚಿತ್ರ: ಅಂತರ್ಜಾಲ ಕೃಪೆ) ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂಸತ್‌ ಭವನ ಒಂದು ಐತಿಹಾಸಿಕ ಕಟ್ಟಡ ಮತ್ತು ಈ ದೇಶದ ಶಕ್ತಿಕೇಂದ್ರ. ಪ್ರಸಿದ್ಧ ಬ್ರಿಟೀಷ್‌ ವಾಸ್ತುಶಿಲ್ಪಿಗಳಾದ ಸರ್‌ ಎಡ್ವಿನ್‌ ಲುಟೆಯನ್ಸ್‌ ಮತ್ತು ಸರ್‌ ಹರ್ಬರ್ಟ್‌ ಬೇಕರ್‌ ಅವರ ವಿನ್ಯಾಸದಲ್ಲಿ ರೂಪುಗೊಂಡ ಕಟ್ಟಡ. ದಿನಾಂಕ 12.02.1921 ರಲ್ಲಿ ಶಂಕುಸ್ಥಾಪನೆಯಾಗಿ ಇದರ ನಿರ್ಮಾಣಕ್ಕೆ ಸುಮಾರು ಆರು ವರ್ಷಗಳ ಕಾಲ ತೆಗೆದುಕೊಂಡಿತು. ಅಂದಿನ ಲೆಕ್ಕದಲ್ಲಿ 83 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ಗವರ್ನರ್‌ ಜನರಲ್‌ ಆಗಿದ್ದಂಥ ಲಾರ್ಡ್‌ ಐರ್ವಿನ್‌ ದಿನಾಂಕ 18.01.1927…

1 Comment