ನಿಷ್ಠೂರತೆಯನ್ನೆ ನಿಷ್ಟೆಯಾಗಿಸಿಕೊಂಡಿದ್ದ ಅಂಬಿಗರ ಚೌಡಯ್ಯ / ಶ್ರೀ ಶಿವಣ್ಣ ಇಜೇರಿ, ಶಹಾಪುರ.
ಅಂಬಿಗರ ಚೌಡಯ್ಯ ಬಸವಣ್ಣನವರ ವಿಚಾರವನ್ನು ಆಚರಣೆಯಲ್ಲಿ ನಿಷ್ಠೂರತೆಯನ್ನು ಮೈಗೂಡಿಸಿಕೊಂಡು ಯಾರದೇ ಮುತವರ್ಜಿ ವಹಿಸದೆ ಶರಣರ ವಚನ ಸಾಹಿತ್ಯವನ್ನು ಆಕಾಶದೆತ್ತರಕ್ಕೆ ಮುಟ್ಟಿಸಿದ ಅಪರೂಪದ ಶರಣ, ನಿರ್ಭೀತ, ನಿಷ್ಠುರ, ನಿರ್ದಾಕ್ಷಿಣ್ಯ, ಕಟೂಕ್ತಿ ಇವರ ಮನೋಭಾವ. ಶ್ರೇಷ್ಠ ಅನುಭಾವಿ. ಅನ್ಯಾಯ, ಜಾತೀಯತೆ, ಅಧಾರ್ಮಿಕ ಆಚರಣೆಗಳನ್ನು ಕಟುವಾಗಿ ಟೀಕಿಸಿರುವರು. ಅಂಬಿಗರ ಚೌಡಯ್ಯನವರು ದೇವರ ಸ್ವರೂಪವೇನು ಎನ್ನುವದನ್ನು ಅವರ ವಚನದಲ್ಲಿ ಹೀಗೆ ಹೇಳುತ್ತಾರೆ. ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,ಬ್ರಹ್ಮಕಪಾಲವಿಲ್ಲ, ಭಸ್ಮಭೂಷನಲ್ಲ,ವೃಷಭವಾಹನನಲ್ಲ, ಋಷಿಗಳೊಡನಿದ್ದಾತನಲ್ಲ,ಎಸಗುವ ಸಂಸಾರದ ಕುರುಹಿಲ್ಲದಾತಂಗೆಹೆಸರಾವುದಿಲ್ಲವೆ೦ದನ೦ಬಿಗರ ಚೌಡಯ್ಯ (ಸ. ವ. ಸಂ-1 / ವ. ಸಂ-46) ಈ ವಚನದಲ್ಲಿ ಪೌರಾಣಿಕ ಶಿವನ ಚಿತ್ರಣವನ್ನು ಕೊಡುವುದರ ಜೊತೆಗೆ…