“ವಚನಗಳು ವಿಜ್ಞಾನಿಗಳ ತತ್ವ ಪ್ರತಿಪಾದನೆಗಳ ಭವಿಷ್ಯವಾಣಿ”/ಗುರುಲಿಂಗಪ್ಪ ಸಜ್ಜನ,ಬೆಂಗಳೂರು
ಶರಣರ ವಚನಗಳು ವಿಜ್ಞಾನಿಗಳ ದ್ವಂದಗಳನ್ನು ನಿವಾರಿಸಬಹುದಾದ ಮಾರ್ಗದರ್ಶಕ ಸೂತ್ರಗಳು-6 ಅನಾದಿ ಮತ್ತು ಆದಿ - ಶಕ್ತಿಕ್ಷೇತ್ರಗಳು (Fields) ಅಲ್ಲಮಪ್ರಭುದೇವರ ವಚನ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. `ಇಲ್ಲ' `ಇಲ್ಲ' ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು! ಕಡಕೋಳ ಮಡಿವಾಳಪ್ಪನವರ ವಚನಭಾಗ ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ,ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ,ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು,-------ಆ ಬಯಲಿಗೆ ಸಾವು ಇಲ್ಲವು.ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು.ಎಷ್ಟು ನಿಜ ತಿಳಿದರೇನೋ…