ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25) ಕಾನನದ ಅತ್ಯಂತ ಸುಂದರ ಪ್ರಕೃತಿಯಲ್ಲಿ, ನೈಸರ್ಗಿಕ ಸೊಬಗಿನ ತಾಣದಲ್ಲಿ ಅತ್ಯುತ್ತಮ ಸಂಪತ್ತು ಇರುವುದೇ ಹೊರತು ಸಿಡಿದು ಬೀಳುವ ಮುಳ್ಳಿನ ಕಂಟಿಯಲ್ಲ. ಭೌತಿಕವಾಗಿ ಕಾಣುವ ವಸ್ತು ತಾನಲ್ಲ. ಅದೇ ರೀತಿ ಸಂಸಾರವೆಂಬ ಮಡುವಿನೊಳಗೆ ಸಿಗುವುದು ಮೋಹವೆಂಬ ಮೀನಲ್ಲ, ಮುಕ್ತಿ ಮಾರ್ಗವನ್ನರಸಲು ತಪಸ್ಸು ಮಾಡುವೆನು ಎಂದು ಕಷಾಯ ವಸ್ತ್ರಗಳನ್ನು ಧರಿಸುವ ಢಾಂಬಿಕರ ತರಹ ನನಗೆ ವೇಳೆ ಇಲ್ಲ. ನಿಜವಾದ ವ್ಯಕ್ತಿಯನ್ನು ಪರೀಕ್ಷಿಸಲು…

0 Comments

ಬಸವಣ್ಣನವರ ಸ್ವಗತ | ಶ್ರೀ. ಮಹಾಂತೇಶ ನವಲಕಲ್‌, ಕಲಬುರಗಿ.

ಕಲ್ಯಾಣದಲ್ಲಿ ರಾಜಪ್ರಭುತ್ವ ನಮ್ಮನ್ನು ಉಚ್ಚಾಟನೆಗೊಳಿಸಿತ್ತು. ಬಿಜ್ಜಳ ಮಹಾರಾಜರು ಆರು ತಿಂಗಳ ಕಾಲ ನಾನು ಇಲ್ಲಿ ಇರಬಾರದು ಎಂದು ಆಜ್ಞಾಪಿಸಿದ್ದರು. ಆದರೆ ಅವರ ಮಗ ಸೋವಿದೇವ ನನಗೆ ಜೀವಿತಾವಧಿಯಲ್ಲಿ ಕಲ್ಯಾಣಕೆ ಬರಬಾರದು ಎನ್ನುವ ಸುಗ್ರೀವಾಜ್ಞೆ ಹೊರಡಿಸಿದ್ದ. ನಾನು ಅಪ್ಪಣ್ಣಗಳು, ಮಸಣಯ್ಯನವರು ಗುರುಬಸವ ಮಹಾಂತರಂತಹ ಅನೇಕ ತೊಂಬತೈದು ಶರಣರು ಆರಂಭದಲ್ಲಿ ನಮ್ಮ ಕಲ್ಯಾಣ ನಿರ್ಗಮನದ ಪ್ರಯಾಣದಲ್ಲಿ ಭಾಗವಹಿಸಿದ್ದರೂ ಕೂಡ  ಅವರನ್ನು ಶರಣಧರ್ಮಗಳ ಉಪದೇಶಕ್ಕಾಗಿ ಆಯಾ ಆಯಾ ಊರುಗಳಲಿ ಬಿಟ್ಟು ನಾನು ಮತ್ತು ಅಪ್ಪಣ್ಣಗಳು ನಡೆಯುತ್ತ ನಡೆಯುತ್ತ   ಬಾಗೇವಾಡಿಗೆ ಬಂದು ನಿಂತಿದ್ದೆವು. ಇಲ್ಲಿಂದ ಸಂಗಮ ಇನ್ನೂ ಐವತ್ತು ಹರಿದಾರಿಗಳ ದೂರವಿತ್ತು. ಆಗ…

0 Comments

ನುಲಿಯ ಚಂದಯ್ಯನವರ ವಚನ – ನಿರ್ವಚನ | ಶ್ರೀಮತಿ. ಸುವರ್ಣ ಗೋಲಗೇರಿ, ರಾಯಚೂರು.

ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.ಗುರುವಾದಡೂ ಚರಸೇವೆಯ ಮಾಡಬೇಕು.ಲಿಂಗವಾದಡೂ ಚರಸೇವೆಯ ಮಾಡಬೇಕು.ಜಂಗಮವಾದಡೂ ಚರಸೇವೆಯ ಮಾಡಬೇಕುಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು. ಅನುಭವ ಮಂಟಪದ ಅನುಭಾವಿಯಾಗಿ, ಕಾಯಕ ತತ್ವದೊಳಗೆ ನಿಷ್ಠೆಯಿಟ್ಟು, ಕಲ್ಯಾಣ ಕ್ರಾಂತಿಯ ನಂತರ ಅಕ್ಕನಾಗಮ್ಮ, ಚೆನ್ನಬಸವಣ್ಣ ಮುಂತಾದ ಶರಣರೊಂದಿಗೆ ಉಳುವಿಯ ಕಡೆಗೆ ಹೊರಟ ಶರಣರಿವರು. ಜನ್ಮಸ್ಥಳ ವಿಜಾಪುರ ಜಿಲ್ಲೆಯ ಶಿವಣಗಿ ಗ್ರಾಮ. ಕಾಯಕ ನೆಲೆ ಬಸವಕಲ್ಯಾಣ. ಲಿಂಗೈಕ್ಯಗೊಂಡ ಸ್ಥಳ ಚಿತ್ರದುರ್ಗ ಜಿಲ್ಲೆಯ ಆರ್. ನುಲೇನೂರು. ಕಾಯಕ ಮೆದೆಹುಲ್ಲು, ಪುಂಡಿಕಟ್ಟಿಗೆಯಿಂದ ಹಗ್ಗ ಹೊಸೆಯುವುದು. ಇವರ ವಚನಾಂಕಿತ “ಚಂದೇಶ್ವರಲಿಂಗ”. ಇವರು ರಚಿಸಿದ ಒಟ್ಟು 48 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ನಿರ್ವಚನ:ಕಾಯಕ ತತ್ವದ ಪರಾಕಾಷ್ಟತೆ…

1 Comment

ಆಯ್ದಕ್ಕಿ ಮಾರಯ್ಯನವರ ವಚನ –ನಿರ್ವಚನ | ಶ್ರೀಮತಿ. ಅರ್ಚನಾ ಮುತ್ತಗಿ, ಕಲಬುರಗಿ.

ಹಾಗದ ಕಾಯಕವ ಮಾಡಿ, ಹಣವಡ್ಡವ ತಾ ಎಂಬಲ್ಲಿಸತ್ಯದ ಕಾಯಕ ಉಂಟೆ?ಭಕ್ತರಲ್ಲಿ ಕಾಯಕಕ್ಕೆ ಕಡಿಮೆಯಾಗಿ ತಾ ಎಂಬುದುಅಮರೇಶ್ವರಲಿಂಗಕ್ಕೆ ಚಿತ್ತಶುದ್ಧದ ಕಾಯಕ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-442/ವಚನ ಸಂಖ್ಯೆ-1190) ಕಾಯಕ ತತ್ವಕ್ಕೆ ಹೆಸರು ವಾಸಿಯಾಗಿರುವ ಆಯ್ದಕ್ಕಿ ಮಾರಯ್ಯ ಶರಣರು 12 ನೆಯ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. “ಅಮರೇಶ್ವರಲಿಂಗವಾಡೂ ಕಾಯಕದೊಳು” ಎಂದು ದೇವರಿಗೂ ಕಾಯಕ ತತ್ವದ ಮಹತ್ವವನ್ನು ತಿಳಿಸಿದ ಶರಣ ದಂಪತಿಗಳು ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯನವರು. ಇಡೀ ಜಗತ್ತಿಗೆ “ಕಾಯಕವೇ ಕೈಲಾಸ” ವೆಂಬ ಅದ್ವಿತೀಯ ತತ್ವವನ್ನು ತಿಳಿಸಿದ ಮೊದಲಿಗರು ಶರಣೆ ಆಯ್ದಕ್ಕಿ ಲಕ್ಕಮ್ಮನವರು. ಈಗಿನ ರಾಯಚೂರು…

0 Comments

ಶರಣ ಢಕ್ಕೆಯ ಬೊಮ್ಮಣ್ಣನವರ ವಚನ – ನಿರ್ವಚನ | ಶ್ರೀಮತಿ. ಅರುಣಾ ಬಾವಿ, ಕಲಬುರಗಿ.

ಸತಿಯ ಗುಣವ ಪತಿ ನೋಡಬೇಕಲ್ಲದೆಪತಿಯ ಗುಣವ ಸತಿ ನೋಡಬಹುದೆ ಎಂಬರು.ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ?ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ?ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆಭಂಗವಾರಿಗೆಂಬುದ ತಿಳಿದಲ್ಲಿಯೆಕಾಲಾಂತಕ ಬ್ಥೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-331/ವಚನ ಸಂಖ್ಯೆ-976) ಶರಣ ಢಕ್ಕೆಯ ಬೊಮ್ಮಣ್ಣನವರು ಅನುಭವಮಂಟಪದ ಶರಣರೊಳಗೆ ಒಬ್ಬರಾಗಿರುವರು. ಇವರ ಸ್ವ-ವಿವರಗಳಾವವು ಲಭ್ಯವಿಲ್ಲ, ಇವರ ಕಾಯಕ ಜನಪದ ವೇಷಭೂಷಣಗಳನ್ನು ಧರಿಸಿ ಧರ್ಮ, ತತ್ವ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವದರೊಂದಿಗೆ ಜನರಿಗೆ ಅರಿವಿನ ದಾಸೋಹವನ್ನು ಮಾಡಿ ಜ್ಞಾನಿಗಳನ್ನಾಗಿಸುವದಾಗಿತ್ತು. “ಕಾಲಾಂತಕ ಭೀಮೇಶ್ವರಲಿಂಗ” ಎನ್ನುವ ವಚನಾಂಕಿತದಿಂದ ಬರೆದ ಇವರ 90…

0 Comments

ಡೋಹರ ಕಕ್ಕಯ್ಯನವರ ವಚನ – ನಿರ್ವಚನ | ಶ್ರೀಮತಿ. ಸಂಗೀತಾ ಕೊಡ್ಲಿ, ಕಲಬುರಗಿ.

ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದುಮುಟ್ಟಿ ಪಾವನವ ಮಾಡಿಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ!ಆ ಲಿಂಗ ಬಂದು ಸೋಂಕಲೊಡನೆಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ!ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ,ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ,ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ!ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದಸಂಗನ ಬಸವಣ್ಣನ ಕರುಣದಿಂದಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ!ಅಭಿನವ ಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-336/ವಚನ ಸಂಖ್ಯೆ-987) ಡೋಹರ ಕಕ್ಕಯ್ಯ ಶರಣರು ಅನುಭವಮಂಟಪದ ಅನುಭಾವಿಗಳು. ಅಮರಗಣಂಗಳಲ್ಲಿ ಹಿರಿಯರಾಗಿರುವ ಇವರು ಮೂಲತಃ ಮಧ್ಯಪ್ರದೇಶದ ಮಾಳವ್ಯ ಪ್ರದೇಶದಿಂದ ಕಲ್ಯಾಣಕ್ಕೆ ಬಂದವರು. ಕಲ್ಯಾಣದಲ್ಲಿ ತೊಗಲು ಹದ ಮಾಡುವ ಕಾಯಕ…

1 Comment

ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರ ವಚನ-ನಿರ್ವಚನ | ಪ್ರೊ. ಶ್ರೀದೇವಿ ಶೀಲವಂತ, ಕಲಬುರಗಿ.

ಅಡ್ಡಬಿದ್ದು ಶಿಷ್ಯನ ಮಾಡಿಕೊಂಬದಡ್ಡ ಪ್ರಾಣಿಗಳನೇನೆಂಬೆನಯ್ಯ.ಏನೇನೂ ಅರಿಯದ ಎಡ್ಡ ಮಾನವರಿಗೆಉಪದೇಶವ ಮಾಡುವಗೊಡ್ಡ ಮಾನವನ ಮುಖವ ತೋರದಿರಯ್ಯಾ.ಅದೇನು ಕಾರಣವೆಂದಡೆ:ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ.ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು,ಅಷ್ಟಮದಂಗಳೆಂಬಖೊಟ್ಟಿ ಗುಣಂಗಳ ಬಿಡಿಸಲಿಲ್ಲ.ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿಮುಕ್ತಿಪಥವನರುಹಲಿಲ್ಲ.ಮಹಾಶೂನ್ಯ ನಿರಾಳ ನಿರಂಜನಲಿಂಗವಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ.ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆಪ್ರಮಥರು ಮೆಚ್ಚುವರೆ?ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು.ಅವರು ಇಹಲೋಕ ಪರಲೋಕಕ್ಕೆಹೊರಗೆಂದಾತನಂಬಿಗರ ಚೌಡಯ್ಯ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-26) 12 ನೇಯ ಶತಮಾನದ ಅನುಭವ ಮಂಟಪದಲ್ಲಿದ್ದ ಮಹಾಶರಣರು ಅಂಬಿಗರ ಚೌಡಯ್ಯನವರು. ಹಾವೇರಿ ಜಿಲ್ಲೆಯ ರಾಣಬೆನ್ನೂರು ತಾಲೂಕಿನ ಚೌಡದಾನಪುರ ಗ್ರಾಮದಲ್ಲಿ ಜನಿಸಿದ ಈ ಶರಣರ ತಂದೆಯವರ ಹೆಸರು…

0 Comments

“ವಾಯುಗುಣ ಸರ್ಪ ಬಲ್ಲುದು” ಮಡಿವಾಳ ಮಾಚಿದೇವರ ವಚನ-ನಿರ್ವಚನ | ಶ್ರೀಮತಿ. ಸರೋಜಾ ಜಾಕರೆಡ್ಡಿ.

ವಾಯುವಿನ ಗುಣವ ಸರ್ಪ ಬಲ್ಲುದು.ಮಧುರದ ಗುಣವ ಇರುಹೆ ಬಲ್ಲುದು.ಗೋತ್ರದ ಗುಣವ ಕಾಗೆ ಬಲ್ಲುದು.ವೇಳೆಯ ಗುಣವ ಕೋಳಿ ಬಲ್ಲುದು.ಇದು ಕಾರಣ, ಮನುಷ್ಯಜನ್ಮದಲ್ಲಿ ಬಂದು,ಶಿವಜ್ಞಾನಾನುಭವವನರಿಯದಿರ್ದಡೆ,ಆ ಕಾಗೆ ಕೋಳಿಗಿಂದ ಕರಕಷ್ಟ ಕಾಣಾ, ಕಲಿದೇವರದೇವ.(ಮಡಿವಾಳ ಮಾಚಿದೇವರ ಸಮಗ್ರ ವಚನಗಳು-2022 / ಸಂ. ಅಶೊಕ ದೊಮ್ಮಲೂರು / ಪುಟ ಸಂಖ್ಯೆ-225 / ವಚನ ಸಂಖ್ಯೆ-268) ಅನುಭವ ಮಂಟಪದ ಮಹಾನ್ ಅನುಭಾವಿಗಳು ಮಡಿವಾಳ ಮಾಚಿದೇವರು. ಇವರ ಜನ್ಮಸ್ಥಳ ವಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿ. ಇವರ ಗುರು ಶ್ರೀ. ಮಲ್ಲಿಕಾರ್ಜುನ, ತಂದೆ ಪರವತಯ್ಯಾ, ತಾಯಿ ಸುಜ್ಞಾನವ್ವ. ಹೆಂಡತಿ ಮಲ್ಲಿಗೆಮ್ಮ. ಕಾಯಕ ಶರಣರ ಬಟ್ಟೆಗಳನ್ನು ಮಡಿ ಮಾಡುವುದು. ಐಕ್ಯಸ್ಥಳ…

1 Comment

ಪರಮದಾಸೋಹಿ ಲಿಂಗಾಂಗಯೋಗಿ ನೀಲಾಂಬಿಕೆ ತಾಯಿಯವರು | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಎನಗೆ ಲಿಂಗವು ನೀವೆ ಬಸವಯ್ಯ,ಎನಗೆ ಸಂಗವೂ ನೀವೆ ಬಸವಯ್ಯ,ಎನಗೆ ಪ್ರಾಣವು ನೀವೆ ಬಸವಯ್ಯ,ಎನಗೆ ಪ್ರಸಾದವು ನೀವೆ ಬಸವಯ್ಯ,ಎನಗೆ ಪ್ರಭೆ ಮೂರ್ತಿಯೂ ನೀವೆ ಬಸವಯ್ಯ,ಎನಗೆ ಸಂಗಯ್ಯನು ನೀವೆ ಬಸಯ್ಯ(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-334/ವಚನ ಸಂಖ್ಯೆ-876) ಬಸವಣ್ಣನವರ ಜೀವನದ ಒಂದು ಪ್ರಮುಖ ಭಾಗ ಮತ್ತು ಅಂತರಂಗದ ಸಖಿ ನೀಲಮ್ಮ ತಾಯಿಯವರು. ವಿದ್ಯೆ, ವಿನಯ ಮತ್ತು ಸಂಸ್ಕೃತಿಗಳ ಸಂಗಮವಾದ ನೀಲಮ್ಮನವರು ಬಸವಣ್ಣನವರ ಭಕ್ತಿ, ಆತ್ಮಶಕ್ತಿ ಮತ್ತು ವ್ಯಕ್ತಿತ್ವಕ್ಕೆ ಮಾರುಹೋಗಿ ಅವರಿಗೆ ತಮ್ಮನ್ನ ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡವರು. ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದರೂ ಸಹ ಸರಳ ಜೀವನವನ್ನು ತಮ್ಮದಾಗಿಸಿಕೊಂಡ ನೀಲಮ್ಮ ತಾಯಿಯವರು…

1 Comment

ದಾಸೋಹ ತತ್ವದ ಚಿಂತನೆ | ಶ್ರೀ. ಆನಂದ ಯಲ್ಲಪ್ಪ ಕೊಂಡಗುರಿ, ಹಿರೇಬಾಗೇವಾಡಿ, ಬೆಳಗಾವಿ ಜಿಲ್ಲೆ.  

ಜನ್ಮ ಜನ್ಮಕ್ಕೆ ಹೋಗಲೀಯದೆ,`ಸೋ[s]ಹಂ ಎಂದೆನಿಸದೆ `ದಾಸೋ[s]ಹಂ ಎಂದೆನಿಸಯ್ಯಾ.ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ,ಕೂಡಲಸಂಗಮದೇವಾ, ನಿಮ್ಮ ಧರ್ಮ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-233/ವಚನ ಸಂಖ್ಯೆ-834) ಮೊದಲಿಗೆ ದಾಸೋಹದ ಪರಿಕಲ್ಪನೆಯನ್ನು 12 ನೇಯ ಶತಮಾನದಲ್ಲಿ ಶ್ರೀ ಜಗಜ್ಯೋತಿ, ಮಹಾ ಮಾನವತಾವಾದಿ, ಅಪ್ಪ ಬಸವಣ್ಣನವರು ನಮ್ಮ ಲಿಂಗಾಯತ ಧರ್ಮದ ಮೂಲ ತತ್ವ ಸಿದ್ಧಾಂತಗಳೊಂದಾಗಿ ಈ ದಾಸೋಹ ತತ್ವವನ್ನು ಮೊಟ್ಟ ಮೊದಲಿಗೆ ಈ ಜಗತ್ತಿಗೆಲ್ಲ ಪರಿಚಯಿಸಿದರು. ದಾಸೋಹವು ಸಮಾಜದಲ್ಲಿ ಸಮಾನತೆಯನ್ನು ತರಲು ಶರಣರು ಕೈಕೊಂಡ ಕ್ರಾಂತಿಕಾರಕ ಅಸ್ತ್ರ. ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ.ನಮ್ಮ ಕೂಡಲಸಂಗನ ಶರಣರಿಗಲ್ಲದೆಮಾಡುವ ಅರ್ಥ…

0 Comments