ಕಾಯಕ ನಿಷ್ಠೆಯ ಅನುಪಮ ಶರಣ ಮೇದಾರ ಕೇತಯ್ಯನವರು | ಡಾ. ದಯಾನಂದ ನೂಲಿ, ಚಿಕ್ಕೋಡಿ.
ಕಾಯಕನಿಷ್ಠೆಯ ಶರಣ ಮೇದಾರ ಕೇತಯ್ಯನವರ ಸ್ಮರಣೋತ್ಸವ ನಿಮಿತ್ತ ಲೇಖನ. ಮೇದಾರ ಕೇತಯ್ಯನವರು ಮಲೆನಾಡಿನ ಬೇಲೂರು ಎಂಬ ಊರಿನವರು. ಅವರ ಧರ್ಮಪತ್ನಿ ಸಾತವ್ವೆ. ಅವರು ಬಿದರಿನ ಕಾಯಕವನ್ನು ಕೈಗೊಂಡಿದ್ದರು. ಪ್ರತಿನಿತ್ಯವೂ ಬೆಟ್ಟಕ್ಕೆ ಹೋಗಿ ಬಿದಿರುಗಳನ್ನು ಕಡಿದುಕೊಂಡು ಬಂದು ಅವುಗಳಿಂದ ಬುಟ್ಟಿ, ಮೊರ ಮೊದಲಾದವನ್ನು ಹೆಣೆದು ಅವುಗಳನ್ನು ಮಾರಿ ಬಂದ ಹಣದಿಂದ ಜೀವನ ಸಾಗಿಸುವುದರ ಜೊತೆಗೆ ಜಂಗಮ ದಾಸೋಹ ಸೇವೆಯನ್ನು ಮಾಡುತ್ತಿದ್ದರು. ಶಿವಾನುಭವ ಮಂಟಪದಲ್ಲಿ ನಡೆಯುತ್ತಿದ್ದ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು. ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಬಸವಣ್ಣ.ಎನ್ನ ಬುದ್ಧಿಗೆ ಗುರುಲಿಂಗವಾದಾತ, ಬಸವಣ್ಣ.ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ, ಬಸವಣ್ಣ.ಎನ್ನ ಮನಕ್ಕೆ ಜಂಗಮಲಿಂಗವಾದಾತ, ಬಸವಣ್ಣ.ಎನ್ನ ಜೀವಕ್ಕೆ ಪ್ರಸಾದಲಿಂಗವಾದಾತ,…




Total views : 67066