ಹೊರಗಲ್ಲ; ಒಳಗೇ ಇದೆ ಎಲ್ಲ! (ವಿಕಾಸವಾದದ ಅರ್ಥವನ್ನು ಧ್ವನಿಸುವ ವಚನ) / ಡಾ. ಬಸವರಾಜ ಸಾದರ, ಬೆಂಗಳೂರು.
ನಾವಿರುವ ಈ ಸೃಷ್ಟಿ ನಿತ್ಯ ಪರಿವರ್ತನಶೀಲವಾದದ್ದು. ಪರಿವರ್ತನೆ ಜಗದ ಹಾಗೂ ವಿಜ್ಞಾನದ ಒಂದು ಮುಖ್ಯ ನಿಯಮ. ವಿಕಾಸವಾದದ ಮೂಲ ಚಹರೆಯೇ ಪರಿವರ್ತನೆ. ಇಂಥ ಪರಿವರ್ತನಾ ಪ್ರಕ್ರಿಯೆಯ ವೇಗವು ವಸ್ತು ಮತ್ತು ಜೀವಿಗಳ ಸ್ವರೂಪಗಳನ್ನು ಆಧರಿಸಿ ನಿಗದಿತವಾಗಿರುತ್ತದೆ. ಬದಲಾವಣೆ ಮತ್ತು ಬೆಳವಣಿಗೆ ಎರಡೂ ಅದರ ಅಭಿನ್ನ ಅಂಗಗಳಾಗಿದ್ದು, ಅವೆರಡೂ ಪರಸ್ಪರ ಪೂರಕ ಮತ್ತು ಪ್ರೇರಕ ಗತಿಯಲ್ಲಿಯೇ ನಡೆದಿರುತ್ತವೆ. ಈ ಕಾರಣಕ್ಕಾಗಿ ಅದರ ವೇಗ ಒಂದು ನಿಗದಿತ ನಿಯಂತ್ರಣಾ ಕ್ರಮದಲ್ಲಿರುತ್ತದೆ. ಬದಲಾಗುವುದರ ಮೂಲಕವೇ ಗತಿಶೀಲತೆಯನ್ನು ಸಾಧಿಸುವ ಕಾರಣಕ್ಕೆ ಅದು ತಕ್ಷಣ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ. ಒಂದು ವಸ್ತು ಅಥವಾ ಜೀವಿಯ…






Total views : 65585