ಶಿವಯೋಗ / ಶ್ರೀಮತಿ. ಸವಿತಾ ಮಾಟೂರ, ಇಳಕಲ್ಲ.

ವಚನ ಸಾಹಿತ್ಯ ಶರಣರು ಸಾರಿದ ಮೌಲ್ಯಯುತ, ಘನತೆವೆತ್ತ ಸತ್ಯ ಸಂದೇಶ. ಭಕ್ತಿ ಮಾರ್ಗದಿಂದ ಮುಕ್ತಿ ಮಾರ್ಗದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಯುಕ್ತ ರೂಪ. ಜಗದೊಂದಿಗೆ ಅನುಶೃತಗೊಂಡ ಜಗದ್ವಂದ್ಯ ಮಾರ್ಗ. “ಲಿಂಗ ಮಧ್ಯೆ ಜಗತ್ ಸರ್ವಂ” ಎಂಬಂತೆ ಲಿಂಗದಲ್ಲಿಯೆ ಸರ್ವವನ್ನು ಕಂಡವರು, ಲಿಂಗವೆ ಸಂಗಯ್ಯನನ್ನು ಸೇರುವ ಮಾರ್ಗವೆಂದು ಅರಿತವರು ನಮ್ಮ ಶರಣರು. ಲಿಂಗನಿಷ್ಟೆಯಿಂದಲೆ ಜಗಕೆ ಮಾದರಿಯಾದವರು. ಅರುಹಿನ ಕುರುಹು “ಲಿಂಗ”. ಲಿಂಗಸಾಮರಸ್ಯದಿ ಪರಶಿವನ್ನು ಕೂಡುವ ಪರಿಯೆ ತ್ರಾಟಕ ಯೋಗ. ಅದುವೆ ಶಿವಯೋಗ. “ಯೋಗ” ಎಂಬ ಪದವು “ಯುಜ್” ಎಂಬ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಅದಕ್ಕೆ ಕೂಟ (ಕೂಡುವದು, ಬೇರೆಯುವದು) ಎಂಬ…

0 Comments

ಶರಣರು ಕಂಡ ಶಿವರಾತ್ರಿ / ಅಮಂಗಳದಿಂದ ಮಂಗಳದ ಕಡೆಗೆ ಸಾಗುವುದೇ ಶಿವರಾತ್ರಿ

ನಾ ದೇವನಲ್ಲದೆ ನೀ ದೇವನೆ?ನೀ ದೇವನಾದಡೆ ಎನ್ನನೇಕೆ ಸಲಹೆ?ಆರೈದು ಒಂದು ಕುಡಿತೆ ಉದಕವನೆರೆವೆ,ಹಸಿವಾದಾಗ ಓಗರವನ್ನಿಕ್ಕುವೆ,ನಾ ದೇವ ಕಾಣಾ ಗುಹೇಶ್ವರಾ!(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-173/ವಚನ ಸಂಖ್ಯೆ-558) ಒಂದು ದೇವರ ಮೂರ್ತಿಯ ಎದುರಿಗೆ ನಿಂತು ಆ ದೇವರ ವಿಗ್ರಹಕ್ಕೆ ಸವಾಲು ಹಾಕಿರುವ ಅಲ್ಲಮಪ್ರಭುದೇವರ ವಚನ ಸಂಪೂರ್ಣವಾಗಿ ಪರಮ ಪೂಜ್ಯ ಶ್ರೀ. ಶ್ರೀ. ಶಿವಕುಮಾರ ಮಹಾಸ್ವಾಮಿಗಳಿಗೆ ಅನ್ವಯವಾಗುತ್ತದೆ. ಏಕೆಂದರೆ ಅವರು ಪ್ರತಿವರ್ಷ ಮಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಮತ್ತು ದಾಸೋಹ ನೀಡಿ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿ ಮಠಕ್ಕೆ ಬಂದ ಭಕ್ತರಿಗೆ ಆಶೀರ್ವಾದ ನೀಡುವುದರ ಜೊತೆಗೆ ಪ್ರಸಾದ…

0 Comments

ವಚನ ಸಾಹಿತ್ಯದಲ್ಲಿ ಮಹಿಳೆ ಮತ್ತು ಕುಟುಂಬ/ ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಪುರುಷನ ಮುಂದೆ ಮಾಯೆಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು.ಸ್ತ್ರೀಯ ಮುಂದೆ ಮಾಯೆಪುರುಷನೆಂಬ ಅಭಿಮಾನವಾಗಿ ಕಾಡುವುದು.ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯಮರುಳಾಗಿ ತೋರುವುದು.ಚನ್ನಮಲ್ಲಿಕಾರ್ಜುನನೊಲಿದ ಶರಣಂಗೆಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-98/ವಚನ ಸಂಖ್ಯೆ-278) ಮರ್ತ್ಯದ ಕತ್ತಲೆಯನ್ನು ಕಳೆದು ಅಜ್ಞಾನದಿಂದ ಸುಜ್ಞಾನದೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಮೃತದಿಂದ ಅಮೃತದೆಡೆಗೆ ನಡೆಸಿದ ನಾಡು ಕಂಡ ಚೇತನ ಶಕ್ತಿಗಳು ಬಸವಾದಿ ಶಿವಶರಣರು. ಮನುಷ್ಯತ್ವದ ನಿಜ ನೆಲೆಯನ್ನು ಅರುಹಿ, ಮಾನವತ್ವದ ಮಹಾಬೆಳಗಿನೊಳಗೆ ಸಕಲ ಚೇತನರನ್ನೂ ದೇವನನ್ನಾಗಿ ಕಂಡ ದಿವ್ಯಾತ್ಮರು, ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಭಕ್ತಿ ಚಳುವಳಿಯ ಮೂಲಕ ಸಮಾಜದಲ್ಲಿ ಸಮ ಸಮಾಜ ಕಟ್ಟಲು ಮುಂದಾದ ಹರಿಕಾರರು ಬಸವಾದಿ ಶಿವಶರಣರು…

1 Comment

ವೀರಗಂಟಿ ಶರಣ ಮಡಿವಾಳ ಮಾಚಿದೇವರು / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಒಬ್ಬ ರಾಜ ಮಡಿವಾಳ ಮಾಚಿದೇವರಿಗೆ ನಮಸ್ಕರಿಸುವ ದೃಶ್ಯವಿರುವ ಚಿತ್ರವನ್ನು ಸಾಮಾನ್ಯವಾಗಿ ಮಡಿವಾಳ ಬಾಂಧವರ ಮನೆಗಳಲ್ಲಿ ಮತ್ತು ವ್ಯವಹಾರ ಮಾಡುವ ಸ್ಥಳಗಳಲ್ಲಿ ಕಾಣಬಹುದು. ಶರಣರ ಬಟ್ಟೆಗಳನ್ನು ಬಿಟ್ಟರೆ ಮತ್ತೆ ಯಾರ ಬಟ್ಟೆಗಳನ್ನೂ ಮಡಿ ಮಾಡುವುದಿಲ್ಲ ಎಂಬುದು ಮಡಿವಾಳ ಮಾಚಿದೇವರ ಅಲಿಖಿತ ನಿಯಮ. ಹೀಗೆ ಒಂದು ಸಂದರ್ಭದಲ್ಲಿ ರಾಜ ಬಿಜ್ಜಳನಿಗೂ ಮತ್ತು ಮಡಿವಾಳ ಮಾಚಿದೇವರ ನಡುವೆ ಸಂಘರ್ಷವಾಗುತ್ತದೆ. ಬಿಜ್ಜಳನ ಸೈನಿಕರನ್ನೆಲ್ಲ ಸೆದೆಬಡಿದ ಮಡಿವಾಳ ಮಾಚಿದೇವರ ಶೌರ್ಯತನ ಮತ್ತು ಅವರ ದಿಟ್ಟ ನಿರ್ಧಾರ ತಿಳಿದು ರಾಜ ಕ್ಷಮೆ ಯಾಚಿಸುತ್ತಾನೆ. ಇಂಥ ದಿಟ್ಟ ಶರಣರು ನಮ್ಮ ಮಡಿವಾಳ ಮಾಚಿದೇವರು. ಅತ್ಯಂತ ಶ್ರೇಷ್ಠ ಕಾಯಕ…

0 Comments

ಹಾಲುಮತ ಕುಲಗುರು ಶ್ರೀ ರೇವಣಸಿದ್ದೇಶ್ವರರನ್ನು ಹೈಜಾಕ್‌ ಮಾಡಿರುವ ವೀರಶೈವರು: ಸತ್ಯದ ಅನಾವರಣ / ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು.

ಇದು ಹಾಲುಮತ ಕುಲಗುರು, ಶಾಂತ ಸಿಂಹಾಸನಾರೂಢ ಶ್ರೀ ರೇವಣಸಿದ್ದೇಶ್ವರ ಮಹಾಸಂಸ್ಥಾನ ಮಠ, ಸರವೂರು ಶಾಖಾ, ಅಣತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ, ಇದಕ್ಕೆ ಸಂಬಂಧಿಸಿದ ತಾಮ್ರಪಟ್ಟಿಕೆ. ಚರಿತ್ರೆಯಲ್ಲಿ ಸುಳ್ಳನ್ನು ಕೂಡಾ ರಾಜಠಸ್ಸೆಯೊಂದಿಗೆ ನಿಜವೆಂದೇ ನಂಬಿಸುವ ಯಡವಟ್ಟುಗಳು ಕೂಡಾ ನಡೆದಿವೆ ಎಂಬುದಕ್ಕೆ ಈ ತಾಮ್ರಬಿಲ್ಲೆಯೇ ಸಾಕ್ಷಿಯಾಗಿದೆ. ಕುರುಬರ ಕುಲಗುರು ಶ್ರೀ. ರೇವಣಸಿಸಿದ್ಧೇಶ್ವರರನ್ನು ಹೈಜಾಕ್ ಮಾಡಿಕೊಂಡು ಶ್ರೀ ರೇಣುಕಾಚಾರ್ಯ ಎಂದು ಅಯೋನಿಜ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿ ಪುರಾಣವನ್ನೇ ಹೊಸೆಯಲಾಗಿದೆ. ದಕ್ಷಿಣ ಕರ್ನಾಟಕದ ಕುರುಬರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ವೀರಶೈವರ ಪಂಚಾಚಾರ್ಯರಿಗೆ ಪರಭಾರೆ ಮಾಡಿದ ಧರ್ಮಪೀಠದ ಸತ್ಯವನ್ನು ಈ ತಾಮ್ರಬಿಲ್ಲೆಯು…

0 Comments

ಮಹೇಶ್ವರಸ್ಥಲ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಧಾರ್ಮಿಕ ಮತ್ತು ವೈಚಾರಿಕ ನಿರ್ಣಯಗಳ ಒಟ್ಟು ಮೊತ್ತ ಮಹೇಶ್ವರಸ್ಥಲದಲ್ಲಿದೆ. ನಿಷ್ಠೆಯಿಂದ ಕೂಡಿದ ಭಕ್ತಿ. ಧರ್ಮದ ಕೊಡುಗೆ ಸುಬುದ್ದಿಯ ಮೂಲಕ ವೀರ ವ್ರತಾಚರಣೆಯನ್ನು ಗುರು-ಲಿಂಗಕ್ಕೆ ಅರ್ಪಿಸುವ ಉಪಾಸನೆಯನ್ನು ಮಹೇಶ್ವರಸ್ಥಲದಲ್ಲಿ ಮಾಡಬೇಕಾಗುತ್ತದೆ. ಮಹೇಶ್ವರನು ಸುಳ್ಳು ಹೇಳುವುದಿಲ್ಲ, ಆಚಾರವನ್ನು ಬಿಡುವುದಿಲ್ಲ. ಇತರರನ್ನು ಹಿಂಸಿಸುವುದಿಲ್ಲ. ಪರಧನ, ಪರಸ್ತ್ರೀ, ಪರನಿಂದೆಗಳನ್ನು ಸಹಿಸದ ಭಕ್ತನಾಗಿರಬೇಕು. ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ ಮೌಲ್ಯಗಳನ್ನು ಅಪ್ಪಿಕೊಳ್ಳಬೇಕು. ಶುದ್ಧ ಮನಸ್ಸುಳ್ಳ ಮಹೇಶ್ವರಸ್ಥಲದಲ್ಲಿ ಮನ ಮತ್ತು ಇಂದ್ರಿಯ ಬೇರೆಡೆಗೆ ಹೋಗದಂತೆ ಗಟ್ಟಿಯಾಗಿ ಹಿಡಿದಿಡುವ ಪ್ರಯತ್ನ ಈ ಸ್ಥಲದಲ್ಲಿದೆ. ಲಿಂಗದಲ್ಲಿ ಪ್ರೇಮ, ಜಂಗಮದಲ್ಲಿ ದಾಸೋಹ, ಗುರು ಪೂಜೆಯಲ್ಲಿ ಪರಮ ನಿಷ್ಠೆಗಳನ್ನು ಹೊಂದಿದ ಭಕ್ತನಾಗಿರಬೇಕು.…

0 Comments

ಶರಣ ಕಿನ್ನರಿ ಬ್ರಹ್ಮಯ್ಯನವರ ಬದುಕು ಬರಹ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.(ಶರಣ ಕಿನ್ನರಿ ಬ್ರಹ್ಮಯ್ಯನವರ ಸ್ಮರಣೋತ್ಸವದ ತನ್ನಿಮಿತ್ಯ ಈ ಲೇಖನ)

ಕಿನ್ನರಿ ಬ್ರಹ್ಮಯ್ಯನವರು 12 ನೇ ಶತಮಾನದ ಶರಣ ಸಮೂಹದಲ್ಲಿ ಗುರುತಿಸಿಕೊಂಡಂಥ ಶರಣರು. ಇವರ ಹುಟ್ಟೂರು ಈಗಿನ ತೆಲಂಗಾಣದ ಪೂಡೂರು ಅನ್ನುವಂಥ ಗ್ರಾಮ. ಇವರ ತಾಯಿ ಕಲಿದೇವಿ. ಇವರು ಅಕ್ಕಸಾಲಿಗ ವೃತ್ತಿಯನ್ನು ಕೈಗೊಂಡಿರುತ್ತಾರೆ. ಅದರ ಜೊತೆ ಜೊತೆಗೆ ದಾಸೋಹವನ್ನು ಕೂಡ ಮಾಡುತ್ತಿರುತ್ತಾರೆ. ಒಮ್ಮೆ ತೂಕದಲ್ಲಿ ಚಿನ್ನವನ್ನು ಕಡಿಮೆ ತೂಗಿ ಮೋಸ ಮಾಡಿದ್ದಾರೆ ಅನ್ನುವ ಆಪಾದನೆಗೊಳಗಾದರು. ಆಗ ಇದು ಆ ಶಿವನದೇ ಇಚ್ಛೆ ಆಗಿರಬೇಕು ಎಂದು ಅಕ್ಕಸಾಲಿಗ ಕಾಯಕವನ್ನು ಬಿಟ್ಟು ಕಿನ್ನರಿ ಬಾರಿಸುವ ಕಾಯಕವನ್ನು ಕೈಗೊಳ್ಳುವರು. ಬಸವಣ್ಣನವರ ಹಿರಿಮೆಯ ಬಗೆಗೆ ಸಾಕಷ್ಟು ಕೇಳಿ ಅವರನ್ನು ಕಾಣಲು ಕಲ್ಯಾಣಕ್ಕೆ ಬಂದು ತ್ರಿಪುರಾಂತಕೇಶ್ವರ…

0 Comments

ಅಣ್ಣನು ನಮ್ಮ ಬೊಮ್ಮಯ್ಯ | ಡಾ. ಶಿವಗಂಗಾ ರಂಜಣಗಿ, ಹುನಗುಂದ.(ಶರಣ ಕಿನ್ನರಿ ಬ್ರಹ್ಮಯ್ಯನವರ ಸ್ಮರಣೋತ್ಸವದ ತನ್ನಿಮಿತ್ಯ ಈ ಲೇಖನ)

12 ನೇ ಶತಮಾನ ಒಂದು ಅದ್ಭುತ ಕಾಲ ಘಟ್ಟ. ಶರಣರ ನಡೆ - ನುಡಿ - ವಚನ ಪ್ರತಿಯೊಂದು ಆದರ್ಶ. ದೊರೆತಿರುವ ಆಧಾರಗಳು ಕೆಲವಾದರೆ ಕಾಲ ಗರ್ಭದಲ್ಲಿ ಅಡಗಿರುವ ಸತ್ಯಾಂಶಗಳೆಷ್ಟೋ ಇವೆ. ಯಾವುದೇ ಶರಣರು ತಮ್ಮ ಜೀವನವನ್ನು ಕುರಿತು ಹೇಳಿಕೊಂಡಿಲ್ಲ ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು, ವ್ಯಕ್ತಿಗಿಂತ ಸಮಾಜದ ಹಿತ ದೊಡ್ಡದು. ಶರಣರು ಸರ್ವರ ಏಳಿಗಾಗಿ ಸರ್ವೋದಯದ ತತ್ವವನ್ನು ಅಳವಡಿಸಿಕೊಂಡವರು. ಬಸವಾದಿ ಶರಣರು “ಇರುವ ಕೆಲಸವ ಮಾಡು ಕಿರಿದೆನದೆ, ದೊರೆತುದುದು. ಪ್ರಸಾದವೆಂದುಣ್ಣು” ಎಂಬ ನುಡಿಯಂತೆ ಕೈಲಾಸಕ್ಕಿಂತ ಕಾಯಕವನ್ನು ದೊಡ್ಡದನ್ನಾಗಿ ಮಾಡಿಕೊಂಡಿದ್ದರು. ಅವರ ಕಾಯಕದಿಂದಲೇ ಶರಣರನ್ನು ಗುರುತಿಸುತ್ತೇವೆ. ಅನೇಕ ಶರಣರ…

0 Comments

ಶರಣ ಮಡಿವಾಳ ಮಾಚಿದೇವರ ವಚನಗಳಲ್ಲಿ ಲಿಂಗಾಚಾರ/ಡಾ. ಸರ್ವಮಂಗಳ ಸಕ್ರಿ.ರಾಯಚೂರು.

ವಚನ ಸಂಸ್ಕತಿಯನ್ನು ಗ್ರಹಿಸುವ ಹಿನ್ನೆಲೆಯಲ್ಲಿ ಧರ್ಮದ ಒಳ ಸೂಕ್ಷ್ಮಗಳು ಮತ್ತು ಭಕ್ತಿ ಸಿದ್ದಾಂತಗಳು ನಮಗೆ ಮುಖಾಮುಖಿಯಾಗುತ್ತವೆ. ನಿಜವಾದ ಅರ್ಥದಲ್ಲಿ ಧರ್ಮವೆಂಬುದು ಆದರ್ಶಗಳ ಮೊತ್ತ. ಮಾನವ ಜನಾಂಗದ ಆದರ್ಶಗಳು ಧರ್ಮ ತತ್ವಗಳ ನೆಲೆಯಲ್ಲಿ ಮಾತನಾಡುತ್ತವೆ. ಉದಾರತೆ, ಸಮತಾ ಭಾವ, ಮಾನವೀಯತೆ ಸಕಲರನ್ನು ಒಂದೇ ಎಂದು ಭಾವಿಸುವ ಗುಣ ಶರಣ ಧರ್ಮಕ್ಕೆ ಇರುವ ವಿಶೇಷತೆ. ಧರ್ಮ ಸಾಧನೆಯ ಪ್ರಮುಖ ಉದ್ದೇಶ ಹೊಂದಿದ ಶರಣರು ಲಿಂಗಾಚಾರಕ್ಕೆ ಲಿಂಗಾಂಗ ಸಾಮರಸ್ಯವೆಂದು ಕರೆದರು. ಇಷ್ಟಲಿಂಗವೇ ಆಂತರಿಕ ಪರಮ ಸಾಧನೆ ಎಂದರು. ಧಾರ್ಮಿಕ ಸಾಧನೆಯ ಅರಂಭದಿಂದ ಕೊನೆಯ ಹಂತದವರೆಗೂ ಇಷ್ಟಲಿಂಗ ಅವಿಬಾಜ್ಯ ಅಂಗವಾಯಿತು. ಹೀಗಾಗಿ ಇಷ್ಟಲಿಂಗ…

0 Comments

ಮಹಾ ಪ್ರಸಾದಿ ಶರಣ ಮರುಳಶಂಕರದೇವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಆಕಾರವೆಂಬೆನೆ ನಿರಾಕಾರವಾಗಿದೆನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.ತನ್ನನಳಿದು ನಿಜವುಳಿದಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡುಬದುಕಿದೆನು ಕಾಣಾ ಸಂಗನಬಸವಣ್ಣಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-26/ವಚನ ಸಂಖ್ಯೆ-50) ಶರಣ ಕಿನ್ನರಿ ಬ್ರಹ್ಮಯ್ಯನವರ ಈ ವಚನ ಶರಣ ಮರುಳಶಂಕರದೇವರ ಘನವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಫಲಶೃತಿಯಿಂದ ಹಲವಾರು ಶರಣರು ವಿವಿಧ ಸ್ಥಳಗಳಿಂದ ಕಲ್ಯಾಣಕ್ಕೆ ಆಗಮಿಸಿದ್ದರು. ಹೀಗೆ ಆಗಮಿಸಿದ ಶರಣರಲ್ಲಿ ಅಫಘಾನಿಸ್ತಾನದಿಂದ ಬಂದ ಮರುಳಶಂಕರದೇವರು ಪ್ರಮುಖರು. ಕಲ್ಯಾಣದ ಮಹಾಮನೆಯಲ್ಲಿ ಅಜ್ಞಾತವಾಗಿ ಬದುಕಿದ್ದ ಶರಣ ಮರುಳಶಂಕರದೇವರನ್ನು ವ್ಯೋಮಮೂರ್ತಿ ಅಲ್ಲಮ ಪ್ರಭುಗಳು ಗುರುತಿಸುತ್ತಾರೆ. ಅಲ್ಲಮ ಪ್ರಭುಗಳ ಒಂದು ವಿಶೇಷತೆ ಅಂದರೆ ಅವರ ಲೋಕ…

0 Comments