ಅಕ್ಕನ ಆಧ್ಯಾತ್ಮಿಕ ಆದರ್ಶ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ಭಾರತೀಯ ಭಕ್ತಿ ಸಾಹಿತ್ಯದ ಪರಂಪರೆಯಲ್ಲಿ ವಚನ ಸಾಹಿತ್ಯಕ್ಕೆ ತನ್ನದೇ ಆದ ಹೆಗ್ಗಳಿಕೆ ಇದೆ. ಚಂಪೂ ಸಾಹಿತ್ಯದ ನಂತರ ಸಾಮಾನ್ಯರಿಗೂ ಅರ್ಥವಾಗುವ ದೇಸೀ ಭಾಷೆಯಲ್ಲಿ ಸಮಾಜದ ಹತ್ತಿರಕ್ಕೆ ತಂದವರೆಂದರೆ ವಚನಕಾರರು. ಶರಣರ ನೇರ, ಸರಳ, ಭಕ್ತಿ ನಿಷ್ಠೆ ಈ ಎಲ್ಲಾ ಮೌಲ್ಯ ಆದರ್ಶಗಳು ವಚನ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾದ್ಯ. ಈ ಕಾಲ ಕ್ರಾಂತಿಯುಗವೂ ಹೌದು. ಭಕ್ತಿ ಚಳುವಳಿಯ ಕಾಲವೂ ಹೌದು. ಅಂದು ಭಾರತೀಯ ಚರಿತ್ರೆಯಲ್ಲಿ ನಿರಂತರವಾಗಿ ಮಹಿಳಾ ಶೋಷಣೆಗೆ ಒಳಗಾದ ಸಂದರ್ಭದಲ್ಲಿ ಅಕ್ಕ ಮಹಾದೇವಿ ಸ್ಥ್ರೀ ಶಕ್ತಿ ಪ್ರತೀಕವಾಗಿ ಪುರುಷ ಪ್ರಧಾನ ವ್ಯವಸ್ತೆಯನ್ನು ಕೆಡವಿ ಹೊಸ ಮುನ್ನುಡಿಗೆ…