ಬಸವಣ್ಣನವರ ದೃಷ್ಟಿಯಲ್ಲಿ ದೇವರು / ಶ್ರೀಮತಿ. ಹಮೀದಾ ಬೇಗಂ ದೇಸಾಯಿ, ಸಂಕೇಶ್ವರ.

ಬಸವಣ್ಣನವರು ವಿಶ್ವದ ಮಹಾನ್‌ ಚಿಂತಕರ ಗುಣ ವಿಶೇಷಗಳನ್ನೆಲ್ಲ ತಮ್ಮ ವ್ಯಕ್ತಿತ್ವದಲ್ಲಿ ಸಮಷ್ಟಿಗೊಳಿಸಿಕೊಂಡ ಮಹಾನ್ ಚೇತನ. ಆರ್ಥರ್ ಮೈಲ್ಸ್ ಹೇಳುವಂತೆ: ಅವರು 'ಭಾರತದ ಪ್ರಪ್ರಥಮ ಸ್ವತಂತ್ರ ವಿಚಾರವಾದಿ'. ಬುದ್ಧನ ದಯೆ, ಮಹಾವೀರನ ಅಹಿಂಸೆ, ಕ್ರಿಸ್ತನ ಮಾನವ ಪ್ರೇಮ, ಗಾಂಧೀಜಿಯವರ ಸಾಮಾಜಿಕ ಚಿಂತನೆ, ಮಾರ್ಕ್ಸ್ ನ ಆರ್ಥಿಕ ನೀತಿ - ಈ ಎಲ್ಲವನ್ನೂ ಏಕೀಭವಿಸಿಕೊಂಡ ವಿಶೇಷತೆ ಬಸವಣ್ಣನವರದು. ಅವರ ಎರಡು ಆಶಯಗಳು ಸ್ವಾತಂತ್ರ್ಯ ಮತ್ತು ಸಮಾನತೆ ಅವರನ್ನು ಸಮಾಜ ಸುಧಾರಕ ಅನ್ನುವದಕ್ಕಿಂತ 'ಸಮಾಜ ಪರಿವರ್ತಕರು ' ಅನ್ನುವುದು ಸೂಕ್ತ. ಶರಣರ ತತ್ವಜ್ಞಾನ ಅವಿನಾಶವಾದ ಚೈತನ್ಯ ಮತ್ತು ನಾಶವಾಗದಂತಹ ವಸ್ತುವಿನ ಕುರಿತು…

0 Comments

ಚಿನ್ಮಯಜ್ಞಾನಿ ಚನ್ನಬಸವಣ್ಣನವರು./ಡಾ. ವಿಜಯಕುಮಾರ ಕಮ್ಮಾರ.

ಕಂಗಳ ನೋಟ ಹೃದಯದ ಜ್ಞಾನ,ಮನದೊಳಗೆ ಮಾತನಾಡುತಿರ್ದೆನಯ್ಯಾ!ಜೇನ ಮಳೆಗಳು ಕರೆದವು,ಅಮೃತದ ಬಿಂದುಗಳು ಸುರಿದವು.ಕೂಡಲಚೆನ್ನಸಂಗನೆಂಬರಸಸಾಗರದೊಳಗೋಲಾಡುತಿರ್ದೆನಯ್ಯಾ.(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-507/ವಚನ ಸಂಖ್ಯೆ-1111) 12 ನೇಯ ಶತಮಾನದಲ್ಲಿ ಅದ್ಭುತವಾದ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಕ್ರಾಂತಿಯೊಂದು ನಡೆಯಿತು. ಈ ಕ್ರಾಂತಿಯನ್ನು ಹುಟ್ಟುಹಾಕಿದವರು ಬಸವಣ್ಣನವರು. ಬಸವಣ್ಣನವರು ನಡೆ-ನುಡಿ ಸಿದ್ಧಾಂತಕ್ಕೆ ಶಕ್ತಿಯಾದರೆ, ಅಲ್ಲಮಪ್ರಭುದೇವರು ಜ್ಞಾನ ವೈರಾಗ್ಯಕ್ಕೆ ಶಕ್ತಿಯಾದರು. ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನವರು ಅರಿವಿನ ಜ್ಞಾನಕ್ಕೆ ಭಾಷ್ಯವಾಗಿ ಜೀವಿಸಿದರು. ಬಸವಣ್ಣ, ಚನ್ನಬಸವಣ್ಣ, ಅಲ್ಲಮ ಪ್ರಭುಗಳು ಶರಣ ಸಂಸ್ಕೃತಿಯ ಮೂರು ಮುಖ್ಯ ಅಂಗಗಳಾಗಿ ಕೈಂಕರ್ಯಗೊಳ್ಳುತ್ತಾರೆ. ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಒತ್ತುಕೊಟ್ಟರೆ, ಅಲ್ಲಮರು ಆಧ್ಯಾತ್ಮಿಕ ಚಿಂತನೆಗೆ ಒತ್ತುಕೊಟ್ಟರು. ಚನ್ನಬಸವಣ್ಣನವರು ಲಿಂಗಾಯತ…

0 Comments

ಪ್ರಾಣಲಿಂಗಿ ಸ್ಥಲ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಂತರಂಗದೊಳಗಿರ್ದ ನಿರವಯಲಿಂಗವನುಸಾವಯವ ಲಿಂಗವ ಮಾಡಿ,ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,ಆ ಇಷ್ಟಲಿಂಗವೆ ಅಂತರಂಗವನಾವರಿಸಿಅಂತರಂಗದ ಕರಣಂಗಳೆ ಕಿರಣಂಗಳಾಗಿಬೆಳಗುವ ಚಿದಂಶವೆ ಪ್ರಾಣಲಿಂಗವು,ಆ ಮೂಲಚೈತನ್ಯವೆ ಭಾವಲಿಂಗವು.ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿಅಖಂಡ ಪರಿಪೂರ್ಣವಪ್ಪ ನಿಜವು ತಾನೆ,ಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-280 / ವಚನ ಸಂಖ್ಯೆ-971) ಅಂತರಂಗದೊಳಗೆ ನೆಲೆಗೊಂಡ ನಿರಾಕಾರವಾದ ಲಿಂಗವನ್ನು ಸಾಕಾರ ರೂಪದ ಲಿಂಗವ ಮಾಡಿ ಶ್ರೀಗುರುಸ್ವಾಮಿ ಕರಸ್ಥಲದಲ್ಲಿ ಇಷ್ಟಲಿಂಗ ರೂಪದಲ್ಲಿ ತಂದು ಕೊಟ್ಟನು. ಸಾಧಕ ಅಥವಾ ಶರಣ ಗುರುಮುಖವಾಗಿ ಬಂದ ಆ ಇಷ್ಟಲಿಂಗವನ್ನು ಪೂಜಿಸುತ್ತಾ ಪೂಜಿಸುತ್ತಾ ಮತ್ತೆ ಆ ಲಿಂಗವನ್ನು ತನ್ನ ಅಂತರಂಗದೊಳಗೆ ನೆಲೆಗೊಳಿಸುತ್ತಾನೆ. ಹೀಗೆ…

0 Comments

ಪ್ರಾಮಾಣಿಕ ಸತ್ಯ ಸಾಧಕಿ ಶರಣೆ ಸತ್ಯಕ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಕ್ಕಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ತಮ್ಮ ಮುಕ್ತ ಮನಸ್ಸಿನಿಂದ, ಸ್ವತಂತ್ರ ಆಲೋಚನೆಗಳಿಂದ ಎಲ್ಲರೂ ಬೆರಗಾಗುವಂತೆ ವಚನಗಳನ್ನು ರಚನೆ ಮಾಡಿದ್ದಾರೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗ್ರತ, ನವ ಸಾಕ್ಷರತೆಯ ಅರಿವನ್ನ ಮೂಡಿಸಿ ಸುಮಾರು 39 ಕ್ಕೂ ಹೆಚ್ಚು ಜನ ಶರಣೆಯರಿಗೆ ವಚನ ರಚನೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಬಸವಣ್ಣನವರ ಈ ಕ್ರಾಂತಿಯು ಶ್ರೇಣಿಕೃತ ಸಮಾಜದಲ್ಲಿನ ದೀನ-ದಲಿತರನ್ನು ಮೇಲೆತ್ತುವದರ ಜೊತೆಗೆನ ಕಡೆಗಣಸಲ್ಪಟ್ಟಿದ್ದ ಮಹಿಳೆಯರನ್ನು ಉದ್ಧಾರ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಕರೆ ತರುವದಾಗಿತ್ತು. ಮಹಿಳೆಯರು ಮನೆ…

0 Comments

ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನ ವಿಶ್ಲೇಷಣೆ / ಅರಸಿ ತೊಳಲಿದಡಿಲ್ಲ ಹರಸಿ ಬಳಲಿದಡಿಲ್ಲ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ,ಬಯಸಿ ಹೊಕ್ಕಡಿಲ್ಲ, ತಪಸ್ಸು ಮಾಡಿದಡಿಲ್ಲ.ಅದು ತಾನಹ ಕಾಲಕ್ಕಲ್ಲದೆ ಸಾದ್ಯವಾಗದುಶಿವನೊಲಿದಲ್ಲದೆ ಕೈಗೂಡದುಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕುದೆನು.(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-19 / ವಚನ ಸಂಖ್ಯೆ-40) ವಚನ ಸಾಹಿತ್ಯದಲ್ಲಿ ಮಹಿಳೆ ಎಂದರೆ ಪ್ರಪ್ರಥಮವಾಗಿ ಅಕ್ಕಮಹಾದೇವಿ ನೆನಪಾಗುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಪ್ರಥಮ ಕ್ರಾಂತಿಯ ರೂವಾರಿ. ಶರಣೆಯರ ಅಭಿವ್ಯಕ್ತತೆ. ಅಕ್ಷರ ಸಂಸ್ಕೃತಿಯ ಮೇರುತನವನ್ನು ಬಿಂಬಿಸುವಲ್ಲಿ ಅಕ್ಕನ ಪಾತ್ರ ಹಿರಿದಾಗಿದೆ. ಈ ವಚನದಲ್ಲಿ ಅರಸಿ ಮುಖ್ಯವಾದರೂ ಶರಣರ ಕಾಲದ ನಿಷ್ಠುರತೆಯನ್ನು ವಿಶಿಷ್ಟ ವೈಚಾರಿಕತೆಯ ಅನಿವಾರ್ಯತೆಯನ್ನು ಬಿಂಬಿಸುತ್ತದೆ. ಅರಸಿಯಾದವಳು ತನ್ನ ಪ್ರಜೆಗಳ ಒಡನಾಟದಲ್ಲಿ…

0 Comments

ಮರಳುಸಿದ್ದೇಶ್ವರ ಮತ್ತು ಅಕ್ಕಮಹಾದೇವಿ / ಡಾ. ಸುಜಾತಾ ಅಕ್ಕಿ, ಮೈಸೂರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನಯುಗ ವಿಶ್ವಕ್ಕೆ ಮಾದರಿ. ಕನ್ನಡದ ಸಾಂಸ್ಕೃತಿಕ ಚರಿತ್ರೆಯು ಎಷ್ಟೋ ಲಿಪಿ ಮತ್ತು ಲಿಪಿರಹಿತ ಭಾಷೆಗಳ ಪ್ರಭಾವವನ್ನು ಮೀರಿದುದಾಗಿದೆ. ಶೈವ ಮತ್ತು ವೈಷ್ಣವ ಪರಂಪರೆಗಳು ಬೆಳೆಯುತ್ತ ಬಂದಂತೆಲ್ಲಾ ಸ್ಥಾವರವನ್ನು ಪಡೆದು ಶಿಲ್ಪ ಕಲೆ ಸಂಗೀತ ಸಾಹಿತ್ಯದಂತಹ ಏಳು ಲಲಿತ ಕಲೆ ಮತ್ತು ನವರಸಗಳನ್ನು ಮೇಳೈಸಿಕೊಂಡು ಪರಂಪರೆಯಲ್ಲಿ ಸಾಕಾರಗೊಂಡವು. ಬೀದಿಯ ಕೂಸಾಗಿ ಬೆಳೆದ ಕನ್ನಡ ಇಂದು ವಿಶ್ವ ಸಾಹಿತ್ಯದಲ್ಲಿ ಗುರುತಿಸಲ್ಪಟ್ಟು ಇಂಗ್ಲೆಂಡ್ ನಲ್ಲಿ ನಗರದ ಲ್ಯಾಂಬೆತ್ ನದಿಯ ದಂಡೆಯಲ್ಲಿ ವಿಶ್ವ ಪ್ರಥಮ ಸಂಸತ್ತಿನ ರೂವಾರಿಯಾಗಿ ಮೂರ್ತ ಸ್ವರೂಪದಲ್ಲಿ ವಿರಾಜಿಸುತ್ತಿದ್ದಾನೆ. ಕನ್ನಡದ ಹೆಮ್ಮೆಯ ಕನ್ನಡಿಗ. ಇಂದು ವಿಜಯಪುರದ…

0 Comments

LALLESHWARI – The light of wisdom in Kashmir Valleyand AKKAMAHADEVI – Treasure of Asceticism. A Comparative Analysis.

Jammu Kashmir is the land of many thinkers, rulers, ascetics, poets, philosophers, spiritualists, and saints. It has also been a center of various social and religious think tanks. We can get the information in the book “Rajatarangini” written by Kalhana, about the most admirable personalities of Kashmir. There is also a long list of women personalities and saints from Jammu Kashmir, who…

0 Comments

ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನಗಳಲ್ಲಿ “ಮಾಯೆ” / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಹೆಣ್ಣು ಸಂಸಾರದ ಕಣ್ಣು ಎನ್ನುವಂತೆ, ಆಕೆ ತಾಳ್ಮೆಯ ಪ್ರತಿರೂಪ. ಹಾಗೆಯೇ ಶಕ್ತಿಯ ಸಂಕೇತದ ಉಗ್ರರೂಪಕ್ಕೂ ಸಾಕ್ಷಿಯಾಗಿದ್ದಾಳೆ. ಕ್ಷಮಯಾ ಧರಿತ್ರಿಯಾದರೂ ಚಂಚಲತೆಯ ಸ್ವಭಾವವುಳ್ಳವಳೂ ಸಹ. 12 ನೇ ಶತಮಾನದ ಸಮಾಜದಲ್ಲಿ ಬಸವಣ್ಣನವರಿಂದ ಶ್ರೇಣೀಕೃತ ಸಮಾಜದಲ್ಲಿನ ದೀನ ದಲಿತರನ್ನು ಮೇಲೆತ್ತುವುದರ ಜೊತೆ ಜೊತೆಗೆ ಕಡೆಗಣಿಸಲ್ಪಟ್ಟ ಮಹಿಳೆಯರನ್ನು ಬೆಳಕಿಗೆ ತರುವಂಥಾ ಕೆಲಸ ಆಯಿತು. ಬಸವಣ್ಣನವರ ಈ ಕ್ರಾಂತಿಯಲ್ಲಿ ಕರ್ನಾಟಕವು ಅಭೂತಪೂರ್ವ ಅನುಪಮ ಮಹಿಳಾ ವಚನಕಾರ್ತಿಯರನ್ನು ಕಂಡಿತು. ಪುರುಷರಿಗೆ ಸರಿ ಸಮಾನರಾಗಿ ಸಾಮಜೋ-ಧಾರ್ಮಿಕ ಮತ್ತು ಸಾಹಿತ್ಯ ಕೇತ್ರಗಳಲ್ಲಿ ಪಾಲ್ಗೊಂಡರು. ಆಧ್ಯಾತ್ಮಿಕ ಅನುಭಾವದ ಅಭಿವ್ಯಕ್ತಿಯಲ್ಲಿ ಶರಣೆಯರು ಯಾರಿಗೂ ಕಡಿಮೆಯಿಲ್ಲದಂತೆ ಕೆಲಸ ಮಾಡಿದರು. ಮಹಿಳೆಯರಿಗೆ ಗೌರವ…

0 Comments

ಸಾಂಸ್ಕೃತಿಕ ನಾಯಕ ಬಸವಣ್ಣನವರು / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಹೊತ್ತಾರೆ ಎದ್ದು, ಅಗ್ಫವಣಿ ಪತ್ರೆಯ ತಂದು,ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು?ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನತೊತ್ತುಗೆಲಸವ ಮಾಡು ಕೂಡಲಸಂಗಮದೇವನ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-24 / ವಚನ ಸಂಖ್ಯೆ-172) Pre-Classic ಯುಗದಿಂದಲೂ ಅಂದರೆ 3/4/5 ನೇ ಶತಮಾನದಿಂದಲೂ ಭಕ್ತ ಮತ್ತು ಭಗವಂತನ ನಡುವಿನ ಸಂಬಂಧವನ್ನು ಕಂಡುಕೊಳ್ಳಲು ಸಂಸ್ಕೃತವನ್ನೇ ಅಪ್ಪಿಕೊಳ್ಳಲಾಗಿತ್ತು ಮತ್ತು ಬಳಸಿಕೊಂಡು, ಆಡಿಕೊಂಡು ಬರಲಾಗಿತ್ತು. ಕನ್ನಡ ಭಾಷೆ ಮತ್ತು ಭಾಷಿಕರೂ ಕೂಡ ಸಂಸ್ಕೃತ ಭಾಷೆಯನ್ನು ಅವಲಂಬಿಸಿದ್ದ ಕಾಲವದು. ಈ ಅವಲಂಬನೆಯನ್ನು ಹಾಗೂ ಹುನ್ನಾರಗಳನ್ನು ಛಿದ್ರಗೊಳಿಸಿದ್ದು 12 ನೇ…

0 Comments

ಅರಿವಿನ ಮಾರಿತಂದೆ ಮತ್ತು ಅವನ ವಚನಗಳು / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ.

ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಅಧ್ಯಯನಗಳ ಮೂಲಕ ಅಷ್ಟಾಗಿ ಬೆಳಕಿಗೆ ಬಾರದ ಶರಣರಲ್ಲಿ ಅರಿವಿನ ಮಾರಿತಂದೆಯವರೂ ಕೂಡ ಒಬ್ಬರು. “ಸದಾಶಿವಮೂರ್ತಿಲಿಂಗ” ಎಂಬ ಅಂಕಿತದಿಂದ ವಚನಗಳನ್ನು ಬರೆದುದಾಗಿ ವಿದ್ವಾಂಸರು ಗುರುತಿಸಿದ್ದಾರೆ. ಸಮಗ್ರ ವಚನ ಸಂಪುಟ-2021 / ಸಂಕೀರ್ಣ ವಚನ ಸಂಪುಟ-6 ರಲ್ಲಿ ಅರಿವಿನ ಮಾರಿತಂದೆಯವರು ಬರೆದ 309 ವಚನಗಳನ್ನು ಡಾ.ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಡಾ. ಕೆ ರವೀಂದ್ರನಾಥ ಅವರ ಸಂಪಾದಕತ್ವದಲ್ಲಿ ಸಂಪಾದಿಸಿದ್ದಾರೆ. ಆದರೆ “ಈ ಶರಣರ ಬದುಕಿನ ವಿವರಗಳು ಸಾಕಷ್ಟು ಸಿಗುವುದಿಲ್ಲ” ಎಂಬ ಮಾತನ್ನು ಅವರು ಸೇರಿಸಿದ್ದಾರೆ. ಶರಣರ ಹೆಸರಿನ ಹಿಂದೆ ಇರುವ “ಅರಿವಿನ” ಎಂಬ…

0 Comments