ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆಧರೆ ಹತ್ತಿ ಉರಿದಡೆ ನಿಲಲುಬಾರದು.ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,ನಾರಿ ತನ್ನ ಮನೆಯಲ್ಲಿ ಕಳುವಡೆ,ತಾಯ ಮೊಲೆವಾಲು ನಂಜಾಗಿ ಕೊಲುವಡೆ,ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-26) 12 ನೇ ಶತಮಾನದಲ್ಲಿ ರಚನೆಯಾದ ಶರಣ ಸಾಹಿತ್ಯ ಅಥವಾ ವಚನ ಸಾಹಿತ್ಯವು 21 ನೇ ಶತಮಾನದಲ್ಲಿಯೂ ಕೂಡ ನಾವು ಬದುಕುತ್ತಿರುವ ಬದುಕಿನ ದಾರಿಗೆ ಮೌಲ್ಯಯುತವಾದ ಬೆಳಕನ್ನು ಚೆಲ್ಲುತ್ತಿರುವ ದಾರಿ ದೀಪಗಳಾಗಿವೆ. “ವ್ಯಕ್ತಿಗಳ ಪರಿವರ್ತನೆಯೇ ಸಮಾಜದ ಪರಿವರ್ತನೆ” ಎಂಬುದನ್ನು ಶರಣರು ತಮ್ಮ ಚಿಂತನೆಗಳ ಮೂಲಕ ತಮ್ಮ ನಡೆ-ನುಡಿ ಸಿದ್ಧಾಂತದ ಮೂಲಕ ಸಾಕ್ಷೀಕರಿಸಿದರು. ವಚನ ಸಾಹಿತ್ಯ…

0 Comments

ಅಲ್ಲಮಪ್ರಭುಗಳ “ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ” ವಚನ ವಿಶ್ಲೇಷಣೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ,ಮೇದು ಬಂದೆನೆಂದಡೆ,ಇದ ಕಂಡು ಬೆರಗಾದೆ.ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದಡೆ,ಇದ ಕಂಡು ಬೆರಗಾದೆ.ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ,ಇದ ಕಂಡು ಬೆರಗಾದೆ, ಗುಹೇಶ್ವರಾ(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-14/ವಚನ ಸಂಖ್ಯೆ-27) ಅಲ್ಲಮಪ್ರಭುಗಳ ಈ ಬೆಡಗಿನ ವಚನ ಮನುಷ್ಯ ಸ್ವಭಾವದ ಒಳ ಸೂಕ್ಷ್ಮತೆಗಳನ್ನು ಸ್ವಾರಸ್ಯಕರ ಮತ್ತು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಅಜ್ಞಾನದಲ್ಲಿ ಓಲಾಡುವ ಮನಸ್ಸಿಗೆ ಎಚ್ಚರಿಕೆ ಕೊಡುವ ಸಮರ್ಥನೆಯಾಗಿದೆ. ಆಧ್ಯಾತ್ಮದ ಬೆಳಕನ್ನು ಉಜ್ವಲಗೊಳಿಸುವ ಸಮರ್ಥನೆಯದು. ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಆ ಕಾಲದ ತಾತ್ವಿಕ ಪರಂಪರೆಗಳ ಅಸ್ತಿತ್ವ ಮತ್ತು ಅನಿರೀಕ್ಷಿತವಾದ ನಿಗೂಢತೆ…

0 Comments

ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ / ಶ್ರೀಮತಿ. ದೇವೇಂದ್ರಮ್ಮ, ರಾಯಚೂರು.

ಆಸೆಯೆಂಬುದು ಅರಸಿಂಗಲ್ಲದೆ,ಶಿವಭಕ್ತರಿಗುಂಟೆ ಅಯ್ಯಾ?ರೋಷವೆಂಬುದು ಯಮದೂತರಿಗಲ್ಲದೆ,ಅಜಾತರಿಗುಂಟೆ ಅಯ್ಯಾ?ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆದೂರ ಮಾರಯ್ಯ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-708) ಆಸೆ ಅನ್ನುವುದು ಅರಸನಾದ ಭವಿಗೆ ಇರತದ. ಅರಸನಿಗೆ ಈ ರಾಜ್ಯ ಗಳಿಸಿದರೆ ಇನ್ನೊಂದು ರಾಜ್ಯ ಗಳಿಸಬೇಕು. ಇನ್ನೊಂದು ರಾಜ್ಯ ಗಳಿಸಿದರೇ ಮಗದೊಂದು ರಾಜ್ಯದ ಅಧಿಕಾರ ನನ್ನ ಕೈಲಿ ಇರತದ, ಅಧಿಕಾರ ಇದ್ದರೇ ನನಗ ಮರ್ಯಾದೆ ಗೌರವ ಸಿಗತದ ಅನ್ನುವ ಭಾವನೆ ರಾಜನಿಗೆ ಇರುತ್ತದೆ. ಶಿವಭಕ್ತರಾದ ನಮಗ ಯಾಕೆ ಅಂತಹ ಆಸೆ? ಯಾವ ಅಧಿಕಾರ, ಆಸ್ತಿ, ದುಡ್ಡು, ಅನ್ಯಾಯದ ದುಡಿಮೆಯ ಆಸೆಯೂ ನಮಗೆ ಬೇಡ. ಸತ್ಯ ಶುದ್ಧ ಕಾಯಕದಿಂದ…

0 Comments

“ಸಾವಿರ ವ್ರತ-ಸಾಧನೆಯ ಫಲಗಳನ್ನೂ ಮಣ್ಣುಗೂಡಿಸುವ ಒಂದು ಹಾದರ” ಡಾ. ಬಸವರಾಜ ಸಾದರ,ಬೆಂಗಳೂರು.

ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾದ ‘ಕೆಲವು’ ಮಠಾಧಿಪತಿಗಳ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಮುಕ್ತ ಚರ್ಚೆ ನಡೆಯುತ್ತಿತ್ತು. ಸಹಜವಾಗಿಯೇ ಅಲ್ಲಿ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಅದರಲ್ಲಿ ಒಂದು ಪಕ್ಷದವರು ಅತ್ಯಾಚಾರಿ ಸ್ವಾಮಿಗಳನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದರೆ, ಮತ್ತೊಂದು ಕಡೆಯವರು ಅವರನ್ನೇ ಸಮರ್ಥಿಸಿಕೊಳ್ಳುತ್ತಿದ್ದರು. ಸಮರ್ಥನೆ ಮಾಡಿಕೊಳ್ಳುತ್ತಿದ್ದವರು ತಮ್ಮ ಮಾತುಗಳಿಗೆ ಕೊಡುತ್ತಿದ್ದ ಸಾಕ್ಷಿಗಳು ಅಚ್ಚರಿ ಮೂಡಿಸುವಂತಿದ್ದವು. ಕೆಲವೆಂದರೆ:• ಪಟ್ಟಾಭಿಷೇಕವಾದ ದಿನದಿಂದ ಈವರೆಗೂ ನಮ್ಮ ಸ್ವಾಮಿಗಳು ಮಾಡಿರುವ ಸಮಾಜೋಪಯೋಗಿ ಕೆಲಸಗಳು ಸಾವಿರಾರು.• ನೂರಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ.• ಉಚಿತ ಪ್ರಸಾದ ನಿಲಯಗಳನ್ನು ನಡೆಸುತ್ತಿದ್ದಾರೆ.• ನಿರಂತರ…

1 Comment

ಒಂದೇ ಶರೀರದ ಇತ್ತಲೆಯಲ್ಲಿ ಒತ್ತಲೆಗೆ ವಿಷ ಹಾಕಿದರೆ? / ಡಾ. ಬಸವರಾಜ ಸಾದರ, ಬೆಂಗಳೂರು.

ಸಮಾಜವಾದ ಎಂಬ ಶಬ್ದವನ್ನು ಬಳಸದೆ, ಆ ಸಿದ್ಧಾಂತಕ್ಕೆ ಸಮರ್ಥ ಉದಾಹರಣೆಯಾಗಬಲ್ಲ, ಸಮತೆಯುಕ್ತ ಸಮಾಜದ ನಿರ್ಮಾಣಕ್ಕೆ ಮೊದಲು ಮಾಡಿದರು 12 ನೇಯ ಶತಮಾನದ ಶರಣರು. ಇದು ಚಾರಿತ್ರಿಕ ವಾಸ್ತವ. ಸರ್ವರ ಹಿತವನ್ನು ಸಮಾನ ನೆಲೆಯಲ್ಲಿ ಸಾಧಿಸ ಹೊರಟ ಅವರ ಕ್ರಿಯಾತ್ಮಕ ನಡೆ ಎಲ್ಲ ಕಾಲಕ್ಕೂ ಮಾದರಿಯಾಗುವಂಥದ್ದು. ‘ವ್ಯಕ್ತಿ ಹಿತದಲ್ಲಿಯೇ ಸಮಾಜದ ಹಿತವಿದೆ’ ಎಂಬ ಪ್ರಾಯೋಗಿಕ ಸಿದ್ಧಾಂತವನ್ನು ಅನುಸರಿಸುವುದರ ಜೊತೆಗೆ, ಏಕಕಾಲದಲ್ಲಿ ವ್ಯಕ್ತಿ ಮತ್ತು ಸಮುದಾಯ ಎರಡರ ಹಿತವನ್ನೂ ಸಾಧಿಸ ಹೊರಟ ಅವರ ಒಟ್ಟು ಉದ್ದೇಶ ‘ಸಕಲಜೀವಾತ್ಮರ ಲೇಸನ್ನೇ ಬಯಸು’ ವುದಾಗಿತ್ತು. 20 ನೇಯ ಶತಮಾನದಲ್ಲಿ ಇದನ್ನೇ ಗಾಂಧೀಜೀಯವರ ‘ಸರ್ವೋದಯ’…

0 Comments

ಹೌದಪ್ಪಾ ಹೌದೋ ನೀನೇ ದೇವರೋ / ಡಾ. ಬಸವರಾಜ ಸಾದರ, ಬೆಂಗಳೂರು.

ದೇವರನ್ನು ಕುರಿತ ನಮ್ಮ ನಂಬಿಕೆ ಮತ್ತು ಪರಿಕಲ್ಪನೆಗಳು ವೈವಿಧ್ಯಪೂರ್ಣವಾಗಿರುವಂತೆ ವಿಚಿತ್ರತರವೂ ಆಗಿವೆ. ದೇವರು ಎಲ್ಲಿದ್ದಾನೆ? ಹೇಗಿದ್ದಾನೆ? ಅವನನ್ನು ಕಾಣುವುದು ಹೇಗೆ? ಎಂಬ ಅಸಂಖ್ಯ ಪ್ರಶ್ನೆಗಳಿಗೆ ತರಹೇವಾರಿ ಉತ್ತರಗಳು ಹೊರಡುತ್ತವೆ. ಸಾಮಾನ್ಯವಾಗಿ ಮನುಷ್ಯನು ದೇವರನ್ನು ತನಗಿಂತ ಭಿನ್ನವಾದ ಅವತಾರ, ಸ್ವರೂಪ ಮತ್ತು ಸ್ಥಳಗಳಲ್ಲಿ ಕಾಣುವುದೇ ಹೆಚ್ಚು. ಈ ಕಾರಣಗಳಿಂದಾಗಿಯೇ ದೇವರಿಗೆ ತರತರದ ರೂಪಗಳನ್ನು ಆರೋಪಿಸಿ, ಪೋಷಾಕುಗಳನ್ನು ತೊಡಿಸಿ, ಗುಡಿ, ಗುಂಡಾರ, ದೇವಾಲಯ, ಬಸದಿ, ಚರ್ಚುಗಳಂಥ ಇಮಾರತುಗಳನ್ನು ನಿರ್ಮಿಸಿ, ಅದರಲ್ಲಿ ಆತನನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಂಪರೆ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಇವೆಲ್ಲ ನಂಬಿಕೆಗಳ ಹಿಂದೆ ದೇವರು ನಮ್ಮಿಂದ ಅನ್ಯ ಮತ್ತು…

1 Comment

ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ “ತನುವ ತೋಂಟವ ಮಾಡಿ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ,ಅಗೆದು ಕಳೆದೆನಯ್ಯ ಭ್ರಾಂತಿಯ ಬೇರ.ಒಡೆದು ಸಂಸಾರದ ಹೇಂಟೆಯ,ಬಗಿದು ಬಿತ್ತಿದೆನಯ್ಯ ಬ್ರಹ್ಮ ಬೀಜವ.ಅಖಂಡ ಮಂಡಲವೆಂಬ ಭಾವಿ, ಪವನವೇ ರಾಟಾಳ,ಸುಷುಮ್ನನಾಳದಿಂದ ಉದಕವ ತಿದ್ದಿ,ಬಸವಗಳೈವರು ಹಸಗೆಡಿಸಿಹರೆಂದುಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,ಆವಾಗಳೂ ಈ ತೋಂಟದಲಿ ಜಾಗರವಿದ್ದುಸಸಿಯ ಸಲುಹಿದೆನು ಕಾಣಾ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-454 / ವಚನ ಸಂಖ್ಯೆ-1217) ಅಲ್ಲಮ ಪ್ರಭುಗಳು ಸಾಧನೆಯನ್ನ ನಿರೂಪಿಸಿರುವ ಈ ವಚನ ಸಾಧಕ ವೃಂದಕ್ಕೆನೇ ಆದರ್ಶಪ್ರಾಯವಾಗಿರುವ ದೃವ ನಕ್ಷತ್ರದಂತಿದೆ. ಈ ವಚನವನ್ನ ನೋಡಿದ ಕೂಡಲೆ ಕೃಷಿಗೆ ಸಂಬಂಧಿಸಿದ ವಚನ ಅನಿಸಿದರೂ ಕೂಡ ದೇಹವನ್ನೆ ತೋಟವನ್ನಾಗಿ ಮಾಡಿಕೊಂಡು ಹೇಗೆ…

0 Comments

ಪರಸ್ಪರಾವಲಂಬನ ಸಿದ್ಧಾಂತದ ವೈಜ್ಞಾನಿಕ ವಚನ / ಡಾ. ಬಸವರಾಜ ಸಾದರ, ಬೆಂಗಳೂರು.

ಸೃಷ್ಟಿಯ ಪ್ರತಿಯೊಂದು ವಸ್ತು ಮತ್ತು ಜೀವಿಯೂ ‘ಪರಸ್ಪರಾವಲಂಬನ’ ಸಿದ್ಧಾಂತದ ಮೂಲಕವೇ ತಮ್ಮ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುತ್ತವೆ ಮತ್ತು ಆ ಮೂಲಕವೇ ತಮ್ಮ ಬೆಳವಣಿಗೆಯನ್ನು ಸಾಧಿಸುತ್ತವೆ. ಇದು ವೈಜ್ಞಾನಿಕ ಸತ್ಯ. ಹೀಗೆ ಪರಸ್ಪರ ಅವಲಂಬಿತವಾಗುವ ವಸ್ತು ಮತ್ತು ಜೀವಿಗಳ ಸಂಬಂಧದಲ್ಲಿ ಮುಖ್ಯವಾಗಿ ಪ್ರವೃತ್ತವಾಗುವುದು ಅವುಗಳಲ್ಲಿನ ಪೂರಕ (Complimentary) ಗುಣ ಮತ್ತು ಪರಸ್ಪರ ಹೊಂದಿಕೊಳ್ಳುವ (Compatibility) ಸ್ವಭಾವ. ಅಂಥ ಸಂಬಂಧ ಕುದುರಿದಾಗ ಮಾತ್ರ ಅಪೇಕ್ಷಿತ ಮತ್ತು ನಿರೀಕ್ಷಿತ ಪರಿಣಾಮ ದೊರೆಯಲು ಸಾಧ್ಯ. ಪರಸ್ಪರಾವಲಂಬನದ ಈ ಸಂಬಂಧವು ಹೊಸ ಸೃಷ್ಟಿಯ ಮೂಲವೂ ಹೌದು. ಜಗತ್ತಿನ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ ಐನ್‌ಸ್ಟಿನ್‌ನ ‘ಸಾಪೇಕ್ಷ…

0 Comments

ಅಗ್ಗವಣಿ ಹಂಪಯ್ಯ ಮತ್ತು ಅವನ ವಚನಗಳು/ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ.

ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಇನ್ನೂ ಚರ್ಚಿಸಲಾರದ, ಅಧ್ಯಯನಕ್ಕೆ ಒಳಪಡಿಸಲಾರದ ವಚನಕಾರರ ಸಂಖ್ಯೆ ಅಪಾರವಾಗಿದೆ. ನಮ್ಮ ಓದು ಕೆಲವೇ ಕೆಲವು ಪರಿಚಿತ ಪ್ರಸಿದ್ಧ ವಚನಕಾರರ ಓದಿನ ಮಟ್ಟಿಗೆ ಸೀಮಿತಗೊಂಡಿರುವದು ವಚನ ಸಾಹಿತ್ಯ ಅಧ್ಯಯನಿಗಳಾದ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ವಿದ್ವಾಂಸರು ಬಹಳಷ್ಟು ಚರ್ಚಿಸಿರಲಾರದ ವಚನಕಾರರಲ್ಲಿ ಅಗ್ಘವಣಿ ಹಂಪಯ್ಯನೂ ಒಬ್ಬನಾಗಿದ್ದಾನೆ. ವಚನಕಾರರಲ್ಲಿ ಹಂಪ ಎನ್ನುವ ಹೆಸರು ಇಬ್ಬರು ಮೂವರಿಗೆ ಇರುವದು ಕಂಡು ಬರುತ್ತದೆ. ತಕ್ಷಣಕ್ಕೆ ನೆನಪಾಗುವ ಇನ್ನೊಂದು ಹೆಸರು ಹೇಮಗಲ್ಲ ಹಂಪನದು. ಹಾಗೆಯೆ ಅಗ್ಘವಣಿ ಹಂಪಯ್ಯ ಎಂಬ ಹೆಸರು ಈ ವಚನಕಾರನದು. ಈತನ ನಾಲ್ಕು ವಚನಗಳನ್ನು ವಚನ ಸಂಪುಟಗಳಲ್ಲಿ ಸಂಪಾದಿಸಿ ಕೊಟ್ಟ…

0 Comments

ಶ್ರಾವಣ ವಚನ ಚಿಂತನ-13: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಹಳ್ಳದೊಳಗೆ ಹುಳ್ಳಿ ಬರುತ್ತಿರಲು,ನೊರೆ ತೆರೆಗಳು ತಾಗಿದುವಲ್ಲಾ!ಸಂಸಾರ ಸಾಗರದೊಳಗೆ ಸುಖದುಃಖಗಳು ತಾಗಿದುವಲ್ಲಾ!ಇದಕ್ಕಿದು ಮೂರ್ತಯಾದ ಕಾರಣಪ್ರಳಯವಾಗಿತ್ತು ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-142 / ವಚನ ಸಂಖ್ಯೆ-47) ಮಾನವ ಜನ್ಮವನ್ನು‌ ಹೊಂದಿ ಬಂದ ಮೇಲೆ ಅದಕ್ಕೆ ಸುಖ ದುಃಖಗಳು ತಾಕುತ್ತವೆ. ಎಲ್ಲ ಸುಖ-ದುಃಖಗಳಿಗೆ ಕಾರಣ ನಮ್ಮೊಳಗಿರುವ ಅಜ್ಞಾನ. ತನ್ನ ಇರವನ್ನು ಮರೆತ‌ ಮಾನವ ಅಜ್ಞಾನ‌ದ ಕಾರಣ ಇರುವ ಮಾಯೆಯನ್ನು ಸತ್ಯವೆಂದು ತಿಳಿದು ಅದರಲ್ಲಿಯೆ ಮುಳುಗಿ ಹೊರಳಾಡುತ್ತಾನೆ. ಇದೇ ಮಾಯೆಗೆ ಕಾರಣ ಅಥವಾ ದೇಹದ ನೋವಿಗೆ ಕಾರಣ. ಈ ಮಾಯೆ ಪಲ್ಲಟಿಸಿ ನಿಜ ಜ್ಞಾನ‌ ಪ್ರಾಪ್ತವಾಗುವವರೆಗೆ ಎಂಥವನಿಗೂ ನೋವು…

0 Comments