ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆಧರೆ ಹತ್ತಿ ಉರಿದಡೆ ನಿಲಲುಬಾರದು.ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,ನಾರಿ ತನ್ನ ಮನೆಯಲ್ಲಿ ಕಳುವಡೆ,ತಾಯ ಮೊಲೆವಾಲು ನಂಜಾಗಿ ಕೊಲುವಡೆ,ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-26) 12 ನೇ ಶತಮಾನದಲ್ಲಿ ರಚನೆಯಾದ ಶರಣ ಸಾಹಿತ್ಯ ಅಥವಾ ವಚನ ಸಾಹಿತ್ಯವು 21 ನೇ ಶತಮಾನದಲ್ಲಿಯೂ ಕೂಡ ನಾವು ಬದುಕುತ್ತಿರುವ ಬದುಕಿನ ದಾರಿಗೆ ಮೌಲ್ಯಯುತವಾದ ಬೆಳಕನ್ನು ಚೆಲ್ಲುತ್ತಿರುವ ದಾರಿ ದೀಪಗಳಾಗಿವೆ. “ವ್ಯಕ್ತಿಗಳ ಪರಿವರ್ತನೆಯೇ ಸಮಾಜದ ಪರಿವರ್ತನೆ” ಎಂಬುದನ್ನು ಶರಣರು ತಮ್ಮ ಚಿಂತನೆಗಳ ಮೂಲಕ ತಮ್ಮ ನಡೆ-ನುಡಿ ಸಿದ್ಧಾಂತದ ಮೂಲಕ ಸಾಕ್ಷೀಕರಿಸಿದರು. ವಚನ ಸಾಹಿತ್ಯ…