ಆಡುವಡೆ ಸದಾಚಾರಿಗಳ ಕೂಡೆ ಆಡುವುದು: ಶರಣ ಬಹುರೂಪಿ ಚೌಡಯ್ಯನವರ ವಚನ / ಡಾ. ಪ್ರದೀಪಕುಮಾರ ಹೆಬ್ರಿ, ಮಂಡ್ಯ.

ಆಡುವಡೆ ಸದಾಚಾರಿಗಳ ಕೂಡೆ ಆಡುವುದು.ನುಡಿವಡೆ ಜಂಗಮಪ್ರೇಮಿಯ ಕೂಡೆ ನುಡಿವುದು.ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವುದು.ಭಕ್ತಿಹೀನನ ಕಂಡಡೆ ಮನ ಮುನಿಸ ಮಾಡಿಸಾರೇಕಣ್ಣಪ್ರಿಯ ನಾಗಿನಾಥಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1370 / ವಚನ ಸಂಖ್ಯೆ-131) ಇದು ಬಹುರೂಪಿ ಚೌಡಯ್ಯನವರ ವಚನ. ಇವರು ಬಹುರೂಪಿ ಕಾಯಕದ ಜನಪದ ಕಲಾವಿದರು. ರೇಕಳಿಕೆ ಗ್ರಾಮದಲ್ಲಿ ಹುಟ್ಟಿದ ಇವರ ಕಾರ್ಯಕ್ಷೇತ್ರ ಕಲ್ಯಾಣ, 'ರೇಕಣ್ಣಪ್ರಿಯ ನಾಗಿನಾಥಾ' ಇವರ ಅಂಕಿತ. ಇದು ಇವರ ದೀಕ್ಷಾಗುರು ರೇಕನಾಥ, ಜ್ಞಾನಗುರು ನಾಗಿನಾಥರ ಸಂಯುಕ್ತ ಹೆಸರಿನಿಂದ ಕೂಡಿದುದು. ಬಸವಣ್ಣನವರೆಂದರೆ ಇವರಿಗೆ ಪಂಚಪ್ರಾಣ. ಇವರ ವಚನಗಳಲ್ಲಿ ಲಿಂಗಾಂಗ ಸಾಮರಸ್ಯ, ಶರಣ ವಿಧೇಯತೆ, ಜಂಗಮ ನಿಷ್ಠೆ, ನೇರ ಹಾಗೂ ನಿಷ್ಠೂರ ಸ್ವಭಾವಗಳು ಕಂಡುಬರುತ್ತವೆ.…

0 Comments

ಬಸವಣ್ಣನವರ ವಚನ “ಆಯುಷ್ಯವುಂಟು, ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ” / ಪ್ರೊ. ಜಿ. ಎ. ತಿಗಡಿ.

ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ;ಆಯುಷ್ಯ ತೀರಿ ಪ್ರಳಯವು ಬಂದಡೆ ಆ ಅರ್ಥವನುಂಬುವರಿಲ್ಲಾ.ನೆಲನನಗೆದು ಮಡುಗದಿರಾ, ನೆಲ ನುಂಗಿದೊಡುಗುಳುವುದೆ?ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ!ನಿನ್ನ ಮಡದಿಗಿರಲೆಂದಡೆ, ಮಡದಿಯ ಕೃತಕ ಬೇರೆ;ನಿನ್ನ ಒಡಲು ಕೆಡೆಯಲು ಮತ್ತೊಬ್ಬನಲ್ಲಿಗೆ ಅಡಕೆದೆ ಮಾಣ್ಬಳೆ?ಹೆರರಿಗಿಕ್ಕಿ ಹೆಗ್ಗುರಿಯಾಗಬೇಡಾ,ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-26 / ವಚನ ಸಂಖ್ಯೆ-201) ನನಗೆ ಸಾಕಷ್ಟು ಆಯುಷ್ಯವಿದೆ, ಜಗತ್ತಿನ ಪ್ರಳಯವೆಂಬುದು ಸುಳ್ಳು ಎಂದು ಭಾವಿಸಿ, ಸಂಪತ್ತನ್ನು ಬಚ್ಚಿಡುವಿರಿ. ಆದರೆ ನಿಮ್ಮ ಆಯುಷ್ಯ ಮುಗಿದು ತೀರಿದ ಮೇಲೆ ಪ್ರಳಯವಾದರೆ ನೀವು ಮುಚ್ಚಿಟ್ಟ ಆ ಸಂಪತ್ತನ್ನು ಅನುಭೋಗಿಸುವವರೇ ಇಲ್ಲವಾಗುತ್ತದೆ.…

3 Comments

ಒಕ್ಕಲಿಗ ಮುದ್ದಣ್ಣನವರ “ದೊಡ್ಡವೆರಡು ಕಂಬದ ಮಧ್ಯದಲ್ಲಿ”ವಚನ ವಿಶ್ಲೇಷಣೆ

ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ,ಇಂತೀ ನಾಲ್ಕರ ಮಧ್ಯದ ಮನೆಗೆಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ,ಮಾಂಸದ ಗೋಡೆ, ಚರ್ಮದ ಹೊದಿಕೆ,ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದುಚಿತ್ರದ ಮನೆ ನೋಡಯ್ಯ.ಆ ಮನೆಗೊಂಬತ್ತು ಬಾಗಿಲು,ಇಡಾ ಪಿಂಗಳವೆಂಬ ಗಾಳಿಯ ಬಾದಳ,ಮೃದು ಕಠಿಣವೆಂಬೆರಡು ಅಗುಳಿಯ ಭೇದ ನೋಡಾ,ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಟ್ಟಿ,ದಿವಾರಾತ್ರಿಯೆಂಬ ಅರುಹು ಮರೆಹಿನಉಭಯವ ಕದಕಿತ್ತು ನೋಡಯ್ಯಾ.ಮನೆ ನಷ್ಟವಾಗಿ ಹೋದಡೆಯೂಮನೆಯೊಡೆಯ ಮರಳಿ ಮತ್ತೊಂದು ಮನೆಗೆಬಪ್ಪುದು ತಪ್ಪದು ನೋಡಯ್ಯಾ.ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ,ಕಾಮಭೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1167 / ವಚನ ಸಂಖ್ಯೆ-1731) ಈ…

4 Comments