ಭಕ್ತ ಸ್ಥಲ / ಡಾ. ಸರ್ವಮಂಗಳ ಸಕ್ರಿ,ರಾಯಚೂರು.

ಷಟ್ ಸ್ಥಲಗಳಲ್ಲಿ ಪ್ರಾರಂಂಭಿಕ ನಿವೇದನೆ ಭಕ್ತ ಸ್ಥಲವಾಗಿದೆ. ದೇವರೊಂದಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವ ತಾತ್ವಿಕ ಅನುಸಂಧಾನದ ಸಮರ್ಪಣೆ ಇದು. ಶರಣರ ಆನಂದದ ಭಾವವೇ ಭಕ್ತಿ ಭಾವವಾಗಿದೆ. ಇದೊಂದು ತೆರೆನಾಗಿ ದೇವರೊಂದಿಗೆ ಒಂದಾಗುವ ಭಾವುಕ ಪ್ರಜ್ಞೆ. ತಾಯಿ ಭಾವದ ಮಮತೆಯದು. ಭಕ್ತನಾಗುವುದೆಂದರೆ ಮನ ಆರ್ದ್ರವಾಗುವುದು, ನೀರಾಗುವುದು. ಇನ್ನೊಂದರ ಜೊತೆಗೆ ಸಂಯೋಗವಾಗುವ ಪರಿಯದು. ಹೀಗಾಗಿ ಇಲ್ಲಿ ಅದ್ವೈತದ ಆತ್ಮತೃಪ್ತಿ ಅಡಗಿರುತ್ತದೆ. ಈ ಮನದಲ್ಲಿ ಲೌಕಿಕ ವ್ಯವಹಾರಗಳು ನಡೆಯುತ್ತಿರುವುದು ಭಕ್ತಿ ಎಂಬ ಮಂತ್ರ ಸ್ವರೂಪಗಳಿಂದ. ಬಸವಣ್ಣನವರಿಗೆ ಸಂಗಮನಾಥನೊಂದಿಗೆ ಉಂಟಾಗುವ ಭಕ್ತಿ ಭಾವ, ಅಲ್ಲಮಪ್ರಭುಗಳಿಗೆ ಗುಹೇಶ್ವರನೊಂದಿಗೆ ಏಕವಾಗುವ, ಅಕ್ಕಮಹಾದೇವಿಗೆ ಚೆನ್ನಮಲ್ಲಿಕಾರ್ಜುನನನ್ನು ಕಾಣುವ ದೈವಿಕ…

0 Comments

ಬೊಂತಾದೇವಿಯವರ ವಚನ ವಿಶ್ಲೇಷಣೆ / ಘಟದೊಳಗಣ ಬಯಲು / ಶ್ರೀ ಸಿದ್ಧೇಶ್ವರ ಸ್ವಾಮೀಯವರು.

ಘಟದೊಳಗಣ ಬಯಲು,ಮಠದೊಳಗಣ ಬಯಲು,ಬಯಲು ಬಯಲು ಬಯಲು?ತಾನೆಲ್ಲಾ ಬಯಲು, ಬಿಡಾಡಿ ಬಯಲು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-392/ವಚನ ಸಂಖ್ಯೆ-1093) ಇದು ಬೊಂತಾದೇವಿಯವರ ವಚನ. ಅವರು ಕಾಶ್ಮೀರದ ರಾಜಮನೆತನದ ರಾಜಪುತ್ರಿ. ಪರಮಸತ್ಯ ಪರಮಾತ್ಮನ ಶೋಧನೆಗಾಗಿ ರಾಜ ಭೋಗವನೆಲ್ಲ ತೊರೆದವರು. ರಾಜ ಪೋಷಾಕವನೆಲ್ಲ ಬಿಟ್ಟು ಕೇವಲ ಕೌದಿಯನ್ನು ಮೈಮೇಲೆ ಹೊತ್ತುಕೊಂಡರು. ಜನ ಕೇಳಿದರು “ಹೀಗೇಕೆ” ಎಂದು. ರಾಜ ಪೋಷಾಕು ಹಾಗೂ ಕೌದಿ ಎರಡೂ ಬಯಲಾಗುತ್ತವೆ ಎಂದರವರು. ಕೌದಿಯು ಹಲವಾರು ತುಂಡು ಬಟ್ಟೆಗಳ ತೇಪೆ. ನಮ್ಮ ಬದುಕು, ವಿದ್ಯೆ, ಬುದ್ದಿ ಎಲ್ಲವೂ ಒಂದು ರೀತಿ ಮಿಶ್ರಣ, ತೇಪೆ. ಅಲ್ಲಿಷ್ಟು ಇಲ್ಲಿಷ್ಟು ನೋಡಿ, ಓದಿ,…

0 Comments

ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ: ಅಚಲಸಿಂಹಾಸನವನಿಕ್ಕಿ / ಸಚರಾಚರವ ನುಂಗುವ ಪರಿ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಚಲಸಿಂಹಾಸನವನಿಕ್ಕಿ;ನಿಶ್ಚಲ ಮಂಟಪದ ಸಂಚದೋವರಿಯೊಳಗೆ;ರುಚಿಗಳೆಲ್ಲವ ನಿಲಿಸಿಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ,ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ,ಖೇಚರಾದಿಯ ಗಮನ.ವಿಚಾರಿಪರ ನುಂಗಿ. ಗುಹೇಶ್ವರ ನಿಂದ ನಿಲುವುಸಚರಾಚರವ ಮೀರಿತ್ತು.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-72/ವಚನ ಸಂಖ್ಯೆ-196)ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:ಸಂಚದೋವರಿ: ಹೃದಯವೆಂಬ ಗೂಢಗವಿ, ಶಿರದ ಅಂತರಂಗದ ಚಿತ್‌ ಆಕಾಶದ ಗವಿ.ಓವರಿ: ರಹಸ್ಯದ ಕೋಣೆ, ಒಳಮನೆ, ಪಕ್ಕದ ಮನೆ, ಕವಚ, ಒರೆ.ರುಚಿ: ಕಾಂತಿ, ಕಿರಣ, ಆಸಕ್ತಿ.ಪಂಚರತ್ನಗಳು: ವಜ್ರ, ವೈಢೂರ‍್ಯ, ನೀಲಿ, ಪದ್ಮರಾಗ ಮತು ಹವಳ.ಖೇಚರ: ಗಂಧರ್ವ.ಖೇಚರಾದಿಯ ಗಮನ: ವಿವೇಕಿಯ ಗಮನಾಗಮನ. ಅಲ್ಲಮ ಪ್ರಭುದೇವರು ಈ ನಾಡು ಕಂಡ ಅಪರೂಪದ ದಾರ್ಶನಿಕರು. ಎಲ್ಲ…

0 Comments

ಅನ್ನಭೇದ-ಪಂಕ್ತಿಭೇದದ ಕ್ರೌರ್ಯಾಸಹ್ಯಕ್ಕೆ ಸಮಾನತೆಯ ಸೂತ್ರ / ಡಾ. ಬಸವರಾಜ ಸಾದರ, ಬೆಂಗಳೂರು.

ಉಚ್ಚವರ್ಣದವರ ಊಟದ ಪಂಕ್ತಿಯಲ್ಲಿ ಕುಳಿತ ಶೂದ್ರ ವ್ಯಕ್ತಿಗಳನ್ನು ಅಲ್ಲಿಂದ ಎಬ್ಬಿಸಿ ಹೊರಗಟ್ಟಿದ ಹಲವಾರು ಘಟನೆಗಳು ನಮ್ಮಲ್ಲಿ ವರದಿಯಾಗಿದೆ. ಸೆಕ್ಯೂಲರ್ ಪ್ರಜಾಪ್ರಭುತ್ವದ ಕಾನೂನುಗಳನ್ನು ತುಳಿದಿಕ್ಕಿ, ಜಾತ್ಯಹಂಕಾರವನ್ನೇ ಮೆರೆಸುವ ವರ್ಣವ್ಯವಸ್ಥೆ ಜೀವಂತವಿರುವಲ್ಲಿ ಇವು ಮೊದಲನೆಯ ಘಟನೆಗಳೇನೂ ಅಲ್ಲ; ಕೊನೆಯವೂ ಆಗಲಿಕ್ಕಿಲ್ಲ. ಪಂಕ್ತಿ ಮತ್ತು ಊಟಕ್ಕೆ ಮಾತ್ರ ಸೀಮಿತವಾಗದ ಹಾಗೂ ಇಡೀ ಶೂದ್ರವರ್ಗವನ್ನು ಹಲವು ಬಗೆಗಳಲ್ಲಿ ಶೋಷಿಸುತ್ತ ಬಂದಿರುವ ಈ ಮಾನವ ಕ್ರೌರ್ಯವು ಪಶು-ಪಕ್ಷಿ ಸಂಕುಲದಲ್ಲಿಯೂ ಇಲ್ಲ. ತಳವರ್ಗಗಳ ಅಸ್ತಿತ್ವ ಮತ್ತು ಅಸ್ಮಿತೆಯನ್ನೇ ಮಣ್ಣು ಮಾಡುತ್ತಿರುವ ಇಂಥ ಅಸ್ಪೃಶ್ಯತೆಯಾಚರಣೆ ಭರತ ಭೂಮಿಗಂಟಿದ ಮಹಾ ಕೊಳೆ. ಅನ್ಯಾಯ-ಅಸಮಾನತೆ-ಅಸ್ಪೃಶ್ಯತೆಯನ್ನು ನಿಯಂತ್ರಿಸಲೆಂದೇ ಕಠಿಣ ಕಾನೂನುಗಳು ಜಾರಿಯಿರುವ…

0 Comments

ಷಟ್ ಸ್ಥಲಗಳು / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

12 ನೇ ಶತಮಾನದ ಶರಣರ ಷಟ್ ಸ್ಥಲಗಳು ಆಧ್ಯಾತ್ಮಿಕ ಬದುಕಿನ ಧಾರ್ಮಿಕ ತತ್ವಗಳನ್ನು ಪ್ರೇರೇಪಿಸುತ್ತದೆ. ಶರಣ ಧರ್ಮದ ಸಾಧನೆ, ನಡೆ ನುಡಿಗಳು ಹಾಗೂ ಭಕ್ತಿ ಜ್ಞಾನ ಸಾಮರಸ್ಯವನ್ನು ಬಿಂಬಿಸುವ ತತ್ವಗಳೇ ಷಟ್ ಸ್ಥಲಗಳಾಗಿವೆ. ಶರಣರು ತಮ್ಮ ಧರ್ಮದ ತಾತ್ವಿಕ ಸ್ವಾತಂತ್ರ್ಯದ ಸ್ಥಲಗಳ ವಿವೇಚನೆಯಲ್ಲಿ ಲಿಂಗಾಯತ ಧರ್ಮದ ವಿವೇಚನೆಯನ್ನು ಕಟ್ಟಿಕೊಟ್ಟಿದ್ದಾರೆ. ಭಕ್ತನಾದರೆ ತನು ಮನದ ಮೇಲಣ ಆಸೆ ಅಳಿದಿರಬೇಕು. ಮಾಹೇಶ್ವರನಾದರೆ ಪರಧನ ಪರಸತಿ ಆಸೆ ಅಳಿದಿರಬೇಕು. ಪ್ರಸಾದಿಯಾದರೆ ಪ್ರಸಾದವ ಕೊಂಡ ಕಾಯ ಅಳಿಯದೇ ಉಳಿದಿರಬೇಕು. ಪ್ರಾಣಲಿಂಗಯಾದರೆ ಸುಖ-ದುಃಖಾದಿಗಳನ್ನು ಮರೆತು ಪ್ರಾಣ ಲಿಂಗಸ್ಥಲದಲ್ಲಿ ಸುಸ್ಥಿರನಾಗಿರಬೇಕು. ಶರಣನಾದರೆ ಸತಿಪತಿ ಭಾವವಳಿದಿರ ಬೇಕು.…

0 Comments

ಮಾಗಿದ ಮಗುತನದ ಮಾನವತಾ ಮೂರ್ತಿ “ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಗಳು” / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

(ಪೂಜ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ತ ವಿಶೇಷ ಲೇಖನ) ಸತ್ತು ಹುಟ್ಟಿ ಕೆಟ್ಟವರೆಲ್ಲರು,ದೇವಲೋಕಕ್ಕೆ ಹೋದರೆಂಬಬಾಲಭಾಷೆಯ ಕೇಳಲಾಗದು.ಸಾಯದ ಮುನ್ನ ಸ್ವಯವನರಿದಡೆದೇವನೊಲಿವ ನಮ್ಮ ಗುಹೇಶ್ವರನು.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-189/ವಚನ ಸಂಖ್ಯೆ-606) “ಬೆಳಕು” ತುಳುಕಾಡುವುದು ಎಂದರೆ ಇದೆ ಇರಬಹುದು ಎಂದು ನನಗೆ ಪೂಜ್ಯ ಸಿದ್ದೇಶ್ವರ ಶ್ರೀಗಳ ಮಾತುಗಳನ್ನು ಕೇಳಿದಾಗಲೆಲ್ಲ ಅನಿಸುವುದು. “ತನ್ಮಯತೆ” ಎಂಬುದಕ್ಕೆ ಅರ್ಥವನ್ನು ನಾನು ಪದಕೋಶದಲ್ಲಿ ಹುಡುಕಲಿಲ್ಲ. ಶ್ರೀಗಳ ಮೃದುವಾದ ಪದಗಳಲ್ಲಿ ಕಂಡೆ ಅವರ ನುಡಿ ಕೇಳಿದಾಗಲೆಲ್ಲಾ ಕಳೆದು ಹೋಗುವುದು ಭಾವ ಪರವಶತೆಗೆ ಒಳಗಾಗುವ ಸ್ಥಿತಿಗೆ ತಲುಪಿದಾಗಲೆಲ್ಲಾ “ತನ್ನಯತೆ” ಎಂಬುದು ಇದೇ ಎಂಬುದನ್ನು ಅನುಭವಿಸಿದೆ. ಇದು ಕೇವಲ ನನ್ನ ಒಬ್ಬಳ…

0 Comments

ಆಮುಗೆ ರಾಯಮ್ಮನವರ ವಚನ ವಿಶ್ಲೇಷಣೆ: ಸಂತೆ ಜನಪದರ ಸಂಸ್ಕೃತಿ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಪಟ್ಟಣದ ಸೂಳೆಯ ಕೂಡೆ ಪರಬ್ರಹ್ಮ ನುಡಿಯಲೇಕೆ?ಸಂತೆಗೆ ಬಂದವರ ಕೂಡೆ ಸಹಜವ ನುಡಿಯಲೇಕೆ?ಕತ್ತೆಯನೇರುವರ ಕೂಡೆ ನಿತ್ಯರೆಂದು ನುಡಿಯಲೇಕೆ?ಹೊತ್ತು ಹೋಕರ ಕೂಡೆ ಕರ್ತನ ಸುದ್ದಿಯ ನುಡಿಯಲೇಕೆ?ಆಮುಗೇಶ್ವರಲಿಂಗವನರಿದ ಶರಣಂಗೆ ಹತ್ತು ಸಾವಿರವನೋದಲೇಕೆ?ಹತ್ತು ಸಾವಿರ ಕೇಳಲೇಕೆ? ಭ್ರಷ್ಟರ ಕೂಡೆ ನುಡಿಯಲೇಕೆ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-862 / ವಚನ ಸಂಖ್ಯೆ-663) ವಚನ ಸಾಹಿತ್ಯ ಪರಂಪರೆಯಲ್ಲಿ ಮತ್ತೊಬ್ಬ ದಿಟ್ಟ ಮಹಿಳಾ ವಚನಕಾರ್ತಿಯೆಂದರೆ ಆಮುಗೆ ರಾಯಮ್ಮ. ಆಮುಗೆ ದೇವಯ್ಯನ ಧರ್ಮಪತ್ನಿ ಈಕೆ. ಆಮುಗೆ ದೇವಯ್ಯನ ಸಾಂಗತ್ಯದಲ್ಲಿ ಈ ದಂಪತಿಗಳ ಪ್ರಸ್ತಾಪವಿದೆ. ಸೊಲ್ಲಾಪುರದ ನೇಕಾರಿಕೆಯ ಕಾಯಕದಲ್ಲಿ ತಮ್ಮನ್ನು ಇವರು ತೊಡಗಿಸಿಕೊಂಡಿದ್ದರು. ಆಮುಗೆ ರಾಯಮ್ಮ ತನ್ನ…

0 Comments

ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ? ವ್ಯೋಮಕಾಯ ಅಲ್ಲಮಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ.

ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?ಬೇಟದ ಮರುಳಗೆ ಲಜ್ಜೆ ಮುನ್ನುಂಟೆ?ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ?ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ?ಗುಹೇಶ್ವರಲಿಂಗಕ್ಕೆ ಕುರುಹು‌ ಮುನ್ನುಂಟೇ?(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-138 / ವಚನ ಸಂಖ್ಯೆ-425) ನಿಜವಾದ ಭಕ್ತನಾದವನು ಪೂಜೆ ಎಂಬ ಆಚರಣೆಯ ಬಗೆಗೆ ಅಷ್ಟಾಗಿ ಗಮನವನ್ನು ಕೊಡಬೇಕಾಗಿಲ್ಲ ಎಂಬುದು ಅಲ್ಲಮರ ವಿಚಾರವಾಗಿದೆ. ಬಹಿರಂಗದ ಆಚರಣೆಗಳು ಕೇವಲ ನಮ್ಮ ತೋರಿಕೆಯ ಅಭಿವ್ಯಕ್ತಿಗಳೇ ಹೊರತು ನಿಜವಾದ ಲಿಂಗ ಪೂಜೆಯನ್ನುವದು ಅದು ಭಕ್ತನು ಲಿಂಗಕ್ಕೆ ತನ್ನನ್ನು ನಿರಹಂಭಾವದಿಂದ ಅರ್ಪಿಸಿಕೊಳ್ಳುವದರಲ್ಲಿದೆ ಎನ್ನುವದು ಶರಣರ ವಿಚಾರವಾಗಿದೆ. ಇನ್ನೊಂದು ರೀತಿಯಿಂದ ಆಲೋಚನೆ ಮಾಡಿದಾಗಲೂ ಕೂಡ ಪೂಜೆ…

0 Comments

ಹೊರಗಲ್ಲ; ಇಲ್ಲೇ ಇದೆ ಎಲ್ಲ! / (ವಿಕಾಸವಾದದ ಮೂಲ ಅರ್ಥವನ್ನು ಧ್ವನಿಸುವ ವಚನ) / ಡಾ. ಬಸವರಾಜ ಸಾದರ

ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು?ಎಲೆ ಸುಳಿಬಿಟ್ಟು ಕಮಲುವಾಗ ಶಾಖೆಯೆಲ್ಲಿದ್ದಿತ್ತು?ಶಾಖೆ ಒಡೆದು ಕುಸುಮ ತೋರುವಾಗ ಫಲವೆಲ್ಲಿದ್ದಿತ್ತು?ಫಲ ಬಲಿದು ರಸ ತುಂಬುವಾಗ ಸವಿಯೆಲ್ಲಿದ್ದಿತ್ತು?ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು?ಇಷ್ಟರಿ ನೀತಿಯನರಿ, ಆತುರವೈರಿ ಮಾರೇಶ್ವರಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-433/ವಚನ ಸಂಖ್ಯೆ-1233)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.ಪರಿಣತೆ: ಅಂತಿಮ ಪರಿಣಾಮ, ಪಲಿತಾಂಶ. ನಾವಿರುವ ಈ ಸೃಷ್ಟಿ ನಿತ್ಯ ಪರಿವರ್ತನಶೀಲವಾದದ್ದು. ಪರಿವರ್ತನೆ ಜಗದ ಹಾಗೂ ವಿಜ್ಞಾನದ ಒಂದು ಮುಖ್ಯ ನಿಯಮ. ವಿಕಾಸವಾದದ ಮೂಲ ಚಹರೆಯೇ ಪರಿವರ್ತನೆ. ಇಂಥ ಪರಿವರ್ತನಾ ಪ್ರಕ್ರಿಯೆಯ ವೇಗವು ವಸ್ತು ಮತ್ತು ಜೀವಿಗಳ ಸ್ವರೂಪಗಳನ್ನು ಆಧರಿಸಿ ನಿಗದಿತವಾಗಿರುತ್ತದೆ. ಬದಲಾವಣೆ ಮತ್ತು…

0 Comments

ವೀರಗಂಟಿ ಶರಣ ಮಡಿವಾಳ ಮಾಚಿದೇವರ ವಚನ “ಉಟ್ಟ ಸೀರೆಯ ಹರಿದು ಹೋದಾತ” ವಿಶ್ಲೇಷಣೆ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ.ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.ಸೀಮೆ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ.ಲಿಂಗಕ್ಕೆ ಮಾಡಿದುದ ಸೋಂಕದೇ ಹೋದೆಯಲ್ಲಾ ಬಸವಣ್ಣ.ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡುಹೋದೆಯಲ್ಲಾ ಬಸವಣ್ಣ.ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ.ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾಕಲಿದೇವರದೇವಾ.(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-1416/ವಚನ ಸಂಖ್ಯೆ-516) ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಶರಣರ ಕಗ್ಗೊಲೆಯಾದ ವಿಷಮ ಪರಿಸ್ಥಿತಿಯಲ್ಲಿ ಮಡಿವಾಳ ಮಾಚಿದೇವರು ಅತ್ಯಂತ ಸಾಹಸದಿಂದ ಶರಣ ಧರ್ಮ ಸಂರಕ್ಷಣೆ ಮತ್ತು ವಚನ ಸಾಹಿತ್ಯದ ರಕ್ಷಣೆಯ ದಂಡ…

0 Comments