ಹೊರಗಲ್ಲ; ಇಲ್ಲೇ ಇದೆ ಎಲ್ಲ! / (ವಿಕಾಸವಾದದ ಮೂಲ ಅರ್ಥವನ್ನು ಧ್ವನಿಸುವ ವಚನ) / ಡಾ. ಬಸವರಾಜ ಸಾದರ

ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು?ಎಲೆ ಸುಳಿಬಿಟ್ಟು ಕಮಲುವಾಗ ಶಾಖೆಯೆಲ್ಲಿದ್ದಿತ್ತು?ಶಾಖೆ ಒಡೆದು ಕುಸುಮ ತೋರುವಾಗ ಫಲವೆಲ್ಲಿದ್ದಿತ್ತು?ಫಲ ಬಲಿದು ರಸ ತುಂಬುವಾಗ ಸವಿಯೆಲ್ಲಿದ್ದಿತ್ತು?ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು?ಇಷ್ಟರಿ ನೀತಿಯನರಿ, ಆತುರವೈರಿ ಮಾರೇಶ್ವರಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-433/ವಚನ ಸಂಖ್ಯೆ-1233)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.ಪರಿಣತೆ: ಅಂತಿಮ ಪರಿಣಾಮ, ಪಲಿತಾಂಶ. ನಾವಿರುವ ಈ ಸೃಷ್ಟಿ ನಿತ್ಯ ಪರಿವರ್ತನಶೀಲವಾದದ್ದು. ಪರಿವರ್ತನೆ ಜಗದ ಹಾಗೂ ವಿಜ್ಞಾನದ ಒಂದು ಮುಖ್ಯ ನಿಯಮ. ವಿಕಾಸವಾದದ ಮೂಲ ಚಹರೆಯೇ ಪರಿವರ್ತನೆ. ಇಂಥ ಪರಿವರ್ತನಾ ಪ್ರಕ್ರಿಯೆಯ ವೇಗವು ವಸ್ತು ಮತ್ತು ಜೀವಿಗಳ ಸ್ವರೂಪಗಳನ್ನು ಆಧರಿಸಿ ನಿಗದಿತವಾಗಿರುತ್ತದೆ. ಬದಲಾವಣೆ ಮತ್ತು…

0 Comments

ವೀರಗಂಟಿ ಶರಣ ಮಡಿವಾಳ ಮಾಚಿದೇವರ ವಚನ “ಉಟ್ಟ ಸೀರೆಯ ಹರಿದು ಹೋದಾತ” ವಿಶ್ಲೇಷಣೆ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ.ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.ಸೀಮೆ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ.ಲಿಂಗಕ್ಕೆ ಮಾಡಿದುದ ಸೋಂಕದೇ ಹೋದೆಯಲ್ಲಾ ಬಸವಣ್ಣ.ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡುಹೋದೆಯಲ್ಲಾ ಬಸವಣ್ಣ.ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ.ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾಕಲಿದೇವರದೇವಾ.(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-1416/ವಚನ ಸಂಖ್ಯೆ-516) ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಶರಣರ ಕಗ್ಗೊಲೆಯಾದ ವಿಷಮ ಪರಿಸ್ಥಿತಿಯಲ್ಲಿ ಮಡಿವಾಳ ಮಾಚಿದೇವರು ಅತ್ಯಂತ ಸಾಹಸದಿಂದ ಶರಣ ಧರ್ಮ ಸಂರಕ್ಷಣೆ ಮತ್ತು ವಚನ ಸಾಹಿತ್ಯದ ರಕ್ಷಣೆಯ ದಂಡ…

0 Comments

ಅಲ್ಲಮ ಪ್ರಭುಗಳ ವಚನ “ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ” ವಿಶ್ಲೇಷಣೆ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿಯೋಗದ ಹೊಲಬ ನೀನೆತ್ತ ಬಲ್ಲೆ?ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡುಮದ ಮತ್ಸರ ಬೇಡ ಹೊದುಕುಳಿಗೊಳಬೇಡಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-156 / ವಚನ ಸಂಖ್ಯೆ-229)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.ಅಗ್ನಿ: ಹೃದಯದಲ್ಲಿ ಹುದುಗಿದ ಜ್ಞಾನ, ಸ್ವಾನುಭವ ಪ್ರಭೆ, ತನು ಗುಣ ಸಂಬಂಧಿ, ಅಹಂಕಾರದಿಂದ ಕೂಡಿದ ದೇಹ, ಅರಿಷಡ್ವರ್ಗಗಳ ಸಂಕೇತ.ಉದಕ : ನೀರು, ಸಂಸಾರ ವಿಷಯ-ವ್ಯಾಮೋಹಗಳ ಸಂಕೇತ, ಮನಸ್ಸು, ಮನದ ನಿಲುವು, ಪರಮಾನಂದ ಜಲ, ಪ್ರಶಾಂತ ಭಾವ.ವಾಯು: ಪ್ರಾಣಶಕ್ತಿಯ ಸಂಕೇತ.ಆಕಾಶ:…

0 Comments

ಜೀವನ ಮೌಲ್ಯಗಳು – ಶರಣರ ಕೊಡುಗೆ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಶರಣರು ಅವರ ಹಿರಿಮ ಗರಿಮೆಗಳನ್ನು ಅವರ ಹಾಗೆಯೇ ಇರುವವರೇ ಬಲ್ಲರು. ಅವರು ನಿಜವನರಿದದ ನಿಶ್ಚಿಂತರು. ಮರಣವನ್ನೇ ಗೆಲಿದ ಮಹಂತರು. ಘನವ ಕಂಡ ಮಹಿಮರು. ಬಯಲು ಬಿತ್ತಿ ಬಯಲು ಬೆಳೆದು ಬಯಲನುಂಡು ಬಯಲಾದ ಬಯಲಯೋಗಿಗಳು. ಶರಣರ ಮಾತುಗಳೂ ಹಾಗೆಯ, ಮಧುರ, ಜೇನು ಬೆರೆಸಿದ ಹಾಲಿನಂತೆ ಸವಿ, ಕೆಲವೊಮ್ಮೆ ಕಠಿಣ, ಕೆಲವೂಮ್ಮೆ ಕಹಿ. ಅದರಕ್ಕೆ ಕಹಿಯಾದರು ಉದರಕ್ಕೆ ಸಿಹಿ. ಅವು ಮನದ ಕತ್ತಲೆಉನ್ನು ಕಳೆಯುವ ಜ್ಯೋತಿಗಳು. ಅವುಗಳಲ್ಲಿ ಹದವಾದ ಹಾಗೂ ಹಸನಾದ ಬದುಕಿಗೆ ಬೇಕಾಗುವ ಅವಶ್ಯಕವಾದವುಗಳೆಲ್ಲ ಇವೆ. ಹೊರಗೆ ಕಾವ್ಯದ ಸೊಬಗು, ಒಳಗೆ ಅನುಭವದ ಜೇನು - ಅನುಭಾವದ ಅಮೃತ.…

0 Comments

ಗಿರಿಯಲ್ಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಗಿರಿಯಲ್ಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ ನವಿಲು?ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ?ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ?ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ?ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆಅನ್ಯಕ್ಕೆಳಸುವುದೆ ಎನ್ನ ಮನ?ಪೇಳಿರೆ, ಕೆಳದಿಯರಿರಾ?(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-67/ವಚನ ಸಂಖ್ಯೆ-189) ವೈರಾಗ್ಯನಿಧಿ ಅಕ್ಕಮಹಾದೇವಿಯವರು ವಚನಕಾರ್ತಿಯರ ಸಾಲಿನಲ್ಲಿ ಅಷ್ಟೆ ಅಲ್ಲದೆ ಒಟ್ಟಾರೆ ವಚನ ಸಾಹಿತ್ಯ ಪರಂಪರೆಯಲ್ಲೇ ಅತ್ಯಂತ ಶ್ರೇಷ್ಠ ವಚನಕಾರ್ತಿಯಾಗಿದ್ದಾರೆ. ಅದಕ್ಕೆಂದೇ ಅಕ್ಕಮಹಾದೇವಿಯರ ವಚನಗಳ ಶ್ರೇಷ್ಠತೆಯನ್ನು ಅವಿರಳಜ್ಞಾನಿ ವನ್ನಬಸವಣ್ಣನವರು ತಮ್ಮದೊಂದು ವಚನದಲ್ಲಿ ನಿರೂಪಿಸುವುದನ್ನು ನಾವು ನೆನಪಿಸಿಕೊಳ್ಳುವುದು. ಆದ್ಯರ ಅರವತ್ತು ವಚನಕ್ಕೆದಣ್ಣಾಯಕರ ಇಪ್ಪತ್ತು ವಚನ,ದಣ್ಣಾಯಕರ ಇಪ್ಪತ್ತು ವಚನಕ್ಕೆಪ್ರಭುದೇವರ ಹತ್ತುವಚನ,ಪ್ರಭುದೇವರ ಹತ್ತು ವಚನಕ್ಕೆಅಜಗಣ್ಣನ ಅಯ್ದು ವಚನ,ಅಜಗಣ್ಣನ ಅಯ್ದು ವಚನಕ್ಕೆಕೂಡಲಚೆನ್ನಸಂಗಮದೇವಾ,ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ.(ಸಮಗ್ರ ವಚನ ಸಂಪುಟ:…

0 Comments

ಶರಣರು ಕಂಡ ಬಸವಣ್ಣ: ಬಸವಣ್ಣನವರ ವ್ಯಕ್ತಿತ್ವದ ಅನಾವರಣ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ವಚನ ಸಾಹಿತ್ಯ ಮತ್ತು ಶರಣ ಸಿದ್ಧಾಂತ ಹಾಗೂ ಸಂಸ್ಕೃತಿಯ ಪುಸ್ತಕಗಳನ್ನು ಓದುವ ಹವ್ಯಾಸ ಬಹುಶಃ ಮಕ್ಕಳ ಸಾಹಿತ್ಯ ಮತ್ತು ವಚನ ಸಾಹಿತ್ಯದಲ್ಲಿ ತಮ್ಮ ಜೀವನವನ್ನು ಸವೆಸಿದ ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರಿಂದ ನನಗೆ ಬಂದ ಬಳುವಳಿ ಅನಿಸುತ್ತೆ. ಈ ಲೇಖನವನ್ನು ಬರೆಯುವುದಕ್ಕೆ ಅವರು ನನಗಿತ್ತ ಪ್ರೇರಣೆಯೇ ಕಾರಣ. ಕಳೆದ ಸುಮಾರು ಎರಡೂವರೆ ಮೂರು ದಶಕಗಳಿಂದ ಶರಣರ ಕುರಿತು ಮಾಹಿತಿ ಸಂಗ್ರಹಿಸಲು ನಮಗೆ ಸಿಕ್ಕ ಮೌಲ್ಯಯುತವಾದ ಆಕರಗಳು ಅಂದರೆ ಡಾ. ಫ. ಗು. ಹಳಕಟ್ಟಿಯವರ 770 ಅಮರ ಗಣಂಗಳ ಸಂಗ್ರಹ, ಶೂನ್ಯ ಸಂಪಾದನೆಗಳು, ಬಸವ…

0 Comments

ಪರಮ ಪೂಜ್ಯ ನಿರುಪಾಧೀಶ ಸ್ವಾಮೀಜಿಯವರ ವಚನಗಳು: ವಿಭೂತಿ – 2 / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಕ್ಷರಗಳು ಮೂರ್ತರೂಪವೆತ್ತಿದಂತೆ ನಿಂತ ಮಹಾಂತರು, ಸಂತರು, ಶರಣರು ಪೂಜ್ಯ ನಿರುಪಾಧೀಶ ಸ್ವಾಮಿಗಳು. ಪೂಜ್ಯರ ಅನುಪಮವಾದ ವಿಮಲಜ್ಞಾನ, ಅನುಭವ, ಅನುಭಾವದಿಂದ ಇದುವರೆಗೂ ಹದಿನೇಳು ಕೃತಿಗಳು ಸಾರಸ್ವತ ಲೋಕದ ಹೊಂಗಿರಣಗಳಂತೆ ಕಂಗೊಳಿಸಿವೆ. ಚತುರ್ಭಾಷಾ ಪ್ರವೀಣರಾದ ನಿರುಪಾಧೀಶ್ವರರು ಕನ್ನಡ ಭಾಷೆಯಲ್ಲಿಯೂ ಸಾಕಷ್ಟು ಕೃಷಿ ಮಾಡಿದವರು. ಕನ್ನಡದಲ್ಲಿ ಏಳು ವಚನ ಗ್ರಂಥಗಳನ್ನು, ನಾಲ್ಕು ಪುರಾಣಗಳನ್ನು, ಒಂದು ಶತಕ ಕೃತಿಯನ್ನು, ಒಂದು ಮುಕ್ತಕ ಕೃತಿಯನ್ನು ರಚಿಸಿದವರು. ಪೂಜ್ಯರು ಕನ್ನಡ ಸಾಹಿತ್ಯ ರೂಪಗಳಲ್ಲಿ ಷಟ್ಪದಿ, ತ್ರಿಪದಿ, ಚೌಪದಿ ರೂಪಗಳನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಬರೆದ ಪುರಾಣಗಳೆಲ್ಲ ಭಾಮಿನಿ ಷಟ್ಪದಿಯಲ್ಲಿವೆ. ಉಳಿದವುಗಳು ಆಧುನಿಕ ವಚನಗಳು ತ್ರಿಪದಿ, ಚೌಪದಿ…

0 Comments

ಕೋಲ ತುದಿಯ ಕೋಡಗದಂತೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕೋಲ ತುದಿಯ ಕೋಡಗದಂತೆ,ನೇಣ ತುದಿಯ ಬೊಂಬೆಯಂತೆ,ಆಡಿದೆನಯ್ಯಾ ನೀನಾಡಿಸಿದಂತೆ,ಆನು ನುಡಿದೆನಯ್ಯಾ ನೀ ನುಡಿಸಿದಂತೆ,ಆನು ಇದ್ದೆನಯ್ಯಾ ನೀನು ಇರಿಸಿದಂತೆ,ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-181)ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:ಯಂತ್ರವಾಹಕ: ಯಂತ್ರಗಳನ್ನು ನಡೆಸುವವ, ವಾಹನ ಚಾಲಕ. ವೈರಾಗ್ಯನಿಧಿ ಅಕ್ಕಮಹಾದೇವಿಯವರು 12 ನೇ ಶತಮಾನದಲ್ಲಿ ಉದಯಿಸಿದ ಅನುಪಮ ಕವಿಯಿತ್ರಿ. ಅಂತರ್ಮುಖಿಯಾದ ಶರಣೆ ಅಕ್ಕಮಹಾದೇವಿಯವರಿಗೆ ಕಾವ್ಯ ಭಾಷೆ ಸಿದ್ಧಸಿತ್ತು. ಅವರ ಅಧ್ಯಯನಶೀಲತೆ, ಸ್ವತಂತ್ರ ವೈಚಾರಿಕತೆ, ಅವರು ಕಂಡಂಥ ಜೀವನಾನುಭವ, ಅಭಿವ್ಯಕ್ತಿಯ ವಿಶಿಷ್ಠ ಶೈಲಿ ಅವರನ್ನು ಅನುಪಮ ಕವಿಯಿತ್ರಿಯಾಗಿ ಗುರುತಿಸುವಲ್ಲಿ ಸಹಕರಿಸುವ ಅಂಶಗಳಾಗಿವೆ. ನಾವಿಂದು ಹೇಳುವ ಕವಿ…

0 Comments

ಅವಳ ವಚನ ಬೆಲ್ಲದಂತೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅವಳ ವಚನ ಬೆಲ್ಲದಂತೆ,ಹೃದಯದಲಿಪ್ಪುದು ನಂಜು ಕಂಡಯ್ಯಾ.ಕಂಗಳಲೊಬ್ಬನ ಕರೆವಳು,ಮನದಲೊಬ್ಬನ ನೆರೆವಳು.ಕೂಡಲಸಂಗಮದೇವ ಕೇಳಯ್ಯಾ,ಮಾನಿಸಗಳ್ಳಿಯ ನಂಬದಿರಯ್ಯಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-33/ವಚನ ಸಂಖ್ಯೆ-110)ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:ನಂಜು: ವಿಷ,ಮಾನಿಸಗಳ್ಳಿ: ಕಳ್ಳಮನಸ್ಸಿನ ಜಾರೆ. ಬಸವಣ್ಣನವರ ಈ ವಚನದಲ್ಲಿ ವಿಶೇಷವಾಗಿ ಬಳಕೆಯಾದ ಶಬ್ದ “ಮಾನಿಸಗಳ್ಳಿ” ಎಂಬುದು. ಮನದಿಂದ ಮಾಡುವ ಕಳ್ಳತನದ ಪ್ರತೀಕ. ಮೋಸ, ವಂಚನೆ, ಕಪಟ, ಕಳ್ಳತನಗಳು ಲೌಕಿಕ ಜಗತ್ತಿನಲ್ಲಿ ಸರ್ವೇ ಸಾಮಾನ್ಯ. ವೈರಿಗಳೊಂದಿಗೆ ಮುಖಾಮುಖಿಯಾಗಿ ಹೋರಾಡಬಹುದು. ಅಲ್ಲಿ ಗೆಲುವಾದರೂ ಆಗಬಹುದು ಅಥವಾ ಸೋಲಾದರೂ ಆಗಬಹುದು. ಆದರೆ ನಯವಂಚಕರೊಂದಿಗೆ ನಡೆಸುವ ವ್ಯವಹಾರಗಳು ಅಪಾಯದ ಮಟ್ಟವನ್ನೂ ಮೀರಿ ನಮ್ಮನ್ನು ಒಯ್ಯುತ್ತವೆ. ಇಲ್ಲಿ ಪ್ರಾಣಹಾನಿಗಿಂತ…

0 Comments

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ – ವಚನ ವಿಶ್ಲೇಷಣೆ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆಧರೆ ಹತ್ತಿ ಉರಿದಡೆ ನಿಲಲುಬಾರದು.ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,ನಾರಿ ತನ್ನ ಮನೆಯಲ್ಲಿ ಕಳುವಡೆ,ತಾಯ ಮೊಲೆವಾಲು ನಂಜಾಗಿ ಕೊಲುವಡೆ,ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-26) 12 ನೇ ಶತಮಾನದಲ್ಲಿ ರಚನೆಯಾದ ಶರಣ ಸಾಹಿತ್ಯ ಅಥವಾ ವಚನ ಸಾಹಿತ್ಯವು 21 ನೇ ಶತಮಾನದಲ್ಲಿಯೂ ಕೂಡ ನಾವು ಬದುಕುತ್ತಿರುವ ಬದುಕಿನ ದಾರಿಗೆ ಮೌಲ್ಯಯುತವಾದ ಬೆಳಕನ್ನು ಚೆಲ್ಲುತ್ತಿರುವ ದಾರಿ ದೀಪಗಳಾಗಿವೆ. “ವ್ಯಕ್ತಿಗಳ ಪರಿವರ್ತನೆಯೇ ಸಮಾಜದ ಪರಿವರ್ತನೆ” ಎಂಬುದನ್ನು ಶರಣರು ತಮ್ಮ ಚಿಂತನೆಗಳ ಮೂಲಕ ತಮ್ಮ ನಡೆ-ನುಡಿ ಸಿದ್ಧಾಂತದ ಮೂಲಕ ಸಾಕ್ಷೀಕರಿಸಿದರು. ವಚನ ಸಾಹಿತ್ಯ…

0 Comments