ಕನ್ನಡ ಸಂಶೋಧನ ಜಗತ್ತಿನಲ್ಲಿ ಸಂಚಲನವನ್ನುಂಟು ಮಾಡಿದ ಮಾರ್ಗ-1 / ಶ್ರೀ. ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.
“ಮಾರ್ಗ” ಶಬ್ದಕ್ಕೆ ಅನ್ವೇಷಣೆ, ದಾರಿ, ಪದ್ಧತಿಯೆಂದು ಮೂರು ಅರ್ಥಗಳಿವೆ. ಸಾಹಿತ್ಯಕ್ಷೇತ್ರದಲ್ಲಿ ಈ ಮೂರೂ ಬಗೆಯ ಕಾರ್ಯಮಾಡಿರುವ ಡಾ. ಎಮ್. ಎಮ್. ಕಲಬುರ್ಗಿ ಅವರು ತಮ್ಮ ಎಲ್ಲ ಸಂಶೋಧನ ಪ್ರಬಂಧಗಳ ಸಂಕಲನವಾಗಿರುವ 8 ಸಂಪುಟಗಳಿಗೆ ಇಟ್ಟ ಶೀರ್ಷೀಕೆ “ಮಾರ್ಗ” ಹೆಸರು ತುಂಬ ಅನ್ವರ್ಥಕವಾಗಿದೆ. ಇದಲ್ಲದೆ ಅವರ ಪಿಎಚ್.ಡಿ ಪ್ರಬಂಧದ ಹೆಸರು “ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ”, ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥದ ಹೆಸರು “ಮಹಾಮಾರ್ಗ”, ಅವರು ಹುಟ್ಟಿದ್ದು ಮಾರ್ಗಶೀರ್ಷ ಮಾಸದಲ್ಲಿ. ಈ ಎಲ್ಲ ಆಕಸ್ಮಿಕಗಳ ಸಮನ್ವಯವೂ ಕುತೂಹಲಕರವೆನಿಸುತ್ತದೆ. ಕನ್ನಡ ಸೃಜನಶೀಲ ಸಾಹಿತ್ಯವು ನವೋದಯ, ನವ್ಯ, ನವ್ಯೋತ್ತರವೆಂಬ ಘಟ್ಟಗಳನ್ನು ರೂಪಿಸಿಕೊಳ್ಳುತ್ತ…