ಚಿನ್ಮಯಜ್ಞಾನಿ ಚನ್ನಬಸವಣ್ಣನವರು./ಡಾ. ವಿಜಯಕುಮಾರ ಕಮ್ಮಾರ.

ಕಂಗಳ ನೋಟ ಹೃದಯದ ಜ್ಞಾನ,ಮನದೊಳಗೆ ಮಾತನಾಡುತಿರ್ದೆನಯ್ಯಾ!ಜೇನ ಮಳೆಗಳು ಕರೆದವು,ಅಮೃತದ ಬಿಂದುಗಳು ಸುರಿದವು.ಕೂಡಲಚೆನ್ನಸಂಗನೆಂಬರಸಸಾಗರದೊಳಗೋಲಾಡುತಿರ್ದೆನಯ್ಯಾ.(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-507/ವಚನ ಸಂಖ್ಯೆ-1111) 12 ನೇಯ ಶತಮಾನದಲ್ಲಿ ಅದ್ಭುತವಾದ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಕ್ರಾಂತಿಯೊಂದು ನಡೆಯಿತು. ಈ ಕ್ರಾಂತಿಯನ್ನು ಹುಟ್ಟುಹಾಕಿದವರು ಬಸವಣ್ಣನವರು. ಬಸವಣ್ಣನವರು ನಡೆ-ನುಡಿ ಸಿದ್ಧಾಂತಕ್ಕೆ ಶಕ್ತಿಯಾದರೆ, ಅಲ್ಲಮಪ್ರಭುದೇವರು ಜ್ಞಾನ ವೈರಾಗ್ಯಕ್ಕೆ ಶಕ್ತಿಯಾದರು. ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನವರು ಅರಿವಿನ ಜ್ಞಾನಕ್ಕೆ ಭಾಷ್ಯವಾಗಿ ಜೀವಿಸಿದರು. ಬಸವಣ್ಣ, ಚನ್ನಬಸವಣ್ಣ, ಅಲ್ಲಮ ಪ್ರಭುಗಳು ಶರಣ ಸಂಸ್ಕೃತಿಯ ಮೂರು ಮುಖ್ಯ ಅಂಗಗಳಾಗಿ ಕೈಂಕರ್ಯಗೊಳ್ಳುತ್ತಾರೆ. ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಒತ್ತುಕೊಟ್ಟರೆ, ಅಲ್ಲಮರು ಆಧ್ಯಾತ್ಮಿಕ ಚಿಂತನೆಗೆ ಒತ್ತುಕೊಟ್ಟರು. ಚನ್ನಬಸವಣ್ಣನವರು ಲಿಂಗಾಯತ…

0 Comments

ಪ್ರಾಣಲಿಂಗಿ ಸ್ಥಲ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಂತರಂಗದೊಳಗಿರ್ದ ನಿರವಯಲಿಂಗವನುಸಾವಯವ ಲಿಂಗವ ಮಾಡಿ,ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,ಆ ಇಷ್ಟಲಿಂಗವೆ ಅಂತರಂಗವನಾವರಿಸಿಅಂತರಂಗದ ಕರಣಂಗಳೆ ಕಿರಣಂಗಳಾಗಿಬೆಳಗುವ ಚಿದಂಶವೆ ಪ್ರಾಣಲಿಂಗವು,ಆ ಮೂಲಚೈತನ್ಯವೆ ಭಾವಲಿಂಗವು.ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿಅಖಂಡ ಪರಿಪೂರ್ಣವಪ್ಪ ನಿಜವು ತಾನೆ,ಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-280 / ವಚನ ಸಂಖ್ಯೆ-971) ಅಂತರಂಗದೊಳಗೆ ನೆಲೆಗೊಂಡ ನಿರಾಕಾರವಾದ ಲಿಂಗವನ್ನು ಸಾಕಾರ ರೂಪದ ಲಿಂಗವ ಮಾಡಿ ಶ್ರೀಗುರುಸ್ವಾಮಿ ಕರಸ್ಥಲದಲ್ಲಿ ಇಷ್ಟಲಿಂಗ ರೂಪದಲ್ಲಿ ತಂದು ಕೊಟ್ಟನು. ಸಾಧಕ ಅಥವಾ ಶರಣ ಗುರುಮುಖವಾಗಿ ಬಂದ ಆ ಇಷ್ಟಲಿಂಗವನ್ನು ಪೂಜಿಸುತ್ತಾ ಪೂಜಿಸುತ್ತಾ ಮತ್ತೆ ಆ ಲಿಂಗವನ್ನು ತನ್ನ ಅಂತರಂಗದೊಳಗೆ ನೆಲೆಗೊಳಿಸುತ್ತಾನೆ. ಹೀಗೆ…

0 Comments

ಹೊರಗಲ್ಲ; ಒಳಗೇ ಇದೆ ಎಲ್ಲ! (ವಿಕಾಸವಾದದ ಅರ್ಥವನ್ನು ಧ್ವನಿಸುವ ವಚನ) / ಡಾ. ಬಸವರಾಜ ಸಾದರ, ಬೆಂಗಳೂರು.

ನಾವಿರುವ ಈ ಸೃಷ್ಟಿ ನಿತ್ಯ ಪರಿವರ್ತನಶೀಲವಾದದ್ದು. ಪರಿವರ್ತನೆ ಜಗದ ಹಾಗೂ ವಿಜ್ಞಾನದ ಒಂದು ಮುಖ್ಯ ನಿಯಮ. ವಿಕಾಸವಾದದ ಮೂಲ ಚಹರೆಯೇ ಪರಿವರ್ತನೆ. ಇಂಥ ಪರಿವರ್ತನಾ ಪ್ರಕ್ರಿಯೆಯ ವೇಗವು ವಸ್ತು ಮತ್ತು ಜೀವಿಗಳ ಸ್ವರೂಪಗಳನ್ನು ಆಧರಿಸಿ ನಿಗದಿತವಾಗಿರುತ್ತದೆ. ಬದಲಾವಣೆ ಮತ್ತು ಬೆಳವಣಿಗೆ ಎರಡೂ ಅದರ ಅಭಿನ್ನ ಅಂಗಗಳಾಗಿದ್ದು, ಅವೆರಡೂ ಪರಸ್ಪರ ಪೂರಕ ಮತ್ತು ಪ್ರೇರಕ ಗತಿಯಲ್ಲಿಯೇ ನಡೆದಿರುತ್ತವೆ. ಈ ಕಾರಣಕ್ಕಾಗಿ ಅದರ ವೇಗ ಒಂದು ನಿಗದಿತ ನಿಯಂತ್ರಣಾ ಕ್ರಮದಲ್ಲಿರುತ್ತದೆ. ಬದಲಾಗುವುದರ ಮೂಲಕವೇ ಗತಿಶೀಲತೆಯನ್ನು ಸಾಧಿಸುವ ಕಾರಣಕ್ಕೆ ಅದು ತಕ್ಷಣ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ. ಒಂದು ವಸ್ತು ಅಥವಾ ಜೀವಿಯ…

0 Comments

ಪ್ರಾಮಾಣಿಕ ಸತ್ಯ ಸಾಧಕಿ ಶರಣೆ ಸತ್ಯಕ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಕ್ಕಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ತಮ್ಮ ಮುಕ್ತ ಮನಸ್ಸಿನಿಂದ, ಸ್ವತಂತ್ರ ಆಲೋಚನೆಗಳಿಂದ ಎಲ್ಲರೂ ಬೆರಗಾಗುವಂತೆ ವಚನಗಳನ್ನು ರಚನೆ ಮಾಡಿದ್ದಾರೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗ್ರತ, ನವ ಸಾಕ್ಷರತೆಯ ಅರಿವನ್ನ ಮೂಡಿಸಿ ಸುಮಾರು 39 ಕ್ಕೂ ಹೆಚ್ಚು ಜನ ಶರಣೆಯರಿಗೆ ವಚನ ರಚನೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಬಸವಣ್ಣನವರ ಈ ಕ್ರಾಂತಿಯು ಶ್ರೇಣಿಕೃತ ಸಮಾಜದಲ್ಲಿನ ದೀನ-ದಲಿತರನ್ನು ಮೇಲೆತ್ತುವದರ ಜೊತೆಗೆನ ಕಡೆಗಣಸಲ್ಪಟ್ಟಿದ್ದ ಮಹಿಳೆಯರನ್ನು ಉದ್ಧಾರ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಕರೆ ತರುವದಾಗಿತ್ತು. ಮಹಿಳೆಯರು ಮನೆ…

0 Comments

ಸ್ತ್ರೀ ಸಮಾನತೆ-ವೈಜ್ಞಾನಿಕ ಪ್ರಯೋಗದ ಪ್ರಾತ್ಯಕ್ಷಿಕೆ / ಡಾ. ಬಸವರಾಜ ಸಾದರ, ಬೆಂಗಳೂರು.

ಸಾಮಾಜಿಕ ಅಸಮಾನತೆಯ ಮಾತು ಬಂದಾಗ ನಮ್ಮ ವ್ಯವಸ್ಥೆ ಸಾಮಾನ್ಯವಾಗಿ ಹೆಚ್ಚು ಮಾತನಾಡುವುದು ವರ್ಗ ಮತ್ತು ವರ್ಣ ಅಸಮಾನತೆಗಳ ಬಗ್ಗೆ ಮಾತ್ರ. ಇವುಗಳನ್ನೂ ಒಳಗೊಂಡ ಹಾಗೆ, ಪುರುಷಪ್ರಧಾನ ವ್ಯವಸ್ಥೆಯ ಕ್ರೌರ್ಯ ಮತ್ತು ಶೋಷಣೆಗೆ ಸಿಕ್ಕು ನಿರಂತರ ನಲುಗುತ್ತ ಬಂದ ಮಹಿಳೆಯರ ವಿಷಯಕವಾದ ಅಸಮಾನತೆಯ ಬಗ್ಗೆ ಅದು ಅಷ್ಟಾಗಿ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಅತ್ಯಂತ ಹೀನ ನಡೆ. “ಮನು” ಕುಲದ ಆರಂಭದಿಂದ ನಡೆದೇ ಇರುವ ಮಹಿಳಾ ಅಸಮಾನತೆಯಾಚರಣೆಯು ಕಾಲ ಕಾಲಕ್ಕೆ ವಿವಿಧ ರೂಪಗಳನ್ನು ತಾಳುತ್ತ ಬಂದಿದೆಯಷ್ಟೇ ಅಲ್ಲ, ಈಗಂತೂ ಕ್ರೌರ್ಯದ ಪರಮಾವಧಿಯನ್ನೇ ಪಡೆದು, ಅವಳ…

3 Comments

ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ “ತನುವ ತೋಂಟವ ಮಾಡಿ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ,ಅಗೆದು ಕಳೆದೆನಯ್ಯ ಭ್ರಾಂತಿಯ ಬೇರ.ಒಡೆದು ಸಂಸಾರದ ಹೇಂಟೆಯ,ಬಗಿದು ಬಿತ್ತಿದೆನಯ್ಯ ಬ್ರಹ್ಮ ಬೀಜವ.ಅಖಂಡ ಮಂಡಲವೆಂಬ ಭಾವಿ, ಪವನವೇ ರಾಟಾಳ,ಸುಷುಮ್ನನಾಳದಿಂದ ಉದಕವ ತಿದ್ದಿ,ಬಸವಗಳೈವರು ಹಸಗೆಡಿಸಿಹರೆಂದುಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,ಆವಾಗಳೂ ಈ ತೋಂಟದಲಿ ಜಾಗರವಿದ್ದುಸಸಿಯ ಸಲುಹಿದೆನು ಕಾಣಾ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-454 / ವಚನ ಸಂಖ್ಯೆ-1217) ಅಲ್ಲಮ ಪ್ರಭುಗಳು ಸಾಧನೆಯನ್ನ ನಿರೂಪಿಸಿರುವ ಈ ವಚನ ಸಾಧಕ ವೃಂದಕ್ಕೆನೇ ಆದರ್ಶಪ್ರಾಯವಾಗಿರುವ ದೃವ ನಕ್ಷತ್ರದಂತಿದೆ. ಈ ವಚನವನ್ನ ನೋಡಿದ ಕೂಡಲೆ ಕೃಷಿಗೆ ಸಂಬಂಧಿಸಿದ ವಚನ ಅನಿಸಿದರೂ ಕೂಡ ದೇಹವನ್ನೆ ತೋಟವನ್ನಾಗಿ ಮಾಡಿಕೊಂಡು ಹೇಗೆ…

0 Comments

ಪರಸ್ಪರಾವಲಂಬನ ಸಿದ್ಧಾಂತದ ವೈಜ್ಞಾನಿಕ ವಚನ / ಡಾ. ಬಸವರಾಜ ಸಾದರ, ಬೆಂಗಳೂರು.

ಸೃಷ್ಟಿಯ ಪ್ರತಿಯೊಂದು ವಸ್ತು ಮತ್ತು ಜೀವಿಯೂ ‘ಪರಸ್ಪರಾವಲಂಬನ’ ಸಿದ್ಧಾಂತದ ಮೂಲಕವೇ ತಮ್ಮ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುತ್ತವೆ ಮತ್ತು ಆ ಮೂಲಕವೇ ತಮ್ಮ ಬೆಳವಣಿಗೆಯನ್ನು ಸಾಧಿಸುತ್ತವೆ. ಇದು ವೈಜ್ಞಾನಿಕ ಸತ್ಯ. ಹೀಗೆ ಪರಸ್ಪರ ಅವಲಂಬಿತವಾಗುವ ವಸ್ತು ಮತ್ತು ಜೀವಿಗಳ ಸಂಬಂಧದಲ್ಲಿ ಮುಖ್ಯವಾಗಿ ಪ್ರವೃತ್ತವಾಗುವುದು ಅವುಗಳಲ್ಲಿನ ಪೂರಕ (Complimentary) ಗುಣ ಮತ್ತು ಪರಸ್ಪರ ಹೊಂದಿಕೊಳ್ಳುವ (Compatibility) ಸ್ವಭಾವ. ಅಂಥ ಸಂಬಂಧ ಕುದುರಿದಾಗ ಮಾತ್ರ ಅಪೇಕ್ಷಿತ ಮತ್ತು ನಿರೀಕ್ಷಿತ ಪರಿಣಾಮ ದೊರೆಯಲು ಸಾಧ್ಯ. ಪರಸ್ಪರಾವಲಂಬನದ ಈ ಸಂಬಂಧವು ಹೊಸ ಸೃಷ್ಟಿಯ ಮೂಲವೂ ಹೌದು. ಜಗತ್ತಿನ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ ಐನ್‌ಸ್ಟಿನ್‌ನ ‘ಸಾಪೇಕ್ಷ…

0 Comments

ಶರಣ ಸಂಸ್ಕೃತಿಯ ಆರ್ಥಿಕ ಮೌಲ್ಯಗಳು / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಆನೆ ಕುದುರೆ ಭಂಡಾರವಿರ್ದಡೇನೊ?ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1523 / ವಚನ ಸಂಖ್ಯೆ-1504) ವಚನ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು…

2 Comments

ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನ ವಿಶ್ಲೇಷಣೆ / ಅರಸಿ ತೊಳಲಿದಡಿಲ್ಲ ಹರಸಿ ಬಳಲಿದಡಿಲ್ಲ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ,ಬಯಸಿ ಹೊಕ್ಕಡಿಲ್ಲ, ತಪಸ್ಸು ಮಾಡಿದಡಿಲ್ಲ.ಅದು ತಾನಹ ಕಾಲಕ್ಕಲ್ಲದೆ ಸಾದ್ಯವಾಗದುಶಿವನೊಲಿದಲ್ಲದೆ ಕೈಗೂಡದುಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕುದೆನು.(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-19 / ವಚನ ಸಂಖ್ಯೆ-40) ವಚನ ಸಾಹಿತ್ಯದಲ್ಲಿ ಮಹಿಳೆ ಎಂದರೆ ಪ್ರಪ್ರಥಮವಾಗಿ ಅಕ್ಕಮಹಾದೇವಿ ನೆನಪಾಗುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಪ್ರಥಮ ಕ್ರಾಂತಿಯ ರೂವಾರಿ. ಶರಣೆಯರ ಅಭಿವ್ಯಕ್ತತೆ. ಅಕ್ಷರ ಸಂಸ್ಕೃತಿಯ ಮೇರುತನವನ್ನು ಬಿಂಬಿಸುವಲ್ಲಿ ಅಕ್ಕನ ಪಾತ್ರ ಹಿರಿದಾಗಿದೆ. ಈ ವಚನದಲ್ಲಿ ಅರಸಿ ಮುಖ್ಯವಾದರೂ ಶರಣರ ಕಾಲದ ನಿಷ್ಠುರತೆಯನ್ನು ವಿಶಿಷ್ಟ ವೈಚಾರಿಕತೆಯ ಅನಿವಾರ್ಯತೆಯನ್ನು ಬಿಂಬಿಸುತ್ತದೆ. ಅರಸಿಯಾದವಳು ತನ್ನ ಪ್ರಜೆಗಳ ಒಡನಾಟದಲ್ಲಿ…

0 Comments

ಮರಳುಸಿದ್ದೇಶ್ವರ ಮತ್ತು ಅಕ್ಕಮಹಾದೇವಿ / ಡಾ. ಸುಜಾತಾ ಅಕ್ಕಿ, ಮೈಸೂರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನಯುಗ ವಿಶ್ವಕ್ಕೆ ಮಾದರಿ. ಕನ್ನಡದ ಸಾಂಸ್ಕೃತಿಕ ಚರಿತ್ರೆಯು ಎಷ್ಟೋ ಲಿಪಿ ಮತ್ತು ಲಿಪಿರಹಿತ ಭಾಷೆಗಳ ಪ್ರಭಾವವನ್ನು ಮೀರಿದುದಾಗಿದೆ. ಶೈವ ಮತ್ತು ವೈಷ್ಣವ ಪರಂಪರೆಗಳು ಬೆಳೆಯುತ್ತ ಬಂದಂತೆಲ್ಲಾ ಸ್ಥಾವರವನ್ನು ಪಡೆದು ಶಿಲ್ಪ ಕಲೆ ಸಂಗೀತ ಸಾಹಿತ್ಯದಂತಹ ಏಳು ಲಲಿತ ಕಲೆ ಮತ್ತು ನವರಸಗಳನ್ನು ಮೇಳೈಸಿಕೊಂಡು ಪರಂಪರೆಯಲ್ಲಿ ಸಾಕಾರಗೊಂಡವು. ಬೀದಿಯ ಕೂಸಾಗಿ ಬೆಳೆದ ಕನ್ನಡ ಇಂದು ವಿಶ್ವ ಸಾಹಿತ್ಯದಲ್ಲಿ ಗುರುತಿಸಲ್ಪಟ್ಟು ಇಂಗ್ಲೆಂಡ್ ನಲ್ಲಿ ನಗರದ ಲ್ಯಾಂಬೆತ್ ನದಿಯ ದಂಡೆಯಲ್ಲಿ ವಿಶ್ವ ಪ್ರಥಮ ಸಂಸತ್ತಿನ ರೂವಾರಿಯಾಗಿ ಮೂರ್ತ ಸ್ವರೂಪದಲ್ಲಿ ವಿರಾಜಿಸುತ್ತಿದ್ದಾನೆ. ಕನ್ನಡದ ಹೆಮ್ಮೆಯ ಕನ್ನಡಿಗ. ಇಂದು ವಿಜಯಪುರದ…

0 Comments