ಅಲ್ಲಮಪ್ರಭುಗಳ “ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ” ವಚನ ವಿಶ್ಲೇಷಣೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ,ಮೇದು ಬಂದೆನೆಂದಡೆ,ಇದ ಕಂಡು ಬೆರಗಾದೆ.ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದಡೆ,ಇದ ಕಂಡು ಬೆರಗಾದೆ.ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ,ಇದ ಕಂಡು ಬೆರಗಾದೆ, ಗುಹೇಶ್ವರಾ(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-14/ವಚನ ಸಂಖ್ಯೆ-27) ಅಲ್ಲಮಪ್ರಭುಗಳ ಈ ಬೆಡಗಿನ ವಚನ ಮನುಷ್ಯ ಸ್ವಭಾವದ ಒಳ ಸೂಕ್ಷ್ಮತೆಗಳನ್ನು ಸ್ವಾರಸ್ಯಕರ ಮತ್ತು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಅಜ್ಞಾನದಲ್ಲಿ ಓಲಾಡುವ ಮನಸ್ಸಿಗೆ ಎಚ್ಚರಿಕೆ ಕೊಡುವ ಸಮರ್ಥನೆಯಾಗಿದೆ. ಆಧ್ಯಾತ್ಮದ ಬೆಳಕನ್ನು ಉಜ್ವಲಗೊಳಿಸುವ ಸಮರ್ಥನೆಯದು. ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಆ ಕಾಲದ ತಾತ್ವಿಕ ಪರಂಪರೆಗಳ ಅಸ್ತಿತ್ವ ಮತ್ತು ಅನಿರೀಕ್ಷಿತವಾದ ನಿಗೂಢತೆ…

0 Comments

ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? / ಶ್ರೀ. ಎನ್. ಸಿ. ಶಿವಪ್ರಕಾಶ್, ಮಸ್ಕತ್, ಒಮಾನ್.

ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಲಿಂಗವಿಲ್ಲದ ಅಂಗದಂತೆ?ಜಂಗಮವಿಲ್ಲದ ಲಿಂಗದಂತೆ?ರಾಜನಿಲ್ಲದ ರಾಜ್ಯದಂತೆ?ಕರ್ಪೂರದರಿವು ಉರಿದ ಮಹಾ ಮಂಗಳಾರತಿಯಂತೆ? ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಕಟ್ಟುತ್ತಿರಬಹುದಲ್ಲಿ ಸಂಜೆಯಅನುಭವ ಮಂಟಪ ಹೊನ್ನಕಲಶವಿಲ್ಲದೆನಡೆಯುತ್ತಿರಬಹುದಲ್ಲಿ ಮಹಾಮನೆದಾಸೋಹ ನಿಜಭಿತ್ತಿಯಿಲ್ಲದೆ ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಕಲ್ಯಾಣಕೆ ಆತ್ಮಕಳೆಯ ತಂದವನು ಬಸವಚಾಲುಕ್ಯ ಕಲ್ಯಾಣವ ಕೈಲಾಸವಾಗಿಸಿದವನು ಬಸವಭವಿಯೆಂಬ ಮರಳುಗಾಡಿನಲಿ ಭಕ್ತಿಸುಧೆಯ ಹರಿಸಿದವನು ಬಸವಸಮಸಮಾಜದ ಕನಸ ಸಮುದಾಯದ ಸೆರಗಿಗೆ ಕಟ್ಟಿದವನು ಬಸವ ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಬಯಲಿತ್ತು, ಆಲಯವಿತ್ತು ಕಲ್ಯಾಣನಗರಿಯೊಳುಬಯಲು ಆಲಯಗಳ ಭ್ರಮೆಯ ಕಳೆದವನುಆಲಯದೊಳೂ ಇಲ್ಲ, ಬಯಲಲೂ ಇಲ್ಲಬಿಜ್ಜಳನ ಮನ ಮುಂದಣ ಆಸೆ ನುಂಗಿತ್ತೇ…

0 Comments

ಕುಂಬಳಕಾಯಿ ಕಳ್ಳರಿದ್ದರೆ, ಹೆಗಲು ಮುಟ್ಟಿ ನೋಡಿಕೊಳ್ಳಲೂಬಹುದು/ಲೇಖಕರು:ಡಾ.ಬಸವರಾಜ ಸಾದರ, ಬೆಂಗಳೂರು.

ವಚನಗಳು ಏಕಕಾಲಕ್ಕೆ ವ್ಯಕ್ತಿ ಮತ್ತು ವ್ಯವಸ್ಥೆ ಎರಡರ ಒಳಗಿರುವ ಕೊಳೆಗಳನ್ನು ಎತ್ತಿ ತೋರಿಸಿ, ಆ ಕೊಳೆಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಅನನ್ಯ ಮಾರ್ಗ ಸೂಚಿಸುವುದು ಒಂದು ವಿನೂತನ ಅಭಿವ್ಯಕ್ತಿ ಕ್ರಮ. ಒಂದೇ ನೋಟದಲ್ಲಿ ಎರಡು ದೃಶ್ಯಗಳನ್ನು ಕಾಣಿಸುವ ಈ ಕ್ರಮದಲ್ಲಿ ಎದ್ದು ಕಾಣುವುದು ಶರಣರ ಪ್ರತಿಭೆ ಮತ್ತು ಅವರ ಪ್ರಗತಿಪರ ಸಮಾಜಮುಖಿ ಚಿಂತನೆ. ಈ ಪರಿಪೇಕ್ಷದಲ್ಲಿ ಗಮನಿಸುವಾಗ ಬಹಳಷ್ಟು ವಚನಗಳು ಒಳಗೆ ಮತ್ತು ಹೊರಗೆ ಧ್ವನಿಸುವ ಎರಡೂ ಅರ್ಥಗಳಲ್ಲಿ ಒಂದು ಅನನ್ಯವಾದ ಆಂತರಿಕ ಸಂಬಂಧವಿರುವುದು ಸೂಕ್ಷ್ಮ ನೋಟಕ್ಕೆ ತಿಳಿಯುತ್ತದೆ. ಯಾರು ಯಾವ ಕಣ್ಣಿನಿಂದ ನೋಡುತ್ತಾರೋ, ಆ ಬಗೆಯಲ್ಲಿ ಅವು ತಮ್ಮ…

1 Comment

 ಶರಣೆ ಗಂಗಾಂಬಿಕೆ ವ್ಯಕ್ತಿತ್ವದ ಶೋಧ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

12 ನೇ ಶತಮಾನ ವಚನ ಸಾಹಿತ್ಯ ರಚನೆಯಲ್ಲಿ ಒಂದು ಪ್ರಗತಿಪರವಾದ ಕಾಲಘಟ್ಟ. ಸಾಮಾಜಿಕ ಸುಧಾರಣೆಯ ಸಂದರ್ಭದಲ್ಲಿ ರಚನೆಯಾದ ಶರಣ ಸಾಹಿತ್ಯ ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪ್ರಕಟವಾದವು. ಅಂದು ಎಲ್ಲಾ ವರ್ಗದ ಸ್ತ್ರೀಯರು ಸಾಹಿತ್ಯ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಮುನ್ನಡೆಯ ಪ್ರಚಲಿತ ಹಂತವದು. ಸ್ತ್ರೀಯರಿಗೆ ಆತ್ಮವಿಶ್ವಾಸ, ಸಮಾನತೆಯ ಅವಕಾಶವನ್ನು ಕೊಟ್ಟದ್ದು ಇದೇ ಕಾಲದಲ್ಲಾಗಿತ್ತು. ಸ್ತ್ರೀ ವಚನಕಾರರಲ್ಲಿ ವೈರಾಗ್ಯನಿಧಿ ಅಕ್ಕ ಮಹಾದೇವಿಯವರು ಮೊದಲು ನೆನಪಾದರೂ ಕೂಡ ಗಂಗಾಂಬಿಕೆ, ನೀಲಾಂಬಿಕೆ, ಮುಕ್ತಾಯಕ್ಕ, ಅಕ್ಕನಾಗಮ್ಮ, ಮೋಳಿಗೆ ಮಹಾದೇವಿ, ಕದಿರೆ ರೆಮ್ಮವ್ವೆ, ಕಾಳವ್ವೆ, ಗುಡ್ಡವ್ವೆ. ಮಸಣಮ್ಮ, ಸೂಳೆ ಸಂಕವ್ವೆ, ರಾಯಮ್ಮ ಹೀಗೆ ಹಲವಾರು…

0 Comments

ಪ್ರಕೃತಿ ಸಾಂಗತ್ಯದಲ್ಲಿ ಅಕ್ಕ / ಶ್ರೀಮತಿ. ಶಾರದಾ ಕೌದಿ, ಧಾರವಾಡ.

ವನವೆಲ್ಲ ಕಲ್ಪತರು, ಗಿಡವೆಲ್ಲ ಮರುಜಿವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ,ಜಲವೆಲ್ಲ ನಿರ್ಜರಾಮೃತ ಮೃಗವೆಲ್ಲ ಪುರುಷ ಮೃಗ,ಎಡಹುವ ಹರಳೆಲ್ಲ ಚಿಂತಾಮಣಿ.ಚೆನ್ನಮಲ್ಲಿಕಾರ್ಜುನಯ್ಯನ ನೆಚ್ಚಿನ ಗಿರಿಯ ಸುತ್ತಿ,ನೋಡುತ್ತ ಬಂದುಕದಳಿಯ ಬನವ ಕಂಡೆ ನಾನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-126/ವಚನ ಸಂಖ್ಯೆ-360) ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾ ಕಲ್ಯಾಣದಿಂದ ಶ್ರೀಶೈಲಕ್ಕೆ ಹೊರಟ ಅಕ್ಕ ಮಹಾದೇವಿ ಗಿರಿಯನ್ನು ಸುತ್ತುತ್ತಾ ಹೊರಟಾಗ ಅಲ್ಲಿಯ ಪ್ರಕೃತಿ ಸೌಂದರ್ಯ ಕಂಡು ವಿಸ್ಮಯಳಾಗುತ್ತಾಳೆ. ಅಕ್ಕನ ಆತ್ಮಸಂಗಾತ ಚೆನ್ನಮಲ್ಲಿಕಾರ್ಜುನಯ್ಯನಿರುವ ಗಿರಿಯ ಒಂದೊಂದು ಗಿಡ ಮರ ಬಳ್ಳಿ ಎಲ್ಲವು ಅವಳಿಗೆ ಅಮೂಲ್ಯ. ಅವಳ ಪಾಲಿಗೆ ಅವು ಬೇಡಿದ್ದನ್ನು ನೀಡುವ ಕಲ್ಪತರು. ನಡೆದು…

2 Comments

ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ / ಶ್ರೀಮತಿ. ದೇವೇಂದ್ರಮ್ಮ, ರಾಯಚೂರು.

ಆಸೆಯೆಂಬುದು ಅರಸಿಂಗಲ್ಲದೆ,ಶಿವಭಕ್ತರಿಗುಂಟೆ ಅಯ್ಯಾ?ರೋಷವೆಂಬುದು ಯಮದೂತರಿಗಲ್ಲದೆ,ಅಜಾತರಿಗುಂಟೆ ಅಯ್ಯಾ?ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆದೂರ ಮಾರಯ್ಯ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-708) ಆಸೆ ಅನ್ನುವುದು ಅರಸನಾದ ಭವಿಗೆ ಇರತದ. ಅರಸನಿಗೆ ಈ ರಾಜ್ಯ ಗಳಿಸಿದರೆ ಇನ್ನೊಂದು ರಾಜ್ಯ ಗಳಿಸಬೇಕು. ಇನ್ನೊಂದು ರಾಜ್ಯ ಗಳಿಸಿದರೇ ಮಗದೊಂದು ರಾಜ್ಯದ ಅಧಿಕಾರ ನನ್ನ ಕೈಲಿ ಇರತದ, ಅಧಿಕಾರ ಇದ್ದರೇ ನನಗ ಮರ್ಯಾದೆ ಗೌರವ ಸಿಗತದ ಅನ್ನುವ ಭಾವನೆ ರಾಜನಿಗೆ ಇರುತ್ತದೆ. ಶಿವಭಕ್ತರಾದ ನಮಗ ಯಾಕೆ ಅಂತಹ ಆಸೆ? ಯಾವ ಅಧಿಕಾರ, ಆಸ್ತಿ, ದುಡ್ಡು, ಅನ್ಯಾಯದ ದುಡಿಮೆಯ ಆಸೆಯೂ ನಮಗೆ ಬೇಡ. ಸತ್ಯ ಶುದ್ಧ ಕಾಯಕದಿಂದ…

0 Comments

“ಸಾವಿರ ವ್ರತ-ಸಾಧನೆಯ ಫಲಗಳನ್ನೂ ಮಣ್ಣುಗೂಡಿಸುವ ಒಂದು ಹಾದರ” ಡಾ. ಬಸವರಾಜ ಸಾದರ,ಬೆಂಗಳೂರು.

ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾದ ‘ಕೆಲವು’ ಮಠಾಧಿಪತಿಗಳ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಮುಕ್ತ ಚರ್ಚೆ ನಡೆಯುತ್ತಿತ್ತು. ಸಹಜವಾಗಿಯೇ ಅಲ್ಲಿ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಅದರಲ್ಲಿ ಒಂದು ಪಕ್ಷದವರು ಅತ್ಯಾಚಾರಿ ಸ್ವಾಮಿಗಳನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದರೆ, ಮತ್ತೊಂದು ಕಡೆಯವರು ಅವರನ್ನೇ ಸಮರ್ಥಿಸಿಕೊಳ್ಳುತ್ತಿದ್ದರು. ಸಮರ್ಥನೆ ಮಾಡಿಕೊಳ್ಳುತ್ತಿದ್ದವರು ತಮ್ಮ ಮಾತುಗಳಿಗೆ ಕೊಡುತ್ತಿದ್ದ ಸಾಕ್ಷಿಗಳು ಅಚ್ಚರಿ ಮೂಡಿಸುವಂತಿದ್ದವು. ಕೆಲವೆಂದರೆ:• ಪಟ್ಟಾಭಿಷೇಕವಾದ ದಿನದಿಂದ ಈವರೆಗೂ ನಮ್ಮ ಸ್ವಾಮಿಗಳು ಮಾಡಿರುವ ಸಮಾಜೋಪಯೋಗಿ ಕೆಲಸಗಳು ಸಾವಿರಾರು.• ನೂರಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ.• ಉಚಿತ ಪ್ರಸಾದ ನಿಲಯಗಳನ್ನು ನಡೆಸುತ್ತಿದ್ದಾರೆ.• ನಿರಂತರ…

1 Comment

ಜಾನಪದ ಲೋಕದಲ್ಲಿ ಬಸವನೆಂಬ ದೇವರು / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಜನಪದರ ಶರಣ ಧರ್ಮದ ಹರಹು ವಿಶಾಲವಾದದ್ದು. ಅದನ್ನು ನಿರ್ದಿಷ್ಟ ಅರ್ಥದಲ್ಲಿ ಕಟ್ಟಿ ಹಾಕಲಾಗುವುದಿಲ್ಲ. ಹೀಗಾಗಿ ಮೌಖಿಕ ಜನಪದ ಸಾಹಿತ್ಯ ಮುಗ್ಧಶರಣರ ಸತ್ಯದ ಅನೇಕ ಮುಖಗಳನ್ನು ಅನಾವರಣಗೊಳಿಸುತ್ತದೆ. ಅನಕ್ಷರಸ್ಥರ ಆಡುಮಾತಿನ ಸರಳತೆ ಖಚಿತತೆಯನ್ನು ಶರಣಧರ್ಮದ ಪವಿತ್ರತೆಯನ್ನು ಸ್ಪಷ್ಟಪಡಿಸುತ್ತದೆ. ತಾವು ಕಂಡ ಜೀವನದ ಚಿಕ್ಕ ಚಿಕ್ಕ ಘಟನೆಯ ಅನುಭವಗಳನ್ನು ಜೀವದುಂಬಿ ದಾಖಲಿಸುವ ಅವರ ಜ್ಞಾನದ ತೀಕ್ಷ್ಣಣತೆಯೂ ಅನವರತ. ತಮ್ಮ ಎದೆಯಾಳದಲ್ಲಿ ನೈತಿಕ ಪ್ರೀತಿ ಬಿಂಬಿಸುತ್ತಾ ತಾಯಿ ಭಾವ ವ್ಯಕ್ತಪಡಿಸುವುದೂ ಒಂದು ರೋಮಾಂಚನ. ಪ್ರಕೃತಿಯ ಸತ್ಯವನ್ನೇ ದೇವರೆಂದು ತಿಳಿದ ಜನಪದರು ನಿಸರ್ಗದ ಮೂಲಕವೇ ಸಂಭಾಷಣೆಗೆ ತೊಡಗುತ್ತಾರೆ. ಏಕೆಂದರೆ ಅವರ ಒಡಲೊಳಗೆ ಶರಣಧರ್ಮದ…

2 Comments

ಒಂದೇ ಶರೀರದ ಇತ್ತಲೆಯಲ್ಲಿ ಒತ್ತಲೆಗೆ ವಿಷ ಹಾಕಿದರೆ? / ಡಾ. ಬಸವರಾಜ ಸಾದರ, ಬೆಂಗಳೂರು.

ಸಮಾಜವಾದ ಎಂಬ ಶಬ್ದವನ್ನು ಬಳಸದೆ, ಆ ಸಿದ್ಧಾಂತಕ್ಕೆ ಸಮರ್ಥ ಉದಾಹರಣೆಯಾಗಬಲ್ಲ, ಸಮತೆಯುಕ್ತ ಸಮಾಜದ ನಿರ್ಮಾಣಕ್ಕೆ ಮೊದಲು ಮಾಡಿದರು 12 ನೇಯ ಶತಮಾನದ ಶರಣರು. ಇದು ಚಾರಿತ್ರಿಕ ವಾಸ್ತವ. ಸರ್ವರ ಹಿತವನ್ನು ಸಮಾನ ನೆಲೆಯಲ್ಲಿ ಸಾಧಿಸ ಹೊರಟ ಅವರ ಕ್ರಿಯಾತ್ಮಕ ನಡೆ ಎಲ್ಲ ಕಾಲಕ್ಕೂ ಮಾದರಿಯಾಗುವಂಥದ್ದು. ‘ವ್ಯಕ್ತಿ ಹಿತದಲ್ಲಿಯೇ ಸಮಾಜದ ಹಿತವಿದೆ’ ಎಂಬ ಪ್ರಾಯೋಗಿಕ ಸಿದ್ಧಾಂತವನ್ನು ಅನುಸರಿಸುವುದರ ಜೊತೆಗೆ, ಏಕಕಾಲದಲ್ಲಿ ವ್ಯಕ್ತಿ ಮತ್ತು ಸಮುದಾಯ ಎರಡರ ಹಿತವನ್ನೂ ಸಾಧಿಸ ಹೊರಟ ಅವರ ಒಟ್ಟು ಉದ್ದೇಶ ‘ಸಕಲಜೀವಾತ್ಮರ ಲೇಸನ್ನೇ ಬಯಸು’ ವುದಾಗಿತ್ತು. 20 ನೇಯ ಶತಮಾನದಲ್ಲಿ ಇದನ್ನೇ ಗಾಂಧೀಜೀಯವರ ‘ಸರ್ವೋದಯ’…

0 Comments

ವಿಶ್ವಶಾಂತಿಗೆ ಶರಣರು ನೀಡಿದ ಶಾಂತಿ ಸೌಹಾರ್ದತೆಯ ಸಂದೇಶಗಳು / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕರಿ ಘನ; ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾಗಿರಿ ಘನ; ವಜ್ರ ಕಿರಿದೆನ್ನಬಹುದೆ? ಬಾರದಯ್ಯಾತಮಂಧ ಘನ; ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾಮರಹು ಘನ; ನಿಮ್ಮ ನೆನೆವ ಮನ ಕಿರಿದೆನ್ನಬಹುದೆ? ಬಾರದಯ್ಯಾಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-7/ವಚನ ಸಂಖ್ಯೆ-6) ಎಲ್ಲರಿಗೂ ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು ಹಾಗೂ ಎಲ್ಲರಿಗೂ ಶರಣು ಶರಣಾರ್ಥಿಗಳು. ಸೌಹಾರ್ದತೆಯ ಬೀಜ ಬಿತ್ತಿ ಧರೆಯ ಮೇಲೆ ಸುಂದರವಾದ ಸಮ ಸಮಾಜವನ್ನು ಕಟ್ಟಬಯಸಿದ ಬಸವಾದಿ ಶಿವಶರಣರು ನಿತ್ಯ ಸ್ಮರಣಿಯರಾಗಿದ್ದಾರೆ. ಲೋಕದಂತೆ ಬಾರರು, ಲೋಕದಂತೆ ಇರರು,ಲೋಕದಂತೆ ಹೋಹರು, ನೋಡಯ್ಯಾ.ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,ಮುಕ್ತಿಯಂತೆ ಹೋಹರು, ನೋಡಯ್ಯಾ.ಉರಿಲಿಂಗದೇವಾ, ನಿಮ್ಮ ಶರಣರುಉಪಮಾತೀತರಾಗಿ ಉಪಮಿಸಬಾರದು.(ಸಮಗ್ರ ವಚನ…

0 Comments