ವಚನ ಸಾಹಿತ್ಯ-ಸಂಶೋಧನೆಯ ಸವಾಲುಗಳು | ಡಾ. ವೀರೇಶ ಬಡಿಗೇರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

“No Source, No Research” ಎನ್ನುವಂತೆ ಸಂಶೋಧನೆಗೆ ಆಕರಗಳೇ ಪ್ರಮುಖ ಎಂದು ನಂಬಲಾಗಿದೆ. ಇದರಲ್ಲಿ ಎರಡು ಪ್ರಕಾರಗಳನ್ನು ಗುರುತಿಸಬಹುದು. ಬೌದ್ಧಿಕ ಆಕರಗಳು. ವಚನಗಳ ಅಂತಃಸಂಭಾವ್ಯತೆಗಳು. ವಚನಕಾರರಿಗೆ ಸಂಬಂಧಿಸಿದಂತೆ ಶಾಸನಗಳು, ಐತಿಹ್ಯಗಳು, ಸ್ಥಳ ಪುರಾಣಗಳು, ಸಂಪ್ರದಾಯಗಳು, ಇತಿಹಾಸದ ಆಕರಗಳು, ಜನಪದ ಹಾಗೂ ಶಿಷ್ಟ ಪುರಾಣಗಳು ಒಂದು ರೀತಿಯ ಆಕರಗಳಾದರೆ, ವಚನಗಳೇ ಕಟ್ಟಿಕೊಡುವ ಆಂತರಿಕ ಸಾಕ್ಷ್ಯಗಳು ಇನ್ನೊಂದು ರೀತಿಯ ಆಕರಗಳು. ಇದನ್ನೇ ಅಂತರ್‌ಸಂಭಾವ್ಯತೆ, ಅಂತರ್‌ಪಠ್ಯೀಕರಣ ಎಂದು ಕರೆಯಲಾಗುತ್ತದೆ. ಒಂದು ವಚನವೇ ಪಠ್ಯವಾಗುವ, ಆ ಪಠ್ಯದಲ್ಲಿಯೇ ಹಲವು ಪಠ್ಯಗಳಿರುವ ಹಲವು ಆಲೋಚನೆಗಳಿರುವ ಸಂಗತಿಯನ್ನು ಗಮನಿಸಬಹುದು. ಸಮಸ್ಯೆ ಒಂದು ಸಾಮಾನ್ಯವಾಗಿ ವಚನ ಸಂಸ್ಕೃತಿಯನ್ನು…

0 Comments

ಊಳಿಡುತ್ತಿರುವ ವಿಷಭಟ್ಟನ ಶ್ವಾನಗಳು | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಅನುಭವ ಮಂಟಪ ಕುರಿತು ಡಾ. ಶಿವಾನಂದ ಜಾಮದಾರ ಅವರು, ಡಾ. ಬೆಲ್ದಾಳ ಶರಣರು, ಶ್ರೀ ರಂಜಾನ್ ದರ್ಗಾ ಅವರು, ಡಾ. ವಿಶ್ವಾರಾಧ್ಯ ಸತ್ಯಂಪೇಟೆ ಮುಂತಾದ ಅನೇಕ ವಚನ ಸಾಹಿತ್ಯದ ವಿದ್ವಾಂಸರುಗಳು ಸಾಕ್ಷೀ ಸಮೇತ ನಿರೂಪಿಸಿದ ಬಳಿಕವೂ ಈ ಥರಾ ಬರೆಯುವ ಅವಶ್ಯಕತೆ ಮತ್ತು ಇವರ ಉದ್ದೇಶವೇನು ಅಂತಾ ಅರ್ಥಾ ಆಗತಾ ಇಲ್ಲಾ. ಪ್ರಧಾನಿಗಳು ಹೊಸ ಸಂಸತ್ ಭವನಕ್ಕೆ ಅನುಭವ ಮಂಟಪವೇ ಮಾದರೀ ಅಂತ ಹೇಳಿದ್ದಕ್ಕೆ ಹೊಟ್ಟೆ ಉರೀನಾ ??? ಬಸವಣ್ಣ ಸಾಂಸ್ಕೃತಿಕ ನಾಯಕ ಅಂತಾ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದಕ್ಕೆ ಹೊಟ್ಟೆ ಉರೀನಾ ??? ಯಾಕೆ ಹೀಗೆ…

0 Comments

ವಚನಸಾಹಿತ್ಯ ಮಂದಾರ ಫೌಂಡೇಶನ್‌ “ಗ್ರಂಥಾಲಯ” ಕ್ಕೆ ಬಂದ ಪುಸ್ತಕಗಳ ದಾಸೋಹ.

"ವಚನಸಾಹಿತ್ಯ ಮಂದಾರ ಫೌಂಡೇಶನ್" ದ ಗ್ರಂಥಾಲಯ ಸ್ಥಾಪನೆ ಪ್ರಯುಕ್ತ ನಾಡಿನ ಹಲವಾರು ವಚನ ಸಾಹಿತ್ಯ ಪ್ರೇಮಿಗಳು, ಸಾಹಿತಿಗಳು ಹಾಗೂ ವಿದ್ವಾಂಸರುಗಳು ತಮ್ಮಲ್ಲಿರುವ ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದ ಅತ್ಯಮೂಲ್ಯ ಗ್ರಂಥಗಳನ್ನು ದಾಸೋಹ ರೂಪದಲ್ಲಿ ಕಳುಹಿಸಿದ್ದಾರೆ. ಪ್ರಪ್ರಥಮವಾಗಿ ತಮ್ಮಲ್ಲಿರುವ ಅತ್ಯಮೂಲ್ಯ ಮತ್ತು ಅಪರೂಪದ ಪುಸ್ತಕಗಳನ್ನು ದಾಸೋಹ ಮಾಡಿದ ಧಾರವಾಡದ ಶ್ರೀ ನಟರಾಜ ಮೂರಶಿಳ್ಳಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುನಿತಾ ಮೂರಶಿಳ್ಳಿಯವರಿಗೆ ಕೃತಜ್ಞತೆಗಳು. ಇಂದಿನವರೆಗೆ ಸುಮಾರು 2,000 ಪುಸ್ತಕಗಳು ಬಂದಿವೆ. ಈಗ ವಚನಸಾಹಿತ್ಯ ಮಂದಾರ ಫೌಂಡೇಶನ್ ಗ್ರಂಥಾಲಯದಲ್ಲಿ 5,000 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಆಗಿದೆ. ಈ…

0 Comments

ಶ್ರೀ. ಮಲ್ಲಿಕಾರ್ಜುನ ಪಂಡಿತಾರಾಧ್ಯ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಬಸವಣ್ಣ ಎಂಬ ಹೆಸರೇ ಮಂತ್ರಮುಗ್ಧವಾದದ್ದು. ಬಸವಣ್ಣನವರು 12 ನೇ ಶತಮಾನದ ಉತ್ಸಾಹದ ಚಿಲುಮೆ ಎಂತೊ 21 ನೇ ಶತಮಾನದಲ್ಲಿ ಅವರ ಹೆಸರೇ ಚೇತೋಹಾರಿಯಾದದ್ದು. ಯುಗದ ಉತ್ಸಾಹ, ಯುಗ ಪುರುಷ, ವಿಭೂತಿ ಪುರುಷ, ವಿಶ್ವಗುರು, ಜಗಜ್ಯೋತಿ ಎಂಬ ಮಾತುಗಳು ಬಸವಣ್ಣನವರಿಗೆ ಅಲಂಕಾರಿಕವಾಗಿ ತೊಡಿಸುವ ಪದಗಳಲ್ಲ. ಅವುಗಳು ಅತಿಶಯೋಕ್ತಿ ಪದಗಳೂ ಅಲ್ಲ. 12 ನೇ ಶತಮಾನದಲ್ಲಿ ಅವರ ಪ್ರಭಾವಕ್ಕೊಳಗಾಗಿ ಶಿವ-ಶರಣರು ತಮ್ಮ ವಚನಗಳಲ್ಲಿ ಬಸವಣ್ಣನವರನ್ನು ಸ್ಮರಿಸಿಕೊಂಡದ್ದನ್ನು ನಾವು ನೋಡಿದರೆ ಒಂದು ಕಾಲಘಟ್ಟದಲ್ಲಿ ಒಬ್ಬ ವ್ಯಕ್ತಿ ಎಷ್ಟು ಪ್ರಭಾವಶಾಲಿಯಾಗಿದ್ದರು ಎಂಬುದು ತಿಳಿಯುತ್ತದೆ. ಸುಖವೊಂದು ಕೊಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.ದುಃಖವೊಂದು ಕೊಟ್ಯಾನುಕೋಟಿ ಬಂದಲ್ಲಿ…

1 Comment

ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನಗಳಲ್ಲಿ “ಮಾಯೆ” | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಹೆಣ್ಣು ಸಂಸಾರದ ಕಣ್ಣು ಎನ್ನುವಂತೆ, ಆಕೆ ತಾಳ್ಮೆಯ ಪ್ರತಿರೂಪ. ಹಾಗೆಯೇ ಶಕ್ತಿಯ ಸಂಕೇತದ ಉಗ್ರರೂಪಕ್ಕೂ ಸಾಕ್ಷಿಯಾಗಿದ್ದಾಳೆ. ಕ್ಷಮಯಾ ಧರಿತ್ರಿಯಾದರೂ ಚಂಚಲತೆಯ ಸ್ವಭಾವವುಳ್ಳವಳೂ ಸಹ. 12 ನೇ ಶತಮಾನದ ಸಮಾಜದಲ್ಲಿ ಬಸವಣ್ಣನವರಿಂದ ಶ್ರೇಣೀಕೃತ ಸಮಾಜದಲ್ಲಿನ ದೀನ ದಲಿತರನ್ನು ಮೇಲೆತ್ತುವುದರ ಜೊತೆ ಜೊತೆಗೆ ಕಡೆಗಣಿಸಲ್ಪಟ್ಟ ಮಹಿಳೆಯರನ್ನು ಬೆಳಕಿಗೆ ತರುವಂಥಾ ಕೆಲಸ ಆಯಿತು. ಬಸವಣ್ಣನವರ ಈ ಕ್ರಾಂತಿಯಲ್ಲಿ ಕರ್ನಾಟಕವು ಅಭೂತಪೂರ್ವ ಅನುಪಮ ಮಹಿಳಾ ವಚನಕಾರ್ತಿಯರನ್ನು ಕಂಡಿತು. ಪುರುಷರಿಗೆ ಸರಿ ಸಮಾನರಾಗಿ ಸಾಮಜೋ-ಧಾರ್ಮಿಕ ಮತ್ತು ಸಾಹಿತ್ಯ ಕೇತ್ರಗಳಲ್ಲಿ ಪಾಲ್ಗೊಂಡರು. ಆಧ್ಯಾತ್ಮಿಕ ಅನುಭಾವದ ಅಭಿವ್ಯಕ್ತಿಯಲ್ಲಿ ಶರಣೆಯರು ಯಾರಿಗೂ ಕಡಿಮೆಯಿಲ್ಲದಂತೆ ಕೆಲಸ ಮಾಡಿದರು. ಮಹಿಳೆಯರಿಗೆ ಗೌರವ…

0 Comments