ಶ್ರೀಮನ್ಮಹಾದಾಸೋಹಿ ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು | ಡಾ. ಡಿ. ಎನ್. ಯೋಗೀಶ್ವರಪ್ಪ | ತುಮಕೂರು.

ಜನಮಾನಸದಲ್ಲಿ ನಡೆದಾಡುವ ದೇವರೆಂದೇ ಭಾವಿಸಲ್ಪಟ್ಟ ಪದ್ಮಭೂಷಣ ಕರ್ನಾಟಕ ರತ್ನ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾಗಿ ಇಂದಿಗೆ ಆರು ವರ್ಷಗಳು ಕಳೆದಿದೆ. ಕರ್ನಾಟಕ ಸರ್ಕಾರ ಸ್ವಾಮೀಜಿಯವರು ಸಮಾಜದ ಉನ್ನತಿಗಾಗಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಿ ಜನವರಿ 21 ನ್ನು ದಾಸೋಹ ದಿನವೆಂದು ಘೋಷಿಸಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ದಾಸೋಹ ಎಂಬುದು ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರಿಂದ ರೂಪುಗೊಂಡ ವಿಶಿಷ್ಟವಾದ ಪರಿಕಲ್ಪನೆ. ಇದು ದಾನಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ವ್ಯವಸ್ಥೆಯಾಗಿದೆ. ಅಂದು ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ತಾನು ಗಳಿಸಿದ್ದರಲ್ಲಿ ಒಂದು ಪಾಲನ್ನು ದೇವರಿಗಾಗಲೀ ಅಥವಾ ಪುರೋಹಿತ ವರ್ಗಕ್ಕಾಗಲೀ ದಾನ…

0 Comments

ಪರ್ಯಾಯ ವ್ಯವಸ್ಥೆಯ ಪ್ರತಿಸೂರ್ಯ/ಡಾ. ಸುಜಾತಾ ಅಕ್ಕಿ,ಮೈಸೂರು.

ಜಾನಪದ ಸಾಹಿತ್ಯವನ್ನು ಸೃಜನಶೀಲ ಮನಸ್ಸುಗಳು ಮೌಖಿಕ ಪರಂಪರೆಯನ್ನು ಸೃಷ್ಟಿಸಿ ಆ ಮೂಲಕ ಸಂಸ್ಕೃತಿ, ಪರಂಪರೆ, ಜಾನಪದ ಸಾಹಿತ್ಯವನ್ನು ಹುಲುಸಾಗಿ ಬೆಳೆಸಿವೆ. ಜನಪದ ಸಾಹಿತ್ಯ ಒಬ್ಬ ಸೃಜನಶೀಲರಲ್ಲಿ ಹುಟ್ಟಿ ಅದು ಗುಂಪಿನಲ್ಲಿ ಬೆಳೆದು ಸಾಮುದಾಯಿಕ ಮನ್ನಣೆಯನ್ನು ಪಡೆದಿದೆ. ಆಯಾಯ ಕಾಲಘಟ್ಟದಲ್ಲಿ ಸೃಷ್ಟಿಯಾಗಿ ಮೌಖಿಕವಾಗಿ ಪರಂಪರೆಯಲ್ಲಿ ಹರಿದು ಬಂದ ಜ್ಞಾನಧಾರೆ ಜಾನಪದ ಸಾಹಿತ್ಯ. ಆ ಕಾಲದಲ್ಲಿ ಏನೇ ಘಟನೆ ಸಂಭವಿಸಿದರೂ ಅದನ್ನು ಮೌಖಿಕ ದಾಖಲೆ ಮಾಡಿದವರು ನಮ್ಮ ಜನಪದರು. ಏಕೆಂದರೆ ಸೃಜನಶೀಲ ಮನಸ್ಸು ಯಾವಾಗಲೂ ಹುಡುಕಾಟದಲ್ಲಿರುತ್ತದೆ. ಆ ಶೋಧನಾ ಆಸಕ್ತಿ ಇಂಥ ಜನಪದ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿದೆ. ಅಂದರೆ ಜನಪದರು…

0 Comments

ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು?

ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು? | ಬಿ. ಎಸ್. ಷಣ್ಮುಖಪ್ಪ | ಕೃಪೆ: ಪ್ರಜಾವಾಣಿ | ಸಂಗತ | 23.04.2010 ಲಿಂಗಾಯತ ಧರ್ಮವನ್ನು ಇತಿಹಾಸದುದ್ದಕ್ಕೂ ಹೈಜಾಕ್ ಮಾಡುತ್ತಲೇ ಬಂದಿರುವ ವೀರಶೈವ ಪಂಚಪೀಠಾಧಿಪತಿಗಳು ಮೂಲತಃ ಚತುರಾಚಾರ್ಯರು ಎಂಬುದಕ್ಕೆ 1698 ರಲ್ಲಿ ರಚಿತವಾದ “ಸಂಪಾದನೆಯ ಪರ್ವತೇಶನ ಚತುರಾರ್ಯರ ಚರಿತ್ರೆ” ಒಂದು ಉತ್ತಮ ಆಕರ ಸಾಕ್ಷಿ. ರಂಭಾಪುರಿಯ ರೇಣುಕ, ಉಜ್ಜಯಿನಿಯ ಮರುಳಸಿದ್ದ, ಕೇದಾರದ ಭೀಮಾಶಂಕರಲಿಂಗ, ಶ್ರೀಶೈಲದ ಪಂಡಿತಾರಾಧ್ಯರೇ ಈ ಚತುರಾಚಾರ್ಯರು. ಇವರು 16 ನೇ ಶತಮಾನದ ನಂತರ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳುವ ನೆಪದಲ್ಲಿ ಐದನೆಯ ಪೀಠವನ್ನಾಗಿ ಕಾಶಿಯ ಪೀಠವನ್ನು ಸೃಷ್ಟಿಸಿಕೊಂಡರು. ಇದಕ್ಕೆ “ಜ್ಞಾನ…

0 Comments

ತತ್ವಪದಕಾರರು ಏಕಾಂಗಿ ಹೋರಾಟಗಾರರು | ಡಾ. ಸರ್ವಮಂಗಳ ಸಕ್ರಿ | ರಾಯಚೂರು.

ತತ್ವಪದಕಾರರು ಏಕಾಂಗಿ ಹೋರಾಟಗಾರರು. ಸಮಾಜದಲ್ಲಿ ಏಕ ವ್ಯಕ್ತಿಗಳಾಗಿ ಅನುಭಾವಿಕ ಬದುಕನ್ನು ಸ್ವೀಕರಿಸಿದವರು. ಸಮಾಜದಲ್ಲಿದ್ದ ಭ್ರಷ್ಟಾಚಾರ ಅಪ್ರಮಾಣಿಕತೆ ಜಾತೀಯತೆಯಂತ ಕರ್ಮಕಾಂಡಗಳಿಗೆ ಕಾರಣವಾಗುವ ಜನರಿಗೆ ತಮ್ಮ ಸನ್ನಡತೆಯ ಮೂಲಕ ನಡೆ ನುಡಿಯಲ್ಲೊಂದಾದ ಬದುಕನ್ನು ತೋರಿಸಿ ಕೊಟ್ಟರು. ತತ್ವ ವಿಚಾರಳಿಂದ ಸಮಾಜದ ಕಳಕಳಿ ಸಾದ್ಯ ಎಂಬುದು.. ದಿನ ನಿತ್ಯದ ಮೌಡ್ಯ ಆಚರಣೆಗಳಿಗೆ ವಿಡಂಬನೆಗೆ ಸೀಮಿತವಾಗದೆ ಸಾಮಾಜಿಕ ಪರಿವರ್ತನೆಗಳಲ್ಲಿನ ಸಮಸ್ಯೆಗಳನ್ನು ಅರಿಯುವತ್ತ ಬಗೆಹರಿಸುವ ಪ್ರಯತ್ನ ಮಾಡಿದರು, ಪ್ರೇರೇಪಿಸಿದರು. ಇಂಥಹ ಜ್ವಲಂತ ಸಮಸ್ಯೆಗಳನ್ನು ಆರ್ಭಟವಿಲ್ಲದೆ, ಆಡಂಬರವಿಲ್ಲದೆ, ಅಹಂಕಾರ ಮುಕ್ತತೆಯಿಂದ ಸಹ ಚಿಂತನೆಗಳಿಂದ ಪ್ರಾಮಾಣಿಕವಾಗಿ ಬಿಡಿಸಿ ತೋರಿಸಿದರು. ಅನುಭಾವಿ ಬದುಕಿನ ಧಾರ್ಮಿಕ ಸಂಸ್ಕ್ರತಿಯ ಬೆಳವಣಿಗೆಗೆ ಕಾರಣರಾದರು.…

0 Comments

ಎಸೆವಕ್ಷರಕ್ಕೆ ಹೆಸರಿಲ್ಲ | ಶರಣೆ ನೀಲಾಂಬಿಕೆಯವರ ವಚನ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಎಸೆವಕ್ಷರಕ್ಕೆ ಹೆಸರಿಲ್ಲ, ಆ ಹೆಸರಿಂಗೆ ರೂಹಿಲ್ಲ;ರೂಪಿಂಗೆ ನಿರೂಪಿಲ್ಲ.ನಿರೂಪಳಿದು ನಿರಾಕುಳವಾಗಿನೀರಸಂಗಕ್ಕೆ ಹೋದರೆ,ಆ ನೀರು ಬಯಲಾಳವತೋರಿತ್ತಯ್ಯ ಸಂಗಯ್ಯ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-343/ವಚನ ಸಂಖ್ಯೆ-909) ಬದುಕು ಒಂದು ವಿಧವಾಗಿ ಯೋಚಿಸಿದರೆ ಬಿಡಿ ಬಿಡಿಯಾದ ಅಕ್ಷರಗಳೇ. ಬದುಕು ಪೂರ್ತಿ ಅನಿರೀಕ್ಷಿತವಾದ ಘಟನೆಗಳೆ. ಪ್ರತಿ ಕ್ಷಣವು ಮುಂದೇನಾಗುವುದೆಂದು ಊಹಿಸಲು ಸಾಧ್ಯವಿಲ್ಲ. ಅನುಕ್ಷಣವೂ ಮನ ಒಂದಿಲ್ಲಾ ಒಂದು ಗೋಜಲುಗಳಿಗೆ ಒಡ್ಡಿಕೊಳ್ಳುತ್ತಲೇ ನಡೆವುದು. ಎಷ್ಟೋ ಬಾರಿ ತನ್ನದಲ್ಲದ ತಪ್ಪಿಗಾಗಿ ಶಿಕ್ಷೆ, ಅವಮಾನ, ಅನುಕ್ಷಣವೂ ಹೋರಾಟ. ಈ ಎಲ್ಲ ಓಟದ ಮಧ್ಯ ಅಲ್ಲಿಗೊಂದು ಇಲ್ಲಿಗೊಂದು ನೆಮ್ಮದಿಯ ಉಸಿರಾಟ. ಇವೆಲ್ಲದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ಇವೆಲ್ಲಕ್ಕೂ ಅರ್ಥ ಕಲ್ಪಿಸುವುದೂ…

0 Comments

ಶ್ರೀ. ವಿ. ಬಿ. ಚಿನಿವಾಲ ಎಂಬ ದೈತ್ಯ ಉದ್ಯಮಿ‌ / ಡಾ. ಸಿದ್ದು ಯಾಪಲಪರವಿ, ಕಾರಟಗಿ

ಕಾರಟಗಿಯ ಉದ್ಯಮದ ಹಾದಿ ಸಾವಿರಾರು ಕೋಟಿ ತಲುಪಲು ಪ್ರಮುಖ ಕಾರಣೀಕರ್ತರಾದ ಶ್ರೀ. ವೀರಭದ್ರಪ್ಪ ಚಿನಿವಾಲ ಸದಾ ಸ್ಮರಣೀಯರು. ಕಳೆದ ಲೇಖನದಲ್ಲಿ ಪ್ರಸ್ತಾಪಿಸಿದ ನಮ್ಮೂರಿನ ಪಂಚ ಪಾಂಡವರಲ್ಲಿ ಈ ವೀರಭದ್ರಪ್ಪ ಚಿನಿವಾಲ ಹಿರಿಯರು. ಜಗತ್ತಿನ ಪ್ರಸಿದ್ಧ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಅಧ್ಯಯನಕ್ಕೆ ಮಾದರಿಯಾಗುವ ವ್ಯಕ್ತಿತ್ವ ಇವರದು. ಕಲಿತದ್ದು ತುಂಬ ಕಡಿಮೆ. ಆದರೆ ಅಪಾರ ಸ್ಮರಣೆ ಶಕ್ತಿ ಮತ್ತು ವ್ಯವಹಾರ ಜ್ಞಾನ. ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ನಾವು ಹಲವಾರು ಆಯಾಮಗಳಲ್ಲಿ ಅವಲೋಕಿಸಬಹುದು. ಮೊದಲನೆಯದು ವೈಯಕ್ತಿಕ, ಔದ್ಯೋಗಿಕ, ಸಾಮಾಜಿಕ ಹಾಗೂ ಸಾರ್ವಜನಿಕ. ವೈಯಕ್ತಿಕವಾಗಿ ನೋಡುವುದಾದರೆ ಇವರದು ಅತ್ಯಂತ ಸರಳ ಬದುಕು. ತಮ್ಮ…

0 Comments

ಮಕರ ಸಂಕ್ರಾಂತಿಯ ಸಂಸ್ಕೃತಿ ಮತ್ತು ವೈಜ್ಞಾನಿಕತೆ / ಶ್ರೀಮತಿ. ಶಾರದಾ ಕೌದಿ, ದಾರವಾಡ.

ಎಳ್ಳು ಬೆಲ್ಲ‌ ಬಿರೋಣ ಒಳ್ಳೆ ಮಾತಾಡೋಣಬೆಳಕು ಹೊಂಗಿರಣ ಪಸರಿಸಿದೆ ಮೂಡಣದಿಕತ್ತಲೆಯ ಮೋಡ ಕರಗಿದೆ ಪಡುವಣದಿತಂದಿದೆ ಸಂಕ್ರಾಂತಿಯ ಸಂಭ್ರಮ ಜಗದಿ ಸೂರ್ಯನು ಮಕರ ರಾಶಿ ಪ್ರವೇಶಿಸಿ ಉತ್ತರಾಭಿಮುಖವಾಗಿ ಪಯಣಿಸುವ ಮಕರ ಸಂಕ್ರಾಂತಿ ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಜನೇವರಿ 14 ರಂದು ಸಂಭವಿಸುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವದಕ್ಕೆ ಸಂಕ್ರಾಂತಿ ಎನ್ನುವರು. ಉತ್ತರಾಯಣದ ಆರಂಭವಾದ್ದರಿಂದ ಮಕರ ಸಂಕ್ರಾಂತಿ ವಿಶೇಷ. ಜಗತ್ತಿನ ಅಂಧಕಾರ ಅಳಿದು ಬದುಕಿಗೆ ಬೆಳಕು ನೀಡುವ ಸೂರ್ಯನು ಜ್ಞಾನದ ಸಂಕೇತ. ಮಳೆ ಬೀಳಲು, ಬೆಳೆ ಬೆಳೆಯಲು, ಇಳೆ ಬೆಳಗಲು ಆತನೇ ಕಾರಣ. ಸೂರ್ಯದೇವನ ಅಪಾರ…

0 Comments

ಶಿವಯೋಗಿ ಸಿದ್ಧರಾಮರ ವಚನಗಳಲ್ಲಿ ಜಂಗಮ / ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಯುಗಯುಗಗಳು ಸಂದರೂ ಇನ್ನೂ ಸಾವಿರಾರು ಯುಗಗಳು ಸಂದರೂ ಈ ಜಗತ್ತು ಬದುಕಿರುವವರೆಗೂ ಶರಣರು ಬದುಕಿರುತ್ತಾರೆ. ಅಂತಹ ಅಪರೂಪವಾದ ಮೌಲಿಕವಾದ, ಅಸ್ಖಲಿತವಾದ ಕಾಲಘಟ್ಟ ಅದುವೆ ಹನ್ನೆರಡನೆಯ ಶತಮಾನ. ಎಲ್ಲಾ ಧರ್ಮಗಳೂ ಸತ್ಯ, ಆನಂದ, ಮೋಕ್ಷಗಳನೆ ಮೂಲಬೇರಾಗಿಸಿದವು. ಎಲ್ಲವುದರ ಆಚರಣೆ, ಸಂಸ್ಕೃತಿ, ಶೈಲಿ, ವಿಭಿನ್ನವೆ. ಎಲ್ಲವುಗಳಲ್ಲೂ ಅವುಗಳದೇ ಆದ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳೂ ಕೂಡಾ ಇದ್ದೇ ಇವೆ. ಹಾಗೆ ಎಲ್ಲವೂ ವ್ಯಕ್ತಿಗತ ಆನಂದದ ಮೋಕ್ಷದ ಪಥವ ತೋರಿದರೆ ಸಮಗ್ರತೆಯ ಸಾರವಾದ ಬಸವ ಪ್ರಣೀತ ಶರಣಧರ್ಮವು ಆ ಎಲ್ಲ ಚೌಕಟ್ಟುಗಳ ತೆಕ್ಕೆಗೆ ಸೇರದೆ ವ್ಯಕ್ತಿಗತ ಆನಂದದ ಪಾತಳಿಯ ಸಮಷ್ಠಿಯ ಆನಂದದಲ್ಲಿ…

0 Comments

ಶ್ರೀ ಸಿದ್ದಗಂಗಾ ಮಠ-ತುಮಕೂರಿನ ಹಳೆಯ ವಿದ್ಯಾರ್ಥಿಯೊಬ್ಬನ ನೆನಪುಗಳು / ಡಾ. ಎಮ್.‌ ಎನ್‌, ಚನ್ನಬಸಪ್ಪ, ತುಮಕೂರು.

ಅಮೃತ ಗಂಗಾ: ಅಮೃತ ಮಹೋತ್ಸವದ ವಿಶೇಷ ಸಂಚಿಕೆಯಲ್ಲಿ ಡಾ. ಎಂ.ಎನ್. ಚನ್ನಬಸಪ್ಪ, ಪ್ರಾಂಶುಪಾಲರು, ಎಸ್.ಐ. ಟಿ., ತುಮಕೂರು ಇವರು ಬರೆದ ಲೇಖನ. ಕೆಲವು ಸ್ನೇಹಿತರು ನನ್ನ ಬಗ್ಗೆ ನೀನು ತುಂಬಾ ಅದೃಷ್ಟವಂತ ಎಂದು ಹೇಳುತ್ತಾರೆ. ಇದು ನಿಜ. ನಮ್ಮ ಊರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಮಾಡರಹಳ್ಳಿ. 1940 ರ ದಶಕದಲ್ಲಿ ನಮ್ಮ ಹಳ್ಳಿಯ ಮಟ್ಟಕ್ಕೆ ಹೋಲಿಸಿದರೆ ನಮ್ಮದು ಮಧ್ಯಮ ವರ್ಗದ ಕುಟುಂಬ ಅನ್ನಬಹುದಾಗಿತ್ತು. ಬೆಂಗಳೂರಿನ ಆರ್. ವಿ. ವಿದ್ಯಾ ಸಂಸ್ಥೆಯ ಸ್ಥಾಪನೆ ಮತ್ತು ಬೆಳವಣಿಗೆಗೆ ಕಾರಣಕರ್ತರಾದ ಶ್ರೀ ಎಂ. ಸಿ. ಶಿವಾನಂದಶರ್ಮರು (ಅವರ ಪೂರ್ವ…

0 Comments

ಕನ್ನಡ ಸಂಶೋಧನ ಜಗತ್ತಿನಲ್ಲಿ ಸಂಚಲನವನ್ನುಂಟು ಮಾಡಿದ ಮಾರ್ಗ-1 / ಶ್ರೀ. ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

“ಮಾರ್ಗ” ಶಬ್ದಕ್ಕೆ ಅನ್ವೇಷಣೆ, ದಾರಿ, ಪದ್ಧತಿಯೆಂದು ಮೂರು ಅರ್ಥಗಳಿವೆ. ಸಾಹಿತ್ಯಕ್ಷೇತ್ರದಲ್ಲಿ ಈ ಮೂರೂ ಬಗೆಯ ಕಾರ್ಯಮಾಡಿರುವ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ತಮ್ಮ ಎಲ್ಲ ಸಂಶೋಧನ ಪ್ರಬಂಧಗಳ ಸಂಕಲನವಾಗಿರುವ 8 ಸಂಪುಟಗಳಿಗೆ ಇಟ್ಟ ಶೀರ್ಷೀಕೆ “ಮಾರ್ಗ” ಹೆಸರು ತುಂಬ ಅನ್ವರ್ಥಕವಾಗಿದೆ. ಇದಲ್ಲದೆ ಅವರ ಪಿಎಚ್.ಡಿ ಪ್ರಬಂಧದ ಹೆಸರು “ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ”, ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥದ ಹೆಸರು “ಮಹಾಮಾರ್ಗ”, ಅವರು ಹುಟ್ಟಿದ್ದು ಮಾರ್ಗಶೀರ್ಷ ಮಾಸದಲ್ಲಿ. ಈ ಎಲ್ಲ ಆಕಸ್ಮಿಕಗಳ ಸಮನ್ವಯವೂ ಕುತೂಹಲಕರವೆನಿಸುತ್ತದೆ. ಕನ್ನಡ ಸೃಜನಶೀಲ ಸಾಹಿತ್ಯವು ನವೋದಯ, ನವ್ಯ, ನವ್ಯೋತ್ತರವೆಂಬ ಘಟ್ಟಗಳನ್ನು ರೂಪಿಸಿಕೊಳ್ಳುತ್ತ…

0 Comments