ಶ್ರಾವಣ ವಚನ ಚಿಂತನ-10: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಂಗಳೇಕೆ ʼನೋಡಬೇಡಾʼ ಎಂದರೆ ಮಾಣವು?ಶ್ರೋತ್ರಂಗಳೇಕೆ ʼಆಲಿಸಬೇಡಾʼ ಎಂದರೆ ಮಾಣವು?ಜಿಹ್ವೆ ಏಕೆ ʼರುಚಿಸಬೇಡಾʼ ಎಂದರೆ ಮಾಣದು?ನಾಸಿಕವೇಕೆ ʼವಾಸಿಸಬೇಡಾʼ ಎಂದರೆ ಮಾಣದು?ತ್ವಕ್ಕು ಏಕೆ ʼಸೋಂಕಬೇಡಾʼ ಎಂದರೆ ಮಾಣದು?ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು!ಗುಹೇಶ್ವರಲಿಂಗಕ್ಕೆ ಒಲಿದ ಕಾರಣ,ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-146 / ವಚನ ಸಂಖ್ಯೆ-98) ಬಾಳಿನ ಆಸಕ್ತಿಗಳು ಹಲವಾರು. ಅವು ಮಾನವನ ಹುಟ್ಟಿನಿಂದ ಎಲ್ಲ‌ ಕಾಲಕ್ಕೂ ಇರುವಂಥವೇ. ತನ್ನ ಆಸಕ್ತಿ ಮೂಲವಾಗಿಯೇ ಜಗತ್ತಿನಲ್ಲಿ‌ ಮನುಷ್ಯ ಎಲ್ಲವನ್ನೂ ಸೃಜಿಸುತ್ತ ಬಂದಿದ್ದಾನೆ. ಕಣ್ಣು ಕನಸಿದ್ದು, ಮನ ಊಹಿಸಿದ್ದು, ಕೈಯ ಸಾಹಸದ ಮೂಲಕ ಒಂದು ವಸ್ತು ರೂಪ…

0 Comments

ಶ್ರಾವಣ ವಚನ ಚಿಂತನ-09: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಾಯಕ್ಕೆ ಮಜ್ಜನ, ಪ್ರಾಣಕ್ಕೆ ಓಗರ, ಇದ ಮಾಡಲೆ ಬೇಕು.ಸುಳಿವು ಸುಳುಹುನ್ನಕ್ಕ ಇದ ಮಾಡಲೆ ಬೇಕು.ಗುಹೇಶ್ವರನೆಂಬ [ಲಿಂಗಕ್ಕೆ]ಆತ್ಮವುಳ್ಳನ್ನಕ್ಕ ಭಕ್ತಿಯ ಮಾಡಲೇಬೇಕು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-145 / ವಚನ ಸಂಖ್ಯೆ-82) ಕಾಯ ಇರುವವರೆಗೆ ಕಾಯಗುಣವ ಬಿಡಲಾಗದು‌. ಕಾಯಕ್ಕೆ ಏನೇನು ಬೇಕೊ ಅದೆಲ್ಲವನ್ನು ಕೊಡುತ್ತಲೇ ಹೋಗಬೇಕಾಗುತ್ತದೆ. ಕಾಯವೆಂಬುದು ಹಾಗೆಯೆ ಇರದು. ಗಾಳಿಯನ್ನು ತಿಂದು ಬದುಕಲಾಗದು. ಎಂಥ ಮಹಾತ್ಮನ ಶರೀರವಾದರೂ ಅದರದೇ ಆದ ನಿಯಮಗಳನ್ನು ಹೊಂದಿರುತ್ತದೆ. ಇಷ್ಟು ದಿನ ಆಹಾರವಿಲ್ಲದೆ ಬದುಕಿದರು, ಅಷ್ಟು ದಿನ ನಿರಾಹಾರಿಗಳಾಗಿ ಬದುಕಿದರು ಎಂಬಂಥ ಉದಾಹರಣೆಗಳನ್ನು ನಾವು ನೋಡಬಹುದು‌. ಇವನ್ನು ತಳ್ಳಿಹಾಕಲಾಗದು. ಜಗತ್ತಿನಲ್ಲಿ ಎಲ್ಲ…

0 Comments

ಶ್ರಾವಣ ವಚನ ಚಿಂತನ-08: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಜಲದೊಳಗಿರ್ದು ಕಿಚ್ಚು ಜಲವ ಸುಡದೆ,ಜಲವು ತಾನಾಗಿಯೇ ಇದ್ದಿತ್ತು ನೋಡಾ,ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ.ಕುಲದೊಳಗಿರ್ದು ಕುಲವ ಬೆರೆಸದೆ, ನೆಲೆಗೆಟ್ಟುನಿಂದುದನಾರು ಬಲ್ಲರೋ?ಹೊರಗೊಳಗೆ ತಾನಾಗಿರ್ದು-ಮತ್ತೆ ತಲೆದೋರದಿಪ್ಪುದು,ಗುಹೇಶ್ವರಾ ನಿಮ್ಮ‌ ನಿಲವು ನೋಡಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-138 / ವಚನ ಸಂಖ್ಯೆ-3) ದೇವನ ಇರವನ್ನು ಕುರಿತು ಶರಣರು ಮಾಡಿದ ಚಿಂತನೆ ಅದ್ಭುತವಾದುದು. ಅವನು ಎಲ್ಲೆಡೆಯೂ ಇದ್ದರೂ ಅವನ ಇರುವಿಕೆ ನಮ್ಮ ಸಾಮಾನ್ಯತೆಯ ಅರಿವಿಗೆ ಬರಲಾರದು. ವಿಶೇಷವಾದ ದೃಷ್ಟಿಕೋನ ಇದ್ದರೆ ಮಾತ್ರ ಅವನ ಅರಿವು ನಮಗೆ ಆಗಲು ಸಾಧ್ಯ. ಇದು ಒಂದು ರೀತಿಯಲ್ಲಿ ಹಾಲಿನಲ್ಲಿ ತುಪ್ಪ ಇರುವಂತೆ, ನೀರಿನಲ್ಲಿ ಬೆಂಕಿ…

0 Comments

ಶ್ರಾವಣ ವಚನ ಚಿಂತನ-07: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಾಣದುದನರಸುವದಲ್ಲೆ ಕಂಡುದದನರಸುವರೇ ಹೇಳಾ!ಘನಕ್ಕೆ ಘನವಾದ ವಸ್ತು;ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ,ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೇ ಯಂತ್ರವಾದ,ತಾನೆ ಸಕಲವಿದ್ಯಾರೂಪನಾದಇಂತಿವೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದಇನ್ನು ನಿರ್ವಿಕಾರ ಗುಹೇಶ್ವರ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-142 / ವಚನ ಸಂಖ್ಯೆ-55) ಅಂಗ ಮತ್ತು ಲಿಂಗ ಎರಡೂ ಶರಣ ಸಾಹಿತ್ಯದಲ್ಲಿ ಆಧಾರಭೂತ ಅಂಶಗಳು. ಲಿಂಗವ ಕಾಣಲು ಅಂಗಬೇಕು. ಅಂಗವು ಉದಧರಿಸಲು ಲಿಂಗವೂ ಬೇಕು. ಹಾಗೆ ನೋಡಿದರೆ ಅಂಗವೂ ಲಿಂಗಮಯ ಶರೀರವೇ ತಾನಾಗಬೇಕು ಎನ್ಬುವದು ಒಂದು ಆದರ್ಶವಾದರೆ ಅದು ಒಡಮೂಡಿದ್ದೇ ಲಿಂಗದ ಮೂಲಕ ಎಂಬುದೊಂದು ಪ್ರಮೇಯ ಇದ್ದೇ ಇದೆ.…

0 Comments

ಶ್ರಾವಣ ವಚನ ಚಿಂತನ-06: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಳ್ಳಗಂಜಿ ಕಾಡಹೊಕ್ಕಡೆ ಹುಲಿ ತಿಂಬುದ ಮಾಬುದೇ?ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ?ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೇ?ಇಂತೀ‌ ಮೃತ್ಯುವಿನ ಬಾಯ ತುತ್ತಾದ,ವೇಷಡಂಬಕರ ನಾನೇನೆಂಬೆ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-73) ಭಕ್ತಿಯ ಕುರಿತು ಶರಣರು ಮಾಡಿದ ಚಿಂತನೆ ವೈಜ್ಞಾನಿಕ ಮತ್ತು ಆಧಾರಪೂರ್ವಕವಾಗಿದೆ. ಭಕ್ತಿಯನ್ನು ಹೇಗೆ ಮಾಡಬೇಕು? ಇದು ಶರಣರು ತಮ್ಮನ್ನು ತಾವು ಕೇಳಿಕೊಂಡ ಪ್ರಶ್ನೆ. ಅವರಿಗಿಂತ ಪೂರ್ವ ಕಾಲದಿಂದಲೂ ಮತ್ತು ಅವರ ಕಾಲಘಟ್ಟದಲ್ಲೂ ಸಹಿತ ಧಾರ್ಮಿಕ ವ್ಯವಸ್ಥೆ ಭಕ್ತಿಗೆ ಆಡಂಬರದ ವೇಷವನ್ನು ತೊಡಿಸಿ ದೇವರ ಹೆಸರಿನಲ್ಲಿ ಢಂಬಾಚಾರ ಮಾಡುವವರು…

0 Comments

ಶ್ರಾವಣ ವಚನ ಚಿಂತನ-05: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಜಲದೊಳಗಿರ್ದ ಕಿಚ್ಚು ಜಲವ ಸುಡದೆಜಲವು ತಾನಾಗಿಯೆ ಇದ್ದಿತ್ತು ನೋಡಾನೆಲೆಯನರಿದು ನೋಡಿಹೆನೆಂದಡೆ,ಅದು ಜಲವು ತಾನಲ್ಲ.ಕುಲದೊಳಗಿರ್ದು ಕುಲವ ಬೆರೆಸದೆ ,ನೆಲೆಗಟ್ಟುನಿಂದುದನಾರು ಬಲ್ಲರೋ?ಹೊರಗೊಳಗೆವತಾನಾಗಿರ್ದು - ಮತ್ತೆ ತಲೆದೋರದಿಪ್ಪುದುಗುಹಾಎಶ್ವರಾ ನಿಮ್ಮ‌ಜಿಲುವು ನೋಡಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-71) ಈ ವಚನ ಲಿಂಗದ ಇರುವಿಕೆಯ ಸ್ವರೂಪವನ್ನು‌ ಕುರಿತು ಅಲ್ಲಮರು ಚರ್ಚಿಸಿದ ಒಂದು ವಚನ. ದೈವದ ಇರುವಿಕೆಯನ್ನು‌ ಕುರಿತು ವ್ಯೋಮಕಾಯ ಅಲ್ಲಮ ಪ್ರಭುಗಳು‌ ಮಾಡಿದ ಚಿಂತನೆ ಅಗಮ್ಯವಾದುದು. ಒಟ್ಟಾರೆ ಶರಣರ ಚಿಂತನೆಗೆ ಅಡಿಪಾಯವಾದುದು. ನಮ್ಮ ಹೊರಗಿನ ಕಣ್ಣಿಗೆ ಪರಮನ ಇರವು‌ ಕಾಣಿಸಲಾರದು. ಅದು ಜಲದೊಳಗನ ಪಾವಕನಂತೆ. ಅಗ್ನಿಯೊಳಗಣ ಸುಡುವಿಕೆಯಂತೆ.…

0 Comments

ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನ ವಿಶ್ಲೇಷಣೆ: ಅಷ್ಟವಿಧಾರ್ಚನೆಯ ಮಾಡಿ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೇ ಅಯ್ಯಾ?ನೀನು ಬಹಿರಂಗ ವ್ಯವಹಾರ ದೂರಸ್ಥನು.ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೇ ಅಯ್ಯಾ?ನೀನು ವಾಙ್ಮನಕ್ಕತೀತನು.ಜಪ ಸ್ತೋತ್ರದಿಂದ ಒಲಿಸುವೆನೇ ಅಯ್ಯಾ?ನೀನು ನಾದಾತೀತನು.ಭಾವಜ್ಞಾನದಿಂದ ಒಲಿಸುವೆನೇ ಅಯ್ಯಾ?ನೀನು ಮತಿಗತೀತನು.ಹೃದಯಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ?ನೀನು ಸರ್ವಾಂಗ ಪರಿಪೂರ್ಣನು.ಒಲಿಸಲೆನ್ನಳವಲ್ಲ; ನೀನೊಲಿಯುವುದೇ ಸುಖವಯ್ಯಚೆನ್ನಮಲ್ಲಿಕಾರ್ಜುನ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-791 / ವಚನ ಸಂಖ್ಯೆ-49) ಅಕ್ಕ ಮಹಾದೇವಿಯವರು ಮಹಿಳಾ ಅನುಭಾವಿಗಳಲ್ಲೇ ಅತ್ಯಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ನಾಡಿನ ಮೊದಲ ಅನುಭಾವಿ ಕವಿಯಿತ್ರಿ. ಇವರ ವಚನಗಳು ಭಾವ ಪ್ರಧಾನತೆಯಿಂದ ಕಂಗೊಳಿಸುತ್ತವೆ. ಅಕ್ಕನವರಲ್ಲಿ ಅನುಭಾವದ ತೀವ್ರತೆ, ಆಧ್ಯಾತ್ಮದ ಹಸಿವು, ಚೆನ್ನಮಲ್ಲಿಕಾರ್ಜುನನ ಮೇಲಿನ ಒಲುಮೆ, ಪ್ರೀತಿ ಅವುಗಳ…

0 Comments

ಶ್ರಾವಣ ವಚನ ಚಿಂತನ-04: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಎಣ್ಣೆ ಬೇರೆ ಬತ್ತಿ ಬೇರೆ; ಎರಡೂ ಸೇರಿ ಸೊಡರಾಯಿತ್ತು.ಪುಣ್ಯ ಬೇರೆ‌ ಪಾಪ ಬೇರೆ; ಎರಡೂ ಕೂಡಿ ಒಡಲಾಯಿತ್ತು.ಮಿಗಬಾರದು, ಮಿಗದಿರಬಾರದು,ಒಡಲಿಚ್ಛೆಯ ಸಲಿಸದೆ ಸಲಿಸದೆ ನಿಮಿಷವಿರಬಾರದು.ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ‌ ಮುನ್ನ,ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-71) ಭಕ್ತಿ ಮಾಡಲು ಸಮಯಾಸಮಯವಿಲ್ಲ. ಸಾಧ್ಯವಿದ್ದಾಗಲೇ ಮಾಡಿ ಮುಗಿಸಬೇಕು. ನಾಳೆ ನಾಡದು ಎಂದರೆ ಅದು ಸಾಧಗುವಾಗುವದಿಲ್ಲ. ಭಕ್ತಿಯನ್ನು ಮಾಡುವ ಅವಕಾಶವನ್ನು ಆದಷ್ಟೂ ಮುಂದೂಡುವ ಸ್ವಭಾವ ನಮ್ಮದು. ಇಂಥಹ ಸ್ವಭಾವವನ್ನು ವಿರೋಧಿಸುವ ಅಲ್ಲಮಪ್ರಭುಗಳು ಭಕ್ತಿ‌ಮಾಡುವಲ್ಕಿ ಹಿಂಜರಿಯಬಾರದು ಎಂಬುದನ್ನು ಹೇಳುತ್ತಾರೆ. ಭಕ್ತಿ ಮಾಡಿದಾಗಲೇ…

0 Comments

ಬಸವಣ್ಣನವರ ವಚನ ವಿಶ್ಲೇಷಣೆ: ಮೊರನ ಗೋಟಿಲಿ ಬಪ್ಪ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಮೊರನ ಗೋಟಿಲಿ ಬಪ್ಪ ಕಿರುಕುಳ ದೈವಕ್ಕೆಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.ಕುರಿ ಸತ್ತು ಕಾವುದೆ ಹರ ಮುಳಿದವರ?ಕುರಿ ಬೇಡ, ಮರಿ ಬೇಡ,ಬರಿಯ ಪತ್ರೆಯ ತಂದು ಮರೆಯದೆ ಪೂಜಿಸುನಮ್ಮ ಕೂಡಲಸಂಗಮದೇವನ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-52 / ವಚನ ಸಂಖ್ಯೆ-560) ವಚನ ಸಾಹಿತ್ಯಕ್ಕೆ ಅದರದೇ ಆದ ತಾತ್ವಿಕತೆ ಇದೆ. ವಚನ ಸಾಹಿತ್ಯದ ಬಹು ಮುಖ್ಯವಾದ ಎರಡು ನೆಲೆಗಳು ಎಂದರೆ ಒಂದು "ಸಾಮಾಜಿಕ ಜವಾಬ್ದಾರಿ" ಮತ್ತೊಂದು "ಅಭಿವ್ಯಕ್ತಿ ಸ್ವಾತಂತ್ರ". ಶರಣರ ತಾತ್ವಿಕ ಸಿದ್ದಾಂತಗಳಿಗೆ ಇವೆರಡು ಮೂಲ ತಳಹದಿಯಾಗಿವೆ. ಶರಣರ ಅನುಭವ ಅನುಭಾವವಾಗಿ ಬದುಕಿನ ಸತ್ಯದ ಅನಾವರಣಕ್ಕೆ ನಾಂದಿಯಾಗಿತ್ತು. ಕಾರಣ ಇಷ್ಟೇ ಶರಣರು…

0 Comments

ಶ್ರಾವಣ ವಚನ ಚಿಂತನ-03: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ.ಗುರು ಹಿರಿಯರು ತೋರಿದ ಉಪದೇಶದಿಂದ;ವಾಗದ್ವೈತವನೆ ಕಲಿತು ವಾದಿಪರಲ್ಲದೆ, ಆಗು-ಹೋಗೆಂಬುದನರಿಯರು.ಭಕ್ತಿಯನರಿಯರು ಮುಕ್ತಿಯನರಿಯರು,ಮತ್ತೂ ವಾದಕೆಳಸುವರು,ಹೋದರು, ಗುಹೇಶ್ವರಾ ಸಲೆ ಕೊಂಡಮಾರಿಗೆ.(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-69) ಅಕ್ಷರ ಕಲಿಕೆಯ ಮಿತಿಯನ್ನು ಅಲ್ಲಮಪ್ರಭುಗಳು ಹೇಳುವ ರೀತಿ ಅರ್ಥಪೂರ್ಣವಾಗಿದೆ. ವಿದ್ಯೆ ವಿನಯವನ್ನು ಕೊಡಬೇಕು. ನಮ್ಮ ಹಿರಿಯರೇನೋ "ವಿದ್ಯಾ ದದಾತಿ ವಿನಯಂ" ಎಂದಿದ್ದರು. ಆದರೆ ವಿದ್ಯೆ ಪಡೆದ ಕೆಲವರು ವಿದ್ಯೆಗೆ ವಿನಯ ವೇಭೂಷಣ ಎಂಬುದನ್ನರಿಯದೆ ತಾವು ಕಲಿತವರೆಂಬ ಅಹಮ್ಮಿನಲ್ಲಿ ತಿರುಗುತ್ತಿರುವ ಸಂಗತಿಗಳು ಆಗಲೂ ಇದ್ದುವೆಂದು ಕಾಣಿಸುತ್ತದೆ. ಆದ್ದರಿಂದಲೇ ಚಿಂತಕರಾದ ಅಲ್ಲಮಪ್ರಭುಗಳು ವಿದ್ಯೆಯ ಮಿತಿಗಳನ್ನು ಒಂದು…

0 Comments