ಶ್ರಾವಣ ವಚನ ಚಿಂತನ-12: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಶಿಲೆಯೊಳಗಣ ಪಾವಕನಂತೆ,ಉದಕದೊಳಗಣ ಪ್ರತಿಬಿಂಬದಂತೆ,ಬೀಜದೊಳಗಣ ವೃಕ್ಷದಂತೆ,ಶಬ್ದದೊಳಗಣ ನಿಶ್ಶಬ್ದದಂತೆ,ಗುಹೇಶ್ವರಾ ನಿಮ್ಮ ಶರಣ-ಸಂಬಂಧ.(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-7 / ವಚನ ಸಂಖ್ಯೆ-1) ಶರಣರ ಪ್ರಕಾರ ಅಂಗವೇ ಲಿಂಗದ ಆಶ್ರಯ ತಾಣ. ಅದು ಲಿಂಗಕ್ಕೆ ಆಧಾರವಾದುದು. ಅಂಗ ಲಿಂಗವನ್ನು ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಅಂಗವಿರದಿದ್ದರೆ ಲಿಂಗಕ್ಕೆ ಆಸರೆ ಇಲ್ಲ. ಅಂಗ‌ ಮತ್ತು‌ ಲಿಂಗದ ಸಂಬಂಧವನ್ನು‌ ಕುರಿತಂತೆ ಹಿರಿಯ ವಿದ್ವಾಂಸರಾದ ಶ್ರೀಮತಿ ಜಯಾ ರಾಜಶೇಖರ್ ಅವರು: "ಶಿವತತ್ವವನ್ನು ಗುಪ್ತವಾಗಿರಿಸಿಕೊಂಡ ನೆಲೆ ಅಂಗ. ಅಂಗವನ್ನು ಆಶ್ರಯಿಸಿ ಆತ್ಮವು ಸಾಧನ ಮಾರ್ಗದಲ್ಲಿ ಸಾಗಬೇಕು. ಅಂಗವೇ ಲಿಂಗವನ್ನು ಗರ್ಭದಲ್ಲಿ ಅಡಗಿಸಿಕೊಂಡಿರುವ ತಾಯಿ. ಅಂಗದ ಆಧಾರದಿಂದಲೇ ಶಿವತತ್ವದ…

0 Comments

ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನ ವಿಶ್ಲೇಷಣೆ: ಉಸುರಿನ ಪರಿಮಳವಿರಲು / ಶ್ರೀಮತಿ. ಸವಿತಾ ಮಾಟೂರ, ಇಳಕಲ್ಲ.

ಉಸುರಿನ ಪರಿಮಳವಿರಲುಕುಸುಮದ ಹಂಗೇಕಯ್ಯಾ?ಕ್ಷಮೆ ದಮೆ ಶಾಂತಿ ಸೈರಣೆ ಇರಲುಸಮಾಧಿಯ ಹಂಗೆಕಯ್ಯಾ?ಲೋಕವೆ ತಾನಾದ ಬಳಿಕಏಕಾಂತದ ಹಂಗೆಕಯ್ಯಾ ಚನ್ನಮಲ್ಲಿಕಾರ್ಜುನಯ್ಯಾ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-796 / ವಚನ ಸಂಖ್ಯೆ-84) ವೈರಾಗ್ಯ ನಿಧಿ ಅಕ್ಕಮಹಾದೇವಿಯವರು ದಿಟ್ಟ ನಿಲುವಿನ, ಸಾತ್ವಿಕ ಕಳೆಯ, ಒಳ-ಹೊರಗೊಂದಾಗಿ ನಿಂತ ಭವ್ಯ ತೇಜೋರೂಪ. ಇಡಿ ಜಗತ್ತಿನಲ್ಲಿಯೆ ಇವರಿಗೆ ದೃಷ್ಟಾಂತ ಕೊಡಲು ಮತ್ತೊಬ್ಬರಿಲ್ಲವೆಂದರೆ ತಪ್ಪಗಲಾರದು. ಅಂತಹ ಅದ್ಬುತ ವ್ಯಕ್ತಿತ್ವದ ಆಧ್ಯಾತ್ಮದ ಉನ್ನತ ಶಿಖರವೆರಿದ ವೀರ ವಿರಾಗಿನಿ ಅಕ್ಕನವರ ಈ ವಚನ ಅವಳ ಅಂತರಂಗ ಬಹಿರಂಗ ಪರಿಶುದ್ಧತೆಯ ಪ್ರತಿಕವಾಗಿದೆ. “ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ”ಉಸುರಿಗೆ ಪರಿಮಳ ಬರಲು ಅಂತರಂಗ…

0 Comments

ಮನೆಯೊಳಗೆ ಮನೆಯೊಡೆಯನಿದ್ದಾನೋ-ಇಲ್ಲವೋ / ಡಾ. ಪ್ರಕಾಶ ಪರನಾಕರ, ವಿಜಯಪುರ.

ಮನೆಯೊಳಗೆ ಮನೆಯೊಡೆಯನಿದ್ದಾನೋ, ಇಲ್ಲವೋ?ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,ಮನೆಯೊಳಗೆ ಮನೆಯೊಡೆಯನಿದ್ದಾನೋ, ಇಲ್ಲವೋ?ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿಮನದೊಳಗೆ [ಮನದೊ] ಮನೆಯೊಡೆಯನಿದ್ದಾನಿ, ಇಲ್ಲವೋ?ಇಲ್ಲ, ಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-29 / ವಚನ ಸಂಖ್ಯೆ-97) ಅಂತರಂಗ ಶುದ್ಧಿಗೆ ಸಂಬಂಧಿಸಿದ ಈ ವಚನ ರೂಪಕದಿಂದ ಕೂಡಿದೆ. ಬಸವಣ್ಣನವರು ಯಜಮಾನರಿಲ್ಲದ ಪಾಳು ಬಿದ್ದ ಮನೆಯನ್ನು ಉದಾಹರಿಸುತ್ತಾರೆ. ಒಂದು ಮನೆಯಲ್ಲಿ ಮನೆಯೊಡೆಯ ಇದ್ದಾನೋ ಇಲ್ಲವೋ ಎಂದು ಗೊತ್ತಾಗುವುದು ಹೇಗೆ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿದರೆ, ಮನೆಯೊಳಗೆ ರಜ (ಕಸ, ಜೇಡರ ಬಲೆ ಇತ್ಯಾದಿ) ತುಂಬಿದರೆ ಅದರ ಅರ್ಥ ಅಲ್ಲಿ…

0 Comments

ಶ್ರಾವಣ ವಚನ ಚಿಂತನ-11: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಮರ್ತ್ಯಲೋಕದ‌ಮಾನವರು;ದೇಗುಲದೊಳಗೊಂದು ದೇವರ ಮಾಡಿದಡೆ, ಆನು ಬೆರಗಾದೆನು.ನಿಚ್ಚಕ್ಜೆ ನಿಚ್ಚ ಅರ್ಚನೆ ಪೂಜೆಯ ಮಾಡಿಸಿ,ಭೋಗವ ಮಾಡುವವರ ಕಂಡು ನಾನು ಬೆರಗಾದೆನು.ಗುಹೇಶ್ವರಾ ನಿಮ್ಮ ಶರಣರು, ಹಿಂದೆ ಲಿಂಗವನಿರಿಸಿ ಹೋದರು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-152 / ವಚನ ಸಂಖ್ಯೆ-176) ಶರಣರು ಮಾಡಿದ ದೈವ ಚಿಂತನೆ ವಿಶೇಷವಾದುದು. ದೇವರನ್ನು ನಮಗಾಗಿ‌ ನಮ್ಮ‌ ಮನಸಿಗೆ ಬಂದಂತೆ ಸೃಷ್ಟಿಸಿಕೊಳ್ಳುವ ನಮ್ಮ ವ್ಯವಹಾರಿಕ ಬುದ್ದಿಯನ್ನು ಶರಣರು ಒಪ್ಪುವದಿಲ್ಲ. ಅವನು ಅನೂಹ್ಯ‌ ಮತ್ತು ಎಲ್ಲೆಲ್ಲಿಯೂ ಇರುವವನು ಎಂಬುದನ್ನು‌ ಮರೆತ‌ ನಾವು ದೇವರು‌ ಇಲ್ಲಿ ಮಾತ್ರ ಇದ್ದಾನೆ ಎಂದು ಭಾವಿಸಿ ದೇವರಿಗಾಗಿ ದೇವಾಲಯ ನಿರ್ಮಿಸಿ, “ಇದು ದೇವಾಲಯ,…

0 Comments

ಶ್ರಾವಣ ವಚನ ಚಿಂತನ-10: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಂಗಳೇಕೆ ʼನೋಡಬೇಡಾʼ ಎಂದರೆ ಮಾಣವು?ಶ್ರೋತ್ರಂಗಳೇಕೆ ʼಆಲಿಸಬೇಡಾʼ ಎಂದರೆ ಮಾಣವು?ಜಿಹ್ವೆ ಏಕೆ ʼರುಚಿಸಬೇಡಾʼ ಎಂದರೆ ಮಾಣದು?ನಾಸಿಕವೇಕೆ ʼವಾಸಿಸಬೇಡಾʼ ಎಂದರೆ ಮಾಣದು?ತ್ವಕ್ಕು ಏಕೆ ʼಸೋಂಕಬೇಡಾʼ ಎಂದರೆ ಮಾಣದು?ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು!ಗುಹೇಶ್ವರಲಿಂಗಕ್ಕೆ ಒಲಿದ ಕಾರಣ,ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-146 / ವಚನ ಸಂಖ್ಯೆ-98) ಬಾಳಿನ ಆಸಕ್ತಿಗಳು ಹಲವಾರು. ಅವು ಮಾನವನ ಹುಟ್ಟಿನಿಂದ ಎಲ್ಲ‌ ಕಾಲಕ್ಕೂ ಇರುವಂಥವೇ. ತನ್ನ ಆಸಕ್ತಿ ಮೂಲವಾಗಿಯೇ ಜಗತ್ತಿನಲ್ಲಿ‌ ಮನುಷ್ಯ ಎಲ್ಲವನ್ನೂ ಸೃಜಿಸುತ್ತ ಬಂದಿದ್ದಾನೆ. ಕಣ್ಣು ಕನಸಿದ್ದು, ಮನ ಊಹಿಸಿದ್ದು, ಕೈಯ ಸಾಹಸದ ಮೂಲಕ ಒಂದು ವಸ್ತು ರೂಪ…

0 Comments

ಶ್ರಾವಣ ವಚನ ಚಿಂತನ-09: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಾಯಕ್ಕೆ ಮಜ್ಜನ, ಪ್ರಾಣಕ್ಕೆ ಓಗರ, ಇದ ಮಾಡಲೆ ಬೇಕು.ಸುಳಿವು ಸುಳುಹುನ್ನಕ್ಕ ಇದ ಮಾಡಲೆ ಬೇಕು.ಗುಹೇಶ್ವರನೆಂಬ [ಲಿಂಗಕ್ಕೆ]ಆತ್ಮವುಳ್ಳನ್ನಕ್ಕ ಭಕ್ತಿಯ ಮಾಡಲೇಬೇಕು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-145 / ವಚನ ಸಂಖ್ಯೆ-82) ಕಾಯ ಇರುವವರೆಗೆ ಕಾಯಗುಣವ ಬಿಡಲಾಗದು‌. ಕಾಯಕ್ಕೆ ಏನೇನು ಬೇಕೊ ಅದೆಲ್ಲವನ್ನು ಕೊಡುತ್ತಲೇ ಹೋಗಬೇಕಾಗುತ್ತದೆ. ಕಾಯವೆಂಬುದು ಹಾಗೆಯೆ ಇರದು. ಗಾಳಿಯನ್ನು ತಿಂದು ಬದುಕಲಾಗದು. ಎಂಥ ಮಹಾತ್ಮನ ಶರೀರವಾದರೂ ಅದರದೇ ಆದ ನಿಯಮಗಳನ್ನು ಹೊಂದಿರುತ್ತದೆ. ಇಷ್ಟು ದಿನ ಆಹಾರವಿಲ್ಲದೆ ಬದುಕಿದರು, ಅಷ್ಟು ದಿನ ನಿರಾಹಾರಿಗಳಾಗಿ ಬದುಕಿದರು ಎಂಬಂಥ ಉದಾಹರಣೆಗಳನ್ನು ನಾವು ನೋಡಬಹುದು‌. ಇವನ್ನು ತಳ್ಳಿಹಾಕಲಾಗದು. ಜಗತ್ತಿನಲ್ಲಿ ಎಲ್ಲ…

0 Comments

ಶ್ರಾವಣ ವಚನ ಚಿಂತನ-08: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಜಲದೊಳಗಿರ್ದು ಕಿಚ್ಚು ಜಲವ ಸುಡದೆ,ಜಲವು ತಾನಾಗಿಯೇ ಇದ್ದಿತ್ತು ನೋಡಾ,ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ.ಕುಲದೊಳಗಿರ್ದು ಕುಲವ ಬೆರೆಸದೆ, ನೆಲೆಗೆಟ್ಟುನಿಂದುದನಾರು ಬಲ್ಲರೋ?ಹೊರಗೊಳಗೆ ತಾನಾಗಿರ್ದು-ಮತ್ತೆ ತಲೆದೋರದಿಪ್ಪುದು,ಗುಹೇಶ್ವರಾ ನಿಮ್ಮ‌ ನಿಲವು ನೋಡಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-138 / ವಚನ ಸಂಖ್ಯೆ-3) ದೇವನ ಇರವನ್ನು ಕುರಿತು ಶರಣರು ಮಾಡಿದ ಚಿಂತನೆ ಅದ್ಭುತವಾದುದು. ಅವನು ಎಲ್ಲೆಡೆಯೂ ಇದ್ದರೂ ಅವನ ಇರುವಿಕೆ ನಮ್ಮ ಸಾಮಾನ್ಯತೆಯ ಅರಿವಿಗೆ ಬರಲಾರದು. ವಿಶೇಷವಾದ ದೃಷ್ಟಿಕೋನ ಇದ್ದರೆ ಮಾತ್ರ ಅವನ ಅರಿವು ನಮಗೆ ಆಗಲು ಸಾಧ್ಯ. ಇದು ಒಂದು ರೀತಿಯಲ್ಲಿ ಹಾಲಿನಲ್ಲಿ ತುಪ್ಪ ಇರುವಂತೆ, ನೀರಿನಲ್ಲಿ ಬೆಂಕಿ…

0 Comments

ಶ್ರಾವಣ ವಚನ ಚಿಂತನ-07: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಾಣದುದನರಸುವದಲ್ಲೆ ಕಂಡುದದನರಸುವರೇ ಹೇಳಾ!ಘನಕ್ಕೆ ಘನವಾದ ವಸ್ತು;ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ,ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೇ ಯಂತ್ರವಾದ,ತಾನೆ ಸಕಲವಿದ್ಯಾರೂಪನಾದಇಂತಿವೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದಇನ್ನು ನಿರ್ವಿಕಾರ ಗುಹೇಶ್ವರ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-142 / ವಚನ ಸಂಖ್ಯೆ-55) ಅಂಗ ಮತ್ತು ಲಿಂಗ ಎರಡೂ ಶರಣ ಸಾಹಿತ್ಯದಲ್ಲಿ ಆಧಾರಭೂತ ಅಂಶಗಳು. ಲಿಂಗವ ಕಾಣಲು ಅಂಗಬೇಕು. ಅಂಗವು ಉದಧರಿಸಲು ಲಿಂಗವೂ ಬೇಕು. ಹಾಗೆ ನೋಡಿದರೆ ಅಂಗವೂ ಲಿಂಗಮಯ ಶರೀರವೇ ತಾನಾಗಬೇಕು ಎನ್ಬುವದು ಒಂದು ಆದರ್ಶವಾದರೆ ಅದು ಒಡಮೂಡಿದ್ದೇ ಲಿಂಗದ ಮೂಲಕ ಎಂಬುದೊಂದು ಪ್ರಮೇಯ ಇದ್ದೇ ಇದೆ.…

0 Comments

ಶ್ರಾವಣ ವಚನ ಚಿಂತನ-06: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಳ್ಳಗಂಜಿ ಕಾಡಹೊಕ್ಕಡೆ ಹುಲಿ ತಿಂಬುದ ಮಾಬುದೇ?ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ?ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೇ?ಇಂತೀ‌ ಮೃತ್ಯುವಿನ ಬಾಯ ತುತ್ತಾದ,ವೇಷಡಂಬಕರ ನಾನೇನೆಂಬೆ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-73) ಭಕ್ತಿಯ ಕುರಿತು ಶರಣರು ಮಾಡಿದ ಚಿಂತನೆ ವೈಜ್ಞಾನಿಕ ಮತ್ತು ಆಧಾರಪೂರ್ವಕವಾಗಿದೆ. ಭಕ್ತಿಯನ್ನು ಹೇಗೆ ಮಾಡಬೇಕು? ಇದು ಶರಣರು ತಮ್ಮನ್ನು ತಾವು ಕೇಳಿಕೊಂಡ ಪ್ರಶ್ನೆ. ಅವರಿಗಿಂತ ಪೂರ್ವ ಕಾಲದಿಂದಲೂ ಮತ್ತು ಅವರ ಕಾಲಘಟ್ಟದಲ್ಲೂ ಸಹಿತ ಧಾರ್ಮಿಕ ವ್ಯವಸ್ಥೆ ಭಕ್ತಿಗೆ ಆಡಂಬರದ ವೇಷವನ್ನು ತೊಡಿಸಿ ದೇವರ ಹೆಸರಿನಲ್ಲಿ ಢಂಬಾಚಾರ ಮಾಡುವವರು…

0 Comments

ಶ್ರಾವಣ ವಚನ ಚಿಂತನ-05: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಜಲದೊಳಗಿರ್ದ ಕಿಚ್ಚು ಜಲವ ಸುಡದೆಜಲವು ತಾನಾಗಿಯೆ ಇದ್ದಿತ್ತು ನೋಡಾನೆಲೆಯನರಿದು ನೋಡಿಹೆನೆಂದಡೆ,ಅದು ಜಲವು ತಾನಲ್ಲ.ಕುಲದೊಳಗಿರ್ದು ಕುಲವ ಬೆರೆಸದೆ ,ನೆಲೆಗಟ್ಟುನಿಂದುದನಾರು ಬಲ್ಲರೋ?ಹೊರಗೊಳಗೆವತಾನಾಗಿರ್ದು - ಮತ್ತೆ ತಲೆದೋರದಿಪ್ಪುದುಗುಹಾಎಶ್ವರಾ ನಿಮ್ಮ‌ಜಿಲುವು ನೋಡಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-71) ಈ ವಚನ ಲಿಂಗದ ಇರುವಿಕೆಯ ಸ್ವರೂಪವನ್ನು‌ ಕುರಿತು ಅಲ್ಲಮರು ಚರ್ಚಿಸಿದ ಒಂದು ವಚನ. ದೈವದ ಇರುವಿಕೆಯನ್ನು‌ ಕುರಿತು ವ್ಯೋಮಕಾಯ ಅಲ್ಲಮ ಪ್ರಭುಗಳು‌ ಮಾಡಿದ ಚಿಂತನೆ ಅಗಮ್ಯವಾದುದು. ಒಟ್ಟಾರೆ ಶರಣರ ಚಿಂತನೆಗೆ ಅಡಿಪಾಯವಾದುದು. ನಮ್ಮ ಹೊರಗಿನ ಕಣ್ಣಿಗೆ ಪರಮನ ಇರವು‌ ಕಾಣಿಸಲಾರದು. ಅದು ಜಲದೊಳಗನ ಪಾವಕನಂತೆ. ಅಗ್ನಿಯೊಳಗಣ ಸುಡುವಿಕೆಯಂತೆ.…

0 Comments