ಶ್ರಾವಣ ವಚನ ಚಿಂತನ-10: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಕಂಗಳೇಕೆ ʼನೋಡಬೇಡಾʼ ಎಂದರೆ ಮಾಣವು?ಶ್ರೋತ್ರಂಗಳೇಕೆ ʼಆಲಿಸಬೇಡಾʼ ಎಂದರೆ ಮಾಣವು?ಜಿಹ್ವೆ ಏಕೆ ʼರುಚಿಸಬೇಡಾʼ ಎಂದರೆ ಮಾಣದು?ನಾಸಿಕವೇಕೆ ʼವಾಸಿಸಬೇಡಾʼ ಎಂದರೆ ಮಾಣದು?ತ್ವಕ್ಕು ಏಕೆ ʼಸೋಂಕಬೇಡಾʼ ಎಂದರೆ ಮಾಣದು?ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು!ಗುಹೇಶ್ವರಲಿಂಗಕ್ಕೆ ಒಲಿದ ಕಾರಣ,ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-146 / ವಚನ ಸಂಖ್ಯೆ-98) ಬಾಳಿನ ಆಸಕ್ತಿಗಳು ಹಲವಾರು. ಅವು ಮಾನವನ ಹುಟ್ಟಿನಿಂದ ಎಲ್ಲ ಕಾಲಕ್ಕೂ ಇರುವಂಥವೇ. ತನ್ನ ಆಸಕ್ತಿ ಮೂಲವಾಗಿಯೇ ಜಗತ್ತಿನಲ್ಲಿ ಮನುಷ್ಯ ಎಲ್ಲವನ್ನೂ ಸೃಜಿಸುತ್ತ ಬಂದಿದ್ದಾನೆ. ಕಣ್ಣು ಕನಸಿದ್ದು, ಮನ ಊಹಿಸಿದ್ದು, ಕೈಯ ಸಾಹಸದ ಮೂಲಕ ಒಂದು ವಸ್ತು ರೂಪ…