ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನ ವಿಶ್ಲೇಷಣೆ: ಅಷ್ಟವಿಧಾರ್ಚನೆಯ ಮಾಡಿ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೇ ಅಯ್ಯಾ?ನೀನು ಬಹಿರಂಗ ವ್ಯವಹಾರ ದೂರಸ್ಥನು.ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೇ ಅಯ್ಯಾ?ನೀನು ವಾಙ್ಮನಕ್ಕತೀತನು.ಜಪ ಸ್ತೋತ್ರದಿಂದ ಒಲಿಸುವೆನೇ ಅಯ್ಯಾ?ನೀನು ನಾದಾತೀತನು.ಭಾವಜ್ಞಾನದಿಂದ ಒಲಿಸುವೆನೇ ಅಯ್ಯಾ?ನೀನು ಮತಿಗತೀತನು.ಹೃದಯಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ?ನೀನು ಸರ್ವಾಂಗ ಪರಿಪೂರ್ಣನು.ಒಲಿಸಲೆನ್ನಳವಲ್ಲ; ನೀನೊಲಿಯುವುದೇ ಸುಖವಯ್ಯಚೆನ್ನಮಲ್ಲಿಕಾರ್ಜುನ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-791 / ವಚನ ಸಂಖ್ಯೆ-49) ಅಕ್ಕ ಮಹಾದೇವಿಯವರು ಮಹಿಳಾ ಅನುಭಾವಿಗಳಲ್ಲೇ ಅತ್ಯಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ನಾಡಿನ ಮೊದಲ ಅನುಭಾವಿ ಕವಿಯಿತ್ರಿ. ಇವರ ವಚನಗಳು ಭಾವ ಪ್ರಧಾನತೆಯಿಂದ ಕಂಗೊಳಿಸುತ್ತವೆ. ಅಕ್ಕನವರಲ್ಲಿ ಅನುಭಾವದ ತೀವ್ರತೆ, ಆಧ್ಯಾತ್ಮದ ಹಸಿವು, ಚೆನ್ನಮಲ್ಲಿಕಾರ್ಜುನನ ಮೇಲಿನ ಒಲುಮೆ, ಪ್ರೀತಿ ಅವುಗಳ…