ಶ್ರಾವಣ ವಚನ ಚಿಂತನ-02: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆಆ ಬೆವಸಾಯದ ಘೋರವೇತಕ್ಕಯ್ಯಾ?ಕ್ರಯವಿಕ್ರಯವ ಮಾಡಿ ಮನೆಯಸಂಚ ನಡೆಯದನ್ನಕ್ಕಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ?ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆಆ ಓಲಗದ ಘೋರವೇತಕ್ಕಯ್ಯಾ?ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆಆ ಉಪದೇಶವ ಕೊಟ್ಟ ಗುರು ಕೊಂಡ ಶಿಷ್ಯಇವರಿಬ್ಬರ ಮನೆಯಲಿ ಮಾರಿ ಹೊಗಲಿಗುಹೇಶ್ವರನೆಂಬವನತ್ತಲೆ ಹೋಗಲಿ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65) ಶರಣರು ಈ ಬದುಕನ್ನು ಕುರಿತು ಮಾಡಿದ ಚಿಂತನೆ ಸದಾ ಧನಾತ್ಮಕವಾಗಿ ಇರುತ್ತಿತ್ತು. ಇಲ್ಲಿರುವ ಬದುಕನ್ನು ಸುಂದರ ವಾಗಿಸದೆ. ಅಲ್ಲಿನ ಬದುಕನ್ನು ಸುಂದರಗೊಳಿಸುವತ್ತಲೇ ಚಿಂತಿಸುವ ವಿಧಾನವನ್ನು ಅವರು ಒಪ್ಪಲಿಲ್ಲ. ಮೊದಲು ಇಹದ ಬದುಕು ಸುಂದರವಾಗಬೇಕು ಎಂಬುದು…

0 Comments

ಶ್ರಾವಣ ವಚನ ಚಿಂತನ-01: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ,ಆ ಮೇರುವಿಂದತ್ತಣ ಹುಲು ಮೊರಡಿಯೆ ಸಾಲದೆ?ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ,ಆ ಧಾವತಿಯಿಂದ ಮುನ್ನಿನ ವಿಧಿ [ಯೆ] ಸಾಲದೇ?ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ,ನಿಮ್ಮಿಂದ ಹೊರಗಣ ಜವನೆ ಸಾಲದೇ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-66) ಇದು ಶ್ರಾವಣ ಮಾಸದ ಕಾಲ. ಪ್ರತಿ ದಿನ ಒಂದು ಪವಿತ್ರವಾದ ಚಿಂತನೆಯನ್ನು ಮಾಡುವದು ಈ ಮಾಸದ ವೈಶಿಷ್ಟ್ಯ. ಪವಿತ್ರವಾದ ಚಿಂತನೆಯನ್ನು ಮಾಡಲು ಯಾವುದೇ ಮಾಸದ ಅಗತ್ಯವಿಲ್ಲ, ಆದರೂ ಇದೊಂದು ಕಾರಣವಷ್ಟೇ. ಹೀಗೆ ಅಲೋಚಿಸಲು ನಾವು ಹೊರಟಾಗ ನಮಗೆ ಅತ್ಯಂತ ಮಾರ್ಗದರ್ಶಕವಾಗಿ ಸಿಗುವ ಸಾಹಿತ್ಯ…

0 Comments

ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ / ಶ್ರೀಮತಿ. ಅನುಪಮಾ ಪಾಟೀಲ.

ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ,ಎನ್ನ ಬಿಡು, ತನ್ನ ಬಿಡು ಎಂಬುದು ಕಾಯವಿಕಾರ.ಎನ್ನ ಬಿಡು, ತನ್ನ ಬಿಡು ಎಂಬುದು ಮನೊವಿಕಾರ.ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನಮನ ನಿಮ್ಮನೈದುಗೆ, ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-14 / ವಚನ ಸಂಖ್ಯೆ-36) ಮಾನವನು ತನ್ನ ಜೀವನದಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವದು ಮುಖ್ಯವಾಗಿದೆ. ಆಧ್ಯಾತ್ಮವು ಅಂತರಂಗವನ್ನು ಶುದ್ಧಗೊಳಿಸುವದರೊಂದಿಗೆ ಬಹಿರಂಗದ ದುಃಖವನ್ನು ದೂರ ಮಾಡುತ್ತದೆ, ಅಂತರಂಗ ಶುದ್ಧವಾಗಿರಬೇಕೆಂದರೆ ಮನಸ್ಸು ಒಳ್ಳೆಯದನ್ನು ಆಲೋಚಸುತ್ತಿರಬೇಕು. ದೇಹ ಮತ್ತು ಮನಸ್ಸು ಎರಡು ಅತಿ ಮುಖ್ಯ ಅಂಗಗಳು. ದೇಹ ಸ್ಥೂಲ ಶರೀರವಾದರೆ ಮನಸ್ಸು ಸೂಕ್ಷ್ಮ ಶರೀರ ಅಂತ ಗುರುತಿಸಲಾಗಿದೆ. ಎರಡನ್ನೂ…

0 Comments

“ಬೆಳಗಿನೊಳಗಣ ಬೆಳಗು” / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಶಬ್ದವೆಂಬೆನೆ? ಶ್ರೋತ್ರದೆಂಜಲು. ಸ್ಪರ್ಶವೆಂಬೆನೆ? ತ್ವಕ್ಕಿನೆಂಜಲು.ರೂಪೆಂಬೆನೆ? ನೇತ್ರದೆಂಜಲು. ರುಚಿಯೆಂಬೆನೆ? ಘ್ರಾಣದೆಂಜಲು.ಪರಿಮಳವೆಂಬೆನೆ? ಘ್ರಾಣದೆಂಜಲು. ನಾನೆಂಬೆನೆ? ಅರಿವಿನೆಂಜಲು.ಎಂಜಲೆಂಬೆ ಭಿನ್ನವಳಿದ, ಬೆಳಗಿನೊಳಗಣ ಬೆಳಗುಗುಹೇಶ್ವರನೆಂಬ ಲಿಂಗವು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-182 / ವಚನ ಸಂಖ್ಯೆ-564) ವಚನ ಸಾಹಿತ್ಯದ ಬೆಡಗಿನ ಭಾಷೆಯ ಹರಿಕಾರ ಅಲ್ಲಮಪ್ರಭುಗಳು. ಅಲ್ಲಮ ಪ್ರಭುಗಳ ವಚನಗಳು ಪಾರಮಾರ್ಥಿಕ, ಸೃಜನಶೀಲತೆಗೆ ಮತ್ತು ವೈಚಾರಿಕ ಬದ್ಧತೆಗೆ ಒಳಗಾಗುತ್ತವೆ. ವಚನ ಸಾಹಿತ್ಯ ಸಂಸ್ಕೃತಿಗೆ ಅಲ್ಲಮ ಪ್ರಭುಗಳಿಗೆ ವಿಶಿಷ್ಟ ಮತ್ತು ಗಂಭೀರ ಸ್ಥಾನವಿದೆ. ಅಲ್ಲಮ ಪ್ರಭುಗಳ ತತ್ವ ಮತ್ತು ಸಿದ್ಧಾಂತವನ್ನು ಪ್ರತಿಕ್ರಿಯಿಸುವಾಗ 12 ನೇ ಶತಮಾನದ ಸಾಮಾನ್ಯ ಭಾಷೆ ಪರಿವರ್ತನಾಶೀಲತೆಯನ್ನು ಪಡೆದುಕೊಳ್ಳುತ್ತದೆ. ವಚನ ಭಾಷೆಯ…

0 Comments

“ಅಂಜಿದರಾಗದು, ಅಳುಕಿದರಾಗದು”/ ಲಿಂ. ಶ್ರೀ. ಈಶ್ವರಗೌಡ ಪಾಟೀಲ, ನರಗುಂದ.

ಅಂಜಿದಡೆ ಮಾಣದು, ಅಳುಕಿದಡೆ ಮಾಣದು,ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.ಕಕ್ಕುಲತೆಗೆ ಬಂದಡೆ ಆಗದು ನೋಡಾ.ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು,ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-63 / ವಚನ ಸಂಖ್ಯೆ-688) ಬಸವಣ್ಣನವರು ಜೀವನದಲ್ಲಿ ಯಾವದಕ್ಕೂ ಅಂಜದೆ ಅಳುಕದೆ ಬಂದದ್ದನ್ನ ಎದುರಿಸಿ ಸಾಧನೆಯಲ್ಲಿ ಮುಂದುವರೆಯಬೇಕು ಎಂಬುದನ್ನ ಇಲ್ಲಿ ಹೇಳುತ್ತಿದ್ದಾರೆ. ಲಲಾಟ ಲಿಖಿತ ಅಂದರೆ ಹಣೆಯ ಬರಹವನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ಅಂಜಿದರೂ ಬುಡುವದಿಲ್ಲ, ಅಳುಕಿದರೂ ಬಿಡುವದಿಲ್ಲ, ವಜ್ರ ಪಂಜರದೊಳಗಿದ್ದರೂ ಬಿಡುವದಿಲ್ಲ. ಬರಬೇಕಾಗಿದ್ದು ಬಂದೆ ಬರುತ್ತದೆ. ಇದು ವಿಧಿವಾದವನ್ನ ಎತ್ತಿ ಹಿಡಿಯುವಂತೆ ಕಂಡರೂ ಆ ಹಣೆಬರಹಕ್ಕೆ ಎಲ್ಲವನ್ನೂ…

0 Comments

“ಅಧ್ಯಾತ್ಮ ಮತ್ತು ವಿಜ್ಞಾನಗಳ ಸಾಮ್ಯತೆಯ ಪ್ರಾಯೋಗಿಕ ಪ್ರತಿಪಾದನೆ” ಲೇಖಕರು: ಡಾ. ಬಸವರಾಜ ಸಾದರ.

ಧರ್ಮಕ್ಕೂ, ವಿಜ್ಞಾನಕ್ಕೂ ಎಂಥ ಸಂಬಂಧವಿದೆ? ಎಂಬ ಪ್ರಶ್ನೆ ಹಲವಾರು ವಿಜ್ಞಾನಿಗಳನ್ನೂ, ಧಾರ್ಮಿಕ ಚಿಂತಕರನ್ನೂ ನಿರಂತರ ಕಾಡುತ್ತ ಬಂದಿದೆ. ಶ್ರೇಷ್ಠ ವಿಜ್ಞಾನಿಗಳನೇಕರು ಧರ್ಮದಲ್ಲಿ ವಿಜ್ಞಾನವನ್ನೂ, ವಿಜ್ಞಾನದಲ್ಲಿ ಧರ್ಮವನ್ನೂ ಕಂಡಿದ್ದಾರೆ. ಹಾಗೆಯೇ ವೈಚಾರಿತೆಯನ್ನು ಗೌರವಿಸುವ ಕೆಲವು ‘ನಿಜ’ ಧಾರ್ಮಿಕರೂ ಅದೇ ಅಭಿಪ್ರಾಯದವರಾಗಿದ್ದಾರೆ. ಆದರೆ, ಇವರೆಲ್ಲ ತಮ್ಮ ಈ ಅಭಿಪ್ರಾಯಗಳ ಪ್ರತಿಪಾದನೆಯಲ್ಲಿ ಪ್ರಾಯೋಗಿಕ ಕ್ರಮವನ್ನು ಅನುಸರಿಸಿಲ್ಲವೆನಿಸುತ್ತದೆ. ನಂಬಿಗೆ ಹಾಗೂ ಭಾವನಾತ್ಮತ ನೆಲೆಯಲ್ಲಿ ಇವರೆಲ್ಲ ಈ ಸಂಬಂಧ ಕುರಿತು ಮಾತಾಡಿದ್ದಾರೆಯೇ ಹೊರತು, ಪ್ರಯೋಗಾತ್ಮಕ ಕ್ರಮ ಇಲ್ಲಿಲ್ಲ. ಅದನ್ನು ಹಾಗೆ ತೋರಿಸುವುದು ಕಷ್ಟದ ಕೆಲಸವೂ ಹೌದು. ಅಚ್ಚರಿಯೆಂದರೆ, ಇಂಥ ಕಷ್ಟದ ಕೆಲಸವನ್ನೂ ಹನ್ನೆರಡನೆಯ ಶತಮಾನದ…

1 Comment

ಬಸವಣ್ಣನವರ ವಚನ “ಶರಣ ನಿದ್ರೆಗೈದೊಡೆ ಜಪ ಕಾಣಿರೋ”ವಚನ ವಿಶ್ಲೇಷಣೆ

ಶರಣ ನಿದ್ರೆಗೈದಡೆ ಜಪ ಕಾಣಿರೊ,ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,ಶರಣ ನಡೆದುದೆ ಪಾವನ ಕಾಣಿರೊ,ಶರಣ ನುಡಿದುದೆ ಶಿವತತ್ವ ಕಾಣಿರೊ,ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ!(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-78 / ವಚನ ಸಂಖ್ಯೆ-873) ಶರಣನ ಶರಣಸ್ಥಲದ ವಿವರಣೆ ಇರುವ ಈ ವಚನ ಬಸವಣ್ಣನವರ ಬೆಡಗಿನ ಹಾಗೂ ಟೀಕಿನ ವಚನಗಳಲ್ಲೊಂದು. ಈ ವಚನದಲ್ಲಿ ಶರಣ, ನಿದ್ರೆ, ಜಪ, ತಪ, ಶಿವರಾತ್ರಿ, ನಡೆದುದು, ನುಡಿದುದು ಮತ್ತು ಕಾಯ ಕೈಲಾಸ ಎನ್ನುವ ಶಬ್ದಗಳನ್ನು ಬಳಸಿದ್ದಾರೆ. ಮಾನವನಾಗಿ ಮರ್ತ್ಯಕ್ಕೆ ಆಗಮಿಸಿ‌ ಶಿವಜ್ಞಾನ ಸಂಪನ್ನನಾಗಿ ಮಹದೇವನಾಗಿ ಮಹದಲ್ಲಿ ನಿಂದವನೇ ಶರಣ. ಅರಿವನ್ನೆ…

0 Comments

ಷಣ್ಮುಖಸ್ವಾಮಿಗಳ ವಚನ “ಎನ್ನ ಸ್ಥೂಲತನುವೆಂಬ ಮನೆಯಲ್ಲಿ”ವಚನ ವಿಶ್ಲೇಷಣೆ

ಎನ್ನ ಸ್ಥೂಲತನುವೆಂಬ ಮನೆಯಲ್ಲಿಲಿಂಗವೆಂಬ ಜ್ಯೋತಿಯ ತುಂಬಿದೆನಯ್ಯ.ಎನ್ನ ಸೂಕ್ಷ್ಮತನುವೆಂಬ ಮನೆಯಲ್ಲಿಮಂತ್ರವೆಂಬ ಜ್ಯೋತಿಯ ತುಂಬಿದೆನಯ್ಯ.ಎನ್ನ ಕಾರಣ ತನುವೆಂಬ ಮನೆಯಲ್ಲಿಜ್ಞಾನವೆಂಬ ಜ್ಯೋತಿಯ ತುಂಬಿದೆನಯ್ಯ.ಎನ್ನ ಒಳಹೊರಗೆ ತುಂಬಿ ಬೆಳಗುವಜ್ಯೋತಿಯ ಬೆಳಗಿನೊಳಗೆ ಸುಳಿಯುತಿರ್ದೆನಯ್ಯ.ಅಖಂಡೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-1035 / ವಚನ ಸಂಖ್ಯೆ-237) ಬಸವೋತ್ತರ ಯುಗದ ಪ್ರಮುಖ ವಚನಕಾರರು ಶ್ರೀ ಷಣ್ಮುಖಸ್ವಾಮಿಗಳು. 17 ನೇ ಶತಮಾನದ ಅಂತ್ಯಭಾಗದಲ್ಲಿದ್ದ ಇವರ ಜೀವಿತದ ಕಾಲಘಟ್ಟ ಸುಮಾರು ಕ್ರಿ. ಶ. 1639 ರಿಂದ ಕ್ರಿ. ಶ. 1711 ಎಂದು ತಿಳಿದು ಬರುತ್ತದೆ. ಇವರು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನವರಾದ ಇವರ ತಂದೆ ಶರಣ ಮಲ್ಲಪ್ಪ ಶೆಟ್ಟಿ…

0 Comments

ಅಲ್ಲಮರ ವಚನಗಳಲ್ಲಿ “ಲಿಂಗಾಚಾರ” / ಸುನಿತಾ ಮೂರಶಿಳ್ಳಿ, ಧಾರವಾಡ.

ಅನಾದಿ ಕಾಲದಿಂದಲೂ ಲಿಂಗವೆಂಬುದು ಮೂರ್ತರೂಪದಲ್ಲಿ ಸ್ಥಾವರಲಿಂಗವಾಗಿ ಚರಲಿಂಗವಾಗಿ ಪೂಜಿಸುತ್ತಾ ಬಂದಿದೆ. ಆದರೆ ಲಿಂಗವೆಂಬುದನ್ನು ಚೈತನ್ಯದ ಕುರುಹಾಗಿ ಸಮಷ್ಟಿಯ ಕುರುಹಾಗಿ ಇಷ್ಟಲಿಂಗವೆಂದು ಕರಸ್ಥಲಕ್ಕೆ ತಂದುಕೊಟ್ಟವರು ಬಸವಣ್ಣನವರು.  ಲಿಂಗವೇ ಬಸವ ಧರ್ಮದ ಬುನಾದಿ. ಸರ್ವಸಮಾನತೆಯ ಪಾತಳಿಯ ಮೇಲೆ ನಿಂತು ಎಲ್ಲ ಅಸಮಾನತೆಗಳನ್ನು ತೊಡೆದು ಹಾಕಿದ ಈ ಲಿಂಗದ ಪರಿಕಲ್ಪನೆ ವ್ಯಷ್ಟಿ ಹಾಗೂ ಸಮಷ್ಟಿಗಳ ವಿಕಾಸದ ಮಧ್ಯದ ಸೇತುವೆ ಆಗಿದೆ. ಅಂಗದಿಂದ ಲಿಂಗವಾಗುವ ಪಯಣವೇ ಬಯಲ ಪಯಣ, ಲಿಂಗ ಪಯಣ, ಸತ್ಯದ ಗಂತವ್ಯ. ವ್ಯಕ್ತಿಯ ಆತ್ಮೋನ್ನತಿಗಾಗಿ ತನ್ಮೂಲಕ ಜಗದ ಒಳಿತಿಗೆ ಹಾಕಿದ ನೈತಿಕ ಚೌಕಟ್ಟುಗಳೇ ಪಂಚಾಚಾರಗಳು. ಅದರಲ್ಲಿ ಲಿಂಗಾಚಾರವು ಸರ್ವಾಂಗೀಣ ಅಭಿವೃದ್ಧಿಯ…

0 Comments

ಕರಗಿ ಮಾಡಲಿಬಲ್ಲ ಒರೆದು ನೋಡಲಿಬಲ್ಲ / ಮೌನೇಶ್ವರರ ವಚನ / ಡಾ. ವೀರೇಶ ಬಡಿಗೇರ, ಹಂಪಿ.

ಕರಗಿ ಮಾಡಲಿಬಲ್ಲ ಒರೆದು ನೋಡಲಿಬಲ್ಲಪರಿಪರಿಯ ವಸ್ತು ಒಡವೆ ದೇವರಾಭರಣಜಡಿದು ಮಾಡುವ ಗುಣಮಣಿ ಚಿಂತಾಮಣಿಧರೆಗಿಳಿದ ಚೆನ್ನಬಸವಣ್ಣ, ಬಸವಣ್ಣ.(ತಿಂತಿಣಿ ಮೌನೇಶ್ವರರ ವಚನಗಳು-2016 / ಡಾ. ವೀರೇಶ ಬಡಿಗೇರ / ಪುಟ ಸಂ. 7 / ವ. ಸಂ. 14) ಕಾಸಿ ನೋಡಲಿ ಬಲ್ಲ ಕೀಸಿ ನೋಡಲಿಬಲ್ಲ. ವಿಶ್ವಕರ್ಮರ ಕುಲಕಸುಬುಗಳು ಜ್ಞಾನ ಮತ್ತು ಕೌಶಲ್ಯದ ರೂಪಗಳು. ಲೋಹವನ್ನು ಕರಗಿಸುವ, ಅರಗಿಸುವ, ಒರೆದು ನೋಡುವ, ಬಡಿದು ಬಗ್ಗಿಸುವ ಮೂಲಕ ಹಲವು ಬಗೆಯ ವಸ್ತು ಒಡವೆ, ದೇವರ ಆಭರಣಗಳನ್ನು ಸೃಜಿಸುವ, ಆಕೃತಿಗೊಳಿಸುವ ಗುಣಮಣಿಗಳು. ಬೇಡಿದ್ದನ್ನು ಕೌಶಲ್ಯಯುತವಾಗಿ ಮಾಡಿ ಕೊಡುವ ಚಿಂತಾಮಣಿಗಳು. ಅಕ್ಕಸಾಲಿಯರ ಪ್ರತಿನಿಧಿಯಾದ ಮೌನಯ್ಯನವರು…

1 Comment