ಶ್ರಾವಣ ವಚನ ಚಿಂತನ-02: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆಆ ಬೆವಸಾಯದ ಘೋರವೇತಕ್ಕಯ್ಯಾ?ಕ್ರಯವಿಕ್ರಯವ ಮಾಡಿ ಮನೆಯಸಂಚ ನಡೆಯದನ್ನಕ್ಕಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ?ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆಆ ಓಲಗದ ಘೋರವೇತಕ್ಕಯ್ಯಾ?ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆಆ ಉಪದೇಶವ ಕೊಟ್ಟ ಗುರು ಕೊಂಡ ಶಿಷ್ಯಇವರಿಬ್ಬರ ಮನೆಯಲಿ ಮಾರಿ ಹೊಗಲಿಗುಹೇಶ್ವರನೆಂಬವನತ್ತಲೆ ಹೋಗಲಿ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65) ಶರಣರು ಈ ಬದುಕನ್ನು ಕುರಿತು ಮಾಡಿದ ಚಿಂತನೆ ಸದಾ ಧನಾತ್ಮಕವಾಗಿ ಇರುತ್ತಿತ್ತು. ಇಲ್ಲಿರುವ ಬದುಕನ್ನು ಸುಂದರ ವಾಗಿಸದೆ. ಅಲ್ಲಿನ ಬದುಕನ್ನು ಸುಂದರಗೊಳಿಸುವತ್ತಲೇ ಚಿಂತಿಸುವ ವಿಧಾನವನ್ನು ಅವರು ಒಪ್ಪಲಿಲ್ಲ. ಮೊದಲು ಇಹದ ಬದುಕು ಸುಂದರವಾಗಬೇಕು ಎಂಬುದು…