ಬೊಂತಾದೇವಿಯವರ ವಚನ ವಿಶ್ಲೇಷಣೆ / ಘಟದೊಳಗಣ ಬಯಲು / ಶ್ರೀ ಸಿದ್ಧೇಶ್ವರ ಸ್ವಾಮೀಯವರು.
ಘಟದೊಳಗಣ ಬಯಲು,ಮಠದೊಳಗಣ ಬಯಲು,ಬಯಲು ಬಯಲು ಬಯಲು?ತಾನೆಲ್ಲಾ ಬಯಲು, ಬಿಡಾಡಿ ಬಯಲು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-392/ವಚನ ಸಂಖ್ಯೆ-1093) ಇದು ಬೊಂತಾದೇವಿಯವರ ವಚನ. ಅವರು ಕಾಶ್ಮೀರದ ರಾಜಮನೆತನದ ರಾಜಪುತ್ರಿ. ಪರಮಸತ್ಯ ಪರಮಾತ್ಮನ ಶೋಧನೆಗಾಗಿ ರಾಜ ಭೋಗವನೆಲ್ಲ ತೊರೆದವರು. ರಾಜ ಪೋಷಾಕವನೆಲ್ಲ ಬಿಟ್ಟು ಕೇವಲ ಕೌದಿಯನ್ನು ಮೈಮೇಲೆ ಹೊತ್ತುಕೊಂಡರು. ಜನ ಕೇಳಿದರು “ಹೀಗೇಕೆ” ಎಂದು. ರಾಜ ಪೋಷಾಕು ಹಾಗೂ ಕೌದಿ ಎರಡೂ ಬಯಲಾಗುತ್ತವೆ ಎಂದರವರು. ಕೌದಿಯು ಹಲವಾರು ತುಂಡು ಬಟ್ಟೆಗಳ ತೇಪೆ. ನಮ್ಮ ಬದುಕು, ವಿದ್ಯೆ, ಬುದ್ದಿ ಎಲ್ಲವೂ ಒಂದು ರೀತಿ ಮಿಶ್ರಣ, ತೇಪೆ. ಅಲ್ಲಿಷ್ಟು ಇಲ್ಲಿಷ್ಟು ನೋಡಿ, ಓದಿ,…





Total views : 55993