“ಅಂಜಿದರಾಗದು, ಅಳುಕಿದರಾಗದು”/ ಲಿಂ. ಶ್ರೀ. ಈಶ್ವರಗೌಡ ಪಾಟೀಲ, ನರಗುಂದ.
ಅಂಜಿದಡೆ ಮಾಣದು, ಅಳುಕಿದಡೆ ಮಾಣದು,ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.ಕಕ್ಕುಲತೆಗೆ ಬಂದಡೆ ಆಗದು ನೋಡಾ.ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು,ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-63 / ವಚನ ಸಂಖ್ಯೆ-688) ಬಸವಣ್ಣನವರು ಜೀವನದಲ್ಲಿ ಯಾವದಕ್ಕೂ ಅಂಜದೆ ಅಳುಕದೆ ಬಂದದ್ದನ್ನ ಎದುರಿಸಿ ಸಾಧನೆಯಲ್ಲಿ ಮುಂದುವರೆಯಬೇಕು ಎಂಬುದನ್ನ ಇಲ್ಲಿ ಹೇಳುತ್ತಿದ್ದಾರೆ. ಲಲಾಟ ಲಿಖಿತ ಅಂದರೆ ಹಣೆಯ ಬರಹವನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ಅಂಜಿದರೂ ಬುಡುವದಿಲ್ಲ, ಅಳುಕಿದರೂ ಬಿಡುವದಿಲ್ಲ, ವಜ್ರ ಪಂಜರದೊಳಗಿದ್ದರೂ ಬಿಡುವದಿಲ್ಲ. ಬರಬೇಕಾಗಿದ್ದು ಬಂದೆ ಬರುತ್ತದೆ. ಇದು ವಿಧಿವಾದವನ್ನ ಎತ್ತಿ ಹಿಡಿಯುವಂತೆ ಕಂಡರೂ ಆ ಹಣೆಬರಹಕ್ಕೆ ಎಲ್ಲವನ್ನೂ…