ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ / ಶ್ರೀಮತಿ. ದೇವೇಂದ್ರಮ್ಮ, ರಾಯಚೂರು.

ಆಸೆಯೆಂಬುದು ಅರಸಿಂಗಲ್ಲದೆ,ಶಿವಭಕ್ತರಿಗುಂಟೆ ಅಯ್ಯಾ?ರೋಷವೆಂಬುದು ಯಮದೂತರಿಗಲ್ಲದೆ,ಅಜಾತರಿಗುಂಟೆ ಅಯ್ಯಾ?ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆದೂರ ಮಾರಯ್ಯ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-708) ಆಸೆ ಅನ್ನುವುದು ಅರಸನಾದ ಭವಿಗೆ ಇರತದ. ಅರಸನಿಗೆ ಈ ರಾಜ್ಯ ಗಳಿಸಿದರೆ ಇನ್ನೊಂದು ರಾಜ್ಯ ಗಳಿಸಬೇಕು. ಇನ್ನೊಂದು ರಾಜ್ಯ ಗಳಿಸಿದರೇ ಮಗದೊಂದು ರಾಜ್ಯದ ಅಧಿಕಾರ ನನ್ನ ಕೈಲಿ ಇರತದ, ಅಧಿಕಾರ ಇದ್ದರೇ ನನಗ ಮರ್ಯಾದೆ ಗೌರವ ಸಿಗತದ ಅನ್ನುವ ಭಾವನೆ ರಾಜನಿಗೆ ಇರುತ್ತದೆ. ಶಿವಭಕ್ತರಾದ ನಮಗ ಯಾಕೆ ಅಂತಹ ಆಸೆ? ಯಾವ ಅಧಿಕಾರ, ಆಸ್ತಿ, ದುಡ್ಡು, ಅನ್ಯಾಯದ ದುಡಿಮೆಯ ಆಸೆಯೂ ನಮಗೆ ಬೇಡ. ಸತ್ಯ ಶುದ್ಧ ಕಾಯಕದಿಂದ…

0 Comments

“ಸಾವಿರ ವ್ರತ-ಸಾಧನೆಯ ಫಲಗಳನ್ನೂ ಮಣ್ಣುಗೂಡಿಸುವ ಒಂದು ಹಾದರ” ಡಾ. ಬಸವರಾಜ ಸಾದರ,ಬೆಂಗಳೂರು.

ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾದ ‘ಕೆಲವು’ ಮಠಾಧಿಪತಿಗಳ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಮುಕ್ತ ಚರ್ಚೆ ನಡೆಯುತ್ತಿತ್ತು. ಸಹಜವಾಗಿಯೇ ಅಲ್ಲಿ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಅದರಲ್ಲಿ ಒಂದು ಪಕ್ಷದವರು ಅತ್ಯಾಚಾರಿ ಸ್ವಾಮಿಗಳನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದರೆ, ಮತ್ತೊಂದು ಕಡೆಯವರು ಅವರನ್ನೇ ಸಮರ್ಥಿಸಿಕೊಳ್ಳುತ್ತಿದ್ದರು. ಸಮರ್ಥನೆ ಮಾಡಿಕೊಳ್ಳುತ್ತಿದ್ದವರು ತಮ್ಮ ಮಾತುಗಳಿಗೆ ಕೊಡುತ್ತಿದ್ದ ಸಾಕ್ಷಿಗಳು ಅಚ್ಚರಿ ಮೂಡಿಸುವಂತಿದ್ದವು. ಕೆಲವೆಂದರೆ:• ಪಟ್ಟಾಭಿಷೇಕವಾದ ದಿನದಿಂದ ಈವರೆಗೂ ನಮ್ಮ ಸ್ವಾಮಿಗಳು ಮಾಡಿರುವ ಸಮಾಜೋಪಯೋಗಿ ಕೆಲಸಗಳು ಸಾವಿರಾರು.• ನೂರಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ.• ಉಚಿತ ಪ್ರಸಾದ ನಿಲಯಗಳನ್ನು ನಡೆಸುತ್ತಿದ್ದಾರೆ.• ನಿರಂತರ…

1 Comment

ಒಂದೇ ಶರೀರದ ಇತ್ತಲೆಯಲ್ಲಿ ಒತ್ತಲೆಗೆ ವಿಷ ಹಾಕಿದರೆ? / ಡಾ. ಬಸವರಾಜ ಸಾದರ, ಬೆಂಗಳೂರು.

ಸಮಾಜವಾದ ಎಂಬ ಶಬ್ದವನ್ನು ಬಳಸದೆ, ಆ ಸಿದ್ಧಾಂತಕ್ಕೆ ಸಮರ್ಥ ಉದಾಹರಣೆಯಾಗಬಲ್ಲ, ಸಮತೆಯುಕ್ತ ಸಮಾಜದ ನಿರ್ಮಾಣಕ್ಕೆ ಮೊದಲು ಮಾಡಿದರು 12 ನೇಯ ಶತಮಾನದ ಶರಣರು. ಇದು ಚಾರಿತ್ರಿಕ ವಾಸ್ತವ. ಸರ್ವರ ಹಿತವನ್ನು ಸಮಾನ ನೆಲೆಯಲ್ಲಿ ಸಾಧಿಸ ಹೊರಟ ಅವರ ಕ್ರಿಯಾತ್ಮಕ ನಡೆ ಎಲ್ಲ ಕಾಲಕ್ಕೂ ಮಾದರಿಯಾಗುವಂಥದ್ದು. ‘ವ್ಯಕ್ತಿ ಹಿತದಲ್ಲಿಯೇ ಸಮಾಜದ ಹಿತವಿದೆ’ ಎಂಬ ಪ್ರಾಯೋಗಿಕ ಸಿದ್ಧಾಂತವನ್ನು ಅನುಸರಿಸುವುದರ ಜೊತೆಗೆ, ಏಕಕಾಲದಲ್ಲಿ ವ್ಯಕ್ತಿ ಮತ್ತು ಸಮುದಾಯ ಎರಡರ ಹಿತವನ್ನೂ ಸಾಧಿಸ ಹೊರಟ ಅವರ ಒಟ್ಟು ಉದ್ದೇಶ ‘ಸಕಲಜೀವಾತ್ಮರ ಲೇಸನ್ನೇ ಬಯಸು’ ವುದಾಗಿತ್ತು. 20 ನೇಯ ಶತಮಾನದಲ್ಲಿ ಇದನ್ನೇ ಗಾಂಧೀಜೀಯವರ ‘ಸರ್ವೋದಯ’…

0 Comments

ಹೌದಪ್ಪಾ ಹೌದೋ ನೀನೇ ದೇವರೋ / ಡಾ. ಬಸವರಾಜ ಸಾದರ, ಬೆಂಗಳೂರು.

ದೇವರನ್ನು ಕುರಿತ ನಮ್ಮ ನಂಬಿಕೆ ಮತ್ತು ಪರಿಕಲ್ಪನೆಗಳು ವೈವಿಧ್ಯಪೂರ್ಣವಾಗಿರುವಂತೆ ವಿಚಿತ್ರತರವೂ ಆಗಿವೆ. ದೇವರು ಎಲ್ಲಿದ್ದಾನೆ? ಹೇಗಿದ್ದಾನೆ? ಅವನನ್ನು ಕಾಣುವುದು ಹೇಗೆ? ಎಂಬ ಅಸಂಖ್ಯ ಪ್ರಶ್ನೆಗಳಿಗೆ ತರಹೇವಾರಿ ಉತ್ತರಗಳು ಹೊರಡುತ್ತವೆ. ಸಾಮಾನ್ಯವಾಗಿ ಮನುಷ್ಯನು ದೇವರನ್ನು ತನಗಿಂತ ಭಿನ್ನವಾದ ಅವತಾರ, ಸ್ವರೂಪ ಮತ್ತು ಸ್ಥಳಗಳಲ್ಲಿ ಕಾಣುವುದೇ ಹೆಚ್ಚು. ಈ ಕಾರಣಗಳಿಂದಾಗಿಯೇ ದೇವರಿಗೆ ತರತರದ ರೂಪಗಳನ್ನು ಆರೋಪಿಸಿ, ಪೋಷಾಕುಗಳನ್ನು ತೊಡಿಸಿ, ಗುಡಿ, ಗುಂಡಾರ, ದೇವಾಲಯ, ಬಸದಿ, ಚರ್ಚುಗಳಂಥ ಇಮಾರತುಗಳನ್ನು ನಿರ್ಮಿಸಿ, ಅದರಲ್ಲಿ ಆತನನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಂಪರೆ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಇವೆಲ್ಲ ನಂಬಿಕೆಗಳ ಹಿಂದೆ ದೇವರು ನಮ್ಮಿಂದ ಅನ್ಯ ಮತ್ತು…

1 Comment

ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ “ತನುವ ತೋಂಟವ ಮಾಡಿ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ,ಅಗೆದು ಕಳೆದೆನಯ್ಯ ಭ್ರಾಂತಿಯ ಬೇರ.ಒಡೆದು ಸಂಸಾರದ ಹೇಂಟೆಯ,ಬಗಿದು ಬಿತ್ತಿದೆನಯ್ಯ ಬ್ರಹ್ಮ ಬೀಜವ.ಅಖಂಡ ಮಂಡಲವೆಂಬ ಭಾವಿ, ಪವನವೇ ರಾಟಾಳ,ಸುಷುಮ್ನನಾಳದಿಂದ ಉದಕವ ತಿದ್ದಿ,ಬಸವಗಳೈವರು ಹಸಗೆಡಿಸಿಹರೆಂದುಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,ಆವಾಗಳೂ ಈ ತೋಂಟದಲಿ ಜಾಗರವಿದ್ದುಸಸಿಯ ಸಲುಹಿದೆನು ಕಾಣಾ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-454 / ವಚನ ಸಂಖ್ಯೆ-1217) ಅಲ್ಲಮ ಪ್ರಭುಗಳು ಸಾಧನೆಯನ್ನ ನಿರೂಪಿಸಿರುವ ಈ ವಚನ ಸಾಧಕ ವೃಂದಕ್ಕೆನೇ ಆದರ್ಶಪ್ರಾಯವಾಗಿರುವ ದೃವ ನಕ್ಷತ್ರದಂತಿದೆ. ಈ ವಚನವನ್ನ ನೋಡಿದ ಕೂಡಲೆ ಕೃಷಿಗೆ ಸಂಬಂಧಿಸಿದ ವಚನ ಅನಿಸಿದರೂ ಕೂಡ ದೇಹವನ್ನೆ ತೋಟವನ್ನಾಗಿ ಮಾಡಿಕೊಂಡು ಹೇಗೆ…

0 Comments

ಪರಸ್ಪರಾವಲಂಬನ ಸಿದ್ಧಾಂತದ ವೈಜ್ಞಾನಿಕ ವಚನ / ಡಾ. ಬಸವರಾಜ ಸಾದರ, ಬೆಂಗಳೂರು.

ಸೃಷ್ಟಿಯ ಪ್ರತಿಯೊಂದು ವಸ್ತು ಮತ್ತು ಜೀವಿಯೂ ‘ಪರಸ್ಪರಾವಲಂಬನ’ ಸಿದ್ಧಾಂತದ ಮೂಲಕವೇ ತಮ್ಮ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುತ್ತವೆ ಮತ್ತು ಆ ಮೂಲಕವೇ ತಮ್ಮ ಬೆಳವಣಿಗೆಯನ್ನು ಸಾಧಿಸುತ್ತವೆ. ಇದು ವೈಜ್ಞಾನಿಕ ಸತ್ಯ. ಹೀಗೆ ಪರಸ್ಪರ ಅವಲಂಬಿತವಾಗುವ ವಸ್ತು ಮತ್ತು ಜೀವಿಗಳ ಸಂಬಂಧದಲ್ಲಿ ಮುಖ್ಯವಾಗಿ ಪ್ರವೃತ್ತವಾಗುವುದು ಅವುಗಳಲ್ಲಿನ ಪೂರಕ (Complimentary) ಗುಣ ಮತ್ತು ಪರಸ್ಪರ ಹೊಂದಿಕೊಳ್ಳುವ (Compatibility) ಸ್ವಭಾವ. ಅಂಥ ಸಂಬಂಧ ಕುದುರಿದಾಗ ಮಾತ್ರ ಅಪೇಕ್ಷಿತ ಮತ್ತು ನಿರೀಕ್ಷಿತ ಪರಿಣಾಮ ದೊರೆಯಲು ಸಾಧ್ಯ. ಪರಸ್ಪರಾವಲಂಬನದ ಈ ಸಂಬಂಧವು ಹೊಸ ಸೃಷ್ಟಿಯ ಮೂಲವೂ ಹೌದು. ಜಗತ್ತಿನ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ ಐನ್‌ಸ್ಟಿನ್‌ನ ‘ಸಾಪೇಕ್ಷ…

0 Comments

ಅಗ್ಗವಣಿ ಹಂಪಯ್ಯ ಮತ್ತು ಅವನ ವಚನಗಳು/ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ.

ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಇನ್ನೂ ಚರ್ಚಿಸಲಾರದ, ಅಧ್ಯಯನಕ್ಕೆ ಒಳಪಡಿಸಲಾರದ ವಚನಕಾರರ ಸಂಖ್ಯೆ ಅಪಾರವಾಗಿದೆ. ನಮ್ಮ ಓದು ಕೆಲವೇ ಕೆಲವು ಪರಿಚಿತ ಪ್ರಸಿದ್ಧ ವಚನಕಾರರ ಓದಿನ ಮಟ್ಟಿಗೆ ಸೀಮಿತಗೊಂಡಿರುವದು ವಚನ ಸಾಹಿತ್ಯ ಅಧ್ಯಯನಿಗಳಾದ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ವಿದ್ವಾಂಸರು ಬಹಳಷ್ಟು ಚರ್ಚಿಸಿರಲಾರದ ವಚನಕಾರರಲ್ಲಿ ಅಗ್ಘವಣಿ ಹಂಪಯ್ಯನೂ ಒಬ್ಬನಾಗಿದ್ದಾನೆ. ವಚನಕಾರರಲ್ಲಿ ಹಂಪ ಎನ್ನುವ ಹೆಸರು ಇಬ್ಬರು ಮೂವರಿಗೆ ಇರುವದು ಕಂಡು ಬರುತ್ತದೆ. ತಕ್ಷಣಕ್ಕೆ ನೆನಪಾಗುವ ಇನ್ನೊಂದು ಹೆಸರು ಹೇಮಗಲ್ಲ ಹಂಪನದು. ಹಾಗೆಯೆ ಅಗ್ಘವಣಿ ಹಂಪಯ್ಯ ಎಂಬ ಹೆಸರು ಈ ವಚನಕಾರನದು. ಈತನ ನಾಲ್ಕು ವಚನಗಳನ್ನು ವಚನ ಸಂಪುಟಗಳಲ್ಲಿ ಸಂಪಾದಿಸಿ ಕೊಟ್ಟ…

0 Comments

ಶ್ರಾವಣ ವಚನ ಚಿಂತನ-13: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಹಳ್ಳದೊಳಗೆ ಹುಳ್ಳಿ ಬರುತ್ತಿರಲು,ನೊರೆ ತೆರೆಗಳು ತಾಗಿದುವಲ್ಲಾ!ಸಂಸಾರ ಸಾಗರದೊಳಗೆ ಸುಖದುಃಖಗಳು ತಾಗಿದುವಲ್ಲಾ!ಇದಕ್ಕಿದು ಮೂರ್ತಯಾದ ಕಾರಣಪ್ರಳಯವಾಗಿತ್ತು ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-142 / ವಚನ ಸಂಖ್ಯೆ-47) ಮಾನವ ಜನ್ಮವನ್ನು‌ ಹೊಂದಿ ಬಂದ ಮೇಲೆ ಅದಕ್ಕೆ ಸುಖ ದುಃಖಗಳು ತಾಕುತ್ತವೆ. ಎಲ್ಲ ಸುಖ-ದುಃಖಗಳಿಗೆ ಕಾರಣ ನಮ್ಮೊಳಗಿರುವ ಅಜ್ಞಾನ. ತನ್ನ ಇರವನ್ನು ಮರೆತ‌ ಮಾನವ ಅಜ್ಞಾನ‌ದ ಕಾರಣ ಇರುವ ಮಾಯೆಯನ್ನು ಸತ್ಯವೆಂದು ತಿಳಿದು ಅದರಲ್ಲಿಯೆ ಮುಳುಗಿ ಹೊರಳಾಡುತ್ತಾನೆ. ಇದೇ ಮಾಯೆಗೆ ಕಾರಣ ಅಥವಾ ದೇಹದ ನೋವಿಗೆ ಕಾರಣ. ಈ ಮಾಯೆ ಪಲ್ಲಟಿಸಿ ನಿಜ ಜ್ಞಾನ‌ ಪ್ರಾಪ್ತವಾಗುವವರೆಗೆ ಎಂಥವನಿಗೂ ನೋವು…

0 Comments

ಶ್ರಾವಣ ವಚನ ಚಿಂತನ-12: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಶಿಲೆಯೊಳಗಣ ಪಾವಕನಂತೆ,ಉದಕದೊಳಗಣ ಪ್ರತಿಬಿಂಬದಂತೆ,ಬೀಜದೊಳಗಣ ವೃಕ್ಷದಂತೆ,ಶಬ್ದದೊಳಗಣ ನಿಶ್ಶಬ್ದದಂತೆ,ಗುಹೇಶ್ವರಾ ನಿಮ್ಮ ಶರಣ-ಸಂಬಂಧ.(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-7 / ವಚನ ಸಂಖ್ಯೆ-1) ಶರಣರ ಪ್ರಕಾರ ಅಂಗವೇ ಲಿಂಗದ ಆಶ್ರಯ ತಾಣ. ಅದು ಲಿಂಗಕ್ಕೆ ಆಧಾರವಾದುದು. ಅಂಗ ಲಿಂಗವನ್ನು ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಅಂಗವಿರದಿದ್ದರೆ ಲಿಂಗಕ್ಕೆ ಆಸರೆ ಇಲ್ಲ. ಅಂಗ‌ ಮತ್ತು‌ ಲಿಂಗದ ಸಂಬಂಧವನ್ನು‌ ಕುರಿತಂತೆ ಹಿರಿಯ ವಿದ್ವಾಂಸರಾದ ಶ್ರೀಮತಿ ಜಯಾ ರಾಜಶೇಖರ್ ಅವರು: "ಶಿವತತ್ವವನ್ನು ಗುಪ್ತವಾಗಿರಿಸಿಕೊಂಡ ನೆಲೆ ಅಂಗ. ಅಂಗವನ್ನು ಆಶ್ರಯಿಸಿ ಆತ್ಮವು ಸಾಧನ ಮಾರ್ಗದಲ್ಲಿ ಸಾಗಬೇಕು. ಅಂಗವೇ ಲಿಂಗವನ್ನು ಗರ್ಭದಲ್ಲಿ ಅಡಗಿಸಿಕೊಂಡಿರುವ ತಾಯಿ. ಅಂಗದ ಆಧಾರದಿಂದಲೇ ಶಿವತತ್ವದ…

0 Comments

ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನ ವಿಶ್ಲೇಷಣೆ: ಉಸುರಿನ ಪರಿಮಳವಿರಲು / ಶ್ರೀಮತಿ. ಸವಿತಾ ಮಾಟೂರ, ಇಳಕಲ್ಲ.

ಉಸುರಿನ ಪರಿಮಳವಿರಲುಕುಸುಮದ ಹಂಗೇಕಯ್ಯಾ?ಕ್ಷಮೆ ದಮೆ ಶಾಂತಿ ಸೈರಣೆ ಇರಲುಸಮಾಧಿಯ ಹಂಗೆಕಯ್ಯಾ?ಲೋಕವೆ ತಾನಾದ ಬಳಿಕಏಕಾಂತದ ಹಂಗೆಕಯ್ಯಾ ಚನ್ನಮಲ್ಲಿಕಾರ್ಜುನಯ್ಯಾ?(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-796 / ವಚನ ಸಂಖ್ಯೆ-84) ವೈರಾಗ್ಯ ನಿಧಿ ಅಕ್ಕಮಹಾದೇವಿಯವರು ದಿಟ್ಟ ನಿಲುವಿನ, ಸಾತ್ವಿಕ ಕಳೆಯ, ಒಳ-ಹೊರಗೊಂದಾಗಿ ನಿಂತ ಭವ್ಯ ತೇಜೋರೂಪ. ಇಡಿ ಜಗತ್ತಿನಲ್ಲಿಯೆ ಇವರಿಗೆ ದೃಷ್ಟಾಂತ ಕೊಡಲು ಮತ್ತೊಬ್ಬರಿಲ್ಲವೆಂದರೆ ತಪ್ಪಗಲಾರದು. ಅಂತಹ ಅದ್ಬುತ ವ್ಯಕ್ತಿತ್ವದ ಆಧ್ಯಾತ್ಮದ ಉನ್ನತ ಶಿಖರವೆರಿದ ವೀರ ವಿರಾಗಿನಿ ಅಕ್ಕನವರ ಈ ವಚನ ಅವಳ ಅಂತರಂಗ ಬಹಿರಂಗ ಪರಿಶುದ್ಧತೆಯ ಪ್ರತಿಕವಾಗಿದೆ. “ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ”ಉಸುರಿಗೆ ಪರಿಮಳ ಬರಲು ಅಂತರಂಗ…

0 Comments