ರವಿ ಹಂಜ್‌ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ | ಭಾಗ-03: ಭಾರತೀಯ ತರ್ಕಶಾಸ್ತ್ರ.

ತರ್ಕಶಾಸ್ತ್ರ ಎನ್ನುವದು ಅನಂತ ವ್ಯಾಪ್ತಿಯ ಅಧ್ಯಯನದ ವಿಷಯ. ಇದೂವರೆಗೂ ಕಂಡು ಬರುವ ಅಧ್ಯಯನಗಳು ಮತ್ತು ಸಂಶೋಧನೆಗಳು ಇದರ ಅಗಾಧತೆಯನ್ನು ತಿಳಿಸುತ್ತವೆ. ಭಾರತೀಯ ತರ್ಕಶಾಸ್ತ್ರವಂತೂ ಘನ ವಿದ್ವಾಂಸರುಗಳ ಪ್ರತಿಯೊಂದು ತರ್ಕಶಾಸ್ತ್ರದ ಅಧ್ಯಯನ ಮತ್ತು ವಿದ್ವಾಂಸರುಗಳ ಅಗಾಧ Galaxy. ಇದೊಂದು ಮುಗಿಯಲಾರದ ಅಧ್ಯಯನದ ವಿಷಯ. ಪಾಪ, Google - Search – Select – Copy – Paste ಮಾಡಿ ಒಂದು ಲೇಖನವನ್ನು ಪ್ರಸ್ತುತ ಪಡಿಸುವುದೇ ತನ್ನನ್ನು ತಾನು ಅಖಂಡ ಬ್ರಹ್ಮಾಂಡ ಪಂಡಿತನೆಂದು ಬಿಂಬಿಸುವ ಪ್ರಯತ್ನವನ್ನು ಅಮೇರಿಕಾದ ಶಿಕಾಗೋದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಮತ್ತು ಆಂಧ್ರದಿಂದ ವಲಸೆ ಬಂದ ಆರಾಧ್ಯ…

0 Comments

ವಚನ ಸಾಹಿತ್ಯದಲ್ಲಿ ಮಹಿಳೆ ಮತ್ತು ಕುಟುಂಬ/ ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಪುರುಷನ ಮುಂದೆ ಮಾಯೆಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು.ಸ್ತ್ರೀಯ ಮುಂದೆ ಮಾಯೆಪುರುಷನೆಂಬ ಅಭಿಮಾನವಾಗಿ ಕಾಡುವುದು.ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯಮರುಳಾಗಿ ತೋರುವುದು.ಚನ್ನಮಲ್ಲಿಕಾರ್ಜುನನೊಲಿದ ಶರಣಂಗೆಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-98/ವಚನ ಸಂಖ್ಯೆ-278) ಮರ್ತ್ಯದ ಕತ್ತಲೆಯನ್ನು ಕಳೆದು ಅಜ್ಞಾನದಿಂದ ಸುಜ್ಞಾನದೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಮೃತದಿಂದ ಅಮೃತದೆಡೆಗೆ ನಡೆಸಿದ ನಾಡು ಕಂಡ ಚೇತನ ಶಕ್ತಿಗಳು ಬಸವಾದಿ ಶಿವಶರಣರು. ಮನುಷ್ಯತ್ವದ ನಿಜ ನೆಲೆಯನ್ನು ಅರುಹಿ, ಮಾನವತ್ವದ ಮಹಾಬೆಳಗಿನೊಳಗೆ ಸಕಲ ಚೇತನರನ್ನೂ ದೇವನನ್ನಾಗಿ ಕಂಡ ದಿವ್ಯಾತ್ಮರು, ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಭಕ್ತಿ ಚಳುವಳಿಯ ಮೂಲಕ ಸಮಾಜದಲ್ಲಿ ಸಮ ಸಮಾಜ ಕಟ್ಟಲು ಮುಂದಾದ ಹರಿಕಾರರು ಬಸವಾದಿ ಶಿವಶರಣರು…

1 Comment

ವೀರಗಂಟಿ ಶರಣ ಮಡಿವಾಳ ಮಾಚಿದೇವರು / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಒಬ್ಬ ರಾಜ ಮಡಿವಾಳ ಮಾಚಿದೇವರಿಗೆ ನಮಸ್ಕರಿಸುವ ದೃಶ್ಯವಿರುವ ಚಿತ್ರವನ್ನು ಸಾಮಾನ್ಯವಾಗಿ ಮಡಿವಾಳ ಬಾಂಧವರ ಮನೆಗಳಲ್ಲಿ ಮತ್ತು ವ್ಯವಹಾರ ಮಾಡುವ ಸ್ಥಳಗಳಲ್ಲಿ ಕಾಣಬಹುದು. ಶರಣರ ಬಟ್ಟೆಗಳನ್ನು ಬಿಟ್ಟರೆ ಮತ್ತೆ ಯಾರ ಬಟ್ಟೆಗಳನ್ನೂ ಮಡಿ ಮಾಡುವುದಿಲ್ಲ ಎಂಬುದು ಮಡಿವಾಳ ಮಾಚಿದೇವರ ಅಲಿಖಿತ ನಿಯಮ. ಹೀಗೆ ಒಂದು ಸಂದರ್ಭದಲ್ಲಿ ರಾಜ ಬಿಜ್ಜಳನಿಗೂ ಮತ್ತು ಮಡಿವಾಳ ಮಾಚಿದೇವರ ನಡುವೆ ಸಂಘರ್ಷವಾಗುತ್ತದೆ. ಬಿಜ್ಜಳನ ಸೈನಿಕರನ್ನೆಲ್ಲ ಸೆದೆಬಡಿದ ಮಡಿವಾಳ ಮಾಚಿದೇವರ ಶೌರ್ಯತನ ಮತ್ತು ಅವರ ದಿಟ್ಟ ನಿರ್ಧಾರ ತಿಳಿದು ರಾಜ ಕ್ಷಮೆ ಯಾಚಿಸುತ್ತಾನೆ. ಇಂಥ ದಿಟ್ಟ ಶರಣರು ನಮ್ಮ ಮಡಿವಾಳ ಮಾಚಿದೇವರು. ಅತ್ಯಂತ ಶ್ರೇಷ್ಠ ಕಾಯಕ…

0 Comments

ರವಿ ಹಂಜ್‌ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ.ಭಾಗ-02: ಅರ್ಧಸತ್ಯ

. Every lie is two lies: The lie we tell others and The lie we tell ourselves to justify it.There is a story to justify this. A Woman walks into a butcher shop just before closing time and asks, do you still have chicken? The butcher opens his deep freezer, takes out his only chicken left and puts it on the weighing…

0 Comments

ರವಿ ಹಂಜ್‌ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ. ಭಾಗ-01: ಮುನ್ನುಡಿ

ನಾನು ಕಾಶ್ಮೀರದ ಸನ್ಯಾಸಿನಿ ಲಲ್ಲೇಶ್ವರಿಯವರ ಕುರಿತು ಅಧ್ಯಯನ ಮಾಡುವಾಗ ಕಾಶ್ಮೀರದ ಆಗಮಿಕ ಶೈವರ ಕುರಿತು ಕೆಲವು ಮಾಹಿತಿಗಳು ಲಭಿಸಿದವು. ಅವರಲ್ಲಿ ಕೆಲವು ಆಗಮಿಕ ಶೈವರೆಂಬ ಬ್ರಾಹ್ಮಣರು ಮಧ್ಯಪ್ರದೇಶದ ಮೂಲಕ ಮೊದಲು ತಮಿಳುನಾಡಿಗೆ ವಲಸೆ ಬರುತ್ತಾರೆ. ತಮಿಳುನಾಡಿನ ಅರವತ್ತಮೂರು ಪುರಾತನರನ್ನು (ಅಂದರೆ ತ್ರಿಷಷ್ಟಿ ಪುರಾತನರನ್ನು) ಸ್ಥಳೀಯ ಶೈವ ಪಂಥವನ್ನು ಶುದ್ಧ ಶೈವಪಂಥವನ್ನಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಅಂದರೆ ಸಾರಾ ಸಗಟಾಗಿ ಆಪೋಷಣೆ ಮಾಡುತ್ತಾರೆ. ಅಲ್ಲಿನ ರಾಜರ ಆಡಳಿತದ ಚುಕ್ಕಾಣಿ ಬೇರೆಯವರ ಕೈ ವಶವಾದ ನಂತರ ಹೆದರಿಕೊಂಡು ಅಲ್ಲಿಂದ ಆಂಧ್ರಪ್ರದೇಶಕ್ಕೆ ಪಲಾಯನ ಮಾಡುತ್ತಾರೆ. ಆಂಧ್ರದಲ್ಲಿ “ಆರಾಧ್ಯ” ಎಂದು ತಮ್ಮನ್ನು ತಾವು…

1 Comment

ಡಾ. ವಿಜಯಲಕ್ಷ್ಮಿ ದೇಶಮಾನೆ ತಾಯಿಯ ಸೇವಾ ಭಾವಕ್ಕೆ ಒಲಿದ ಪದ್ಮಶ್ರೀ ಪ್ರಶಸ್ತಿ | ಶ್ರೀಮತಿ. ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ.

ಒಂದು ಖಾಸಗಿ ಟೀ. ವಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ “ತರಕಾರಿ ಮಾರೋದು ಇರಲಿ ಅಥವಾ ಸರ್ಜರಿ ಮಾಡೋದೇ ಇರಲಿ ಶ್ರದ್ಧೆ ಮತ್ತು ಕೆಲಸದ ಕುರಿತು ನಮಗಿರುವ ಪ್ರೀತಿ ಎಲ್ಲ ಗೌರವ ಹಾಗೂ ಖ್ಯಾತಿಯನ್ನು ತಂದು ಕೊಡುತ್ತದೆ” ಎಂದು ಹೇಳಿದವರು 2025 ರ ಪದ್ಮಶ್ರೀ ಪುರಸ್ಕೃತರಾದ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು. ಗುಲ್ಬರ್ಗದ ಕೊಳಗೇರಿಯಲ್ಲಿ ತರಕಾರಿ ಮಾರುತ್ತಿದ್ದ ಹೆಣ್ಣು ಮಗಳನ್ನು ಆಕೆಯ ಗಂಡನೇ ಆ ದಿನ ರಾತ್ರಿ ಆಕೆಯ ಕೊರಳಿನ ತಾಳಿಯನ್ನು ಕೊಡಲು ಕೇಳಿದ. ಇದ್ದುದು ಅದೊಂದೇ ಜೊತೆ ಚಿನ್ನದ ತಾಳಿ ಬೊಟ್ಟು. ಸಹಜವಾಗಿಯೇ ಸಂಪ್ರದಾಯಸ್ಥ ಮನಸ್ಥಿತಿಯ ಆ…

0 Comments

ಹಾಲುಮತ ಕುಲಗುರು ಶ್ರೀ ರೇವಣಸಿದ್ದೇಶ್ವರರನ್ನು ಹೈಜಾಕ್‌ ಮಾಡಿರುವ ವೀರಶೈವರು: ಸತ್ಯದ ಅನಾವರಣ / ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು.

ಇದು ಹಾಲುಮತ ಕುಲಗುರು, ಶಾಂತ ಸಿಂಹಾಸನಾರೂಢ ಶ್ರೀ ರೇವಣಸಿದ್ದೇಶ್ವರ ಮಹಾಸಂಸ್ಥಾನ ಮಠ, ಸರವೂರು ಶಾಖಾ, ಅಣತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ, ಇದಕ್ಕೆ ಸಂಬಂಧಿಸಿದ ತಾಮ್ರಪಟ್ಟಿಕೆ. ಚರಿತ್ರೆಯಲ್ಲಿ ಸುಳ್ಳನ್ನು ಕೂಡಾ ರಾಜಠಸ್ಸೆಯೊಂದಿಗೆ ನಿಜವೆಂದೇ ನಂಬಿಸುವ ಯಡವಟ್ಟುಗಳು ಕೂಡಾ ನಡೆದಿವೆ ಎಂಬುದಕ್ಕೆ ಈ ತಾಮ್ರಬಿಲ್ಲೆಯೇ ಸಾಕ್ಷಿಯಾಗಿದೆ. ಕುರುಬರ ಕುಲಗುರು ಶ್ರೀ. ರೇವಣಸಿಸಿದ್ಧೇಶ್ವರರನ್ನು ಹೈಜಾಕ್ ಮಾಡಿಕೊಂಡು ಶ್ರೀ ರೇಣುಕಾಚಾರ್ಯ ಎಂದು ಅಯೋನಿಜ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿ ಪುರಾಣವನ್ನೇ ಹೊಸೆಯಲಾಗಿದೆ. ದಕ್ಷಿಣ ಕರ್ನಾಟಕದ ಕುರುಬರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ವೀರಶೈವರ ಪಂಚಾಚಾರ್ಯರಿಗೆ ಪರಭಾರೆ ಮಾಡಿದ ಧರ್ಮಪೀಠದ ಸತ್ಯವನ್ನು ಈ ತಾಮ್ರಬಿಲ್ಲೆಯು…

0 Comments

ಮಹೇಶ್ವರಸ್ಥಲ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಧಾರ್ಮಿಕ ಮತ್ತು ವೈಚಾರಿಕ ನಿರ್ಣಯಗಳ ಒಟ್ಟು ಮೊತ್ತ ಮಹೇಶ್ವರಸ್ಥಲದಲ್ಲಿದೆ. ನಿಷ್ಠೆಯಿಂದ ಕೂಡಿದ ಭಕ್ತಿ. ಧರ್ಮದ ಕೊಡುಗೆ ಸುಬುದ್ದಿಯ ಮೂಲಕ ವೀರ ವ್ರತಾಚರಣೆಯನ್ನು ಗುರು-ಲಿಂಗಕ್ಕೆ ಅರ್ಪಿಸುವ ಉಪಾಸನೆಯನ್ನು ಮಹೇಶ್ವರಸ್ಥಲದಲ್ಲಿ ಮಾಡಬೇಕಾಗುತ್ತದೆ. ಮಹೇಶ್ವರನು ಸುಳ್ಳು ಹೇಳುವುದಿಲ್ಲ, ಆಚಾರವನ್ನು ಬಿಡುವುದಿಲ್ಲ. ಇತರರನ್ನು ಹಿಂಸಿಸುವುದಿಲ್ಲ. ಪರಧನ, ಪರಸ್ತ್ರೀ, ಪರನಿಂದೆಗಳನ್ನು ಸಹಿಸದ ಭಕ್ತನಾಗಿರಬೇಕು. ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ ಮೌಲ್ಯಗಳನ್ನು ಅಪ್ಪಿಕೊಳ್ಳಬೇಕು. ಶುದ್ಧ ಮನಸ್ಸುಳ್ಳ ಮಹೇಶ್ವರಸ್ಥಲದಲ್ಲಿ ಮನ ಮತ್ತು ಇಂದ್ರಿಯ ಬೇರೆಡೆಗೆ ಹೋಗದಂತೆ ಗಟ್ಟಿಯಾಗಿ ಹಿಡಿದಿಡುವ ಪ್ರಯತ್ನ ಈ ಸ್ಥಲದಲ್ಲಿದೆ. ಲಿಂಗದಲ್ಲಿ ಪ್ರೇಮ, ಜಂಗಮದಲ್ಲಿ ದಾಸೋಹ, ಗುರು ಪೂಜೆಯಲ್ಲಿ ಪರಮ ನಿಷ್ಠೆಗಳನ್ನು ಹೊಂದಿದ ಭಕ್ತನಾಗಿರಬೇಕು.…

0 Comments

ಶರಣೆ ಸತ್ಯಕ್ಕನವರ ವಚನ ವಿಶ್ಲೇಷಣೆ | ಗಂಡಗಂಡಿರ ಎದೆಯ ಮೆಟ್ಟಿ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಗಂಡಗಂಡರ ಎದೆಯ ಮೆಟ್ಟಿ ನಡೆವರುಂಟೆ?ಗಂಡಗಂಡರ ಚಲ್ಲಣವ ಮಾಡಿ ಉಟ್ಟವರುಂಟೆ?ಗಂಡಗಂಡರ ಚರ್ಮವ ಹೊದ್ದವರುಂಟೆ?ಗಂಡಗಂಡರ ತೊಟ್ಟವರುಂಟೆ?ಗಂಡಗಂಡರ ತುರುಬಿದವರುಂಟೆ?ಗಂಡಗಂಡರ ಭಸ್ಮವಮಾಡಿ ಹೂಸಿದವರುಂಟೆ?ಗಂಡಗಂಡರಿಗೆ ಗಂಡನ ಕಣ್ಣು ಕಾಲಲ್ಲದೆ.ಗಂಡಗಂಡರಿಗೆ ಗಂಡನ ಶಿರ ಕರದಲ್ಲದೆ.ಗಂಡುವೇಷವೆಂಬುದು ನಿಮ್ಮ ಶಕ್ತಿರೂಪು.ಗಂಡರಿಗೆ ಗಂಡನು ನಡೆಯಿತ್ತೆ ಬಟ್ಟೆಎಂಬುದು ನಿಮಗೆ ಸಂದಿತ್ತು. ಶಂಭುಜಕ್ಕೇಶ್ವರ ಶರಣ ಜಗದೊಳಗೊಬ್ಬನೆ ಗಂಡನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-442/ವಚನ ಸಂಖ್ಯೆ-1214)ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:ಗಂಡ: ಪತಿ, ಲಿಂಗ, ಗುರು.ಚಲ್ಲಣ: ಪಾಯಜಾಮು, ಸಡಿಲ ಉಡುಪು.ತುರುಬಿದವರು: ಲಂಪಟ, ಹೆಣ್ಣಿನ ಮೋಹದ ಧ್ಯಾನದಲ್ಲಿರುವವ.ಬಟ್ಟೆ: ದಾರಿ, ಮಾರ್ಗ. ಶಿವಶರಣೆಯರಲ್ಲಿ ಸತ್ಯಕ್ಕನವರು ಏಕದೇವೋಪಾಸನೆಗೆ ಹೆಸರಾದವರು. ಇವರ ವಚನಗಳಲ್ಲಿಯೂ ಕೂಡ ಏಕದೇವೋಪಾಸನೆ ತತ್ವ ಪ್ರಮುಖವಾಗಿ…

0 Comments