ಅಲೌಕಿಕತೆಯಲ್ಲಿ ಲೌಕಿಕತೆ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.
ಈ ಜಗತ್ತು ಮಿಥ್ಯ, ನಶ್ವರ, ಸಂಸಾರ ಅನ್ನೊದು ಒಂದು ಘೊರಾರಣ್ಯ ಎಂಬ ವಾದಗಳನ್ನು ಅಲ್ಲಗಳೆದು ಈ ಜಗತ್ತೇ ಒಂದು ಸಾಧನಾ ರಂಗ, ಸಂಸಾರ ಅನ್ನೊದು ಸಾಧನೆಗೆ ವೇದಿಕೆ ಅಂತ ನಂಬಿದೋರು 12 ನೇ ಶತಮಾನದ ಬಸವಾದಿ ಶಿವಶರಣರು. ಪ್ರಪಂಚದಲ್ಲಿದ್ದು ಸಂಸಾರದ ಸುಳಿಯಲ್ಲಿ ಸುತ್ತುತ್ತಲೇ ದಡ ಸೇರಬೇಕೆಂಬುದು ಶರಣರ ಅಭಿಪ್ರಾಯ ಮತ್ತು ಅದೇ ರೀತಿ ನಡೆದಿದ್ದಾರೆ ಕೂಡ. ಗೃಹಸ್ಥ ಜೀವನ ಬೇಡವೆಂದು ಅದಕ್ಕೆ ಬೆನ್ನು ತಿರುಗಿಸಿದ ಕೆಲವೇ ಶಿವಶರಣರಲ್ಲಿ ಸಿದ್ಧರಾಮರು, ಚೆನ್ನಬಸವಣ್ಣನವರು ಮತ್ತು ವೀರ ವಿರಾಗಿಣಿ ಮಹಾದೇವಿಯಕ್ಕ ಪ್ರಮುಖರಾಗಿದ್ದಾರೆ. ಆದರೆ ಇವರ್ಯಾರೂ ಸಂಸಾರ ಬಿಟ್ಟು ಸನ್ಯಾಸಿಗಳಾಗಿ ಗುಹಾಂತರ್ಗತರಾಗಿ ಉಳಿಯಲಿಲ್ಲ…