ಮುಲ್ಕಿ ಪರೀಕ್ಷೆ ಪಾಸಾಗದ ಹಾಲಯ್ಯ ಚಿತ್ರದುರ್ಗದ ಬೃಹನ್ಮಠ ಕೈ ತಪ್ಪಿದ್ದಕ್ಕೆ ವೀರಶೈವ ಮಹಾಸಭಾ ಸ್ಥಾಪನೆ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.
ಬಸವಣ್ಣನೆ ತಾಯಿ, ಬಸವಣ್ಣನೆ ತಂದೆ,ಬಸವಣ್ಣನೆ ಪರಮ ಬಂಧುವೆನಗೆ,ವಸುಧೀಶ ಕಪಿಲಸಿದ್ದಮಲ್ಲಿಕಾರ್ಜುನಾನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-244/ವಚನ ಸಂಖ್ಯೆ-798) ಸೊನ್ನಲಗಿಯ ಸಿದ್ದರಾಮೇಶ್ವರರ ಈ ವಚನದ ತಾತ್ಪರ್ಯದಂತೆ ಅಂದಿನ ಧಾರವಾಡ ಜಿಲ್ಲೆಯ ರಾಣೆಬೆಣ್ಣೂರು ತಾಲ್ಲೂಕಿನ ಜೋಯಿಸರ ಹರಳಹಳ್ಳಿಯಲ್ಲಿ ಬಸವಯ್ಯ ಮತ್ತು ನೀಲಮ್ಮ ಎಂಬ ದಂಪತಿಗಳಿದ್ದರು. ಅಪ್ಪಟ ಬಸವ ಭಕ್ತರು. ಬಸವಾದಿ ಪ್ರಮಥರ ಅನುಯಾಯಿಗಳು. ಶರಣ ಪರಂಪರೆ ಅವರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಅವರದು ಮೂಲತಃ ಕಡುಬಡತನದ ಕುಟುಂಬವಾದರೂ ಶರಣಧರ್ಮ ಆಚರಿಸುವಲ್ಲಿ ಬಡತನ ಇರಲಿಲ್ಲ. ಗ್ರಾಮದ ಮುಗ್ಧರಿಗೆ ಹಾಗೂ ಶಾಲಾ ಮಕ್ಕಳಿಗೆ ವಚನ ಪಾಠ ಕಲಿಸುವ ಕಾಯಕದಲ್ಲಿ ತೊಡಗಿದ್ದರು.…




Total views : 54749